ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 17
ಸಾರ
ಭೀಷ್ಮ ಉವಾಚ
ತತೋಽಹಂ ತಸ್ಯ ವಚನಾನ್ಮಾರ್ಕಂಡೇಯಂ ಸಮಾಹಿತಃ ।
ಪ್ರಶ್ನಂ ತಮೇವಾನ್ವಪೃಚ್ಛಂ ಯನ್ಮೇ ಪೃಷ್ಠಃ ಪುರಾ ಪಿತಾ ।। ೧-೧೭-೧
ಭೀಷ್ಮನು ಹೇಳಿದನು: “ತಂದೆಯ ಮಾತಿನಂತೆ ನಾನು ಸಮಾಹಿತನಾಗಿ ಹಿಂದೆ ನನ್ನ ತಂದೆಗೆ ಕೇಳಿದ ಪ್ರಶ್ನೆಯನ್ನೇ ಮಾರ್ಕಂಡೇಯನಲ್ಲಿ ಕೇಳಿದೆ.
ಸ ಮಾಮುವಚ ಧರ್ಮಾತ್ಮಾ ಮಾರ್ಕಂಡೇಯೋ ಮಹಾತಪಾಃ ।
ಭೀಷ್ಮ ವಕ್ಷ್ಯಾಮಿ ಕರ್ತ್ಸ್ನ್ಯೇನ ಶೃಣುಷ್ವ ಪ್ರಯತೋಽನಘ ।। ೧-೧೭-೨
ಆಗ ಮಹಾತಪಸ್ವಿ ಧರ್ಮಾತ್ಮಾ ಮಾರ್ಕಂಡೇಯನು ನನಗೆ ಹೇಳಿದನು: “ಅನಘ! ಭೀಷ್ಮ! ನಿನಗೆ ಸಂಪೂರ್ಣವಾಗಿ ಹೇಳುತ್ತೇನೆ. ಪ್ರಯತನಾಗಿ ಕೇಳು.
ಅಹಂ ಪಿತೃಪ್ರಸಾದಾದ್ವೈ ದೀರ್ಘಾಯುಷ್ಟ್ವಮವಾಪ್ತವಾನ್ ।
ಪಿತೃಭಕ್ತ್ಯೈವ ಲಬ್ಧಂ ಚ ಪ್ರಾಗ್ಲೋಕೇ ಪರಮಂ ಯಶಃ ।। ೧-೧೭-೩
ನಾನು ಪಿತೃಪ್ರಸಾದದಿಂದಲೇ ದೀರ್ಘಾಯುಸ್ಸನ್ನು ಪಡೆದಿದ್ದೇನೆ. ಪಿತೃಭಕ್ತಿಯಿಂದಲೇ ನನಗೆ ಲೋಕಗಳಲ್ಲಿ ಪರಮ ಯಶಸ್ಸು ದೊರಕಿದೆ.
ಸೋಽಹಂ ಯುಗಸ್ಯ ಪರ್ಯಂತೇ ಬಹುವರ್ಷಸಹಸ್ರಿಕೇ ।
ಅಧಿರುಹ್ಯ ಗಿರಿಂ ಮೇರುಂ ತಪೋಽತಪ್ಯಂ ಸುದುಶ್ಚರಮ್ ।। ೧-೧೭-೪
ಒಮ್ಮೆ ನಾನು ಮೇರುಗಿರಿಯನ್ನು ಏರಿ ಅಲ್ಲಿ ಯುಗಪರ್ಯಂತದ ಅನೇಕ ಸಹಸ್ರವರ್ಷಗಳ ಸುದುಶ್ಚರ ತಪಸ್ಸನ್ನು ತಪಿಸುತ್ತಿದ್ದೆ.
ತತಃ ಕದಾಚಿತ್ಪಶ್ಯಾಮಿ ದಿವಂ ಪ್ರಜ್ವಾಲ್ಯ ತೇಜಸಾ ।
ವಿಮಾನಂ ಮಹದಾಯಾಂತಮುತ್ತರೇಣ ಗಿರೇಸ್ತದಾ ।। ೧-೧೭-೫
ಆಗ ಒಮ್ಮೆ ಗಿರಿಯ ಉತ್ತರದಿಕ್ಕಿನಿಂದ ತನ್ನದೇ ತೇಜಸ್ಸಿನಿಂದ ದಿವವನ್ನು ಪ್ರಜ್ವಲಿಸುತ್ತಾ ಬರುತ್ತಿದ್ದ ಮಹಾ ವಿಮಾನವನ್ನು ನೋಡಿದೆನು.
