ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 35
ಸಾರ
ಶ್ರೀಕೃಷ್ಣನು ಅವತಾರವನ್ನೆತ್ತಿದುದು; ಕೃಷ್ಣನ ಸಹೋದರ-ಸಹೋದರಿಯರ ಮತ್ತು ಕುಟುಂಬದವರ ಪರಿಚಯ; ಕಾಲಯವನನ ಉತ್ಪತ್ತಿ (1-22).
ವೈಶಂಪಾಯನ ಉವಾಚ
ಯಾಃ ಪತ್ನ್ಯೋ ವಸುದೇವಸ್ಯ ಚತುರ್ದಶ ವರಾಂಗನಾಃ ।
ಪೌರವೀ ರೋಹಿಣೀ ನಾಮ ಇಂದಿರಾ ಚ ತಥಾ ವರಾ ।। ೧-೩೫-೧
ವೈಶಾಖೀ ಚ ತಥಾ ಭದ್ರಾ ಸುನಾಮ್ನೀ ಚೈವ ಪಂಚಮೀ।
ಸಹದೇವಾ ಶಾಂತಿದೇವಾ ಶ್ರೀದೇವಾ ದೇವರಕ್ಷಿತಾ ।। ೧-೩೫-೨
ವೃಕದೇವ್ಯುಪದೇವೀ ಚ ದೇವಕೀ ಚೈವ ಸಪ್ತಮೀ ।
ಸುತನುರ್ಬಡವಾ ಚೈವ ದ್ವೇ ಏತೇ ಪರಿಚಾರಿಕೇ ।। ೧-೩೫-೩
ವೈಶಂಪಾಯನನು ಹೇಳಿದನು: “ವಸುದೇವನಿಗೆ ವರಾಂಗನೆಯರಾದ ಹದಿನಾಲ್ಕು ಪತ್ನಿಯರಿದ್ದರು: ರೋಹಿಣೀ, ಇಂದಿರಾ, ವರಾ, ವೈಶಾಖೀ, ಭದ್ರಾ, ಮತ್ತು ಐದನೆಯವಳು ಸುನಾಮ್ನೀ ಇವರು ಪೌರವ ವಂಶದವರಾಗಿದ್ದರು. ಸಹದೇವಾ, ಶಾಂತಿದೇವಾ, ಶ್ರೀದೇವಾ, ದೇವರಕ್ಷಿತಾ, ವೃಕದೇವಿ, ಉಪದೇವೀ ಮತ್ತು ಏಳನೆಯವಳು ದೇವಕೀ. ಇನ್ನಿಬ್ಬರು – ಸುತನು ಮತ್ತು ಬಡವಾ – ಅವರ ಪರಿಚಾರಿಕೆಯರಾಗಿದ್ದರು.
ಪೌರವೀ ರೋಹಿಣೀ ನಾಮ ಬಾಹ್ಲಿಕಸ್ಯಾತ್ಮಜಾಭವತ್ ।
ಜ್ಯೇಷ್ಠಾ ಪತ್ನೀ ಮಹಾರಾಜ ದಯಿತಾಽಽನಕದುಂದುಭೇಃ ।। ೧-೩೫-೪
ಪೌರವೀ ರೋಹಿಣೀ ಎನ್ನುವವಳು ಬಾಹ್ಲಿಕ1ನ ಮಗಳಾಗಿದ್ದಳು. ಮಹಾರಾಜ! ಅವಳು ಆನಕದುಂದುಭಿ ಜ್ಯೇಷ್ಠ ಮತ್ತು ಪ್ರಿಯ ಪತ್ನಿಯಾಗಿದ್ದಳು.
ಲೇಭೇ ಜ್ಯೇಷ್ಠಂ ಸುತಂ ರಾಮಂ ಸಾರಣಂ ಶಠಮೇವ ಚ ।
ದುರ್ದಮಂ ದಮನಂ ಶ್ವಭ್ರಂ ಪಿಂಡಾರಕಮುಶೀನರಮ್ ।। ೧-೩೫-೫
ಚಿತ್ರಾಂ ನಾಮ ಕುಮಾರೀಂ ಚ ರೋಹಿಣೀ ತನಯಾ ದಶ ।
ಚಿತ್ರಾ ಸುಭದ್ರೇತಿ ಪುನರ್ವಿಖ್ಯಾತಾ ಕುರುನಂದನ ।। ೧-೩೫-೬
ಕುರುನಂದನ! ರೋಹಿಣಿಯ ಜ್ಯೇಷ್ಠ ಪುತ್ರ ರಾಮ. ನಂತರ ಸಾರಣ. ಶಠ, ದುರ್ದಮ, ದಮನ, ಶ್ವಭ್ರ, ಪಿಂಡಾರಕ, ಉಶೀನರ. ರೋಹಿಣಿಗೆ ಚಿತ್ರಾ ಎಂಬ ಹೆಸರಿನ ಕುಮಾರಿಯೂ ಇದ್ದಳು. ಚಿತ್ರಾಳೇ ಪುನಃ ಸುಭದ್ರಾ ಎಂಬ ಹೆಸರಿನಿಂದ ಹತ್ತನೆಯ ಮಗಳಾಗಿ ಜನಿಸಿದಳು2.
