016: ಶ್ರಾದ್ಧಕಲ್ಪಪ್ರಸಂಗಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 16

ಸಾರ

ಜನಮೇಜಯ ಉವಾಚ
ಕಥಂ ವೈ ಶ್ರಾದ್ಧದೇವತ್ವಮಾದಿತ್ಯಸ್ಯ ವಿವಸ್ವತಃ ।
ಶ್ರೋತುಮಿಚ್ಛಾಮಿ ವಿಪ್ರಾಗ್ರ್ಯ ಶ್ರಾದ್ಧಸ್ಯ ಚ ಪರಂ ವಿಧಿಮ್ ।। ೧-೧೬-೧

ಜನಮೇಜಯನು ಹೇಳಿದನು: “ವಿಪ್ರಾಗ್ರ್ಯ! ಆದಿತ್ಯ ವಿವಸ್ವತನ ಮಗನು ಶ್ರಾದ್ಧದೇವತ್ವವನ್ನು ಹೇಗೆ ಪಡೆದನೆನ್ನುವುದನ್ನೂ ಶ್ರಾದ್ಧದ ಪರಮ ವಿಧಿಯನ್ನೂ ಕೇಳಬಯಸುತ್ತೇನೆ.

ಪಿತೄಣಾಮಾದಿಸರ್ಗಂ ಚ ಕ ಏತೇ ಪಿತರಃ ಸ್ಮೃತಾಃ ।
ಏವಂ ಚ ಶ್ರುತಮಸ್ಮಾಭಿಃ ಕಥ್ಯಮಾನಂ ದ್ವಿಜಾತಿಭಿಃ ।। ೧-೧೬-೨
ಸ್ವರ್ಗಸ್ಥಾಃ ಪಿತರೋ ಯೇ ಚ ದೇವಾನಾಮಪಿ ದೇವತಾಃ ।
ಇತಿ ವೇದವಿದಃ ಪ್ರಾಹುರೇತದಿಚ್ಛಾಮಿ ವೇದಿತುಮ್ ।। ೧-೧೬-೩

ಪಿತೃಗಳ ಆದಿಸೃಷ್ಟಿಯು ಹೇಗಾಯಿತು? ಈ ಪಿತೃಗಳೆಂದು ಹೇಳುವವರು ಯಾರು? ಸ್ವರ್ಗಸ್ಥರಾದ ಪಿತೃಗಳು ದೇವರಿಗೂ ದೇವತೆಗಳೆಂದು ದ್ವಿಜಾತಿಯವರು ಹೇಳುತ್ತಿದ್ದುದ್ದನ್ನು ನಾವು ಕೇಳಿದ್ದೇವೆ. ವೇದವನ್ನು ತಿಳಿದವರೂ ಹೀಗೆಯೇ ಹೇಳುತ್ತಾರೆ. ಅದನ್ನು ತಿಳಿದುಕೊಳ್ಳಲು ಬಯಸುತ್ತೇನೆ.

ಯೇ ಚ ತೇಶಾಂ ಗಣಾಃ ಪ್ರೋಕ್ತಾ ಯಚ್ಚ ತೇಶಾಂ ಬಲಂ ಪರಮ್ ।
ಯಥಾ ಚ ಕೃತಮಸ್ಮಾಭಿಃ ಶ್ರಾದ್ಧಂ ಪ್ರೀಣಾತಿ ವೈ ಪಿತೄನ್ ।। ೧-೧೬-೪
ಪ್ರೀತಾಶ್ಚ ಪಿತರೋ ಯೇ ಸ್ಮ ಶ್ರೇಯಸಾ ಯೋಜಯಂತಿ ಹಿ ।
ಏವಂ ವೇದಿತುಮಿಚ್ಛಾಮಿ ಪಿತೄಣಾಂ ಸರ್ಗಮುತ್ತಮಮ್ ।। ೧-೧೬-೫

ಅವರದ್ದೇ ಗಣವೆಂದು ಹೇಳುವ ಅವರ ಪರಮ ಬಲವ್ಯಾವುದು? ನಾವು ಮಾಡಿದ ಶ್ರಾದ್ಧವು ಪಿತೃಗಳನ್ನು ಹೇಗೆ ಸಂತೋಷಗೊಳಿಸುತ್ತದೆ? ಪ್ರೀತರಾದ ಪಿತೃಗಳು ನಮ್ಮ ಮೇಲೆ ಯಾವರೀತಿ ಶ್ರೇಯಸ್ಸನ್ನುಂಟುಮಾಡುತ್ತಾರೆ? ಪಿತೃಗಳ ಸೃಷ್ಟಿಯೊಂದಿಗೆ ಇದನ್ನು ತಿಳಿಯಲು ಬಯಸುತ್ತೇನೆ.”

ವೈಶಂಪಾಯನ ಉವಾಚ
ಹಂತ ತೇ ಕಥಯಿಶ್ಯಾಮಿ ಪಿತೄಣಾಂ ಸರ್ಗಮುತ್ತಮಮ್ ।
ಯಥಾ ಚ ಕೃತಮಸ್ಮಾಭಿಃ ಶ್ರಾದ್ಧಂ ಪ್ರೀಣಾತಿ ವೈ ಪಿತೄನ್ ।
ಪ್ರೀತಾಶ್ಚ ಪಿತರೋ ಯೇ ಸ್ಮ ಶ್ರೇಯಸಾ ಯೋಜಯಂತಿ ಹಿ ।। ೧-೧೬-೬

ವೈಶಂಪಾಯನನು ಹೇಳಿದನು: “ಪಿತೃಗಳ ಉತ್ತಮ ಸೃಷ್ಟಿಯ ಕುರಿತು, ನಾವು ಮಾಡಿದ ಶ್ರಾದ್ಧದಿಂದ ಪಿತೃಗಳು ಹೇಗೆ ಪ್ರೀತರಾಗುತ್ತಾರೆ ಮತ್ತು ಪ್ರೀತರಾದ ಪಿತೃಗಳು ನಮಗೆ ಶ್ರೇಯಸ್ಸನ್ನು ಹೇಗೆ ಮಾಡುತ್ತಾರೆ ಎನ್ನುವುದನ್ನು ಹೇಳುತ್ತೇನೆ. ಕೇಳು.

