ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 19
ಸಾರ
ಮಾರ್ಕಂಡೇಯ ಉವಾಚ
ಆಸನ್ಪೂರ್ವಯುಗೇ ತಾತ ಭರದ್ವಾಜಾತ್ಮಜಾ ದ್ವಿಜಾಃ ।
ಯೋಗಧರ್ಮಮನುಪ್ರಾಪ್ಯ ಭ್ರಷ್ಟಾ ದುಶ್ಚರಿತೇನ ವೈ ।। ೧-೧೯-೧
ಮಾರ್ಕಂಡೇಯನು ಹೇಳಿದನು1: “ತಾತ! ಪೂರ್ವಯುಗದಲ್ಲಿ ಭರದ್ವಾಜನ ದ್ವಿಜ ಪುತ್ರರು ಯೋಗಧರ್ಮವನ್ನು ಪಡೆದಿದ್ದರೂ ದುಶ್ಚರಿತದ ಕಾರಣದಿಂದ ಸ್ವರ್ಗಭ್ರಷ್ಟರಾದರು.
ಅಪಭ್ರಂಶಮನುಪ್ರಾಪ್ತಾ ಯೋಗಧರ್ಮಾಪಚಾರಿಣಃ ।
ಮಹತಃ ಸರಸಃ ಪಾರೇ ಮಾನಸಸ್ಯ ವಿಸಂಜ್ಞಿತಾಃ ।। ೧-೧೯-೨
ಯೋಗಧರ್ಮವನ್ನು ಉಲ್ಲಂಘಿಸಿದ ಅವರು ಅಪಭ್ರಂಶಸ್ಥಿತಿಯನ್ನು ಪಡೆದು ಮಹಾ ಮಾನಸಸರೋವರದ ತೀರದಲ್ಲಿ ವಿಸಂಜ್ಞಿತರಾಗಿ ಬಿದ್ದರು.
ತಮೇವಾರ್ಥಮನುಧ್ಯಾತೋ ನಷ್ಟಮಪ್ಸ್ವಿವ ಮೋಹಿತಾಃ ।
ಅಪ್ರಾಪ್ಯ ಯೋಗಂ ತೇ ಸರ್ವೇ ಸಂಯುಕ್ತಾಃ ಕಾಲಧರ್ಮಣಾ ।। ೧-೧೯-೩
ಆ ಸರೋವರದ ನೀರಿನಲ್ಲಿ ಮುಳುಗುತ್ತಲೇ ಅವರು ಎಲ್ಲರೂ ಯೋಗವನ್ನು ಕಳೆದುಕೊಂಡು ಮೋಹಿತರಾಗಿ ಮನುಷ್ಯರೂಪವನ್ನು ತಳೆದು ಕಾಲಧರ್ಮದಂತೆ ಮರಣಹೊಂದಿದರು.
ತತಸ್ತೇ ಯೋಗವಿಭ್ರಷ್ಟಾ ದೇವೇಷು ಸುಚಿರೋಷಿತಾಃ ।
ಜಾತಾಃ ಕೌಷಿಕದಾಯಾದಾಃ ಕುರುಕ್ಷೇತ್ರೇ ನರರ್ಷಭಾಃ ।। ೧-೧೯-೪
ದೇವತೆಗಳೊಂದಿಗೆ ದೀರ್ಘಕಾಲ ವಾಸಿಸುತ್ತಿದ್ದ ಆ ನರರ್ಷಭರು ಯೋಗವಿಭ್ರಷ್ಟರಾಗಿ ಕುರುಕ್ಷೇತ್ರದಲ್ಲಿ ಕೌಶಿಕನ ಮಕ್ಕಳಾಗಿ ಹುಟ್ಟುತ್ತಾರೆ.
ಹಿಂಸಯಾ ವಿಹರಿಷ್ಯಂತೋ ಧರ್ಮಂ ಪಿತೃಕೃತೇನ ವೈ ।
ತತಸ್ತೇ ಪುನರಾಜಾತಿಂ ಭ್ರಷ್ಟಾಃ ಪ್ರಾಪ್ಸ್ಯಂತಿ ಕುತ್ಸಿತಾಮ್ ।। ೧-೧೯-೫
ಪಿತೃಗಳ ಶ್ರಾದ್ಧಧರ್ಮವನ್ನು ನಡೆಸಲು ಹಿಂಸಾಕಾರ್ಯಗಳನ್ನು ಮಾಡುವ ಅವರು ಪುನಃ ಭ್ರಷ್ಟರಾಗಿ ಅವರು ಕುತ್ಸಿತ ಯೋನಿಯಲ್ಲಿ ಜನ್ಮವನ್ನು ತಾಳುತ್ತಾರೆ.
