030: ಇಂದ್ರಮತಂಗಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 30

ಸಾರ

ತಪಸ್ಸನ್ನು ಮುಂದುವರಿಸಿದರೂ ಮತಂಗನಿಗೆ ಬ್ರಾಹ್ಮಣತ್ವವು ದೊರೆಯದಿರಲು ಅವನು ಇಂದ್ರನಿಂದ ಅನ್ಯ ವರವನ್ನು ಪಡೆದುಕೊಂಡಿದುದು (1-16).

13030001 ಭೀಷ್ಮ ಉವಾಚ।
13030001a ಏವಮುಕ್ತೋ ಮತಂಗಸ್ತು ಭೃಶಂ ಶೋಕಪರಾಯಣಃ।
13030001c ಅತಿಷ್ಠತ ಗಯಾಂ ಗತ್ವಾ ಸೋಽಂಗುಷ್ಠೇನ ಶತಂ ಸಮಾಃ।।

ಭೀಷ್ಮನು ಹೇಳಿದನು: “ಇದನ್ನು ಕೇಳಿ ಅತ್ಯಂತ ಶೋಕಪರಾಯಣನಾದ ಮತಂಗನಾದರೋ ಗಯೆಗೆ ಹೋಗಿ ನೂರು ವರ್ಷಗಳ ಕಾಲ ಅಂಗುಷ್ಠದ ಮೇಲೆ ನಿಂತುಕೊಂಡನು.

13030002a ಸುದುಷ್ಕರಂ ವಹನ್ಯೋಗಂ ಕೃಶೋ ಧಮನಿಸಂತತಃ।
13030002c ತ್ವಗಸ್ಥಿಭೂತೋ ಧರ್ಮಾತ್ಮಾ ಸ ಪಪಾತೇತಿ ನಃ ಶ್ರುತಮ್।।

ದುಷ್ಕರ ಯೋಗವನ್ನಾಶ್ರಯಿಸಿ ಧಮನಿ-ಮೂಳೆಗಳು ಮಾತ್ರ ಕಾಣುವಷ್ಟು ಕೃಶನಾಗಿ, ಕೇವಲ ಚರ್ಮ-ಮೂಳೆಗಳನ್ನು ಹೊಂದಿದ ಆ ಧರ್ಮಾತ್ಮನು ಬಿದ್ದನೆಂದು ನಾವು ಕೇಳಿದ್ದೇವೆ.

13030003a ತಂ ಪತಂತಮಭಿದ್ರುತ್ಯ ಪರಿಜಗ್ರಾಹ ವಾಸವಃ।
13030003c ವರಾಣಾಮೀಶ್ವರೋ ದಾತಾ ಸರ್ವಭೂತಹಿತೇ ರತಃ।।

ಬೀಳುತ್ತಿರುವ ಅವನನ್ನು ವಾಸವನು ಓಡಿಹೋಗಿ ಹಿಡಿದನು. ಸರ್ವಭೂತಹಿತರತನಾದ ಆ ಈಶ್ವರನು ವರಗಳನ್ನಿತ್ತನು.

13030004 ಶಕ್ರ ಉವಾಚ।
13030004a ಮತಂಗ ಬ್ರಾಹ್ಮಣತ್ವಂ ತೇ ಸಂವೃತಂ ಪರಿಪಂಥಿಭಿಃ1
13030004c ಪೂಜಯನ್ಸುಖಮಾಪ್ನೋತಿ ದುಃಖಮಾಪ್ನೋತ್ಯಪೂಜಯನ್।।

ಶಕ್ರನು ಹೇಳಿದನು: “ಮತಂಗ! ನಿನ್ನ ಬ್ರಾಹ್ಮಣತ್ವವು ಪರಿಪಂಥಿಗಳಿಂದ ಸಂವೃತವಾಗಿದೆ2. ಬ್ರಾಹ್ಮಣತ್ವವನ್ನು ಪೂಜಿಸುವುದರಿಂದ ಸುಖವನ್ನು ಹೊಂದುತ್ತೀಯೆ. ಪೂಜಿಸದೇ ದುಃಖವನ್ನು ಹೊಂದುತ್ತೀಯೆ.

