ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆಶ್ರಮವಾಸಿಕ ಪರ್ವ
ಆಶ್ರಮವಾಸ ಪರ್ವ
ಅಧ್ಯಾಯ 22
ಸಾರ
ಅರಮನೆಗೆ ಹಿಂದಿರುಗಬೇಕೆಂದು ಯುಧಿಷ್ಠಿರನು ಕುಂತಿಯನ್ನು ಕೇಳಿಕೊಳ್ಳಲು, ಗಾಂಧಾರಿಯೊಡನೆ ಮುಂದುವರಿಯುತ್ತಿದ್ದ ಕುಂತಿಯು ಆಡಿದ ಮಾತು (1-16). ಯುಧಿಷ್ಠಿರ-ಭೀಮಸೇನರು ಹಿಂದಿರುಗಬೇಕೆಂದು ಕುಂತಿಯಲ್ಲಿ ಕೇಳಿಕೊಂಡಿದುದು (17-32).
15022001 ವೈಶಂಪಾಯನ ಉವಾಚ।
15022001a ತತಃ ಪ್ರಾಸಾದಹರ್ಮ್ಯೇಷು ವಸುಧಾಯಾಂ ಚ ಪಾರ್ಥಿವ।
15022001c ಸ್ತ್ರೀಣಾಂ ಚ ಪುರುಷಾಣಾಂ ಚ ಸುಮಹಾನ್ನಿಸ್ವನೋಽಭವತ್।।
ವೈಶಂಪಾಯನನು ಹೇಳಿದನು: “ಪಾರ್ಥಿವ! ಆಗ ಪ್ರಾಸಾದಗಳಿಂದಲೂ ಉಪ್ಪರಿಗೆಗಳಿಂದಲೂ ಸ್ತ್ರೀ-ಪುರುಷರ ಮಹಾರೋದನವು ಕೇಳಿಬರುತ್ತಿತ್ತು.
15022002a ಸ ರಾಜಾ ರಾಜಮಾರ್ಗೇಣ ನೃನಾರೀಸಂಕುಲೇನ ಚ।
15022002c ಕಥಂ ಚಿನ್ನಿರ್ಯಯೌ ಧೀಮಾನ್ವೇಪಮಾನಃ ಕೃತಾಂಜಲಿಃ।।
ಆ ಧೀಮಾನ್ ರಾಜನು ನರ-ನಾರಿಯರ ಗುಂಪಿನ ಮಧ್ಯದಲ್ಲಿ ಕೈಮುಗಿದುಕೊಂಡು ನಡುಗುತ್ತಾ ಕಷ್ಟದಿಂದ ಮುಂದೆ ಸಾಗುತ್ತಿದ್ದನು.
15022003a ಸ ವರ್ಧಮಾನದ್ವಾರೇಣ ನಿರ್ಯಯೌ ಗಜಸಾಹ್ವಯಾತ್।
15022003c ವಿಸರ್ಜಯಾಮಾಸ ಚ ತಂ ಜನೌಘಂ ಸ ಮುಹುರ್ಮುಹುಃ।।
ವರ್ಧಮಾನದ್ವಾರದ ಮೂಲಕ ಹಸ್ತಿನಾಪುರದ ಹೊರ ಹೊರಟು ಅವನು ಆ ಜನಸಮೂಹವನ್ನು ತನ್ನ ಹಿಂದೆ ಬರಬಾರದಂತೆ ಮತ್ತೆ ಮತ್ತೆ ತಡೆಯುತ್ತಿದ್ದನು.
15022004a ವನಂ ಗಂತುಂ ಚ ವಿದುರೋ ರಾಜ್ಞಾ ಸಹ ಕೃತಕ್ಷಣಃ।
15022004c ಸಂಜಯಶ್ಚ ಮಹಾಮಾತ್ರಃ ಸೂತೋ ಗಾವಲ್ಗಣಿಸ್ತಥಾ।।
ವಿದುರನೂ ಗಾವಲ್ಗಣಿ ಮಹಾಮಂತ್ರಿ ಸೂತ ಸಂಜಯನೂ ರಾಜನ ಜೊತೆಯಲ್ಲಿ ಹೋಗಲು ನಿಶ್ಚಯಿಸಿದರು.