ತೇಷಾಂ ಪಿತೃಪ್ರಸಾದೇನ ಪೂರ್ವಜಾತಿಕೃತೇನ ವೈ ।
ಸ್ಮೃತಿರುತ್ಪತ್ಸ್ಯತೇ ಪ್ರಾಪ್ಯ ತಾಂ ತಾಂ ಜಾತಿಂ ಜುಗುಪ್ಸಿತಾಮ್ ।। ೧-೧೯-೬
ಆದರೆ ಹಿಂದಿನ ಜನ್ಮದಲ್ಲಿ ಮಾಡಿದ ಪಿತೃಗಳ ಪ್ರಸಾದದಿಂದ ಅವರು ಯಾವ ಯಾವ ಜುಗುಪ್ಸಿತ ಜನ್ಮಗಳನ್ನು ಪಡೆದರೂ ಅವರಿಗೆ ಪೂರ್ವಜನ್ಮದ ಸ್ಮೃತಿಯಿರುತ್ತದೆ.
ತೇ ಧರ್ಮಚಾರಿಣೋ ನಿತ್ಯಂ ಭವಿಷ್ಯಂತಿ ಸಮಾಹಿತಾಃ ।
ಬ್ರಾಹ್ಮಣ್ಯಂ ಪ್ರತಿಲಪ್ಸ್ಯಂತಿ ತತೋ ಭೂಯಃ ಸ್ವಕರ್ಮಣಾ।। ೧-೧೯-೭
ಅವರು ನಿತ್ಯವೂ ಸಮಾಹಿತರಾಗಿದ್ದುಕೊಂಡು ಧರ್ಮಚಾರಿಗಳಾಗಿರುತ್ತಾರೆ. ಅನಂತರ ಸ್ವಕರ್ಮಗಳಿಂದ ಪುನಃ ಬ್ರಾಹ್ಮಣತ್ವವನ್ನು ಪಡೆಯುತ್ತಾರೆ.
ತತಶ್ಚ ಯೋಗಂ ಪ್ರಾಪ್ಸ್ಯಂತಿ ಪೂರ್ವಜಾತಿಕೃತಂ ಪುನಃ ।
ಭೂಯಃ ಸಿದ್ಧಿಮನುಪ್ರಾಪ್ತಾಃ ಸ್ಥಾನಂ ಪ್ರಾಪ್ಸ್ಯಂತಿ ಶಾಶ್ವತಮ್ ।। ೧-೧೯-೮
ಹಿಂದಿನ ಜನ್ಮದಲ್ಲಿ ಪಡೆದುಕೊಂಡಿದ್ದ ಯೋಗವನ್ನು ಪುನಃ ಪಡೆದುಕೊಳ್ಳುತ್ತಾರೆ ಮತ್ತು ಸಿದ್ಧಿಯನ್ನು ಪಡೆದುಕೊಂಡು ಮತ್ತೊಮ್ಮೆ ಶಾಶ್ವತ ಸ್ಥಾನವನ್ನು ಪಡೆದುಕೊಳ್ಳುತ್ತಾರೆ.
ಏವಂ ಧರ್ಮೇ ಚ ತೇ ಬುದ್ಧಿರ್ಭವಿಷ್ಯತಿ ಪುನಃ ಪುನಃ ।
ಯೋಗಧರ್ಮೇ ಚ ನಿತರಾಂ ಪ್ರಾಪ್ಸ್ಯಸೇ ಬುದ್ಧಿಮುತ್ತಮಾಮ್ ।। ೧-೧೯-೯
ಹೀಗೆ ನಿನ್ನ ಬುದ್ಧಿಯೂ ಪುನಃ ಪುನಃ ಧರ್ಮನಿರತವಾಗಿರುತ್ತದೆ. ಮತ್ತು ಯೋಗಧರ್ಮದ ಕುರಿತಾದ ಉತ್ತಮ ಬುದ್ಧಿಯು ಪ್ರಾಪ್ತವಾಗುತ್ತದೆ.
