ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 1
ಸಾರ
ವೈಶಂಪಾಯನ ಉವಾಚ ಆಸೀದ್ಧರ್ಮಸ್ಯ ಗೋಪ್ತಾ ವೈ ಪೂರ್ವಮತ್ರಿಸಮಃ ಪ್ರಭುಃ ।
ಅತ್ರಿವಂಶಸಮುತ್ಪನ್ನಸ್ತ್ವಂಗೋ ನಾಮ ಪ್ರಜಾಪತಿಃ ।। ೧-೫-೧
ವೈಶಂಪಾಯನನು ಹೇಳಿದನು: “ಹಿಂದೆ ಅತ್ರಿವಂಶದಲ್ಲಿ ಹುಟ್ಟಿದ ಅತ್ರಿಯ ಸಮನಾದ ಧರ್ಮರಕ್ಷಕ ಅಂಗ ಎಂಬ ಹೆಸರಿನ ಪ್ರಭು ಪ್ರಜಾಪತಿಯಿದ್ದನು.
ತಸ್ಯ ಪುತ್ರೋಽಭವದ್ವೇನೋ ನಾತ್ಯರ್ಥಂ ಧರ್ಮಕೋವಿದಃ ।
ಜಾತೋ ಮೃತ್ಯುಸುತಾಯಾಂ ವೈ ಸುನೀಥಾಯಾಂ ಪ್ರಜಾಪತಿಃ ।। ೧-೫-೨
ಅವನ ಪುತ್ರನು ವೇನನಾದನು. ಆದರೆ ಅವನು ಧರ್ಮಾರ್ಥಕೋವಿದನಾಗಿರಲಿಲ್ಲ. ಆ ಪ್ರಜಾಪತಿಯು ಮೃತ್ಯುವಿನ ಮಗಳು ಸುನಥೆಯಲ್ಲಿ ಹುಟ್ಟಿದ್ದನು.
ಸ ಮಾತಾಮಹದೋಷೇಣ ವೇನಃ ಕಾಲಾತ್ಮಜಾತ್ಮಜಃ ।
ಸ್ವಧರ್ಮಂ ಪೃಷ್ಠತಃ ಕೃತ್ವಾ ಕಾಮಾಲ್ಲೋಭೇಷ್ವವರ್ತತ ।। ೧-೫-೩
ಕಾಲನ ಮಗಳಲ್ಲಿ ಹುಟ್ಟಿದ ವೇನನು ತನ್ನ ಮಾತಾಮಹನ ದೋಷದಿಂದ ಸ್ವಧರ್ಮವನ್ನು ಹಿಂದೆಹಾಕಿ ಕಾಮ-ಲೋಭಗಳಿಂದ ವರ್ತಿಸುತ್ತಿದ್ದನು.
ಮರ್ಯಾದಾಂ ಸ್ಥಾಪಯಾಮಾಸ ಧರ್ಮೋಪೇತಾಂ ಸ ಪಾರ್ಥಿವಃ ।
ವೇದಧರ್ಮಾನತಿಕ್ರಮ್ಯ ಸೋಽಧರ್ಮನಿರತೋಽಭವತ್ ।। ೧-೫-೪
ಆ ರಾಜನು ಧರ್ಮವಿಹೀನ ಮರ್ಯಾದೆಗಳನ್ನು ಸ್ಥಾಪಿಸತೊಡಗಿದನು. ವೇದಧರ್ಮಗಳನ್ನು ಅತಿಕ್ರಮಿಸಿ ಅವನು ಅಧರ್ಮದಲ್ಲಿ ನಿರತನಾದನು.
ನಿಃಸ್ವಾಧ್ಯಾಯವಷಟ್ಕಾರಾಸ್ತಸ್ಮಿನ್ರಾಜನಿ ಶಾಸತಿ ।
ಪ್ರವೃತ್ತಂ ನ ಪಪುಃ ಸೋಮಂ ಹುತಂ ಯಜ್ಞೇಷು ದೇವತಾಃ ।। ೧-೫-೫
ಆ ರಾಜನ ಶಾಸನಕಾಲದಲ್ಲಿ ಸ್ವಾಧ್ಯಾಯ-ವಷಟ್ಕಾರಗಳೇ ಇರಲಿಲ್ಲ. ಯಜ್ಞಗಳಲ್ಲಿ ಆಹುತಿಯನ್ನಾಗಿತ್ತ ಸೋಮವನ್ನು ಕುಡಿಯಲು ದೇವತೆಗಳಿಗೆ ಆಗುತ್ತಿರಲಿಲ್ಲ.
ನ ಯಷ್ಟವ್ಯಂ ನ ಹೋತವ್ಯಮಿತಿ ತಸ್ಯ ಪ್ರಜಾಪತೇಃ ।
ಆಸೀತ್ಪ್ರತಿಜ್ಞಾ ಕ್ರೂರೇಯಂ ವಿನಾಶೇ ಪ್ರತ್ಯುಪಸ್ಥಿತೇ ।। ೧-೫-೬
“ಯಜ್ಞಗಳನ್ನು ಮಾಡಬಾರದು! ಹೋಮಗಳನ್ನು ಮಾಡಬಾರದು!” ಎಂದು ಆ ಕ್ರೂರ ಪ್ರಜಾಪತಿಯ ಪ್ರತಿಜ್ಞೆಯಾಗಿತ್ತು. ಅವನ ವಿನಾಶವು ಬಹುಬೇಗ ಬಂದೊದಗಿತು.
ಅಹಮಿಜ್ಯಶ್ಚ ಯಷ್ಟಾ ಚ ಯಜ್ಞಶ್ಚೇತಿ ಕುರೂದ್ವಹ ।
ಮಯಿ ಯಜ್ಞೋ ವಿಧಾತವ್ಯೋ ಮಯಿ ಹೋತವ್ಯಮಿತ್ಯಪಿ ।। ೧-೫-೭
ಕುರೂದ್ವಹ! “ನಾನೇ ಯಜ್ಞಗಳ ಆರಾಧ್ಯ. ನಾನೇ ಯಜ್ಞ. ನನಗಾಗಿಯೇ ಯಜ್ಞಗಳನ್ನು ಮಾಡಬೇಕು. ನನಗಾಗಿಯೇ ಹವಿಸ್ಸನ್ನು ನೀಡಬೇಕು.” ಎಂದು ಅವನು ಹೇಳುತ್ತಿದ್ದನು.
