030: ಯಯಾತಿಚರಿತ್ರಕಥನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 30

ಸಾರ

ನಹುಷ ಮತ್ತು ಯಯಾತಿಯರ ವಂಶವರ್ಣನೆ ಮತ್ತು ಯಯಾತಿಯ ಚರಿತ್ರೆ.

ವೈಶಂಪಾಯನ ಉವಾಚ
ಉತ್ಪನ್ನಾಃ ಪಿತೃಕನ್ಯಾಯಾಂ ವಿರಜಾಯಾಂ ಮಹೌಜಸಃ ।
ನಹುಷಸ್ಯ ತು ದಾಯಾದಾಃ ಷಡಿಂದ್ರೋಪಮತೇಜಸಃ ।। ೧-೩೦-೧

ವೈಶಂಪಾಯನನು ಹೇಳಿದನು: “ನಹುಷನಿಗೆ ಪಿತೃಕನ್ಯೆ ವಿರಜೆಯಲ್ಲಿ ಮಹೌಜಸರಾದ ಇಂದ್ರೋಪಮ ತೇಜಸ್ವೀ ಆರು ಪುತ್ರರು ಜನಿಸಿದರು.

ಯತಿರ್ಯಯಾತಿಃ ಸಂಯಾತಿರಾಯತಿಃ ಪಾಂಚಿಕೋ ಭವಃ ।
ಸುಯಾತಿಃ ಷಷ್ಠಸ್ತೇಷಾಂ ವೈ ಯಯಾತಿಃ ಪಾರ್ಥಿವೋಽಭವತ್ ।
ಯತಿರ್ಜ್ಯೇಷ್ಠಸ್ತು ತೇಷಾಂ ವೈ ಯಯಾತಿಸ್ತು ತತಃ ಪರಮ್ ।। ೧-೩೦-೨

ಯತಿ, ಯಯಾತಿ, ಸಂಯಾತಿ, ಆಯತಿ, ಐದನೆಯವನು ಭವ ಮತ್ತು ಆರನೆಯವನು ಸುಯಾತಿ. ಅವರಲ್ಲಿ ಯಯಾತಿಯು ಪಾರ್ಥಿವನಾದನು.

ಕಾಕುತ್ಸ್ಥಕನ್ಯಾಂ ಗಾಂ ನಾಮ ಲೇಭೇ ಪರಮಧಾರ್ಮಿಕಃ ।
ಯತಿಸ್ತು ಮೋಕ್ಷಮಾಸ್ಥಾಯ ಬ್ರಹ್ಮಭೂತೋಽಭವನ್ಮುನಿಃ ।। ೧-೩೦-೩

ಪರಮಧಾರ್ಮಿಕ ಯತಿಯಾದರೋ ಕಾಕುತ್ಸ್ಥ್ಯನ ಕನ್ಯೆ ಗೋ ಎಂಬ ಹೆಸರಿನವಳನ್ನು ಪತ್ನಿಯನ್ನಾಗಿ ಪಡೆದನು. ಆದರೆ ಅವನು ಮೋಕ್ಷಮಾರ್ಗವನ್ನು ಅನುಸರಿಸಿ ಬ್ರಹ್ಮಭೂತ ಮುನಿಯಾದನು.

ತೇಷಾಂ ಯಯಾತಿಃ ಪಂಚಾನಾಂ ವಿಜಿತ್ಯ ವಸುಧಾಮಿಮಾಮ್ ।
ದೇವಯಾನೀಮುಶನಸಃ ಸುತಾಂ ಭಾರ್ಯಾಮವಾಪ ಸಃ ।
ಶರ್ಮಿಷ್ಠಾಮಾಸುರೀಂ ಚೈವ ತನಯಾಂ ವೃಷಪರ್ವಣಃ ।। ೧-೩೦-೪

ಉಳಿದ ಐವರಲ್ಲಿ ಯಯಾತಿಯು ಈ ವಸುಧೆಯನ್ನು ಗೆದ್ದು ಉಶನಸನ ಸುತೆ ದೇವಯಾನಿ ಮತ್ತು ಅಸುರ ವೃಷಪರ್ವಣನ ಮಗಳು ಶರ್ಮಿಷ್ಠೆಯನ್ನು ಪತ್ನಿಯರನ್ನಾಗಿ ಪಡೆದುಕೊಂಡನು.

ಯದುಂ ಚ ತುರ್ವಸುಂ ಚೈವ ದೇವಯಾನೀ ವ್ಯಜಾಯತ ।
ದ್ರುಹ್ಯುಂ ಚಾನುಂ ಚ ಪೂರುಂ ಚ ಶರ್ಮಿಷ್ಠಾ ವಾರ್ಷಪರ್ವಣೀ ।। ೧-೩೦-೫

ಯದು ಮತ್ತು ತುರ್ವಸು ಇವರಿಬ್ಬರೂ ದೇವಯಾನಿಯಲ್ಲಿ ಹುಟ್ಟಿದರು. ದ್ರುಹ್ಯು, ಅನು, ಮತ್ತು ಪೂರು ಇವರು ವಾರ್ಷಪರ್ವಣಿ ಶರ್ಮಿಷ್ಠೆಯಲ್ಲಿ ಹುಟ್ಟಿದರು.

