033: ಬ್ರಾಹ್ಮಣಪ್ರಶಂಸಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 33

ಸಾರ

ರಾಜನ ಪ್ರಮುಖ ಕರ್ತವ್ಯವು ಯಾವುದು ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಬ್ರಾಹ್ಮಣರನ್ನು ಪೂಜಿಸುವುದೇ ರಾಜನ ಪರಮ ಕರ್ತವ್ಯವೆನ್ನುವುದು (1-25).

113033001 ಯುಧಿಷ್ಠಿರ ಉವಾಚ।
13033001a ಕಿಂ ರಾಜ್ಞಃ ಸರ್ವಕೃತ್ಯಾನಾಂ ಗರೀಯಃ ಸ್ಯಾತ್ಪಿತಾಮಹ।
13033001c ಕಿಂ ಕುರ್ವನ್ಕರ್ಮ ನೃಪತಿರುಭೌ ಲೋಕೌ ಸಮಶ್ನುತೇ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ರಾಜನಿಗೆ ಸರ್ವಕಾರ್ಯಗಳಲ್ಲಿ ಅತಿಮುಖ್ಯವಾದುದು ಯಾವುದು? ನೃಪತಿಯು ಯಾವ ಕರ್ಮವನ್ನು ಮಾಡಿ ಎರಡೂ ಲೋಕಗಳಲ್ಲಿ ಫಲವನ್ನು ಪಡೆಯುತ್ತಾನೆ?”

13033002 ಭೀಷ್ಮ ಉವಾಚ।
13033002a ಏತದ್ರಾಜ್ಞಃ ಕೃತ್ಯತಮಮಭಿಷಿಕ್ತಸ್ಯ ಭಾರತ।
13033002c ಬ್ರಾಹ್ಮಣಾನಾಮನುಷ್ಠಾನಮತ್ಯಂತಂ ಸುಖಮಿಚ್ಚತಾ।
13033002e ಶ್ರೋತ್ರಿಯಾನ್ಬ್ರಾಹ್ಮಣಾನ್ವೃದ್ಧಾನ್ನಿತ್ಯಮೇವಾಭಿಪೂಜಯೇತ್।।

ಭೀಷ್ಮನು ಹೇಳಿದನು: “ಭಾರತ! ಅತ್ಯಂತ ಸುಖವನ್ನು ಇಚ್ಛಿಸುವ ಅಭಿಷಿಕ್ತ ರಾಜನು ಮಾಡಬೇಕಾದ ಅತಿ ಮುಖ್ಯ ಕಾರ್ಯವು ಬ್ರಾಹ್ಮಣರನ್ನು ಸತ್ಕರಿಸುವುದು. ಅವನು ನಿತ್ಯವೂ ಶ್ರೋತ್ರಿ ವೃದ್ಧ ಬ್ರಾಹ್ಮಣರನ್ನು ಪೂಜಿಸಬೇಕು.

13033003a ಪೌರಜಾನಪದಾಂಶ್ಚಾಪಿ ಬ್ರಾಹ್ಮಣಾಂಶ್ಚ ಬಹುಶ್ರುತಾನ್।
13033003c ಸಾಂತ್ವೇನ ಭೋಗದಾನೇನ ನಮಸ್ಕಾರೈಸ್ತಥಾರ್ಚಯೇತ್।।

ನಗರ-ಗ್ರಾಮ ಪ್ರದೇಶಗಳಲ್ಲಿರುವ ಬಹುಶ್ರುತ ಬ್ರಾಹ್ಮಣರನ್ನು ಸಂತವಿಸಿ ಭೋಗದಾನಗಳಿಂದ ಮತ್ತು ನಮಸ್ಕಾರಗಳಿಂದ ಅರ್ಚಿಸಬೇಕು.

