ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 345
ಸಾರ
ನಾಗಪತ್ನಿಯು ಬ್ರಾಹ್ಮಣನನ್ನು ಸತ್ಕರಿಸಿದುದು ಮತ್ತು ಬ್ರಾಹ್ಮಣನು ನಾಗರಾಜನ ಆಗಮನವನ್ನೇ ಪ್ರತೀಕ್ಷಿಸುವುದು (1-13).
12345001 ಭೀಷ್ಮ ಉವಾಚ।
12345001a ಸ ವನಾನಿ ವಿಚಿತ್ರಾಣಿ ತೀರ್ಥಾನಿ ಚ ಸರಾಂಸಿ ಚ।
12345001c ಅಭಿಗಚ್ಚನ್ ಕ್ರಮೇಣ ಸ್ಮ ಕಂ ಚಿನ್ಮುನಿಮುಪಸ್ಥಿತಃ।।
ಭೀಷ್ಮನು ಹೇಳಿದನು: “ಅವನು ವಿಚಿತ್ರ ವನಗಳನ್ನೂ, ತೀರ್ಥಗಳನ್ನೂ, ಸರೋವರಗಳನ್ನು ದಾಟಿ ಕ್ರಮೇಣವಾಗಿ ಓರ್ವ ಮುನಿಯ ಬಳಿ ಹೋದನು.
12345002a ತಂ ಸ ತೇನ ಯಥೋದ್ದಿಷ್ಟಂ ನಾಗಂ ವಿಪ್ರೇಣ ಬ್ರಾಹ್ಮಣಃ।
12345002c ಪರ್ಯಪೃಚ್ಚದ್ಯಥಾನ್ಯಾಯಂ ಶ್ರುತ್ವೈವ ಚ ಜಗಾಮ ಸಃ।।
ಬ್ರಾಹ್ಮಣನು ತನಗೆ ಆ ವಿಪ್ರನು ಹೇಳಿದ್ದ ನಾಗನ ಕುರಿತು ಅವನಲ್ಲಿ ಕೇಳಿದನು. ಯಥಾನ್ಯಾಯವಾಗಿ ಅವನನ್ನು ಕೇಳಿ ಅಲ್ಲಿಗೆ ಹೋದನು.
12345003a ಸೋಽಭಿಗಮ್ಯ ಯಥಾಖ್ಯಾತಂ ನಾಗಾಯತನಮರ್ಥವಿತ್।
12345003c ಪ್ರೋಕ್ತವಾನಹಮಸ್ಮೀತಿ ಭೋಃಶಬ್ದಾಲಂಕೃತಂ ವಚಃ।।
ಅವನು ಹೇಳಿದಂತಲ್ಲಿಗೇ ನಾಗನ ಮನೆಗೆ ಹೋಗಿ ಆ ಅರ್ಥವಿದುವು “ಭೋ!” ಎಂಬ ಶಬ್ದದಿಂದ ಸಮಲಂಕೃತವಾದ “ಅಹಮಸ್ಮಿ” ಎಂದು ಹೇಳಿದನು.
12345004a ತತಸ್ತಸ್ಯ ವಚಃ ಶ್ರುತ್ವಾ ರೂಪಿಣೀ ಧರ್ಮವತ್ಸಲಾ।
12345004c ದರ್ಶಯಾಮಾಸ ತಂ ವಿಪ್ರಂ ನಾಗಪತ್ನೀ ಪತಿವ್ರತಾ।।
ಅವನ ಆ ಮಾತನ್ನು ಕೇಳಿ ರೂಪಿಣೀ ಧರ್ಮವತ್ಸಲೆ ಪತಿವ್ರತೆ ನಾಗಪತ್ನಿಯು ಆ ವಿಪ್ರನಿಗೆ ಕಾಣಿಸಿಕೊಂಡಳು.
12345005a ಸಾ ತಸ್ಮೈ ವಿಧಿವತ್ಪೂಜಾಂ ಚಕ್ರೇ ಧರ್ಮಪರಾಯಣಾ।
12345005c ಸ್ವಾಗತೇನಾಗತಂ ಕೃತ್ವಾ ಕಿಂ ಕರೋಮೀತಿ ಚಾಬ್ರವೀತ್।।
ಆ ಧರ್ಮಪರಾಯಣೆಯು ವಿಧಿವತ್ತಾಗಿ ಅವನನ್ನು ಪೂಜಿಸಿ ಸ್ವಾಗತಿಸಿ ಮನೆಯೊಳಗೆ ಬರಮಾಡಿಕೊಂಡು “ಏನು ಮಾಡಲಿ?” ಎಂದು ಕೇಳಿದಳು.
12345006 ಬ್ರಾಹ್ಮಣ ಉವಾಚ।
12345006a ವಿಶ್ರಾಂತೋಽಭ್ಯರ್ಚಿತಶ್ಚಾಸ್ಮಿ ಭವತ್ಯಾ ಶ್ಲಕ್ಷ್ಣಯಾ ಗಿರಾ।
12345006c ದ್ರಷ್ಟುಮಿಚ್ಚಾಮಿ ಭವತಿ ತಂ ದೇವಂ ನಾಗಮುತ್ತಮಮ್।।
ಬ್ರಾಹ್ಮಣನು ಹೇಳಿದನು: “ನೀನು ಮಧುರ ಮಾತಿನಿಂದ ನನ್ನನ್ನು ಅರ್ಚಿಸಿದ್ದೀಯೆ ಮತ್ತು ನಾನು ವಿಶ್ರಾಂತನಾಗಿದ್ದೇನೆ. ಉತ್ತಮ ನಾಗದೇವನನ್ನು ನೋಡಲು ಬಯಸಿದ್ದೇನೆ.