ತಸ್ಮೈ ಶಕ್ರೋ ದದೌ ಪ್ರೀತೋ ರಥಂ ಪರಮಭಾಸ್ವರಮ್ ।
ಅಸಂಗಂ ಕಾಂಚನಂ ದಿವ್ಯಂ ದಿವ್ಯೈಃ ಪರಮವಾಜಿಭಿಃ ।। ೧-೩೦-೬
ಯುಕ್ತಂ ಮನೋಜವೈಃ ಶುಭ್ರೈರ್ಯೇನ ಭಾರ್ಯಾಮುವಾಹ ಸಃ ।
ಸ ತೇನ ರಥಮುಖ್ಯೇನ ಷಡ್ರಾತ್ರೇನಾಜಯನ್ಮಹೀಮ್ ।
ಯಯಾತಿರ್ಯುಧಿ ದುರ್ಧರ್ಷಸ್ತಥಾ ದೇವಾನ್ಸವಾಸವಾನ್ ।। ೧-೩೦-೭

ಯಯಾತಿಯ ಮೇಲೆ ಪ್ರೀತನಾಗಿ ಶಕ್ರನು ಅವನಿಗೆ ಪರಮಕಾಂತಿಯಿದ್ದ ರಥವನ್ನು ನೀಡಿದನು. ಅದಕ್ಕೆ ಮನಸಮಾನ ವೇಗಶಾಲೀ ದಿವ್ಯ ಶ್ವೇತವರ್ಣದ ಉತ್ತಮ ಅಶ್ವಗಳನ್ನು ಕಟ್ಟಲಾಗಿತ್ತು. ಆ ದಿವ್ಯರಥವು ಸುವರ್ಣದಿಂದ ಮಾಡಲ್ಪಟ್ಟಿತ್ತು. ಅದರ ಚಲನೆಯನ್ನು ಎಲ್ಲಿಯೂ ತಡೆಯಲಾಗುತ್ತಿರಲಿಲ್ಲ. ಅದೇ ರಥದಿಂದ ಅವನು ತನ್ನ ಪತ್ನಿಯನ್ನು ಏರಿಸಿಕೊಂಡು ಬಂದಿದ್ದನು. ಆ ಶ್ರೇಷ್ಠರಥದಿಂದ ದುರ್ಧರ್ಷ ರಾಜ ಯಾಯಾತಿಯು ಆರು ರಾತ್ರಿಗಳಲ್ಲಿಯೇ ಸಂಪೂರ್ಣ ಪೃಥ್ವೀ, ದೇವತೆಗಳು ಮತ್ತು ದಾನವರನ್ನು ಗೆದ್ದಿದ್ದನು.

ಸ ರಥಃ ಪೌರವಾಣಾಂ ತು ಸರ್ವೇಷಾಮಭವತ್ತದಾ ।
ಯಾವತ್ತು ವಸುನಾಮ್ನೋ ವೈ ಕೌರವಾಜ್ಜನಮೇಜಯಃ ।। ೧-೩೦-೮

ಜನಮೇಜಯ! ಕುರುವಂಶೀ ರಾಜಾ ವಸುವಿನವರೆಗೆ ಎಲ್ಲ ಪೌರವ ನರೇಶರಲ್ಲಿಯೂ ಆ ರಥವು ಪರಂಪರಾಗತವಾಗಿತ್ತು ಎಂದು ವಿದ್ಯಮಾನವಿದೆ.

ಕುರೋಃ ಪುತ್ರಸ್ಯ ರಾಜೇಂದ್ರ ರಾಜ್ಞಃ ಪಾರೀಕ್ಷಿತಸ್ಯ ಹ ।
ಜಗಾಮ ಸ ರಥೋ ನಾಶಂ ಶಾಪಾದ್ಗಾರ್ಗ್ಯಸ್ಯ ಧೀಮತಃ ।। ೧-೩೦-೯

ರಾಜೇಂದ್ರ! ಕುರುವಿನ ಪುತ್ರ ರಾಜಾ ಪರಿಕ್ಷಿತನ ಕುಮಾರ ಇಂದ್ರೋತ ಜನಮೇಜಯನಿಗೆ ಬುದ್ಧಿಮಾನ್ ಗಾರ್ಗ್ಯನ ಶಾಪದಿಂದಾಗಿ ಆ ರಥವು ನಷ್ಟವಾಯಿತು.

ಗರ್ಗ್ಯಸ್ಯ ಹಿ ಸುತಂ ಬಾಲಂ ಸ ರಾಜಾ ಜನಮೇಜಯಃ ।
ವಾಕ್ಛೂರಂ ಹಿಂಸಯಾಮಾಸ ಬ್ರಹ್ಮಹತ್ಯಾಮವಾಪ ಸಃ ।। ೧-೩೦-೧೦

ಗರ್ಗ್ಯನ ಮಗ ವಾಕ್ ಶೂರ ಬಾಲಕನನ್ನು ರಾಜಾ ಇಂದ್ರೋತ ಜನಮೇಜಯನು ಕೊಂದುದರಿಂದ ಬ್ರಹ್ಮಹತ್ಯೆಯನ್ನು ಪಡೆದುಕೊಂಡನು.

ಸ ಲೋಹಗಂಧೀ ರಾಜರ್ಷಿಃ ಪರಿಧಾವನ್ನಿತಸ್ತತಃ ।
ಪೌರಜಾನಪದೈಸ್ತ್ಯಕ್ತೋ ನ ಲೇಭೇ ಶರ್ಮ ಕರ್ಹಿಚಿತ್ ।। ೧-೩೦-೧೧

ಪೌರಜಾನಪದರಿಂದ ತ್ಯಕ್ತನಾದ ಲೋಹದ ವಾಸನೆಯನ್ನು ಹೊಂದಿದ್ದ ಆ ರಾಜರ್ಷಿಯು ಅಲ್ಲಿ-ಇಲ್ಲಿ ತಿರುಗುತ್ತಿದ್ದನು. ಎಲ್ಲಿಯೂ ಅವನಿಗೆ ಶಾಂತಿಯು ದೊರಕಲಿಲ್ಲ.

ತತಃ ಸ ದುಃಖಸಂತಪ್ತೋ ನಾಲಭತ್ಸಂವಿದಂ ಕ್ವಚಿತ್ ।
ಇಂದ್ರೋತಃ ಶೌನಕಂ ರಾಜಾ ಶರಣಂ ಪ್ರತ್ಯಪದ್ಯತ ।। ೧-೩೦-೧೨

ಎಲ್ಲಿಯೂ ಶಾಂತಿಯು ಸಿಗದೇ ದುಃಖಸಂತಪ್ತನಾಗಿದ್ದ ರಾಜಾ ಇಂದ್ರೋತನು ಶೌನಕನ ಶರಣು ಹೊಕ್ಕನು.