ಮಾರ್ಕಂಡೇಯೇನ ಕಥಿತಂ ಭೀಶ್ಮಾಯ ಪರಿಪೃಚ್ಛತೇ ।
ಅಪೃಚ್ಛದ್ಧರ್ಮರಾಜೋ ಹಿ ಶರತಲ್ಪಗತಂ ಪುರಾ ।
ಏವಮೇವ ಪುರಾ ಪ್ರಶ್ನಂ ಯನ್ಮಾಂ ತ್ವಂ ಪರಿಪೃಚ್ಛಸಿ ।। ೧-೧೬-೭

ಭೀಷ್ಮನು ಕೇಳಲು ಮಾರ್ಕಂಡೇಯನು ಇದನ್ನು ಹೇಳಿದ್ದನು. ಹಿಂದೆ ಶರತಲ್ಪನಾಗಿದ್ದ ಭೀಷ್ಮನನ್ನು ಧರ್ಮರಾಜನು ಇದನ್ನೇ ಕೇಳಿದ್ದನು. ಇದೇ ಪ್ರಶ್ನೆಯನ್ನು ನೀನೂ ಕೂಡ ನನ್ನನ್ನು ಕೇಳುತ್ತಿದ್ದೀಯೆ.

ತತ್ತೇಽನುಪೂರ್ವ್ಯಾ ವಕ್ಷ್ಯಾಮಿ ಭೀಶ್ಮೇಣೋದಾಹೃತಂ ಯಥಾ ।
ಗೀತಂ ಸನತ್ಕುಮಾರೇಣ ಮಾರ್ಕಂಡೇಯಾಯ ಪೃಚ್ಛತೇ ।। ೧-೧೬-೮

ಹಿಂದೆ ಮಾರ್ಕಂಡೇಯನು ಕೇಳಲು ಸನತ್ಕುಮಾರನು ಹೇಳಿದ ಗೀತೆಯನ್ನು ಭೀಷ್ಮನು ಉದಾಹರಿಸಿದುದನ್ನು ಹೇಳುತ್ತೇನೆ.

ಯುಧಿಷ್ಠಿರ ಉವಾಚ
ಪುಷ್ಟಿಕಾಮೇನ ಧರ್ಮಜ್ಞ ಕಥಂ ಪುಷ್ಟಿರವಾಪ್ಯತೇ ।
ಏತದ್ವೈ ಶ್ರೋತುಮಿಚ್ಛಾಮಿ ಕಿಂ ಕುರ್ವಾಣೋ ನ ಶೋಚತಿ ।। ೧-೧೬-೯

ಯುಧಿಷ್ಠಿರನು ಹೇಳಿದನು: “ಧರ್ಮಜ್ಞ! ಪುಷ್ಟಿಯನ್ನು ಬಯಸುವವನಿಗೆ ಪುಷ್ಟಿಯು ಹೇಗೆ ದೊರೆಯುತ್ತದೆ? ಏನನ್ನು ಮಾಡಿದರೆ ಮನುಷ್ಯನು ಶೋಕಿಸುವುದಿಲ್ಲ? ಇದನ್ನು ಕೇಳಲು ಬಯಸುತ್ತೇನೆ.”

ಭೀಷ್ಮ ಉವಾಚ
ಶ್ರಾದ್ಧೈಃ ಪ್ರೀಣಾತಿ ಹಿ ಪಿತೄನ್ಸರ್ವ ಕಾಮ ಫಲೈಸ್ತು ಯಃ ।
ತತ್ಪರಃ ಪ್ರಯತಃ ಶ್ರಾದ್ಧೀ ಪ್ರೇತ್ಯ ಚೇಹ ಚ ಮೋದತೇ ।। ೧-೧೬-೧೦

ಭೀಷ್ಮನು ಹೇಳಿದನು: “ಸರ್ವಕಾಮಗಳ ಫಲವನ್ನೀಯುವ ಶ್ರಾದ್ಧಗಳಿಂದ ಯಾರು ಪಿತೃಗಳನ್ನು ತೃಪ್ತಿಪಡಿಸುವನೋ ಆ ಶ್ರಾದ್ಧಿಯು ಇಹದಲ್ಲಿಯೂ ಪರದಲ್ಲಿಯೂ ಆನಂದದ ಭಾಗಿಯಾಗುತ್ತಾನೆ.

ಪಿತರೋ ಧರ್ಮಕಾಮಸ್ಯ ಪ್ರಜಾಕಾಮಸ್ಯ ಚ ಪ್ರಜಾಮ್ ।
ಪುಷ್ಟಿಕಾಮಸ್ಯ ಪುಷ್ಟಿಂ ಚ ಪ್ರಯಚ್ಛಂತಿ ಯುಧಿಷ್ಠಿರ ।। ೧-೧೬-೧೧

ಯುಧಿಷ್ಠಿರ! ಪಿತೃಗಳು ಧರ್ಮಕಾಮಿಗೆ ಧರ್ಮವನ್ನೂ, ಪ್ರಜಾಕಾಮಿಗೆ ಪ್ರಜೆಗಳನ್ನೂ, ಮತ್ತು ಪುಷ್ಟಕಾಮಿಗಳಿಗೆ ಪುಷ್ಟಿಯನ್ನೂ ಪ್ರದಾನಿಸುತ್ತಾರೆ.”

