027: ಅಮಾವಸುವಂಶಕೀರ್ತನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 27

ಸಾರ

ವೈಶಂಪಾಯನ ಉವಾಚ
ಐಲಪುತ್ರಾ ಬಭೂವುಸ್ತೇ ಸರ್ವೇ ದೇವಸುತೋಪಮಾಃ ।
ದಿವಿ ಜಾತಾ ಮಹಾತ್ಮಾನ ಆಯುರ್ಧೀಮಾನಮಾವಸುಃ ।। ೧-೨೭-೧
ವಿಶ್ವಾಯುಶ್ಚೈವ ಧರ್ಮಾತ್ಮಾ ಶ್ರುತಾಯುಶ್ಚ ತಥಾಪರಃ ।
ಧೃಢಾಯುಶ್ಚ ವನಾಯುಶ್ಚ ಶತಾಯುಶ್ಚೋರ್ವಶೀಸುತಾಃ ।
ಅಮಾವಸೋಶ್ಚ ದಾಯಾದೋ ಭೀಮೋ ರಾಜಾಥ ನಗ್ನಜಿತ್ ।। ೧-೨೭-೨

ವೈಶಂಪಾಯನನು ಹೇಳಿದನು: “ಐಲ ಪುರೂರವನ ಪುತ್ರರೆಲ್ಲರೂ ದೇವಸುತರಂತಿದ್ದರು. ಆ ಮಹಾತ್ಮರು ಸ್ವರ್ಗದಲ್ಲಿ ಹುಟ್ಟಿದ ಉರ್ವಶೀಸುತರಾಗಿದ್ದರು. ಅವರ ಹೆಸರುಗಳು ಇಂತಿವೆ: ಆಯು, ಧೀಮಾನ್ ಅಮಾವಸು, ವಿಶ್ವಾಯು, ಧರ್ಮಾತ್ಮಾ ಶ್ರುತಾಯು, ಅನಂತರ ಧೃಢಾಯು, ವನಾಯು, ಮತ್ತು ಶತಾಯು. ಅಮಾವಸುವಿಗೆ ರಾಜಾ ಭೀಮ ಮತ್ತು ನಗ್ನಜಿತ್ ಇವರು ಪುತ್ರರಾದರು.

ಶ್ರೀಮಾನ್ಭೀಮಸ್ಯ ದಾಯಾದೋ ರಾಜಾಸೀತ್ಕಾಂಚನಪ್ರಭಃ ।
ವಿದ್ವಾಂಸ್ತು ಕಾಂಚನಸ್ಯಾಪಿ ಸುಹೋತ್ರೋಽಭೂನ್ಮಹಾಬಲಃ ।। ೧-೨೭-೩

ಭೀಮನ ಮಗನು ಶ್ರೀಮಾನ್ ರಾಜಾ ಕಾಂಚನಪ್ರಭನು. ಕಾಂಚನಪ್ರಭನ ಮಗನು ಮಹಾಬಲ ವಿದ್ವಾನ್ ಸುಹೋತ್ರ.

ಸೌಹೋತ್ರಿರಭವಜ್ಜಹ್ನುಃ ಕೇಶಿನ್ಯಾ ಗರ್ಭಸಂಭವಃ ।
ಆಜಹ್ರೇ ಯೋ ಮಹತ್ಸತ್ರಂ ಸರ್ವಮೇಧಮಹಾಮಖಮ್ ।। ೧-೨೭-೪

ಸುಹೋತ್ರನಿಗೆ ಕೇಶಿನಿಯ ಗರ್ಭದಲ್ಲಿ ಜಹ್ನುವು ಹುಟ್ಟಿದನು. ಅವನು ಸರ್ವಮೇಧವೆನ್ನುವ ಮಹಾಮಖ ಮಹಾ ಸತ್ರವನ್ನು ನೆರವೇರಿಸಿದನು.

ಪತಿಲೋಭೇನ ಯಂ ಗಂಗಾ ಪತಿತ್ವೇಽಭಿಸಸಾರ ಹ ।
ನೇಚ್ಛತಃ ಪ್ಲಾವಯಾಮಾಸ ತಸ್ಯ ಗಂಗಾ ಚ ತತ್ಸದಃ ।

ಅವನನ್ನು ಪತಿಯನ್ನಾಗಿ ಪಡೆಯಲು ಬಯಸಿ ಗಂಗೆಯು ಪತಿತ್ವದಿಂದ ಅವನ ಬಳಿಸಾರಿದ್ದಳು. ಅವನು ಅವಳನ್ನು ಬಯಸದೇ ಇದ್ದಾಗ ಗಂಗೆಯು ಅವನ ಸಭೆಯನ್ನೇ ನೀರಿನಿಂದ ತುಂಬಿಸಿಬಿಟ್ಟಿದ್ದಳು.

ಸ ತಯಾ ಪ್ಲಾವಿತಂ ದೃಷ್ಟ್ವಾ ಯಜ್ಞವಾಟಂ ಸಮಂತತಃ ।। ೧-೨೭-೫
ಸೌಹಿತ್ರಿರಬ್ರವೀದ್ಗಂಗಾಂ ಕ್ರುದ್ಧೋ ಭರತಸತ್ತಮ ।। ೧-೨೭-೬

ಭರತಸತ್ತಮ! ಯಜ್ಞವಾಟಿಯನ್ನು ಎಲ್ಲಕಡೆಯಿಂದಲೂ ಮುಳುಗಿಸಿದುದನ್ನು ನೋಡಿ ಸೌಹಿತ್ರಿ ಜಹ್ನುವು ಕ್ರುದ್ಧನಾಗಿ ಗಂಗೆಗೆ ಹೇಳಿದನು:

ಏಷ ತೇ ವಿಫಲಂ ಯತ್ನಂ ಪಿಬನ್ನಂಭಃ ಕರೋಮ್ಯಹಮ್ ।
ಅಸ್ಯ ಗಂಗೇಽವಲೇಪಸ್ಯ ಸದ್ಯಃ ಫ್ಲಮವಾಪ್ನುಹಿ ।। ೧-೨೭-೭

“ಗಂಗೇ! ನಿನ್ನ ನೀರನ್ನು ಕುಡಿದು ನಾನು ನಿನ್ನ ಈ ಯತ್ನವನ್ನು ವಿಫಲಗೊಳಿಸುತ್ತೇನೆ. ಶೀಘ್ರದಲ್ಲಿಯೇ ನೀನು ನಿನ್ನ ಗರ್ವದ ಫಲವನ್ನು ಅನುಭವಿಸುತ್ತೀಯೆ!”

