ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 8
ಸಾರ
ಜನಮೇಜಯ ಉವಾಚ
ಮನ್ವಂತರಸ್ಯ ಸಂಖ್ಯಾನಂ ಯುಗಾನಾಂ ಚ ಮಹಾಮತೇ ।
ಬ್ರಹ್ಮಣೋಽಹ್ನಃ ಪ್ರಮಾಣಂ ಚ ವಕ್ತುಮರ್ಹಸಿ ಮೇ ದ್ವಿಜ ।। ೧-೮-೧
ಜನಮೇಜಯನು ಹೇಳಿದನು: “ಮಹಾಮತೇ! ದ್ವಿಜ! ನನಗೆ ಮನ್ವಂತರಗಳ ಮತ್ತು ಯುಗಗಳ ಸಂಖ್ಯೆಗಳನ್ನೂ ಬ್ರಹ್ಮನ ದಿನದ ಪ್ರಮಾಣವನ್ನು ಹೇಳಬೇಕು.”
ವೈಶಂಪಾಯನ ಉವಾಚ
ಅಹೋರಾತ್ರಂ ಭಜೇತ್ ಸೂರ್ಯೋ ಮಾನವಂ ಲೌಕಿಕಂ ಪರಮ್ ।
ತಾಮುಪಾದಾಯ ಗಣನಾಂ ಶೃಣು ಸಂಖ್ಯಾಮರಿಂದಮ ।। ೧-೮-೨
ವೈಶಂಪಾಯನನು ಹೇಳಿದನು: “ಅರಿಂದಮ! ಸೂರ್ಯನು ಮನುಷ್ಯನ ಹಗಲು-ರಾತ್ರಿಗಳನ್ನು ವಿಭಜಿಸುತ್ತಾನೆ. ಲೌಕಿಕವಾದ ಈ ಗಣನೆಯಿಂದ ಪ್ರಾರಂಭಿಸಿ ಮನ್ವಂತರ ಮತ್ತು ಯುಗಗಳ ಸಂಖ್ಯೆಗಳನ್ನು ಕೇಳು.
ನಿಮೇಷೈಃ ಪಂಚದಶಭಿಃ ಕಾಷ್ಠಾ ತ್ರಿಂಶತ್ತು ತಾಃ ಕಲಾಃ ।
ತ್ರಿಂಶತ್ಕಲೋ ಮುಹೂರ್ತಸ್ತು ತ್ರಿಂಶತಾ ತೈರ್ಮನೀಷಿಣಃ ।। ೧-೮-೩
ಅಹೋರಾತ್ರಮಿತಿ ಪ್ರಾಹುಶ್ಚಂದ್ರಸೂರ್ಯಗತಿಂ ನೃಪ ।
ವಿಶೇಷೇಣ ತು ಸರ್ವೇಷು ಅಹೋರಾತ್ರೇ ಚ ನಿತ್ಯಶಃ ।। ೧-೮-೪
ನೃಪ! ಹದಿನೈದು ನಿಮಿಷಗಳಿಗೆ ಒಂದು ಕಾಷ್ಠವಾಗುತ್ತದೆ. ಮೂವತ್ತು ಕಾಷ್ಠಗಳಿಗೆ ಒಂದು ಕಲವಾಗುತ್ತದೆ. ಮೂವತ್ತು ಕಲಗಳಿಗೆ ಒಂದು ಮುಹೂರ್ತವಾಗುತ್ತದೆ. ಮನೀಷಿಣರು ಮೂವತ್ತು ಮುಹೂರ್ತಗಳಿಗೆ ಚಂದ್ರ-ಸೂರ್ಯರ ಗತಿಯಿಂದ ಉಂಟಾಗುವ ಒಂದು ಹಗಲು-ರಾತ್ರಿಯೆಂದೂ ಹೇಳುತ್ತಾರೆ. ವಿಶೇಷವಾಗಿ ಎಲ್ಲರಿಗೂ ನಿತ್ಯವೂ ಹಗಲು-ರಾತ್ರಿಗಳಾಗುತ್ತವೆ.
ಅಹೋರಾತ್ರಾಃ ಪಂಚದಶ ಪಕ್ಷ ಇತ್ಯಭಿಶಬ್ದಿತಃ ।
ದ್ವೌ ಪಕ್ಷೌ ತು ಸ್ಮೃತೋ ಮಾಸೋ ಮಾಸೌ ದ್ವಾವೃತುರುಚ್ಯತೇ ।। ೧-೮-೫
ಹದಿನೈದು ಅಹೋರಾತ್ರಿಗಳಿಗೆ ಪಕ್ಷ ಎಂದು ಕರೆಯುತ್ತಾರೆ. ಎರಡು ಪಕ್ಷಗಳಿಗೆ ಒಂದು ಮಾಸವೆಂದೂ ಎರಡು ಮಾಸಗಳಿಗೆ ಒಂದು ಋತುವೆಂದೂ ಹೇಳುತ್ತಾರೆ.