ಯಾಜಯಾಮಾಸ ಚೇಂದ್ರೋತಃ ಶೌನಕೋ ಜನಮೇಜಯಮ್ ।
ಅಶ್ವಮೇಧೇನ ರಾಜಾನಂ ಪಾವನಾರ್ಥಂ ದ್ವಿಜೋತ್ತಮಃ ।। ೧-೩೦-೧೩

ಶೌನಕನು ಅವನನ್ನು ಪವಿತ್ರಗೊಳಿಸಲು ರಾಜಾ ಇಂದ್ರೋತ ಜನಮೇಜಯನಿಂದ ಅಶ್ವಮೇಧವನ್ನು ನಡೆಸಿದನು.

ಸ ಲೋಹಗಂಧೋ ವ್ಯನಶತ್ತಸ್ಯಾವಭೃಥಮೇತ್ಯ ಹ ।
ಸ ಚ ದಿವ್ಯೋ ರಥೋ ರಾಜನ್ವಸೋಶ್ಚೇದಿಪತೇಸ್ತದಾ ।
ದತ್ತಃ ಶಕ್ರೇಣ ತುಷ್ಟೇನ ಲೇಭೇ ತಸ್ಮಾದ್ಬೃಹದ್ರಥಃ ।। ೧-೩೦-೧೪

ಯಜ್ಞದ ಅವಭೃತಸ್ನಾನದಿಂದ ಇಂದ್ರೋತನು ತನ್ನ ಲೋಹದ ವಾಸನೆಯನ್ನು ಕಳೆದುಕೊಂಡನು. ರಾಜನ್! ಆ ದಿವ್ಯರಥವನ್ನು ಇಂದ್ರನು ಪ್ರೀತನಾಗಿ ಚೇದಿಪತಿ ವಸುವಿಗೆ ಕೊಟ್ಟನು. ಅವನಿಂದ ಆ ರಥವನ್ನು ಬೃಹದ್ರಥನು ಪಡೆದುಕೊಂಡನು.

ಬೃಹದ್ರಥಾತ್ಕ್ರಮೇಣೈವ ಗತೋ ಬಾರ್ಹದ್ರಥಮ್ ನೃಪಮ್ ।
ತತೋ ಹತ್ವಾ ಜರಾಸಂಧಂ ಭೀಮಸ್ತಂ ರಥಮುತ್ತಮಮ್ ।। ೧-೩೦-೧೫
ಪ್ರದದೌ ವಾಸುದೇವಾಯ ಪ್ರೀತ್ಯಾ ಕೌರವನಂದನಃ ।

ಕ್ರಮೇಣವಾಗಿ ಬೃಹದ್ರಥನಿಂದ ಆ ರಥವು ಅವನ ಮಗ ನೃಪ ಜರಾಸಂಧನಿಗೆ ದೊರೆಯಿತು. ಅನಂತರ ಕೌರವನಂದನ ಭೀಮನು ಜರಾಸಂಧನನ್ನು ಸಂಹರಿಸಿ ಆ ಉತ್ತಮ ರಥವನ್ನು ಪ್ರೀತಿಯಿಂದ ವಾಸುದೇವನಿಗೆ ನೀಡಿದನು.

ಸಪ್ತದ್ವೀಪಾಂ ಯಯಾತಿಸ್ತು ಜಿತ್ವಾ ಪೃಥ್ವೀಂ ಸಸಾಗರಾಮ್ ।। ೧-೩೦-೧೬
ವ್ಯಭಜತ್ಪಂಚಧಾ ರಾಜನ್ಪುತ್ರಾಣಾಂ ನಾಹುಷಸ್ತದಾ ।

ನಾಹುಷ ಯಯಾತಿಯಾದರೋ ಸಾಗರಗಳೊಂದಿಗೆ ಪೃಥ್ವಿಯ ಸಪ್ತದ್ವೀಪಗಳನ್ನೂ ಗೆದ್ದು ಐವರು ರಾಜಪುತ್ರರಲ್ಲಿ ಅದನ್ನು ವಿಭಜಿಸಿದನು.

ದಿಶಿ ದಕ್ಷಿಣಪೂರ್ವಸ್ಯಾಂ ತುರ್ವಸುಂ ಮತಿಮಾನ್ನೃಪಃ ।। ೧-೩೦-೧೭
ಪ್ರತೀಚ್ಯಾಮುತ್ತರಸ್ಯಾಂ ಚ ದ್ರುಹ್ಯುಂ ಚಾನುಂ ಚ ನಾಹುಷಃ ।
ದಿಶಿ ಪೂರ್ವೋತ್ತರಸ್ಯಾಂ ವೈ ಯದುಂ ಜ್ಯೇಷ್ಠಂ ನ್ಯಯೋಜಯತ್ ।। ೧-೩೦-೧೮

ಆ ಮತಿಮಾನ್ ನೃಪ ನಾಹುಷನು ದಕ್ಷಿಣ-ಪೂರ್ವಭಾಗದಲ್ಲಿ ತುರ್ವಸುವನ್ನು, ಪೂರ್ವದಲ್ಲಿ ದ್ರುಹ್ಯುವವನ್ನು, ಉತ್ತರದಲ್ಲಿ ಅನುವನ್ನು ಮತ್ತು ಪೂರ್ವೋತ್ತರ ದಿಕ್ಕಿನಲ್ಲಿ ಜ್ಯೇಷ್ಠ ಯದುವನ್ನು ನಿಯೋಜಿಸಿದನು.