ತಮತಿಕ್ರಾಂತಮರ್ಯಾದಮಾದದಾನಮಸಾಂಪ್ರತಮ್ ।
ಊಚುರ್ಮಹರ್ಷಯಃ ಸರ್ವೇ ಮರೀಚಿಪ್ರಮುಖಾಸ್ತದಾ ।। ೧-೫-೮
ಹೀಗೆ ಅವನು ಮರ್ಯಾದೆಗಳನ್ನು ಮುರಿದು ಅನುಚಿತ ಮಾರ್ಗಗಳಿಂದ ಎಲ್ಲವನ್ನೂ ತನ್ನದಾಗಿಸಿಕೊಳ್ಳಲು ತೊಡಗಿದಾಗ ಮರೀಚಿಯೇ ಮೊದಲಾದ ಮಹರ್ಷಿಗಳೆಲ್ಲರೂ ಅವನಿಗೆ ಹೇಳಿದರು:
ವಯಂ ದೀಕ್ಷಾಂ ಪ್ರವೇಕ್ಷ್ಯಾಮಃ ಸಂವತ್ಸರಗಣಾನ್ಬಹೂನ್ ।
ಅಧರ್ಮಂ ಕುರು ಮಾ ವೇನ ನೈಷ ಧರ್ಮಃ ಸನಾತನಃ ।। ೧-೫-೯
“ನಾವು ಅನೇಕ ವರ್ಷಗಳ ದೀಕ್ಷೆಯನ್ನು ಪ್ರವೇಶಿಸುತ್ತಿದ್ದೇವೆ. ವೇನ! ಈಗ ನೀನು ಅಧರ್ಮವನ್ನು ಮಾಡಬೇಡ. ನಿನ್ನದು ಸನಾತನ ಧರ್ಮವಲ್ಲ!
ನಿಧನೇಽತ್ರ ಪ್ರಸೂತಸ್ತ್ವಂ ಪ್ರಜಾಪತಿರಸಂಶಯಮ್ ।
ಪ್ರಜಾಶ್ಚ ಪಾಲಯಿಷ್ಯೇಽಹಮಿತಿ ತೇ ಸಮಯಃ ಕೃತಃ ।। ೧-೫-೧೦
ನೀನು ಪ್ರಜಾಪತಿಯ ಸಂಕುಲದಲ್ಲಿ ಹುಟ್ಟಿರುವೆ ಮತ್ತು “ಪ್ರಜೆಗಳನ್ನು ಪಾಲಿಸುತ್ತೇನೆ!” ಎಂಬ ಪ್ರತಿಜ್ಞೆಯನ್ನೂ ಮಾಡಿರುವೆ!”
ತಾಂಸ್ತದಾ ಬ್ರುವತಃ ಸರ್ವಾನ್ಮಹರ್ಷೀನಬ್ರವೀತ್ತದಾ ।
ವೇನಃ ಪ್ರಹಸ್ಯ ದುರ್ಬುದ್ಧಿರಿಮಮರ್ಥಮನರ್ಥವಿತ್ ।। ೧-೫-೧೧
ಹೀಗೆ ಹೇಳುತ್ತಿದ್ದ ಆ ಋಷಿಗಳೆಲ್ಲರಿಗೂ, ತಾನು ಅನರ್ಥವನ್ನು ಮಾಡಿಕೊಳ್ಳುತ್ತಿದ್ದೇನೆ ಎಂಬ ಅರಿವಿಲ್ಲದ ದುರ್ಬುದ್ಧಿ ವೇನನು ಜೋರಾಗಿ ನಕ್ಕು ಹೇಳಿದನು:
ವೇನ ಉವಾಚ
ಸ್ರಷ್ಟಾ ಧರ್ಮಸ್ಯ ಕಶ್ಚಾನ್ಯಃ ಶ್ರೋತವ್ಯಂ ಕಸ್ಯ ವೈ ಮಯಾ ।
ಶ್ರುತವೀರ್ಯತಪಃಸತ್ಯೈರ್ಮಯಾ ವಾ ಕಃ ಸಮೋ ಭುವಿ ।। ೧-೫-೧೨
ವೇನನು ಹೇಳಿದನು: “ಧರ್ಮವನ್ನು ಸೃಷ್ಟಿಸುವವನು ನಾನಲ್ಲದೇ ಬೇರೆ ಯಾರಿದ್ದಾರೆ? ನಾನು ಯಾರ ಮಾತನ್ನು ಕೇಳಬೇಕು? ವೇದ, ವೀರ್ಯ, ತಪಸ್ಸು ಮತ್ತು ಸತ್ಯಗಳಲ್ಲಿ ನನಗೆ ಸಮನಾಗಿರುವವರು ಈ ಭೂಮಿಯಲ್ಲಿ ಯಾರಿದ್ದಾರೆ?
ಪ್ರಭವಂ ಸರ್ವಭೂತಾನಾಂ ಧರ್ಮಾಣಾಂ ಚ ವಿಶೇಷತಃ ।
ಸಂಮೂಢಾ ನ ವಿದುರ್ನೂನಂ ಭವಂತೋ ಮಾಮಚೇತಸಃ ।। ೧-೫-೧೩
ಸರ್ವಭೂತಗಳ, ಅದರಲ್ಲೂ ವಿಶೇಷವಾಗಿ ಧರ್ಮಗಳ, ಉತ್ಪತ್ತಿಸ್ಥಾನನಾದ ನನ್ನನ್ನು ಚೆನ್ನಾಗಿ ತಿಳಿದುಕೊಳ್ಳದ ನೀವು ಅಚೇತಸರೂ ಸಮ್ಮೂಢರೂ ಆಗಿದ್ದೀರಿ.
ಇಚ್ಛಂದಹೇಯಂ ಪೃಥಿವೀಂ ಪ್ಲಾವಯೇಯಂ ತಥಾ ಜಲೈಃ ।
ಖಂ ಭುವಂ ಚೈವ ರುಂಧೇಯಂ ನಾತ್ರ ಕಾರ್ಯಾ ವಿಚಾರಣಾ ।। ೧-೫-೧೪
ನಾನು ಇಚ್ಛಿಸಿದರೆ ಈ ಪೃಥ್ವಿಯನ್ನು ಸುಡಬಲ್ಲೆ ಅಥವಾ ನೀರಿನಲ್ಲಿ ಮುಳಿಗಿಸಬಲ್ಲೆ! ಅಥವಾ ಈ ಆಕಾಶ-ಭೂಮಿಗಳೆರಡನ್ನೂ ಅಪ್ಪಳಿಸಬಲ್ಲೆ! ಈ ವಿಷಯದಲ್ಲಿ ವಿಚಾರಮಾಡಬೇಕಾದ್ದುದು ಏನೂ ಇಲ್ಲ.”