ಯುಧಿಷ್ಠಿರ ಉವಾಚ
ವರ್ತಂತೇ ಪಿತರಃ ಸ್ವರ್ಗೇ ಕೇಷಾಂಚಿನ್ನರಕೇ ಪುನಃ ।
ಪ್ರಾಣಿನಾಂ ನಿಯತಂ ವಾಪಿ ಕರ್ಮಜಂ ಫಲಮುಚ್ಯತೇ ।। ೧-೧೬-೧೨

ಯುಧಿಷ್ಠಿರನು ಹೇಳಿದನು: “ಪಿತೃಗಳಲ್ಲಿ ಕೆಲವರು ಸ್ವರ್ಗದಲ್ಲಿರುತ್ತಾರೆ ಮತ್ತು ಪುನಃ ಕೆಲವರು ನರಕದಲ್ಲಿ ವಾಸಿಸುತ್ತಾರೆ. ಪ್ರಾಣಿಗಳಿಗೆ ಕರ್ಮದಿಂದಾದ ಫಲವನ್ನು ನಿಯತವಾಗಿ ಭೋಗಿಸಬೇಕಾಗುತ್ತದೆ ಎಂದು ಹೇಳುತ್ತಾರೆ.

ಶ್ರಾದ್ಧಾನಿ ಚೈವ ಕುರ್ವಂತಿ ಫಲಕಾಮಾಃ ಸದ ನರಾಃ ।
ಅಭಿಸಂಧಾಯ ಪಿತರಂ ಪಿತುಶ್ಚ ಪಿತರಂ ತಥಾ ।। ೧-೧೬-೧೩

ಫಲವನ್ನು ಬಯಸುವ ನರರು ಸದಾ ತಂದೆ, ಅಜ್ಜ, ಮತ್ತು ಮುತ್ತಜ್ಜರನ್ನು ಅಭಿಸಂಧಾನ ಮಾಡಿ ಶ್ರಾದ್ಧಗಳನ್ನು ಮಾಡುತ್ತಾರೆ.

ಪಿತುಃ ಪಿತಾಮಹಂ ಚೈವ ತ್ರಿಷು ಪಿಂಡೇಷು ನಿತ್ಯಶಃ ।
ತಾನಿ ಶ್ರಾದ್ಧಾನಿ ದತ್ತಾನಿ ಕಥಂ ಗಚ್ಛಂತಿ ವೈ ಪಿತೄನ್ ।। ೧-೧೬-೧೪

ಪಿತ, ಪಿತಾಮಹ ಮತ್ತು ಪ್ರಪಿತಾಮಹರಿಗೆಂದು ನಿತ್ಯವೂ ಮೂರು ಪಿಂಡಗಳನ್ನಿತ್ತು ಶ್ರಾದ್ಧಗಳನ್ನು ಮಾಡುತ್ತಾರೆ. ಹಾಗೆ ನೀಡಿದ ಪಿಂಡಗಳು ಪಿತೃಗಳಿಗೆ ಹೇಗೆ ಹೋಗುತ್ತವೆ?

ಕಥಂ ಚ ಸಕ್ತಾಸ್ತೇ ದಾತುಂ ನರಕಸ್ಥಾಃ ಫಲಂ ಪುನಃ ।
ಕೇ ವಾ ತೇ ಪಿತರೋಽನ್ಯೇ ಸ್ಮ ಕಾನ್ಯಜಾಮೋ ವಯಂ ಪುನಃ ।। ೧-೧೬-೧೫

ನರಕದಲ್ಲಿದ್ದ ಪಿತೃಗಳೂ ಅದರ ಫಲವನ್ನು ಹೇಗೆ ನೀಡಬಲ್ಲರು? ಅಥವಾ ಈ ಪಿತೃಗಳು ಬೇರೆಯವರೇ ಆಗಿದ್ದರೆ ಅವರ ಪರಿಚಯವೇನು? ಯಾರನ್ನು ನಾವು ಪೂಜಿಸಬೇಕು?

ದೇವಾ ಅಪಿ ಪಿತೄನ್ಸ್ವರ್ಗೇ ಯಜಂತೀತಿ ಚ ನಃ ಶ್ರುತಮ್ ।
ಏತದಿಚ್ಛಾಮ್ಯಹಂ ಶ್ರೋತುಂ ವಿಸ್ತರೇಣ ಮಹಾದ್ಯುತೇ ।। ೧-೧೬-೧೬

ಮಹಾದ್ಯುತೇ! ಸ್ವರ್ಗದಲ್ಲಿ ದೇವತೆಗಳೂ ಕೂಡ ಪಿತೃಗಳನ್ನು ಪೂಜಿಸುತ್ತಾರೆ ಎಂದು ನಾವು ಕೇಳಿದ್ದೇವೆ. ಇದನ್ನು ವಿಸ್ತಾರವಾಗಿ ಕೇಳಬೇಕೆಂದು ಬಯಸುತ್ತೇನೆ.

