ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 15
ಸಾರ
ಜನಮೇಜಯ ಉವಾಚ
ಸಗರಸ್ಯಾತ್ಮಜಾ ವೀರಾಃ ಕಥಂ ಜಾತಾ ಮಹಾತ್ಮನಃ ।
ವಿಕ್ರಾಂತಾಃ ಷಷ್ಟಿಸಾಹಸ್ರಾ ವಿಧಿನಾ ಕೇನ ವಾ ದ್ವಿಜ ।। ೧-೧೫-೧
ಜನಮೇಜಯನು ಹೇಳಿದನು: “ದ್ವಿಜ! ಸಗರನಿಗೆ ಹೇಗೆ ಅಥವಾ ಯಾವ ವಿಧಾನದಿಂದ ಮಹಾತ್ಮಾ ವಿಕ್ರಾಂತ ಅರವತ್ತು ಸಾವಿರ ಮಕ್ಕಳಾದರು?”
ವೈಶಂಪಾಯನ ಉವಾಚ
ದ್ವೇ ಭಾರ್ಯೇ ಸಗರಸ್ಯಾಸ್ತಾಂ ತಪಸಾ ದಗ್ಧಕಿಲ್ಬಿಷೇ ।
ಜ್ಯೇಷ್ಠಾ ವಿದರ್ಭದುಹಿತಾ ಕೇಶಿನೀ ನಾಮ ವಿಶ್ರುತಾ ।। ೧-೧೫-೨
ವೈಶಂಪಾಯನನು ಹೇಳಿದನು: “ಸಗರನಿಗೆ ತಪಸ್ಸಿನಿಂದ ಪಾಪಗಳನ್ನು ಸುಟ್ಟುಕೊಂಡಿದ್ದ ಇಬ್ಬರು ಭಾರ್ಯೆಯರಿದ್ದರು. ಹಿರಿಯವಳು ವಿದರ್ಭರಾಜನ ಮಗಳು ಕೇಶಿನೀ ಎಂಬ ಹೆಸರಿನಿಂದ ವಿಶ್ರುತಳಾಗಿದ್ದಳು.
ಕನೀಯಸೀ ತು ಯಾ ತಸ್ಯ ಪತ್ನೀ ಪರಮಧರ್ಮಿಣೀ ।
ಅರಿಷ್ಟನೇಮಿದುಹಿತಾ ರೂಪೇಣಾಪ್ರತಿಮಾ ಭುವಿ ।। ೧-೧೫-೩
ಅವನ ಕಿರಿಯ ಪತ್ನಿಯು ಅರಿಷ್ಟನೇಮಿಯ ಮಗಳು ಪರಮಧರ್ಮಿಣೀ ಭುವಿಯಲ್ಲಿಯೇ ಅಪ್ರತಿಮ ರೂಪವತಿಯಾಗಿದ್ದಳು.
ಔರ್ವಸ್ತಾಭ್ಯಾಂ ವರಂ ಪ್ರಾದಾತ್ತಂ ನಿಬೋಧ ಜನಾಧಿಪ ।
ಷಷ್ಠಿಂ ಪುತ್ರಸಹಸ್ರಾಣಿ ಗೃಹ್ಣಾತ್ವೇಕಾ ತಪಸ್ವಿನೀ ।। ೧-೧೫-೪
ಏಕಂ ವಂಶಧರಂ ತ್ವೇಕಾ ಯಥೇಷ್ಟಂ ವರಯತ್ವಿತಿ ।
ಜನಾಧಿಪ! ಔರ್ವನು ಅವರಿಬ್ಬರಿಗೆ ನೀಡಿದ ವರವನ್ನು ಕೇಳು. “ತಪಸ್ವಿನಿ ಒಬ್ಬಳು ಅರವತ್ತು ಸಾವಿರ ಪುತ್ರರನ್ನು ಮತ್ತು ಇನ್ನೊಬ್ಬಳು ಒಬ್ಬನೇ ವಂಶಧರನನ್ನು ಸ್ವೀಕರಿಸಲಿ. ತಮಗಿಷ್ಟವಾದ ವರವನ್ನು ಕೇಳಲಿ” ಎಂದನು.