ಯದಾ ನ ಶಕ್ಯತೇ ಮೋಹಾದವಲೇಪಾಚ್ಚ ಪಾರ್ಥಿವಃ ।
ಅನುನೇತುಂ ತದಾ ವೇನಸ್ತತಃ ಕ್ರುದ್ಧಾ ಮಹರ್ಷಯಃ ।। ೧-೫-೧೫
ಮೋಹ-ದರ್ಪಗಳಿಂದ ಮೋಹಿತನಾಗಿದ್ದ ಪಾರ್ಥಿವ ವೇನನನ್ನು ಧರ್ಮಮಾರ್ಗಕ್ಕೆ ಕರೆತರಲು ಹೀಗೆ ಅಶಕ್ಯರಾದ ಮಹರ್ಷಿಗಳು ಕ್ರುದ್ಧರಾದರು.
ನಿಗೃಹ್ಯ ತಂ ಮಹಾತ್ಮಾನೋ ವಿಸ್ಫುರಂತಂ ಮಹಾಬಲಮ್ ।
ತತೋಽಸ್ಯ ಸವ್ಯಮೂರುಂ ತೇ ಮಮಂಥುರ್ಜಾತಮನ್ಯವಃ ।। ೧-೫-೧೬
ಹೀಗೆ ಬಡಬಡಿಸುತ್ತಿದ್ದ ಆ ಮಹಾಬಲನನ್ನು ಸಿಟ್ಟಿಗೆದ್ದ ಆ ಮಹಾತ್ಮ ಋಷಿಗಳು ಹಿಡಿದೆಳೆದು ಅವನ ಎಡ ತೊಡೆಯನ್ನು ಮಥಿಸಿದರು.
ತಸ್ಮಿಂಸ್ತು ಮಥ್ಯಮಾನೇ ವೈ ರಾಜ್ಞ ಊರೌ ಪ್ರ್ಜಜ್ಞಿವಾನ್ ।
ಹ್ರಸ್ವೋಽತಿಮಾತ್ರಃ ಪುರುಷಃ ಕೃಷ್ಣಶ್ಚಾತಿಬಭೂವ ಹ ।। ೧-೫-೧೭
ಮಥಿಸಲ್ಪಡುತ್ತಿದ್ದ ರಾಜನ ತೊಡೆಯಿಂದ ಗಿಡ್ಡನೂ, ಸಣ್ಣವನೂ ಮತ್ತು ಅತಿ ಕಪ್ಪಾಗಿರುವವನೂ ಆದ ಪುರುಷನೋರ್ವನು ಜನಿಸಿದನು.
ಸ ಭೀತಃ ಪ್ರಾಂಜಲಿರ್ಭೂತ್ವಾ ಸ್ಥಿತವಾಂಜನಮೇಜಯ ।
ತಮತ್ರಿರ್ವಿಹ್ವಲಂ ದೃಷ್ಟ್ವಾ ನಿಷೀದೇತ್ಯಬ್ರವೀತ್ತದಾ ।। ೧-೫-೧೮
ಜನಮೇಜಯ! ಭೀತನಾದ ಅವನು ಅಂಜಲೀ ಬದ್ಧನಾಗಿ ನಿಂತಿದ್ದನು. ಅತಿ ವಿಹ್ವಲನಾಗಿದ್ದ ಅವನನ್ನು ನೋಡಿ ಮಹರ್ಷಿಗಳು “ನಿಷೀದ!” ಅರ್ಥಾತ್ “ಕುಳಿತುಕೋ!” ಎಂದು ಹೇಳಿದರು.
ನಿಷಾದವಂಶಕರ್ತಾಸೌ ಬಭೂವ ವದತಾಂ ವರ ।
ಧೀವರಾನಸೃಜಚ್ಚಾಥ ವೇನಕಲ್ಮಷಸಂಭವಾನ್ ।। ೧-೫-೧೯
ಮಾತನಾಡುವವರಲ್ಲಿ ಶ್ರೇಷ್ಠ! ಅವನು ನಿಷಾದ ವಂಶದ ಕರ್ತಾರನಾದನು ಮತ್ತು ಧೀವರರಿಗೆ ಜನ್ಮವಿತ್ತನು ಅವರೆಲ್ಲರೂ ವೇನನ ಪಾಪದಿಂದ ಹುಟ್ಟಿದವರಾಗಿದ್ದರು.
ಯೇ ಚಾನ್ಯೇ ವಿಂಧ್ಯನಿಲಯಾಸ್ತುಷಾರಾಸ್ತುಂಬರಾಸ್ತಥಾ ।
ಅಧರ್ಮರುಚಯೋ ಯೇ ಚ ವಿದ್ಧಿ ತಾನ್ವೇನಸಂಭವಾನ್ ।। ೧-೫-೨೦
ವಿಂಧ್ಯಾಚಲದಲ್ಲಿ ವಾಸಿಸುವ ಮತ್ತು ಅಧರ್ಮದಲ್ಲಿ ರುಚಿಯನ್ನಿಟ್ಟುಕೊಂಡಿರುವ ಇನ್ನೂ ಇತರರು – ತುಷಾರರು ಮತ್ತು ತುಂಬುರರು – ವೇನನಿಂದ ಹುಟ್ಟಿದವರೆಂದು ತಿಳಿದುಕೋ.
ತತಃ ಪುನರ್ಮಹಾತ್ಮಾನಃ ಪಾಣಿಂ ವೇನಸ್ಯ ದಕ್ಷಿಣಮ್ ।
ಅರಣೀಮಿವ ಸಂರಬ್ಧಾ ಮಮಂಥುಸ್ತೇ ಮಹರ್ಷಯಃ ।। ೧-೫-೨೧
ಅನಂತರ ಕುಪಿತರಾದ ಆ ಮಹಾತ್ಮ ಮಹರ್ಷಿಗಳು ಪುನಃ ವೇನನ ಎಡಗೈಯನ್ನು ಅರಣಿಯಂತೆ ಮಥಿಸಿದರು.