15022005a ಕೃಪಂ ನಿವರ್ತಯಾಮಾಸ ಯುಯುತ್ಸುಂ ಚ ಮಹಾರಥಮ್।
15022005c ಧೃತರಾಷ್ಟ್ರೋ ಮಹೀಪಾಲಃ ಪರಿದಾಯ ಯುಧಿಷ್ಠಿರೇ।।
ಮಹೀಪಾಲ ಧೃತರಾಷ್ಟ್ರನು ಕೃಪ ಮತ್ತು ಮಹಾರಥ ಯುಯುತ್ಸುವನ್ನು ಹಿಂದಿರುಗುವಂತೆ ಮಾಡಿ ಯುಧಿಷ್ಠಿರನಿಗೆ ಒಪ್ಪಿಸಿದನು.
15022006a ನಿವೃತ್ತೇ ಪೌರವರ್ಗೇ ತು ರಾಜಾ ಸಾಂತಃಪುರಸ್ತದಾ।
15022006c ಧೃತರಾಷ್ಟ್ರಾಭ್ಯನುಜ್ಞಾತೋ ನಿವರ್ತಿತುಮಿಯೇಷ ಸಃ।।
ಪುರಜನರು ಹಿಂದಿರುಗಿದ ನಂತರ ರಾಜಾ ಯುಧಿಷ್ಠಿರನು ಅಂತಃಪುರದ ಸ್ತ್ರೀಯರು ಹಿಂದಿರುಗಲು ಧೃತರಾಷ್ಟ್ರನ ಅನುಮತಿಯನ್ನು ಕೇಳಿದನು.
15022007a ಸೋಽಬ್ರವೀನ್ಮಾತರಂ ಕುಂತೀಮುಪೇತ್ಯ ಭರತರ್ಷಭ।
15022007c ಅಹಂ ರಾಜಾನಮನ್ವಿಷ್ಯೇ ಭವತೀ ವಿನಿವರ್ತತಾಮ್।।
ಭರತರ್ಷಭ! ಅವನು ತಾಯಿ ಕುಂತಿಯ ಬಳಿಸಾರಿ “ನಾನು ರಾಜನನ್ನು ಇನ್ನೂ ಸ್ವಲ್ಪ ದೂರ ಅನುಸರಿಸಿ ಹೋಗುತ್ತೇನೆ. ನೀನು ಹಿಂದಿರುಗಬೇಕು.
15022008a ವಧೂಪರಿವೃತಾ ರಾಜ್ಞಿ ನಗರಂ ಗಂತುಮರ್ಹಸಿ।
15022008c ರಾಜಾ ಯಾತ್ವೇಷ ಧರ್ಮಾತ್ಮಾ ತಪಸೇ ಧೃತನಿಶ್ಚಯಃ।।
ರಾಣಿಯೇ! ಸೊಸೆಯರೊಂದಿಗೆ ನೀನು ನಗರಕ್ಕೆ ಹಿಂದಿರುಗಬೇಕು. ಧರ್ಮಾತ್ಮ ಧೃತರಾಷ್ಟ್ರನು ತಪಸ್ಸಿನ ನಿಶ್ಚಯವನ್ನು ಮಾಡಿಕೊಂಡು ಹೋಗುತ್ತಿದ್ದಾನೆ.”
15022009a ಇತ್ಯುಕ್ತಾ ಧರ್ಮರಾಜೇನ ಬಾಷ್ಪವ್ಯಾಕುಲಲೋಚನಾ।
15022009c ಜಗಾದೈವಂ ತದಾ ಕುಂತೀ ಗಾಂಧಾರೀಂ ಪರಿಗೃಹ್ಯ ಹ।।
ಧರ್ಮರಾಜನು ಹೀಗೆ ಹೇಳಲು ಕಂಬನಿದುಂಬಿದ ಕಣ್ಣುಗಳಿಂದ ವ್ಯಾಕುಲಳಾಗಿ ಕುಂತಿಯು ಗಾಂಧಾರಿಯನ್ನು ಹಿಡಿದುಕೊಂಡು ಮುಂದುವರೆಯುತ್ತಲೇ ಇದ್ದಳು.