ರಾಜರ್ಷಿಣಾ ತತಃ ಪೀತಾಂ ಗಂಗಾಂ ದೃಷ್ಟ್ವಾ ಮಹರ್ಷಯಃ ।
ಉಪನಿನ್ಯುರ್ಮಹಾಭಾಗಾಂ ದುಹಿತತ್ವೇನ ಜಾಹ್ನವೀಮ್ ।। ೧-೨೭-೮

ಆಗ ರಾಜರ್ಷಿಯು ಗಂಗೆಯನ್ನು ಕುಡಿದುದನ್ನು ನೋಡಿ ಮಹರ್ಷಿಗಳು ಮಹಾಭಾಗೆ ಗಂಗೆಯನ್ನು ಜಹ್ನುವಿನ ಮಗಳಾಗಿ ಜಾಹ್ಮವೀ ಎಂಬ ಹೆಸರಿನಿಂದ ಕರೆದರು.

ಯುವನಾಶ್ವಸ್ಯ ಪುತ್ರೀಂ ತು ಕಾವೇರೀಂ ಜಹ್ನುರಾವಹತ್ ।
ಯುವನಾಶ್ವಸ್ಯ ಶಾಪೇನ ಗಂಗಾಽರ್ಧೇನ ವಿನಿರ್ಮಮೇ ।। ೧-೨೭-೯
ಕಾವೇರೀಂ ಸರಿತಾಂ ಶ್ರೇಷ್ಠಾಂ ಜಹ್ನೋರ್ಭಾರ್ಯಾಮನಿಂದಿತಾಮ್ ।

ಜಹ್ನುವು ಯುವನಾಶ್ವನ ಪುತ್ರಿ ಕಾವೇರಿಯನ್ನು ವಿವಾಹವಾಗಿದ್ದನು. ಯುವನಾಶ್ವನ ಶಾಪದಿಂದ ಗಂಗೆಯೇ ತನ್ನ ಅರ್ಧದಿಂದ ಕಾವೇರಿಯನ್ನು ಪ್ರಕಟಪಡಿಸಿದ್ದಳು. ಆ ನದಿಗಳಲ್ಲಿ ಶ್ರೇಷ್ಠೆ ಅನಿಂದಿತೆ ಕಾವೇರಿಯು ಜಹ್ನುವಿನ ಭಾರ್ಯೆಯಾಗಿದ್ದಳು.

ಜಹ್ನಸ್ತು ದಯಿತಂ ಪುತ್ರಂ ಸುನಹಂ ನಾಮ ಧಾರ್ಮಿಕಮ್ ।
ಕಾವೇರ್ಯಾಂ ಜನಯಾಮಾಸ ಅಜಕಸ್ತಸ್ಯ ಚಾತ್ಮಜಃ ।। ೧-೨೭-೧೦

ಜಹ್ನುವು ಕಾವೇರಿಯಲ್ಲಿ ಸುನಹ ಎಂಬ ಹೆಸರಿನ ಧಾರ್ಮಿಕ ಪುತ್ರನನ್ನು ಹುಟ್ಟಿಸಿದನು. ಸುನಹನ ಪುತ್ರನು ಅಜಕ.

ಅಜಕಸ್ಯ ತು ದಾಯಾದೋ ಬಲಾಕಾಶ್ವೋ ಮಹೀಪತಿಃ ।
ಬಭೂವ ಮೃಗಯಾಶೀಲಃ ಕುಶಸ್ತಸ್ಯಾತ್ಮಜೋಽಭವತ್ ।। ೧-೨೭-೧೧

ಅಜಕನ ಮಗನು ಮಹೀಪತಿ ಬಲಾಕಾಶ್ವನು. ಅವನು ಬೇಟೆಯಲ್ಲಿ ಆಸಕ್ತನಾಗಿದ್ದನು. ಕುಶನು ಅವನ ಮಗನಾದನು.

ಕುಶಪುತ್ರಾ ಬಭೂವುರ್ಹಿ ಚತ್ವಾರೋ ದೇವವರ್ಚಸಃ ।
ಕುಶಿಕಃ ಕುಶನಾಭಶ್ಚ ಕುಶಾಮ್ಬೋ ಮೂರ್ತಿಮಾಂಸ್ತಥಾ ।। ೧-೨೭-೧೨

ಕುಶನಿಗೆ ದೇವವರ್ಚಸರಾದ ನಾಲ್ವರು ಪುತ್ರರಾದರು: ಕುಶಿಕ, ಕುಶನಾಭ, ಕುಶಾಂಬ, ಮತ್ತು ಮೂರ್ತಿಮಾನ್.

ಪಹ್ಲವೈಃ ಸಹ ಸಂವೃದ್ಧಿಂ ರಾಜಾ ವನಚರೈಸ್ತದಾ ।
ಕುಶಿಕಸ್ತು ತಪಸ್ತೇಪೇ ಪುತ್ರಮಿಂದ್ರಸಮಪ್ರಭಮ್ ।
ಲಭೇಯಮಿತಿ ತಂ ಶಕ್ರಸ್ತ್ರಾಸಾದಭ್ಯೇತ್ಯ ಜಜ್ಞಿವಾನ್ ।। ೧-೨೭-೧೩

ರಾಜಾ ಕುಶಿಕನು ವನಚರರಾದ ಪಹ್ಲವರೊಂದಿಗೆ ಬೆಳೆದನು. ಅವನು ಇಂದ್ರನ ಸಮಪ್ರಭನಾದ ಮಗನನ್ನು ಪಡೆಯಲು ತಪಸ್ಸನ್ನು ತಪಿಸಿದನು. ಇಂದ್ರನು ಅವನ ಭಯದಿಂದ ಇಲ್ಲಿ ಅವನ ಪುತ್ರನಾಗಿ ಹುಟ್ಟಿಕೊಂಡನು.

ಪೂರ್ಣೇ ವರ್ಷಸಹಸ್ರೇ ವೈ ತಂ ತು ಶಕ್ರೋ ಹ್ಯಪಶ್ಯತ ಅತ್ಯುಗ್ರತಪಸಂ ದೃಷ್ಟ್ವಾ ಸಹಸ್ರಾಕ್ಷಃ ಪುರಂದರಃ ।। ೧-೨೭-೧೪
ಸಮರ್ಥಃ ಪುತ್ರಜನನೇ ಸ್ವಮೇವಾಂಶಮವಾಸಯತ್ ।
ಪುತ್ರತ್ವೇ ಕಲ್ಪಯಾಮಾಸ ಸ ದೇವೇಂದ್ರಃ ಸುರೋತ್ತಮಃ ।। ೧-೨೭-೧೫

ಒಂದು ಸಹಸ್ರವರ್ಷಗಳು ಪೂರ್ಣವಾಗಲು ಕುಶಿಕನ ಉಗ್ರ ತಪಸ್ಸನ್ನು ನೋಡಿ ಸಹಸ್ರಾಕ್ಷ ಪುರಂದರನು ಸಮರ್ಥ ಪುತ್ರನಾಗಲೆಂದು ಅವನಲ್ಲಿ ತನ್ನ ಅಂಶವನ್ನು ಸ್ಥಾಪಿಸಿದನು. ಹೀಗೆ ಸುರೋತ್ತಮ ದೇವೇಂದ್ರನು ಅವನ ಪುತ್ರತ್ವವನ್ನು ಕಲ್ಪಿಸಿಕೊಂಡನು.

