ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ವಿಷ್ಣು ಪರ್ವ
ಅಧ್ಯಾಯ 168
ಸಾರ
ಕೃಷ್ಣನು ಅರ್ಜುನನಿಗೆ ತನ್ನ ಯಥಾರ್ಥ ಸ್ವರೂಪವನ್ನು ಪರಿಚಯಿಸುವುದು (1-27).
19168001 ಅರ್ಜುನ ಉವಾಚ ।
19168001a ತತಃ ಕೃಷ್ಣೋ ಭೋಜಯಿತ್ವಾ ಶತಾನಿ ಸುಬಹೂನಿ ಚ ।
19168001c ವಿಪ್ರಾಣಾಮೃಷಿಕಲ್ಪಾನಾಂ ಕೃತಕೃತ್ಯೋಽಭವತ್ತದಾ ।।
ಅರ್ಜುನನು ಹೇಳಿದನು: “ಅನಂತರ ಕೃಷ್ಣನು ಅನೇಕ ನೂರು ಋಷಿಸಮಾನ ವಿಪ್ರರಿಗೆ ಭೋಜನವನ್ನಿತ್ತು ಕೃತಕೃತ್ಯನಾದನು.
19168002a ತತಃ ಸಹ ಮಯಾ ಭುಕ್ತ್ವಾ ವೃಷ್ಣಿಭೋಜೈಶ್ಚ ಸರ್ವಶಃ ।
19168002c ವಿಚಿತ್ರಾಶ್ಚ ಕಥಾ ದಿವ್ಯಾಃ ಕಥಯಾಮಾಸ ಭಾರತ ।।
ಭಾರತ! ನೊನ್ನೊಂದಿಗೆ ಮತ್ತು ವೃಷ್ಣಿ-ಭೋಜರೊಂದಿಗೆ ತಾನೂ ಊಟಮಾಡಿ ಎಲ್ಲರಿಗೂ ವಿಚಿತ್ರಾರ್ಥಗಳುಳ್ಳ ದಿವ್ಯ ಕಥೆಗಳನ್ನು ಹೇಳತೊಡಗಿದನು.
19168003a ತತಃ ಕಥಾಂತೇ ತತ್ರಾಹಮಭಿಗಮ್ಯ ಜನಾರ್ದನಮ್ ।
19168003c ಅಪೃಚ್ಛಂ ತದ್ಯಥಾವೃತ್ತಂ ಕೃಷ್ಣಂ ಯದ್ದೃಷ್ಟವಾನಹಮ್ ।।
ಕಥೆಯ ಅಂತ್ಯದಲ್ಲಿ ಜನಾರ್ದನನ ಬಳಿಸಾರಿ ನಾನು ಏನನ್ನು ನೋಡಿದ್ದೆನೋ ಅದರ ಯಥಾವತ್ತಾದ ವೃತ್ತಾಂತವನ್ನು ಕೇಳಿದನು.
19168004a ಕಥಂ ಸಮುದ್ರಃ ಸ್ತಬ್ಧೋದಃ ಕೃತಸ್ತು ಕಮಲೇಕ್ಷಣ ।
19168004c ಪರ್ವತಾನಾಂ ಚ ವಿವರಂ ಕೃತಂ ತತ್ಕಥಮಚ್ಯುತ ।।
“ಕಮಲೇಕ್ಷಣ! ಸಮುದ್ರದ ಜಲವನ್ನು ಹೇಗೆ ಸ್ತಬ್ಧಗೊಳಿಸಿದೆ? ಅಚ್ಯುತ! ಪರ್ವತಗಳ ಮಧ್ಯೆ ಸುರಂಗವನ್ನು ಹೇಗೆ ಮಾಡಿದೆ?
19168005a ತಮಸ್ತಚ್ಚ ಕಥಂ ಘೋರಂ ಘನಂ ಚಕ್ರೇಣ ಪಾಟಿತಮ್ ।
19168005c ತಚ್ಚ ಯತ್ಪರಮಂ ತೇಜಃ ಪ್ರವಿಷ್ಟೋಽಸಿ ಕಥಂ ಚ ತತ್ ।।
ಆ ಘೋರ ಘನ ತಮಸ್ಸನ್ನು ನೀನು ಚಕ್ರದಿಂದ ಹೇಗೆ ಹರಿದೆ? ಮತ್ತು ಆ ಪರಮ ತೇಜಸ್ಸನ್ನು ನೀನು ಹೇಗೆ ಪ್ರವೇಶಿಸಿದೆ?