ಸ ಭವಾನ್ಕಥಯತ್ವೇತಾಂ ಕಥಾಮಮಿತಬುದ್ಧಿಮಾನ್ ।
ಯಥಾ ದತ್ತಂ ಪಿತೄಣಾಂ ವೈ ತಾರಣಾಯೇಹ ಕಲ್ಪತೇ ।। ೧-೧೬-೧೭

ಅಮಿತಬುದ್ಧಿಮಾನ್! ಪಿತೃಗಳಿಗೆ ನೀಡಿದ ಶ್ರಾದ್ಧವು ಹೇಗೆ ಉದ್ಧರಿಸುತ್ತದೆ ಎನ್ನುವುದನ್ನು ಹೇಳಬೇಕು.”

ಭೀಷ್ಮ ಉವಾಚ
ಅತ್ರ ತೇ ಕೀರ್ತಯಿಷ್ಯಾಮಿ ಯಥಾಶ್ರುತಮರಿಂದಮ ।
ಯೇ ಚ ತೇ ಪಿತರೋಽನ್ಯೇ ಸ್ಮ ಯಾನ್ಯಜಾಮೋ ವಯಂ ಪುನಃ ।
ಪಿತ್ರಾ ಮಮ ಪುರಾ ಗೀತಂ ಲೋಕಾಂತರಗತೇನ ವೈ ।। ೧-೧೬-೧೮

ಭೀಷ್ಮನು ಹೇಳಿದನು: “ಅರಿಂದಮ! ನಾವು ಪೂಜಿಸುವ ಪಿತೃಗಳ ಮತ್ತು ಅನ್ಯ ಪಿತೃಗಳ ಕುರಿತು ನಾನು ಹೇಗೆ ಕೇಳಿದ್ದೆನೋ ಹಾಗೆ ನಿನಗೆ ಹೇಳುತ್ತೇನೆ. ಲೋಕಾಂತರಗತನಾಗಿರುವ ನನ್ನ ತಂದೆಯು ಹಿಂದೆ ಈ ಗೀತೆಯನ್ನು ಹೇಳಿದ್ದನು.

ಶ್ರಾದ್ಧಕಾಲೇ ಮಮ ಪಿತುರ್ಮಯಾ ಪಿಂಡಃ ಸಮುದ್ಯತಃ ।
ತಂ ಪಿತಾ ಮಮ ಹಸ್ತೇನ ಭಿತ್ತ್ವಾ ಭೂಮಿಮಯಾಚತ ।। ೧-೧೬-೧೯

ಶ್ರಾದ್ಧಕಾಲದಲ್ಲಿ ನಾನು ನನ್ನ ತಂದೆಗೆ ಪಿಂಡವನ್ನಿಡುವಾಗ ಅವನ ಕೈಯು ಭೂಮಿಯನ್ನು ಭೇದಿಸಿ ಮೇಲೆದ್ದಿತು ಮತ್ತು ನನ್ನ ತಂದೆಯು ತನ್ನ ಕೈಯಿಂದಲೇ ಪಿಂಡವನ್ನು ಕೇಳಿದ್ದನು.

ಹಸ್ತಾಭರಣಪೂರ್ಣೇನ ಕೇಯೂರಾಭರಣೇನ ಚ ।
ರಕ್ತಾಂಗುಲಿತಲೇನಾಥ ಯಹಾ ದೄಷ್ಟಃ ಪುರಾ ಮಯಾ ।। ೧-೧೬-೨೦

ಹಸ್ತಾಭರಣ ಮತ್ತು ಕೇಯೂರಾಭರಣಗಳಿಂದ ತುಂಬಿದ್ದ ಅವನ ಕೆಂಪು ಬೆರಳು-ಅಂಗೈಗಳು ನಾನು ಮೊದಲು ಅವನು ಜೀವಂತವಿರುವಾಗ ನೋಡಿದ್ದಂತೆಯೇ ಇದ್ದವು.

ನೈಷ ಕಲ್ಪೇ ವಿಧಿರ್ದೃಷ್ಟ ಇತಿ ಸಙ್ಚಿಂತ್ಯ ಚಾಪ್ಯಹಮ್ ।
ಕುಶೇಷ್ವೇವ ತಪಃ ಪಿಂಡಂ ದತ್ತವಾನವಿಚಾರಯನ್ ।। ೧-೧೬-೨೧

ಶ್ರಾದ್ಧಕಲ್ಪದಲ್ಲಿ ಈ ವಿಧಿಯನ್ನು ಹೇಳಿಲ್ಲವೆಂದು ಚಿಂತಿಸಿ ನಾನಾದರೂ ವಿಚಾರಮಾಡದೇ ಕುಶಗಳ ಮೇಲೆಯೇ ಪಿಂಡವನ್ನು ನೀಡಿದ್ದೆನು.

ತತಃ ಪಿತಾ ಮೇ ಸುಪ್ರೀತೋ ವಾಚಾ ಮಧುರಯಾ ತದಾ ।
ಉವಾಚ ಭರತಶ್ರೇಷ್ಠ ಪ್ರೀಯಮಾಣೋ ಮಯಾನಘ ।। ೧-೧೬-೨೨

ಭರತಶ್ರೇಷ್ಠ! ಅನಘ! ಆಗ ತಂದೆಯು ನನ್ನ ಮೇಲೆ ಪ್ರೀತನಾಗಿ ಪ್ರೀತಿತುಂಬಿದ ಈ ಮಧುರ ಮಾತುಗಳನ್ನು ಹೇಳಿದ್ದನು:

ತ್ವಯಾ ದಾಯಾದವಾನಸ್ಮಿ ಕೃತಾರ್ಥೋಽಮುತ್ರ ಚೇಹ ಚ ।
ಸತ್ಪುತ್ರೇಣ ತ್ವಯಾ ಪುತ್ರ ಧರ್ಮಜ್ಞೇನ ವಿಪಶ್ಚಿತಾ ।। ೧-೧೬-೨೩

“ಪುತ್ರ! ನೀನು ಧರ್ಮಜ್ಞ ಮತ್ತು ವಿದ್ವಾಂಸನು. ನಿನ್ನಂತಹ ಸತ್ಪುತ್ರನಿಂದ ನಾನು ಪುತ್ರವಂತನೆಂದೆನಿಸಿಕೊಂಡೆನು. ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ಕೃತಾರ್ಥನಾದೆನು.