ಸ ಗಾಧಿರಭವದ್ರಾಜಾ ಮಘವಾನ್ಕೌಶಿಕಃ ಸ್ವಯಮ್ ।
ಪೌರುಕುತ್ಸ್ಯಭವದ್ಭಾರ್ಯಾ ಗಾಧಿಸ್ತಸ್ಯಾಮಜಾಯತ ।। ೧-೨೭-೧೬

ಹೀಗೆ ಮಘವಾನ್ ಇಂದ್ರನು ಸ್ವಯಂ ಕುಶಿಕನ ಮಗ ಗಾಧಿರಾಜನಾಗಿ ಹುಟ್ಟಿದನು. ಕುಶಿಕನ ಪತ್ನಿ ಪುರುಕುತ್ಸನ ಮಗಳಲ್ಲಿ ಗಾಧಿಯು ಹುಟ್ಟಿದನು.

ಗಾಧೇಃ ಕನ್ಯಾ ಮಹಾಭಾಗಾ ನಾಮ್ನಾ ಸತ್ಯವತೀ ಶುಭಾ ।
ತಾಂ ಗಾಧಿರ್ಭೃಗುಪುತ್ರಾಯ ಋಚೀಕಾಯ ದದೌ ಪ್ರಭುಃ ।। ೧-೨೭-೧೭

ಗಾಧಿಗೆ ಸತ್ಯವತೀ ಎಂಬ ಹೆಸರಿನ ಮಹಾಭಾಗೆ ಶುಭ ಕನ್ಯೆಯಿದ್ದಳು. ಅವಳನ್ನು ಪ್ರಭು ಗಾಧಿಯು ಭೃಗುಪುತ್ರ ಋಚೀಕನಿಗೆ ಕೊಟ್ಟನು.

ತಸ್ಯಾಃ ಪ್ರೀತೋಽಭವದ್ಭರ್ತಾ ಭಾರ್ಗವೋ ಭೃಗುನನದನಃ ।
ಪುತ್ರಾರ್ಥಂ ಕಾರಯಾಮಾಸ ಚರುಂ ಗಾಧೇಸ್ತಥೈವ ಚ ।। ೧-೨೭-೧೮

ಅವಳ ಮೇಲೆ ಪ್ರೀತನಾದ ಅವಳ ಪತಿ ಭೃಗುನಂದನ ಭಾರ್ಗವನು ಅವಳಿಗೆ ಮತ್ತು ಗಾಧಿಗೆ ಪುತ್ರರಾಗಲೆಂದು ಚರುವನ್ನು ಸಿದ್ಧಪಡಿಸಿದನು.

ಉವಾಚಾಹೂಯ ತಾಂ ಭರ್ತಾ ಋಚೀಕೋ ಭಾರ್ಗವಸ್ತದಾ ।
ಉಪಯೋಜ್ಯಶ್ಚರುರಯಂ ತ್ವಯಾ ಮಾತ್ರಾ ತ್ವಯಂ ತವ ।। ೧-೨೭-೧೯

ಪತಿ ಭಾರ್ಗವ ಋಚೀಕನು ಅವಳನ್ನು ಕರೆದು ಹೇಳಿದನು: “ಈ ಚರುವನ್ನು ನೀನು ಉಪಯೋಗಿಸು ಮತ್ತು ನಿನ್ನ ತಾಯಿಗೂ ಉಪಯೋಗಿಸಲು ಹೇಳು.

ತಸ್ಯಾಂ ಜನಿಷ್ಯತೇ ಪುತ್ರೋ ದೀಪ್ತಿಮಾನ್ಕ್ಷತ್ರಿಯರ್ಷಭಃ ।
ಅಜೇಯಃ ಕ್ಷತ್ರಿಯೈರ್ಲೋಕೇ ಕ್ಷತ್ರಿಯರ್ಷಭಸೂದನಃ ।। ೧-೨೭-೨೦

ಅವಳಲ್ಲಿ ದೀಪ್ತಿಮಾನ್ ಕ್ಷತ್ರಿಯರ್ಷಭ ಪುತ್ರನು ಜನಿಸುತ್ತಾನೆ. ಆ ಕ್ಷತ್ರಿಯರ್ಷಭಸೂದನನು ಲೋಕದ ಕ್ಷತ್ರಿಯರಿಗೆ ಅಜೇಯನಾಗುತ್ತಾನೆ.

ತವಾಪಿ ಪುತ್ರಂ ಕಲ್ಯಾಣಿ ಧೃತಿಮಂತಂ ತಪೋನಿಧಿಮ್ ।
ಶಮಾತ್ಮಕಂ ದ್ವಿಜಶ್ರೇಷ್ಠಂ ಚರುರೇಷ ವಿಧಾಸ್ಯತಿ ।। ೧-೨೭-೨೧

ಕಲ್ಯಾಣೀ! ನೀನಾದರೋ ಧೃತಿಮಂತ ತಪೋನಿಧಿಯನ್ನು ಪುತ್ರನನ್ನಾಗಿ ಪಡೆಯುತ್ತೀಯೆ. ಈ ಚರುವು ನಿನಗೆ ಶಮಾತ್ಮಕ ದ್ವಿಜಶ್ರೇಷ್ಠನನ್ನು ನೀಡುತ್ತದೆ.”

ಏವಮುಕ್ತ್ವಾ ತು ತಾಂ ಭಾರ್ಯಾಮೃಚೀಕೋ ಭೃಗುನಂದನಃ ।
ತಪಸ್ಯಾಭಿರತೋ ನಿತ್ಯಮರಣ್ಯಂ ಪ್ರವಿವೇಶ ಹ ।। ೧-೨೭-೨೨

ತನ್ನ ಪತ್ನಿಗೆ ಹೀಗೆ ಹೇಳಿ ಭೃಗುನಂದನ ಋಚೀಕನು ನಿತ್ಯವೂ ತಪಸ್ಸಿನಲ್ಲಿಯೇ ತೊಡಗಿಸಿಕೊಳ್ಳಲು ಅರಣ್ಯವನ್ನು ಪ್ರವೇಶಿಸಿದನು.

