004: ಪೃಥೂಪಾಖ್ಯಾನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 4

ಸಾರ

19004001 ವೈಶಂಪಾಯನ ಉವಾಚ ।
19004001a ಅಭಿಷಿಚ್ಯಾಧಿರಾಜ್ಯೇ ತು ಪೃಥುಂ ವೈನ್ಯಂ ಪಿತಾಮಹಃ ।
19004001c ತತಃ ಕ್ರಮೇಣ ರಾಜ್ಯಾನಿ ವ್ಯಾದೇಷ್ಟುಮುಪಚಕ್ರಮೇ ।।

ವೈಶಂಪಾಯನನು ಹೇಳಿದನು: “ಪಿತಾಮಹನು ವೈನನ ಮಗ ಪೃಥುವನ್ನು ಅಧಿರಾಜನಾಗಿ ಅಭಿಷೇಕಿಸಿ ಕ್ರಮೇಣ ರಾಜ್ಯಗಳನ್ನು ಹಂಚಲು ಉಪಕ್ರಮಿಸಿದನು.

19004002a ದ್ವಿಜಾನಾಂ ವೀರುಧಾಂ ಚೈವ ನಕ್ಷತ್ರಗ್ರಹಯೋಸ್ತಥಾ ।
19004002c ಯಜ್ಞಾನಾಂ ತಪಸಾಂ ಚೈವ ಸೋಮಂ ರಾಜ್ಯೇಽಭ್ಯಷೇಚಯತ್ ।।

ಸೋಮನನ್ನು ದ್ವಿಜರು, ಸಸ್ಯಗಳು, ನಕ್ಷತ್ರಗಳು, ಗ್ರಹಗಳು, ಯಜ್ಞಗಳು ಮತ್ತು ತಪಸ್ಸಿನ ರಾಜ್ಯಾಧಿಕಾರಿಯನ್ನಾಗಿ ಅಭಿಷೇಕಿಸಿದನು.

19004003a ಅಪಾಂ ತು ವರುಣಂ ರಾಜ್ಯೇ ರಾಜ್ಞಾಂ ವೈಶ್ರವಣಂ ಪ್ರಭುಮ್ ।
19004003c ಬೃಹಸ್ಪತಿಂ ತು ವಿಶ್ವೇಷಾಂ ದದಾವಾಂಗಿರಸಂ ಪತಿಮ್ ।।

ಜಲದ ರಾಜನನ್ನಾಗಿ ವರುಣನನ್ನೂ, ಯಕ್ಷರ ರಾಜನನ್ನಾಗಿ ಪ್ರಭು ವೈಶ್ರವಣ ಕುಬೇರನನ್ನೂ, ಮತ್ತು ವಿಶ್ವೇದೇವರ ರಾಜನನ್ನಾಗಿ ಆಂಗಿರಸ ಕುಲದಲ್ಲಿ ಹುಟ್ಟಿದ ಬೃಹಸ್ಪತಿಯನ್ನು ಮಾಡಿದನು.

19004004a ಭೃಗೂಣಾಮಧಿಪಂ ಚೈವ ಕಾವ್ಯಂ ರಾಜ್ಯೇಽಭ್ಯಷೇಹಯತ್ ।
19004004c ಆದಿತ್ಯಾನಾಂ ತಥಾ ವಿಷ್ಣುಂ ವಸೂನಾಮಥ ಪಾವಕಮ್ ।।

ಭೃಗುಗಳ ಅಧಿಪತಿಯಾಗಿ ಕಾವ್ಯನನ್ನೂ, ಆದಿತ್ಯರ ಅಧಿಪತಿಯಾಗಿ ವಿಷ್ಣುವನ್ನೂ, ಮತ್ತು ವಸುಗಳ ಅಧಿಪತಿಯಾಗಿ ಪಾವಕನನ್ನೂ ಅಭಿಷೇಕಿಸಿದನು.