ತಸ್ಮಿನ್ವಿಮಾನೇ ಪರ್ಯಂಕೇ ಜ್ವಲಿತಾದಿತ್ಯಸನ್ನಿಭಮ್ ।
ಅಪಶ್ಯಂ ತತ್ರ ಚೈವಾಹಂ ಶಯಾನಂ ದೀಪ್ತತೇಜಸಮ್ ।। ೧-೧೭-೬
ಅಂಗುಷ್ಠಮಾತ್ರಂ ಪುರುಷಮಗ್ನಾವಗ್ನಿಮಿವಾಹಿತಮ್ ।
ಆ ವಿಮಾನದ ಪರ್ಯಂಕದಲ್ಲಿ ಪ್ರಜ್ವಲಿತ ಆದಿತ್ಯನಂತಿದ್ದ, ಅಗ್ನಿಯಲ್ಲಿ ಆವಾಹಿಸಿದ ಅಗ್ನಿಯಂತೆ ದೀಪ್ತತೇಜಸನಾಗಿದ್ದ ಅಂಗುಷ್ಠಮಾತ್ರದ ಪುರುಷನು ಮಲಗಿರುವುದನ್ನು ನೋಡಿದೆನು.
ಸೋಽಹಂ ತಸ್ಮೈ ನಮಸ್ಕೃತ್ಯ ಪ್ರಣಮ್ಯ ಶಿರಸಾ ವಿಭುಮ್ ।। ೧-೧೭-೭
ಸನ್ನಿವಿಷ್ಟಂ ವಿಮಾನಸ್ಥಂ ಪಾದ್ಯಾರ್ಘಾಭ್ಯಾಮಪೂಜಯಮ್ ।
ಅಪೃಚ್ಛಂ ಚೈವ ದುರ್ಧರ್ಷಂ ವಿದ್ಯಾಮ ತ್ವಾಮ್ಕಥಂ ವಿಭೋ ।। ೧-೧೭-೮
ಆ ವಿಭುವಿಗೆ ನಾನು ಶಿರಬಾಗಿ ನಮಸ್ಕರಿಸಿದೆನು. ವಿಮಾನಸ್ಥನಾದ ಆ ದುರ್ಧರ್ಷನನ್ನು ಪಾದ್ಯ-ಅರ್ಘ್ಯಗಳಿಂದ ಪೂಜಿಸಿ ಕೇಳಿದೆನು: “ವಿಭೋ! ನೀನು ಯಾರೆಂದು ನಾನು ಹೇಗೆ ತಿಳಿದುಕೊಳ್ಳಲಿ?
ತಪೋವೀರ್ಯಾತ್ಸಮುತ್ಪನ್ನಂ ನಾರಾಯಣಗುಣಾತ್ಮಕಮ್ ।
ದೈವತಂ ಹ್ಯಸಿ ದೇವಾನಮಿತಿ ಮೇ ವರ್ತತೇ ಮತಿಃ ।। ೧-೧೭-೯
ನಾರಾಯಣನ ಸತ್ತ್ವಗುಣಾತ್ಮಿಕ ಈ ತಪೋವೀರ್ಯದಿಂದ ಸಮುತ್ಪನ್ನನಾಗಿರುವ ನೀನು ದೇವತೆಗಳಿಗೂ ದೇವತೆಯಾಗಿರುವೆಯೆಂದು ನನಗನ್ನಿಸುತ್ತಿದೆ.”
ಸ ಮಾಮುವಾಚ ಧರ್ಮಾತ್ಮಾ ಸ್ಮಯಮಾನ ಇವಾನಘ ।
ನ ತೇ ತಪಃ ಸುಚರಿತಂ ಯೇನ ಮಾಂ ನಾವಬುದ್ಧ್ಯಸೇ ।। ೧-೧೭-೧೦
ಅನಘ! ಆ ಧರ್ಮಾತ್ಮನು ನನಗೆ ನಸುನಗುತ್ತಾ “ನೀನು ಸರಿಯಾಗಿ ತಪಸ್ಸನ್ನಾಚರಿಸುತ್ತಿಲ್ಲ. ಆದುದರಿಂದ ನಿನಗೆ ನಾನು ಯಾರೆಂದು ತಿಳಿಯಲಿಲ್ಲ!” ಎಂದನು.
ಕ್ಷಣೇನೈವ ಪ್ರಮಾಣಂ ಸಃ ಬಿಭ್ರದನ್ಯದನುತ್ತಮಮ್ ।
ರೂಪೇಣ ನ ಮಯಾ ಕಶ್ಚಿದ್ದೃಷ್ಟಪೂರ್ವಃ ಪುಮಾನ್ಕ್ವಚಿತ್ ।। ೧-೧೭-೧೧
ಕ್ಷಣದಲ್ಲಿಯೇ ಅವನು ಇನ್ನೊಂದು ಅನುತ್ತಮ ರೂಪದಲ್ಲಿ ಕಾಣಿಸಿಕೊಂಡನು. ಅಂತಹ ರೂಪವಂತ ಪುರುಷನನ್ನು ಅದಕ್ಕೆ ಹಿಂದೆ ಎಂದೂ ನಾನು ಕಂಡಿರಲಿಲ್ಲ.
