015: ಆದಿತ್ಯಸ್ಯ ವಂಶಾನುಕೀರ್ತನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 15

ಸಾರ

ಜನಮೇಜಯ ಉವಾಚ
ಸಗರಸ್ಯಾತ್ಮಜಾ ವೀರಾಃ ಕಥಂ ಜಾತಾ ಮಹಾತ್ಮನಃ ।
ವಿಕ್ರಾಂತಾಃ ಷಷ್ಟಿಸಾಹಸ್ರಾ ವಿಧಿನಾ ಕೇನ ವಾ ದ್ವಿಜ ।। ೧-೧೫-೧

ಜನಮೇಜಯನು ಹೇಳಿದನು: “ದ್ವಿಜ! ಸಗರನಿಗೆ ಹೇಗೆ ಅಥವಾ ಯಾವ ವಿಧಾನದಿಂದ ಮಹಾತ್ಮಾ ವಿಕ್ರಾಂತ ಅರವತ್ತು ಸಾವಿರ ಮಕ್ಕಳಾದರು?”

ವೈಶಂಪಾಯನ ಉವಾಚ
ದ್ವೇ ಭಾರ್ಯೇ ಸಗರಸ್ಯಾಸ್ತಾಂ ತಪಸಾ ದಗ್ಧಕಿಲ್ಬಿಷೇ ।
ಜ್ಯೇಷ್ಠಾ ವಿದರ್ಭದುಹಿತಾ ಕೇಶಿನೀ ನಾಮ ವಿಶ್ರುತಾ ।। ೧-೧೫-೨

ವೈಶಂಪಾಯನನು ಹೇಳಿದನು: “ಸಗರನಿಗೆ ತಪಸ್ಸಿನಿಂದ ಪಾಪಗಳನ್ನು ಸುಟ್ಟುಕೊಂಡಿದ್ದ ಇಬ್ಬರು ಭಾರ್ಯೆಯರಿದ್ದರು. ಹಿರಿಯವಳು ವಿದರ್ಭರಾಜನ ಮಗಳು ಕೇಶಿನೀ ಎಂಬ ಹೆಸರಿನಿಂದ ವಿಶ್ರುತಳಾಗಿದ್ದಳು.

ಕನೀಯಸೀ ತು ಯಾ ತಸ್ಯ ಪತ್ನೀ ಪರಮಧರ್ಮಿಣೀ ।
ಅರಿಷ್ಟನೇಮಿದುಹಿತಾ ರೂಪೇಣಾಪ್ರತಿಮಾ ಭುವಿ ।। ೧-೧೫-೩

ಅವನ ಕಿರಿಯ ಪತ್ನಿಯು ಅರಿಷ್ಟನೇಮಿಯ ಮಗಳು ಪರಮಧರ್ಮಿಣೀ ಭುವಿಯಲ್ಲಿಯೇ ಅಪ್ರತಿಮ ರೂಪವತಿಯಾಗಿದ್ದಳು.

ಔರ್ವಸ್ತಾಭ್ಯಾಂ ವರಂ ಪ್ರಾದಾತ್ತಂ ನಿಬೋಧ ಜನಾಧಿಪ ।
ಷಷ್ಠಿಂ ಪುತ್ರಸಹಸ್ರಾಣಿ ಗೃಹ್ಣಾತ್ವೇಕಾ ತಪಸ್ವಿನೀ ।। ೧-೧೫-೪
ಏಕಂ ವಂಶಧರಂ ತ್ವೇಕಾ ಯಥೇಷ್ಟಂ ವರಯತ್ವಿತಿ ।

ಜನಾಧಿಪ! ಔರ್ವನು ಅವರಿಬ್ಬರಿಗೆ ನೀಡಿದ ವರವನ್ನು ಕೇಳು. “ತಪಸ್ವಿನಿ ಒಬ್ಬಳು ಅರವತ್ತು ಸಾವಿರ ಪುತ್ರರನ್ನು ಮತ್ತು ಇನ್ನೊಬ್ಬಳು ಒಬ್ಬನೇ ವಂಶಧರನನ್ನು ಸ್ವೀಕರಿಸಲಿ. ತಮಗಿಷ್ಟವಾದ ವರವನ್ನು ಕೇಳಲಿ” ಎಂದನು.