ಮಯಾ ತು ತವ ಜಿಜ್ಞಾಸಾ ಪ್ರಯುಕ್ತೈಷಾ ದೃಢವ್ರತ ।
ವ್ಯವಸ್ಥಾನಂ ತು ಧರ್ಮೇಷು ಕರ್ತುಂ ಲೋಕಸ್ಯ ಚಾನಘ ।। ೧-೧೬-೨೪

ಅನಘ! ದೃಢವ್ರತ! ಲೋಕದಲ್ಲಿ ಧರ್ಮದಲ್ಲಿ ಶ್ರದ್ಧೆಯನ್ನು ಸ್ಥಾಪಿಸಲೇ ನಾನು ಹೀಗೆ ನಿನ್ನನ್ನು ಪರೀಕ್ಷಿಸಿದೆ.

ಯಥಾ ಚತುರ್ಥಂ ಧರ್ಮಸ್ಯ ರಕ್ಷಿತಾ ಲಭತೇ ಫಲಮ್ ।
ಪಾಪಸ್ಯ ಹಿ ತಥಾ ಮೂಢಃ ಫಲಂ ಪ್ರಾಪ್ನೋತ್ಯರಕ್ಷಿತಾ ।। ೧-೧೬-೨೫

ಧರ್ಮವನ್ನು ರಕ್ಷಿಸುವವನಿಗೆ ಧರ್ಮದ ನಾಲ್ಕನೆಯ ಒಂದು ಭಾಗವು ದೊರೆಯುವಂತೆ ಪಾಪವನ್ನು ರಕ್ಷಿಸುವ ಮೂಢನಿಗೆ ಪಾಪದ ನಾಲ್ಕನೆಯ ಒಂದು ಭಾಗವು ದೊರೆಯುತ್ತದೆ.

ಪ್ರಮಾಣಂ ಯದ್ಧಿ ಕುರುತೇ ಧರ್ಮಾಚಾರೇಷು ಪಾರ್ಥಿವಃ ।
ಪ್ರಜಾಸ್ತದನುವರ್ತಂತೇ ಪ್ರಮಾಣಾಚರಿತಂ ಸದಾ ।। ೧-೧೬-೨೬

ಧರ್ಮಾಚಾರಗಳಲ್ಲಿ ರಾಜನು ಏನನ್ನು ಪ್ರಮಾಣಪೂರ್ವಕವಾಗಿ ಮಾಡುತ್ತಾನೋ ಪ್ರಜೆಗಳೂ ಅದೇ ಪ್ರಮಾಣವನ್ನು ಸದಾ ಅನುಸರಿಸುತ್ತಾರೆ.

ತ್ವಯಾ ಚ ಭರತಶ್ರೇಷ್ಠ ವೇದಧರ್ಮಾಶ್ಚ ಶಾಶ್ವತಾಃ ।
ಕೃತಾಃ ಪ್ರಮಾಣಂ ಪ್ರೀತಿಶ್ಚ ಮಮ ನಿರ್ವರ್ತಿತಾತುಲಾ । ೧-೧೬-೨೭

ಭರತಶ್ರೇಷ್ಠ! ನೀನು ಶಾಶ್ವತ ವೇದಧರ್ಮಗಳನ್ನೇ ಪ್ರಮಾಣವೆಂದು ಪರಿಗಣಿಸಿರುವೆ. ಆದುದರಿಂದ ನಿನ್ನ ಮೇಲೆ ಅತುಲ ಪ್ರೀತಿಯುಂಟಾಗಿದೆ.

ತಸ್ಮಾತ್ತವಾಹಂ ಸುಪ್ರೀತಃ ಪ್ರೀತ್ಯಾ ಚ ವರಮುತ್ತಮಮ್ ।
ದದಾಮಿ ತಂ ಪ್ರತೀಚ್ಛ ತ್ವಂ ತ್ರಿಷು ಲೋಕೇಷು ದುರ್ಲಭಮ್ ।। ೧-೧೬-೨೮

ಆದುದರಿಂದ ಸುಪ್ರೀತನಾದ ನಾನು ನಿನಗೆ ಪ್ರೀತಿಯಿಂದ ಉತ್ತಮ ವರವನ್ನು ನೀಡುತ್ತೇನೆ. ಮೂರು ಲೋಕಗಳಲ್ಲಿಯೂ ದುರ್ಲಭವಾದ ವರವನ್ನು ಪಡೆದುಕೋ!