13030005a ಬ್ರಾಹ್ಮಣೇ ಸರ್ವಭೂತಾನಾಂ ಯೋಗಕ್ಷೇಮಃ ಸಮಾಹಿತಃ।
13030005c ಬ್ರಾಹ್ಮಣೇಭ್ಯೋಽನುತೃಪ್ಯಂತಿ ಪಿತರೋ ದೇವತಾಸ್ತಥಾ।।

ಬ್ರಾಹ್ಮಣನು ಸರ್ವಭೂತಗಳ ಯೋಗ-ಕ್ಷೇಮಗಳಲ್ಲಿ ನಿರತನಾಗಿರುತ್ತಾನೆ. ಬ್ರಾಹ್ಮಣರಿಂದ ಪಿತೃಗಳು ಮತ್ತು ದೇವತೆಗಳು ತೃಪ್ತಿಗೊಳ್ಳುತ್ತಾರೆ.

13030006a ಬ್ರಾಹ್ಮಣಃ ಸರ್ವಭೂತಾನಾಂ ಮತಂಗ ಪರ ಉಚ್ಯತೇ।
13030006c ಬ್ರಾಹ್ಮಣಃ ಕುರುತೇ ತದ್ಧಿ ಯಥಾ ಯದ್ಯಚ್ಚ ವಾಂಚತಿ।।

ಮತಂಗ! ಸರ್ವಭೂತಗಳಲ್ಲಿ ಬ್ರಾಹ್ಮಣನು ಉತ್ತಮನೆಂದು ಹೇಳುತ್ತಾರೆ. ಬ್ರಾಹ್ಮಣನು ಬಯಸಿದುದನ್ನು ಅದೇ ರೀತಿಯಲ್ಲಿ ಪಡೆದುಕೊಳ್ಳುತ್ತಾನೆ.

13030007a ಬಹ್ವೀಸ್ತು ಸಂಸರನ್ಯೋನೀರ್ಜಾಯಮಾನಃ ಪುನಃ ಪುನಃ।
13030007c ಪರ್ಯಾಯೇ ತಾತ ಕಸ್ಮಿಂಶ್ಚಿದ್ಬ್ರಾಹ್ಮಣ್ಯಮಿಹ ವಿಂದತಿ।।

ಮಗೂ! ಜೀವವು ಸಂಸಾರ ಯೋನಿಗಳಲ್ಲಿ ಪುನಃ ಪುನಃ ಹುಟ್ಟು-ಸಾವುಗಳನ್ನು ಅನುಭವಿಸಿ, ಅಂಥಹ ಎಷ್ಟೋ ಜನ್ಮ-ಮರಣಗಳ ಪರ್ಯಾಯದಲ್ಲಿ ಬ್ರಾಹ್ಮಣತ್ವವನ್ನು ಹೊಂದುತ್ತದೆ.”

313030008 ಮತಂಗ ಉವಾಚ।
13030008a ಕಿಂ ಮಾಂ ತುದಸಿ ದುಃಖಾರ್ತಂ ಮೃತಂ ಮಾರಯಸೇ ಚ ಮಾಮ್।
13030008c ತಂ ತು ಶೋಚಾಮಿ ಯೋ ಲಬ್ಧ್ವಾ ಬ್ರಾಹ್ಮಣ್ಯಂ ನ ಬುಭೂಷತೇ।।

ಮತಂಗನು ಹೇಳಿದನು: “ದುಃಖಾರ್ತನಾಗಿರುವ ನನ್ನನ್ನು ನಿನ್ನ ಈ ಮಾತುಗಳಿಂದ ಏಕೆ ಸಂಕಟಪಡಿಸುತ್ತಿರುವೆ? ಬ್ರಾಹ್ಮಣ್ಯವನ್ನು ಪಡೆದೂ ನೀನು ಅದಕ್ಕೆ ಭೂಷಣನಾಗಿ ವರ್ತಿಸುತ್ತಿಲ್ಲ ಎಂದು ನನಗೆ ದುಃಖವಾಗುತ್ತಿದೆ!

13030009a ಬ್ರಾಹ್ಮಣ್ಯಂ ಯದಿ ದುಷ್ಪ್ರಾಪಂ ತ್ರಿಭಿರ್ವರ್ಣೈಃ ಶತಕ್ರತೋ।
13030009c ಸುದುರ್ಲಭಂ ತದಾವಾಪ್ಯ ನಾನುತಿಷ್ಠಂತಿ ಮಾನವಾಃ।।

ಶತಕ್ರತೋ! ಮೂರು ವರ್ಣದವರಿಗೂ ಬ್ರಾಹ್ಮಣ್ಯವು ಪ್ರಾಪ್ತವಾಗುವುದಿಲ್ಲವೆಂದಾದರೆ ಸುದುರ್ಲಭವಾದ ಅದನ್ನು ಪಡೆದ ಮಾನವರೂ ಅದರಂತೆ ನಡೆದುಕೊಳ್ಳುತ್ತಿಲ್ಲ.