ತತ್ರೈಕಾ ಜಗೃಹೇ ಪುತ್ರಾನ್ಲುಬ್ಧಾ ಶೂರಾನ್ಬಹೂಂಸ್ತಥಾ ।। ೧-೧೫-೫
ಏಕಂ ವಂಶಧರಂ ತ್ವೇಕಾ ತಥೇತ್ಯಾಹ ಚ ತಾಂ ಮುನಿಃ ।

ಅವರಲ್ಲಿ ಲುಬ್ಧಳೋರ್ವಳು ಅನೇಕ ಶೂರಪುತ್ರರನ್ನೂ, ಒಬ್ಬಳು ವಂಶಧರನಾದ ಓರ್ವ ಪುತ್ರನನ್ನೂ ಕೇಳಿದರು. ಮುನಿಯು ಅವರಿಗೆ ಹಾಗೆಯ ಆಗಲಿ ಎಂದನು.

ಕೇಶಿನ್ಯಸೂತ ಸಗರಾದಸಮಂಜಸಮಾತ್ಮಜಮ್ ।। ೧-೧೫-೬
ರಾಜಾ ಪಂಚಜನೋ ನಾಮ ಬಭೂವ ಸುಮಹಾಬಲಃ ।
ಇತರಾ ಸುಷುವೇ ತುಮ್ಬೀಂ ಬೀಜಪೂರ್ಣಾಮಿತಿ ಶ್ರುತಿಃ ।। ೧-೧೫-೭

ಸಗರನಿಂದ ಕೇಶಿನಿಯು ಅಸಮಂಜಸನನ್ನು ಮಗನನ್ನಾಗಿ ಪಡೆದಳು. ಅವನು ಮಹಾಬಲ ಪಂಚಜನ ಎಂಬ ಹೆಸರಿನ ರಾಜನಾದನು. ಇನ್ನೊಬ್ಬಳು ಬೀಜಗಳಿಂದ ತುಂಬಿದ ಒಂದು ಕುಂಬಳಕಾಯಿಯನ್ನು ಹೆತ್ತಳೆಂದು ಪ್ರಸಿದ್ಧವಾಗಿದೆ.

ತತ್ರ ಷಷ್ಠಿಸಹಸ್ರಾಣಿ ಗರ್ಭಾಸ್ತೇ ತಿಲಸಮ್ಮಿತಾಃ ।
ಸಂಬಭೂವುರ್ಯಥಾಕಾಲಂ ವವೃಧುಶ್ಚ ಯಥಾಕ್ರಮಮ್ ।। ೧-೧೫-೮

ಆ ಕುಂಬಳಕಾಯಿಯಲ್ಲಿ ಎಳ್ಳಿನ ಗಾತ್ರದ ಅರವತ್ತು ಸಾವಿರ ಗರ್ಭಗಳಿದ್ದವು. ಯಥಾಕಾಲದಲ್ಲಿ ಮತ್ತು ಯಥಾಕ್ರಮವಾಗಿ ಅವುಗಳು ಬೆಳೆದವು.

ಘೃತಪೂರ್ಣೇಷು ಕುಂಭೇಷು ತಾನ್ಗರ್ಭಾನ್ನಿದಧೇ ಪಿತಾ ।
ಧಾತ್ರೀಶ್ಚೈಕೈಕಶಃ ಪ್ರಾದಾತ್ತಾವತೀರೇವ ಪೋಷಣೇ ।। ೧-೧೫-೯

ತಂದೆಯು ಆ ಗರ್ಭಗಳನ್ನು ತುಪ್ಪದಿಂದ ತುಂಬಿದ ಕೊಡಗಳಲ್ಲಿ ಇರಿಸಿದನು ಮತ್ತು ಒಂದೊಂದರ ಪೋಷಣೆಗೂ ಒಬ್ಬೊಬ್ಬಳು ಧಾತ್ರಿಯನ್ನು ಇರಿಸಿದನು.