ತತ್ರೈಕಾ ಜಗೃಹೇ ಪುತ್ರಾನ್ಲುಬ್ಧಾ ಶೂರಾನ್ಬಹೂಂಸ್ತಥಾ ।। ೧-೧೫-೫
ಏಕಂ ವಂಶಧರಂ ತ್ವೇಕಾ ತಥೇತ್ಯಾಹ ಚ ತಾಂ ಮುನಿಃ ।
ಅವರಲ್ಲಿ ಲುಬ್ಧಳೋರ್ವಳು ಅನೇಕ ಶೂರಪುತ್ರರನ್ನೂ, ಒಬ್ಬಳು ವಂಶಧರನಾದ ಓರ್ವ ಪುತ್ರನನ್ನೂ ಕೇಳಿದರು. ಮುನಿಯು ಅವರಿಗೆ ಹಾಗೆಯ ಆಗಲಿ ಎಂದನು.
ಕೇಶಿನ್ಯಸೂತ ಸಗರಾದಸಮಂಜಸಮಾತ್ಮಜಮ್ ।। ೧-೧೫-೬
ರಾಜಾ ಪಂಚಜನೋ ನಾಮ ಬಭೂವ ಸುಮಹಾಬಲಃ ।
ಇತರಾ ಸುಷುವೇ ತುಮ್ಬೀಂ ಬೀಜಪೂರ್ಣಾಮಿತಿ ಶ್ರುತಿಃ ।। ೧-೧೫-೭
ಸಗರನಿಂದ ಕೇಶಿನಿಯು ಅಸಮಂಜಸನನ್ನು ಮಗನನ್ನಾಗಿ ಪಡೆದಳು. ಅವನು ಮಹಾಬಲ ಪಂಚಜನ ಎಂಬ ಹೆಸರಿನ ರಾಜನಾದನು. ಇನ್ನೊಬ್ಬಳು ಬೀಜಗಳಿಂದ ತುಂಬಿದ ಒಂದು ಕುಂಬಳಕಾಯಿಯನ್ನು ಹೆತ್ತಳೆಂದು ಪ್ರಸಿದ್ಧವಾಗಿದೆ.
ತತ್ರ ಷಷ್ಠಿಸಹಸ್ರಾಣಿ ಗರ್ಭಾಸ್ತೇ ತಿಲಸಮ್ಮಿತಾಃ ।
ಸಂಬಭೂವುರ್ಯಥಾಕಾಲಂ ವವೃಧುಶ್ಚ ಯಥಾಕ್ರಮಮ್ ।। ೧-೧೫-೮
ಆ ಕುಂಬಳಕಾಯಿಯಲ್ಲಿ ಎಳ್ಳಿನ ಗಾತ್ರದ ಅರವತ್ತು ಸಾವಿರ ಗರ್ಭಗಳಿದ್ದವು. ಯಥಾಕಾಲದಲ್ಲಿ ಮತ್ತು ಯಥಾಕ್ರಮವಾಗಿ ಅವುಗಳು ಬೆಳೆದವು.
ಘೃತಪೂರ್ಣೇಷು ಕುಂಭೇಷು ತಾನ್ಗರ್ಭಾನ್ನಿದಧೇ ಪಿತಾ ।
ಧಾತ್ರೀಶ್ಚೈಕೈಕಶಃ ಪ್ರಾದಾತ್ತಾವತೀರೇವ ಪೋಷಣೇ ।। ೧-೧೫-೯
ತಂದೆಯು ಆ ಗರ್ಭಗಳನ್ನು ತುಪ್ಪದಿಂದ ತುಂಬಿದ ಕೊಡಗಳಲ್ಲಿ ಇರಿಸಿದನು ಮತ್ತು ಒಂದೊಂದರ ಪೋಷಣೆಗೂ ಒಬ್ಬೊಬ್ಬಳು ಧಾತ್ರಿಯನ್ನು ಇರಿಸಿದನು.