ಗಾಧಿಃ ಸದಾರಸ್ತು ತದಾ ಋಚೀಕಾವಾಸಮಭ್ಯಗಾತ್ ।
ತೀರ್ಥಯಾತ್ರಾಪ್ರಸಂಗೇನ ಸುತಾಂ ದ್ರಷ್ಟುಂ ಜನೇಶ್ವರಃ ।। ೧-೨೭-೨೩

ಅದೇ ಸಮಯದಲ್ಲಿ ಜನೇಶ್ವರ ಗಾಧಿಯಾದರೋ ತನ್ನ ಪತ್ನಿಯೊಡನೆ ಮಗಳನ್ನು ನೋಡಲು ತೀರ್ಥಯಾತ್ರಾಪ್ರಸಂಗದಿಂದ ಋಚೀಕನ ಆಶ್ರಮಕ್ಕೆ ಆಗಮಿಸಿದನು.

ಚರುದ್ವಯಂ ಗೃಹೀತ್ವಾ ತದೃಷೇಃ ಸತ್ಯವತೀ ತದಾ ।
ಚರುಮಾದಾಯ ಯತ್ನೇನ ಸಾ ತು ಮಾತ್ರೇ ನ್ಯವೇದಯತ್ ।। ೧-೨೭-೨೪

ಆಗ ಸತ್ಯವತಿಯು ಋಷಿಯು ಕೊಟ್ಟಿದ್ದ ಆ ಎರಡು ಚರುಗಳ ಪಾತ್ರೆಯನ್ನು ತಂದು ತಾಯಿಯ ಮುಂದೆ ಇರಿಸಿದಳು.

ಮಾತಾ ವ್ಯತ್ಯಸ್ಯ ದೈವೇನ ದುಹಿತ್ರೇ ಸ್ವಂ ಚರುಂ ದದೌ ।
ತಸ್ಯಾಶ್ಚರುಮಥಾಜ್ಞಾನಾದಾತ್ಮಸಂಸ್ಥಂ ಚಕಾರ ಹ ।। ೧-೨೭-೨೫

ಮಾತೆಯು ದೈವವಶಾತ್ ತನ್ನ ಚರುವನ್ನು ಮಗಳಿಗೆ ಕೊಟ್ಟಳು ಮತ್ತು ಅವಳ ಚರುವನ್ನು ಅಜ್ಞಾನದಿಂದ ತಾನು ತಿಂದಳು.

ಅಥ ಸತ್ಯವತೀ ಗರ್ಭಂ ಕ್ಷತ್ರಿಯಾಂತಕರಂ ತದಾ ಧಾರಯಾಮಾಸ ದೀಪ್ತೇನ ವಪುಷಾ ಘೋರದರ್ಶನಮ್ ।। ೧-೨೭-೨೬

ಆಗ ಸತ್ಯವತಿಯು ಕ್ಷತ್ರಿಯಾಂತಕ ಗರ್ಭವನ್ನು ಧರಿಸಿ, ಬೆಳಗುತ್ತಿದ್ದ ಮುಖವುಳ್ಳವಳಾಗಿ ಘೋರಳಾಗಿ ಕಾಣುತ್ತಿದ್ದಳು.

ತಾಮೃಚೀಕಸ್ತತೋ ದೃಷ್ಟ್ವಾ ಯೋಗೇನಾಭ್ಯನುಸೃತ್ಯ ಚ ।
ತಾಮಬ್ರವೀದ್ದ್ವಿಜಶ್ರೇಷ್ಠಃ ಸ್ವಾಂ ಭಾರ್ಯಾಂ ವರವರ್ಣಿನೀಮ್ ।। ೧-೨೭-೨೭

ಅವಳನ್ನು ನೋಡಿ ಯೋಗದಿಂದಲೇ ಋಚೀಕನು ಎಲ್ಲವನ್ನೂ ತಿಳಿದುಕೊಂಡನು. ಆ ದ್ವಿಜಶ್ರೇಷ್ಠನು ತನ್ನ ವರವರ್ಣಿನೀ ಭಾರ್ಯೆಗೆ ಹೇಳಿದನು:

ಮಾತ್ರಾಸಿ ವಂಚಿತಾ ಭದ್ರೇ ಚರುವ್ಯತ್ಯಾಸಹೇತುನಾ ।
ಜನಿಷ್ಯತಿ ಹಿ ಪುತ್ರಸ್ತೇ ಕ್ರೂರಕರ್ಮಾತಿದಾರುಣಃ ।। ೧-೨೭-೨೮

“ಭದ್ರೇ! ತಾಯಿಯಿಂದ ನೀನು ವಂಚಿತಳಾದೆ. ಚರುವಿನಲ್ಲಿ ಅದಲುಬದಲು ಮಾಡಿದುದರಿಂದ ನೀನು ಅತಿದಾರುಣ ಕ್ರೂರಕರ್ಮಿ ಪುತ್ರನನ್ನು ಹುಟ್ಟಿಸುತ್ತೀಯೆ.

ಭ್ರಾತಾ ಜನಿಷ್ಯತೇ ಚಾಪಿ ಬ್ರಹ್ಮಭೂತಸ್ತಪೋಧನಃ ।
ವಿಶ್ವಂ ಹಿ ಬ್ರಹ್ಮತಪಸಾ ಮಯಾ ತಸ್ಮಿನ್ಸಮರ್ಪಿತಮ್ ।। ೧-೨೭-೨೯

ನಿನಗೆ ಹುಟ್ಟುವ ತಮ್ಮನು ಬ್ರಹ್ಮಭೂತ ತಪೋಧನನಾಗುತ್ತಾನೆ. ಏಕೆಂದರೆ ನಾನು ಅದರಲ್ಲಿ ಬ್ರಹ್ಮತಪಸ್ಸಿನಿಂದ ವಿಶ್ವವನ್ನೇ ಅರ್ಪಿಸಿದ್ದೆ.”