ತತೋ ದಶಸು ಮಾಸೇಷು ಸಮುತ್ತಸ್ಥುರ್ಯಥಾಸುಖಮ್ ।
ಕುಮಾರಾಸ್ತೇ ಯಥಾಕಾಲಂ ಸಗರಪ್ರೀತಿವರ್ಧನಾಃ ।। ೧-೧೫-೧೦

ಹತ್ತು ಮಾಸಗಳ ನಂತರ ಯಥಾಕಾಲದಲ್ಲಿ ಯಥಾಸುಖವಾಗಿ ಸಗರನ ಪ್ರೀತಿಯನ್ನು ವರ್ಧಿಸುವ ಮಕ್ಕಳು ಹುಟ್ಟಿದರು.

ಷಷ್ಟಿಃ ಪುತ್ರಸಹಸ್ರಾಣಿ ತಸ್ಯೈವಮಭವನ್ನೃಪ ।
ಗರ್ಭಾದಲಾಬುಮಧ್ಯಾದ್ವೈ ಜಾತಾನಿ ಪೃಥಿವೀಪತೇ ।। ೧-೧೫-೧೧

ನೃಪ! ಪೃಥಿವೀಪತೇ! ಹೀಗೆ ಕುಂಬಳಕಾಯಿಯ ಒಳಗಿದ್ದ ಬೀಜಗಳಂತಿದ್ದ ಗರ್ಭದಿಂದ ಸಗರನಿಗೆ ಅರವತ್ತು ಸಾವಿರ ಪುತ್ರರಾದರು.

ತೇಷಾಂ ನಾರಾಯಣಂ ತೇಜಃ ಪ್ರವಿಷ್ಟಾನಾಂ ಮಹಾತ್ಮನಾಮ್ ।
ಏಕಃ ಪಂಚಜನೋ ನಾಮ ಪುತ್ರೋ ರಾಜಾ ಬಭೂವ ಹ ।। ೧-೧೫-೧೨

ಕಪಿಲ ರೂಪೀ ನಾರಾಯಣನ ತೇಜಸ್ಸಿನಿಂದ ಆ ಮಹಾತ್ಮರು ಭಸ್ಮೀಭೂತರಾದರು. ಪಂಚಜನ ಎಂಬ ಹೆಸರಿನ ಮಗನು ಓರ್ವನೇ ರಾಜನಾದನು.

ಸುತಃ ಪಂಚಜನಸ್ಯಾಸೀದಂಶುಮಾನ್ನಾಮ ವೀರ್ಯವಾನ್ ।
ದಿಲೀಪಸ್ತನಯಸ್ತಸ್ಯ ಖಟ್ವಾಂಗ ಇತಿ ವಿಶ್ರುತಃ ।। ೧-೧೫-೧೩

ಪಂಚಜನನಿಗೆ ಅಂಶುಮಾನ್ ಎಂಬ ವೀರ್ಯವಾನ್ ಪುತ್ರನಿದ್ದನು. ಅವನ ಮಗನು ಖಟ್ವಾಂಗ ಎಂದು ವಿಶ್ರುತನಾದ ದಿಲೀಪ.

ಯೇನ ಸ್ವರ್ಗಾದಿಹಾಗತ್ಯ ಮುಹೂರ್ತಂ ಪ್ರಾಪ್ಯ ಜೀವಿತಮ್ ।
ತ್ರಯೋಽನುಸಂಧಿತಾ ಲೋಕಾ ಬುದ್ಧ್ಯಾ ಸತ್ಯೇನ ಚಾನಘ ।। ೧-೧೫-೧೪

ಅನಘ! ದಿಲೀಪನು ಒಂದು ಮುಹೂರ್ತಕಾಲದ ಜೀವಿತವನ್ನು ಪಡೆದು ಸ್ವರ್ಗದಿಂದ ಇಲ್ಲಿಗೆ ಬಂದು ಬುದ್ಧಿ-ಸತ್ಯಗಳಿಂದ ಲೋಕಗಳನ್ನು ತತ್ತ್ವತಃ ತಿಳಿದುಕೊಂಡನು.