19168006a ಕಿಮರ್ಥಂ ತೇನ ತೇ ಬಾಲಾಸ್ತದಾ ಚಾಪಹೃತಾಃ ಪ್ರಭೋ ।
19168006c ಯಚ್ಚ ತೇ ದೀರ್ಘಮಧ್ವಾನಂ ಸಂಕ್ಷಿಪ್ತಂ ತತ್ಕಥಂ ಪುನಃ ।।
ಪ್ರಭೋ! ಯಾವ ಕಾರಣಕ್ಕಾಗಿ ಆ ತೇಜಃಸ್ವರೂಪ ಪುರುಷನು ಬಾಲಕರನ್ನು ಅಪಹರಿಸಿದ್ದನು? ಮತ್ತು ದೀರ್ಘವಾದ ಆ ಮಾರ್ಗವನ್ನು ನೀನು ಪುನಃ ಹೇಗೆ ಸಂಕ್ಷಿಪ್ತಗೊಳಿಸಿಬಿಟ್ಟೆ?
19168007a ಕಥಂ ಚಾಲ್ಪೇನ ಕಾಲೇನ ಕೃತಂ ತತ್ತದ್ಗತಾಗತಮ್ ।
19168007c ಏತತ್ಸರ್ವಂ ಯಥಾವೃತ್ತಮಾಚಕ್ಷ್ವ ಮಮ ಕೇಶವ ।।
ಹೇಗೆ ನೀನು ಅಲ್ಪವೇ ಕಾಲದಲ್ಲಿ ಅಲ್ಲಿಗೆ ಹೋಗಿಬಂದೆ? ಕೇಶವ! ಎವೆಲ್ಲವನ್ನೂ ನಡೆದಹಾಗೆ ನನಗೆ ಹೇಳು.”
19168008 ವಾಸುದೇವ ಉವಾಚ ।
19168008a ಯದ್ದರ್ಶನಾರ್ಥಂ ತೇ ಬಾಲಾ ಹೃತಾಸ್ತೇನ ಮಹಾತ್ಮನಾ ।
19168008c ವಿಪ್ರಾರ್ಥಮೇಷ್ಯತೇ ಕೃಷ್ಣೋ ನಾಗಚ್ಛೇದನ್ಯಥೇತಿ ಹ ।।
ವಾಸುದೇವನು ಹೇಳಿದನು: “ಆ ತೇಜಸ್ವೀ ಮಹಾತ್ಮನು ನನ್ನನ್ನು ನೋಡಲಿಕ್ಕಾಗಿಯೇ ಬಾಲಕರನ್ನು ಅಪಹರಿಸಿದ್ದನು. ವಿಪ್ರನ ಕಾರ್ಯಕ್ಕೆ ಕೃಷ್ಣನೇ ಹೋಗುತ್ತಾನೆ. ಅನ್ಯರು ಹೋಗುವುದಿಲ್ಲ ಎಂದು.
19168009a ಬ್ರಹ್ಮತೇಜೋಮಯಂ ದಿವ್ಯಂ ಮಹದ್ಯದ್ದೃಷ್ಟವಾನಸಿ ।
19168009c ಅಹಂ ಸ ಭರತಶ್ರೇಷ್ಠ ಮತ್ತೇಜಸ್ತತ್ಸನಾತನಮ್ ।।
ಭರತಶ್ರೇಷ್ಠ! ನೀನು ನೋಡಿದ ಆ ತೇಜೋಮಯ ದಿವ್ಯ ಮಹದ್ ಬ್ರಹ್ಮನು ನಾನೇ. ಅದು ನನ್ನ ಸನಾತನ ತೇಜಸ್ಸು.