ಮಧ್ಯೇ ಪೂರುಂ ಚ ರಾಜಾನಮಭ್ಯಷಿಂಚತ ನಾಹುಷಃ ।
ತೈರಿಯಂ ಪೃಥಿವೀ ಸರ್ವಾ ಸಪ್ತದ್ವೀಪಾ ಸಪತ್ತನಾ ।। ೧-೩೦-೧೯
ಯಥಾಪ್ರದೇಶಮದ್ಯಾಪಿ ಧರ್ಮೇಣ ಪ್ರತಿಪಾಲ್ಯತೇ ।
ಪ್ರಜಾಸ್ತೇಷಾಂ ಪುರಸ್ತಾತ್ತು ವಕ್ಷ್ಯಾಮಿ ನೃಪಸತ್ತಮ ।। ೧-೩೦-೨೦

ನಾಹುಷನು ಮಧ್ಯದಲ್ಲಿ ಪುರುವನ್ನು ರಾಜನನ್ನಾಗಿ ಅಭಿಷೇಕಿಸಿದನು. ಈಗಲೂ ಕೂಡ ಎಲ್ಲ ಸಪ್ತದ್ವೀಪಗಳು ಮತ್ತು ಪಟ್ಟಣಗಳೊಂದಿಗೆ ಅವರವರ ಪ್ರದೇಶಗಳನ್ನು ಅವರು ಮತ್ತು ಅವರ ವಂಶದವರು ಧರ್ಮದಿಂದ ಪ್ರತಿಪಾಲಿಸುತ್ತಿದ್ದಾರೆ. ನೃಪಸತ್ತಮ! ಈಗ ಅವರ ಮಕ್ಕಳ ಕುರಿತು ಹೇಳುತ್ತೇನೆ.

ಧನುರ್ನ್ಯಸ್ಯ ಪೃಷತ್ಕಾಂಶ್ಚ ಪಂಚಭಿಃ ಪುರುಷರ್ಷಭೈಃ ।
ಜರಾವಾನಭವದ್ರಾಜಾ ಭಾರಮಾವೇಶ್ಯ ಬಂಧುಷು ।
ನಿಃಕ್ಷಿಪ್ತಶಸ್ತ್ರಃ ಪೃಥಿವೀಂ ನಿರೀಕ್ಷ್ಯ ಪೃಥಿವೀಪತಿಃ ।। ೧-೩೦-೨೧
ಪ್ರೀತಿಮಾನಭವದ್ರಾಜಾ ಯಯಾತಿರಪರಾಜಿತಃ ।
ಏವಂ ವಿಭಜ್ಯ ಪೃಥಿವೀಂ ಯಯಾತಿರ್ಯದುಮಬ್ರವೀತ್ ।। ೧-೩೦-೨೨

ಈ ಐವರು ಪುರುಷರ್ಷಭರಿಂದ ಕೃತಕೃತ್ಯನಾದ ರಾಜನು ರಾಜ್ಯಭಾರವನ್ನು ಬಂಧುಗಳಿಗೆ ವಹಿಸಿ, ಧನುಸ್ಸು-ಬಾಣಗಳನ್ನು ಕೆಳಗಿಟ್ಟು ಮುದುಕನಾದನು. ಅಪರಾಜಿತ ರಾಜಾ ಪೃಥಿವೀಪತಿ ಯಯಾತಿಯು ಶಸ್ತ್ರಗಳನ್ನು ಕೆಳಗಿಟ್ಟು ಪೃಥ್ವಿಯನ್ನು ನೋಡಿ ಸಂತುಷ್ಟನಾದನು. ಈ ರೀತಿ ಪೃಥ್ವಿಯನ್ನು ವಿಭಜಿಸಿ ಯಯಾತಿಯು ಯದುವಿಗೆ ಹೇಳಿದನು:

ಜರಾಂ ಮೇ ಪ್ರತಿಗೃಹ್ಣೀಷ್ವ ಪುತ್ರ ಕೃತ್ಯಾಂತರೇಣ ವೈ ।
ತರುಣಸ್ತವ ರೂಪೇಣ ಚರೇಯಂ ಪೃಥಿವೀಮಿಮಾಮ್ ।
ಜರಾಂ ತ್ವಯಿ ಸಮಾಧಾಯ ತಂ ಯದುಃ ಪ್ರತ್ಯುವಾಚ ಹ ।। ೧-೩೦-೨೩

“ಪುತ್ರ! ನನ್ನದೊಂದು ಕಾರ್ಯಕ್ಕಾಗಿ ನನ್ನ ಈ ಮುಪ್ಪನ್ನು ಸ್ವೀಕರಿಸು. ಮುಪ್ಪನ್ನು ನಿನ್ನಲ್ಲಿ ಇರಿಸಿ, ನಿನ್ನ ತರುಣ ರೂಪದಿಂದ ನಾನು ಈ ಪೃಥ್ವಿಯಲ್ಲಿ ಸಂಚರಿಸುತ್ತೇನೆ.” ಯದುವು ಅವನಿಗೆ ಉತ್ತರಿಸಿದನು:

ಅನಿರ್ದಿಷ್ಟಾ ಮಯಾ ಭಿಕ್ಷಾ ಬ್ರಾಹ್ಮಣಸ್ಯ ಪ್ರತಿಶ್ರುತಾ ।
ಅನಪಾಕೃತ್ಯ ತಾಂ ರಾಜನ್ನ ಗೃಹೀಷ್ಯಾಮಿ ತೇ ಜರಾಮ್ ।। ೧-೩೦-೨೪

“ರಾಜನ್! ನಾನು ಓರ್ವ ಬ್ರಾಹ್ಮಣನಿಗೆ ಅವನು ಕೇಳಿದ ಭಿಕ್ಷೆಯನ್ನು ನೀಡುವ ಪ್ರತಿಜ್ಞೆಯನ್ನು ಮಾಡಿದ್ದೇನೆ. ಇದೂವರೆಗೆ ಅವನು ತನಗೆ ಇದು ಬೇಕು ಎನ್ನುವುದನ್ನು ಸ್ಪಷ್ಟವಾಗಿ ನನ್ನಲ್ಲಿ ಹೇಳಿಲ್ಲ. ಎಲ್ಲಿಯವರೆಗೆ ಅವನ ಭಿಕ್ಷೆಯ ಋಣವನ್ನು ತೀರಿಸುವುದಿಲ್ಲವೋ ಅಲ್ಲಿಯವರೆಗೆ ನಿನ್ನ ಮುಪ್ಪನ್ನು ನಾನು ಸ್ವೀಕರಿಸಲಾರೆ.