ನ ತೇ ಪ್ರಭವಿತಾ ಮೃತುರ್ಯಾವಜ್ಜೀವಿತುಮಿಚ್ಛಸಿ ।
ತ್ವತ್ತೋಽಭ್ಯನುಜ್ಞಾಂ ಸಂಪ್ರಾಪಯ ಮೃತ್ಯುಃ ಪ್ರಭವಿತಾ ತವ ।। ೧-೧೬-೨೯

ಎಲ್ಲಿಯವರೆಗೆ ನೀನು ಜೀವಿತವಿರಲು ಬಯಸುವೆಯೋ ಅಲ್ಲಿಯವರೆಗೆ ನಿನ್ನ ಮೇಲೆ ಮೃತ್ಯುವಿನ ಪ್ರಭಾವವಿರುವುದಿಲ್ಲ. ನಿನ್ನ ಅನುಜ್ಞೆಯನ್ನು ಪಡೆದೇ ಮೃತ್ಯುವು ನಿನ್ನ ಮೇಲೆ ಪ್ರಭಾವಿತಗೊಳ್ಳುತ್ತದೆ.

ಕಿಂ ವಾ ತೇ ಪ್ರಾರ್ಥಿತಂ ಭೂಯೋ ದದಾಮಿ ವರಮುತ್ತಮಮ್ ।
ತದ್ಬ್ರೂಹಿ ಭರತಶ್ರೇಷ್ಠ ಯತ್ತೇ ಮನಸಿ ವರ್ತತೇ ।। ೧-೧೬-೩೦

ಅಥವಾ ನೀನು ಕೇಳಿದ ಇನ್ನೂ ಹೆಚ್ಚಿನ ಉತ್ತಮ ವರವನ್ನು ನೀಡುತ್ತೇನೆ. ಭರತಶ್ರೇಷ್ಠ! ನಿನ್ನ ಮನಸ್ಸಿನಲ್ಲಿ ಏನಿದೆಯೋ ಅದನ್ನು ಹೇಳು.”

ಇತ್ಯುಕ್ತವಂತಂ ತಮಹಮಭಿವಾದ್ಯ ಕೃತಾಂಜಲಿಃ ।
ಅಬ್ರುವಂ ಕೃತಕೃತ್ಯೋಽಹಂ ಪ್ರಸನ್ನೇ ತ್ವಯಿ ಸತ್ತಮ ।। ೧-೧೬-೩೧

ಹೀಗೆ ಹೇಳುತ್ತಿದ್ದ ಅವನನ್ನು ಕೈಮುಗಿದು ಅಭಿವಂದಿಸಿ ನಾನು ಹೇಳಿದೆನು: “ಸತ್ತಮ! ನಿನ್ನ ಪ್ರಸನ್ನತೆಯಿಂದ ನಾನು ಕೃತಕೃತ್ಯನಾಗಿದ್ದೇನೆ.

ಯದಿ ತ್ವನುಗ್ರಹಂ ಭೂಯಸ್ತ್ವತ್ತೋಽರ್ಹಾಮಿ ಮಹಾದ್ಯುತೇ ।
ಪ್ರಶ್ನಮಿಚ್ಛಾಮಿ ವೈ ಕಿಂಚಿದ್ವ್ಯಾಹೃತಂ ಭವತಾ ಸ್ವಯಮ್ ।। ೧-೧೬-೩೨

ಮಹಾದ್ಯುತೇ! ನಿನಗೆ ನನ್ನ ಮೇಲೆ ಇನ್ನೂ ಹೆಚ್ಚಿನ ಅನುಗ್ರಹವಿದ್ದರೆ ಸ್ವಯಂ ನಿನ್ನ ಮುಖದಿಂದ ಈ ಪ್ರಶ್ನೆಗೆ ಉತ್ತರವನ್ನು ಕೇಳಬಯಸುತ್ತೇನೆ.”

ಸ ಮಾಮುವಾಚ ಧರ್ಮಾತ್ಮಾ ಬ್ರೂಹಿ ಭೀಷ್ಮ ಯದಿಚ್ಛಸಿ ।
ಛೇತ್ತಾಸ್ಮಿ ಸಂಶಯಂ ಸರ್ವಂ ಯನ್ಮಾಂ ಪೃಚ್ಛಸಿ ಭಾರತ ।। ೧-೧೬-೩೩

ಆ ಧರ್ಮಾತ್ಮನು ನನಗೆ ಹೇಳಿದನು: “ಭೀಷ್ಮ! ಭಾರತ! ನಿನಗಿರುವ ಸಂಶಯವೆಲ್ಲವನ್ನೂ ನನ್ನಲ್ಲಿ ಕೇಳು. ಅವೆಲ್ಲ ಸಂದೇಹಗಳನ್ನೂ ದೂರಮಾಡುತ್ತೇನೆ.

ಅಪೃಚ್ಛಂ ತಮಹಂ ತಾತಂ ತತ್ರಾಂತರ್ಹಿತಮೇವ ಚ ।
ಗತಂ ಸುಕೃತಿನಾಂ ಲೋಕಂ ಕೌತೂಹಲಸಮನ್ವಿತಃ ।। ೧-೧೬-೩೪

ಆಗ ಅಲ್ಲಿ ಅಂತರ್ಹಿತನಾಗಿ ನಿಂತಿದ್ದ ಸುಕೃತರ ಲೋಕಕ್ಕೆ ಹೋಗಿದ್ದ ನನ್ನ ತಂದೆಯನ್ನು ಕುತೂಹಲಸಮನ್ವಿತನಾಗಿ ಕೇಳಿದೆನು.”