19004005a ಪ್ರಜಾಪತೀನಾಂ ದಕ್ಷಂ ತು ಮರುತಾಮಥ ವಾಸವಮ್ ।
19004005c ದೈತ್ಯಾನಾಂ ದಾನವಾನಾಂ ಚ ಪ್ರಹ್ಲಾದಮಮಿತೌಜಸಮ್ ।।
19004006a ವೈವಸ್ವತಂ ಚ ಪಿತೄಣಾಂ ಯಮಂ ರಾಜ್ಯೇಽಭ್ಯಷೇಚಯತ್ ।

ದಕ್ಷನನ್ನು ಪ್ರಜಾಪತಿಗಳ, ವಾಸವನನ್ನು ಮರುತ್ತರ, ಅಮಿತೌಜಸ ಪ್ರಹ್ಲಾದನನ್ನು ದೈತ್ಯರ, ಮತ್ತು ವಿವಸ್ವತನ ಮಗ ಯಮನನ್ನು ಪಿತೃಗಳ ರಾಜನನ್ನಾಗಿ ಅಭಿಷೇಕಿಸಿದನು.

19004006c ಮಾತೄಣಾಂ ಚ ವ್ರತಾನಾಂ ಚ ಮಂತ್ರಾಣಾಂ ಚ ತಥಾ ಗವಾಮ್ ।।
19004007a ಯಕ್ಷಾಣಾಂ ರಾಕ್ಷಸಾನಾಂ ಚ ಪಾರ್ಥಿವಾನಾಂ ತಥೈವ ಚ ।
19004007c ನಾರಾಯಣಂ ತು ಸಾಧ್ಯಾನಾಂ ರುದ್ರಾಣಾಂ ವೃಷಭಧ್ವಜಮ್ ।।

ಮಾತೃಗಳ, ವ್ರತಗಳ, ಮಂತ್ರಗಳ, ಗೋವುಗಳ, ಯಕ್ಷ-ರಾಕ್ಷಸರ ಪಾರ್ಥಿವರ, ಮತ್ತು ಸಾಧ್ಯರ ರಾಜನನ್ನಾಗಿ ನಾರಾಯಣನನ್ನೂ ವೃಷಭಧ್ವಜನನ್ನು ರುದ್ರರ ರಾಜನನ್ನಾಗಿಯೂ ಅಭಿಷೇಕಿಸಿದನು.

19004008a ವಿಪ್ರಚಿತ್ತಿಂ ತು ರಾಜಾನಂ ದಾನವಾನಾಮಥಾದಿಶತ್ ।
19004008c ಸರ್ವಭೂತಪಿಶಾಚಾನಾಂ ಗಿರಿಶಂ ಶೂಲಪಾಣಿನಮ್ ।।

ವಿಪ್ರಚಿತ್ತಿಗೆ ದಾನವರ ರಾಜನಾಗಲು ಆದೇಶವಿತ್ತನು ಮತ್ತು ಸರ್ವ ಭೂತ-ಪಿಶಾಚಿಗಳ ರಾಜನಾಗಿ ಗಿರಿಶ ಶೂಲಪಾಣಿಯನ್ನು ನಿಯೋಜಿಸಿದನು.

19004009a ಶೈಲಾನಾಂ ಹಿಮವಂತಂ ಚ ನದೀನಾಮಥ ಸಾಗರಮ್ ।
19004009c ಗಂಧಾನಾಂ ಮರುತಾಂ ಚೈವ ಭೂತಾನಾಮಶರೀರಿಣಾಮ್ ।
19004009e ಶಬ್ದಾಕಾಶವತಾಂ ಚೈವ ವಾಯುಂ ಚ ಬಲಿನಾಂ ವರಮ್ ।।

ಹಿಮವಂತನನ್ನು ಶೈಲಗಳ ರಾಜನಾಗಿಯೂ, ಸಾಗರನನ್ನು ನದಿಗಳ ರಾಜನನ್ನಾಗಿಯೂ, ಮರುತ್ತರನ್ನು ಗಂಧಗಳ ರಾಜರಾಗಿಯೂ, ಅಶರೀರ ಭೂತಗಳಾದ ಶಬ್ಧ-ಆಕಾಶಗಳಿಗೆ ಬಲಿಗಳಲ್ಲಿ ಶ್ರೇಷ್ಠ ವಾಯುವನ್ನು ರಾಜನನ್ನಾಗಿಯೂ ಅಭಿಷೇಕಿಸಿದನು.