15022010a ಸಹದೇವೇ ಮಹಾರಾಜ ಮಾ ಪ್ರಮಾದಂ ಕೃಥಾಃ ಕ್ವ ಚಿತ್।
15022010c ಏಷ ಮಾಮನುರಕ್ತೋ ಹಿ ರಾಜಂಸ್ತ್ವಾಂ ಚೈವ ನಿತ್ಯದಾ।।
“ಮಹಾರಾಜ! ಸಹದೇವನ ವಿಷಯದಲ್ಲಿ ನೀನು ಎಂದೂ ಅಪ್ರಸನ್ನನಾಗಬೇಡ! ರಾಜನ್! ಇವನು ನನ್ನಲ್ಲಿ ಮತ್ತು ನಿನ್ನಲ್ಲಿ ನಿತ್ಯವೂ ಅನುರಕ್ತನಾಗಿರುವವನು.
15022011a ಕರ್ಣಂ ಸ್ಮರೇಥಾಃ ಸತತಂ ಸಂಗ್ರಾಮೇಷ್ವಪಲಾಯಿನಮ್।
15022011c ಅವಕೀರ್ಣೋ ಹಿ ಸ ಮಯಾ ವೀರೋ ದುಷ್ಪ್ರಜ್ಞಯಾ ತದಾ।।
ಯುದ್ಧದಿಂದ ಎಂದೂ ಪಲಾಯನಮಾಡದೇ ಇದ್ದ ಕರ್ಣನನ್ನು ಸತತವೂ ಸ್ಮರಿಸಿಕೊಳ್ಳುತ್ತಿರು. ನನ್ನ ದುಷ್ಪ್ರಜ್ಞೆಯಿಂದಾಗಿ ಆ ವೀರನು ಯುದ್ಧದಲ್ಲಿ ಮಡಿದನು.
15022012a ಆಯಸಂ ಹೃದಯಂ ನೂನಂ ಮಂದಾಯಾ ಮಮ ಪುತ್ರಕ।
15022012c ಯತ್ಸೂರ್ಯಜಮಪಶ್ಯಂತ್ಯಾಃ ಶತಧಾ ನ ವಿದೀರ್ಯತೇ।।
ಮಗೂ! ಸೂರ್ಯಪುತ್ರ ಕರ್ಣನನ್ನು ನೋಡದೆಯೂ ನನ್ನ ಹೃದಯವು ನೂರು ಚೂರುಗಳಾಗಿ ಒಡೆಯುತ್ತಿಲ್ಲವೆಂದರೆ ನನ್ನ ಈ ಹೃದಯವು ಉಕ್ಕಿನದೇ ಆಗಿರಬೇಕು!
15022013a ಏವಂಗತೇ ತು ಕಿಂ ಶಕ್ಯಂ ಮಯಾ ಕರ್ತುಮರಿಂದಮ।
15022013c ಮಮ ದೋಷೋಽಯಮತ್ಯರ್ಥಂ ಖ್ಯಾಪಿತೋ ಯನ್ನ ಸೂರ್ಯಜಃ।
ಅರಿಂದಮ! ಎಲ್ಲವೂ ಹೀಗೆಯೇ ಆಗಬೇಕೆಂದಿದ್ದಾಗ ನಾನೇನು ಮಾಡಲು ಶಕ್ಯವಿದೆ? ಸೂರ್ಯಜನನ್ನು ಮೊದಲು ನಿಮಗೆ ಪರಿಚಯಮಾಡಿಸಿಕೊಡದೇ ಇದ್ದುದು ನನ್ನ ದೋಷವೇ ಸರಿ!
15022013e ತನ್ನಿಮಿತ್ತಂ ಮಹಾಬಾಹೋ ದಾನಂ ದದ್ಯಾಸ್ತ್ವಮುತ್ತಮಮ್।।
15022014a ಸದೈವ ಭ್ರಾತೃಭಿಃ ಸಾರ್ಧಮಗ್ರಜಸ್ಯಾರಿಮರ್ದನ।
ಅರಿಮರ್ದನ! ಮಹಾಬಾಹೋ! ನಿನ್ನ ತಮ್ಮಂದಿರೊಡನೆ ನಿನ್ನ ಅಗ್ರಜನಿಗಾಗಿ ಸದಾ ದಾನಗಳನ್ನು ನೀಡುತ್ತಿರು!