ಭೀಷ್ಮ ಉವಾಚ
ಶ್ರೂಯಂತೇ ಪಿತರೋ ದೇವಾ ದೇವಾನಾಮಪಿ ದೇವತಾಃ ।
ದೇವಾಶ್ಚ ಪಿತರೋಽನ್ಯೇ ಚ ಕಾನ್ಯಜಾಮೋ ವಯಂ ಪುನಃ ।। ೧-೧೬-೩೫

ಭೀಷ್ಮನು ಹೇಳಿದನು: “ಪಿತೃಗಳು ದೇವತೆಗಳಿಗೂ ದೇವತೆಗಳೆಂದು ಕೇಳಿದ್ದೇವೆ. ದೇವತೆಗಳು ಮತ್ತು ಪಿತೃಗಳು ಅನ್ಯ-ಅನ್ಯರೋ ಅಥವಾ ಒಂದೇ ಗಣವೋ? ನಾವು ಯಾರನ್ನು ಪೂಜಿಸಬೇಕು?

ಕಥಂ ಚ ದತ್ತಮಸ್ಮಾಭಿಃ ಶ್ರಾದ್ಧಂ ಪ್ರೀಣಾತ್ಯಥೋ ಪಿತೄನ್ ।
ಲೋಕಾಂತರಗತಂಸ್ತಾತ ಕಿನ್ನು ಶ್ರಾದ್ಧಸ್ಯ ವಾ ಫಲಮ್ ।। ೧-೧೬-೩೬

ತಂದೇ! ನಾವು ನೀಡುವ ಶ್ರಾದ್ಧವು ಬೇರೆ ಲೋಕಗಳಿಗೆ ಹೋಗಿರುವ ಪಿತೃಗಳಿಗೆ ಹೇಗೆ ತೃಪ್ತಿಯನ್ನು ನೀಡುತ್ತದೆ? ಶ್ರಾದ್ಧದ ಫಲವೇನು?

ಕಾನ್ಯಜಂತಿ ಸ್ಮ ಲೋಕಾ ವೈ ಸದೇವನರದಾನವಾಃ ।
ಸಯಕ್ಷೋರಗಗಂಧರ್ವಾಃ ಸಕಿನ್ನರಮಹೋರಗಾಃ ।। ೧-೧೬-೩೭

ಲೋಕದಲ್ಲಿ ದೇವತೆಗಳು, ನರರು, ದಾನವರು, ಯಕ್ಷರು, ಉರಗರು, ಗಂಧರ್ವರು, ಕಿನ್ನರರು ಮತ್ತು ಮಹೋರಗರು ಯಾರನ್ನು ಪೂಜಿಸುತ್ತಾರೆ?

ಅತ್ರ ಮೇ ಸಂಶಯಸ್ತೀವ್ರಃ ಕೌತೂಹಲಮತೀವ ಚ ।
ತದ್ಬ್ರೂಹಿ ಮಮ ಧರ್ಮಜ್ಞ ಸರ್ವಜ್ಞೋ ಹ್ಯಸಿ ಮೇ ಮತಃ ।
ಏತಚ್ಛ್ರುತ್ವಾ ವಚಸ್ತಸ್ಯ ಭೀಷ್ಮಸ್ಯೋವಾಚ ವೈ ಪಿತಾ ।। ೧-೧೬-೩೮

ಇದರ ಕುರಿತು ನನ್ನಲ್ಲಿ ತೀವ್ರ ಸಂಶಯವಿದೆ ಮತ್ತು ಅತೀವ ಕುತೂಹಲವೂ ಇದೆ. ಧರ್ಮಜ್ಞ! ಇದರ ಕುರಿತು ನನಗೆ ಹೇಳು. ನೀನು ಸರ್ವಜ್ಞನೆಂದು ನನ್ನ ಮತ.” ಭೀಷ್ಮನ ಈ ಮಾತನ್ನು ಕೇಳಿ ಅವನ ತಂದೆಯು ಅವನಿಗೆ ಹೇಳಿದನು.

ಶಂತನುರುವಾಚ
ಸಂಕ್ಷೇಪೇಣೈವ ತೇ ವಕ್ಷ್ಯೇ ಯನ್ಮಾಂ ಪೃಚ್ಛಸಿ ಭಾರತ ।
ಪಿತರಶ್ಚ ಯಥೋದ್ಭೂತಾಃ ಫಲಂ ದತ್ತಸ್ಯ ಚಾನಘ ।। ೧-೧೬-೩೯
ಪಿತೄಣಾಂ ಕಾರಣಂ ಶ್ರಾದ್ಧೇ ಶೃಣು ಸರ್ವಂ ಸಮಾಹಿತಃ ।
ಆದಿದೇವಸುತಾಸ್ತಾತ ಪಿತರೋ ದಿವಿ ದೇವತಾಃ।। ೧-೧೬-೪೦

ಶಂತನುವು ಹೇಳಿದನು: “ಭಾರತ! ನನ್ನನ್ನು ನೀನು ಏನು ಕೇಳುತ್ತಿದ್ದೀಯೋ ಅದನ್ನು ಸಂಕ್ಷೇಪವಾಗಿಯೇ ಹೇಳುತ್ತೇನೆ. ಅನಘ! ಪಿತೃಗಳು ಹೇಗೆ ಉತ್ಪನ್ನರಾದರು, ಪಿತೃಗಳಿಗೆ ಶ್ರಾದ್ಧವನ್ನು ನೀಡುವುದರಿಂದ ಅವರು ಯಾವ ಫಲವನ್ನು ನೀಡುತ್ತಾರೆ ಎನ್ನುವುದೆಲ್ಲವನ್ನೂ ಸಮಾಹಿತನಾಗಿ ಕೇಳು. ತಾತ! ದಿವಿಯಲ್ಲಿರುವ ಪಿತೃದೇವತೆಗಳು ಆದಿದೇವನ ಮಕ್ಕಳು.