13033004a ಏತತ್ಕೃತ್ಯತಮಂ ರಾಜ್ಞೋ ನಿತ್ಯಮೇವೇತಿ ಲಕ್ಷಯೇತ್।
13033004c ಯಥಾತ್ಮಾನಂ ಯಥಾ ಪುತ್ರಾಂಸ್ತಥೈತಾನ್ಪರಿಪಾಲಯೇತ್।।

ತನ್ನನ್ನು ಮತ್ತು ತನ್ನ ಪುತ್ರರನ್ನು ಹೇಗೋ ಹಾಗೆ ಅವರನ್ನು ಪರಿಪಾಲಿಸಬೇಕು. ನಿತ್ಯವೂ ಅವರ ಕಡೆ ಲಕ್ಷ್ಯವಹಿಸಬೇಕು. ಇದು ರಾಜನ ಪರಮ ಕರ್ತವ್ಯವು.

13033005a ಯೇ ಚಾಪ್ಯೇಷಾಂ ಪೂಜ್ಯತಮಾಸ್ತಾದೃಢಂ ಪ್ರತಿಪೂಜಯೇತ್।
13033005c ತೇಷು ಶಾಂತೇಷು ತದ್ರಾಷ್ಟ್ರಂ ಸರ್ವಮೇವ ವಿರಾಜತೇ।।

ಅವರಲ್ಲಿಯೇ ಪೂಜ್ಯತಮರನ್ನು ದೃಢವಾಗಿ ಪ್ರತಿಪೂಜಿಸಬೇಕು. ಅವರು ಶಾಂತರಾಗಿದ್ದರೆ ರಾಷ್ಟ್ರವೆಲ್ಲವೂ ವಿರಾಜಿಸುತ್ತದೆ.

13033006a ತೇ ಪೂಜ್ಯಾಸ್ತೇ ನಮಸ್ಕಾರ್ಯಾಸ್ತೇ ರಕ್ಷ್ಯಾಃ ಪಿತರೋ ಯಥಾ।
13033006c ತೇಷ್ವೇವ ಯಾತ್ರಾ ಲೋಕಸ್ಯ ಭೂತಾನಾಮಿವ ವಾಸವೇ।।

ಪಿತೃಗಳಂತೆ ಅವರು ರಾಜರಿಗೆ ಪೂಜ್ಯರು. ನಮಸ್ಕಾರ್ಯರು. ರಕ್ಷಕರು. ಭೂತಗಳು ವಾಸವನನ್ನು ಹೇಗೋ ಹಾಗೆ ಲೋಕದ ಯಾತ್ರೆಯು ಇವರನ್ನೇ ಅವಲಂಬಿಸಿದೆ.

13033007a ಅಭಿಚಾರೈರುಪಾಯೈಶ್ಚ ದಹೇಯುರಪಿ ತೇಜಸಾ।
13033007c ನಿಃಶೇಷಂ ಕುಪಿತಾಃ ಕುರ್ಯುರುಗ್ರಾಃ ಸತ್ಯಪರಾಕ್ರಮಾಃ।।

ಈ ಸತ್ಯಪರಾಕ್ರಮಿಗಳು ಕುಪಿತರಾದರೆ ಅಭಿಚಾರ ಉಪಾಯಗಳಿಂದ ತೇಜಸ್ಸಿನಿಂದ ದಹಿಸಿ ಬಿಡುತ್ತಾರೆ. ಕುಪಿತರಾಗಿ ಎಲ್ಲವನ್ನೂ ನಿಃಶೇಷವನ್ನಾಗಿಸಿಬಿಡುತ್ತಾರೆ.

13033008a ನಾಂತಮೇಷಾಂ ಪ್ರಪಶ್ಯಾಮಿ ನ ದಿಶಶ್ಚಾಪ್ಯಪಾವೃತಾಃ।
13033008c ಕುಪಿತಾಃ ಸಮುದೀಕ್ಷಂತೇ ದಾವೇಷ್ವಗ್ನಿಶಿಖಾ ಇವ।।

ಅವರ ಕೋಪಕ್ಕೆ ಅಂತ್ಯವು ಕಾಣುವುದಿಲ್ಲ. ದಿಕ್ಕುಗಳೂ ಅದನ್ನು ತಡೆಯಲಾರವು. ಕುಪಿತರಾದ ಅವರ ದೃಷ್ಟಿಯು ದಾವಾಗ್ನಿಯ ಜ್ವಾಲೆಗಳಂತೆ.