ಪೃಥುಸ್ತಸ್ಮಾತ್ಸಮುತ್ತಸ್ಥೌ ಕರಾಜ್ಜ್ವಲನಸಂನಿಭಃ ।
ದೀಪ್ಯಮಾನಃ ಸ್ವವಪುಷಾ ಸಾಕ್ಷಾದಗ್ನಿರಿವ ಜ್ವಲನ್ ।। ೧-೫-೨೨
ಆ ಕೈಯಿಂದ ಅಗ್ನಿಯಂತೆ ಪ್ರಕಾಶಿಸುತ್ತಿದ್ದ ಪೃಥುವು ಉದ್ಭವಿಸಿದನು. ಅವನು ತನ್ನ ಶರೀರದ ಕಾಂತಿಯಲ್ಲಿ ಪ್ರಜ್ವಲಿಸುತ್ತಿದ್ದ ಅಗ್ನಿಯಂತೆಯೇ ಬೆಳಗುತ್ತಿದ್ದನು.
ಸ ಧನ್ವೀ ಕವಚೀ ಜಾತಃ ಪೃಥುರೇವ ಮಹಾಯಶಾಃ ।
ಆದ್ಯಮಾಜಗವಂ ನಾಮ ಧನುರ್ಗೃಹ್ಯ ಮಹಾರವಮ್ ।
ಶರಾಂಶ್ಚ ದಿವ್ಯಾನ್ರಕ್ಷಾರ್ಥಂ ಕವಚಂ ಚ ಮಹಾಪ್ರಭಮ್ ।। ೧-೫-೨೩
ಮಹಾಯಶಸ್ವೀ ಪೃಥುವು ಹುಟ್ಟುವಾಗಲೇ ಧನುಸ್ಸು-ಕವಚಗಳನ್ನು ಧರಿಸಿದ್ದನು. ರಕ್ಷಣೆಗಾಗಿ ಅವನು ಮಹಾಠೇಂಕಾರವುಳ್ಳ ಆಜಗವ ಎಂಬ ಪುರಾತನ ಧನುಸ್ಸನ್ನೂ, ದಿವ್ಯ ಶರಗಳನ್ನೂ ಮತ್ತು ಮಹಾಪ್ರಭೆಯಿದ್ದ ಕವಚವನ್ನೂ ಧರಿಸಿದ್ದನು.
ತಸ್ಮಿಂಜಾತೇಽಥ ಭೂತಾನಿ ಸಂಪ್ರಹೃಷ್ಟಾನಿ ಸರ್ವಶಃ ।
ಸಮಾಪೇತುರ್ಮಹಾರಾಜ ವೇನಶ್ಚ ತ್ರಿದಿವಂ ಗತಃ ।। ೧-೫-೨೪
ಮಹಾರಾಜ! ಅವನು ಹುಟ್ಟುತ್ತಲೇ ಎಲ್ಲ ಕಡೆಗಳಿಂದ ಸಂಪ್ರಹೃಷ್ಟ ಭೂತಗಳು ಅವನ ಬಳಿಸಾರಿದವು. ವೇನನು ತ್ರಿದಿವಕ್ಕೆ ತೆರಳಿದನು.
ಸಮುತ್ಪನ್ನೇನ ಕೌರವ್ಯ ಸತ್ಪುತ್ರೇಣ ಮಹಾತ್ಮನಾ ।
ತ್ರಾತಃ ಸ ಪುರುಷವ್ಯಾಘ್ರ ಪುನ್ನಾಮ್ನೋ ನರಕಾತ್ತದಾ ।। ೧-೫-೨೫
ಕೌರವ್ಯ! ಪುರುಷವ್ಯಾಘ್ರ! ಆ ಮಹಾತ್ಮ ಸತ್ಪುತ್ರನು ಹುಟ್ಟಿದುದರಿಂದ ವೇನನಿಗೆ “ಪು” ಎಂಬ ಹೆಸರಿನ ನರಕದಿಂದ ಬಿಡುಗಡೆಯಾಯಿತು.
ತಂ ಸಮುದ್ರಾಶ್ಚ ನದ್ಯಶ್ಚ ರತ್ನಾನ್ಯಾದಾಯ ಸರ್ವಶಃ ।
ತೋಯಾನಿ ಚಾಭಿಷೇಕಾರ್ಥಂ ಸರ್ವ ಏವೋಪತಸ್ಥಿರೇ ।। ೧-೫-೨೬
ಪೃಥುವಿನ ಅಭಿಷೇಕಕ್ಕಾಗಿ ಎಲ್ಲಕಡೆಗಳಿಂದ ಸಮುದ್ರಗಳು ಮತ್ತು ನದಿಗಳು ಜಲ-ರತ್ನಗಳನ್ನು ತೆಗೆದುಕೊಂಡು ಅಲ್ಲಿ ಉಪಸ್ಥಿತರಾದವು.
ಪಿತಾಮಹಶ್ಚ ಭಗವಾಂದೇವೈರಾಂಗಿರಸೈಃ ಸಹ ।
ಸ್ಥಾವರಾಣಿ ಚ ಭೂತಾನಿ ಜಂಗಮಾನಿ ತಥೈವ ಚ ।। ೧-೫-೨೭ ಸಮಾಗಮ್ಯ ತದಾ ವೈನ್ಯಮಭ್ಯಷಿಂಚನ್ನರಾಧಿಪಮ್ ।
ಮಹತಾ ರಾಜರಾಜ್ಯೇನ ಪ್ರಜಾಪಾಲಂ ಮಹಾದ್ಯುತಿಮ್ ।। ೧-೫-೨೮
ಅಂಗಿರಸನ ಪುತ್ರ-ಪೌತ್ರರೊಂದಿಗೆ ಭಗವಾನ್ ಪಿತಾಮಹ ಮತ್ತು ಎಲ್ಲ ಸ್ಥಾವರ-ಜಂಗಮ ಭೂತಗಳೂ ಅಲ್ಲಿಗೆ ಬಂದು ಮಹಾದ್ಯುತಿ ಪ್ರಜಾಪಾಲಕ ಮಹಾತ್ಮ ವೈನ್ಯನನ್ನು ರಾಜರಾಜ ನರಾಧಿಪನನ್ನಾಗಿ ಅಭಿಷೇಕಿಸಿದರು.