ಯೋಗೋ ಹಿ ದುರ್ಲಭೋ ನಿತ್ಯಮಲ್ಪಪ್ರಜ್ಞೈಃ ಕದಾಚನ ।
ಲಬ್ಧ್ವಾಪಿ ನಾಶಯಂತ್ಯೇನಂ ವ್ಯಸನೈಃ ಕಟುತಾಮಿತಾಃ ।
ಅಧರ್ಮೇಷ್ವೇವ ವರ್ತಂತೇ ಪ್ರಾರ್ದಯಂತೇ ಗುರೂನಪಿ ।। ೧-೧೯-೧೦
ಅಲ್ಪಪ್ರಜ್ಞರಿಗೆ ಯೋಗವು ನಿತ್ಯವೂ ದುರ್ಲಭವಾದುದು. ಯಾವಾಗಲಾದರೊಮ್ಮೆ ಅವರಿಗೆ ಅದು ದೊರಕಿದರೂ ವ್ಯಸನಗಳಿಂದ ಕ್ರೂರರಾಗಿ ಅದನ್ನು ನಾಶಗೊಳಿಸಿಕೊಳ್ಳುತ್ತಾರೆ. ಅಧರ್ಮದಲ್ಲಿ ನಡೆದುಕೊಳ್ಳುತ್ತಾರೆ ಮತ್ತು ತಮ್ಮ ಗುರುಗಳನ್ನೂ ಕಷ್ಟಕ್ಕೀಡುಮಾಡುತ್ತಾರೆ.
ಯಾಚಂತೇ ನ ತ್ವಯಾಚ್ಯಾನಿ ರಕ್ಷಂತಿ ಶರಣಾಗತಾನ್ ।
ನಾವಜಾನಂತಿ ಕೃಪಣಾನ್ಮಾದ್ಯಂತೇ ನ ಧನೋಷ್ಮಣಾ ।। ೧-೧೯-೧೧
ಯುಕ್ತಾಹಾರವಿಹಾರಾಶ್ಚ ಯುಕ್ತಚೇಷ್ಟಾಃ ಸ್ವಕರ್ಮಸು ।
ಧ್ಯಾನಾಧ್ಯಯನಯುಕ್ತಾಶ್ಚ ನ ನಷ್ಟಾನುಗವೇಷಿಣಃ ।। ೧-೧೯-೧೨
ನೋಪಭೋಗರತಾ ನಿತ್ಯಂ ನ ಮಾಂಸಮಧುಭಕ್ಷಣಾಃ ।
ನ ಚ ಕಾಮಪರಾ ನಿತ್ಯಂ ನ ವಿಪ್ರಾಸೇವಿನಸ್ತಥಾ ।। ೧-೧೯-೧೩
ನಾನಾರ್ಯಸಂಕಥಾಸಕ್ತಾ ನಾಲಸ್ಯೋಪಹತಾಸ್ತಥಾ ।
ನಾತ್ಯಂತಮಾನಸಂಸಕ್ತಾ ಗೋಷ್ಠೀಷ್ವನಿರತಾಸ್ತಥಾ ।। ೧-೧೯-೧೪
ಪ್ರಾಪ್ನುವಂತಿ ನರಾ ಯೋಗಂ ಯೋಗೋ ವೈ ದುರ್ಲಭೋ ಭುವಿ ।
ಪ್ರಶಾಂತಾಶ್ಚ ಜಿತಕ್ರೋಧಾ ಮಾನಾಹಂಕಾರವರ್ಜಿತಾಃ ।। ೧-೧೯-೧೫
ಕೇಳಬಾರದವರಿಂದ ದಾನವನ್ನು ಕೇಳದ, ಶರಣಾಗತರನ್ನು ರಕ್ಷಿಸುವ, ದೀನರನ್ನು ಅವಹೇಳನ ಮಾಡದ, ಸಂಪತ್ತಿನ ಬಿಸಿಯಿಂದ ಮದೋನ್ಮತ್ತರಾಗದ, ಆಹಾರ-ವಿಹಾರಗಳು ಯುಕ್ತವಾಗಿರುವ, ಸ್ವಕರ್ಮಗಳಲ್ಲಿ ಯುಕ್ತರೀತಿಯಲ್ಲಿ ತೊಡಗಿರುವ, ಯುಕ್ತವಾಗಿ ಧ್ಯಾನ-ಅಧ್ಯಯನಗಳಲ್ಲಿ ತೊಡಗಿರುವ, ನಷ್ಟವಾಗಿರುವುದರ ಹಿಂದೆ ಹೋಗದ, ನಿತ್ಯವೂ ಭೋಗರತನಾಗಿರದ, ಮಾಂಸ-ಮದ್ಯಗಳನ್ನು ಸೇವಿಸದ, ಕಾಮಪರರಾಗಿರದ, ನಿತ್ಯವೂ ವಿಪ್ರರ ಸೇವೆಮಾಡುವ, ಅನಾರ್ಯರ ಮಾತುಗಳಲ್ಲಿ ಆಸಕ್ತಿಯಿರದ, ಆಲಸ್ಯವು ಕಾಡದಿರುವ, ಅತ್ಯಂತ ಅಭಿಮಾನವನ್ನಿಟ್ಟುಕೊಂಡಿರದ, ಚಿಂತನ-ಗೋಷ್ಟಿಗಳಲ್ಲಿ ನಿರತನಾಗಿರುವ, ಪ್ರಶಾಂತ, ಜಿತಕ್ರೋಧೀ, ಮಾನ-ಅಹಂಕಾರ ವರ್ಜಿತ ನರನು ಯೋಗವನ್ನು ಹೊಂದುತ್ತಾನೆ. ಏಕೆಂದರೆ ಭುವಿಯಲ್ಲಿ ಯೋಗವು ದುರ್ಲಭವು.
ಕಲ್ಯಾಣಭಾಜನಂ ಯೇ ತು ತೇ ಭವಂತಿ ಯತವ್ರತಾಃ ।
ಏವಂ ವಿಧಾಸ್ತು ತೇ ತಾತ ಬ್ರಾಹ್ಮಣಾ ಹ್ಯಭವಂಸ್ತದಾ ।। ೧-೧೯-೧೬
ತಾತ! ಇಂತಹ ಯತವ್ರತರೇ ಕಲ್ಯಾಣಕ್ಕೆ ಪಾತ್ರರಾಗುತ್ತಾರೆ. ಈ ವಿಧದಲ್ಲಿಯೇ ಆ ಭಾರದ್ವಾಜ ಪುತ್ರರು ಬ್ರಾಹ್ಮಣರಾಗಿ ಹುಟ್ಟಿದರು.
ಸ್ಮರಂತಿ ಹ್ಯಾತ್ಮನೋ ದೋಷಂ ಪ್ರಮಾದಕೃತಮೇವ ತು ।
ಧ್ಯಾನಾಧ್ಯಯನಯುಕ್ತಾಶ್ಚ ಶಾಂತೇ ವರ್ತ್ಮನಿ ಸಂಸ್ಥಿತಾಃ ।। ೧-೧೯-೧೭
ಅವರು ಪ್ರಮಾದದಿಂದ ತಾವು ಮಾಡಿದ ದೋಷವನ್ನು ಸ್ಮರಿಸಿಕೊಳ್ಳುತ್ತಿರುತ್ತಾರೆ. ಧ್ಯಾನ-ಅಧ್ಯಯನಗಳಲ್ಲಿ ನಿರತರಾಗಿ ಅವರು ಶಾಂತರಾಗಿರುತ್ತಾರೆ.
ಯೋಗಧರ್ಮಾದ್ಧಿ ಧರ್ಮಜ್ಞ ನ ಧರ್ಮೋಽಸ್ತಿ ವಿಶೇಷವಾನ್ ।
ವರಿಷ್ಠಃ ಸರ್ವಧರ್ಮಾಣಾಂ ತಮೇವಾಚರ ಭಾರ್ಗವ ।। ೧-೧೯-೧೮
ಭಾರ್ಗವ! ಧರ್ಮಜ್ಞ! ಯೋಗಧರ್ಮಕ್ಕಿಂತಲೂ ಶ್ರೇಷ್ಠವಾದ ಧರ್ಮವಿಲ್ಲ ಎಂದು ತಿಳಿದುಕೋ. ಅದು ಸರ್ವಧರ್ಮಗಳಲ್ಲಿ ವರಿಷ್ಠವಾದುದು. ಅದನ್ನೇ ನೀನು ಆಚರಿಸು!