ಏವಮುಕ್ತಾ ಮಹಾಭಾಗಾ ಭರ್ತ್ರಾ ಸತ್ಯವತೀ ತದಾ ।
ಪ್ರಸಾದಯಾಮಾಸ ಪತಿಂ ಪುತ್ರೋ ಮೇ ನೇದೃಶೋ ಭವೇತ್ ।
ಬ್ರಾಹ್ಮಣಾಪಸದಸ್ತತ್ರ ಇತ್ಯುಕ್ತೋ ಮುನಿರಬ್ರವೀತ್ ।। ೧-೨೭-೩೦

ಪತಿಯು ಹೀಗೆ ಹೇಳಲು ಮಹಾಭಾಗೆ ಸತ್ಯವತಿಯು “ನನ್ನ ಪುತ್ರನು ಹಾಗೆ ಬ್ರಾಹ್ಮಣಾಧಮನು ಆಗದಿರಲಿ!” ಎಂದು ಅವನನ್ನು ಬೇಡಿಕೊಂಡಳು. ಆಗ ಮುನಿಯು ಹೇಳಿದನು:

ನೈಷ ಸಂಕಲ್ಪಿತಃ ಕಾಮೋ ಮಯಾ ಭದ್ರೇ ತಥಾಸ್ತ್ವಿತಿ ।
ಉಗ್ರಕರ್ಮಾ ಭವೇತ್ಪುತ್ರಃ ಪಿತುರ್ಮಾತುಶ್ಚ ಕಾರಣಾತ್ ।
ಪುನಃ ಸತ್ಯವತೀ ವಾಕ್ಯಮೇವಮುಕ್ತಾಬ್ರವೀದಿದಂ ।। ೧-೨೭-೩೧

ಮಾತಾಪಿತೃಗಳ ಕಾರಣದಿಂದಲೇ ಪುತ್ರನು ಉಗ್ರಕರ್ಮಿಯಾಗುತ್ತಾನೆ. ಭದ್ರೇ! ನಾನಾದರೋ ಅದನ್ನು ಬಯಸಿ ಸಂಕಲ್ಪಿಸಿರಲಿಲ್ಲ. ಆದರೆ ಅದು ಹಾಗೆಯೇ ಆಗುತ್ತದೆ.” ಇದನ್ನು ಕೇಳಿದ ಸತ್ಯವತಿಯು ಪುನಃ ಅವನಿಗೆ ಹೇಳಿದಳು:

ಇಚ್ಛನ್ಲೋಕಾನಪಿ ಮುನೇ ಸೃಜೇಥಾಃ ಕಿಂ ಪುನಃ ಸುತಮ್ ।
ಶಮಾತ್ಮಕಮೃಜುಂ ತ್ವಂ ಮೇ ಪುತ್ರಂ ದಾತುಮಿಹಾರ್ಹಸಿ ।। ೧-೨೭-೩೨

“ಮುನೇ! ಇಚ್ಛಿಸಿದರೆ ನೀನು ಲೋಕಗಳನ್ನೂ ಸೃಷ್ಟಿಸಬಲ್ಲೆ. ಇನ್ನು ಮಗನ ಕುರಿತೇನು? ನೀನು ನನಗೆ ಶಮಾತ್ಮಕ ಸರಳ ಪುತ್ರನನ್ನೇ ನೀಡಬೇಕು.

ಕಾಮಮೇವಂವಿಧಃ ಪೌತ್ರೋ ಮಮ ಸ್ಯಾತ್ತವ ಚ ಪ್ರಭೋ ।
ಯದ್ಯನ್ಯಥಾ ನ ಶಕ್ಯಂ ವೈ ಕರ್ತುಮೇತದ್ದ್ವಿಜೋತ್ತಮ ।। ೧-೨೭-೩೩

ಪ್ರಭೋ! ದ್ವಿಜೋತ್ತಮ! ಒಂದುವೇಳೆ ಇದನ್ನು ಅನ್ಯಥಾ ಮಾಡಲು ಶಕ್ಯವಿಲ್ಲವೆಂದಾದರೆ ಈ ತರಹದವನು ನಮ್ಮ ಮೊಮ್ಮಗನಾಗಲಿ!”

ತತಃ ಪ್ರಸಾದಮಕರೋತ್ಸ ತಸ್ಯಾಸ್ತಪಸೋ ಬಲಾತ್ ।
ಭದ್ರೇ ನಾಸ್ತಿ ವಿಶೇಷೋ ಮೇ ಪೌತ್ರೇ ಚ ವರವಣಿನಿ।
ತ್ವಯಾ ಯಥೋಕ್ತಂ ವಚನಂ ತಥಾ ಭದ್ರಂ ಭವಿಷ್ಯತಿ ।। ೧-೨೭-೩೪

ಆಗ ಅವನು ತನ್ನ ತಪೋಬಲದಿಂದ ಅವಳ ಮೇಲೆ ಕೃಪೆದೋರಿ ಹೇಳಿದನು: “ಭದ್ರೇ! ವರವರ್ಣಿನಿ! ನನಗೆ ಪುತ್ರ ಮತ್ತು ಪೌತ್ರರಲ್ಲಿ ವಿಶೇಷ ವ್ಯತ್ಯಾಸವೇನೂ ಕಾಣುವುದಿಲ್ಲ. ಆದರೂ ನೀನು ಏನು ಹೇಳಿದೆಯೋ ಹಾಗೆಯೇ ಆಗುತ್ತದೆ.”

ತತಃ ಸತ್ಯವತೀ ಪುತ್ರಂ ಜನಯಾಮಾಸ ಭಾರ್ಗವಮ್ ।
ತಪಸ್ಯಾಭಿರತಂ ದಾಂತಂ ಜಮದಗ್ನಿಂ ಶಮಾತ್ಮಕಮ್ ।। ೧-೨೭-೩೫

ಅನಂತರ ಸತ್ಯವತಿಯು ಜಿತೇಂದ್ರಿಯನೂ, ಮನೋನಿಗ್ರಹನೂ, ತಪಸ್ಸಿನಲ್ಲಿಯೇ ನಿರತನಾಗಿರುವವನೂ ಆದ ಭಾರ್ಗವ ಜಮದಗ್ನಿಗೆ ಜನ್ಮವಿತ್ತಳು.

ಭೃಗೋಶ್ಚರುವಿಪರ್ಯಾಸೇ ರೌದ್ರವೈಷ್ಣವಯೋಃ ಪುರಾ ।
ಯಜನಾದ್ವೈಷ್ಣವೇಽಥಾಂಶೇ ಜಮದಗ್ನಿರಜಾಯತ ।। ೧-೨೭-೩೬

ಹಿಂದೆ ಭೃಗುಗಳ ಚರುವಿನಲ್ಲಿ ರುದ್ರ ಮತ್ತು ವಿಷ್ಣುಗಳ ಅಂಶವು ವ್ಯತ್ಯಾಸವಾಗಿದುದರಿಂದ ಆ ವೈಷ್ಣವ ಅಂಶದಿಂದ ಜಮದಗ್ನಿಯು ಹುಟ್ಟಿದನು.

ಸಾ ಹಿ ಸತ್ಯವತೀ ಪುಣ್ಯಾ ಸತ್ಯಧರ್ಮಪರಾಯಣಾ ।
ಕೌಶಿಕೀತಿ ಸಮಾಖ್ಯಾತಾ ಪ್ರವೃತ್ತೇಯಂ ಮಹಾನದೀ ।। ೧-೨೭-೩೭

ಸತ್ಯಧರ್ಮಪರಾಯಣೆ ಪುಣ್ಯೆ ಸತ್ಯವತಿಯು ಕೌಶಿಕೀ ಎಂಬ ಹೆಸರಿನಿಂದ ಪ್ರಖ್ಯಾತ ಮಹಾನದಿಯಾದಳು.

ಇಕ್ಷ್ವಾಕುವಂಶಪ್ರಭವೋ ರೇಣುರ್ನಾಮ ನರಾಧಿಪಃ ।
ತಸ್ಯ ಕನ್ಯಾ ಮಹಾಭಾಗಾ ಕಾಮಲೀ ನಾಮ ರೇಣುಕಾ ।। ೧-೨೭-೩೮

ಇಕ್ಷ್ವಾಕು ವಂಶದಲ್ಲಿ ರೇಣು ಎಂಬ ನರಾಧಿಪನು ಇದ್ದನು. ಅವನ ಕನ್ಯೆ ಮಹಾಭಾಗೆ ರೇಣುಕಾ ಅಥವಾ ಕಾಮಲೀ ಎಂಬ ಹೆಸರಿನವಳು.

ರೇಣುಕಾಯಾಂ ತು ಕಾಮಲ್ಯಾಂ ತಪೋವಿದ್ಯಾಸಮನ್ವಿತಃ ।
ಆರ್ಚಿಕೋ ಜನಯಾಮಾಸ ಜಾಮದಗ್ನ್ಯಂ ಸುದಾರುಣಮ್ ।। ೧-೨೭-೩೯
ಸರ್ವವಿದ್ಯಾನುಗಂ ಶ್ರೇಷ್ಠಂ ಧನುರ್ವೇದಸ್ಯ ಪಾರಗಮ್ ।
ರಾಮಂ ಕ್ಷತ್ರಿಯಹಂತಾರಂ ಪ್ರದೀಪ್ತಮಿವ ಪಾವಕಮ್ ।। ೧-೨೭-೪೦

ಋಚೀಕನ ಮಗ ತಪೋವಿದ್ಯಾಸಮನ್ವಿತ ಜಮದಗ್ನಿಯು ರೇಣುಕಾ ಅಥವಾ ಕಾಮಲಿಯಲ್ಲಿ ಸುದಾರುಣ, ಸರ್ವವಿದ್ಯಾನುಗ ಶ್ರೇಷ್ಠ ಧನುರ್ವೇದ ಪಾರಗ ಕ್ಷತ್ರಿಯ ಹಂತಾರ ಮತ್ತು ಪಾವಕನಂತೆ ಪ್ರದೀಪ್ತತೇಜಸ್ವೀ ಜಾಮದಗ್ನಿ ರಾಮನನ್ನು ಹುಟ್ಟಿಸಿದನು.

ಔರ್ವಸ್ಯೈವಮೃಚೀಕಸ್ಯ ಸತ್ಯವತ್ಯಾಂ ಮಹಾಯಶಾಃ ।
ಜಮದಗ್ನಿಸ್ತಪೋವೀರ್ಯಾಜ್ಜಜ್ಞೇ ಬ್ರಹ್ಮವಿದಾಂ ವರಃ ।। ೧-೨೭-೪೧
ಮಧ್ಯಮಶ್ಚ ಶುನಃಶೇಪಃ ಶುನಃಪುಚ್ಛಃ ಕನಿಷ್ಠಕಃ ।

ಹೀಗೆ ಔರ್ವನೆಂದೂ ಪ್ರಸಿದ್ಧನಾಗಿದ್ದ ಮಹಾಯಶಸ್ವೀ ಋಚೀಕನಿಗೆ ಅವನ ತಪೋವೀರ್ಯದಿಂದ ಸತ್ಯವತಿಯಲ್ಲಿ ಬ್ರಹ್ಮವಿದರಲ್ಲಿ ಶ್ರೇಷ್ಠ ಜಮದಗ್ನಿಯು ಜನಿಸಿದನು. ಋಚೀಕನ ಮಧ್ಯಮ ಮಗನು ಶುನಃಶೇಪ ಮತ್ತು ಕಿರಿಯವನು ಶುನಃಪುಚ್ಛ.

ವಿಶ್ವಾಮಿತ್ರಂ ತು ದಾಯಾದಂ ಗಾಧಿಃ ಕುಶಿಕನಂದನಃ ।। ೧-೨೭-೪೨
ಜನಯಾಮಾಸ ಪುತ್ರಂ ತು ತಪೋವಿದ್ಯಾಶಮಾತ್ಮಕಮ್ ।
ಪ್ರಾಪ್ಯ ಬ್ರಹ್ಮರ್ಷಿಸಮತಾಂ ಯೋಽಯಂ ಸಪ್ತರ್ಷಿತಾಂ ಗತಃ ।। ೧-೨೭-೪೩

ಕುಶಿಕನಂದನ ಗಾಧಿಯು ತಪೋವಿದ್ಯಾಶಮಾತ್ಮಕ ವಿಶ್ವಾಮಿತ್ರನನ್ನು ಪುತ್ರನನ್ನಾಗಿ ಪಡೆದನು. ಅವನು ಬ್ರಹ್ಮರ್ಷಿಸಮತ್ವವನ್ನು ಪಡೆದು ಸಪ್ತರ್ಷಿಗಳಲ್ಲಿ ಒಬ್ಬನಾದನು.

ವಿಶ್ವಾಮಿತ್ರಸ್ತು ಧರ್ಮಾತ್ಮಾ ನಾಮ್ನಾ ವಿಶ್ವರಥಃ ಸ್ಮೃತಃ ।
ಜಜ್ಞೇ ಭೃಗುಪ್ರಸಾದೇನ ಕೌಶಿಕಾದ್ವಂಶವರ್ಧನಃ ।। ೧-೨೭-೪೪

ಧರ್ಮಾತ್ಮಾ ವಿಶ್ವಾಮಿತ್ರನು ವಿಶ್ವರಥ ಎಂಬ ಹೆಸರಿನಿಂದಲೂ ಪ್ರಖ್ಯಾತನಾಗಿದ್ದಾನೆ. ಆ ಕೌಶಿಕರ ವಂಶವರ್ಧನನು ಭಾರ್ಗವ ಋಚೀಕನ ಪ್ರಸಾದದಿಂದ ಜನಿಸಿದನು.