ಸೋಽಭಿಷಿಕ್ತೋ ಮಹಾತೇಜಾ ವಿಧಿವದ್ಧರ್ಮಕೋವಿದೈಃ ।
ಆದಿರಾಜ್ಯೇ ತದಾ ರಾಜ್ಞಾಂ ಪೃಥುರ್ವೈನ್ಯಃ ಪ್ರತಾಪವಾನ್ ।। ೧-೫-೨೯
ಹೀಗೆ ಧರ್ಮಕೋವಿದರಿಂದ ಆ ಮಹಾತೇಜಸ್ವೀ ಪ್ರತಾಪವಾನ್ ವೈನ್ಯ ಪೃಥುವು ಆದಿರಾಜನೆಂದು ಅಭಿಷಿಕ್ತನಾದನು.
ಪಿತ್ರಾಽಪರಂಜಿತಾಸ್ತಸ್ಯ ಪ್ರಜಾಸ್ತೇನಾನುರಂಜಿತಾಃ ।
ಅನುರಾಗಾತ್ತತಸ್ತಸ್ಯ ನಾಮ ರಾಜೇತ್ಯಜಾಯತ ।। ೧-೫-೩೦
ತಂದೆಯಿಂದ ಪೀಡಿತರಾದ ಪ್ರಜೆಗಳನ್ನು ಅವನು ಅನುರಂಜಿಸಿದನು. ಅವನ ಮೇಲೆ ಪ್ರಜೆಗಳ ಅನುರಾಗವಿದ್ದುದರಿಂದ ಅವನ ಹೆಸರು “ರಾಜಾ” ಎಂದಾಯಿತು.
ಆಪಸ್ತಸ್ತಂಭಿರೇ ಚಾಸ್ಯ ಸಮುದ್ರಮಭಿಯಾಸ್ಯತಃ ।
ಪರ್ವತಾಶ್ಚ ದದುರ್ಮಾರ್ಗಂ ಧ್ವಜಭಂಗಶ್ಚ ನಾಭವತ್ ।। ೧-೫-೩೧
ಅವನು ಸಮುದ್ರದ ಮೇಲೆ ಹೋಗುತ್ತಿರುವಾಗ ನೀರು ಸ್ತಂಭನಗೊಳ್ಳುತ್ತಿತ್ತು. ಆಕಾಶಮಾರ್ಗದಲ್ಲಿ ಹೋಗುವಾಗ ಪರ್ವತಗಳು ಅವನಿಗೆ ಮಾರ್ಗಮಾಡಿ ಕೊಡುತ್ತಿದ್ದವು. ಹೀಗೆ ಎಂದೂ ಅವನ ಧ್ವಜಭಂಗವಾಗಲಿಲ್ಲ.
ಅಕೃಷ್ಟಪಚ್ಯಾ ಪೃಥಿವೀ ಸಿಧ್ಯಂತ್ಯನ್ನಾನಿ ಚಿಂತಯಾ ।
ಸರ್ವಕಾಮದುಘಾ ಗಾವಃ ಪುಟಕೇ ಪುಟಕೇ ಮಧು ।। ೧-೫-೩೨
ಉತ್ತದೇ ಭೂಮಿಯು ಬೆಳೆಯನ್ನು ನೀಡುತ್ತಿತ್ತು. ಯೋಚಿಸಿದ ಕೂಡಲೇ ಆಹಾರ ಪದಾರ್ಥಗಳು ಸಿದ್ಧವಾಗುತ್ತಿದ್ದವು. ಗೋವುಗಳು ಸರ್ವಕಾಮನೆಗಳನ್ನೂ ಪೂರೈಸುತ್ತಿದ್ದವು. ಮರಗಳ ಎಲೆ-ಎಲೆಗಳಿಂದಲೂ ಮಧುರ ರಸವು ಸುರಿಯುತ್ತಿದ್ದವು.
ಏತಸ್ಮಿನ್ನೇವ ಕಾಲೇ ತು ಯಜ್ಞೇ ಪೈತಾಮಹೇ ಶುಭೇ ।
ಸೂತಃ ಸೂತ್ಯಾಂ ಸಮುತ್ಪನ್ನಃ ಸೌತ್ಯೇಽಹನಿ ಮಹಾಮತಿಃ ।। ೧-೫-೩೩
ಇವನ ಕಾಲದಲ್ಲಿಯೇ ಪಿತಾಮಹನ ಶುಭಯಜ್ಞದಲ್ಲಿ ಸೋಮದಿಂದ ಸೋಮರಸವನ್ನು ತೆಗೆಯುವ ದಿವಸ ಮಹಾಮತಿ ಸೂತನ ಜನ್ಮವಾಗಿತ್ತು.
ತಸ್ಮಿನ್ನೇವ ಮಹಾಯಜ್ಞೇ ಜಜ್ಞೇ ಪ್ರಾಜ್ಞೋಽಥ ಮಾಗಧಃ ।
ಪೃಥೋಃ ಸ್ತವಾರ್ಥಂ ತೌ ತತ್ರ ಸಮಾಹೂತೌ ಸುರರ್ಷಿಭಿಃ ।। ೧-೫-೩೪
ಅದೇ ಮಹಾಯಜ್ಞದಲ್ಲಿ ಪ್ರಾಜ್ಞ ಮಾಗಧನೂ ಹುಟ್ಟಿದನು. ಪೃಥುವನ್ನು ಸ್ತುತಿಸುವ ಸಲುವಾಗಿಯೇ ಸುರರ್ಷಿಗಳು ಸೂತ-ಮಾಗಧ ಇಬ್ಬರನ್ನೂ ಆವಾಹಿಸಿದ್ದರು.
ತಾವೂಚುರೃಷಯಃ ಸರ್ವೇ ಸ್ತೂಯತಾಮೇಷ ಪಾರ್ಥಿವಃ ।
ಕರ್ಮೈಸ್ತದನುರೂಪಂ ವಾಂ ಪಾತ್ರಂ ಚಾಯಂ ನರಾಧಿಪಃ ।। ೧-೫-೩೫
ಋಷಿಗಳೆಲ್ಲರೂ ಅವರಿಬ್ಬರಿಗೆ “ಈ ಪಾರ್ಥಿವನನ್ನು ಸ್ತುತಿಸಿ. ಈ ಕರ್ಮವು ನಿಮಗೆ ಅನುರೂಪವಾಗಿದೆ ಮತ್ತು ಈ ನಾರಧಿಪನೂ ಸ್ತುತಿಗಳಿಗೆ ಪಾತ್ರನಾಗಿದ್ದಾನೆ” ಎಂದರು.