ಸನತ್ಕುಮಾರ ಉವಾಚ
ವಿದ್ಧಿ ಮಾಂ ಬ್ರಹ್ಮಣಃ ಪುತ್ರಂ ಮಾನಸಂ ಪೂರ್ವಜಂ ವಿಭೋಃ ।
ತಪೋವೀರ್ಯಸಮುತ್ಪನ್ನಂ ನಾರಾಯಣಗುಣಾತ್ಮಕಮ್ ।। ೧-೧೭-೧೨
ಸನತ್ಕುಮಾರನು ಹೇಳಿದನು: “ನೀನು ನನ್ನನ್ನು ವಿಭು ಬ್ರಹ್ಮನ ಜ್ಯೇಷ್ಠ ಮಾನಸಪುತ್ರನೆಂದು ತಿಳಿ. ನಾರಾಯಣಗುಣಾತ್ಮಕ ತಪೋವೀರ್ಯದಿಂದ ಸಮುತ್ಪನ್ನನಾಗಿದ್ದೆ.
ಸನತ್ಕುಮಾರ ಇತಿ ಯಃ ಶ್ರುತೋ ದೇವೇಷು ವೈ ಪುರಾ ।
ಸೋಽಸ್ಮಿ ಭಾರ್ಗವ ಭದ್ರಂ ತೇ ಕಂ ಕಾಮಂ ಕರವಾಣಿ ತೇ ।। ೧-೧೭-೧೩
ಭಾರ್ಗವ! ಪುರಾಣಗಳಲ್ಲಿ ದೇವರಲ್ಲಿ ಸನತ್ಕುಮಾರನೆಂದು ವಿಶ್ರುತನಾದವನು ನಾನೇ. ನಿನಗೆ ಮಂಗಳವಾಗಲಿ! ನಿನಗಿಷ್ಟವಾದ ಏನನ್ನು ಮಾಡಲಿ?
ಯೇ ತ್ವನ್ಯೇ ಬ್ರಹ್ಮಣಃ ಪುತ್ರಾಃ ಯವೀಯಾಂಸಸ್ತು ತೇ ಮಮ ।
ಭ್ರಾತರಃ ಸಪ್ತ ದುರ್ಧರ್ಷಾಸ್ತೇಷಾಂ ವಂಶಾಃ ಪ್ರತಿಷ್ಠಿತಾಃ ।। ೧-೧೭-೧೪
ಬ್ರಹ್ಮನಿಗೆ ಹುಟ್ಟಿದ ಅನ್ಯ ಮಕ್ಕಳು ನನಗಿಂತಲೂ ಕಿರಿಯವರು. ನನ್ನ ಸಹೋದರರು ಏಳುಮಂದಿ. ದುರ್ಧರ್ಷರಾದ ಅವರ ವಂಶವು ಪ್ರತಿಷ್ಠಿತಗೊಂಡಿವೆ.
ಕ್ರತುರ್ವಸಿಷ್ಠಃ ಪುಲಹಃ ಪುಲಸ್ತ್ಯೋಽತ್ರಿಸ್ತಥಾಂಗಿರಾಃ ।
ಮರೀಚಿಸ್ತು ತಥಾ ಧೀಮಾನ್ ದೇವಗಂಧರ್ವಸೇವಿತಾಃ ।
ತ್ರೀನ್ಲೋಕಾಂಧಾರಯಂತೀಮಾಂದೇವಗಂಧರ್ವಪೂಜಿತಾಃ ।। ೧-೧೭-೧೫
ಕ್ರತು, ವಸಿಷ್ಠ, ಪುಲಹ, ಪುಲಸ್ತ್ಯ, ಅತ್ರಿ, ಅಂಗಿರಸ, ಮತ್ತು ಧೀಮಾನ್ ಮರೀಚಿ – ಇವರನ್ನು ದೇವ-ಗಂಧರ್ವರು ಸೇವಿಸುತ್ತಾರೆ. ದೇವ-ಗಂಧರ್ವಪೂಜಿತರಾದ ಇವರು ಮೂರೂ ಲೋಕಗಳನ್ನೂ ಧರಿಸಿದ್ದಾರೆ.
ವಯಂ ತು ಯತಿಧರ್ಮಾಣಃ ಸಂಯೋಜ್ಯಾತ್ಮಾನಮಾತ್ಮನಿ ।
ಪ್ರಜಾ ಧರ್ಮಂ ಚ ಕಾಮಂ ಚ ವ್ಯಪಹಾಯ ಮಹಾಮುನೇ ।। ೧-೧೭-೧೬
ಮಹಾಮುನೇ! ನಾವಾದರೋ ಆತ್ಮನಲ್ಲಿ ಆತ್ಮನನ್ನಿರಿಸಿ, ಕಾಮ ಮತ್ತು ಪ್ರಜಾಧರ್ಮಗಳನ್ನು ತೊರೆದು ಯತಿಧರ್ಮವನ್ನು ಅನುಸರಿಸುತ್ತಿದ್ದೇವೆ.
ಯಥೋತ್ಪನ್ನಸ್ತಥೈವಾಹಂ ಕುಮಾರ ಇತಿ ವಿದ್ಧಿ ಮಾಮ್ ।
ತಸ್ಮಾತ್ಸನತ್ಕುಮಾರೇತಿ ನಾಮೈತನ್ಮೇ ಪ್ರತಿಷ್ಠಿತಮ್ ।। ೧-೧೭-೧೭
ನಾನು ಹೇಗೆ ಉತ್ಪನ್ನನಾಗಿದ್ದೆನೋ ಅದೇ ಕುಮಾರನ ಅವಸ್ಥೆಯಲ್ಲಿ ಇರುವವನೆಂದು ತಿಳಿ. ಆದುದರಿಂದಲೇ ನಾನು ಸನತ್ಕುಮಾರ1 ಎಂಬ ಹೆಸರಿನಿಂದ ಪ್ರತಿಷ್ಠಿತನಾಗಿದ್ದೇನೆ.