ವಿಶ್ವಾಮಿತ್ರಸ್ಯ ಚ ಸುತಾ ದೇವರಾತಾದಯಃ ಸ್ಮೃತಾಃ ।
ಪ್ರಖ್ಯಾತಾಸ್ತ್ರಿಷು ಲೋಕೇಷು ತೇಷಾಂ ನಾಮಾನಿ ಮೇ ಶೃಣು ।। ೧-೨೭-೪೫

ವಿಶ್ವಾಮಿತ್ರನಿಗೆ ದೇವರಾತನೇ ಮೊದಲಾದ ಅನೇಕ ಪುತ್ರರಿದ್ದರೆಂದು ಹೇಳುತ್ತಾರೆ. ಮೂರು ಲೋಕಗಳಲ್ಲಿಯೂ ಪ್ರಖ್ಯಾತರಾಗಿದ್ದ ಅವರ ಹೆಸರುಗಳನ್ನು ಕೇಳು.

ದೇವಶ್ರವಾಃ ಕತಿಶ್ಚೈವ ಯಸ್ಮಾತ್ಕಾತ್ಯಾಯನಾಃ ಸ್ಮೃತಾಃ ।
ಶಾಲಾವತ್ಯಾಂ ಹಿರಣ್ಯಾಕ್ಷೋ ರೇಣೋರ್ಜಜ್ಞೇಽಥ ರೇಣುಮಾನ್ ।। ೧-೨೭-೪೬
ಸಾಂಕೃತಿರ್ಗಾಲವಶ್ಚೈವ ಮುದ್ಗಲಶ್ಚೇತಿ ವಿಶ್ರುತಾಃ ।
ಮಧುಚ್ಛಂದೋ ಜಯಶ್ಚೈವ ದೇವಲಶ್ಚ ತಥಾಷ್ಟಕಃ ।। ೧-೨೭-೪೭
ಕಚ್ಛಪೋ ಹಾರಿತಶ್ಚೈವ ವಿಶ್ವಾಮಿತ್ರಸ್ಯ ವೈ ಸುತಾಃ ।
ತೇಷಾಂ ಖ್ಯಾತಾನಿ ಗೋತ್ರಾಣಿ ಕೌಶಿಕಾನಾಂ ಮಹಾತ್ಮನಾಮ್ ।। ೧-೨೭-೪೮

ದೇವಶ್ರವಾ, ಕಾತ್ಯಾಯನ ಗೋತ್ರಪ್ರವರ್ತಕ ಕತಿ, ಮತ್ತು ಹಿರಣ್ಯಾಕ್ಷ – ಈ ಮೂವರೂ ಶಾಲಾವತಿಯ ಗರ್ಭದಲ್ಲಿ ಜನಿಸಿದರು. ರೇಣುವಿನಲ್ಲಿ ರೇಣುಮಾನ್, ಸಾಂಕೃತಿ, ಗಾಲವ, ಮುದ್ಗಲ, ಮದುಚ್ಛಂದ, ಜಯ, ಮತ್ತು ದೇವಲರು ಜನಿಸಿದರು. ಅಷ್ಟಕ1, ಕಚ್ಛಪ ಮತ್ತು ಹಾರಿತ ಇವರೂ ಕೂಡ ವಿಶ್ವಾಮಿತ್ರನ ಪುತ್ರರು. ಈ ಕೌಶಿಕವಂಶೀ ಮಹಾತ್ಮರ ಗೋತ್ರಗಳು ಇಂತಿವೆ:

ಪಾಣಿನೋ ಬಭ್ರವಶ್ಚೈವ ಧ್ಯಾನಜಪ್ಯಾಸ್ತಥೈವ ಚ ।
ಪಾರ್ಥಿವಾ ದೇವರಾತಾಶ್ಚ ಶಾಲಂಕಾಯನಬಾಷ್ಕಲಾಃ ।। ೧-೨೭-೪೯
ಲೋಹಿತಾ ಯಮದೂತಾಶ್ಚ ತಥಾ ಕಾರೀಷವಃ ಸ್ಮೃತಾಃ ।
ಸೌಶ್ರುತಾಃ ಕೌಶಿಕಾ ರಾಜಂಸ್ತಥಾನ್ಯೇ ಸೈಂಧವಾಯನಾಃ ।। ೧-೨೭-೫೦
ದೇವಲಾ ರೇಣವಶ್ಚೈವ ಯಾಜ್ಞ್ಯವಲ್ಕ್ಯಾಘಮರ್ಷಣಾಃ ।
ಔದುಂಬರಾ ಹ್ಯಭಿಷ್ಣಾತಾಸ್ತಾರಕಾಯನಚುಂಚುಲಾಃ ।। ೧-೨೭-೫೧
ಶಾಲಾವತ್ಯಾ ಹಿರಣ್ಯಾಕ್ಷಾಃ ಸಾಂಕೃತ್ಯಾ ಗಾಲವಾಸ್ತಥಾ ।
ಬಾದರಾಯಣಿನಶ್ಚಾನ್ಯೇ ವಿಶ್ವಾಮಿತ್ರಸ್ಯ ಧೀಮತಃ ।। ೧-೨೭-೫೨

ರಾಜನ್! ಪಾಣಿನ, ಬಭ್ರು, ಧ್ಯಾನಜಪ್ಯ, ಪಾರ್ಥಿವ, ದೇವರಾತ, ಶಾಲಂಕಾಯನ, ಬಾಷ್ಕಲ, ಲೋಹಿತಾ, ಯಮದೂತ, ಕಾರೀಷು, ಸೌಶ್ರುತ, ಕೌಶಿಕ, ಸೈಂಧವಾಯನ, ದೇವಲ, ರೇಣು, ಯಾಜ್ಞವಲ್ಕ್ಯ, ಅಘಮರ್ಷಣ, ಔದುಂಬರ, ಅವಿಷ್ಣಾತಾ, ತಾರಕಾಯನ, ಚುಂಚುಲ, ಶಾಲಾವತ್ಯ, ಹಿರಣ್ಯಾಕ್ಷಾ, ಸಾಂಕೃತ್ಯ, ಗಾಲವ ಮತ್ತು ಬಾದರಾಯಣಿ – ಇವರು ಮತ್ತು ಅನ್ಯರು ವಿಶ್ವಾಮಿತ್ರನ ಧೀಮಂತ ಪುತ್ರರು.