ವಸುದೇವಾಚ್ಚ ದೇವಕ್ಯಾಂ ಜಜ್ಞೇ ಶೌರಿರ್ಮಹಾಯಶಾಃ ।
ರಾಮಾಚ್ಚ ನಿಶಠೋ ಜಜ್ಞೇ ರೇವತ್ಯಾಂ ದಯಿತಃ ಸುತಃ ।। ೧-೩೫-೭
ವಸುದೇವನಿಗೆ ದೇವಕಿಯಲ್ಲಿ ಮಹಾಯಶಸ್ವೀ ಶೌರಿಯು ಜನಿಸಿದನು. ರಾಮನಾದರೋ ರೇವತಿಯಲ್ಲಿ ಪ್ರೀತಿಯ ಪುತ್ರ ನಿಶಠನಿಗೆ ಜನ್ಮವಿತ್ತನು.
ಸುಭದ್ರಾಯಾಂ ರಥೀ ಪಾರ್ಥಾದಭಿಮನ್ಯುರಜಾಯತ ।
ಅಕ್ರೂರಾತ್ಕಾಶಿಕನ್ಯಾಯಾಂ ಸತ್ಯಕೇತುರಜಾಯತ ।। ೧-೩೫-೮
ಸುಭದ್ರೆಗೆ ಪಾರ್ಥನಿಂದ ರಥೀ ಅಭಿಮನ್ಯುವು ಹುಟ್ಟಿದನು. ಅಕ್ರೂರನಿಗೆ ಕಾಶಿಕನ್ಯೆಯಿಂದ ಸತ್ಯಕೇತುವು ಜನಿಸಿದನು.
ವಸುದೇವಸ್ಯ ಭಾರ್ಯಾಸು ಮಹಾಭಾಗಾಸು ಸಪ್ತಸು ।
ಯೇ ಪುತ್ರಾ ಜಜ್ಞಿರೇ ಶೂರಾ ನಾಮತಸ್ತಾನ್ನಿಬೋಧ ಮೇ ।। ೧-೩೫-೯
ವಸುದೇವನ ಏಳು ಮಹಾಭಾಗ್ಯ ಭಾರ್ಯೆಯರಲ್ಲಿ ಹುಟ್ಟಿದ ಶೂರ ಪುತ್ರರ ಹೆಸರುಗಳನ್ನು ಹೇಳುತ್ತೇನೆ. ಕೇಳು.
ಭೋಜಶ್ಚ ವಿಜಯಶ್ಚೈವ ಶಾಂತಿದೇವಾಸುತಾವುಭೌ ।
ವೃಕದೇವಃ ಸುನಾಮಾಯಾಂ ಗದಶ್ಚಾಸ್ತಾಂ ಸುತಾವುಭೌ ।। ೧-೩೫-೧೦
ಭೋಜ ಮತ್ತು ವಿಜಯರು ಶಾಂತಿದೇವಾಳ ಇಬ್ಬರು ಮಕ್ಕಳು. ವೃಕದೇವ ಮತ್ತು ಗದ ಇವರಿಬ್ಬರು ಸುನಾಮ್ನಾಳ ಪುತ್ರರು.
ಉಪಾಸಂಗವರಂ ಲೇಭೇ ತನಯಂ ದೇವರಕ್ಷಿತಾ ।
ಅಗಾವಹಂ ಮಹಾತ್ಮಾನಂ ವೃಕದೇವೀ ವ್ಯಜಾಯತ ।। ೧-೩೫-೧೧
ದೇವರಕ್ಷಿತಾಳು ಉಪಾಸಂಗವರನನ್ನು ಮಗನನ್ನಾಗಿ ಪಡೆದಳು. ವೃಕದೇವಿಯು ಮಹಾತ್ಮ ಅಗಾವಹನಿಗೆ ಜನ್ಮವಿತ್ತಳು.