ಕಾಲಸ್ಯ ಪರಿಣಾಮೇನ ಲಘ್ವಾಹಾರೋ ಜಿತೇಂದ್ರಿಯಃ ।
ತತ್ಪರಃ ಪ್ರಯತಃ ಶ್ರಾದ್ಧೀ ಯೋಗಧರ್ಮಮವಾಪ್ಸ್ಯಸಿ ।। ೧-೧೯-೧೯
ಶ್ರದ್ಧೆಯಿಂದ ಜಿತೇಂದ್ರಿಯನೂ ಲಘು-ಆಹಾರಿಯೂ ಆಗಿ ಪ್ರಯತ್ನದಲ್ಲಿ ತತ್ಪರನಾಗಿದ್ದರೆ ಕಾಲದ ಪರಿಣಾಮವಾಗಿ ನೀನು ಯೋಗಧರ್ಮವನ್ನು ಪಡೆದುಕೊಳ್ಳುತ್ತೀಯೆ.”
ಇತ್ಯುಕ್ತ್ವಾ ಭಗವಾಂದೇವಸ್ತತ್ರೈವಾಂತರಧೀಯತ ।
ಅಷ್ಟಾದಶೈವ ವರ್ಷಾಣಿ ತ್ವೇಕಾಹಮಿವ ಮೇಽಭವತ್ ।। ೧-೧೯-೨೦
ಇದನ್ನು ಹೇಳಿ ಆ ಭಗವಾನನು ಅಲ್ಲಿಯೇ ಅಂತರ್ಧಾನನಾದನು. ಆ ಹದಿನೆಂಟು ವರ್ಷಗಳು ನನಗೆ ಒಂದೇ ದಿನವೆನಿಸಿತು!
ಉಪಾಸತಸ್ತಂ ದೇವೇಶಂ ವರ್ಷಾಣ್ಯಷ್ಟಾದಶೈವ ಮೇ ।
ಪ್ರಸಾದಾತ್ತಸ್ಯ ದೇವಸ್ಯ ನ ಗ್ಲಾನಿರಭವತ್ತದಾ ।। ೧-೧೯-೨೧
ಆ ದೇವೇಶನನ್ನು ಹದಿನೆಂಟು ವರ್ಷಗಳ ಕಾಲ ಉಪಾಸನೆಗೈಯುತ್ತಿದ್ದರೂ ಆ ದೇವನ ಪ್ರಸಾದದಿಂದ ನನಗೆ ಆಯಾಸವೆಂಬುದೇ ಆಗಲಿಲ್ಲ.
ನ ಕ್ಷುತ್ಪಿಪಾಸೇ ಕಾಲಂ ವಾ ಜಾನಾಮಿ ಸ್ಮ ತದಾನಘ ।
ಪಶ್ಚಾಚ್ಛಿಷ್ಯಸಕಾಶಾತ್ತು ಕಾಲಃ ಸಂವಿದಿತೋ ಮಯಾ ।। ೧-೧೯-೨೨
ಅನಘ! ನನಗೆ ಹಸಿವೆ, ಬಾಯಾರಿಕೆ, ಸಮಯ ಯಾವುದೂ ತಿಳಿಯಲಿಲ್ಲ. ನಂತರ ಶಿಷ್ಯರ ಮೂಲಕ ನನಗೆ ಕಳೆದುಹೋದ ಸಮಯದ ಕುರಿತು ತಿಳಿಯಿತು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಪಿತೃಕಲ್ಪೇ ಏಕೋನವಿಂಶೋಽಧ್ಯಾಯಃ
-
ಸನತ್ಕುಮಾರನು ಅಂತರ್ಧಾನನಾಗುವ ಪೂರ್ವದಲ್ಲಿ ತನಗೆ ಹೇಳಿದ ಈ ವಿಷಯವನ್ನು ಮಾರ್ಕಂಡೇಯನು ಭೀಷ್ಮನಿಗೆ ಹೇಳುತ್ತಾನೆ. ↩︎