19168010a ಪ್ರಕೃತಿಃ ಸಾ ಮಮ ಪರಾ ವ್ಯಕ್ತಾವ್ಯಕ್ತಾ ಸನಾತನೀ ।
19168010c ಯಾಂ ಪ್ರವಿಶ್ಯ ಭವಂತೀಹ ಮುಕ್ತಾ ಯೋಗವಿದುತ್ತಮಃ ।।
ಅವಳು ನನ್ನ ವ್ಯಕ್ತಾವ್ಯಕ್ತಸ್ವರೂಪೀ ಸನಾತನ ಪರಾ ಪ್ರಕೃತಿಯು. ಅದನ್ನು ಪ್ರವೇಶಿಸಿ ಯೋಗವಿದುತ್ತಮರು ಮುಕ್ತರಾಗುತ್ತಾರೆ.
19168011a ಸ ಸಾಂಖ್ಯಾನಾಂ ಗತಿಃ ಪಾರ್ಥ ಯೋಗಿನಾಂ ಚ ತಪಸ್ವಿನಾಮ್ ।
19168011c ತತ್ಪದಂ ಪರಮಂ ಬ್ರಹ್ಮ ಸರ್ವಂ ವಿಭಜತೇ ಜಗತ್ ।।
ಪಾರ್ಥ! ಅದೇ ಸಾಂಖ್ಯರ, ಯೋಗಿಗಳ ಮತ್ತು ತಪಸ್ವಿಗಳ ಮಾರ್ಗವು. ಅದೇ ಸರ್ವ ಜಗತ್ತನ್ನೂ ವಿಭಜಿಸುವ ಪರಮ ಬ್ರಹ್ಮಪದವು.
19168012a ಮಾಮೇವ ತದ್ ಘನಂ ತೇಜೋ ಜ್ಞಾತುಮರ್ಹಸಿ ಭಾರತ ।
19168012c ಸಮುದ್ರಃ ಸ್ತಬ್ಧತೋಯೋಽಹಮಹಂ ಸ್ತಂಭಯಿತಾ ಜಲಮ್ ।।
ಭಾರತ! ಆ ಘನ ತೇಜಸ್ಸು ನಾನೇ ಎಂದು ತಿಳಿಯಬೇಕು. ಸ್ತಂಭಿಸಿದ ಸಮುದ್ರದ ನೀರೂ ನಾನೇ, ಜಲವನ್ನು ಸ್ತಂಭಿಸಿದವನೂ ನಾನೇ.
19168013a ಅಹಂ ತೇ ಪರ್ವತಾಃ ಸಪ್ತ ಯೇ ದೃಷ್ಟಾ ವಿವಿಧಾಸ್ತ್ವಯಾ ।
19168013c ಪಂಕಭೂತಂ ಹಿ ತಿಮಿರಂ ದೃಷ್ಟವಾನಸಿ ಯದ್ಧಿ ತತ್ ।।
ವಿವಿಧ ರೂಪದಲ್ಲಿ ನೀನು ಕಂಡ ಆ ಸಪ್ತ ಪರ್ವತಗಳೂ ನಾನೇ. ನೀನು ನೋಡಿದ ಕೆಸರಿನ ರೂಪದ ತಿಮಿರವೂ ನಾನೇ.
19168014a ಅಹಂ ತಮೋ ಘನೀಭೂತಮಹಮೇವ ಚ ಪಾಟಕಃ ।
19168014c ಅಹಂ ಚ ಕಾಲೋ ಭೂತಾನಾಂ ಧರ್ಮಶ್ಚಾಹಂ ಸನಾತನಃ ।।
ನಾನೇ ಘನೀಭೂತವಾದ ತಮವು. ನಾನೇ ಅದನ್ನು ಹರಿದವನು. ನಾನೇ ಕಾಲ ಮತ್ತು ನಾನೇ ಭೂತಗಳ ಸನಾತನ ಧರ್ಮ.