19004010a ಗಂಧರ್ವಾಣಾಮಧಿಪತಿಂ ಚಕ್ರೇ ಚಿತ್ರರಥಂ ಪ್ರಭುಮ್ ।
19004010c ನಾಗಾನಾಂ ವಾಸುಕಿಂ ಚಕ್ರೇ ಸರ್ಪಾಣಾಮಥ ತಕ್ಷಕಮ್ ।।

ಗಂಧರ್ವರ ಅಧಿಪತಿಯನ್ನಾಗಿ ಪ್ರಭು ಚಿತ್ರರಥನನ್ನು ಮಾಡಲಾಯಿತು. ವಾಸುಕಿಯನ್ನು ನಾಗಗಳ ಮತ್ತು ತಕ್ಷಕನನ್ನು ಸರ್ಪಗಳ ಅಧಿಪತಿಗಳನ್ನಾಗಿ ಮಾಡಲಾಯಿತು.

19004011a ವಾರಣಾನಾಂ ಚ ರಾಜಾನಮೈರಾವತಮಥಾದಿಶತ್ ।
19004011c ಉಚ್ಚೈಃಶ್ರವಸಮಶ್ವಾನಾಂ ಗರುಡಂ ಚೈವ ಪಕ್ಷಿಣಾಮ್ ।।

ಆನೆಗಳ ರಾಜನಾಗಿ ಐರಾವತಕ್ಕೆ ಆದೇಶವನ್ನು ನೀಡಲಾಯಿತು. ಅಶ್ವಗಳಿಗೆ ಉಚ್ಛೈಃಶ್ರವನನ್ನೂ ಪಕ್ಷಿಗಳಿಗೆ ಗರುಡನನ್ನೂ ರಾಜರನ್ನಾಗಿ ಅಭಿಷೇಕಿಸಿದನು.

19004012a ಮೃಗಾಣಾಮಥ ಶಾರ್ದೂಲಂ ಗೋವೃಷಂ ತು ಗವಾಂ ಪತಿಮ್ ।
19004012c ವನಸ್ಪತೀನಾಂ ರಾಜಾನಂ ಪ್ಲಕ್ಷಮೇವಾದಿಶತ್ ಪ್ರಭುಮ್ ।।

ವನ್ಯಮೃಗಗಳಿಗೆ ರಾಜನಾಗಿ ಸಿಂಹವನ್ನೂ, ಗೋವುಗಳಿಗೆ ಒಡೆಯನಾಗಿ ವೃಷಭನನ್ನೂ, ವನಸ್ಪತಿಗಳ ರಾಜನಾಗಿ ಪ್ಲಕ್ಷ ವೃಕ್ಷವನ್ನೂ ನಿಯೋಜಿಸಿದನು.

19004013a ಸಾಗರಾಣಾಂ ನದೀನಾಂ ಚ ಮೇಘಾನಾಂ ವರ್ಷಣಸ್ಯ ಚ ।
19004013c ಆದಿತ್ಯಾನಾಮಧಿಪತಿಂ ಪರ್ಜನ್ಯಮಭಿಷಿಕ್ತವಾನ್ ।।

ಸಾಗರಗಳು, ನದಿಗಳು, ಮೇಘಗಳು, ಮಳೆಗಳು, ಮತ್ತು ಸೂರ್ಯನ ಕಿರಣಗಳ ಅಧಿಪತಿಯನ್ನಾಗಿ ಪರ್ಜನ್ಯನನ್ನು ಅಭಿಷೇಕಿಸಲಾಯಿತು.

19004014a ಸರ್ವೇಷಾಂ ದಂಷ್ಟ್ರಿಣಾಂ ಶೇಷಂ ರಾಜಾನಮಭ್ಯಷೇಚಯತ್ ।
19004014c ಸರೀಸೃಪಾನಾಂ ಸರ್ಪಾಣಾಂ ರಾಜಾನಂ ಚೈವ ತಕ್ಷಕಮ್ ।।

ಹಲ್ಲಿರುವ ಎಲ್ಲ ಸರ್ಪಗಳಿಗೂ ಶೇಷನನ್ನು ರಾಜನನ್ನಾಗಿ ಅಭಿಷೇಕಿಸಿದನು. ಸರೀಸೃಪ ಮತ್ತು ಸರ್ಪಗಳ ರಾಜನನ್ನಾಗಿ ತಕ್ಷಕನನ್ನು ಮಾಡಲಾಯಿತು.