ಜರಾಯಾಂ ಬಹವೋ ದೋಷಾಃ ಪಾನಭೋಜನಕಾರಿತಾಃ ।
ತಸ್ಮಾಜ್ಜರಾಂ ನ ತೇ ರಾಜನ್ಗ್ರಹೀತುಮಹಮುತ್ಸಹೇ ।। ೧-೩೦-೨೫

ರಾಜನ್! ಮುಪ್ಪಿನಲ್ಲಿ ಪಾನ-ಭೋಜನಸಂಬಂಧೀ ಅನೇಕ ದೋಷಗಳಿವೆ. ಆದುದರಿಂದ ನಾನು ನಿನ್ನ ಮುಪ್ಪನ್ನು ಸ್ವೀಕರಿಸಲು ಬಯಸುವುದಿಲ್ಲ.

ಸಂತಿ ತೇ ಬಹವಃ ಪುತ್ರಾಃ ಮತ್ತಃ ಪ್ರಿಯತರಾ ನೃಪ ।
ಪ್ರತಿಗ್ರಹೀತುಂ ಧರ್ಮಜ್ಞ ಪುತ್ರಮನ್ಯಂ ವೃಣೀಷ್ವ ವೈ ।। ೧-೩೦-೨೬

ನೃಪ! ನಿನಗೆ ನನಗಿಂತಲೂ ಪ್ರಿಯತಮರಾದ ಅನೇಕ ಪುತ್ರರಿದ್ದಾರೆ. ಧರ್ಜಜ್ಞ! ನಿನ್ನ ಮುಪ್ಪನ್ನು ಸ್ವೀಕರಿಸುವ ಬೇರೆ ಯಾವ ಪುತ್ರನನ್ನಾದರೂ ಆರಿಸಿಕೋ!”

ಸ ಏವಮುಕ್ತೋ ಯದುನಾ ರಾಜಾ ಕೋಪಸಮನ್ವಿತಃ ।
ಉವಾಚ ವದತಾಂ ಶ್ರೇಷ್ಠೋ ಯಯಾತಿರ್ಗರ್ಹಯನ್ಸುತಮ್ ।। ೧-೩೦-೨೭

ಯದುವು ಹಾಗೆ ಹೇಳಲು ಮಾತನಾಡುವವರಲ್ಲಿ ಶ್ರೇಷ್ಠ ರಾಜ ಯಯಾತಿಯು ಕೋಪಸಮನ್ವಿತನಾಗಿ ಮಗನನ್ನು ಬೆದರಿಸುತ್ತಾ ಹೀಗೆ ಹೇಳಿದನು:

ಕ ಆಶ್ರಯಸ್ತವಾನ್ಯೋಽಸ್ತಿ ಕೋ ವಾ ಧರ್ಮೋ ವಿಧೀಯತೇ ।
ಮಾಮನಾದೃತ್ಯ ದುರ್ಬುದ್ಧೇ ಯದಹಂ ತವ ದೇಶಿಕಃ ।। ೧-೩೦-೨೮

“ದುರ್ಬುದ್ಧೇ! ನಿನ್ನ ಗುರುವಾದ ನನ್ನನ್ನು ಅನಾದರಿಸಿದ ನಿನಗೆ ಅನ್ಯ ಆಶ್ರಯವಾಗಿ ಯಾರಿದ್ದಾರೆ? ಅಥವಾ ನೀನು ಯಾವ ಧರ್ಮವನ್ನು ತಿಳಿದಿದ್ದೀಯೆ?”

ಏವಮುಕ್ತ್ವಾ ಯದುಂ ತಾತ ಶಶಾಪೈನಂ ಸ ಮನ್ಯುಮಾನ್ ।
ಅರಾಜ್ಯಾ ತೇ ಪ್ರಜಾ ಮೂಢ ಭವಿತ್ರೀತಿ ನರಾಧಮ ।। ೧-೩೦-೨೯

ಹೀಗೆ ಹೇಳಿ ಕುಪಿತನಾದ ಅವನು ಯದುವಿಗೆ “ನರಾಧಮ! ಮೂಢ! ನಿನ್ನ ಮಕ್ಕಳು ಸದಾ ರಾಜ್ಯದಿಂದ ವಂಚಿತರಾಗಿರುತ್ತಾರೆ!” ಎಂದು ಶಾಪವನ್ನಿತ್ತನು.