13033009a ವಿದ್ಯನ್ತೇಷಾಂ ಸಾಹಸಿಕಾ ಗುಣಾಸ್ತೇಷಾಮತೀವ ಹಿ।
13033009c ಕೂಪಾ ಇವ ತೃಣಚ್ಚನ್ನಾ ವಿಶುದ್ಧಾ ದ್ಯೌರಿವಾಪರೇ।।

ಅತೀವ ಗುಣಶಾಲಿಗಳಾಗಿರುವ ಅವರನ್ನು ಸಾಹಸಿಗಳೂ ತಿಳಿದುಕೊಂಡಿರಬೇಕು. ಕೆಲವರು ಹುಲ್ಲುಮುಚ್ಚಿದ ಬಾವಿಗಳಂತಿದ್ದರೆ ಅನ್ಯರು ಆಕಾಶದಂತೆ ವಿಶುದ್ಧರಾಗಿರುತ್ತಾರೆ.

13033010a ಪ್ರಸಹ್ಯಕಾರಿಣಃ ಕೇ ಚಿತ್ಕಾರ್ಪಾಸಮೃದವೋಽಪರೇ।
13033010c ಸಂತಿ ಚೈಷಾಮತಿಶಠಾಸ್ತಥಾನ್ಯೇಽತಿತಪಸ್ವಿನಃ।।

ಕೆಲವರು ಶಪಥಮಾಡುತ್ತಾರೆ. ಕೆಲವರು ಹತ್ತಿಯಂತೆ ಮೃದುವಾಗಿರುತ್ತಾರೆ. ಕೆಲವರು ಉದ್ಧಟರಾಗಿರುತ್ತಾರೆ. ಅನ್ಯರು ಅತಿ ತಪಸ್ವಿಗಳಾಗಿರುತ್ತಾರೆ.

13033011a ಕೃಷಿಗೋರಕ್ಷ್ಯಮಪ್ಯನ್ಯೇ ಭೈಕ್ಷಮನ್ಯೇಽಪ್ಯನುಷ್ಠಿತಾಃ।
13033011c ಚೋರಾಶ್ಚಾನ್ಯೇಽನೃತಾಶ್ಚಾನ್ಯೇ ತಥಾನ್ಯೇ ನಟನರ್ತಕಾಃ।।

ಅವರಲ್ಲಿ ಕೆಲವರು ಕೃಷಿ-ಗೋರಕ್ಷಣೆಯಲ್ಲಿರುತ್ತಾರೆ. ಅನ್ಯರು ಭಿಕ್ಷಾವೃತ್ತಿಯಲ್ಲಿರುತ್ತಾರೆ. ಅನ್ಯರು ಚೋರರಾಗಿದ್ದರೆ ಅನ್ಯರು ಸುಳ್ಳುಗಾರರಾಗಿರಬಹುದು. ಅನ್ಯರು ನಟನರ್ತಕರಾಗಿರಬಹುದು.

13033012a ಸರ್ವಕರ್ಮಸು ದೃಶ್ಯಂತೇ ಪ್ರಶಾಂತೇಷ್ವಿತರೇಷು ಚ।
13033012c ವಿವಿಧಾಚಾರಯುಕ್ತಾಶ್ಚ ಬ್ರಾಹ್ಮಣಾ ಭರತರ್ಷಭ।।

ಭರತರ್ಷಭ! ಪ್ರಾಶಾಂತರಾಗಿರಲಿ ಇಲ್ಲದಿರಲಿ ಅವರು ಸರ್ವಕರ್ಮಗಳಲ್ಲಿ ಕಾಣುತ್ತಾರೆ. ಬ್ರಾಹ್ಮಣರು ವಿವಿಧ ಆಕಾರಯುಕ್ತರಾಗಿರುತ್ತಾರೆ.

13033013a ನಾನಾಕರ್ಮಸು ಯುಕ್ತಾನಾಂ ಬಹುಕರ್ಮೋಪಜೀವಿನಾಮ್।
13033013c ಧರ್ಮಜ್ಞಾನಾಂ ಸತಾಂ ತೇಷಾಂ ನಿತ್ಯಮೇವಾನುಕೀರ್ತಯೇತ್।।

ನಾನಾ ಕರ್ಮಗಳಲ್ಲಿ ಯುಕ್ತರಾಗಿರುವ ಮತ್ತು ಬಹುಕರ್ಮಗಳಿಂದ ಉಪಜೀವನವನ್ನು ನಡೆಸುವ ಆ ಧರ್ಮಜ್ಞ ಸಂತರನ್ನು ನಿತ್ಯವೂ ಅನುಕೀರ್ತನ ಮಾಡಬೇಕು.