ಅಬ್ದಂ ದ್ವ್ಯಯನಮುಕ್ತಂ ಚ ಅಯನಂ ತ್ವೃತುಭಿಸ್ತ್ರಿಭಿಃ ।
ದಕ್ಷಿಣಂ ಚೋತ್ತರಂ ಚೈವ ಸಂಖ್ಯಾತತ್ತ್ವವಿಶಾರದೈಃ ।। ೧-೮-೬
ಮೂರು ಋತುಗಳಿಗೆ ಒಂದು ಅಯನವೆಂದು ಹೇಳುತ್ತಾರೆ. ಮತ್ತು ಎರಡು ಅಯನಗಳಿಗೆ ಒಂದು ವರ್ಷವಾಗುತ್ತದೆ. ಸಂಖ್ಯಾತತ್ತ್ವವಿಶಾರದರು ಆ ಅಯನಗಳು ದಕ್ಷಿಣ ಮತ್ತು ಉತ್ತರ ಅಯನಗಳೆಂದು ಹೇಳುತ್ತಾರೆ.
ಮಾನೇನಾನೇನ ಯೋ ಮಾಸಃ ಪಕ್ಷದ್ವಯಸಮನ್ವಿತಃ ।
ಪಿತೄಣಾಂ ತದಹೋರಾತ್ರಮಿತಿ ಕಾಲವಿದೋ ವಿದುಃ ।। ೧-೮-೭
ಕಾಲವಿದರು ಎರಡು ಪಕ್ಷಗಳಿರುವ ಒಂದು ಮಾಸವನ್ನು ಪಿತೃಗಳ ಒಂದು ಅಹೋರಾತ್ರಿಯೆಂದು ಹೇಳುತ್ತಾರೆ.
ಕೃಷ್ಣಪಕ್ಷಸ್ತ್ವಹಸ್ತೇಷಾಂ ಶುಕ್ಲಪಕ್ಷಸ್ತು ಶರ್ವರೀ ।
ಕೃಷ್ಣಪಕ್ಷಂ ತ್ವಹಃ ಶ್ರಾದ್ಧಂ ಪಿತೄಣಾಂ ವರ್ತತೇ ನೃಪ ।। ೧-೮-೮
ನೃಪ! ಕೃಷ್ಣಪಕ್ಷವು ಪಿತೃಗಳ ಹಗಲೂ ಶುಕ್ಲಪಕ್ಷವು ಅವರ ರಾತ್ರಿಯೂ ಆಗಿರುತ್ತದೆ. ಆದುದರಿಂದ ಪಿತೃಗಳ ಶ್ರಾದ್ಧವು ಕೃಷ್ಣಪಕ್ಷದಲ್ಲಿ ನಡೆಯುತ್ತದೆ.
ಮಾನುಷೇಣ ತು ಮಾನೇನ ಯೋ ವೈ ಸಂವತ್ಸರಃ ಸ್ಮೃತಃ ।
ದೇವಾನಾಂ ತದಹೋರಾತ್ರಂ ದಿವಾ ಚೈವೋತ್ತರಾಯಣಮ್ ।
ದಕ್ಷಿಣಾಯನಂ ಸ್ಮೃತಾ ರಾತ್ರಿಃ ಪ್ರಾಜ್ಞೈಸ್ತತ್ತ್ವಾರ್ಥಕೋವಿದೈಃ ।। ೧-೮-೯
ಮನುಷ್ಯರ ಮಾಪನದ ಒಂದು ವರ್ಷವು ದೇವತೆಗಳ ಒಂದು ಅಹೋರಾತ್ರಿಯೆಂದು ಹೇಳುತ್ತಾರೆ. ಉತ್ತರಾಯಣವು ದೇವತೆಗಳ ಹಗಲೆಂದೂ ದಕ್ಷಿಣಾಯನವು ಅವರ ರಾತ್ರಿಯೆಂದೂ ತತ್ತ್ವಾರ್ಥಕೋವಿದ ಪ್ರಾಜ್ಞರು ಹೇಳುತ್ತಾರೆ.
ದಿವ್ಯಮಬ್ದಂ ದಶಗುಣಮಹೋರಾತ್ರಂ ಮನೋಃ ಸ್ಮೃತಮ್ ।
ಅಹೋರಾತ್ರಂ ದಶಗುಣಂ ಮಾನವಃ ಪಕ್ಷ ಉಚ್ಯತೇ ।। ೧-೮-೧೦
ದೇವತೆಗಳ ಹತ್ತು ವರ್ಷಗಳು ಮನುವಿನ ಒಂದು ಅಹೋರಾತ್ರಿಯೆಂದು ಹೇಳುತ್ತಾರೆ. ಹತ್ತುಗುಣ ಅಹೋರಾತ್ರಿಗಳನ್ನು ಮನುವಿನ ಪಕ್ಷವೆಂದು ಹೇಳುತ್ತಾರೆ.
ಪಕ್ಷೋ ದಶಗುಣೋ ಮಾಸೋ ಮಾಸೈರ್ದ್ವಾದಶಭಿರ್ಗುಣೈಃ ।
ಋತುರ್ಮನೂನಾಂ ಸಂಪ್ರೋಕ್ತಃ ಪ್ರಾಜ್ಞೈಸ್ತತ್ವಾರ್ಥದರ್ಶಿಭಿಃ ಋತುತ್ರಯೇಣ ತ್ವಯನಂ ತದ್ದ್ವಯೇನೈವ ವತ್ಸರಃ ।। ೧-೮-೧೧
ಮನುವಿನ ಹತ್ತು ಪಕ್ಷಗಳು ಅವರ ಒಂದು ಮಾಸವೆಂದೂ, ಹನ್ನೆರಡು ಮಾಸಗಳು ಅವರ ಒಂದು ಋತುವೆಂದೂ ತತ್ತ್ವಾರ್ಥದರ್ಶಿ ಪ್ರಾಜ್ಞರು ಹೇಳಿದ್ದಾರೆ. ಮೂರು ಋತುಗಳಿಗೆ ಒಂದು ಅಯನವೂ ಮತ್ತು ಎರಡು ಅಯನಗಳಿಗೆ ಮನುವಿನ ಒಂದು ಸಂವತ್ಸರವೆಂದೂ ಹೇಳುತ್ತಾರೆ.