ಕನ್ಯಾ ತ್ರಿಗರ್ತರಾಜಸ್ಯ ಭರ್ತಾ ವೈ ಶೈಶಿರಾಯಣಃ ।
ಜಿಜ್ಞಾಸಾಂ ಪೌರುಷೇ ಚಕ್ರೇ ನ ಚಸ್ಕಂದೇಽಥ ಪೌರುಷಮ್ ।। ೧-೩೫-೧೨
ವೃಕದೇವಿಯು ತ್ರಿಗರ್ತರಾಜನ ಕನ್ಯೆಯಾಗಿದ್ದಳು. ತ್ರಿಗರ್ತರಾಜನ ಪುರೋಹಿತನು ಗರ್ಗಗೋತ್ರೀ ಶೈಶಿರಾಯಣನಾಗಿದ್ದನು. ಅವನ ಪುರುಷತ್ವದ ಕುರಿತು ಜಿಜ್ಞಾಸೆಯುಂಟಾದಾಗ ಅವನ ವೀರ್ಯ ಸ್ಖನಲವಾಗಲಿಲ್ಲ3. ಅವನು ನಪುಂಸಕನೆಂದು ಅವನ ಮೇಲೆ ಮಿಥ್ಯಾಪವಾದವನ್ನು ವಹಿಸಲಾಯಿತು.
ಕೃಷ್ಣಾಯಸಸಮಪ್ರಖ್ಯೋ ವರ್ಷೇ ದ್ವಾದಶಮೇ ತಥಾ ।
ಮಿಥ್ಯಾಭಿಶಪ್ತೋ ಗಾರ್ಗ್ಯಸ್ತು ಮನ್ಯುನಾಭಿಸಮೀರಿತಃ ।। ೧-೩೫-೧೩
ಹನ್ನೆರಡು ವರ್ಷಗಳ ನಿಯಮವು ಸಂಪೂರ್ಣವಾಗಲು ಮಿಥ್ಯಾಪವಾದವನ್ನು ಪಡೆದ ಗಾರ್ಗ್ಯನನ್ನು ಕೋಪವು ಆವೇಶಿಸಿತು ಮತ್ತು ಅವನ ಶರೀರವರ್ಣವು ಲೋಹದಂತೆ ಕಪ್ಪಾಯಿತು.
ಗೋಪಕನ್ಯಾಮುಪಾದಾಯ ಮೈಥುನಾಯೋಪಚಕ್ರಮೇ ।
ಗೋಪಾಲೀ ತ್ವಪ್ಸರಾಸ್ತಸ್ಯ ಗೋಪಸ್ತ್ರೀವೇಷಧಾರಿಣೀ ।। ೧-೩೫-೧೪
ಅವನು ಓರ್ವ ಗೋಪಕನ್ಯೆಯ ಬಳಿಸಾರಿ ಅವಳೊಡನೆ ಸಂಭೋಗಿಸತೊಡಗಿದನು. ಗೋಪಸ್ತ್ರೀವೇಷಧಾರಿಣಿಯಾಗಿದ್ದ ಅವಳು ಗೋಪಾಲೀ ಎಂಬ ಅಪ್ಸರೆಯಾಗಿದ್ದಳು.
ಧಾರಯಾಮಾಸ ಗಾರ್ಗ್ಯಸ್ಯ ಗರ್ಭಂ ದುರ್ಧರಮಚ್ಯುತಮ್ ।
ಮಾನುಷ್ಯಾಂ ಗಾರ್ಗ್ಯಭಾರ್ಯಾಯಾಂ ನಿಯೋಗಾಚ್ಛೂಲಪಾಣಿನಃ ।। ೧-೩೫-೧೫
ಶೂಲಪಾಣಿಯ ನಿಯೋಗದಂತೆ ಗಾರ್ಗ್ಯನ ಮನುಷ್ಯವೇಧಧಾರೀ ಭಾರ್ಯೆಯು ಅವನ ದುರ್ಧರ ಅಚ್ಯುತ ಗರ್ಭವನ್ನು ಧರಿಸಿದಳು.