19004015a ಗಂಧರ್ವಾಪ್ಸರಸಾಂ ಚೈವ ಕಾಮದೇವಂ ತಥಾ ಪ್ರಭುಮ್ ।
19004015c ಋತೂನಾಮಥ ಮಾಸಾನಾಂ ದಿವಸಾನಾಂ ತಥೈವ ಚ ।।
19004016a ಪಕ್ಷಾಣಾಂ ಚ ಕ್ಷಪಾಣಾಂ ಚ ಮುಹೂರ್ತತಿಥಿಪರ್ವಣಾಮ್ ।
19004016c ಕಲಾಕಾಷ್ಠಾಪ್ರಮಾಣಾನಾಂ ಗತೇರಯನಯೋಸ್ತಥಾ ।।
19004017a ಗಣಿತಸ್ಯಾಥ ಯೋಗಸ್ಯ ಚಕ್ರೇ ಸಂವತ್ಸರಂ ಪ್ರಭುಮ್ ।

ಗಂಧರ್ವ-ಅಪ್ಸರೆಯರಿಗೆ ಪ್ರಭು ಕಾಮದೇವನನ್ನು ರಾಜನನ್ನಾಗಿ ಅಭಿಷೇಕಿಸಲಾಯಿತು. ಋತುಗಳು, ಮಾಸಗಳು, ದಿವಸಗಳು, ಪಕ್ಷಗಳು, ರಾತ್ರಿ, ಮುಹೂರ್ತ, ತಿಥಿ, ಪರ್ವ, ಕಲಾ-ಕಾಷ್ಠ ಪ್ರಮಾಣಗಳು, ಉತ್ತರಾಯಣ-ದಕ್ಷಿಣಾಯಣಗಳ ಗತಿ, ಯೋಗ ಗಣಿತ ಇವೆಲ್ಲವಕ್ಕೂ ಪ್ರಭು ಸಂವತ್ಸರನನ್ನು ರಾಜನನ್ನಾಗಿ ಅಭಿಷೇಕಿಸಿದನು.

19004017c ಏವಂ ವಿಭಜ್ಯ ರಾಜ್ಯಾನಿ ಕ್ರಮೇಣ ಸ ಪಿತಾಮಹಃ ।।
19004018a ದಿಶಾಪಾಲಾನಥ ತತಃ ಸ್ಥಾಪಯಾಮಾಸ ಭಾರತ ।

ಭಾರತ! ಹೀಗೆ ರಾಜ್ಯಗಳನ್ನು ವಿಭಜಿಸಿ ಪಿತಾಮಹನು ಕ್ರಮೇಣವಾಗಿ ದಿಕ್ಪಾಲಕರನ್ನು ಸ್ಥಾಪಿಸಿದನು.

19004018c ಪೂರ್ವಸ್ಯಾಂ ದಿಶಿ ಪುತ್ರಂ ತು ವೈರಾಜಸ್ಯ ಪ್ರಜಾಪತೇಃ ।।
19004019a ದಿಶಾಪಾಲಂ ಸುಧನ್ವಾನಂ ರಾಜಾನಂ ಚಾಭ್ಯಷೇಚಯತ್ ।

ಪ್ರಜಾಪತಿ ವೈರಾಜನ ಪುತ್ರ ರಾಜಾ ಸುಧನ್ವನನ್ನು ಪೂರ್ವದಿಕ್ಕಿನ ರಾಜನನ್ನಾಗಿ ಅಭಿಷೇಕಿಸಿದನು.

19004019c ದಕ್ಷಿಣಸ್ಯಾಂ ಮಹಾತ್ಮಾನಂ ಕರ್ದಮಸ್ಯ ಪ್ರಜಾಪತೇಃ ।।
19004020a ಪುತ್ರಂ ಶಂಖಪದಂ ನಾಮ ರಾಜಾನಂ ಸೋಽಭ್ಯಷೇಚಯತ್ ।

ಪ್ರಜಾಪತಿ ಕರ್ದಮನ ಪುತ್ರ ಶಂಖಪದನೆಂಬ ಹೆಸರಿನವನನ್ನು ದಕ್ಷಿಣ ದಿಕ್ಕಿನ ರಾಜನನ್ನಾಗಿ ಅಭಿಷೇಕಿಸಿದನು.

19004020c ಪಶ್ಚಿಮಾಯಾಂ ದಿಶಿ ತಥಾ ರಜಸಃ ಪುತ್ರಮಚ್ಯುತಮ್ ।।
19004021a ಕೇತುಮಂತಂ ಮಹಾತ್ಮಾನಂ ರಾಜಾನಂ ಸೋಽಭ್ಯಷೇಚಯತ್ ।

ರಜಸನ ಪುತ್ರ ಅಚ್ಯುತ ಮಹಾತ್ಮ ಕೇತುಮಂತನನ್ನು ಪಶ್ಚಿಮ ದಿಕ್ಕಿನ ರಾಜನನ್ನಾಗಿ ಅಭಿಷೇಕಿಸಿದನು.