ಚತ್ವಾರ್ಯೇವ ಸಹಸ್ರಾಣಿ ವರ್ಷಾಣಾಂ ತು ಕೃತಂ ಯುಗಮ್ ।
ತಾವಚ್ಛತೀ ಭವೇತ್ಸಂಧ್ಯಾ ಸಂಧ್ಯಾಂಶಶ್ಚ ತಥಾ ನೃಪ ।। ೧-೮-೧೨
ನೃಪ! ಕೃತಯುಗದಲ್ಲಿ ದೇವತೆಗಳ ನಾಲ್ಕುಸಾವಿರ ವರ್ಷಗಳಿರುತ್ತವೆ. ಕೃತಯುಗದ ಎರಡು ಸಂಧ್ಯಗಳಲ್ಲಿ ತಲಾ ನಾಲ್ನೂರು ದೇವವರ್ಷಗಳಿರುತ್ತವೆ.
ತ್ರೀಣಿ ವರ್ಷಸಹಸ್ರಾಣಿ ತ್ರೇತಾ ಸ್ಯಾತ್ ಪರಿಮಾಣತಃ ।
ತಸ್ಯಾಶ್ಚ ತ್ರಿಶತೀ ಸಂಧ್ಯಾ ಸಂಧ್ಯಾಂಶಶ್ಚ ತಥಾವಿಧಃ ।। ೧-೮-೧೩
ತ್ರೇತಾಯುಗದಲ್ಲಿ ದೇವತೆಗಳ ಮೂರುಸಾವಿರ ವರ್ಷಗಳಿರುತ್ತವೆಯೆಂದು ಹೇಳುತ್ತಾರೆ. ತ್ರೇತಾಯುಗದ ಎರಡು ಸಂಧ್ಯಗಳಲ್ಲಿ ಕೂಡ ತಲಾ ಮುನ್ನೂರು ದೇವವರ್ಷಗಳಿರುತ್ತವೆ.
ತಥಾ ವರ್ಷಸಹಸ್ರೇ ದ್ವೇ ದ್ವಾಪರಂ ಪರಿಕೀರ್ತಿತಮ್ ।
ತಸ್ಯಾಪಿ ದ್ವಿಶತೀ ಸಂಧ್ಯಾ ಸಂಧ್ಯಾಂಶಶ್ಚ ತಥಾವಿಧಃ ।। ೧-೮-೧೪
ದ್ವಾಪರಯುಗದಲ್ಲಿ ದೇವತೆಗಳ ಎರಡುಸಾವಿರ ವರ್ಷಗಳಿರುತ್ತವೆಯೆಂದು ಹೇಳುತ್ತಾರೆ. ದ್ವಾಪರಯುಗದ ಎರಡು ಸಂಧ್ಯಗಳಲ್ಲಿ ಕೂಡ ತಲಾ ಇನ್ನೂರು ದೇವವರ್ಷಗಳಿರುತ್ತವೆ.
ಕಲಿವರ್ಷಸಹಸ್ರಂ ಚ ಸಂಖ್ಯಾತೋಽತ್ರ ಮನೀಷಿಭಿಃ ।
ತಸ್ಯಾಪಿ ಶತಿಕಾ ಸಂಧ್ಯಾ ಸಂಧ್ಯಾಂಶಶ್ಚೈವ ತದ್ವಿಧಃ ।। ೧-೮-೧೫
ಕಲಿಯುಗದಲ್ಲಿ ದೇವತೆಗಳ ಒಂದು ಸಾವಿರ ವರ್ಷಗಳಿರುತ್ತವೆಯೆಂದು ಹೇಳುತ್ತಾರೆ. ಕಲಿಯುಗದ ಎರಡು ಸಂಧ್ಯಗಳಲ್ಲಿ ಕೂಡ ತಲಾ ಒಂದು ನೂರು ದೇವವರ್ಷಗಳಿರುತ್ತವೆ.
ಏಷಾ ದ್ವಾದಶಸಾಹಸ್ರೀ ಯುಗಸಂಖ್ಯಾ ಪ್ರಕೀರ್ತಿತಾ ।
ದಿವ್ಯೇನಾನೇನ ಮಾನೇನ ಯುಗಸಂಖ್ಯಾಂ ನಿಬೋಧ ಮೇ ।। ೧-೮-೧೬
ಹೀಗೆ ಒಂದು ಚತುರ್ಯುಗದ ಸಂಖ್ಯೆಯು ದೇವತೆಗಳ ಹನ್ನೆರಡು ಸಾವಿರ ವರ್ಷಗಳೆಂದು ಹೇಳಲಾಗಿದೆ. ಈ ಮಾಪನದಿಂದ ಯುಗಸಂಖ್ಯೆಗಳನ್ನು ತಿಳಿದುಕೋ1.