ದಿಲೀಪಸ್ಯ ತು ದಾಯಾದೋ ಮಹಾರಾಜೋ ಭಗೀರಥಃ ।
ಯಃ ಸ ಗಂಗಾಂ ಸರಿಚ್ಛ್ರೇಷ್ಠಾಮವಾತಾರಯತ ಪ್ರಭುಃ ।। ೧-೧೫-೧೫

ದಿಲೀಪನ ಮಗನು ಮಹಾರಾಜ ಪ್ರಭು ಭಗೀರಥ. ಅವನು ಸರಿತಶ್ರೇಷ್ಠೆ ಗಂಗೆಯನ್ನು ಸ್ವರ್ಗದಿಂದ ಭೂಮಿಗೆ ಇಳಿಸಿದನು.

ಕೀರ್ತಿಮಾನ್ಸ ಮಹಾಭಾಗಃ ಶಕ್ರತುಲ್ಯಪರಾಕ್ರಮಃ ।
ಸಮುದ್ರಮಾನಯಚ್ಚೈನಾಂ ದುಹಿತೃತ್ವೇನ ಕಲ್ಪಯತ್ ।
ತಸ್ಮಾದ್ಭಾಗೀರಥೀ ಗಂಗಾ ಕಥ್ಯತೇ ವಂಶಚಿಂತಕೈಃ ।। ೧-೧೫-೧೬

ಶಕ್ರನ ಸಮಾನ ಪರಾಕ್ರಮಿಯಾಗಿದ್ದ ಆ ಮಹಾಭಾಗ ಕೀರ್ತಿವಂತನು ಗಂಗೆಯನ್ನು ಸಮುದ್ರದವರೆಗೂ ಕೊಂಡೊಯ್ದು ಅವಳನ್ನು ತನ್ನ ಮಗಳನ್ನಾಗಿಸಿಕೊಂಡನು. ಆದುದರಿಂದ ವಂಶಕೀರ್ತನಕರು ಗಂಗೆಯನ್ನು ಭಾಗೀರಥೀ ಎಂದು ಕರೆಯುತ್ತಾರೆ.

ಭಗೀರಥಸುತೋ ರಾಜಾ ಶ್ರುತ ಇತ್ಯಭಿವಿಶ್ರುತಃ ।
ನಾಭಾಗಸ್ತು ಶ್ರುತಸ್ಯಾಸೀತ್ಪುತ್ರಃ ಪರಮಧಾರ್ಮಿಕಃ ।। ೧-೧೫-೧೭

ರಾಜಾ ಶ್ರುತನು ಭಗೀರಥನ ಮಗನಾಗಿ ಪ್ರಸಿದ್ಧನಾದನು. ಪರಮಧಾರ್ಮಿಕ ನಾಭಾಗನು ಶ್ರುತನ ಮಗನಾಗಿದ್ದನು.

ಅಂಬರೀಷಸ್ತು ನಾಭಾಗಿಃ ಸಿಂಧುದ್ವೀಪಪಿತಾಭವತ್ ।
ಅಯುತಾಜಿತ್ತು ದಾಯಾದಃ ಸಿಂಧುದ್ವೀಪಸ್ಯ ವೀರ್ಯವಾನ್ ।। ೧-೧೫-೧೮

ನಾಭಾಗನ ಪುತ್ರನು ಅಂಬರೀಷ. ಅವನು ಸಿಂಧುದ್ವೀಪದ ಪಿತನಾದನು. ಸಿಂಧುದ್ವೀಪನಿಗೆ ಅಯುತಾಜಿತ್ ಎಂಬ ವೀರ್ಯವಾನ್ ಪುತ್ರನಾದನು.