ತಾವೂಚತುಸ್ತದಾ ಸರ್ವಾಂಸ್ತಾನೃಷೀನ್ ಸೂತಮಾಗಧೌ ।
ಆವಾಂ ದೇವಾನೃಷೀಂಶ್ಚೈವ ಪ್ರೀಣಯಾವಃ ಸ್ವಕರ್ಮಭಿಃ ।। ೧-೫-೩೬
ಆಗ ಆ ಸೂತ-ಮಾಗಧರು ಸರ್ವ ಋಷಿಗಳಿಗೆ ಹೇಳಿದರು: “ನಾವು ನಮ್ಮ ಕರ್ಮಗಳಿಂದ ದೇವತೆಗಳ ಮತ್ತು ಋಷಿಗಳನ್ನು ಪ್ರೀತಗೊಳಿಸುತ್ತೇವೆ.
ನ ಚಾಸ್ಯ ವಿದ್ಮೋ ವೈ ಕರ್ಮ ನ ತಥಾ ಲಕ್ಷಣಂ ಯಶಃ ।
ಸ್ತೋತ್ರಂ ಯೇನಾಸ್ಯ ಕುರ್ಯಾವ ರಾಜ್ಞಸ್ತೇಜಸ್ವಿನೋ ದ್ವಿಜಾಃ ।। ೧-೫-೩೭
ಆದರೆ ದ್ವಿಜರೇ! ನಾವು ಯಾರ ಸ್ತೋತ್ರವನ್ನು ಮಾಡಬೇಕೋ ಆ ರಾಜನ ಕರ್ಮಗಳು, ಲಕ್ಷಣಗಳು ಮತ್ತು ಯಶಸ್ಸುಗಳು ಯಾವುವೂ ನಮಗೆ ತಿಳಿದಿಲ್ಲ.”
ಋಷಿಭಿಸ್ತೌ ನಿಯುಕ್ತೌ ಚ ಭವಿಷ್ಯೈಃ ಸ್ತೂಯತಾಮಿತಿ ।
ಯಾನಿ ಕರ್ಮಾಣಿ ಕೃತವಾನ್ಪೃಥುಃ ಪಶ್ಚಾನ್ಮಹಾಬಲಃ ।। ೧-೫-೩೮
ಆಗ ಋಷಿಗಳು “ಮುಂದೆ ಆಗುವುದನ್ನು ಸ್ತುತಿಸಿ!” ಎಂದು ಅವರನ್ನು ನಿಯುಕ್ತಗೊಳಿಸಿದರು. ಆಗ ಸೂತ-ಮಾಗಧರು ಏನೆಂದು ಸ್ತುತಿಗೈದರೋ ನಂತರ ಅದರಂತೆಯೇ ಮಹಾಬಲ ಪೃಥುವು ನಡೆದುಕೊಳ್ಳುತ್ತಿದ್ದನು.
ಸತ್ಯವಾಗ್ದಾನಶೀಲೋಽಯಂ ಸತ್ಯಸಂಧೋ ನರೇಶ್ವರಃ ।
ಶ್ರೀಮಾಂಜೈತ್ರಃ ಕ್ಷಮಾಶೀಲೋ ವಿಕ್ರಾಂತೋ ದುಷ್ಟಶಾಸನಃ ।। ೧-೫-೩೯
ಸೂತ-ಮಾಗಧರು ಈ ರೀತಿ ಪೃಥುವಿನ ಸ್ತುತಿಗೈದರು: “ಈ ನರೇಶ್ವರನು ಸತ್ಯವಾದಿಯೂ, ದಾನಶೀಲನೂ, ಸತ್ಯಸಂಧನೂ, ಶ್ರೀಮಂತನೂ, ವಿಜಯಶಾಲಿಯೂ, ಕ್ಷಮಾಶೀಲನೂ, ವಿಕ್ರಾಂತನೂ ಮತ್ತು ದುಷ್ಟಶಾಸನನೂ ಆಗಿದ್ದಾನೆ.
ಧರ್ಮಜ್ಞಶ್ಚ ಕೃತಜ್ಞಶ್ಚ ದಯಾವಾನ್ಪ್ರಿಯಭಾಷಣಃ ।
ಮಾನ್ಯೋ ಮಾನಯಿತಾ ಯಜ್ವಾ ಬ್ರಹ್ಮಣ್ಯಃ ಸತ್ಯಸಂಗರಃ ।। ೧-೫-೪೦
ಇವನು ಧರ್ಮಜ್ಞನೂ, ಕೃತಜ್ಞನೂ, ದಯಾವಂತನೂ, ಪ್ರಿಯಭಾಷಣನೂ, ಮಾನ್ಯನೂ, ಇತರರನ್ನು ಗೌರವಿಸುವವನೂ, ಯಜ್ಞಗಳನ್ನು ಮಾಡುವವನೂ, ಬ್ರಾಹ್ಮಣ ಪ್ರಿಯನೂ ಸತ್ಯಸಂಗರನೂ ಆಗಿದ್ದಾನೆ.
ಶಮಃ ಶಾಂತಶ್ಚ ನಿರತೋ ವ್ಯವಹಾರಸ್ಥಿತೋ ನೃಪಃ ।
ತತಃ ಪ್ರಭೃತಿ ಲೋಕೇಷು ಸ್ತವೇಷು ಜನಮೇಜಯ ।
ಆಶೀರ್ವಾದಾಃ ಪ್ರಯುಜ್ಯಂತೇ ಸೂತಮಾಗಧಬಂದಿಭಿಃ ।। ೧-೫-೪೧
ಈ ರಾಜನು ಶಮಾವಂತ, ಶಾಂತ ಮತ್ತು ತನ್ನ ವ್ಯವಹಾರಗಳಲ್ಲಿ ನಿರತನಾಗಿರುವವನು.” ಜನಮೇಜಯ! ಅಂದಿನಿಂದ ಲೋಕದಲ್ಲಿ ಸೂತ-ಮಾಗಧ-ಬಂದಿಗಳಿಂದ ಸ್ತುತಿ ಮತ್ತು ಆಶೀರ್ವಾದಗಳ ಪದ್ಧತಿಯು ಪ್ರಾರಂಭವಾಯಿತು.
ತಯೋಃ ಸ್ತವೈಸ್ತೈಃ ಸುಪ್ರೀತಃ ಪೃಥುಃ ಪ್ರಾದಾತ್ಪ್ರಜೇಶ್ವರಃ ।
ಅನೂಪದೇಶಂ ಸೂತಾಯ ಮಗಧಾನ್ಮಾಗಧಾಯ ಚ ।। ೧-೫-೪೨
ಅವರ ಸ್ತುತಿಗಳಿಂದ ಸಂಪ್ರೀತನಾದ ಪ್ರಜೇಶ್ವರ ಪೃಥುವು ಸೂತನಿಗೆ ಅನೂಪ ದೇಶವನ್ನೂ ಮಾಗಧನಿಗೆ ಮಗಧ ದೇಶವನ್ನೂ ನೀಡಿದನು.