ಕೃತಂ ತ್ರೇತಾ ದ್ವಾಪರಂ ಚ ಕಲಿಶ್ಚೈವ ಚತುರ್ಯುಗೀ ।
ಯುಗಂ ತದೇಕಸಪ್ತತ್ಯಾ ಗಣಿತಂ ನೃಪಸತ್ತಮ ।। ೧-೮-೧೭
ಮನ್ವಂತರಮಿತಿ ಪ್ರೋಕ್ತಂ ಸಂಖ್ಯಾನಾರ್ಥವಿಶಾರದೈಃ ।
ಅಯನಂ ಚಾಪಿ ತತ್ಪ್ರೋಕ್ತಂ ದ್ವೇಽಯನೇ ದಕ್ಷಿಣೋತ್ತರೇ ।। ೧-೮-೧೮
ನೃಪಸತ್ತಮ! ಕೃತ, ತ್ರೇತಾ, ದ್ವಾಪರ ಮತ್ತು ಕಲಿಯುಗಗಳನ್ನು ಚತುರ್ಯುಗವೆಂದು ಕರೆಯುತ್ತಾರೆ. ಇಂತಹ ಎಪ್ಪತ್ತೊಂದು[2] ಚತುರ್ಯುಗಗಳು ಒಂದು ಮನ್ವಂತರವೆಂದು ಸಂಖ್ಯೆಗಳ ಅರ್ಥವಿಶಾರದರು ಲೆಖ್ಕಮಾಡಿ ಹೇಳುತ್ತಾರೆ. ಒಂದು ಮನ್ವಂತರಕ್ಕೂ ದಕ್ಷಿಣ-ಉತ್ತರಗಳೆಂಬ ಎರಡು ಅಯನಗಳನ್ನು ಹೇಳಿದ್ದಾರೆ.
ಮನುಃ ಪ್ರಲೀಯತೇ ಯತ್ರ ಸಮಾಪ್ತೇ ಚಾಯನೇ ಪ್ರಭೋಃ ।
ತತೋಽಪರೋ ಮನುಃ ಕಾಲಮೇತಾವಂತಂ ಭವತ್ಯುತ ।। ೧-೮-೧೯
ಉತ್ತರಾಯಣವು ಸಮಾಪ್ತವಾಗುತ್ತಲೇ ಮನುವು ಪ್ರಭು ಬ್ರಹ್ಮನಲ್ಲಿ ಲೀನನಾಗುತ್ತಾನೆ. ಅನಂತರ ಇನ್ನೊಬ್ಬ ಮನುವಿನ ಕಾಲವು ಪ್ರಾರಂಭವಾಗುತ್ತದೆ.
ಸಮತೀತೇಷು ರಾಜೇಂದ್ರ ಪ್ರೋಕ್ತಃ ಸಂವತ್ಸರಃ ಸ ವೈ ।
ತದೇವ ಚಾಯುತಂ ಪ್ರೋಕ್ತಂ ಮುನಿನಾ ತತ್ತ್ವದರ್ಶಿನಾ ।। ೧-೮-೨೦
ರಾಜೇಂದ್ರ! ತತ್ತ್ವದರ್ಶೀ ಮುನಿಗಳು ಒಂದು ಸಾವಿರ ಮನ್ವಂತರಗಳಿಗೆ ಬ್ರಹ್ಮನ ಒಂದು ವರ್ಷವೆಂದು ಹೇಳುತ್ತಾರೆ.
ಬ್ರಹ್ಮಣಸ್ತದಹಃ ಪ್ರೋಕ್ತಂ ಕಲ್ಪಶ್ಚೇತಿ ಸ ಕಥ್ಯತೇ ।
ಸಹಸ್ರಯುಗಪರ್ಯಂತಾ ಯಾ ನಿಶಾ ಪ್ರೋಚ್ಯತೇ ಬುಧೈಃ ।। ೧-೮-೨೧
ಬ್ರಹ್ಮನ ಒಂದು ಹಗಲು ಸಹಸ್ರ ದೇವ ಚತುರ್ಯುಗಗಳ ಒಂದು ಕಲ್ಪವೆಂದೂ ಹೇಳುತ್ತಾರೆ. ತಿಳಿದವರು ಅದೇ ರೀತಿ ಇನ್ನೊಂದು ಕಲ್ಪವು ಬ್ರಹ್ಮನ ರಾತ್ರಿಯೆಂದು ಹೇಳುತ್ತಾರೆ.
ನಿಮಜ್ಜತ್ಯಪ್ಸು ಯತ್ರೋರ್ವೀ ಸಶೈಲವನಕಾನನಾ ।
ತಸ್ಮಿನ್ ಯುಗಸಹಸ್ರೇ ತು ಪೂರ್ಣೇ ಭರತಸತ್ತಮ ।। ೧-೮-೨೨
ಭರತಸತ್ತಮ! ಬ್ರಹ್ಮನ ಹಗಲಾದ ಆ ಸಾವಿರ ದೇವಚತುರ್ಯುಗಗಳು ಪೂರ್ಣವಾಗಲು ಶೈಲವನಕಾನನಗಳ ಸಹಿತ ಈ ಭೂಮಿಯು ನೀರಿನಲ್ಲಿ ಮುಳುಗಿಹೋಗುತ್ತದೆ.