ಅಯುತಾಜಿತ್ಸುತಸ್ತ್ವಾಸೀದೃತುಪರ್ಣೋ ಮಹಾಯಶಾಃ ।
ದಿವ್ಯಾಕ್ಷಹೃದಯಜ್ಞೋ ವೈ ರಾಜಾ ನಲಸಖೋ ಬಲೀ ।। ೧-೧೫-೧೯

ಅಯುತಾಜಿತುವಿನ ಮಗನು ಮಹಾಯಶಸ್ವೀ, ದಿವ್ಯ ಅಕ್ಷಯಹೃದಯವನ್ನು ತಿಳಿದಿದ್ದ, ನಲ1ನ ಸಖ ಬಲಶಾಲೀ ರಾಜಾ ಋತುಪರ್ಣನಾಗಿದ್ದನು.

ಋತುಪರ್ಣಸುತಸ್ತ್ವಾಸೀದಾರ್ತಪರ್ಣಿರ್ಮಹೀಪತಿಃ ।
ಸುದಾಸಸ್ತಸ್ಯ ತನಯೋ ರಾಜಾ ತ್ವಿಂದ್ರಸಖೋಽಭವತ್ ।। ೧-೧೫-೨೦

ಋತುಪರ್ಣನ ಪುತ್ರ ಮಹೀಪತಿ ಆರ್ತಪರ್ಣಿಯು. ಅವನ ತನಯನು ರಾಜಾ ಸುದಾಸನು. ಅವನು ಇಂದ್ರನ ಸಖನಾದನು.

ಸುದಾಸಸ್ಯ ಸುತಸ್ತ್ವಾಸೀತ್ಸೌದಾಸೋ ನಾಮ ಪಾರ್ಥಿವಃ ।
ಖ್ಯಾತಃ ಕಲ್ಮಾಷಪಾದೋ ವೈ ನಾಮ್ನಾ ಮಿತ್ರಸಹಸ್ತಥಾ ।। ೧-೧೫-೨೧

ಸುದಾಸನ ಮಗ ಸೌದಾಸನೆಂಬ ರಾಜನು ಕಲ್ಮಾಷಪಾದ ಮತ್ತು ಮಿತ್ರಸಹ ಎಂಬ ಹೆಸರುಗಳಿಂದಲೂ ಖ್ಯಾತನಾದನು.

ಕಲ್ಮಾಷಪಾದಸ್ಯ ಸುತಃ ಸರ್ವಕರ್ಮೇತಿ ವಿಶ್ರುತಃ ।
ಅನರಣ್ಯಸ್ತು ಪುತ್ರೋಽಭೂದ್ವಿಶ್ರುತಃ ಸರ್ವಕರ್ಮಣಃ ।। ೧-೧೫-೨೨

ಕಲ್ಮಾಷಪಾದನ ಮಗನು ಸರ್ವಕರ್ಮ ಎಂದು ವಿಶ್ರುತನಾದನು. ಸರ್ವಕರ್ಮನ ಮಗನು ಅನರಣ್ಯ ಎಂದು ವಿಶ್ರುತನಾದನು.

ಅನರಣ್ಯಸುತೋ ನಿಘ್ನೋ ನಿಘ್ನಪುತ್ರೌ ಬಭೂವತುಃ ।
ಅನಿಮಿತ್ರೋ ರಘುಶ್ಚೈವ ಪಾರ್ಥಿವರ್ಷಭ ಸತ್ತಮೌ ।। ೧-೧೫-೨೩

ಅನರಣ್ಯನ ಮಗನು ನಿಘ್ನ. ನಿಘ್ನನಿಗೆ ಇಬ್ಬರು ಪಾರ್ಥಿವರ್ಷಭ ಸತ್ತಮ ಪುತ್ರರಾದರು: ಅನಮಿತ್ರ ಮತ್ತು ರಘು.

ಅನಮಿತ್ರಸ್ಯ ಧರ್ಮಾತ್ಮಾ ವಿದ್ವಾಂದುಲಿದುಹೋಽಭವತ್ ।
ದಿಲೀಪಸ್ತನಯಸ್ತಸ್ಯ ರಾಮಪ್ರಪ್ರಪಿತಾಮಹಃ ।। ೧-೧೫-೨೪

ಧರ್ಮಾತ್ಮಾ ಅನಮಿತ್ರನಿಗೆ ವಿದ್ವಾನ್ ದುಲಿದುಹನು ಪುತ್ರನಾದನು. ಅವನ ತನಯ ದಿಲೀಪನು ರಾಮನ ವೃದ್ಧ ಪ್ರಪಿತಾಮಹನಾಗಿದ್ದನು.