15022014c ದ್ರೌಪದ್ಯಾಶ್ಚ ಪ್ರಿಯೇ ನಿತ್ಯಂ ಸ್ಥಾತವ್ಯಮರಿಕರ್ಶನ।।
15022015a ಭೀಮಸೇನಾರ್ಜುನೌ ಚೈವ ನಕುಲಶ್ಚ ಕುರೂದ್ವಹ।
ಅರಿಕರ್ಶನ! ದ್ರೌಪದಿಯ ವಿಷಯದಲ್ಲಿಯೂ ನೀನು ನಿತ್ಯವೂ ಪ್ರಿಯವಾದುದನ್ನೇ ಮಾಡುತ್ತಿರಬೇಕು. ಕುರೂದ್ವಹ! ಭೀಮಾರ್ಜುನರನ್ನೂ ನಕುಲನನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿರಬೇಕು.
15022015c ಸಮಾಧೇಯಾಸ್ತ್ವಯಾ ವೀರ ತ್ವಯ್ಯದ್ಯ ಕುಲಧೂರ್ಗತಾ।।
15022016a ಶ್ವಶ್ರೂಶ್ವಶುರಯೋಃ ಪಾದಾನ್ಶುಶ್ರೂಷಂತೀ ವನೇ ತ್ವಹಮ್।
15022016c ಗಾಂಧಾರೀಸಹಿತಾ ವತ್ಸ್ಯೇ ತಾಪಸೀ ಮಲಪಂಕಿನೀ।।
ವೀರ! ಇಂದಿನಿಂದ ಕುರುವಂಶದ ಪಾಲನೆಯ ಭಾರವು ಸಂಪೂರ್ಣವಾಗಿ ನಿನ್ನ ಮೇಲೆಯೇ ಬಿದ್ದಿದೆ. ನಾನಾದರೋ ವನದಲ್ಲಿ ಅತ್ತೆ-ಮಾವಂದಿರ ಸೇವೆಯನ್ನು ಮಾಡಿಕೊಂಡಿರುತ್ತೇನೆ. ಗಾಂಧಾರಿಯ ಸಹಿತ ಕೊಳಕು-ಧೂಳುಗಳಿಂದ ತುಂಬಿದ ತಾಪಸಿಯಂತೆ ವಾಸಿಸುತ್ತೇನೆ.”
15022017a ಏವಮುಕ್ತಃ ಸ ಧರ್ಮಾತ್ಮಾ ಭ್ರಾತೃಭಿಃ ಸಹಿತೋ ವಶೀ।
15022017c ವಿಷಾದಮಗಮತ್ತೀವ್ರಂ ನ ಚ ಕಿಂ ಚಿದುವಾಚ ಹ।।
ಅವಳು ಹೀಗೆ ಹೇಳಲು ಜಿತೇಂದ್ರಿಯ ಧರ್ಮಾತ್ಮಾ ಯುಧಿಷ್ಠಿರನು ಸಹೋದರರೊಡನೆ ತೀವ್ರ ದುಃಖಿತನಾದನು ಮತ್ತು ಸ್ವಲ್ಪ ಹೊತ್ತು ಅವನ ಬಾಯಿಂದ ಮಾತುಗಳೇ ಹೊರಬರಲಿಲ್ಲ.
15022018a ಸ ಮುಹೂರ್ತಮಿವ ಧ್ಯಾತ್ವಾ ಧರ್ಮಪುತ್ರೋ ಯುಧಿಷ್ಠಿರಃ।
15022018c ಉವಾಚ ಮಾತರಂ ದೀನಶ್ಚಿಂತಾಶೋಕಪರಾಯಣಃ।।
ಒಂದು ಮುಹೂರ್ತಕಾಲ ಯೋಚಿಸಿ ಧರ್ಮಪುತ್ರ ಯುಧಿಷ್ಠಿರನು ದೀನ-ಚಿಂತಾ-ಶೋಕಪರಾಯಣನಾಗಿ ತಾಯಿಗೆ ಹೇಳಿದನು:
15022019a ಕಿಮಿದಂ ತೇ ವ್ಯವಸಿತಂ ನೈವಂ ತ್ವಂ ವಕ್ತುಮರ್ಹಸಿ।
15022019c ನ ತ್ವಾಮಭ್ಯನುಜಾನಾಮಿ ಪ್ರಸಾದಂ ಕರ್ತುಮರ್ಹಸಿ।।
“ನೀನೇಕೆ ಹೀಗೆ ವರ್ತಿಸುತ್ತಿರುವೆ? ಹೀಗೆ ನೀನು ಮಾತನಾಡಬಾರದು. ನಿನಗೆ ನಾನು ಅನುಮತಿಯನ್ನು ಕೊಡುವುದಿಲ್ಲ. ಪ್ರಸನ್ನಳಾಗಬೇಕು.