ಬ್ರಾಹ್ಮೇ ದಿವಸಪರ್ಯಂತೇ ಕಲ್ಪೋ ನಿಃಶೇಷ ಉಚ್ಯತೇ ।
ಯುಗಾನಿ ಸಪ್ತತಿಸ್ತಾನಿ ಸಾಗ್ರಾಣಿ ಕಥಿತಾನಿ ತೇ ।। ೧-೮-೨೩
ಬ್ರಹ್ಮನ ರಾತ್ರಿಯಾದ ಒಂದು ಕಲ್ಪವು ಕಳೆದನಂತರ ಅವನ ಇನ್ನೊಂದು ಹಗಲು ಪ್ರಾರಂಭವಾಗುತ್ತದೆ ಎನ್ನುತ್ತಾರೆ.
ಕೃತತ್ರೇತಾನಿಬದ್ಧಾನಿ ಮನೋರಂತರಮುಚ್ಯತೇ ।
ಚತುರ್ದಶೈತೇ ಮನವಃ ಕೀರ್ತಿತಾಃ ಕೀರ್ತಿವರ್ಧನಾಃ ।। ೧-೮-೨೪
ಎಪ್ಪತ್ತೊಂದು ಕೃತ-ತ್ರೇತಾದಿ ಚತುರ್ಯುಗಗಳಿಗೆ ಒಂದು ಮನ್ವಂತರವೆಂದು ಹೇಳುತ್ತಾರೆ. ಕೀರ್ತಿವರ್ಧಕ ಈ ಹದಿನಾಲ್ಕು ಮನುಗಳ ಕುರಿತು ಹೇಳಿದ್ದಾಗಿದೆ.
ವೇದೇಷು ಸಪುರಾಣೇಷು ಸರ್ವೇಷು ಪ್ರಭವಿಷ್ಣವಃ ।
ಪ್ರಜಾನಾಂ ಪತಯೋ ರಾಜಂಧನ್ಯಮೇಷಾಂ ಪ್ರಕೀರ್ತನಮ್ ।। ೧-೮-೨೫
ರಾಜನ್! ವೇದ-ಪುರಾಣಗಳಲ್ಲಿ ಈ ಎಲ್ಲ ಮನುಗಳ ವರ್ಣನೆಯಿದೆ. ಈ ಪ್ರಜಾಪತಿಗಳ ಕೀರ್ತನೆಯಿಂದ ಧನ್ಯರಾಗುತ್ತಾರೆ.
ಮನ್ವಂತರೇಷು ಸಂಹಾರಾಃ ಸಂಹಾರಾಂತೇಷು ಸಂಭವಾಃ ।
ನ ಶಕ್ಯಮಂತರಂ ತೇಷಾಂ ವಕ್ತುಂ ವರ್ಷಶತೈರಪಿ ।। ೧-೮-೨೬
ಸಹಸ್ರಾರು ಮನ್ವಂತರಗಳು ಕೊನೆಗೊಳ್ಳುತ್ತವೆ ಮತ್ತು ನಂತರ ಹುಟ್ಟಿಕೊಳ್ಳುತ್ತವೆ. ಆ ಮನ್ವಂತರಗಳ ಕುರಿತು ಹೇಳಲು ಒಂದು ವರ್ಷವೂ ಸಾಕಾಗುವುದಿಲ್ಲ.
ವಿಸರ್ಗಸ್ಯ ಪ್ರಜಾನಾಂ ವೈ ಸಂಹಾರಸ್ಯ ಚ ಭಾರತ ।
ಮನ್ವಂತರೇಷು ಸಂಹಾರಾಃ ಶ್ರೂಯಂತೇ ಭರತರ್ಷಭ ।। ೧-೮-೨೭
ಭಾರತ! ಭರತರ್ಷಭ! ಪ್ರತಿ ಮನ್ವಂತರಗಳಲ್ಲಿ ಪ್ರಜೆಗಳ ಸೃಷ್ಟಿ-ಸಂಹಾರಗಳಾಗುತ್ತವೆ ಎಂದು ಕೇಳಿಬರುತ್ತದೆ.
ಸಶೇಷಾಸ್ತತ್ರ ತಿಷ್ಠಂತಿ ದೇವಾಃ ಸಪ್ತರ್ಷಿಭಿಃ ಸಹ ।
ತಪಸಾ ಬ್ರಹ್ಮಚರ್ಯೇಣ ಶ್ರುತೇನ ಚ ಸಮಾಹಿತಾಃ ।। ೧-೮-೨೮
ಮನ್ವಂತರಗಳು ಕೊನೆಗೊಂಡರೂ ತಪಸ್ಸು-ಬ್ರಹ್ಮಚರ್ಯ-ವೇದಗಳಿಂದ ಸಮಾಹಿತರಾಗಿರುವ ದೇವತೆಗಳು ಸಪ್ತರ್ಷಿಗಳೊಂದಿಗೆ ಉಳಿದುಕೊಳ್ಳುತ್ತಾರೆ.