ದೀರ್ಘಬಾಹುರ್ದಿಲೀಪಸ್ಯ ರಘುರ್ನಾಮ್ನಾಭವತ್ಸುತಃ ।
ಅಯೋಧ್ಯಾಯಾಂ ಮಹಾರಾಜೋ ರಘುಶ್ಚಾಸೀನ್ಮಹಾಬಲಃ ।। ೧-೧೫-೨೫

ದೀರ್ಘಬಾಹು ದಿಲೀಪನಿಗೆ ರಘು ಎಂಬ ಹೆಸರಿನ ಪುತ್ರನಾದನು. ಮಹಾಬಲಿ ರಘುವು ಅಯೋಧ್ಯೆಯ ಮಹಾರಾಜನಾಗಿದ್ದನು.

ಅಜಸ್ತು ರಘುತೋ ಜಜ್ಞೇ ಅಜಾದ್ದಶರಥೋಽಭವತ್ ।
ರಾಮೋ ದಶರತಾಜ್ಜಜ್ಞೇ ಧರ್ಮಾತ್ಮಾ ಸುಮಹಾಯಶಾಃ ।। ೧-೧೫-೨೬

ರಘುವಿನಲ್ಲಿ ಅಜನು ಹುಟ್ಟಿದನು ಮತ್ತು ಅಜನಿಂದ ದಶರಥನು ಹುಟ್ಟಿದನು. ಧರ್ಮಾತ್ಮಾ ಸುಮಹಾಯಶಸ್ವೀ ರಾಮನು ದಶರಥನಿಂದ ಹುಟ್ಟಿದನು

ರಾಮಸ್ಯ ತನಯೋ ಜಜ್ಞೇ ಕುಶ ಇತ್ಯಭಿವಿಶ್ರುತಃ ।
ಅತಿಥಿಸ್ತು ಕುಶಾಜ್ಜಜ್ಞೇ ನಿಷಧಸ್ತಸ್ಯ ಚಾತ್ಮಜಃ ।। ೧-೧೫-೨೭

ರಾಮನ ತನಯನಾಗಿ ಕುಶನೆಂದು ವಿಶ್ರುತನಾದವನು ಹುಟ್ಟಿದನು. ಕುಶನಿಂದ ಅತಿಥಿಯು ಹುಟ್ಟಿದನು. ನಿಷಧನು ಅವನ ಮಗನಾದನು.

ನಿಷಧಸ್ಯ ನಲಃ ಪುತ್ರೋ ನಭಃ ಪುತ್ರೋ ನಲಸ್ಯ ತು ।
ನಭಸ್ಯ ಪುಂಡರೀಕಸ್ತು ಕ್ಷೇಮಧನ್ವಾ ತತಃ ಸ್ಮೃತಃ ।। ೧-೧೫-೨೮

ನಿಷಧನ ಪುತ್ರನು ನಲ. ನಭನು ನಲನ ಪುತ್ರ. ಪುಂಡರೀಕನು ನಭನ ಮಗ. ಮತ್ತು ಕ್ಷೇಮಧನ್ವನು ನಭನ ಮಗನಾದನು.

ಕ್ಷೇಮಧನ್ವಸುತಸ್ತ್ವಾಸೀದ್ದೇವಾನೀಕಃ ಪ್ರತಾಪವಾನ್ ।
ಆಸೀದಹೀನಗುರ್ನಾಮ ದೇವಾನೀಕಸುತಃ ಪ್ರಭುಃ ।। ೧-೧೫-೨೯

ಪ್ರತಾಪವಾನ್ ದೇವಾನೀಕನು ಕ್ಷೇಮಧನ್ವನ ಮಗನಾದನು. ಪ್ರಭು ಅಹೀನಗು ಎಂಬ ಹೆಸರಿನ ಪ್ರಭುವು ದೇವಾನೀಕನ ಮಗನಾದನು.