ತಾನ್ಯಜಂತಿ ಸ್ಮ ವೈ ಲೋಕಾಃ ಸದೇವಾಸುರಮಾನುಷಾಃ ।
ಸಯಕ್ಷೋರಗಗಂಧರ್ವಾಃ ಸಕಿನ್ನರಮಹೋರಗಾಃ ।। ೧-೧೬-೪೧

ದೇವ-ಅಸುರ-ಮನುಷ್ಯ-ಯಕ್ಷ-ಉರಗ-ಗಂಧರ್ವ-ಕಿನ್ನರ-ಮಹೋರಗಗಳೊಂದಿಗೆ ಲೋಕವು ಅವರನ್ನೇ ಪೂಜಿಸುತ್ತದೆ.

ಆಪ್ಯಾಯಿತಾಶ್ಚ ತೇ ಶ್ರಾದ್ಧೇ ಪುನರಾಪ್ಯಾಯಯಂತಿ ಚ ।
ಜಗತ್ಸದೇವಗಂಧರ್ವಮಿತಿ ಬ್ರಹ್ಮಾನುಶಾಸನಮ್ ।। ೧-೧೬-೪೨

ಅವರನ್ನು ಶ್ರಾದ್ಧದಿಂದ ತೃಪ್ತಿಗೊಳಿಸಿದರೆ ಪುನಃ ಅವರು ದೇವ-ಗಂಧರ್ವರ ಸಹಿತ ಜಗತ್ತನ್ನು ತೃಪ್ತಿಗೊಳಿಸುತ್ತಾರೆ ಎಂದು ಬ್ರಹ್ಮನ ಅನುಶಾಸನವಾಗಿದೆ.

ತಾನ್ಯಜಸ್ವ ಮಹಾಭಾಗ ಶ್ರಾದ್ಧೈರಗ್ರ್ಯೈರತಂದ್ರಿತಃ ।
ತೇ ತೇ ಶ್ರೇಯೋ ವಿಧಾಸ್ಯಂತಿ ಸರ್ವಕಾಮಫಲಪ್ರದಾಃ ।। ೧-೧೬-೪೩

ಮಹಾಭಾಗ! ಆಲಸ್ಯವಿಲ್ಲದೇ ಶ್ರೇಷ್ಠ ಶ್ರಾದ್ಧಗಳಿಂದ ಅವರನ್ನು ಪೂಜಿಸು. ಸರ್ವಕಾಮಫಲಗಳನ್ನು ನೀಡುವ ಅವರು ನಿನಗೆ ಶ್ರೇಯಸ್ಸನ್ನು ಕಲ್ಪಿಸುತ್ತಾರೆ.

ತ್ವಯಾ ಚಾರಾಧ್ಯಮಾನಾಸ್ತೇ ನಾಮಗೋತ್ರಾದಿಕೀರ್ತನೈಃ ।
ಅಸ್ಮಾನಾಪ್ಯಾಯಯಿಷ್ಯಂತಿ ಸ್ವರ್ಗಸ್ಥಾನಪಿ ಭಾರತ ।। ೧-೧೬–೪೪

ಭಾರತ! ನಾಮ-ಗೋತ್ರಾದಿಗಳ ಕೀರ್ತನೆಯೊಂದಿಗೆ ಅವರನ್ನು ನೀನು ಆರಾಧಿಸಿದರೆ ಅವರು ಸ್ವರ್ಗಸ್ಥರಾಗಿದ್ದರೂ ನಮ್ಮವರನ್ನು ತೃಪ್ತಿಗೊಳಿಸುತ್ತಾರೆ.

ಮಾರ್ಕಂಡೇಯಸ್ತು ತೇ ಶೇಷಮೇತತ್ಸರ್ವಂ ಪ್ರವಕ್ಷ್ಯತಿ ।
ಏಷ ವೈ ಪಿತೃಭಕ್ತಶ್ಚ ವಿದಿತಾತ್ಮಾ ಚ ಭಾರತ ।। ೧-೧೬-೪೫

ಭಾರತ! ಉಳಿದುದೆಲ್ಲವನ್ನೂ ಮಾರ್ಕಂಡೇಯನು ನಿನಗೆ ಹೇಳುತ್ತಾನೆ. ಅವನು ಪಿತೃಭಕ್ತ ಮತ್ತು ಆತ್ಮನನ್ನು ತಿಳಿದುಕೊಂಡಿದ್ದಾನೆ.

ಉಪಸ್ಥಿತಶ್ಚ ಶ್ರಾದ್ಧೇಽದ್ಯ ಮಮೈವಾನುಗ್ರಹಾಯ ವೈ ।
ಏನಂ ಪೃಚ್ಛ ಮಹಾಭಾಗಮಿತ್ಯುಕ್ತ್ವಾಂತರಧೀಯತ ।। ೧-೧೬-೪೬

ನನಗೆ ಅನುಗ್ರಹಿಸಲೆಂದೇ ಅವನು ಇಂದಿನ ಈ ಶ್ರಾದ್ಧದಲ್ಲಿ ಉಪಸ್ಥಿತನಾಗಿದ್ದಾನೆ. ಮಹಾಭಾಗ! ಅವನನ್ನು ಕೇಳು!” ಹೀಗೆ ಹೇಳಿ ಶಂತನವು ಅಂತರ್ಧಾನನಾದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಆದಿಸರ್ಗಕಥನೇ ಪ್ರಥಮೋಽಧ್ಯಾಯಃ