ಪೂರ್ಣೇ ಯುಗಸಹಸ್ರೇ ತು ಕಲ್ಪೋ ನಿಃಶೇಷ ಉಚ್ಯತೇ ।
ತತ್ರ ಸರ್ವಾಣಿ ಭೂತಾನಿ ದಗ್ಧಾನ್ಯಾದಿತ್ಯತೇಜಸಾ ।। ೧-೮-೨೯
ಸಹಸ್ರ ಚತುರ್ಯುಗಗಳ ಒಂದು ಕಲ್ಪವು ಪೂರ್ಣವಾಗಲು ನಿಃಶೇಷವಾಗಿ ಸರ್ವ ಭೂತಗಳೂ ಆದಿತ್ಯನ ತೇಜಸ್ಸಿನಿಂದ ಸುಟ್ಟುಹೋಗುತ್ತವೆ.
ಬ್ರಹ್ಮಾಣಮಗ್ರತಃ ಕೃತ್ವಾ ಸಹಾದಿತ್ಯಗಣೈರ್ವಿಭುಮ್ ।
ಯೋಗಂ ಯೋಗೀಶ್ವರಂ ದೇವಮಜಂ ಕ್ಷೇತ್ರಜ್ಞಮಚ್ಯುತಮ್ ।
ಪ್ರವಿಶಂತಿ ಸುರಶ್ರೇಷ್ಠಂ ಹರಿಂ ನಾರಾಯಣಂ ಪ್ರಭುಮ್ ।। ೧-೮-೩೦
ಬ್ರಹ್ಮನನ್ನು ಮುಂದಿಟ್ಟುಕೊಂಡು ಆದಿತ್ಯಗಣಗಳೊಂದಿಗೆ ಎಲ್ಲರೂ ವಿಭು, ಯೋಗ, ಯೋಗೀಶ್ವರ, ದೇವ, ಅಜ, ಕ್ಷೇತ್ರಜ್ಞ, ಅಚ್ಯುತ, ಸುರಶ್ರೇಷ್ಠ, ಪ್ರಭು, ಹರಿ ನಾರಾಯಣನನ್ನು ಪ್ರವೇಶಿಸುತ್ತಾರೆ.
ಯಃ ಸ್ರಷ್ಟಾ ಸರ್ವಭೂತಾನಾಂ ಕಲ್ಪಾಂತೇಷು ಪುನಃ ಪುನಃ ।
ಅವ್ಯಕ್ತಃ ಶಾಶ್ವತೋ ದೇವಸ್ತಸ್ಯ ಸರ್ವಮಿದಂ ಜಗತ್ ।। ೧-೮-೩೧
ಕಲ್ಪಗಳ ಕೊನೆಯಲ್ಲಿ ಯಾರು ಪುನಃ ಪುನಃ ಸರ್ವಭೂತಗಳ ಸೃಷ್ಟಿಯನ್ನು ಮಾಡುತ್ತಾನೋ ಆ ಅವ್ಯಕ್ತ ಶಾಶ್ವತ ದೇವನಿಗೇ ಈ ಜಗತ್ತೆಲ್ಲವೂ ಸೇರಿದೆ.
ತತ್ರ ಸಂವರ್ತತೇ ರಾತ್ರಿಃ ಸಕಲೈಕಾರ್ಣವೇ ತದಾ ।
ನಾರಾಯಣೋದರೇ ನಿದ್ರಾಂ ಬ್ರಾಹ್ಮ್ಯಂ ವರ್ಷಸಹಸ್ರಕಮ್ ।। ೧-೮-೩೨
ಎಲ್ಲವೂ ಏಕಾರ್ಣವದಲ್ಲಿ ಮುಳುಗಿರುವಾಗ ಬ್ರಹ್ಮನ ಸಹಸ್ರ ವರ್ಷಗಳ ರಾತ್ರಿಯಾಗುತ್ತದೆ. ಆಗ ನಾರಾಯಣನು ಯೋಗ ನಿದ್ರೆಯಲ್ಲಿರುತ್ತಾನೆ.
ತಾವಂತಮಿತಿ ಕಾಲಸ್ಯ ರಾತ್ರಿರಿತ್ಯಭಿಶಬ್ದಿತಾ ।
ನಿದ್ರಾಯೋಗಮನುಪ್ರಾಪ್ತೋ ಯಸ್ಯಾಂ ಶೇತೇ ಪಿತಾಮಹಃ ।। ೧-೮-೩೩
ಎಷ್ಟುಕಾಲದವರೆಗೆ ಪಿತಾಮನು ನಿದ್ರಾಯೋಗದಲ್ಲಿ ಮಲಗಿರುತ್ತಾನೋ ಅಷ್ಟು ಕಾಲವನ್ನು ಬ್ರಹ್ಮನ ರಾತ್ರಿಯೆಂದು ಹೇಳುತ್ತಾರೆ.
ಸಾ ಚ ರಾತ್ರಿರಪಕ್ರಾಂತಾ ಸಹಸ್ರಯುಗಪರ್ಯಯಾ ।
ತದಾ ಪ್ರಬುದ್ಧೋ ಭಗವಾನ್ಬ್ರಹ್ಮಾ ಲೋಕಪಿತಾಮಹಃ ।। ೧-೮-೩೪
ಆ ಸಹಸ್ರಯುಗಗಳ ರಾತ್ರಿಯು ಕಳೆಯಲು ಲೋಕಪಿತಾಮಹ ಭಗವಾನ್ ಬ್ರಹ್ಮನು ಎದ್ದೇಳುತ್ತಾನೆ.
