013: ಲೋಕಯಾತ್ರಾಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 13

ಸಾರ

ಲೋಕಯಾತ್ರೆಯಲ್ಲಿ ಹಿತವನ್ನು ಬಯಸುವವರು ಏನು ಮಾಡಬೇಕು ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಶುಭ-ಅಶುಭ ಕರ್ಮಗಳ ಕುರಿತು ಹೇಳಿದುದು (1-6).

13013001 ಯುಧಿಷ್ಠಿರ ಉವಾಚ।
13013001a ಕಿಂ ಕರ್ತವ್ಯಂ ಮನುಷ್ಯೇಣ ಲೋಕಯಾತ್ರಾಹಿತಾರ್ಥಿನಾ।
13013001c ಕಥಂ ವೈ ಲೋಕಯಾತ್ರಾಂ ತು ಕಿಂಶೀಲಶ್ಚ ಸಮಾಚರೇತ್।।

ಯುಧಿಷ್ಠಿರನು ಹೇಳಿದನು: “ಲೋಕಯಾತ್ರೆಯಲ್ಲಿ ಹಿತವನ್ನು ಬಯಸುವ ಮನುಷ್ಯನು ಏನನ್ನು ಮಾಡಬೇಕು? ಅಂಥವನು ಲೋಕಯಾತ್ರೆಯನ್ನು ಹೇಗೆ ನಡೆಸಬೇಕು ಮತ್ತು ಯಾವ ಶೀಲವನ್ನು ಆಚರಿಸಬೇಕು?”

13013002 ಭೀಷ್ಮ ಉವಾಚ।
13013002a ಕಾಯೇನ ತ್ರಿವಿಧಂ ಕರ್ಮ ವಾಚಾ ಚಾಪಿ ಚತುರ್ವಿಧಮ್।
13013002c ಮನಸಾ ತ್ರಿವಿಧಂ ಚೈವ ದಶ ಕರ್ಮಪಥಾಂಸ್ತ್ಯಜೇತ್।।

ಭೀಷ್ಮನು ಹೇಳಿದನು: “ಶಾರೀರಿಕವಾದ ಮೂರು ವಿಧದ ಕರ್ಮಗಳನ್ನೂ, ಮಾತಿನ ನಾಲ್ಕು ವಿಧದ ಕರ್ಮಗಳನ್ನೂ, ಮತ್ತು ಮನಸ್ಸಿನ ಮೂರು ವಿಧದ ಕರ್ಮಗಳನ್ನೂ – ಒಟ್ಟು ಈ ಹತ್ತು ಕರ್ಮಗಳನ್ನು ತ್ಯಜಿಸಬೇಕು.

13013003a ಪ್ರಾಣಾತಿಪಾತಂ ಸ್ತೈನ್ಯಂ ಚ ಪರದಾರಮಥಾಪಿ ಚ।
13013003c ತ್ರೀಣಿ ಪಾಪಾನಿ ಕಾಯೇನ ಸರ್ವತಃ ಪರಿವರ್ಜಯೇತ್।।

ಪ್ರಾಣಿಗಳನ್ನು ಕೊಲ್ಲುವುದು, ಕದಿಯುವುದು ಮತ್ತು ಪರಪತ್ನಿಯರ ಸಂಗಮಾಡುವುದು –ಶರೀರಕ್ಕೆ ಸಂಬಂಧಿಸಿದ ಈ ಮೂರು ಪಾಪಗಳನ್ನು ಸಂಪೂರ್ಣವಾಗಿ ಪರಿತ್ಯಜಿಸಬೇಕು.

13013004a ಅಸತ್ಪ್ರಲಾಪಂ ಪಾರುಷ್ಯಂ ಪೈಶುನ್ಯಮನೃತಂ ತಥಾ।
13013004c ಚತ್ವಾರಿ ವಾಚಾ ರಾಜೇಂದ್ರ ನ ಜಲ್ಪೇನ್ನಾನುಚಿಂತಯೇತ್।।

ರಾಜೇಂದ್ರ! ಕೆಟ್ಟ, ಕಠೋರ, ಸುಳ್ಳು ಮತ್ತು ಚಾಡಿಯ ಮಾತುಗಳನ್ನಾಡುವುದು - ಈ ನಾಲ್ಕು ವಿಧದ ಮಾತುಗಳಿಂದ ಪಾಪಸಂಘಟನೆಯಾಗುತ್ತದೆ.

13013005a ಅನಭಿಧ್ಯಾ ಪರಸ್ವೇಷು ಸರ್ವಸತ್ತ್ವೇಷು ಸೌಹೃದಮ್।
13013005c ಕರ್ಮಣಾಂ ಫಲಮಸ್ತೀತಿ ತ್ರಿವಿಧಂ ಮನಸಾ ಚರೇತ್।।

ಇತರರ ಮೇಲೆ ಸಂಚನ್ನು ಹೂಡದೇ ಇರುವುದು, ಸರ್ವ ಜೀವಿಗಳ ಕುರಿತು ಸ್ನೇಹಭಾವದಿಂದಿರುವುದು ಮತ್ತು ಕರ್ಮಗಳಿಗೆ ಫಲವಿದೆ ಎನ್ನುವುದನ್ನು ನಂಬುವುದು – ಈ ಮೂರು ಕರ್ಮಗಳನ್ನು ಮನಸಾ ಆಚರಿಸುತ್ತಿರಬೇಕು.

13013006a ತಸ್ಮಾದ್ವಾಕ್ಕಾಯಮನಸಾ ನಾಚರೇದಶುಭಂ ನರಃ।
13013006c ಶುಭಾಶುಭಾನ್ಯಾಚರನ್ ಹಿ ತಸ್ಯ ತಸ್ಯಾಶ್ನುತೇ ಫಲಮ್।।

ಆದುದರಿಂದ ನರನು ಮಾತು-ಶರೀರ-ಮನುಸ್ಸುಗಳಲ್ಲಿ ಅಶುಭವಾದುದನ್ನು ಆಚರಿಸಬಾರದು. ಶುಭ-ಅಶುಭ ಕರ್ಮಗಳನ್ನು ಆಚರಿಸಿ ಅವುಗಳಿಗೆ ತಕ್ಕಂತಹ ಶುಭ-ಅಶುಭ ಫಲಗಳನ್ನು ಅನುಭವಿಸುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಲೋಕಯಾತ್ರಾಕಥನೇ ತ್ರಯೋದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಲೋಕಯಾತ್ರಾಕಥನ ಎನ್ನುವ ಹದಿಮೂರನೇ ಅಧ್ಯಾಯವು.