13033014a ಪಿತೄಣಾಂ ದೇವತಾನಾಂ ಚ ಮನುಷ್ಯೋರಗರಕ್ಷಸಾಮ್।
13033014c ಪುರೋಹಿತಾ ಮಹಾಭಾಗಾ ಬ್ರಾಹ್ಮಣಾ ವೈ ನರಾಧಿಪ।।

ನರಾಧಿಪ! ಪಿತೃಗಳ, ದೇವತೆಗಳ, ಮನುಷ್ಯರ, ಉರಗ-ರಾಕ್ಷಸರ ಪುರೋಹಿತರು ಮಹಾಭಾಗ ಬ್ರಾಹ್ಮಣರೇ.

13033015a ನೈತೇ ದೇವೈರ್ನ ಪಿತೃಭಿರ್ನ ಗಂಧರ್ವೈರ್ನ ರಾಕ್ಷಸೈಃ।
13033015c ನಾಸುರೈರ್ನ ಪಿಶಾಚೈಶ್ಚ ಶಕ್ಯಾ ಜೇತುಂ ದ್ವಿಜಾತಯಃ।।

ದೇವತೆಗಳಾಗಲೀ, ಪಿತೃಗಳಾಗಲೀ, ಗಂಧರ್ವರಾಗಲೀ, ರಾಕ್ಷಸರಾಗಲೀ, ಅಸುರರಾಗಲೀ, ಪಿಶಾಚಿಗಳಾಗಲೀ ದ್ವಿಜಾತಿಯವರನ್ನು ಗೆಲ್ಲಲು ಶಕ್ಯರಲ್ಲ.

13033016a ಅದೈವಂ ದೈವತಂ ಕುರ್ಯುರ್ದೈವತಂ ಚಾಪ್ಯದೈವತಮ್।
13033016c ಯಮಿಚ್ಚೇಯುಃ ಸ ರಾಜಾ ಸ್ಯಾದ್ಯಂ ದ್ವಿಷ್ಯುಃ ಸ ಪರಾಭವೇತ್।।

ಬ್ರಾಹ್ಮಣರು ಇಚ್ಛಿಸಿದರೆ ದೇವತೆಗಳಲ್ಲದವರನ್ನು ದೇವತೆಗಳನ್ನಾಗಿಯೂ, ದೇವತೆಗಳನ್ನು ದೇವತೆಗಳಲ್ಲದಂತೆಯೂ ಮಾಡಬಲ್ಲರು. ರಾಜನನ್ನಾಗಿಸಬಲ್ಲರು, ರಾಜನನ್ನು ಪರಾಜಯಗೊಳಿಸಲೂ ಬಲ್ಲರು.

13033017a ಪರಿವಾದಂ ಚ ಯೇ ಕುರ್ಯುರ್ಬ್ರಾಹ್ಮಣಾನಾಮಚೇತಸಃ।
13033017c ನಿಂದಾಪ್ರಶಂಸಾಕುಶಲಾಃ ಕೀರ್ತ್ಯಕೀರ್ತಿಪರಾವರಾಃ।
13033017e ಪರಿಕುಪ್ಯಂತಿ ತೇ ರಾಜನ್ಸತತಂ ದ್ವಿಷತಾಂ ದ್ವಿಜಾಃ।।

ಬ್ರಾಹ್ಮಣರನ್ನು ನಿಂದಿಸುವವರು ಮಂದಬುದ್ಧಿಯುಳ್ಳವರು. ರಾಜನ್! ನಿಂದನೆ-ಪ್ರಶಂಸೆಗಳಲ್ಲಿ ಕುಶಲರಾದ, ಕೀರ್ತಿ-ಅಕೀರ್ತಿಗಳನ್ನು ತರಬಲ್ಲ ದ್ವಿಜರು ಅವರನ್ನು ದ್ವೇಷಿಸುವವರ ಮೇಲೆ ಕುಪಿತರಾಗುತ್ತಾರೆ.