ತತೋ ದಶಸು ಮಾಸೇಷು ಸಮುತ್ತಸ್ಥುರ್ಯಥಾಸುಖಮ್ ।
ಕುಮಾರಾಸ್ತೇ ಯಥಾಕಾಲಂ ಸಗರಪ್ರೀತಿವರ್ಧನಾಃ ।। ೧-೧೫-೧೦
ಹತ್ತು ಮಾಸಗಳ ನಂತರ ಯಥಾಕಾಲದಲ್ಲಿ ಯಥಾಸುಖವಾಗಿ ಸಗರನ ಪ್ರೀತಿಯನ್ನು ವರ್ಧಿಸುವ ಮಕ್ಕಳು ಹುಟ್ಟಿದರು.
ಷಷ್ಟಿಃ ಪುತ್ರಸಹಸ್ರಾಣಿ ತಸ್ಯೈವಮಭವನ್ನೃಪ ।
ಗರ್ಭಾದಲಾಬುಮಧ್ಯಾದ್ವೈ ಜಾತಾನಿ ಪೃಥಿವೀಪತೇ ।। ೧-೧೫-೧೧
ನೃಪ! ಪೃಥಿವೀಪತೇ! ಹೀಗೆ ಕುಂಬಳಕಾಯಿಯ ಒಳಗಿದ್ದ ಬೀಜಗಳಂತಿದ್ದ ಗರ್ಭದಿಂದ ಸಗರನಿಗೆ ಅರವತ್ತು ಸಾವಿರ ಪುತ್ರರಾದರು.
ತೇಷಾಂ ನಾರಾಯಣಂ ತೇಜಃ ಪ್ರವಿಷ್ಟಾನಾಂ ಮಹಾತ್ಮನಾಮ್ ।
ಏಕಃ ಪಂಚಜನೋ ನಾಮ ಪುತ್ರೋ ರಾಜಾ ಬಭೂವ ಹ ।। ೧-೧೫-೧೨
ಕಪಿಲ ರೂಪೀ ನಾರಾಯಣನ ತೇಜಸ್ಸಿನಿಂದ ಆ ಮಹಾತ್ಮರು ಭಸ್ಮೀಭೂತರಾದರು. ಪಂಚಜನ ಎಂಬ ಹೆಸರಿನ ಮಗನು ಓರ್ವನೇ ರಾಜನಾದನು.
ಸುತಃ ಪಂಚಜನಸ್ಯಾಸೀದಂಶುಮಾನ್ನಾಮ ವೀರ್ಯವಾನ್ ।
ದಿಲೀಪಸ್ತನಯಸ್ತಸ್ಯ ಖಟ್ವಾಂಗ ಇತಿ ವಿಶ್ರುತಃ ।। ೧-೧೫-೧೩
ಪಂಚಜನನಿಗೆ ಅಂಶುಮಾನ್ ಎಂಬ ವೀರ್ಯವಾನ್ ಪುತ್ರನಿದ್ದನು. ಅವನ ಮಗನು ಖಟ್ವಾಂಗ ಎಂದು ವಿಶ್ರುತನಾದ ದಿಲೀಪ.
ಯೇನ ಸ್ವರ್ಗಾದಿಹಾಗತ್ಯ ಮುಹೂರ್ತಂ ಪ್ರಾಪ್ಯ ಜೀವಿತಮ್ ।
ತ್ರಯೋಽನುಸಂಧಿತಾ ಲೋಕಾ ಬುದ್ಧ್ಯಾ ಸತ್ಯೇನ ಚಾನಘ ।। ೧-೧೫-೧೪
ಅನಘ! ದಿಲೀಪನು ಒಂದು ಮುಹೂರ್ತಕಾಲದ ಜೀವಿತವನ್ನು ಪಡೆದು ಸ್ವರ್ಗದಿಂದ ಇಲ್ಲಿಗೆ ಬಂದು ಬುದ್ಧಿ-ಸತ್ಯಗಳಿಂದ ಲೋಕಗಳನ್ನು ತತ್ತ್ವತಃ ತಿಳಿದುಕೊಂಡನು.