19004021c ತಥಾ ಹಿರಣ್ಯರೋಮಾಣಂ ಪರ್ಜನ್ಯಸ್ಯ ಪ್ರಜಾಪತೇಃ ।।
19004022a ಉದೀಚ್ಯಾಂ ದಿಶಿ ದುರ್ಧರ್ಷಂ ರಾಜಾನಂ ಸೋಽಭ್ಯಷೇಚಯತ್ ।

ಹಾಗೆಯೇ ಪ್ರಜಾಪತಿ ಪರ್ಜನ್ಯನ ಪುತ್ರ ದುರ್ಧರ್ಷ ಹಿರಣ್ಯರೋಮನನ್ನು ಪೂರ್ವದಿಕ್ಕಿನ ರಾಜನನ್ನಾಗಿ ಅಭಿಷೇಕಿಸಿದನು.

19004022c ತೈರಿಯಂ ಪೃಥಿವೀ ಸರ್ವಾ ಸಪ್ತದ್ವೀಪಾ ಸಪರ್ವತಾ ।।
19004023a ಯಥಾಪ್ರದೇಶಮದ್ಯಾಪಿ ಧರ್ಮೇಣ ಪ್ರತಿಪಾಲ್ಯತೇ ।

ಅವರು ಸಪ್ತದ್ವೀಪಾ ಸಪರ್ವತಾ ಇಡೀ ಪೃಥ್ವಿಯ ಯಥಾಪ್ರದೇಶಗಳನ್ನು ಇಂದಿಗೂ ಕೂಡ ಧರ್ಮದಿಂದ ಪರಿಪಾಲಿಸುತ್ತಾರೆ.

19004023c ರಾಜಸೂಯಾಭಿಷಿಕ್ತಸ್ತು ಪೃಥುರೇಭಿರ್ನರಾಧಿಪೈಃ ।
19004023e ವೇದದೃಷ್ಟೇನ ವಿಧಿನಾ ರಾಜಾರಾಜ್ಯೇ ನರಾಧಿಪ ।।

ನರಾಧಿಪ! ಈ ನರಾಧಿಪರು ವೇದದಲ್ಲಿ ಕಾಣಿಸಿರುವ ವಿಧಿಗಳಿಂದ ರಾಜಸೂಯದಲ್ಲಿ ಪೃಥುವನ್ನು ರಾಜರಾಜನೆಂದು ಅಭಿಷೇಕಿಸಿದರು.

19004024a ತತೋ ಮನ್ವಂತರೇಽತೀತೇ ಚಾಕ್ಷುಷೇಽಮಿತತೇಜಸಿ ।
19004024c ವೈವಸ್ವತಾಯ ಮನವೇ ಬ್ರಹ್ಮಾ ರಾಜ್ಯಮಥಾದಿಶತ್ ।
19004024e ತಸ್ಯ ವಿಸ್ತರಮಾಖ್ಯಾಸ್ಯೇ ಮನೋರ್ವೈವಸ್ವತಸ್ಯ ಹ ।।

ಅಮಿತತೇಜಸ್ವೀ ಚಾಕ್ಷುಷೀ ಮನ್ವಂತರವು ಮುಗಿದಾಗ ಬ್ರಹ್ಮನು ವೈವಸ್ವತ ಮನುವಿಗೆ ರಾಜ್ಯವನ್ನು ನೀಡಿದ್ದನು. ವೈವಸ್ವತ ಮನುವಿನ ಕುರಿತು ವಿಸ್ತಾರವಾಗಿ ಹೇಳಿದ್ದೇನೆ.

19004025a ತವಾನುಕೂಲ್ಯಾದ್ರಾಜೇಂದ್ರ ಯದಿ ಶುಶ್ರೂಷಸೇಽನಘ ।
19004025c ಮಹದ್ಧ್ಯೇತದಧಿಷ್ಠಾನಂ ಪುರಾಣಂ ಪರಿಕೀರ್ತಿತಮ್ ।
19004025e ಧನ್ಯಂ ಯಶಸ್ಯಮಾಯುಷ್ಯಂ ಸ್ವರ್ಗವಾಸಕರಂ ಶುಭಮ್।।

ರಾಜೇಂದ್ರ! ಅನಘ! ನಿನಗೆ ಕೇಳಬೇಕೆಂದಂತೆ ಮತ್ತು ಅನುಕೂಲವಿದ್ದಂತೆ ನಾನು ಆ ಧನ್ಯತೆ-ಯಶಸ್ಸು-ಆಯುಸ್ಸುಗಳನ್ನು ಮತ್ತು ಶುಭ ಸ್ವರ್ಗವಾಸವನ್ನು ನೀಡುವ ಅತಿ ದೊಡ್ಡ ಪುರಾಣವನ್ನು ಹೇಳಿದ್ದೇನೆ.”