ತಂ ದೃಷ್ಟ್ವಾ ಪರಮಪ್ರೀತಾಃ ಪ್ರಜಾಃ ಪ್ರಾಹುರ್ಮಹರ್ಷಯಃ ।
ವೃತ್ತೀನಾಮೇಷ ವೋ ದಾತಾ ಭವಿಷ್ಯತಿ ಜನೇಶ್ವರಃ ।। ೧-೫-೪೩
ಅದನ್ನು ಕಂಡು ಪರಮಪ್ರೀತರಾದ ಮಹರ್ಷಿಗಳು ಪ್ರಜೆಗಳಿಗೆ “ಈ ಜನೇಶ್ವರನು ನಿಮಗೆ ವೃತ್ತಿಗಳನ್ನು ನೀಡುವವನಾಗುತ್ತಾನೆ!” ಎಂದು ಹೇಳಿದರು.
ತತೋ ವೈನ್ಯಂ ಮಹಾರಾಜ ಪ್ರಜಾಃ ಸಮಭಿದುದ್ರುವುಃ ।
ತ್ವಂ ನೋ ವೃತ್ತಿಂ ವಿಧತ್ಸ್ವೇತಿ ಮಹರ್ಷಿವಚನಾತ್ತದಾ ।। ೧-೫-೪೪
ಮಹಾರಾಜ! ಮಹರ್ಷಿಗಳು ಹೀಗೆ ಹೇಳಲು ಪ್ರಜೆಗಳು ವೈನ್ಯನ ಬಳಿ ಓಡಿ ಬಂದು “ನಮಗೆ ವೃತ್ತಿಯನ್ನು ವಿಧಿಸು!” ಎಂದು ಕೇಳಿಕೊಂಡರು.
ಸೋಽಭಿದ್ರುತಃ ಪ್ರಜಾಭಿಸ್ತು ಪ್ರಜಾಹಿತಚಿಕೀರ್ಷಯಾ ।
ಧನುರ್ಗೃಹ್ಯ ಪೃಷತ್ಕಾಂಶ್ಚ ಪೃಥಿವೀಮಾರ್ದ್ದಯದ್ಬಲೀ ।। ೧-೫-೪೫
ಹಾಗೆ ಪ್ರಜೆಗಳು ಬಂದು ಕೇಳಿಕೊಳ್ಳಲು ಪ್ರಜೆಗಳ ಹಿತವನ್ನು ಮಾಡಲು ಬಯಸಿದ ಬಲಶಾಲೀ ಪೃಥುವು ಧನುರ್ಬಾಣಗಳನ್ನು ಹಿಡಿದು ಪೃಥ್ವಿಯನ್ನು ಕಾಡಿಸಿದನು.
ತತೋ ವೈನ್ಯಭಯತ್ರಸ್ತಾ ಗೌರ್ಭೂತ್ವಾ ಪ್ರಾದ್ರವನ್ಮಹೀ ।
ತಾಂ ಪೃಥುರ್ಧನುರಾದಾಯ ದ್ರವಂತೀಮನ್ವಧಾವತ ।। ೧-೫-೪೬
ಆಗ ವೈನ್ಯನ ಭಯದಿಂದ ನಡುಗಿದ ಮಹಿಯು ಗೋವಾಗಿ ಓಡಿಹೋದಳು. ಓಡಿ ಹೋಗುತ್ತಿದ್ದ ಅವಳನ್ನು ಪೃಥುವು ಧನುವನ್ನೆತ್ತಿಕೊಂಡು ಬೆನ್ನಟ್ಟಿದನು.
ಸಾ ಲೋಕಾನ್ಬ್ರಹ್ಮಲೋಕಾದೀನ್ಗತ್ವಾ ವೈನ್ಯಭಯಾತ್ತದಾ ।
ಪ್ರದದರ್ಶಾಗ್ರತೋ ವೈನ್ಯಂ ಪ್ರಗೃಹೀತಶರಾಸನಮ್ ।। ೧-೫-೪೭ ಜ್ವಲದ್ಭಿರ್ನಿಶಿತೈರ್ಬಾಣೈರ್ದೀಪ್ತತೇಜಸಮಚ್ಯುತಮ್ ।
ಮಹಾಯೋಗಂ ಮಹಾತ್ಮಾನಂ ದುರ್ಧರ್ಷಮಮರೈರಪಿ ।। ೧-೫-೪೮
ವೈನ್ಯನ ಭಯದಿಂದ ಬ್ರಹ್ಮಲೋಕವೇ ಮೊದಲಾದ ಲೋಕಗಳಿಗೆ ಹೋದರೂ ಧನುಸ್ಸು ಮತ್ತು ಪ್ರಜ್ವಲಿತ ನಿಶಿತ ಬಾಣಗಳನ್ನು ಹಿಡಿದು ತೇಜಸ್ಸಿನಿಂದ ಬೆಳಗುತ್ತಿದ್ದ ಅಚ್ಯುತ ಮಹಾಯೋಗಿ ಮಹಾತ್ಮ ಅಮರರಿಗೂ ದುರ್ಧರ್ಷ ವೈನ್ಯನನ್ನು ಅವಳು ಎದಿರು ಕಾಣುತ್ತಿದ್ದಳು.
ಅಲಭಂತೀ ತು ಸಾ ತ್ರಾಣಂ ವೈನ್ಯಮೇವಾನ್ವಪದ್ಯತ ।
ಕೃತಾಂಜಲಿಪುಟಾ ಭೂತ್ವಾ ಪೂಜ್ಯಾ ಲೋಕೈಸ್ತ್ರಿಭಿಃ ಸದಾ ।। ೧-೫-೪೯ ಉವಾಚ ವೈನ್ಯಂ ನಾಧರ್ಮ್ಯಂ ಸ್ತ್ರೀವಧಂ ಕರ್ತುಮರ್ಹಸಿ ।
ಕಥಂ ಧಾರಯಿತಾ ಚಾಸಿ ಪ್ರಜಾ ರಾಜನ್ ವಿನಾ ಮಯಾ ।। ೧-೫-೫೦
ತ್ರಾತರನ್ನು ಕಾಣದೇ ತ್ರಿಲೋಕಗಳಿಂದಲೂ ಸದಾ ಪೂಜಿತ ಪೃಥ್ವಿಯು ಅಂಜಲೀ ಬದ್ಧಳಾಗಿ ವೈನ್ಯನನ್ನೇ ಮೊರೆಹೊಕ್ಕು, ವೈನ್ಯನಿಗೆ ಹೇಳಿದಳು: “ರಾಜನ್! ಅಧರ್ಮವಾದ ಸ್ತ್ರೀವಧೆಯನ್ನು ಮಾಡಬೇಡ. ನಾನಿಲ್ಲದೇ ಹೋದರೆ ಪ್ರಜೆಗಳು ಎಲ್ಲಿ ವಾಸಿಸುತ್ತಾರೆ?