ದಿಲೀಪಸ್ಯ ತು ದಾಯಾದೋ ಮಹಾರಾಜೋ ಭಗೀರಥಃ ।
ಯಃ ಸ ಗಂಗಾಂ ಸರಿಚ್ಛ್ರೇಷ್ಠಾಮವಾತಾರಯತ ಪ್ರಭುಃ ।। ೧-೧೫-೧೫
ದಿಲೀಪನ ಮಗನು ಮಹಾರಾಜ ಪ್ರಭು ಭಗೀರಥ. ಅವನು ಸರಿತಶ್ರೇಷ್ಠೆ ಗಂಗೆಯನ್ನು ಸ್ವರ್ಗದಿಂದ ಭೂಮಿಗೆ ಇಳಿಸಿದನು.
ಕೀರ್ತಿಮಾನ್ಸ ಮಹಾಭಾಗಃ ಶಕ್ರತುಲ್ಯಪರಾಕ್ರಮಃ ।
ಸಮುದ್ರಮಾನಯಚ್ಚೈನಾಂ ದುಹಿತೃತ್ವೇನ ಕಲ್ಪಯತ್ ।
ತಸ್ಮಾದ್ಭಾಗೀರಥೀ ಗಂಗಾ ಕಥ್ಯತೇ ವಂಶಚಿಂತಕೈಃ ।। ೧-೧೫-೧೬
ಶಕ್ರನ ಸಮಾನ ಪರಾಕ್ರಮಿಯಾಗಿದ್ದ ಆ ಮಹಾಭಾಗ ಕೀರ್ತಿವಂತನು ಗಂಗೆಯನ್ನು ಸಮುದ್ರದವರೆಗೂ ಕೊಂಡೊಯ್ದು ಅವಳನ್ನು ತನ್ನ ಮಗಳನ್ನಾಗಿಸಿಕೊಂಡನು. ಆದುದರಿಂದ ವಂಶಕೀರ್ತನಕರು ಗಂಗೆಯನ್ನು ಭಾಗೀರಥೀ ಎಂದು ಕರೆಯುತ್ತಾರೆ.
ಭಗೀರಥಸುತೋ ರಾಜಾ ಶ್ರುತ ಇತ್ಯಭಿವಿಶ್ರುತಃ ।
ನಾಭಾಗಸ್ತು ಶ್ರುತಸ್ಯಾಸೀತ್ಪುತ್ರಃ ಪರಮಧಾರ್ಮಿಕಃ ।। ೧-೧೫-೧೭
ರಾಜಾ ಶ್ರುತನು ಭಗೀರಥನ ಮಗನಾಗಿ ಪ್ರಸಿದ್ಧನಾದನು. ಪರಮಧಾರ್ಮಿಕ ನಾಭಾಗನು ಶ್ರುತನ ಮಗನಾಗಿದ್ದನು.
ಅಂಬರೀಷಸ್ತು ನಾಭಾಗಿಃ ಸಿಂಧುದ್ವೀಪಪಿತಾಭವತ್ ।
ಅಯುತಾಜಿತ್ತು ದಾಯಾದಃ ಸಿಂಧುದ್ವೀಪಸ್ಯ ವೀರ್ಯವಾನ್ ।। ೧-೧೫-೧೮
ನಾಭಾಗನ ಪುತ್ರನು ಅಂಬರೀಷ. ಅವನು ಸಿಂಧುದ್ವೀಪದ ಪಿತನಾದನು. ಸಿಂಧುದ್ವೀಪನಿಗೆ ಅಯುತಾಜಿತ್ ಎಂಬ ವೀರ್ಯವಾನ್ ಪುತ್ರನಾದನು.