19004026 ಜನಮೇಜಯ ಉವಾಚ।
19004026a ವಿಸ್ತರೇಣ ಪೃಥೋರ್ಜನ್ಮ ವೈಶಂಪಾಯನ ಕೀರ್ತಯ ।
19004026c ಯಥಾ ಮಹಾತ್ಮನಾ ತೇನ ದುಗ್ಧಾ ಚೇಯಂ ವಸುಂಧರಾ ।।

ಜನಮೇಜಯನು ಹೇಳಿದನು: “ವೈಶಂಪಾಯನ! ಪೃಥುವಿನ ಜನ್ಮದ ಕುರಿತು ವಿಸ್ತಾರವಾಗಿ ಹೇಳು. ಹೇಗೆ ಆ ಮಹಾತ್ಮನು ವಸುಂಧರೆಯ ಹಾಲುಕರೆದನು?

19004027a ಯಥಾ ಚ ಪಿತೃಭಿರ್ದುಗ್ಧಾ ಯಥಾ ದೇವೈರ್ಯಥರ್ಷಿಭಿಃ ।
19004027c ಯಥಾ ದೈತ್ಯೈಶ್ಚ ನಾಗೈಶ್ಚ ಯಥಾ ಯಕ್ಷೈರ್ಯಥಾ ದ್ರುಮೈಃ ।।
19004028a ಯಥಾ ಶೈಲೈಃ ಪಿಶಾಚೈಶ್ಚ ಗಂಧರ್ವೈಶ್ಚ ದ್ವಿಜೋತ್ತಮೈಃ ।
19004028c ರಾಕ್ಷಸೈಶ್ಚ ಮಹಾಸತ್ತ್ವೈರ್ಯಥಾ ದುಗ್ಧಾ ವಸುಂಧರಾ ।।

ಪಿತೃಗಳು, ದೇವತೆಗಳು, ಋಷಿಗಳು, ದೈತ್ಯ-ನಾಗ-ಯಕ್ಷ-ದ್ರುಮಗಳು, ಶೈಲ-ಪಿಶಾಚ, ಗಂಧರ್ವ-ದ್ವಿಜೋತ್ತಮರು ಮತ್ತು ಮಹಾಸತ್ತ್ವಯುತ ರಾಕ್ಷಸರು ಹೇಗೆ ವಸುಂಧರೆಯ ಹಾಲು ಕರೆದರು?

19004029a ತೇಷಾಂ ಪಾತ್ರವಿಶೇಷಾಂಶ್ಚ ವೈಶಂಪಾಯನ ಕೀರ್ತಯ ।
19004029c ವತ್ಸಾನ್ಕ್ಷೀರವಿಶೇಷಾಂಶ್ಚ ದೋಗ್ಧಾರಂ ಚಾನುಪೂರ್ವಶಃ ।।

ವೈಶಂಪಾಯನ! ಈ ಹಾಲುಕರೆದವರು ಉಪಯೋಗಿಸಿದ ಹಾಲುಕರೆಯುವ ಪಾತ್ರೆಗಳು ಹೇಗಿದ್ದವು? ಕರುಗಳ ಮತ್ತು ಹಾಲಿನ ವಿಶೇಷತೆಗಳು ಏನಿದ್ದವು? ಇವುಗಳ ಕುರಿತು ಹೇಳು.

19004030a ಯಸ್ಮಾಚ್ಚ ಕಾರಣಾತ್ಪಾಣಿರ್ವೇನಸ್ಯ ಮಥಿತಃ ಪುರಾ ।
19004030c ಕ್ರುದ್ಧೈರ್ಮಹರ್ಷಿಭಿಸ್ತಾತ ಕಾರಣಂ ತಚ್ಚ ಕೀರ್ತಯ ।।

ತಾತ! ಯಾವ ಕಾರಣದಿಂದ ಹಿಂದೆ ಕ್ರುದ್ಧ ಮಹರ್ಷಿಗಳು ವೇನನ ಕೈಗಳನ್ನು ಮಥಿಸಿದ್ದರು? ಅದರ ಕಾರಣವನ್ನೂ ಹೇಳು.”