13033018a ಬ್ರಾಹ್ಮಣಾ ಯಂ ಪ್ರಶಂಸಂತಿ ಪುರುಷಃ ಸ ಪ್ರವರ್ಧತೇ।
13033018c ಬ್ರಾಹ್ಮಣೈರ್ಯಃ ಪರಾಕ್ರುಷ್ಟಃ ಪರಾಭೂಯಾತ್ಕ್ಷಣಾದ್ಧಿ ಸಃ।।

ಬ್ರಾಹ್ಮಣರು ಯಾರನ್ನು ಪ್ರಶಂಸಿಸುವರೋ ಆ ಪುರುಷನು ವರ್ಧಿಸುತ್ತಾನೆ. ಬ್ರಾಹ್ಮಣನ ಕೋಪಕ್ಕೊಳಗಾದವನು ಕ್ಷಣದಲ್ಲಿಯೇ ನಾಶಹೊಂದುತ್ತಾನೆ.

13033019a ಶಕಾ ಯವನಕಾಂಬೋಜಾಸ್ತಾಸ್ತಾಃ ಕ್ಷತ್ರಿಯಜಾತಯಃ।
13033019c ವೃಷಲತ್ವಂ ಪರಿಗತಾ ಬ್ರಾಹ್ಮಣಾನಾಮದರ್ಶನಾತ್।।

ಶಕ, ಯವನ, ಮತ್ತು ಕಾಂಬೋಜದ ಕ್ಷತ್ರಿಯಜಾತಿಯವರು ಬ್ರಾಹ್ಮಣರ ದರ್ಶನಮಾಡದೇ ಶೂದ್ರತ್ವವನ್ನು ಹೊಂದಿದರು.

13033020a ದ್ರಮಿಳಾಶ್ಚ ಕಲಿಂಗಾಶ್ಚ ಪುಲಿಂದಾಶ್ಚಾಪ್ಯುಶೀನರಾಃ।
13033020c ಕೌಲಾಃ ಸರ್ಪಾ ಮಾಹಿಷಕಾಸ್ತಾಸ್ತಾಃ ಕ್ಷತ್ರಿಯಜಾತಯಃ।।
13033021a ವೃಷಲತ್ವಂ ಪರಿಗತಾ ಬ್ರಾಹ್ಮಣಾನಾಮದರ್ಶನಾತ್।
13033021c ಶ್ರೇಯಾನ್ಪರಾಜಯಸ್ತೇಭ್ಯೋ ನ ಜಯೋ ಜಯತಾಂ ವರ।।

ವಿಜಯಿಗಳಲ್ಲಿ ಶ್ರೇಷ್ಠ! ಕ್ಷತ್ರಿಯಜಾತಿಯ ದ್ರಮಿಳರು, ಕಲಿಂಗರು, ಪುಲಿಂದರು, ಉಶೀನರರು, ಕೌಲರು, ಸರ್ಪರು, ಮಾಹೀಷಕರು ಬ್ರಾಹ್ಮಣರ ದರ್ಶನ ಮಾಡದೇ ಶೂದ್ರತ್ವವನ್ನು ಪಡೆದರು. ಆ ರಾಜರಿಗೆ ಶ್ರೇಯಸ್ಸೂ ಜಯವೂ ಆಗಲಿಲ್ಲ.

13033022a ಯಸ್ತು ಸರ್ವಮಿದಂ ಹನ್ಯಾದ್ಬ್ರಾಹ್ಮಣಂ ಚ ನ ತತ್ಸಮಮ್।
13033022c ಬ್ರಹ್ಮವಧ್ಯಾ ಮಹಾನ್ದೋಷ ಇತ್ಯಾಹುಃ ಪರಮರ್ಷಯಃ।।

ಎಲ್ಲವನ್ನೂ ನಾಶಮಾಡುವುದು ಮತ್ತು ಬ್ರಾಹ್ಮಣಹತ್ಯೆ ಇವೆರಡೂ ಸಮನಲ್ಲ. ಬ್ರಹ್ಮವಧೆಯು ಮಹಾದೋಷವೆಂದು ಪರಮ ಋಷಿಗಳು ಹೇಳುತ್ತಾರೆ.