ಮಯಿ ಲೋಕಾಃ ಸ್ಥಿತಾ ರಾಜನ್ಮಯೇದಂ ಧಾರ್ಯತೇ ಜಗತ್ ।
ಮದ್ವಿನಾಶೇ ವಿನಶ್ಯೇಯುಃ ಪ್ರಜಾಃ ಪಾರ್ಥಿವ ವಿದ್ಧಿ ತತ್ ।। ೧-೫-೫೧
ರಾಜನ್! ನನ್ನಲ್ಲಿಯೇ ಲೋಕಗಳು ನೆಲೆಗೊಂಡಿವೆ ಮತ್ತು ನಾನೇ ಈ ಜಗತ್ತನ್ನು ಧರಿಸಿದ್ದೇನೆ. ಪಾರ್ಥಿವ! ನಾನು ವಿನಾಶವಾದರೆ ಪ್ರಜೆಗಳೂ ವಿನಾಶವಾಗುತ್ತಾರೆ ಎನ್ನುವುದನ್ನು ತಿಳಿದುಕೋ.
ನ ತ್ವಮರ್ಹಸಿ ಮಾಂ ಹಂತುಂ ಶ್ರೇಯಶ್ಚೇತ್ತ್ವಂ ಚಿಕೀರ್ಷಸಿ ।
ಪ್ರಜಾನಾಂ ಪೃಥಿವೀಪಾಲ ಶೃಣು ಚೇದಂ ವಚೋ ಮಮ ।। ೧-೫-೫೨
ಪೃಥಿವೀಪಾಲ! ಪ್ರಜೆಗಳ ಶ್ರೇಯಸ್ಸನ್ನು ಬಯಸುವೆಯಾದರೆ ನನ್ನನ್ನು ನೀನು ಕೊಲ್ಲಬಾರದು. ನನ್ನ ಈ ಮಾತನ್ನು ಕೇಳು.
ಉಪಾಯತಃ ಸಮಾರಬ್ಧಾಃ ಸರ್ವೇ ಸಿಧ್ಯಂತ್ಯುಪಕ್ರಮಾಃ ।
ಉಪಾಯಂ ಪಶ್ಯ ಯೇನ ತ್ವಂ ಧಾರಯೇಥಾಃ ಪ್ರಜಾ ನೃಪ ।। ೧-೫-೫೩
ಉಪಾಯದಿಂದ ಪ್ರಾರಂಭಗೊಂಡ ಎಲ್ಲ ಕಾರ್ಯಗಳೂ ಸಿದ್ಧಿಗೊಳ್ಳುತ್ತವೆ. ನೃಪ! ಪ್ರಜೆಗಳ ಪಾಲನೆಯ ಕುರಿತಾದ ಉಪಾಯವನ್ನು ಯೋಚಿಸು.
ಹತ್ವಾಪಿ ಮಾಂ ನ ಶಕ್ತಸ್ತ್ವಂ ಪ್ರಜಾ ಧಾರಯಿತುಂ ನೃಪ ।
ಅನುಭೂತಾ ಭವಿಷ್ಯಾಮಿ ಯಚ್ಛ ಕೋಪಂ ಮಹಾದ್ಯುತೇ ।। ೧-೫-೫೪
ನೃಪ! ಮಹಾದ್ಯುತೇ! ನನ್ನನ್ನು ಕೊಂದೂ ಕೂಡ ನೀನು ಪ್ರಜೆಗಳನ್ನು ಪಾಲಿಸಲು ಶಕ್ಯನಾಗುವುದಿಲ್ಲ. ನಿನ್ನ ಕೋಪವನ್ನು ನೀಗಿಸು. ನೀನು ಹೇಳಿದಂತೆಯೇ ಮಾಡುತ್ತೇನೆ.
ಅವಧ್ಯಾಸ್ಚ ಸ್ತ್ರಿಯಃ ಪ್ರಾಹುಸ್ತಿರ್ಯಗ್ಯೋನಿಗತೇಷ್ವಪಿ ।
ಸತ್ತ್ವೇಷು ಪೃಥಿವೀಪಾಲ ನ ಧರ್ಮಂ ತ್ಯಕ್ತುಮರ್ಹಸಿ ।। ೧-೫-೫೫
ಪೃಥಿವೀಪಾಲ! ತಿರ್ಯಗ್ಯೋನಿಗಳಲ್ಲಿಯೂ ಸ್ತ್ರೀಯು ಅವಧ್ಯಳೆನೆಸಿಕೊಂಡಿದ್ದಾಳೆ. ಆದುದರಿಂದ ನೀನು ಧರ್ಮವನ್ನು ತ್ಯಜಿಸಬೇಡ.”
ಏವಂ ಬಹುವಿಧಂ ವಾಕ್ಯಂ ಶ್ರುತ್ವಾ ರಾಜಾ ಮಹಾಮನಾಃ ।
ಕೋಪಂ ನಿಗೃಹ್ಯ ಧರ್ಮಾತ್ಮಾ ವಸುಧಾಮಿದಮಬ್ರವೀತ್ ।। ೧-೫-೫೬
ಈ ರೀತಿಯ ಬಹುವಿಧದ ಮಾತನ್ನು ಕೇಳಿ ಮಹಾಮನಸ್ವಿ ಧರ್ಮಾತ್ಮ ರಾಜನು ಕೋಪವನ್ನು ನಿಯಂತ್ರಿಸಿಕೊಂಡು ವಸುಧೆಗೆ ಈ ರೀತಿ ಹೇಳಿದನು.
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಪೃಥೂಪಾಖ್ಯಾನೇ ಪಂಚಮೋಽಧ್ಯಾಯಃ