ಅಹೀನಗೋಸ್ತು ದಾಯಾದಃ ಸುಧನ್ವಾ ನಾಮ ಪಾರ್ಥಿವಃ ।
ಸುಧನ್ವನಃ ಸುತಶ್ಚೈವ ತತೋ ಜಜ್ಞೇಽನಲೋ ನೃಪಃ ।। ೧-೧೫-೩೦

ಸುಧನ್ವಾ ಎಂಬ ಹೆಸರಿನ ಪಾರ್ಥಿವನು ಅಹೀನಗುವಿನ ಮಗ. ನೃಪ ಅನಲನು ಸುಧನ್ವನ ಮಗನಾಗಿ ಜನಿಸಿದನು.

ಉಕ್ಥೋ ನಾಮ ಸ ಧರ್ಮಾತ್ಮಾನಲಪುತ್ರೋ ಬಭೂವ ಹ ।
ವಜ್ರನಾಭಃ ಸುತಸ್ತಸ್ಯ ಉಕ್ಥಸ್ಯ ಚ ಮಹಾತ್ಮನಃ ।। ೧-೧೫-೩೧

ಉಕ್ಥ ಎಂಬ ಹೆಸರಿನ ಧರ್ಮಾತ್ಮನು ಅನಲನ ಮಗನಾದನು. ಮಹಾತ್ಮ ವಜ್ರನಾಭನು ಉಕ್ಥನ ಮಗ.

ಶಂಖಸ್ತಸ್ಯ ಸುತೋ ವಿದ್ವಾನ್ವ್ಯುಷಿತಾಶ್ವ ಇತಿ ಶ್ರುತಃ ।
ಪುಷ್ಪಸ್ತಸ್ಯ ಸುತೋ ವಿದ್ವಾನರ್ಥಸಿದ್ಧಿಸ್ತು ತತ್ಸುತಃ ।। ೧-೧೫-೩೨

ವಜ್ರನಾಭನಿಗೆ ಶಂಖನೆಂಬ ಮಗನಾದನು. ಅವನು ವ್ಯುಷಿತಾಶ್ವ ಎಂಬ ಹೆಸರಿನಿಂದಲೂ ಪ್ರಸಿದ್ಧನಾದನು. ಅವನ ಮಗನು ವಿದ್ವಾನ್ ಪುಷ್ಪ. ಅರ್ಥಸಿದ್ಧಿಯು ಅವನ ಮಗ.

ಸುದರ್ಶನಃ ಸುತಸ್ತಸ್ಯ ಅಗ್ನಿವರ್ಣಃ ಸುದರ್ಶನಾತ್ ।
ಅಗ್ನಿವರ್ಣಸ್ಯ ಶೀಘ್ರಸ್ತು ಶೀಘ್ರಸ್ಯ ತು ಮರುಃ ಸುತಃ ।। ೧-೧೫-೩೩

ಅರ್ಥಸಿದ್ಧಿಯ ಮಗ ಸುದರ್ಶನ. ಅಗ್ನಿವರ್ಣನು ಸುದರ್ಶನನ ಮಗ. ಅಗ್ನಿವರ್ಣನ ಮಗ ಶೀಘ್ರ. ಶೀಘ್ರನ ಮಗ ಮರು.

ಮರುಸ್ತು ಯೋಗಮಾಸ್ಥಾಯ ಕಲಾಪದ್ವೀಪಮಾಸ್ಥಿತಃ ।
ತಸ್ಯಾಸೀದ್ವಿಶ್ರುತವತಃ ಪುತ್ರೋ ರಾಜ ಬೃಹದ್ಬಲಃ ।। ೧-೧೫-೩೪

ಮರುವು ಯೋಗವನ್ನಾಶ್ರಯಿಸಿ ಕಲಾಪದ್ವೀಪದಲ್ಲಿ ಇರತೊಡಗಿದನು. ಅವನಿಗೆ ವಿಶ್ರುತನಾದ ರಾಜ ಬೃಹದ್ಬಲನು ಪುತ್ರನಾದನು.