ಸ ತುರ್ವಸುಂ ಚ ದ್ರುಹ್ಯುಂ ಚಾಪ್ಯನುಂ ಚ ಭರತರ್ಷಭ ।
ಏವಮೇವಾಬ್ರವೀದ್ರಾಜಾ ಪ್ರತ್ಯಾಖ್ಯಾತಶ್ಚ ತೈರಪಿ ।। ೧-೩೦-೩೦
ಶಶಾಪ ತಾನತಿಕ್ರುದ್ಧೋ ಯಯಾತಿರಪರಾಜಿತಃ ।
ಯಥಾ ತೇ ಕಥಿತಂ ಪೂರ್ವಂ ಮಯಾ ರಾಜರ್ಷಿಸತ್ತಮ ।। ೧-೩೦-೩೧

ಭರತರ್ಷಭ! ನಂತರ ರಾಜನು ತುರ್ವಸು, ದ್ರುಹ್ಯು ಮತು ಅನುವಿನಲ್ಲಿ ಕೂಡ ಇದನ್ನೇ ಕೇಳಿದ್ದನು ಮತ್ತು ಅವನಿಗೆ ಅವರು ಯದುವಿನ ಉತ್ತರವನ್ನೇ ಕೊಟ್ಟಿದ್ದರು. ಆಗ ಅತಿಕ್ರುದ್ಧನಾದ ಅಪರಾಜಿತ ಯಯಾತಿಯು ಶಪಿಸಿದ್ದನು. ರಾಜರ್ಷಿಸತ್ತಮ! ಇದರ ಕುರಿತು ನಾನು ನಿನಗೆ ಈ ಹಿಂದೆಯೇ ಹೇಳಿದ್ದೇನೆ.

ಏವಂ ಶಪ್ತ್ವಾ ಸುತಾನ್ಸರ್ವಾಂಶ್ಚತುರಃ ಪೂರುಪೂರ್ವಜಾನ್ ।
ತದೇವ ವಚನಂ ರಾಜಾ ಪೂರುಮಪ್ಯಾಹ ಭಾರತ ।। ೧-೩೦-೩೨

ಭಾರತ! ಹೀಗೆ ಪೂರುವಿನ ನಾಲ್ವರು ಪೂರ್ವಜ ಸುತರನ್ನು ಶಪಿಸಿ ರಾಜಾ ಯಯಾತಿಯು ಪೂರುವಿಗೂ ಅದೇ ಮಾತನ್ನು ಹೇಳಿದನು:

ತರುಣಸ್ತವ ರೂಪೇಣ ಚರೇಯಂ ಪೃಥಿವೀಮಿಮಾಮ್ ।
ಜರಾಂ ತ್ವಯಿ ಸಮಾಧಾಯ ತ್ವಂ ಪೂರೋ ಯದಿ ಮನ್ಯಸೇ ।। ೧-೩೦-೩೩

“ಪೂರು! ನಿನ್ನ ಒಪ್ಪಿಗೆಯಿದ್ದರೆ ನನ್ನ ಮುಪ್ಪನ್ನು ನಿನ್ನಲ್ಲಿ ಇರಿಸಿ ನಿನ್ನ ತರುಣ ರೂಪದಿಂದ ಈ ಪೃಥ್ವಿಯನ್ನು ಸಂಚರಿಸಬಯಸುತ್ತೇನೆ.”

ಸ ಜರಾಂ ಪ್ರತಿಜಗ್ರಾಹ ಪಿತುಃ ಪೂರುಃ ಪ್ರತಾಪವಾನ್ ।
ಯಯಾತಿರಪಿ ರೂಪೇಣ ಪೂರೋಃ ಪರ್ಯಚರನ್ಮಹೀಮ್ ।। ೧-೩೦-೩೪

ಪ್ರತಾಪವಾನ್ ಪೂರುವು ತಂದೆಯ ಮುಪ್ಪನ್ನು ಸ್ವೀಕರಿಸಿದನು. ಯಯಾತಿಯಾದರೋ ಪೂರುವಿನ ರೂಪದಿಂದ ಮಹಿಯಲ್ಲಿ ಸಂಚರಿಸಿದನು.

ಸ ಮಾರ್ಗಮಾಣಃ ಕಾಮಾನಾಮಂತಂ ಭರತಸತ್ತಮ ।
ವಿಶ್ವಾಚ್ಯಾ ಸಹಿತೋ ರೇಮೇ ವನೇ ಚೈತ್ರರಥೇ ಪ್ರಭುಃ ।। ೧-೩೦-೩೫

ಭರತಸತ್ತಮ! ಕಾಮಗಳ ಅಂತ್ಯವನ್ನು ಹುಡುಕುತ್ತಿದ್ದ ಆ ಪ್ರಭು ಯಯಾತಿಯು ಅಪ್ಸರೆ ವಿಶ್ವಾಚಿಯ ಸಹಿತ ಚೈತ್ರರಥವನದಲ್ಲಿ ರಮಿಸಿದನು.

ಯದಾವಿತೃಷ್ಣಃ ಕಾಮಾನಾಂ ಭೋಗೇಷು ಸ ನರಾಧಿಪಃ ।
ತದಾ ಪೂರೋಃ ಸಕಾಶಾದ್ವೈ ಸ್ವಾಂ ಜರಾಂ ಪ್ರತ್ಯಪದ್ಯತ ।। ೧-೩೦-೩೬

ಇಷ್ಟರಲ್ಲಿಯೂ ಕಾಮೋಪಭೋಗಗಳಿಂದ ಅವನಿಗೆ ತೃಪ್ತಿಯಾಗದೇ ಇದ್ದಾಗ ಆ ನರಾಧಿಪನು ಪೂರುವಿನ ಬಳಿಬಂದು ಅವನಿಂದ ತನ್ನ ವೃದ್ಧಾಪ್ಯವನ್ನು ಹಿಂತೆಗೆದುಕೊಂಡನು.

ತತ್ರ ಗಾಥಾ ಮಹಾರಾಜ ಶೃಣು ಗೀತಾ ಯಯಾತಿನಾ ।
ಯಾಭಿಃ ಪ್ರತ್ಯಾಹರೇತ್ಕಾಮಾನ್ಸರ್ವತೋಽಂಗಾನಿ ಕೂರ್ಮವತ್ ।। ೧-೩೦-೩೭

ಮಹಾರಾಜ! ಆಗ ಯಯಾತಿಯು ಉದ್ಗಾರದಿಂದ ಹಾಡಿದ ಗೀತೆಯನ್ನು ಕೇಳು. ಇದನ್ನು ಕೇಳಿದವರು ಆಮೆಯು ತನ್ನ ಅಂಗಗಳನ್ನು ಹಿಂದೆ ಸೆಳೆದುಕೊಳ್ಳುವಂತೆ ಸರ್ವಕಾಮನೆಗಳಿಂದ ಇಂದ್ರಿಯಗಳನ್ನು ಒಳಸೆಳೆದುಕೊಳ್ಳಬಹುದು.