ಪುನಃ ಸಿಸೃಕ್ಷಯಾ ಯುಕ್ತಃ ಸರ್ಗಾಯ ವಿದಧೇ ಮನಃ ।
ಸೈವ ಸ್ಮೃತಿಃ ಪುರಾಣೇಯಂ ತದ್ವೃತ್ತಂ ತದ್ವಿಚೇಷ್ಟಿತಮ್ ।। ೧-೮-೩೫
ಆಗ ಬ್ರಹ್ಮನು ಪುನಃ ಸೃಷ್ಟಿಮಾಡಲು ಬಯಸಿ ಮನಸ್ಸಿನಲ್ಲಿಯೇ ಸೃಷ್ಟಿಯ ಕುರಿತು ಯೋಚಿಸುತ್ತಾನೆ. ಆಗ ಅವನ ಚೇಷ್ಟೆ-ನಡತೆಗಳು ಹಿಂದಿನ ಕಲ್ಪದ ನೆನಪಿನಿಂದ ಹಾಗೆಯೇ ಇರುತ್ತದೆ.
ದೇವಸ್ಥಾನಾನಿ ತಾನ್ಯೇವ ಕೇವಲಂ ಚ ವಿಪರ್ಯಯಃ ।
ತತೋ ದಗ್ಧಾನಿ ಭೂತಾನಿ ಸರ್ವಾಣ್ಯಾದಿತ್ಯರಶ್ಮಿಭಿಃ ।। ೧-೮-೩೬
ದೇವರ್ಷಿಯಕ್ಷಗಂಧರ್ವಾಃ ಪಿಶಾಚೋರಗರಾಕ್ಷಸಾಃ ।
ಜಾಯಂತೇ ಚ ಪುನಸ್ತಾತ ಯುಗೇ ಭರತಸತ್ತಮ ।। ೧-೮-೩೭
ತಾತ! ಭರತಸತ್ತಮ! ಆದಿತ್ಯನ ರಶ್ಮಿಗಳಿಂದ ಸುಟ್ಟುಹೋಗಿದ್ದ ದೇವತೆಗಳು, ದೇವರ್ಷಿಗಳು, ಯಕ್ಷ-ಗಂಧರ್ವರು, ಪಿಶಾಚ-ಉರಗ-ರಾಕ್ಷಸರು ಪುನಃ ಮೊದಲಿನಂತೆಯೇ ಆದರೆ ಸ್ವಲ್ಪವೇ ವ್ಯತ್ಯಾಸಗೊಂಡು ಹೊಸಯುಗದಲ್ಲಿ ಹುಟ್ಟುತ್ತಾರೆ.
ಯಥರ್ತಾವೃತುಲಿಂಗಾನಿ ನಾನಾರೂಪಾಣಿ ಪರ್ಯಯೇ ।
ದೃಶ್ಯಂತೇ ತಾನಿ ತಾನ್ಯೇವ ತಥಾ ಬ್ರಾಹ್ಮೀಷು ರಾತ್ರಿಷು ।। ೧-೮-೩೮
ಹೇಗೆ ಆಯಾ ಋತುವು ಪ್ರಾರಂಭವಾದಾಗ ಅದರ ಚಿಹ್ನೆಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆಯೋ ಹಾಗೆ ಬ್ರಹ್ಮನ ರಾತ್ರಿಯು ಕಳೆಯಲು ಹಿಂದಿನ ಕಲ್ಪದ ಚಿಹ್ನೆಗಳೇ ಕಂಡುಬರುತ್ತವೆ.
ನಿಷ್ಕ್ರಮಿತ್ವಾ ಪ್ರಜಾಕಾರಃ ಪ್ರಜಾಪತಿರಸಂಶಯಮ್ ।
ಯೇ ಚ ವೈ ಮಾನವಾ ದೇವಾಃ ಸರ್ವೇ ಚೈವ ಮಹರ್ಷಯಃ ।। ೧-೮-೩೯
ತೇ ಸಂಗತಾಃ ಶುದ್ಧಸಂಗಾಃ ಶಶ್ವದ್ಧರ್ಮವಿಸರ್ಗತಃ ।
ನ ಭವಂತಿ ಪುನಸ್ತಾತ ಯುಗೇ ಭರತಸತ್ತಮ ।। ೧-೮-೪೦
ತಾತ! ಭರತಸತ್ತಮ! ಹಿಂದೆ ಇದ್ದ ಮಾನವರು, ದೇವತೆಗಳು, ಮಹರ್ಷಿಗಳು ಎಲ್ಲರೂ ಪ್ರಜೆಗಳನ್ನು ಸೃಷ್ಟಿಸುವ ಪ್ರಜಾಪತಿಯಿಂದ ಹೊರಬರುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಶರೀರಗಳ ಸ್ವಾಭಾವಿಕ ದೋಷಗಳನ್ನು ತ್ಯಜಿಸಿ ಶುದ್ಧ ಬ್ರಹ್ಮನಲ್ಲಿ ಲೀನನಾದವರು ಪುನಃ ಯುಗದಲ್ಲಿ ಹುಟ್ಟುವುದಿಲ್ಲ.