ಸ ಕಾಲಯವನೋ ನಾಮ ಜಜ್ಞೇ ರಾಜಾ ಮಹಾಬಲಃ ।
ವೃಷಪೂರ್ವಾರ್ಧಕಾಯಾಸ್ತಮವಹನ್ವಾಜಿನೋ ರಣೇ ।। ೧-೩೫-೧೬
ಅವಳಿಗೆ ಕಾಲಯವನ ಎಂಬ ಹೆಸರಿನ ಮಹಾಬಲ ರಾಜನು ಜನಿಸಿದನು. ವೃಷಭದ ರೂಪದಲ್ಲಿದ್ದ ಅವನ ಕಾಯದ ಪೂರ್ವಾರ್ಧವು ರಣದಲ್ಲಿ ಕುದುರೆಯ ರೂಪವನ್ನು ತಾಳಿ ಅವನ ವಾಹನವಾಗುತ್ತಿತ್ತು.
ಅಪುತ್ರಸ್ಯ ಸ ರಾಜ್ಞಸ್ತು ವವೃಧೇಽಂತಃಪುರೇ ಶಿಶುಃ ।
ಯವನಸ್ಯ ಮಹಾರಾಜ ಸ ಕಾಲಯವನೋಽಭವತ್ ।। ೧-೩೫-೧೭
ಮಹಾರಾಜ! ಅಪುತ್ರನಾಗಿದ್ದ ಯವನ ರಾಜನ ಅಂತಃಪುರದಲ್ಲಿ ಆ ಶಿಶುವು ಬೆಳೆಯಿತು4. ಅವನೇ ಕಾಲಯವನನಾದನು.
ಸ ಯುದ್ಧಕಾಮೀ ನೃಪತಿಃ ಪರ್ಯಪೃಚ್ಛದ್ದ್ವಿಜೋತ್ತಮಾನ್ ।
ವೃಷ್ಣಂಧಕಕುಲಂ ತಸ್ಯ ನಾರದೋಽಕಥಯದ್ವಿಭುಃ ।। ೧-೩೫-೧೮
ಆ ಯುದ್ಧಕಾಮೀ ನೃಪತಿಯು ದ್ವಿಜೋತ್ತಮರನ್ನು ಯುದ್ಧದಲ್ಲಿ ತನ್ನ ಸಮಾನರ್ಯಾರೆಂದು ಕೇಳುತ್ತಿದ್ದನು. ಆಗ ವಿಭು ನಾರದನು ಅವನಿಗೆ ವೃಷ್ಣಿ-ಅಂಧಕ ಕುಲದವರ ಕುರಿತು ಹೇಳಿದ್ದನು.
ಅಕ್ಷೌಹಿಣ್ಯಾ ತು ಸೈನ್ಯಸ್ಯ ಮಥುರಾಮಭ್ಯಯಾತ್ತದಾ ।
ದೂತಂ ಸಂಪ್ರೇಷಯಾಮಾಸ ವೃಷ್ಣ್ಯಂಧಕನಿವೇಶನಮ್ ।। ೧-೩೫-೧೯
ಅಕ್ಷೋಹಿಣೀ ಸೇನೆಯೊಂದಿಗೆ ಅವನು ಮಥುರೆಯನ್ನು ಆಕ್ರಮಣಿಸಿದನು. ವೃಷ್ಣಿ-ಅಂಧಕರ ಅರಮನೆಗೆ ದೂತನನ್ನು ಕಳುಹಿಸಿದನು.
ತತೋ ವೃಷ್ಣ್ಯಂಧಕಾಃ ಕೃಷ್ಣಂ ಪುರಸ್ಕೃತ್ಯ ಮಹಾಮತಿಮ್ ।
ಸಮೇತಾ ಮಂತ್ರಯಾಮಾಸುರ್ಯವನಸ್ಯ ಭಯಾತ್ತದಾ ।। ೧-೩೫-೨೦
ಆಗ ಯವನನ ಭಯದಿಂದ ವೃಷ್ಣಿ-ಅಂಧಕರು ಕೃಷ್ಣನನ್ನು ಮುಂದಿಟ್ಟುಕೊಂಡು ಒಟ್ಟಾಗಿ ಮಂತ್ರಾಲೋಚನೆ ನಡೆಸಿದರು.