ನ ಜಾತು ಕಾಮಃ ಕಾಮಾನಾಮುಪಭೋಗೇನ ಶಾಮ್ಯತಿ ।
ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ ।। ೧-೩೦-೩೮

“ಕಾಮನೆಗಳು ಅವುಗಳನ್ನು ಉಪಭೋಗಿಸುವುದರಿಂದ ಎಂದೂ ಶಾಂತಗೊಳ್ಳುವುದಿಲ್ಲ. ಹವಿಸ್ಸನ್ನು ಹಾಕುವುದರಿಂದ ಅಗ್ನಿಯು ಹೇಗೋ ಹಾಗೆ ಅದು ವರ್ಧಿಸುತ್ತಲೇ ಇರುತ್ತವೆ.

ಯತ್ಪೃಥಿವ್ಯಾಂ ವ್ರೀಹಿಯವಂ ಹಿರಣ್ಯಂ ಪಶವಃ ಸ್ತ್ರಿಯಃ ।
ನಾಲಮೇಕಸ್ಯ ತತ್ಸರ್ವಮಿತಿ ಪಶ್ಯನ್ನ ಮುಹ್ಯತಿ ।। ೧-೩೦-೩೯

ಈ ಪೃಥ್ವಿಯಲ್ಲಿರುವ ಎಲ್ಲ ಧಾನ್ಯ, ಹಿರಣ್ಯ, ಪಶುಗಳು ಮತ್ತು ಸ್ತ್ರೀಯರಿಂದಲೂ ಒಬ್ಬ ಪುರುಷನ ಕಾಮನೆಗಳೆಲ್ಲವನ್ನೂ ಪೂರೈಸಲು ಸಾಧ್ಯವಿಲ್ಲ. ಇದನ್ನು ಕಂಡುಕೊಂಡವನು ಮೋಹಿತನಾಗುವುದಿಲ್ಲ.

ಯದಾ ಭಾವಂ ನ ಕುರುತೇ ಸರ್ವಭೂತೇಷು ಪಾಪಕಮ್ ।
ಕರ್ಮಣಾ ಮನಸಾ ವಾಚಾ ಬ್ರಹ್ಮ ಸಂಪದ್ಯತೇ ತದಾ ।। ೧-೩೦-೪೦

ಯಾವಾಗ ಕರ್ಮ-ಮನಸ್ಸು-ಮಾತುಗಳ ಮೂಲಕ ಸರ್ವಭೂತಗಳಲ್ಲಿಯೂ ಪಾಪಭಾವವನ್ನು ತೋರಿಸುವುದಿಲ್ಲವೋ ಆಗ ಮನುಷ್ಯನಿಗೆ ಬ್ರಹ್ಮಭಾವವು ದೊರೆಯುತ್ತದೆ.

ಯದಾನ್ಯೇಭ್ಯೋ ನ ಬಿಭ್ಯೇತ ಯದಾ ಚಾಸ್ಮಾನ್ನ ಬಿಭ್ಯತಿ ।
ಯದಾ ನೇಚ್ಛತಿ ನ ದ್ವೇಷ್ಟಿ ಬ್ರಹ್ಮ ಸಂಪದ್ಯತೇ ತದಾ ।। ೧-೩೦-೪೧

ಯಾವಾಗ ಇತರರಿಗೆ ಭಯಪಡುವುದಿಲ್ಲವೋ ಮತ್ತು ಇತರರನ್ನು ಭಯಪಡಿಸುವುದಿಲ್ಲವೋ, ಯಾವಾಗ ಏನನ್ನೂ ಬಯಸುವುದಿಲ್ಲವೋ ಮತ್ತು ದ್ವೇಷಿಸುವುದಿಲ್ಲವೋ ಆಗ ಬ್ರಹ್ಮಭಾವವುಂಟಾಗುತ್ತದೆ.

ಯಾ ದುಸ್ತ್ಯಜಾ ದುರ್ಮತಿಭಿರ್ಯಾ ನ ಜೀರ್ಯತಿ ಜೀರ್ಯತಃ ।
ಯೋಽಸೌ ಪ್ರಾಣಾಂತಿಕೋ ರೋಗಸ್ತಾಂ ತೃಷ್ಣಾಂ ತ್ಯಜತಃ ಸುಖಮ್ ।। ೧-೩೦-೪೨

ದುರ್ಮತಿಗಳಿಗೆ ತ್ಯಜಿಸಲು ಯಾವುದು ಕಷ್ಟಕರವೋ, ಶರೀರವು ಜೀರ್ಣವಾದರೂ ಯಾವುದು ಜೀರ್ಣವಾಗುವುದಿಲ್ಲವೋ, ಯಾವುದು ಪ್ರಾಣಾಂತಿಕ ರೋಗದಂತಿರುವುದೋ ಆ ತೃಷ್ಣೆಯನ್ನು ತೊರೆದವನೇ ಸುಖವನ್ನು ಹೊಂದುವನು.

ಜೀರ್ಯಂತಿ ಜೀರ್ಯತಃ ಕೇಶಾ ದಂತಾ ಜೀರ್ಯಂತಿ ಜೀರ್ಯತಃ ।
ಜೀವಿತಾಶಾ ಧನಾಶಾ ಚ ಜೀರ್ಯತೋಽಪಿ ನ ಜೀರ್ಯತಿ ।। ೧-೩೦-೪೩

ಮುಪ್ಪಾದಂತೆ ಕೂದಲು ಹಣ್ಣಾಗುತ್ತದೆ. ಹಲ್ಲುಗಳು ಬೀಳುತ್ತವೆ. ಆದರೆ ಜೀವಿತ ಆಶೆ ಮತ್ತು ಧನದ ಆಶೆಗಳು ಮುಪ್ಪಾದರೂ ಮುದಿಯಾಗುವುದಿಲ್ಲ.