ತತ್ಸರ್ವಂ ಕ್ರಮಯೋಗೇನ ಕಾಲಸಂಖ್ಯಾವಿಭಾಗವಿತ್ ।
ಸಹಸ್ರಯುಗಸಂಖ್ಯಾನಂ ಕೄತ್ವಾ ದಿವಸಮೀಶ್ವರಃ ।। ೧-೮-೪೧
ರಾತ್ರಿಂ ಯುಗಸಹಸ್ರಾಂತಾಂ ಕೃತ್ವಾ ಚ ಭಗವಾನ್ ವಿಭುಃ ।
ಸಂಹರತ್ಯಥ ಭೂತಾನಿ ಸೃಜತೇ ಚ ಪುನಃ ಪುನಃ ।। ೧-೮-೪೨
ಕಾಲಸಂಖ್ಯೆಗಳ ವಿಭಾಗಗಳನ್ನು ತಿಳಿದಿರುವ ಈಶ್ವರ ಭಗವಾನ್ ವಿಭುವು ಯೋಗದಿಂದ ಕ್ರಮವಾಗಿ ಸಹಸ್ರಚತುರ್ಯುಗಗಳ ಹಗಲು ಮತ್ತು ಸಹಸ್ರಚತುರ್ಯುಗಗಳ ರಾತ್ರಿಯನ್ನು ಮಾಡಿಕೊಂಡು ಪುನಃ ಪುನಃ ಭೂತಗಳನ್ನು ಸೃಷ್ಟಿಸುತ್ತಿರುತ್ತಾನೆ ಮತ್ತು ಸಂಹರಿಸುತ್ತಿರುತ್ತಾನೆ.
ವ್ಯಕ್ತಾವ್ಯಕ್ತೋ ಮಹಾದೇವೋ ಹರಿರ್ನಾರಾಯಣಃ ಪ್ರಭುಃ ।
ತಸ್ಯ ತೇ ಕೀರ್ತಯಿಷ್ಯಾಮಿ ಮನೋರ್ವೈವಸ್ವತಸ್ಯ ಹ ।। ೧-೮-೪೩
ವ್ಯಕ್ತ, ಅವ್ಯಕ್ತ, ಮಹಾದೇವ, ಹರಿ, ನಾರಯಣ ಪ್ರಭುವಿನ ಅಂಶವೇ ಆದ ವೈವಸ್ವತ ಮನುವಿನ ಕುರಿತು ಹೇಳುತ್ತೇನೆ.
ವಿಸರ್ಗಂ ಭರತಶ್ರೇಷ್ಠ ಸಾಂಪ್ರತಸ್ಯ ಮಹಾದ್ಯುತೇ।
ವೃಷ್ಣಿವಂಶ್ಪ್ರಸಂಗೇನ ಕಥ್ಯಮಾನಂ ಪುರಾತನಮ್ ।। ೧-೮-೪೪
ಭರತಶ್ರೇಷ್ಠ! ಮಹಾದ್ಯುತೇ! ವೃಷ್ಣಿವಂಶದ ಕುರಿತು ಹೇಳುವ ಸಂದರ್ಭದಲ್ಲಿ ಅವನ ಪುರಾತನ ಸೃಷ್ಟಿಯ ಕುರಿತು ವರ್ಣಿಸುತ್ತೇನೆ.
ಯತ್ರೋತ್ಪನ್ನೋ ಮಹಾತ್ಮಾ ಸ ಹರಿರ್ವೃಷ್ಣಿಕುಲೇ ಪ್ರಭುಃ ।
ಸರ್ವಾಸುರವಿನಾಶಾಯ ಸರ್ವಲೋಕಹಿತಾಯ ಚ ।। ೧-೮-೪೫
ಸರ್ವ ಅಸುರರ ವಿನಾಶಕ್ಕಾಗಿ ಮತ್ತು ಸರ್ವಲೋಕಗಳ ಹಿತಕ್ಕಾಗಿ ಪ್ರಭು ಮಹಾತ್ಮಾ ಹರಿಯು ಇದೇ ವೃಷ್ಣಿಕುಲದಲ್ಲಿ ಉತ್ಪನ್ನನಾದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಮನ್ವಂತರಗಣನಾಯಾಮಷ್ಟಮೋಽಧ್ಯಾಯಃ
-
ಕೃತಯುಗ, ತ್ರೇತಾಯುಗ, ದ್ವಾಪರಯುಗ, ಮತ್ತು ಕಲಿಯುಗ ಇವುಗಳ ಒಂದು ಆವರ್ತನೆಯು ಒಂದು ಚತುರ್ಯುಗ. ಇವುಗಳ ಪ್ರಮಾಣ ಹನ್ನೆರಡು ಸಾವಿರ ದೇವವರ್ಷಗಳು. ಅರ್ಥಾತ್, ದೇವತೆಗಳ ಹತ್ತು ಸಾವಿರ ವರ್ಷಗಳು ಒಂದು ಚತುರ್ಯುಗ, ಒಂದು ಸಾವಿರ ವರ್ಷಗಳು ಚತುರ್ಯುಗದ ಸಂಧ್ಯೆ ಮತ್ತು ಇನ್ನೊಂದು ಸಾವಿರ ವರ್ಷಗಳು ಚತುರ್ಯುಗದ ಸಂಧ್ಯಾಂಶ. ↩︎