19004031 ವೈಶಂಪಾಯನ ಉವಾಚ ।
19004031a ಹಂತ ತೇ ಕಥಯಿಷ್ಯಾಮಿ ಪೃಥೋರ್ವೈನ್ಯಸ್ಯ ವಿಸ್ತರಮ್ ।
19004031c ಏಕಾಗ್ರಃ ಪ್ರಯತಶ್ಚೈವ ಶೃಣುಷ್ವ ಜನಮೇಜಯ ।।

ವೈಶಂಪಾಯನನು ಹೇಳಿದನು: “ಜನಮೇಜಯ! ವೈನನ ಮಗ ಪೃಥುವಿನ ಕುರಿತು ವಿಸ್ತಾರವಾಗಿ ಹೇಳುತ್ತೇನೆ. ಏಕಾಗ್ರನಾಗಿ ಮತ್ತು ಸಮಯವಿಟ್ಟುಕೊಂಡು ಕೇಳು.

19004032a ನಾಶುಚೇಃ ಕ್ಷುದ್ರಮನಸಃ ಕುಶಿಷ್ಯಾಯಾವ್ರತಾಯ ಚ ।
19004032c ಕೀರ್ತನೀಯಮಿಮಂ ರಾಜನ್ಕೃತಘ್ನಾಯಾಹಿತಾಯ ಚ ।।

ರಾಜನ್! ಶುಚಿಯಾಗಿಲ್ಲದವನಿಗೆ, ಕ್ಷುದ್ರಮನಸ್ಸುಳ್ಳವನಿಗೆ, ಕುಶಿಷ್ಯನಿಗೆ, ವ್ರತಾದಿಗಳನ್ನು ಮಾಡದವನಿಗೆ, ಕೃತಘ್ನನಿಗೆ ಮತ್ತು ಅಹಿತ ಕರ್ಮಗಳನ್ನು ಮಾಡುವವನಿಗೆ ಈ ಕಥೆಯನ್ನು ಹೇಳಬಾರದು.

19004033a ಸ್ವರ್ಗ್ಯಂ ಯಶಸ್ಯಮಾಯುಷ್ಯಂ ಧರ್ಮ್ಯಂ ವೇದೇನ ಸಂಮಿತಮ್ ।
19004033c ರಹಸ್ಯಮೃಷಿಭಿಃ ಪ್ರೋಕ್ತಂ ಶೃಣು ರಾಜನ್ಯಥಾತಥಮ್ ।।

ರಾಜನ್! ಸ್ವರ್ಗ-ಯಶಸ್ಸು-ಆಯುಷ್ಯ-ಧರ್ಮಗಳನ್ನು ನೀಡುತ್ತದೆಯೆಂದು ವೇದಸಂಹಿತದಲ್ಲಿ ಋಷಿಗಳು ಹೇಳಿರುವ ಆ ರಹಸ್ಯವನ್ನು ಯಥಾತಥವಾಗಿ ಕೇಳು.

19004034a ಯಶ್ಚೈನಂ ಕೀರ್ತಯೇನ್ನಿತ್ಯಂ ಪೃಥೋರ್ವೈನ್ಯಸ್ಯ ವಿಸ್ತರಮ್ ।
19004034c ಬ್ರಾಹ್ಮಣೇಭ್ಯೋ ನಮಸ್ಕೃತ್ಯ ನ ಸ ಶೋಚೇತ್ಕೃತಾಕೃತೈಃ೨ ।।

ಬ್ರಾಹ್ಮಣರಿಗೆ ನಮಸ್ಕರಿಸಿ ಪೃಥುವಿನ ಈ ವಿಸ್ತಾರ ಕಥೆಯನ್ನು ಯಾರು ಹೇಳುತ್ತಾರೋ ಅವರು ಮಾಡಿದ ಪಾಪಗಳ ಕುರಿತು ಶೋಕಿಸಬೇಕಾಗುವುದಿಲ್ಲ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಪೃಥೂಪಾಖ್ಯಾನೇ ಚತುರ್ಥೋಽಧ್ಯಾಯಃ।।