ಮದ್ಭಕ್ತ್ಯಾ ತೇ ತಪಶ್ಚೀರ್ಣಂ ಮಮ ದರ್ಶನಕಾಂಕ್ಷಯಾ ।
ಏಷ ದೃಷ್ಟೋಽಸ್ಮಿ ಭವತಾ ಕಂ ಕಾಮಂ ಕರವಾಣಿ ತೇ ।। ೧-೧೭-೧೮
ನನ್ನ ದರ್ಶನವನ್ನು ಬಯಸಿ ನನ್ನ ಮೇಲೆ ಭಕ್ತಿಪೂರ್ವಕ ತಪಸ್ಸನ್ನು ಮಾಡಿದ್ದೀಯೆ. ಇದೋ ನಿನಗೆ ಕಾಣಿಸಿಕೊಂಡಿದ್ದೇನೆ. ನಿನಗಿಷ್ಟವಾದ ಏನನ್ನು ಮಾಡಲಿ?”
ಇತ್ಯುಕ್ತವಂತಂ ತಮಹಂ ಪ್ರತ್ಯವೋಚಂ ಸನಾತನಮ್ ।
ಅನುಜ್ಞಾತೋ ಭಗವತಾ ಪ್ರೀಯಮಾಣೇನ ಭಾರತ ।। ೧-೧೭-೧೯
ಭಾರತ! ಹೀಗೆ ಹೇಳುತ್ತಿದ್ದ ಅವನಿಂದ ಅನುಜ್ಞಾತನಾದ ನಾನು ಪ್ರೀತಿತೋರಿಸಿದ ಆ ಸನಾತನ ಭಗವಂತನನ್ನು ಕೇಳಿದೆನು.
ತತೋಽಹಮೇನಮರ್ಥಂ ವೈ ತಮಪೃಚ್ಛಂ ಸನಾತನಮ್ ।
ಪೃಷ್ಟಃ ಪಿತೄಣಾಂ ಸರ್ಗಂ ಚ ಫಲಂ ಶ್ರಾದ್ಧಸ್ಯ ಚಾನಘ ।। ೧-೧೭-೨೦
ಅನಘ! ಆಗ ನಾನು ಪಿತೃಗಳ ಸೃಷ್ಟಿ ಮತ್ತು ಶ್ರಾದ್ಧದ ಫಲದ ಕುರಿತಾದ ಅರ್ಥವನ್ನು ಆ ಸನಾತನನಲ್ಲಿ ಕೇಳಿದ್ದೆ.
ಚಿಚ್ಛೇದ ಸಂಶಯಂ ಭೀಷ್ಮ ಸ ತು ದೇವೇಶ್ವರೋ ಮಮ ।
ಸ ಮಾಮುವಾಚ ಧರ್ಮಾತ್ಮಾ ಕಥಾಂತೇ ಬಹುವಾರ್ಷಿಕೇ ।
ರಮೇ ತ್ವಯಾಽಹಂ ವಿಪ್ರರ್ಷೇ ಶೃಣು ಸರ್ವಂ ಯಥಾತಥಮ್ ।। ೧-೧೭-೨೧
ಭೀಷ್ಮ! ಆ ದೇವೇಶ್ವರನು ನನ್ನ ಸಂಶಯವನ್ನು ಭೇದಿಸಿದ್ದನು. ಬಹುವರ್ಷಗಳ ಕಥೆಯ ಅಂತ್ಯದಲ್ಲಿ ಆ ಧರ್ಮಾತ್ಮನು ನನಗೆ ಹೇಳಿದನು: “ವಿಪ್ರರ್ಷೇ! ನಿನ್ನ ಮೇಲೆ ನಾನು ಪ್ರೀತನಾಗಿದ್ದೇನೆ. ಎಲ್ಲವನ್ನೂ ಹೇಗಿದೆಯೋ ಹಾಗೆ ಕೇಳು.
ದೇವಾನಸೃಜತ ಬ್ರಹ್ಮಾ ಮಾಂ ಯಕ್ಷ್ಯಂತೀತಿ ಭಾರ್ಗವ ।
ತಮುತ್ಸೃಜ್ಯ ತಥಾತ್ಮಾನಮಯಜಂಸ್ತೇ ಫಲಾರ್ಥಿನಃ ।। ೧-೧೭-೨೨
ಭಾರ್ಗವ! ಇವರು ನನ್ನನ್ನೇ ಪೂಜಿಸುತ್ತಾರೆಂದು ಬ್ರಹ್ಮನು ದೇವತೆಗಳನ್ನು ಸೃಷ್ಟಿಸಿದನು. ಆದರೆ ಫಲಾರ್ಥಿಗಳಾದ ಅವರು ಅವನನ್ನು ಬಿಟ್ಟು ತಮ್ಮನ್ನು ತಾವೇ ಪೂಜಿಸತೊಡಗಿದರು.