ಋಷ್ಯಂತರವಿವಾಹ್ಯಾಶ್ಚ ಕೌಶಿಕಾ ಬಹವಃ ಸ್ಮೃತಾಃ ।
ಪೌರವಸ್ಯ ಮಹಾರಾಜ ಬ್ರಹ್ಮರ್ಷಿಃ ಕೌಶಿಕಸ್ಯ ಚ ।
ಸಂಬಂಧೋಽಪ್ಯಸ್ಯ ವಂಶೇಽಸ್ಮಿನ್ಬ್ರಹ್ಮಕ್ಷತ್ರಸ್ಯ ವಿಶ್ರುತಃ ।। ೧-೨೭-೫೩

ಇತರ ಋಷಿಕುಲಗಳೊಂದಿಗೆ ವಿವಾಹಯೋಗ್ಯರಾದ ಕೌಶಿಕರು ಬಹಳ ಎಂದು ಹೇಳುತ್ತಾರೆ. ಮಹಾರಾಜ! ಹೀಗೆ ಪುರೂರವನ ಮತ್ತು ಬ್ರಹ್ಮರ್ಷಿ ಕೌಶಿಕನ ವಂಶದಲ್ಲಿ ಬ್ರಹ್ಮ-ಕ್ಷತ್ರರ ವಿಶ್ರುತ ಸಂಬಂಧವಿತ್ತು.

ವಿಶ್ವಾಮಿತ್ರಾತ್ಮಜಾನಾಂ ತು ಶುನಃಶೇಪೋಽಗ್ರಜಃ ಸ್ಮೃತಃ ।
ಭಾರ್ಗವಃ ಕೌಶಿಕತ್ವಂ ಹಿ ಪ್ರಾಪ್ತಃ ಸ ಮುನಿಸತ್ತಮಃ ।। ೧-೨೭-೫೪

ವಿಶ್ವಾಮಿತ್ರನ ಮಕ್ಕಳಲ್ಲಿ ಶುನಃಶೇಪನು ಅಗ್ರಜನೆಂದು ಹೇಳುತ್ತಾರೆ. ಆ ಮುನಿಸತ್ತಮ ಶುನಃಶೇಪನು ಭಾರ್ಗವನಾಗಿದ್ದರೂ ಕೌಶಿಕತ್ವವನ್ನು ಪಡೆದುಕೊಂಡನು2.

ವಿಶ್ವಾಮಿತ್ರಸ್ಯ ಪುತ್ರಸ್ತು ಶುನಃಶೇಪೋಽಭವತ್ಕಿಲ ।
ಹರಿದಶ್ವಸ್ಯ ಯಜ್ಞೇ ತು ಪಶುತ್ವೇ ವಿನಿಯೋಜಿತಃ ।। ೧-೨೭-೫೫

ಹರಿದಶ್ವನ3 ಯಜ್ಞದಲ್ಲಿ ಪಶುತ್ವದಿಂದ ವಿನಿಯೋಜಿತನಾಗಿದ್ದ ಶುನಃಶೇಪನು ವಿಶ್ವಾಮಿತ್ರನ ಪುತ್ರನಾಗಲಿಲ್ಲವೇ?

ದೇವೈರ್ದತ್ತಃ ಶುನಃಶೇಪೋ ವಿಶ್ವಾಮಿತ್ರಾಯ ವೈ ಪುನಃ ।
ದೇವೈರ್ದತ್ತಃ ಸ ವೈ ಯಸ್ಮಾದ್ದೇವರಾತಸ್ತತೋಽಭವತ್ ।। ೧-೨೭-೫೬

ದೇವತೆಗಳು ಶುನಃಶೇಪನನ್ನು ಪುನಃ ವಿಶ್ವಾಮಿತ್ರನಿಗೆ ಕೊಟ್ಟರು. ದೇವತೆಗಳು ಕೊಟ್ಟಿದ್ದುದರಿಂದ ಅವನು ದೇವರಾತ4ನಾದನು.

ದೇವರಾತಾದಯಃ ಸಪ್ತ ವಿಶ್ವಾಮಿತ್ರಸ್ಯ ವೈ ಸುತಾಃ ।
ದೃಷದ್ವತೀಸುತಶ್ಚಾಪಿ ವಿಶ್ವಾಮಿತ್ರಾತ್ತಥಾಷ್ಟಕಃ ।। ೧-೨೭-೫೭

ದೇವರಾತನೇ ಮೊದಲಾದವರು ವಿಶ್ವಾಮಿತ್ರನ ಏಳು ಪುತ್ರರು. ದೃಷದ್ವತಿ5ಯ ಮಗನು ವಿಶ್ವಾಮಿತ್ರನ ಎಂಟನೆಯ ಪುತ್ರ ಅಷ್ಟಕನು.

ಅಷ್ಟಕಸ್ಯ ಸುತೋ ಲೌಹಿಃ ಪ್ರೋಕ್ತೋ ಜಹ್ರುಗಣೋ ಮಯಾ ।
ಅಥ ಊರ್ಧ್ವಂ ಪ್ರವಕ್ಷ್ಯಾಮಿ ವಂಶಮಾಯೋರ್ಮಹಾತ್ಮನಃ ।। ೧-೨೭-೫೮

ಅಷ್ಟಕನ ಸುತನು ಲೌಹಿ ಎಂದು ಹೇಳುತ್ತಾರೆ. ನಾನು ನಿನಗೆ ಜಹ್ನುಕುಲದ ವರ್ಣನೆಯನ್ನು ಮಾಡಿದೆ. ಇನ್ನು ಮುಂದೆ ಮಹಾತ್ಮ ಆಯುವಿನ ವಂಶದ ಕುರಿತು ಹೇಳುತ್ತೇನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಅಮಾವಸುವಂಶಕೀರ್ತನಂ ನಾಮ ಸಪ್ತವಿಂಶೋಽಧ್ಯಾಯಃ


  1. ದೃಷದ್ವತೀ ಅಥವಾ ಮಾಧವಿಯ ಪುತ್ರ. ↩︎

  2. ಶುನಃಶೇಪನು ಜಮದಗ್ನಿಯ ಮಗನಾಗಿದ್ದರೂ ವಿಶ್ವಾಮಿತ್ರನ ಪುತ್ರತ್ವವನ್ನು ಪಡೆದುಕೊಂಡನು. ↩︎

  3. ಹರಿಶ್ಚಂದ್ರ . ↩︎

  4. ದೈವೈಃ ರಾತಃ – ದೇವರಾತಃ ↩︎

  5. ಯಯಾತಿಯ ಮಗಳು ಮಾಧವಿಯ ಇನ್ನೊಂದು ಹೆಸರು. ↩︎