19168015a ಚಂದ್ರಾದಿತ್ಯೌ ಮಹಾಶೈಲಾಃ ಸರಿತಶ್ಚ ಸರಾಂಸಿ ಚ ।
19168015c ಚತಸ್ರಶ್ಚ ದಿಶಃ ಸರ್ವಾ ಮಮೈವಾತ್ಮಾ ಚತುರ್ವಿಧಃ ।।
ಚಂದ್ರ, ಆದಿತ್ಯ, ಮಹಾಶೈಲಗಳು, ನದಿಗಳು, ಸರೋವರಗಳು ಮತ್ತು ನಾಲ್ಕು ದಿಕ್ಕುಗಳು ಎಲ್ಲವೂ ನನ್ನ ಚತುರ್ವಿಧ ರೂಪಗಳು.
19168016a ಚಾತುರ್ವರ್ಣ್ಯಂ ಮತ್ಪ್ರಸೂತಂ ಚಾತುರಾಶ್ರಮ್ಯಮೇವ ಚ ।
19168016c ಚಾತುರ್ವಿದ್ಧ್ಯಸ್ಯ ಕರ್ತಾಹಮಿತಿ ಬುದ್ಧ್ಯಸ್ವ ಭಾರತ ।।
ಭಾರತ! ನಾಲ್ಕು ವರ್ಣಗಳು ನನ್ನಿಂದ ಹುಟ್ಟಿದವು ಮತ್ತು ನಾಲ್ಕು ಆಶ್ರಮಗಳು ಕೂಡ. ನಾಲ್ಕು ಪ್ರಕಾರದ ಪ್ರಾಣಿಗಳನ್ನು ಸೃಷ್ಟಿಸುವವನೂ ನಾನೇ ಎಂದು ತಿಳಿ.”
19168017 ಅರ್ಜುನ ಉವಾಚ ।
19168017a ಭಗವನ್ಸರ್ವಭೂತೇಶ ವೇತ್ತುಮಿಚ್ಛಾಮಿ ತೇ ಪ್ರಭೋ ।
19168017c ಪೃಚ್ಛಾಮಿ ತ್ವಾಂ ಪ್ರಪನ್ನೋಽಹಂ ನಮಸ್ತೇ ಪುರುಷೋತ್ತಮ ।।
ಅರ್ಜುನನು ಹೇಳಿದನು: “ಭಗವನ್! ಸರ್ವಭೂತೇಶ! ಪ್ರಭೋ! ನಿನ್ನನ್ನು ತಿಳಿಯ ಬಯಸುತ್ತೇನೆ. ಪುರುಷೋತ್ತಮ! ನಿನಗೆ ನಮಸ್ಕಾರವು. ನಿನಗೆ ಶರಣುಬಂದು ಇದನ್ನು ಕೇಳುತ್ತಿದ್ದೇನೆ.”
19168018 ವಾಸುದೇವ ಉವಾಚ ।
19168018a ಬ್ರಹ್ಮ ಚ ಬ್ರಾಹ್ಮಣಾಶ್ಚೈವ ತಪಃ ಸತ್ಯಂ ಚ ಭಾರತ ।
19168018c ಉಗ್ರಂ ಬೃಹತ್ತಮಂ ಚೈವ ಮತ್ತಸ್ತದ್ವಿದ್ಧಿ ಪಾಂಡವ ।।
ವಾಸುದೇವನು ಹೇಳಿದನು: “ಭಾರತ! ಪಾಂಡವ! ಬ್ರಹ್ಮ, ಬ್ರಾಹ್ಮಣ, ತಪಸ್ಸು, ಸತ್ಯ, ಉಗ್ರ (ಸಂಸಾರಬಂಧನ) ಮತ್ತು ಬೃಹತ್ತಮ (ಕೈವಲ್ಯ) – ಇವು ನನ್ನಿಂದಲೇ ಉಂಟಾಗುತ್ತದೆ ಎಂದು ತಿಳಿ.