ಅಯುತಾಜಿತ್ಸುತಸ್ತ್ವಾಸೀದೃತುಪರ್ಣೋ ಮಹಾಯಶಾಃ ।
ದಿವ್ಯಾಕ್ಷಹೃದಯಜ್ಞೋ ವೈ ರಾಜಾ ನಲಸಖೋ ಬಲೀ ।। ೧-೧೫-೧೯
ಅಯುತಾಜಿತುವಿನ ಮಗನು ಮಹಾಯಶಸ್ವೀ, ದಿವ್ಯ ಅಕ್ಷಯಹೃದಯವನ್ನು ತಿಳಿದಿದ್ದ, ನಲ1ನ ಸಖ ಬಲಶಾಲೀ ರಾಜಾ ಋತುಪರ್ಣನಾಗಿದ್ದನು.
ಋತುಪರ್ಣಸುತಸ್ತ್ವಾಸೀದಾರ್ತಪರ್ಣಿರ್ಮಹೀಪತಿಃ ।
ಸುದಾಸಸ್ತಸ್ಯ ತನಯೋ ರಾಜಾ ತ್ವಿಂದ್ರಸಖೋಽಭವತ್ ।। ೧-೧೫-೨೦
ಋತುಪರ್ಣನ ಪುತ್ರ ಮಹೀಪತಿ ಆರ್ತಪರ್ಣಿಯು. ಅವನ ತನಯನು ರಾಜಾ ಸುದಾಸನು. ಅವನು ಇಂದ್ರನ ಸಖನಾದನು.
ಸುದಾಸಸ್ಯ ಸುತಸ್ತ್ವಾಸೀತ್ಸೌದಾಸೋ ನಾಮ ಪಾರ್ಥಿವಃ ।
ಖ್ಯಾತಃ ಕಲ್ಮಾಷಪಾದೋ ವೈ ನಾಮ್ನಾ ಮಿತ್ರಸಹಸ್ತಥಾ ।। ೧-೧೫-೨೧
ಸುದಾಸನ ಮಗ ಸೌದಾಸನೆಂಬ ರಾಜನು ಕಲ್ಮಾಷಪಾದ ಮತ್ತು ಮಿತ್ರಸಹ ಎಂಬ ಹೆಸರುಗಳಿಂದಲೂ ಖ್ಯಾತನಾದನು.
ಕಲ್ಮಾಷಪಾದಸ್ಯ ಸುತಃ ಸರ್ವಕರ್ಮೇತಿ ವಿಶ್ರುತಃ ।
ಅನರಣ್ಯಸ್ತು ಪುತ್ರೋಽಭೂದ್ವಿಶ್ರುತಃ ಸರ್ವಕರ್ಮಣಃ ।। ೧-೧೫-೨೨
ಕಲ್ಮಾಷಪಾದನ ಮಗನು ಸರ್ವಕರ್ಮ ಎಂದು ವಿಶ್ರುತನಾದನು. ಸರ್ವಕರ್ಮನ ಮಗನು ಅನರಣ್ಯ ಎಂದು ವಿಶ್ರುತನಾದನು.
ಅನರಣ್ಯಸುತೋ ನಿಘ್ನೋ ನಿಘ್ನಪುತ್ರೌ ಬಭೂವತುಃ ।
ಅನಿಮಿತ್ರೋ ರಘುಶ್ಚೈವ ಪಾರ್ಥಿವರ್ಷಭ ಸತ್ತಮೌ ।। ೧-೧೫-೨೩
ಅನರಣ್ಯನ ಮಗನು ನಿಘ್ನ. ನಿಘ್ನನಿಗೆ ಇಬ್ಬರು ಪಾರ್ಥಿವರ್ಷಭ ಸತ್ತಮ ಪುತ್ರರಾದರು: ಅನಮಿತ್ರ ಮತ್ತು ರಘು.
ಅನಮಿತ್ರಸ್ಯ ಧರ್ಮಾತ್ಮಾ ವಿದ್ವಾಂದುಲಿದುಹೋಽಭವತ್ ।
ದಿಲೀಪಸ್ತನಯಸ್ತಸ್ಯ ರಾಮಪ್ರಪ್ರಪಿತಾಮಹಃ ।। ೧-೧೫-೨೪
ಧರ್ಮಾತ್ಮಾ ಅನಮಿತ್ರನಿಗೆ ವಿದ್ವಾನ್ ದುಲಿದುಹನು ಪುತ್ರನಾದನು. ಅವನ ತನಯ ದಿಲೀಪನು ರಾಮನ ವೃದ್ಧ ಪ್ರಪಿತಾಮಹನಾಗಿದ್ದನು.