13030010a ಯಃ ಪಾಪೇಭ್ಯಃ ಪಾಪತಮಸ್ತೇಷಾಮಧಮ ಏವ ಸಃ।
13030010c ಬ್ರಾಹ್ಮಣ್ಯಂ ಯೋಽವಜಾನೀತೇ ಧನಂ ಲಬ್ಧ್ವೇವ ದುರ್ಲಭಮ್।।

ದುರ್ಲಭ ಧನವನ್ನು ಪಡೆದವನಂತೆ ಬ್ರಾಹ್ಮಣತ್ವವನ್ನು ಹೊಂದಿಯೂ ಅದರ ಹಿರಿಮೆಯನ್ನು ಅರಿಯದೇ ಸ್ವಭಾವ ಜನ್ಮವಾದ ಗುಣಗಳನ್ನು ಹೊಂದಿರದೇ ಇದ್ದರೆ ಅವನು ಪಾಪಿಗಳಲ್ಲಿ ಅಧಮನಾಗುತ್ತಾನೆ.

13030011a ದುಷ್ಪ್ರಾಪಂ ಖಲು ವಿಪ್ರತ್ವಂ ಪ್ರಾಪ್ತಂ ದುರನುಪಾಲನಮ್।
13030011c ದುರವಾಪಮವಾಪ್ಯೈತನ್ನಾನುತಿಷ್ಠಂತಿ ಮಾನವಾಃ।।

ವಿಪ್ರತ್ವವನ್ನು ಪಡೆಯುವುದಕ್ಕಿಂತಲೂ ಅದನ್ನು ಪಡೆದ ನಂತರ ಅದರ ಅನುಪಾಲನೆಮಾಡುವುದು ಇನ್ನೂ ಕಷ್ಟಕರವು. ಪಡೆದುಕೊಳ್ಳಲು ಕಷ್ಟಸಾಧ್ಯವಾದ ಇಂಥಹ ಬ್ರಾಹ್ಮಣತ್ವವನ್ನು ಪಡೆದೂ ಮಾನವರು ಬ್ರಾಹ್ಮಣರಂತೆ ನಡೆದುಕೊಳ್ಳುವುದಿಲ್ಲ.

13030012a ಏಕಾರಾಮೋ ಹ್ಯಹಂ ಶಕ್ರ ನಿರ್ದ್ವಂದ್ವೋ ನಿಷ್ಪರಿಗ್ರಹಃ।
13030012c ಅಹಿಂಸಾದಮದಾನಸ್ಥಃ ಕಥಂ ನಾರ್ಹಾಮಿ ವಿಪ್ರತಾಮ್।।

ಶಕ್ರ! ನಾನು ಏಕಾಂತಪ್ರಿಯನು. ನಿರ್ದ್ವಂದ್ವನೂ ನಿಷ್ಪರಿಗ್ರಹನೂ ಆಗಿದ್ದೇನೆ. ಅಹಿಂಸೆ, ದಮ, ದಾನಗಳಲ್ಲಿ ನಿರತನಾಗಿದ್ದೇನೆ. ಹೀಗಿರುವಾಗ ನಾನು ಹೇಗೆ ವಿಪ್ರತ್ವಕ್ಕೆ ಅರ್ಹನಾಗುವುದಿಲ್ಲ?

13030013a ಯಥಾಕಾಮವಿಹಾರೀ ಸ್ಯಾಂ ಕಾಮರೂಪೀ ವಿಹಂಗಮಃ।
13030013c ಬ್ರಹ್ಮಕ್ಷತ್ರಾವಿರೋಧೇನ ಪೂಜಾಂ ಚ ಪ್ರಾಪ್ನುಯಾಮಹಮ್।।
13030013e ಯಥಾ ಮಮಾಕ್ಷಯಾ ಕೀರ್ತಿರ್ಭವೇಚ್ಚಾಪಿ ಪುರಂದರ।।

ಪುರಂದರ! ನಾನು ಕಾಮರೂಪಿಯಾಗಿ ಸ್ವೇಚ್ಛೆಯಿಂದ ಆಕಾಶದಲ್ಲಿ ಸಂಚರಿಸುವಂತವನಾಗಲಿ. ಬ್ರಾಹ್ಮಣ-ಕ್ಷತ್ರಿಯರಿಗೆ ವಿರೋಧವಾಗದಂತೆ ನಾನು ಗೌರವವನ್ನು ಪಡೆದುಕೊಳ್ಳುವಂತಾಗಲಿ. ನನ್ನ ಕೀರ್ತಿಯು ಅಕ್ಷಯವಾಗಲಿ.”