19168019a ಪ್ರಿಯಸ್ತೇಽಹಂ ಮಹಾಬಾಹೋ ಪ್ರಿಯೋ ಮೇಽಸಿ ಧನಂಜಯ ।
19168019c ತೇನ ತೇ ಕಥಯಿಷ್ಯಾಮಿ ನಾನ್ಯಥಾ ವಕ್ತುಮುತ್ಸಹೇ ।
ಮಹಾಬಾಹೋ! ಧನಂಜಯ! ನಾನು ನಿನಗೆ ಪ್ರಿಯನು. ನೀನು ನನಗೆ ಪ್ರಿಯನು. ಆದುದರಿಂದ ನಿನಗೆ ಹೇಳುತ್ತಿದ್ದೇನೆ. ಅನ್ಯಥಾ ಹೇಳಲು ಉತ್ಸಾಹವಿಲ್ಲ.
19168019e ಅಹಂ ಯಜೂಂಷಿ ಸಾಮಾನಿ ಋಚಶ್ಚಾಥರ್ವಣಾನಿ ಚ ।।
19168020a ಋಷಯೋ ದೇವತಾ ಯಜ್ಞಾ ಮತ್ತೇಜೋ ಭರತರ್ಷಭ ।
ಭರತರ್ಷಭ! ನಾನು ಯಜುರ್ವೇದ, ಸಾಮವೇದ, ಋಗ್ವೇದ ಮತ್ತು ಅಥರ್ವವೇದ. ಋಷಿಗಳು, ದೇವತೆಗಳು ಮತ್ತು ಯಜ್ಞಗಳು ನನ್ನದೇ ತೇಜಸ್ಸುಗಳು.
19168020c ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್ ।।
19168021a ಚಂದ್ರಾದಿತ್ಯಾವಹೋರಾತ್ರಂ ಪಕ್ಷಾ ಮಾಸಾಸ್ತಥಾರ್ತವಃ ।
19168021c ಮುಹೂರ್ತಾಶ್ಚ ಕಲಾಶ್ಚೈವ ಕ್ಷಣಾಃ ಸಂವತ್ಸರಾಸ್ತಥಾ ।।
19168022a ಮಂತ್ರಾಶ್ಚ ವಿವಿಧಾಃ ಪಾರ್ಥ ಯಾನಿ ಶಾಸ್ತ್ರಾಣಿ ಕಾನಿಚಿತ್ ।
19168022c ವಿದ್ಯಾಶ್ಚ ವೇದಿತವ್ಯಂ ಚ ಮತ್ತಃ ಪ್ರಾದುರ್ಭವಂತಿ ಹಿ ।।
ಪಾರ್ಥ! ಪೃಥ್ವಿ, ವಾಯು, ಆಕಾಶ, ಆಪ, ಮತ್ತು ಐದನೆಯ ಜ್ಯೋತಿ, ಚಂದ್ರ, ಆದಿತ್ಯ, ಅಹೋರಾತ್ರಿಗಳು, ಪಕ್ಷ-ಮಾಸ-ಋತುಗಳು, ಮುಹೂರ್ತ-ಕಲಾ-ಕ್ಷಣ-ಸಂವತ್ಸರಗಳು, ವಿವಿಧ ಮಂತ್ರಗಳು, ಯಾವುದೆಲ್ಲ ಶಾಸ್ತ್ರಗಳಿವೆಯೋ ಅವು, ವಿದ್ಯೆ, ಮತ್ತು ತಿಳಿಯಬೇಕಾದ ಎಲ್ಲವೂ ನನ್ನಿಂದಲೇ ಹುಟ್ಟಿಕೊಂಡಿವೆ ಎಂದು ತಿಳಿ.
19168023a ಮನ್ಮಯಂ ವಿದ್ಧಿ ಕೌಂತೇಯ ಕ್ಷಯಂ ಸೃಷ್ಟಿಂ ಚ ಭಾರತ ।
19168023c ಸಚ್ಚಾಸಚ್ಚ ಮಮೈವಾತ್ಮಾ ಸದಸಚ್ಚೈವ ಯತ್ಪರಮ್ ।।
ಕೌಂತೇಯ! ಭಾರತ! ಸೃಷ್ಟಿ ಮತ್ತು ಕ್ಷಯ ಇವು ನನ್ನವೇ ಸ್ವರೂಪಗಳೆಂದು ತಿಳಿ. ಸತ್, ಅಸತ್, ಸದಸತ್ ಮತ್ತು ಅದಕ್ಕೂ ಆಚೆಯಿರುವ ತತ್ತ್ವ ಎಲ್ಲವೂ ನನ್ನದೇ ಆತ್ಮವು.””