ದೀರ್ಘಬಾಹುರ್ದಿಲೀಪಸ್ಯ ರಘುರ್ನಾಮ್ನಾಭವತ್ಸುತಃ ।
ಅಯೋಧ್ಯಾಯಾಂ ಮಹಾರಾಜೋ ರಘುಶ್ಚಾಸೀನ್ಮಹಾಬಲಃ ।। ೧-೧೫-೨೫
ದೀರ್ಘಬಾಹು ದಿಲೀಪನಿಗೆ ರಘು ಎಂಬ ಹೆಸರಿನ ಪುತ್ರನಾದನು. ಮಹಾಬಲಿ ರಘುವು ಅಯೋಧ್ಯೆಯ ಮಹಾರಾಜನಾಗಿದ್ದನು.
ಅಜಸ್ತು ರಘುತೋ ಜಜ್ಞೇ ಅಜಾದ್ದಶರಥೋಽಭವತ್ ।
ರಾಮೋ ದಶರತಾಜ್ಜಜ್ಞೇ ಧರ್ಮಾತ್ಮಾ ಸುಮಹಾಯಶಾಃ ।। ೧-೧೫-೨೬
ರಘುವಿನಲ್ಲಿ ಅಜನು ಹುಟ್ಟಿದನು ಮತ್ತು ಅಜನಿಂದ ದಶರಥನು ಹುಟ್ಟಿದನು. ಧರ್ಮಾತ್ಮಾ ಸುಮಹಾಯಶಸ್ವೀ ರಾಮನು ದಶರಥನಿಂದ ಹುಟ್ಟಿದನು
ರಾಮಸ್ಯ ತನಯೋ ಜಜ್ಞೇ ಕುಶ ಇತ್ಯಭಿವಿಶ್ರುತಃ ।
ಅತಿಥಿಸ್ತು ಕುಶಾಜ್ಜಜ್ಞೇ ನಿಷಧಸ್ತಸ್ಯ ಚಾತ್ಮಜಃ ।। ೧-೧೫-೨೭
ರಾಮನ ತನಯನಾಗಿ ಕುಶನೆಂದು ವಿಶ್ರುತನಾದವನು ಹುಟ್ಟಿದನು. ಕುಶನಿಂದ ಅತಿಥಿಯು ಹುಟ್ಟಿದನು. ನಿಷಧನು ಅವನ ಮಗನಾದನು.
ನಿಷಧಸ್ಯ ನಲಃ ಪುತ್ರೋ ನಭಃ ಪುತ್ರೋ ನಲಸ್ಯ ತು ।
ನಭಸ್ಯ ಪುಂಡರೀಕಸ್ತು ಕ್ಷೇಮಧನ್ವಾ ತತಃ ಸ್ಮೃತಃ ।। ೧-೧೫-೨೮
ನಿಷಧನ ಪುತ್ರನು ನಲ. ನಭನು ನಲನ ಪುತ್ರ. ಪುಂಡರೀಕನು ನಭನ ಮಗ. ಮತ್ತು ಕ್ಷೇಮಧನ್ವನು ನಭನ ಮಗನಾದನು.
ಕ್ಷೇಮಧನ್ವಸುತಸ್ತ್ವಾಸೀದ್ದೇವಾನೀಕಃ ಪ್ರತಾಪವಾನ್ ।
ಆಸೀದಹೀನಗುರ್ನಾಮ ದೇವಾನೀಕಸುತಃ ಪ್ರಭುಃ ।। ೧-೧೫-೨೯
ಪ್ರತಾಪವಾನ್ ದೇವಾನೀಕನು ಕ್ಷೇಮಧನ್ವನ ಮಗನಾದನು. ಪ್ರಭು ಅಹೀನಗು ಎಂಬ ಹೆಸರಿನ ಪ್ರಭುವು ದೇವಾನೀಕನ ಮಗನಾದನು.