15022020a ವ್ಯರೋಚಯಃ ಪುರಾ ಹ್ಯಸ್ಮಾನುತ್ಸಾಹ್ಯ ಪ್ರಿಯದರ್ಶನೇ।
15022020c ವಿದುರಾಯಾ ವಚೋಭಿಸ್ತ್ವಮಸ್ಮಾನ್ನ ತ್ಯಕ್ತುಮರ್ಹಸಿ।।
ಪ್ರಿಯದರ್ಶನೇ! ಹಿಂದೆ ವಿದುಲೆಯ ಮಾತುಗಳನ್ನು ಉದಾಹರಿಸಿ ನಮ್ಮಲ್ಲಿ ಉತ್ಸಾಹವನ್ನು ತುಂಬಿದ್ದೆ. ಇಂದು ನಮ್ಮನ್ನು ತ್ಯಜಿಸುವುದು ಸರಿಯಲ್ಲ!
15022021a ನಿಹತ್ಯ ಪೃಥಿವೀಪಾಲಾನ್ರಾಜ್ಯಂ ಪ್ರಾಪ್ತಮಿದಂ ಮಯಾ।
15022021c ತವ ಪ್ರಜ್ಞಾಮುಪಶ್ರುತ್ಯ ವಾಸುದೇವಾನ್ನರರ್ಷಭಾತ್।।
ನರರ್ಷಭ ವಾಸುದೇವನ ಮೂಲಕ ನಮಗೆ ಹೇಳಿ ಕಳುಕಳುಹಿಸಿದ ನಿನ್ನ ಬುದ್ಧಿಯಂತೆಯೇ ನಾನು ಪೃಥಿವೀಪಾಲರನ್ನು ಸಂಹರಿಸಿ ಈ ರಾಜ್ಯವನ್ನು ಪಡೆದುಕೊಂಡೆನು.
15022022a ಕ್ವ ಸಾ ಬುದ್ಧಿರಿಯಂ ಚಾದ್ಯ ಭವತ್ಯಾ ಯಾ ಶ್ರುತಾ ಮಯಾ।
15022022c ಕ್ಷತ್ರಧರ್ಮೇ ಸ್ಥಿತಿಂ ಹ್ಯುಕ್ತ್ವಾ ತಸ್ಯಾಶ್ಚಲಿತುಮಿಚ್ಚಸಿ।।
ಅಂದು ನಿನಗಿದ್ದ ಬುದ್ಧಿಯೂ ಮತ್ತು ನನಗೆ ಹೇಳಿದ ಮಾತುಗಳೂ ಇಂದು ಎಲ್ಲಿಗೆ ಹೋದವು? ಕ್ಷತ್ರಧರ್ಮದಲ್ಲಿಯೇ ಇರುವಂತೆ ನಮಗೆ ಹೇಳಿ ಈಗ ನೀನು ಕ್ಷತ್ರಧರ್ಮದಿಂದ ಜಾರಿಕೊಳ್ಳಲು ಬಯಸುತ್ತಿರುವೆಯಲ್ಲ!
15022023a ಅಸ್ಮಾನುತ್ಸೃಜ್ಯ ರಾಜ್ಯಂ ಚ ಸ್ನುಷಾಂ ಚೇಮಾಂ ಯಶಸ್ವಿನೀಮ್।
15022023c ಕಥಂ ವತ್ಸ್ಯಸಿ ಶೂನ್ಯೇಷು ವನೇಷ್ವಂಬ ಪ್ರಸೀದ ಮೇ।।
ನಮ್ಮನ್ನೂ, ರಾಜ್ಯವನ್ನೂ, ಈ ನಿನ್ನ ಯಶಸ್ವಿನೀ ಸೊಸೆಯನ್ನೂ ತೊರೆದು ಶೂನ್ಯ ವನದಲ್ಲಿ ನೀನು ಹೇಗೆ ತಾನೇ ವಾಸಿಸುವೆ? ಅಮ್ಮಾ! ನಮ್ಮ ಮೇಲೆ ಕರುಣೆ ತೋರು!”