ತೇ ಶಪ್ತಾ ಬ್ರಹ್ಮಣಾ ಮೂಢಾ ನಷ್ಟಸಂಜ್ಞಾ ದಿವೌಕಸಃ ।
ನ ಸ್ಮ ಕಿಂಚಿದ್ವಿಜಾನಂತಿ ತತೋ ಲೋಕೋಽಪ್ಯಮುಹ್ಯತ ।। ೧-೧೭-೨೩
ಬ್ರಹ್ಮನಿಂದ ಶಪಿತರಾದ ಆ ಮೂಢ ದಿವೌಕಸರು ನಷ್ಟಸಂಜ್ಞರಾದರು. ಅವರಿಗೆ ಸ್ವಲ್ಪವೂ ಜ್ಞಾನವಿರಲಿಲ್ಲ. ಅವರನ್ನು ಅನುಸರಿಸುವ ಲೋಕವೂ ಹಾಗೆಯೇ ಆಯಿತು.
ತೇ ಭೂಯಃ ಪ್ರಣತಾಃ ಶಪ್ತಾಃ ಪ್ರಾಯಾಚಂತ ಪಿತಾಮಹಮ್ ।
ಅನುಗ್ರಹಾಯ ಲೋಕಾನಾಂ ತತಸ್ತಾನಬ್ರವೀದಿದಮ್ ।। ೧-೧೭-೨೪
ಹೀಗೆ ಶಪಿತರಾದ ಅವರು ಪುನಃ ತಲೆಬಾಗಿ ನಮಸ್ಕರಿಸಿ ಪಿತಾಮಹನನ್ನು ಬೇಡಿಕೊಂಡರು. ಆಗ ಲೋಕಗಳ ಅನುಗ್ರಹಕ್ಕಾಗಿ ಅವನು ಅವರಿಗೆ ಇದನ್ನು ಹೇಳಿದನು:
ಪ್ರಾಯಶ್ಚಿತ್ತಂ ಚರಧ್ವಂ ವೈ ವ್ಯಭಿಚಾರೋ ಹಿ ವಃ ಕ್ರಿತ ।
ಪುತ್ರಾಂಶ್ಚ ಪರಿಪೄಚ್ಛಧ್ವಂ ತತೋ ಜ್ಞಾನಮವಾಪ್ಸ್ಯಥ ।। ೧-೧೭-೨೫
“ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಿ. ಏಕೆಂದರೆ ನೀವು ವ್ಯಭಿಚಾರಿಗಳಾಗಿದ್ದೀರಿ. ನಿಮಗೆ ಜ್ಞಾನವು ಎಂದುಂಟಾಗುತ್ತದೆಯೆಂದು ನಿಮ್ಮ ಪುತ್ರರನ್ನು ಕೇಳಿ!”
ಪ್ರಾಯಶ್ಚಿತ್ತಕ್ರಿಯಾರ್ಥಂ ತೇ ಪುತ್ರಾನ್ಪಪ್ರಚ್ಛುರಾರ್ತವತ್ ।
ತೇಭ್ಯಸ್ತೇ ಪ್ರಯತಾತ್ಮಾನಃ ಶಶಂಸುಸ್ತನಯಾಸ್ತದಾ ।। ೧-೧೭-೨೬
ಆರ್ತರಾದ ಅವರು ಪ್ರಾಯಶ್ಚಿತ್ತ ಮಾಡಿಕೊಳ್ಳಲು ತಮ್ಮ ಪುತ್ರರನ್ನು ಕೇಳಿದರು. ಆಗ ಅವರ ಪ್ರಯತಾತ್ಮ ಮಕ್ಕಳು ಅವರಿಗೆ ಹೇಳಿದರು.
ಪ್ರಾಯಶ್ಚಿತ್ತಾನಿ ಧರ್ಮಜ್ಞಾ ವಾಙ್ಮನಃಕರ್ಮಜಾನಿ ವೈ ।
ಶಂಸಂತಿ ಕುಶಲಾ ನಿತ್ಯಂ ಚಕ್ಷುರ್ಭ್ಯಾಮಪಿ ನಿತ್ಯಶಃ ।। ೧-೧೭-೨೭
“ಮಾತು, ಮನಸ್ಸು ಮತ್ತು ಕರ್ಮಗಳಿಂದ ಮತ್ತು ಕಣ್ಣುಗಳಿಂದ ನಿತ್ಯವೂ ಪ್ರಾಯಶ್ಚಿತ್ತವುಂಟಾಗುತ್ತದೆ ಎಂದು ಧರ್ಮಜ್ಞ ಕುಶಲರು ಸದಾ ಹೇಳುತ್ತಾರೆ.