ಅಹೀನಗೋಸ್ತು ದಾಯಾದಃ ಸುಧನ್ವಾ ನಾಮ ಪಾರ್ಥಿವಃ ।
ಸುಧನ್ವನಃ ಸುತಶ್ಚೈವ ತತೋ ಜಜ್ಞೇಽನಲೋ ನೃಪಃ ।। ೧-೧೫-೩೦
ಸುಧನ್ವಾ ಎಂಬ ಹೆಸರಿನ ಪಾರ್ಥಿವನು ಅಹೀನಗುವಿನ ಮಗ. ನೃಪ ಅನಲನು ಸುಧನ್ವನ ಮಗನಾಗಿ ಜನಿಸಿದನು.
ಉಕ್ಥೋ ನಾಮ ಸ ಧರ್ಮಾತ್ಮಾನಲಪುತ್ರೋ ಬಭೂವ ಹ ।
ವಜ್ರನಾಭಃ ಸುತಸ್ತಸ್ಯ ಉಕ್ಥಸ್ಯ ಚ ಮಹಾತ್ಮನಃ ।। ೧-೧೫-೩೧
ಉಕ್ಥ ಎಂಬ ಹೆಸರಿನ ಧರ್ಮಾತ್ಮನು ಅನಲನ ಮಗನಾದನು. ಮಹಾತ್ಮ ವಜ್ರನಾಭನು ಉಕ್ಥನ ಮಗ.
ಶಂಖಸ್ತಸ್ಯ ಸುತೋ ವಿದ್ವಾನ್ವ್ಯುಷಿತಾಶ್ವ ಇತಿ ಶ್ರುತಃ ।
ಪುಷ್ಪಸ್ತಸ್ಯ ಸುತೋ ವಿದ್ವಾನರ್ಥಸಿದ್ಧಿಸ್ತು ತತ್ಸುತಃ ।। ೧-೧೫-೩೨
ವಜ್ರನಾಭನಿಗೆ ಶಂಖನೆಂಬ ಮಗನಾದನು. ಅವನು ವ್ಯುಷಿತಾಶ್ವ ಎಂಬ ಹೆಸರಿನಿಂದಲೂ ಪ್ರಸಿದ್ಧನಾದನು. ಅವನ ಮಗನು ವಿದ್ವಾನ್ ಪುಷ್ಪ. ಅರ್ಥಸಿದ್ಧಿಯು ಅವನ ಮಗ.
ಸುದರ್ಶನಃ ಸುತಸ್ತಸ್ಯ ಅಗ್ನಿವರ್ಣಃ ಸುದರ್ಶನಾತ್ ।
ಅಗ್ನಿವರ್ಣಸ್ಯ ಶೀಘ್ರಸ್ತು ಶೀಘ್ರಸ್ಯ ತು ಮರುಃ ಸುತಃ ।। ೧-೧೫-೩೩
ಅರ್ಥಸಿದ್ಧಿಯ ಮಗ ಸುದರ್ಶನ. ಅಗ್ನಿವರ್ಣನು ಸುದರ್ಶನನ ಮಗ. ಅಗ್ನಿವರ್ಣನ ಮಗ ಶೀಘ್ರ. ಶೀಘ್ರನ ಮಗ ಮರು.
ಮರುಸ್ತು ಯೋಗಮಾಸ್ಥಾಯ ಕಲಾಪದ್ವೀಪಮಾಸ್ಥಿತಃ ।
ತಸ್ಯಾಸೀದ್ವಿಶ್ರುತವತಃ ಪುತ್ರೋ ರಾಜ ಬೃಹದ್ಬಲಃ ।। ೧-೧೫-೩೪
ಮರುವು ಯೋಗವನ್ನಾಶ್ರಯಿಸಿ ಕಲಾಪದ್ವೀಪದಲ್ಲಿ ಇರತೊಡಗಿದನು. ಅವನಿಗೆ ವಿಶ್ರುತನಾದ ರಾಜ ಬೃಹದ್ಬಲನು ಪುತ್ರನಾದನು.