13030014 ಇಂದ್ರ ಉವಾಚ।
13030014a ಚಂದೋದೇವ ಇತಿ ಖ್ಯಾತಃ ಸ್ತ್ರೀಣಾಂ ಪೂಜ್ಯೋ ಭವಿಷ್ಯಸಿ।

ಇಂದ್ರನು ಹೇಳಿದನು: “ಚಂದೋದೇವನೆಂದು ಖ್ಯಾತನಾಗಿ ಸ್ತ್ರೀಯರಿಗೆ ಪೂಜ್ಯನಾಗುತ್ತೀಯೆ!””

13030015 ಭೀಷ್ಮ ಉವಾಚ।
13030015a ಏವಂ ತಸ್ಮೈ ವರಂ ದತ್ತ್ವಾ ವಾಸವೋಽಂತರಧೀಯತ।
13030015c ಪ್ರಾಣಾಂಸ್ತ್ಯಕ್ತ್ವಾ ಮತಂಗೋಽಪಿ ಪ್ರಾಪ ತತ್ಸ್ಥಾನಮುತ್ತಮಮ್।।

ಭೀಷ್ಮನು ಹೇಳಿದನು: “ಈ ರೀತಿ ವರವನ್ನಿತ್ತು ವಾಸವನು ಅಂತರ್ಧಾನನಾದನು. ಮತಂಗನಾದರೋ ಪ್ರಾಣಗಳನ್ನು ತ್ಯಜಿಸಿ ಆ ಉತ್ತಮ ಸ್ಥಾನವನ್ನು ಪಡೆದುಕೊಂಡನು.

13030016a ಏವಮೇತತ್ಪರಂ ಸ್ಥಾನಂ ಬ್ರಾಹ್ಮಣ್ಯಂ ನಾಮ ಭಾರತ।
13030016c ತಚ್ಚ ದುಷ್ಪ್ರಾಪಮಿಹ ವೈ ಮಹೇಂದ್ರವಚನಂ ಯಥಾ।।

ಭಾರತ! ಬ್ರಾಹ್ಮಣ್ಯವೆನ್ನುವುದು ಅತ್ಯಂತ ಉತ್ತಮ ಸ್ಥಾನವು. ಮಹೇಂದ್ರನು ಹೇಳಿದಂತೆ ಅದನ್ನು ಇಲ್ಲಿ ಪಡೆಯುವುದು ಸಾಧ್ಯವಿಲ್ಲ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಇಂದ್ರಮತಂಗಸಂವಾದೇ ತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಇಂದ್ರಮತಂಗಸಂವಾದ ಎನ್ನುವ ಮೂವತ್ತನೇ ಅಧ್ಯಾಯವು.


  1. ಮತಂಗ ಬ್ರಾಹ್ಮಣತ್ವಂ ತೇ ವಿರುದ್ಧಮಿಹ ದೃಶ್ಯತೇ। ಬ್ರಾಹ್ಮಣ್ಯಂ ದುರ್ಲಭತರಂ ಸಂವೃತಂ ಪರಿಪಂಥಿಭಿಃ।। (ಭಾರತ ದರ್ಶನ). ↩︎

  2. ಸಂವೃತಂ ಪರಿಪಂಥಿಭಿಃ ಅಂದರೆ ಶತ್ರುಗಳಿಂದ ಸಮಾವೃತವಾದುದು ಎಂದರ್ಥ (ಭಾರತದರ್ಶನ). ↩︎

  3. ಇದಕ್ಕೆ ಮೊದಲು ಈ ಅಧಿಕ ಶ್ಲೋಕವಿದೆ: ತದುತ್ಸೃಜ್ಯೇಹ ದುಷ್ಪ್ರಾಪಂ ಬ್ರಾಹ್ಮಣ್ಯಮಕೃತಾತ್ಮಭಿಃ। ಅನ್ಯಂ ವರಂ ವೃಣೀಷ್ವ ತ್ವಂ ದುರ್ಲಭೋಽಯಂ ಹಿ ತೇ ವರಃ।। (ಭಾರತದರ್ಶನ). ↩︎