ಕೃತ್ವಾ ಚ ನಿಶ್ಚಯಂ ಸರ್ವೇ ಪಲಾಯನಪರಾಯಣಾಃ ।
ವಿಹಾಯ ಮಥುರಾಂ ರಮ್ಯಾಂ ಮಾನಯಂತಃ ಪಿನಾಕಿನಮ್ ।। ೧-೩೫-೨೧
ಕುಶಸ್ಥಲೀಂ ದ್ವಾರವತೀಂ ನಿವೇಶಯಿತುಮೀಪ್ಸವಃ ।
ಪಿನಾಕಿ ಶಿವನ ಅಭಿಪ್ರಾಯವನ್ನು ಮನ್ನಿಸಿ ಎಲ್ಲರೂ ರಮ್ಯ ಮಥುರೆಯನ್ನು ಬಿಟ್ಟು ಪಲಾಯನಮಾಡಲು ನಿಶ್ಚಯಿಸಿದರು ಮತ್ತು ಕುಶಸ್ಥಲೀ ದ್ವಾರವತಿಯಲ್ಲಿ ವಾಸಿಸಲು ಬಯಸಿದರು.
ಇತಿ ಕೃಷ್ಣಸ್ಯ ಜನ್ಮೇದಂ ಯಃ ಶುಚಿರ್ನಿಯತೇಂದ್ರಿಯಃ ।
ಪರ್ವಸು ಶ್ರಾವಯೇದ್ವಿದ್ವಾನನೃಣಃ ಸ ಸುಖೀ ಭವೇತ್ ।। ೧-೩೫-೨೨
ಕೃಷ್ಣನ ಜನ್ಮದ ಕುರಿತಾದ ಇದನ್ನು ಪರ್ವಕಾಲಗಳಲ್ಲಿ ಪಠಿಸುವ ಶುಚಿ, ನಿಯತೇಂದ್ರಿಯ, ವಿದ್ವಾನ್ ನರನು ಅನೃಣನೂ ಸುಖಿಯೂ ಆಗುತ್ತಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಶ್ರಿಕೃಷ್ಣಜನ್ಮಾನುಕೀರ್ತನಂ ನಾಮ ಪಂಚತ್ರಿಂಶೋಽಧ್ಯಾಯಃ
-
ಮಹಾರಾಜ ಶಂತನುವಿನ ಅಣ್ಣ. ↩︎
-
ಈ ಚಿತ್ರಾಳು ಓರ್ವ ಅಪ್ಸರೆಯಾಗಿದ್ದಳು. ಇವಳು ರೋಹಿಣಿಯಲ್ಲಿ ಹುಟ್ಟಿದ ತಕ್ಷಣವೇ ತೀರಿಹೋದಳು. ಯಾದವ ಕುಲದಲ್ಲಿ ಹುಟ್ಟಿದ್ದರೂ ಆ ಕುಲದಲ್ಲಿ ಹುಟ್ಟಿದ ಭಗವಂತನ ಲೀಲೆಗಳನ್ನು ತನಗೆ ನೋಡಲಿಕ್ಕಾಗಲಿಲ್ಲ ಎಂದು ಮರಣದ ಸಮಯದಲ್ಲಿ ಅವಳು ತನ್ನನ್ನು ತಾನೇ ಧಿಕ್ಕರಿಸಿದ್ದಳು. ಅವಳೇ ಎರಡನೆಯ ಬಾರಿ ಸುಭದ್ರಾ ಎಂಬ ಹೆಸರಿನಿಂದ ರೋಹಿಣಿಯಲ್ಲಿ ಜನ್ಮತಾಳಿದಳು. ↩︎
-
ಶೈಶಿರಾಯಣನ ಬಾವನು ಯಾದವರ ಪುರೋಹಿತನಾಗಿದ್ದನು. ಶೈಶಿರಾಯಣನಲ್ಲಿ ಪುರುಷತ್ವ ಇದೆಯೋ ಅಥವಾ ಇಲ್ಲವೋ ಎಂದು ಪರೀಕ್ಷಿಸಿದಾಗ ವ್ರತಧಾರಿಯಾಗಿದ್ದ ಶೈಶಿರಾಯಣನ ವೀರ್ಯಸ್ಖಲನವಾಗದೇ ಇರಲು ಅವನ ಬಾವನು ಅವನು ನಪುಂಸಕನೆಂದು ಮಿಥ್ಯಾಪವಾದವನ್ನು ಹೊರಿಸಿದ್ದನು. ↩︎
-
ಅಪ್ಸರೆ ಗೋಪಾಲಿಯು ಹುಟ್ಟಿದಾಕ್ಷಣ ಅವಳ ಮಗು ಕಾಲಯವನನ್ನು ಬಿಟ್ಟುಹೋಗಿದ್ದಳು. ↩︎