ನಲೌ ದ್ವಾವೇವ ವಿಖ್ಯಾತೌ ಪುರಾಣೇ ಭರತರ್ಷಭ ।
ವೀರಸೇನಾತ್ಮಜಶ್ಚೈವ ಯಶ್ಚೇಕ್ಷ್ವಾಕುಕುಲೋದ್ವಹಃ ।। ೧-೧೫-೩೫
ಭರತರ್ಷಭ! ಪುರಾಣಗಳಲ್ಲಿ ಇಬ್ಬರು ನಲರು ವಿಖ್ಯಾತರಾಗಿದ್ದರು: ವೀರಸೇನನ ಮಗ ನಲ ಮತ್ತು ಇಕ್ಷ್ವಾಕುಕುಲದಲ್ಲಿ ಹುಟ್ಟಿದ ನಿಷಧನ ಮಗ ನಲ.
ಇಕ್ಷ್ವಾಕುವಂಶಪ್ರಭವಾಃ ಪ್ರಾಧಾಣ್ಯೇನೇಹ ಕೀರ್ತಿತಾಃ ।
ಏತೇ ವಿವಸ್ವತೋ ವಂಶೇ ರಾಜಾನೋ ಭೂರಿತೇಜಸಃ ।। ೧-೧೫-೩೬
ಇಕ್ಷ್ವಾಕುವಂಶದಲ್ಲಿ ಹುಟ್ಟಿದ ಪ್ರಧಾನರನ್ನು ಇಲ್ಲಿ ವರ್ಣಿಸಿದ್ದೇನೆ. ಈ ಭೂರಿತೇಜಸ ರಾಜರು ವಿವಸ್ವತನ ವಂಶದಲ್ಲಿಯೇ ಹುಟ್ಟಿದವರು.
ಪಠನ್ಸಮ್ಯಗಿಮಾಂ ಸೃಷ್ಟಿಮಾದಿತ್ಯಸ್ಯ ವಿವಸ್ವತಃ ।
ಶ್ರಾದ್ಧದೇವಸ್ಯ ದೇವಸ್ಯ ಪ್ರಜಾನಾಂ ಪುಷ್ಟಿದಸ್ಯ ಚ ।। ೧-೧೫-೩೭
ಪ್ರಜಾವಾನೇತಿ ಸಾಯುಜ್ಯಮಾದಿತ್ಯಸ್ಯ ವಿವಸ್ವತಃ ।
ವಿಪಾಪ್ಮಾ ವಿರಜಾಶ್ಚೈವ ಆಯುಷ್ಮಾಂಶ್ಚ ಭವತ್ಯುತ ।। ೧-೧೫-೩೮
ಆದಿತ್ಯ ವಿವಸ್ವತನ ಸೃಷ್ಟಿ, ಪ್ರಜೆಗಳಿಗೆ ಪುಷ್ಟಿಯನ್ನೀಯುವ ಶ್ರಾದ್ಧದೇವ ದೇವನ ಸೃಷ್ಟಿ ಇವುಗಳನ್ನು ಪಠಣಮಾಡುವವನು ಸಂತಾನಯುಕ್ತನಾಗುತ್ತಾನೆ ಮತ್ತು ಆದಿತ್ಯನ ಸಾಯುಜ್ಯವನ್ನು ಪಡೆಯುತ್ತಾನೆ. ಅವನು ಪಾಪಗಳನ್ನು ಕಳೆದುಕೊಳ್ಳುತ್ತಾನೆ. ರಜೋಗುಣರಹಿತನಾಗಿ ಆಯುಷ್ಮಂತನೂ ಆಗುತ್ತಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶಪರ್ವಣಿ ಆದಿತ್ಯಸ್ಯ ವಂಶಾನುಕೀರ್ತನಂ ನಾಮ ಪಂಚದಶೋಽಧ್ಯಾಯಃ
-
ವೀರಸೇನನ ಮಗ ನಲ. ↩︎