ಪ್ರಾಯಶ್ಚಿತ್ತಾರ್ಥತತ್ತ್ವಜ್ಞಾ ಲಬ್ಧಸಂಜ್ಞಾ ದಿವೌಕಸಃ ।
ಗಮ್ಯಂತಾಂ ಪುತ್ರಕಾಶ್ಚೇತಿ ಪುತ್ರೈರುಕ್ತಾಶ್ಚ ತೇ ತದಾ ।। ೧-೧೭-೨೮
ದಿವೌಕಸರೇ! ಪ್ರಾಯಶ್ಚಿತ್ತದ ಅರ್ಥ-ತತ್ತ್ವಗಳನ್ನು ತಿಳಿದು ಸಂಜ್ಞೆಗಳನ್ನು ಪಡೆದುಕೊಳ್ಳಿರಿ.” ಅನಂತರ ಪುತ್ರರು ಅವರಿಗೆ “ಪುತ್ರರೇ! ನೀವು ಹೊರಡಿ!” ಎಂದು ಹೇಳಿದರು.
ಅಭಿಶಪ್ತಾಸ್ತು ತೇ ದೇವಾಃ ಪುತ್ರವಾಕ್ಯೇನ ನಿಂದಿತಾಃ ।
ಪಿತಾಮಹಮುಪಾಗಚ್ಛನ್ಸಂಶಯಚ್ಛೇದನಾಯ ವೈ ।। ೧-೧೭-೨೯
ಪುತ್ರವಾಕ್ಯಗಳಿಂದ ನಿಂದಿತರಾಗಿ ಅಭಿಶಪ್ತರಾದ ಆ ದೇವತೆಗಳು ತಮ್ಮ ಸಂಶಯವನ್ನು ಪರಿಹಾರಗೊಳಿಸಿಕೊಳ್ಳಲು ಪಿತಾಮಹನ ಬಳಿ ಬಂದರು.
ತತಸ್ತಾನಬ್ರವೀದ್ದೇವೋ ಯೂಯಂ ವೈ ಬ್ರಹ್ಮವಾದಿನಃ ।
ತಸ್ಮಾದ್ಯದುಕ್ತಂ ಯುಷ್ಮಾಕಂ ತತ್ತಥಾ ನ ತದನ್ಯಥಾ ।। ೧-೧೭-೩೦
ಆಗ ಆ ದೇವನು ಅವರಿಗೆ ಹೇಳಿದನು: “ನೀವು ಬ್ರಹ್ಮವಾದಿಗಳು. ಆದುದರಿಂದ ಅವರು ನಿಮಗೆ ಹೇಳಿದ್ದುದು ಸರಿಯಾಗಿಯೇ ಇದೆ. ಅದರಲ್ಲಿ ಅನುಚಿತವಾದುದು ಸ್ವಲ್ಪವೂ ಇಲ್ಲ.
ಯೂಯಂ ಶರೀರಕರ್ತಾರಸ್ತೇಷಾಂ ದೇವಾ ಭವಿಷ್ಯಥ ।
ತೇ ತು ಜ್ಞಾನಪ್ರದಾತಾರಃ ಪಿತರೋ ವೋ ನ ಸಂಶಯಃ ।। ೧-೧೭-೩೧
ನೀವು ಅವರ ಶರೀರಗಳನ್ನು ರಚಿಸುವ ದೇವತೆಗಳಾಗುವಿರಿ. ಅವರು ನಿಮಗೆ ಜ್ಞಾನವನ್ನು ನೀಡುವ ಪಿತೃಗಳಾಗುತ್ತಾರೆ. ಅದರಲ್ಲಿ ಸಂಶಯವಿಲ್ಲ.
ಅನ್ಯೋನ್ಯಂ ಪಿತರೋ ಯೂಯಂ ತೇ ಚೈವೇತಿ ನ ಸಂಶಯಃ ।
ದೇವಾಶ್ಚ ಪಿತರಶ್ಚೈವ ತದ್ಬುಧ್ಯಧ್ವಂ ದಿವೌಕಸಃ ।। ೧-೧೭-೩೨
ದೇವತೆಗಳೇ ಮತ್ತು ಪಿತೃಗಳೇ! ನೀವು ಅನ್ಯೋನ್ಯರ ಪಿತೃಗಳು ಎನ್ನುವುದರಲ್ಲಿ ಸಂಶಯವಿಲ್ಲ. ದಿವೌಕಸರೇ! ಇದನ್ನು ಚೆನ್ನಾಗಿ ತಿಳಿದುಕೊಳ್ಳಿರಿ.”
ತತಸ್ತೇ ಪುನರಾಗಮ್ಯ ಪುತ್ರಾನೂಚುರ್ದಿವೌಕಸಃ ।
ಬ್ರಹ್ಮಣಾ ಚ್ಛಿನ್ನಸಂದೇಹಾಃ ಪ್ರೀತಿಮಂತಃ ಪರಸ್ಪರಮ್ ।। ೧-೧೭-೩೩
ಆಗ ಬ್ರಹ್ಮನಿಂದ ಸಂದೇಹವನ್ನು ನಿವಾರಿಸಿಕೊಂಡು ಪರಸ್ಪರರಲ್ಲಿ ಪ್ರೀತಿಮಂತರಾದ ದಿವೌಕಸರು ಪುನಃ ತಮ್ಮ ಪುತ್ರರಲ್ಲಿಗೆ ಬಂದು ಹೇಳಿದರು.