13033023a ಪರಿವಾದೋ ದ್ವಿಜಾತೀನಾಂ ನ ಶ್ರೋತವ್ಯಃ ಕಥಂ ಚನ।
13033023c ಆಸೀತಾಧೋಮುಖಸ್ತೂಷ್ಣೀಂ ಸಮುತ್ಥಾಯ ವ್ರಜೇತ ವಾ।।

ದ್ವಿಜಾತಿಯವರ ನಿಂದನೆಯನ್ನು ಯಾವಾಗಲೂ ಕೇಳಬಾರದು. ಅವರ ನಿಂದನೆಯಾಗುತ್ತಿರುವಲ್ಲಿ ತಲೆತಗ್ಗಿಸಿ ಸುಮ್ಮನಿರಬೇಕು ಅಥವಾ ಮೇಲೆದ್ದು ಅಲ್ಲಿಂದ ಹೋಗಬೇಕು.

13033024a ನ ಸ ಜಾತೋ ಜನಿಷ್ಯೋ ವಾ ಪೃಥಿವ್ಯಾಮಿಹ ಕಶ್ಚನ।
13033024c ಯೋ ಬ್ರಾಹ್ಮಣವಿರೋಧೇನ ಸುಖಂ ಜೀವಿತುಮುತ್ಸಹೇತ್।।

ಬ್ರಾಹ್ಮಣರನ್ನು ವಿರೋಧಿಸಿ ಸುಖವಾಗಿ ಜೀವಿಸಲು ಬಯಸುವವನು ಈ ಪೃಥ್ವಿಯಲ್ಲಿ ಎಂದೂ ಹುಟ್ಟಿಲ್ಲ ಅಥವಾ ಮುಂದೆ ಹುಟ್ಟುವುದಿಲ್ಲ.

13033025a ದುರ್ಗ್ರಹೋ ಮುಷ್ಟಿನಾ ವಾಯುರ್ದುಃಸ್ಪರ್ಶಃ ಪಾಣಿನಾ ಶಶೀ।
13033025c ದುರ್ಧರಾ ಪೃಥಿವೀ ಮೂರ್ಧ್ನಾ ದುರ್ಜಯಾ ಬ್ರಾಹ್ಮಣಾ ಭುವಿ।।

ವಾಯುವನ್ನು ಮುಷ್ಟಿಯಲ್ಲಿ ಹಿಡಿದಿಡುವುದು ದುಃಸಾಧ್ಯ. ಚಂದ್ರನನ್ನು ಕೈಗಳಿಂದ ಮುಟ್ಟುವುದು ಅಸಾಧ್ಯ. ಪೃಥ್ವಿಯನ್ನು ತಲೆಯ ಮೇಲೆ ಹೊತ್ತುಕೊಳ್ಳುವುದು ದುಃಸಾಧ್ಯ. ಹಾಗೆಯೇ ಭುವಿಯಲ್ಲಿ ಬ್ರಾಹ್ಮಣರನ್ನು ಗೆಲ್ಲುವುದು ಅಸಾಧ್ಯ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಬ್ರಾಹ್ಮಣಪ್ರಶಂಸಾ ನಾಮ ತ್ರ್ಯಸ್ತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಬ್ರಾಹ್ಮಣಪ್ರಶಂಸಾ ಎನ್ನುವ ಮೂವತ್ಮೂರನೇ ಅಧ್ಯಾಯವು.


  1. ಭಾರತ ದರ್ಶನದಲ್ಲಿ ಈ ಅಧ್ಯಾಯಕ್ಕೆ ಮೊದಲು ರಾಜರ್ಷಿ ವೃಷದರ್ಭನು ಶರಣುಬಂದ ಕಪೋತವನ್ನು ರಕ್ಷಿಸಿದ ಕಥೆಯ ಒಂದು ಅಧ್ಯಾಯವಿದೆ. ಈ ಅಧಿಕ ಅಧ್ಯಾಯವು ಆರಣ್ಯಕ ಪರ್ವದ ಅಧ್ಯಾಯ 131ರಂತೆಯೇ ಇದೆ. ↩︎