15022024a ಇತಿ ಬಾಷ್ಪಕಲಾಂ ವಾಚಂ ಕುಂತೀ ಪುತ್ರಸ್ಯ ಶೃಣ್ವತೀ।
15022024c ಜಗಾಮೈವಾಶ್ರುಪೂರ್ಣಾಕ್ಷೀ ಭೀಮಸ್ತಾಮಿದಮಬ್ರವೀತ್।।
ಹೀಗೆ ಮಗನ ಆ ಬಾಷ್ಪಗದ್ಗದ ಮಾತನ್ನು ಕೇಳುತ್ತಲೂ ಕಣ್ಣೀರುತುಂಬಿದ ಕುಂತಿಯು ಮುಂದೆ ಸಾಗುತ್ತಲೇ ಇದ್ದಳು. ಆಗ ಅವಳಿಗೆ ಭೀಮನು ಹೇಳಿದನು:
15022025a ಯದಾ ರಾಜ್ಯಮಿದಂ ಕುಂತಿ ಭೋಕ್ತವ್ಯಂ ಪುತ್ರನಿರ್ಜಿತಮ್।
15022025c ಪ್ರಾಪ್ತವ್ಯಾ ರಾಜಧರ್ಮಾಶ್ಚ ತದೇಯಂ ತೇ ಕುತೋ ಮತಿಃ।।
“ಕುಂತಿ! ಪುತ್ರರು ಜಯಿಸಿದ ಈ ರಾಜ್ಯವನ್ನು ನೀನು ಭೋಗಿಸಬೇಕು. ರಾಜಧರ್ಮವನ್ನು ಪಾಲಿಸುವ ಕಾಲವು ಒದಗಿರುವಾಗ ನಿನಗೆ ಎಲ್ಲಿಂದ ಈ ಬುದ್ಧಿಯು ಬಂದಿತು?
15022026a ಕಿಂ ವಯಂ ಕಾರಿತಾಃ ಪೂರ್ವಂ ಭವತ್ಯಾ ಪೃಥಿವೀಕ್ಷಯಮ್।
15022026c ಕಸ್ಯ ಹೇತೋಃ ಪರಿತ್ಯಜ್ಯ ವನಂ ಗಂತುಮಭೀಪ್ಸಸಿ।।
ಮೊದಲು ನಮ್ಮಿಂದ ನೀನು ಏಕೆ ಈ ಭೂಮಿಕ್ಷಯವನ್ನು ಮಾಡಿಸಿದೆ? ಯಾವ ಕಾರಣಕ್ಕಾಗಿ ನೀನು ನಮ್ಮನ್ನು ಪರಿತ್ಯಜಿಸಿ ವನಕ್ಕೆ ಹೋಗಲು ಇಚ್ಛಿಸಿರುವೆ?
15022027a ವನಾಚ್ಚಾಪಿ ಕಿಮಾನೀತಾ ಭವತ್ಯಾ ಬಾಲಕಾ ವಯಮ್।
15022027c ದುಃಖಶೋಕಸಮಾವಿಷ್ಟೌ ಮಾದ್ರೀಪುತ್ರಾವಿಮೌ ತಥಾ।।
ವನವಾಸವೇ ನಿನಗೆ ಇಷ್ಟವಾಗಿದ್ದಿದ್ದರೆ ಬಾಲಕರಾಗಿದ್ದ ನಮ್ಮನ್ನೂ ಮತ್ತು ದುಃಖಶೋಕಸಮಾವಿಷ್ಟರಾಗಿದ್ದ ಮಾದ್ರೀಪುತ್ರರನ್ನೂ ನೀನು ವನದಿಂದ ನಗರಕ್ಕೆ ಏಕೆ ಕರೆದುಕೊಂಡು ಬಂದೆ?
15022028a ಪ್ರಸೀದ ಮಾತರ್ಮಾ ಗಾಸ್ತ್ವಂ ವನಮದ್ಯ ಯಶಸ್ವಿನಿ।
15022028c ಶ್ರಿಯಂ ಯೌಧಿಷ್ಠಿರೀಂ ತಾವದ್ಭುಂಕ್ಷ್ವ ಪಾರ್ಥಬಲಾರ್ಜಿತಾಮ್।।
ಮಾತಾ! ಯಶಸ್ವಿನೀ! ಪ್ರಸನ್ನಳಾಗು! ನೀನು ಇಂದು ವನಕ್ಕೆ ಹೋಗಬೇಡ! ಯುಧಿಷ್ಠಿರ ಮತ್ತು ಪಾರ್ಥನ ಬಲದಿಂದ ಗೆಲ್ಲಲ್ಪಟ್ಟಿರುವ ಈ ಸಂಪತ್ತನ್ನು ಭೋಗಿಸು!”