ಯೂಯಂ ವೈ ಪಿತರೋಽಸ್ಮಾಕಂ ಯೈರ್ವಯಂ ಪ್ರತಿಬೋಧಿತಾಃ ।
ಧರ್ಮಜ್ಞಾಃ ಕಶ್ಚ ವಃ ಕಾಮಃ ಕೋ ವರೋ ವಃ ಪ್ರದೀಯತಾಮ್ । ೧-೧೭-೩೪
“ನೀವು ನಮ್ಮ ಪಿತೃಗಳು. ನೀವು ನಮಗೆ ಜ್ಞಾನವನ್ನು ನೀಡಿದ್ದೀರಿ. ಧರ್ಮಜ್ಞರೇ! ನಿಮ್ಮ ಇಚ್ಛೆಯೇನು? ನಿಮಗೆ ನಾವು ಯಾವ ವರವನ್ನು ನೀಡಬೇಕು?
ಯದುಕ್ತಂ ಚೈವ ಯುಷ್ಮಾಭಿಸ್ತತ್ತಥಾ ನ ತದನ್ಯಥಾ ।
ಉಕ್ತಾಶ್ಚ ಯಸ್ಮಾದ್ಯುಷ್ಮಾಭಿಃ ಪುತ್ರಕಾ ಇತಿ ವೈ ವಯಮ್ ।
ತಸ್ಮಾದ್ಭವಂತಃ ಪಿತರೋ ಭವಿಷ್ಯಂತಿ ನ ಸಂಶಯಃ ।। ೧-೧೭-೩೫
ನೀವು ನಮಗೆ ಹೇಳಿದುದು ಸರಿಯಾಗಿಯೇ ಇದೆ. ಅದರಲ್ಲಿ ಸ್ವಲ್ಪವೂ ಅನುಚಿತವಾದುದಿಲ್ಲ. ನಮ್ಮನ್ನು ಪುತ್ರಕರು ಎಂದು ಕರೆದುದುದರಿಂದ ನೀವು ನಮ್ಮ ಪಿತೃಗಳಾಗುತ್ತೀರಿ. ಅದರಲ್ಲಿ ಸಂಶಯವಿಲ್ಲ.
ಯೋಽನಿಷ್ಟ್ವಾ ತು ಪಿತೄಂಶ್ರಾದ್ಧೈಃ ಕ್ರಿಯಾಃ ಕಾಶ್ಚಿತ್ಕರಿಷ್ಯತಿ ।
ರಾಕ್ಷಸಾ ದಾನವಾ ನಾಗಾಃ ಫಲಂ ಪ್ರಾಪ್ಸ್ಯಂತಿ ತಸ್ಯ ತತ್ ।। ೧-೧೭-೩೬
ಶ್ರಾದ್ಧಗಳಿಂದ ಪಿತೃಗಳನ್ನು ಪೂಜಿಸದೇ ತಮ್ಮ ಇಷ್ಟ ಕರ್ಮಗಳನ್ನು ಮಾಡುವವರ ಕರ್ಮಫಲಗಳು ರಾಕ್ಷಸರು, ದಾನವರು ಮತ್ತು ನಾಗಗಳ ಪಾಲಿಗಾಗುತ್ತವೆ.
ಶ್ರಾದ್ಧೈರಾಪ್ಯಾಯಿತಾಶ್ಚೈವ ಪಿತರಃ ಸೋಮಮವ್ಯಯಮ್ ।
ಆಪ್ಯಾಯ್ಯಮಾನಾ ಯುಷ್ಮಾಭಿರ್ವರ್ಧಯಿಷ್ಯತಿ ನಿತ್ಯದಾ ।। ೧-೧೭-೩೭
ಪಿತೃಗಳಾದ ನೀವು ಶ್ರಾದ್ಧಗಳಿಂದ ತೃಪ್ತರಾಗಿ ಅವ್ಯಯ ಸೋಮನನ್ನು ತೃಪ್ತಿಗೊಳಿಸಿ ನಿತ್ಯವೂ ಅವನನ್ನು ವರ್ಧಿಸುತ್ತೀರಿ.
ಶ್ರಾದ್ಧೈರಾಪ್ಯಾಯಿತಃ ಸೋಮೋ ಲೋಕಾನಾಪ್ಯಾಯಯಿಷ್ಯತಿ ।
ಸಮುದ್ರಪರ್ವತವನಂ ಜಂಗಮಾಜಂಗಮೈರ್ವೃತಮ್ ।। ೧-೧೭-೩೮
ಶ್ರಾದ್ಧಗಳಿಂದ ತೃಪ್ತನಾದ ಸೋಮನು ಸಮುದ್ರ-ಪರ್ವತ-ವನಗಳಿಂದ ತುಂಬಿದ ಜಂಗಮಾಜಂಗಮ ಲೋಕಗಳನ್ನು ತೃಪ್ತಿಗೊಳಿಸುತ್ತಾನೆ.