ಯಚ್ಚ ಕಾಮಸುಖಂ ಲೋಕೇ ಯಚ್ಚ ದಿವ್ಯಂ ಮಹತ್ಸುಖಮ್ ।
ತೃಷ್ಣಾಕ್ಷಯಸುಖಸ್ಯೈತೇ ನಾರ್ಹತಃ ಷೋಡಶೀಂ ಕಲಾಮ್ ।। ೧-೩೦-೪೪

ಲೋಕದಲ್ಲಿ ಯಾವ ಕಾಮಸುಖ ಮತ್ತು ದಿವ್ಯ ಮಹಾಸುಖಗಳಿಯೋ ಅವುಗಳು ತೃಷ್ಣೆಯನ್ನು ಕ್ಷಯಮಾಡಿಕೊಂಡ ಸುಖದ ಹದಿನಾರನೆಯ ಒಂದು ಅಂಶಕ್ಕೂ ಸಮನಾಗಿರುವುದಿಲ್ಲ.”

ಏವಮುಕ್ತ್ವಾ ಸ ರಾಜರ್ಷಿಃ ಸದಾರಃ ಪ್ರಾವಿಶದ್ವನಮ್ ।
ಕಾಲೇನ ಮಹತಾ ವಾಪಿ ಚಚಾರ ವಿಪುಲಂ ತಪಃ ।। ೧-೩೦-೪೫

ಹೀಗೆ ಹೇಳಿ ಆ ರಾಜರ್ಷಿಯು ಪತ್ನಿಯೊಂದಿಗೆ ವನವನ್ನು ಪ್ರವೇಶಿಸಿದನು. ದೀರ್ಘಕಾಲದವರೆಗೆ ವಿಪುಲ ತಪಸ್ಸನ್ನೂ ನಡೆಸಿದನು.

ಭೃಗುತುಂಗೇ ತಪಸ್ತಪ್ತ್ವಾ ತಪಸೋಽಂತೇ ಮಹಾತಪಾಃ ।
ಅನಶ್ನಂದೇಹಮುತ್ಸೃಜ್ಯ ಸದಾರಃ ಸ್ವರ್ಗಮಾಪ್ತವಾನ್ ।। ೧-೩೦-೪೬

ಭೃಗುತುಂಗದಲ್ಲಿ ತಪಸ್ಸನ್ನು ತಪಿಸಿ ತಪಸ್ಸಿನ ಅಂತ್ಯದಲ್ಲಿ ಆ ಮಹಾತಪಸ್ವಿಯು ನಿರಾಹಾರಿಯಾಗಿದ್ದುಕೊಂಡು ಪತ್ನಿಯೊಡನೆ ದೇಹವನ್ನು ತೊರೆದು ಸ್ವರ್ಗವನ್ನು ಪಡೆದುಕೊಂಡನು.

ತಸ್ಯ ವಂಶೇ ಮಹಾರಾಜ ಪಂಚ ರಾಜರ್ಷಿಸತ್ತಮಾಃ ।
ಯೈರ್ವ್ಯಾಪ್ತಾ ಪೃಥಿವೀ ಸರ್ವಾ ಸೂರ್ಯಸ್ಯೇವ ಗಭಸ್ತಿಭಿಃ ।। ೧-೩೦-೪೭

ಮಹಾರಾಜ! ಅವನ ವಂಶಜರಾದ ಐವರು ರಾಜರ್ಷಿಸತ್ತಮರು ಮತ್ತು ಅವರ ಸಂತಾನವು ಸೂರ್ಯನ ಕಿರಣಗಳಂತೆ ಪೃಥ್ವಿಸರ್ವವನ್ನೂ ವ್ಯಾಪಿಸಿತು.

ಯದೋಸ್ತು ಶೃಣು ರಾಜರ್ಷೇರ್ವಂಶಂ ರಾಜರ್ಷಿಸತ್ಕೃತಮ್ ।
ಯತ್ರ ನಾರಾಯಣೋ ಜಜ್ಞೇ ಹರಿರ್ವೃಷ್ಣಿಕುಲೋದ್ವಹಃ ।। ೧-೩೦-೪೮

ಎಲ್ಲಿ ಹರಿವೃಷ್ಣಿಕುಲೋದ್ವಹ ನಾರಾಯಣನು ಜನಿಸಿದನೋ ಆ ರಾಜರ್ಷಿಸತ್ಕೃತ ರಾಜರ್ಷಿ ಯದುವಿನ ವಂಶವನ್ನು ಕೇಳು.

ಧನ್ಯಃ ಪ್ರಜಾವಾನಾಯುಷ್ಮಾನ್ಕೀರ್ತಿಮಾಂಶ್ಚ ಭವೇನ್ನರಃ ।
ಯಯಾತೇಶ್ಚರಿತಂ ಪುಣ್ಯಂ ಪಠಂಶೃಣ್ವನ್ನರಾಧಿಪ ।। ೧-೩೦-೪೯

ನರಾಧಿಪ! ಯಯಾತಿಯ ಪುಣ್ಯಚರಿತವನ್ನು ಹೇಳುವ ಮತ್ತು ಕೇಳುವ ನರರು ಧನ್ಯರೂ ಸಂತಾನವುಳ್ಳವರೂ, ಆಯುಷ್ಮಾನರೂ ಮತ್ತು ಕೀರ್ತಿಮಾನರೂ ಆಗುತ್ತಾರೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಯಯಾತಿಚರಿತೇ ತ್ರಿಂಶೋಽಧ್ಯಾಯಃ