15022029a ಇತಿ ಸಾ ನಿಶ್ಚಿತೈವಾಥ ವನವಾಸಕೃತಕ್ಷಣಾ।
15022029c ಲಾಲಪ್ಯತಾಂ ಬಹುವಿಧಂ ಪುತ್ರಾಣಾಂ ನಾಕರೋದ್ವಚಃ।।
ವನವಾಸದ ಕುರಿತು ದೃಢವಾಗಿ ನಿಶ್ಚಯಿಸಿದ್ದ ಅವಳು ಪುತ್ರರು ಬಹುವಿಧದಲ್ಲಿ ವಿಲಪಿಸುತ್ತಿದ್ದರೂ ಅವರ ಮಾತಿನಂತೆ ಮಾಡಲಿಲ್ಲ.
15022030a ದ್ರೌಪದೀ ಚಾನ್ವಯಾಚ್ಚ್ವಶ್ರೂಂ ವಿಷಣ್ಣವದನಾ ತದಾ।
15022030c ವನವಾಸಾಯ ಗಚ್ಚಂತೀಂ ರುದತೀ ಭದ್ರಯಾ ಸಹ।।
ವನವಾಸಕ್ಕೆ ಹೋಗುತ್ತಿರುವ ಅತ್ತೆಯ ಹಿಂದೆ ವಿಷಣ್ಣವದನಳಾದ ದ್ರೌಪದಿಯೂ ಸುಭದ್ರೆಯೊಡನೆ ರೋದಿಸುತ್ತಾ ಹೋಗುತ್ತಲೇ ಇದ್ದಳು.
15022031a ಸಾ ಪುತ್ರಾನ್ರುದತಃ ಸರ್ವಾನ್ಮುಹುರ್ಮುಹುರವೇಕ್ಷತೀ।
15022031c ಜಗಾಮೈವ ಮಹಾಪ್ರಾಜ್ಞಾ ವನಾಯ ಕೃತನಿಶ್ಚಯಾ।।
ರೋದಿಸುತ್ತಿದ್ದ ತನ್ನ ಎಲ್ಲ ಮಕ್ಕಳನ್ನೂ ಪುನಃ ಪುನಃ ನೋಡುತ್ತಿದ್ದರೂ ಆ ಮಹಾಪ್ರಾಜ್ಞೆ ಕುಂತಿಯು ವನವಾಸದ ದೃಢನಿಶ್ಚಯವನ್ನು ಮಾಡಿದವಳಾಗಿ ಮುಂದೆ ಮುಂದೆ ಸಾಗುತ್ತಲೇ ಇದ್ದಳು.
15022032a ಅನ್ವಯುಃ ಪಾಂಡವಾಸ್ತಾಂ ತು ಸಭೃತ್ಯಾಂತಃಪುರಾಸ್ತದಾ।
15022032c ತತಃ ಪ್ರಮೃಜ್ಯ ಸಾಶ್ರೂಣಿ ಪುತ್ರಾನ್ ವಚನಮಬ್ರವೀತ್।।
ಪಾಂಡವರಾದರೋ ಅಂತಃಪುರದ ಸ್ತ್ರೀಯರು ಮತ್ತು ಸೇವಕರೊಂದಿಗೆ ಅವಳನ್ನು ಹಿಂಬಾಲಿಸುತ್ತಲೇ ಇದ್ದರು. ಆಗ ಕುಂತಿಯು ಕಣ್ಣೀರನ್ನು ಒರೆಸಿಕೊಳ್ಳುತ್ತಾ ಮಕ್ಕಳಿಗೆ ಈ ಮಾತುಗಳನ್ನಾಡಿದಳು.
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಕುಂತೀವನಪ್ರಸ್ಥಾನೇ ದ್ವಾವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಕುಂತೀವನಪ್ರಸ್ಥಾನ ಎನ್ನುವ ಇಪ್ಪತ್ತೆರಡನೇ ಅಧ್ಯಾಯವು.