ಶ್ರಾದ್ಧಾನಿ ಪುಷ್ಟಿಕಾಮಾಶ್ಚ ಯೇ ಕರಿಷ್ಯಂತಿ ಮಾನವಾಃ ।
ತೇಭ್ಯಃ ಪುಷ್ಟಿಂ ಪ್ರಜಾಶ್ಚೈವ ದಾಸ್ಯಂತಿ ಪಿತರಃ ಸದಾ ।। ೧-೧೭-೩೯
ಪುಷ್ಟಿಯನ್ನು ಬಯಸಿ ಶ್ರಾದ್ಧಗಳನ್ನು ಮಾಡುವ ಮಾನವರಿಗೆ ಪಿತೃಗಳು ಸದಾ ಪುಷ್ಟಿಯನ್ನೂ ಸಂತಾನವನ್ನೂ ನೀಡುತ್ತಾರೆ.
ಶ್ರಾದ್ಧೇ ಯೇ ಚ ಪ್ರದಾಸ್ಯಂತಿ ತ್ರೀನ್ಪಿಂಡಾನ್ನಾಮಗೋತ್ರತಃ ।
ಸರ್ವತ್ರ ವರ್ತಮಾನಾಂಸ್ತಾನ್ಪಿತರಃ ಸಪಿತಾಮಹಾನ್ ।
ಭಾವಯಿಷ್ಯಂತಿ ಸತತಂ ಶ್ರಾದ್ಧದಾನೇನ ತರ್ಪಿತಾಃ ।। ೧-೧೭-೪೦
ಸರ್ವತ್ರ ವಿದ್ಯಮಾನರಾಗಿರುವ ಪಿತ, ಪಿತಾಮಹ ಮತ್ತು ಪ್ರಪಿತಾಮಹರಿಗೆ ಅವರ ನಾಮ-ಗೋತ್ರಗಳೊಂದಿಗೆ ಮೂರು ಪಿಂಡಗಳನ್ನು ನೀಡಿದರೆ ನೀಡಿದ ಶ್ರಾದ್ಧದಿಂದ ತೃಪ್ತರಾದ ಪಿತೃಗಳು ಸದಾ ಅವರಿಗೆ ಅಭ್ಯುದಯವನ್ನು ಮಾಡುತ್ತಾರೆ.
ಏವಮಾಜ್ಞಾಪಿತಂ ಪೂರ್ವಂ ಬ್ರಹ್ಮಣಾ ಪರಮೇಷ್ಠಿನಾ ।
ಇತಿ ತದ್ವಚನಂ ಸತ್ಯಂ ಭವತ್ವದ್ಯ ದಿವೌಕಸಃ ।
ಪುತ್ರಾಶ್ಚ ಪಿತರಶ್ಚೈವ ವಯಂ ಸರ್ವೇ ಪರಸ್ಪರಮ್ ।। ೧-೧೭-೪೧
ಸ್ವರ್ಗವಾಸಿಗಳೇ! ಪರಮೇಷ್ಠಿ ಬ್ರಹ್ಮನು ಮೊದಲು ಹೀಗೆ ಆಜ್ಞಾಪಿಸಿದ್ದನು. ಇಂದು ಅವನ ವಚನವು ಸತ್ಯವಾಯಿತು. ನಾವೆಲ್ಲರೂ ಪರಸ್ಪರರ ಪುತ್ರರು ಮತ್ತು ಪಿತೃಗಳೂ ಹೌದು.”
ಸನತ್ಕುಮಾರ ಉವಾಚ
ತ ಏತೇ ಪಿತರೋ ದೇವಾ ದೇವಾಶ್ಚ ಪಿತರಸ್ತಥಾ ।
ಅನ್ಯೋನ್ಯಂ ಪಿತರೋ ಹ್ಯೇತೇ ದೇವಾಶ್ಚ ಪಿತರಶ್ಚ ಹ ।। ೧-೧೭-೪೨
ಸನತ್ಕುಮಾರನು ಹೇಳಿದನು: “ಪಿತೃಗಳೇ ದೇವತೆಗಳು. ಮತ್ತು ದೇವತೆಗಳೇ ಪಿತೃಗಳು. ಹೀಗೆ ಪಿತೃಗಳು ಮತ್ತು ದೇವತೆಗಳು ಅನ್ಯೋನ್ಯರಿಗೆ ಪಿತೃಗಳು ಮತ್ತು ಪೂಜ್ಯರು.”
ಸಮಾಪ್ತಿ
ಇತಿ ಶ್ರೀಮಹಾಭಾತರೇ ಖಿಲೇಷು ಹರಿವಂಶೇ ಹರಿವಂಶಪರ್ವನಿ ಪಿತೃಕಲ್ಪೇ ಸಪ್ತದಶೋಽಧ್ಯಾಯಃ
-
ಸನತ್ ಅಂದರೆ ನಿರಂತರ ಕುಮಾರನಾಗಿರುವ, ಕುಮಾರನಂತೆ ರಾಗ-ದ್ವೇಷಾದಿಗಳಿಂದ ಶೂನ್ಯನಾಗಿರುವವನು ಎಂದರ್ಥ. ↩︎