ನಲೌ ದ್ವಾವೇವ ವಿಖ್ಯಾತೌ ಪುರಾಣೇ ಭರತರ್ಷಭ ।
ವೀರಸೇನಾತ್ಮಜಶ್ಚೈವ ಯಶ್ಚೇಕ್ಷ್ವಾಕುಕುಲೋದ್ವಹಃ ।। ೧-೧೫-೩೫

ಭರತರ್ಷಭ! ಪುರಾಣಗಳಲ್ಲಿ ಇಬ್ಬರು ನಲರು ವಿಖ್ಯಾತರಾಗಿದ್ದರು: ವೀರಸೇನನ ಮಗ ನಲ ಮತ್ತು ಇಕ್ಷ್ವಾಕುಕುಲದಲ್ಲಿ ಹುಟ್ಟಿದ ನಿಷಧನ ಮಗ ನಲ.

ಇಕ್ಷ್ವಾಕುವಂಶಪ್ರಭವಾಃ ಪ್ರಾಧಾಣ್ಯೇನೇಹ ಕೀರ್ತಿತಾಃ ।
ಏತೇ ವಿವಸ್ವತೋ ವಂಶೇ ರಾಜಾನೋ ಭೂರಿತೇಜಸಃ ।। ೧-೧೫-೩೬

ಇಕ್ಷ್ವಾಕುವಂಶದಲ್ಲಿ ಹುಟ್ಟಿದ ಪ್ರಧಾನರನ್ನು ಇಲ್ಲಿ ವರ್ಣಿಸಿದ್ದೇನೆ. ಈ ಭೂರಿತೇಜಸ ರಾಜರು ವಿವಸ್ವತನ ವಂಶದಲ್ಲಿಯೇ ಹುಟ್ಟಿದವರು.

ಪಠನ್ಸಮ್ಯಗಿಮಾಂ ಸೃಷ್ಟಿಮಾದಿತ್ಯಸ್ಯ ವಿವಸ್ವತಃ ।
ಶ್ರಾದ್ಧದೇವಸ್ಯ ದೇವಸ್ಯ ಪ್ರಜಾನಾಂ ಪುಷ್ಟಿದಸ್ಯ ಚ ।। ೧-೧೫-೩೭
ಪ್ರಜಾವಾನೇತಿ ಸಾಯುಜ್ಯಮಾದಿತ್ಯಸ್ಯ ವಿವಸ್ವತಃ ।
ವಿಪಾಪ್ಮಾ ವಿರಜಾಶ್ಚೈವ ಆಯುಷ್ಮಾಂಶ್ಚ ಭವತ್ಯುತ ।। ೧-೧೫-೩೮

ಆದಿತ್ಯ ವಿವಸ್ವತನ ಸೃಷ್ಟಿ, ಪ್ರಜೆಗಳಿಗೆ ಪುಷ್ಟಿಯನ್ನೀಯುವ ಶ್ರಾದ್ಧದೇವ ದೇವನ ಸೃಷ್ಟಿ ಇವುಗಳನ್ನು ಪಠಣಮಾಡುವವನು ಸಂತಾನಯುಕ್ತನಾಗುತ್ತಾನೆ ಮತ್ತು ಆದಿತ್ಯನ ಸಾಯುಜ್ಯವನ್ನು ಪಡೆಯುತ್ತಾನೆ. ಅವನು ಪಾಪಗಳನ್ನು ಕಳೆದುಕೊಳ್ಳುತ್ತಾನೆ. ರಜೋಗುಣರಹಿತನಾಗಿ ಆಯುಷ್ಮಂತನೂ ಆಗುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶಪರ್ವಣಿ ಆದಿತ್ಯಸ್ಯ ವಂಶಾನುಕೀರ್ತನಂ ನಾಮ ಪಂಚದಶೋಽಧ್ಯಾಯಃ


  1. ವೀರಸೇನನ ಮಗ ನಲ. ↩︎