19168024 ಅರ್ಜುನ ಉವಾಚ ।
19168024a ಏವಮುಕ್ತೋಽಸ್ಮಿ ಕೃಷ್ಣೇನ ಪ್ರೀಯಮಾಣೇನ ವೈ ತದಾ ।
19168024c ತಥೈವ ಚ ಮನೋ ನಿತ್ಯಮಭವನ್ಮೇ ಜನಾರ್ದನೇ ।।
19168025a ಏತಚ್ಛ್ರುತಂ ಚ ದೃಷ್ಟಂ ಚ ಮಾಹಾತ್ಮ್ಯಂ ಕೇಶವಸ್ಯ ಮೇ ।
19168025c ಯನ್ಮಾಂ ಪೃಚ್ಛಸಿ ರಾಜೇಂದ್ರ ಭೂಯಾಂಶ್ಚಾತೋ ಜನಾರ್ದನಃ ।।
ಅರ್ಜುನನು ಹೇಳಿದನು: “ರಾಜೇಂದ್ರ! ಯಾವಾಗ ಪ್ರಸನ್ನ ಕೃಷ್ಣನು ನನಗೆ ಹೀಗೆ ಹೇಳಿದ್ದನೋ ಅಂದಿನಿಂದ ನನ್ನ ಮನಸ್ಸು ನಿತ್ಯವೂ ಜನಾರ್ದನನಲ್ಲಿದೆ. ನಾನು ಕೇಳಿದ ಮತ್ತು ನೋಡಿದ ಕೇಶವನ ಮಹಾತ್ಮೆಯನ್ನು ನೀನು ಪ್ರಶ್ನಿಸಿದುದರಿಂದ ಹೇಳಿದ್ದೇನೆ. ಆದರೆ ಅವನ ಮಹಾತ್ಮೆಯು ಇದಕ್ಕಿಂತಲೂ ಹೆಚ್ಚಿನದು.””
19168026 ವೈಶಂಪಾಯನ ಉವಾಚ ।
19168026a ಏತಚ್ಛ್ರುತ್ವಾ ಕುರುಶ್ರೇಷ್ಠೋ ಧರ್ಮರಾಜೋ ಯುಧಿಷ್ಠಿರಃ ।
19168026c ಪೂಜಯಾಮಾಸ ಧರ್ಮಾತ್ಮಾ ಗೋವಿಂದಂ ಪುರುಷೋತ್ತಮಮ್ ।।
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಕುರುಶ್ರೇಷ್ಠ ಧರ್ಮರಾಜ ಯುಧಿಷ್ಠಿರನು ಧರ್ಮಾತ್ಮಾ ಪುರುಷೋತ್ತಮ ಗೋವಿಂದನನ್ನು ಪೂಜಿಸಿದನು.
19168027a ವಿಸ್ಮಿತಶ್ಚಾಭವದ್ರಾಜಾ ಸಹ ಸರ್ವೈಃ ಸಹೋದರೈಃ ।
19168027c ರಾಜಭಿಶ್ಚ ಸಮಾಸೀನೈರ್ಯೇ ತತ್ರಾಸನ್ಸಮಾಗತಾಃ ।।
ಆಗ ಸಹೋದರರೊಂದಿಗೆ ರಾಜಾ ಯುಧಿಷ್ಠಿರ ಮತ್ತು ಅಲ್ಲಿ ಆಗಮಿಸಿ ಸಮಾಸೀನರಾಗಿದ್ದ ರಾಜರೂ ಕೂಡ ಪರಮ ವಿಸ್ಮಿತರಾದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಶು ಹರಿವಂಶೇ ವಿಷ್ಣುಪರ್ವಣಿ ವಾಸುದೇವಮಾಹಾತ್ಮ್ಯೇ ಕೃಷ್ಣಾರ್ಜುನಭಾಷಣೇ ಅಷ್ಟಷಷ್ಟ್ಯಧಿಕಶತತಮೋಽಧ್ಯಾಯಃ ।।