12345007a ಏತದ್ಧಿ ಪರಮಂ ಕಾರ್ಯಮೇತನ್ಮೇ ಫಲಮೀಪ್ಸಿತಮ್।
12345007c ಅನೇನಾರ್ಥೇನ ಚಾಸ್ಮ್ಯದ್ಯ ಸಂಪ್ರಾಪ್ತಃ ಪನ್ನಗಾಲಯಮ್।।
ಇದೇ ನನ್ನ ಪರಮ ಕಾರ್ಯವಾಗಿದೆ. ಇದನ್ನೇ ಬಯಸಿ ಬಂದಿದ್ದೇನೆ. ಈ ಉದ್ದೇಶದಿಂದಲೇ ನಾನು ಇಂದು ನಾಗರಾಜನ ಆಲಯಕ್ಕೆ ಬಂದಿದ್ದೇನೆ.”
12345008 ನಾಗಭಾರ್ಯೋವಾಚ।
12345008a ಆರ್ಯ ಸೂರ್ಯರಥಂ ವೋಢುಂ ಗತೋಽಸೌ ಮಾಸಚಾರಿಕಃ।
12345008c ಸಪ್ತಾಷ್ಟಭಿರ್ದಿನೈರ್ವಿಪ್ರ ದರ್ಶಯಿಷ್ಯತ್ಯಸಂಶಯಮ್।।
ನಾಗಭಾರ್ಯೆಯು ಹೇಳಿದಳು: “ವಿಪ್ರ! ಆರ್ಯನು ಸೂರ್ಯರಥವನ್ನು ಹೊರಲು ಹೋಗಿದ್ದಾನೆ. ಒಂದು ತಿಂಗಳು ಈ ಕಾರ್ಯವನ್ನು ಅವನು ಮಾಡಬೇಕಾಗಿದೆ. ಇನ್ನು ಹದಿನೈದು ದಿನಗಳಲ್ಲಿ ಅವನು ನಿನಗೆ ದರ್ಶನವನ್ನೀಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
12345009a ಏತದ್ವಿದಿತಮಾರ್ಯಸ್ಯ ವಿವಾಸಕರಣಂ ಮಮ।
12345009c ಭರ್ತುರ್ಭವತು ಕಿಂ ಚಾನ್ಯತ್ ಕ್ರಿಯತಾಂ ತದ್ವದಸ್ವ ಮೇ।।
ಇಗೋ ಅವನು ಮನೆಯಲ್ಲಿ ಇಲ್ಲದಿರುವುದಕ್ಕೆ ಕಾರಣವನ್ನು ಹೇಳಿದ್ದೇನೆ. ಪತಿಯು ಬರುವವರೆಗೆ ಅನ್ಯ ಯಾವ ಕೆಲಸವನ್ನು ಮಾಡಬೇಕು ಎಂದು ನನಗೆ ಹೇಳು.”
12345010 ಬ್ರಾಹ್ಮಣ ಉವಾಚ।
12345010a ಅನೇನ ನಿಶ್ಚಯೇನಾಹಂ ಸಾಧ್ವಿ ಸಂಪ್ರಾಪ್ತವಾನಿಹ।
12345010c ಪ್ರತೀಕ್ಷನ್ನಾಗಮಂ ದೇವಿ ವತ್ಸ್ಯಾಮ್ಯಸ್ಮಿನ್ಮಹಾವನೇ।।
ಬ್ರಾಹ್ಮಣನು ಹೇಳಿದನು: “ಸಾಧ್ವಿ! ಅವನನ್ನು ಭೇಟಿಯಾಗುವ ನಿಶ್ಚಯದಿಂದಲೇ ನಾನು ಇಲ್ಲಿಗೆ ಬಂದಿದ್ದೇನೆ. ದೇವಿ! ಅವನ ಆಗಮನವನ್ನೇ ಕಾಯುತ್ತಾ ಈ ಮಹಾವನದಲ್ಲಿ ನಾನು ವಾಸಿಸಿಕೊಂಡಿರುತ್ತೇನೆ.
12345011a ಸಂಪ್ರಾಪ್ತಸ್ಯೈವ ಚಾವ್ಯಗ್ರಮಾವೇದ್ಯೋಽಹಮಿಹಾಗತಃ।
12345011c ಮಮಾಭಿಗಮನಂ ಪ್ರಾಪ್ತೋ ವಾಚ್ಯಶ್ಚ ವಚನಂ ತ್ವಯಾ।।
ಅವನು ಬಂದೊಡನೆಯೇ ಅವ್ಯಗ್ರಳಾಗಿ ನಾನು ಇಲ್ಲಿಗೆ ಬಂದಿರುವ ವಿಷಯವನ್ನು ಅವನಿಗೆ ತಿಳಿಸಬೇಕು. ಮತ್ತು ಅವನು ನನ್ನ ಬಳಿ ಬಂದು ದರ್ಶನವನ್ನೀಯುವಂತೆ ನಿನ್ನ ಪತಿಗೆ ಹೇಳಬೇಕು.
12345012a ಅಹಮಪ್ಯತ್ರ ವತ್ಸ್ಯಾಮಿ ಗೋಮತ್ಯಾಃ ಪುಲಿನೇ ಶುಭೇ।
12345012c ಕಾಲಂ ಪರಿಮಿತಾಹಾರೋ ಯಥೋಕ್ತಂ ಪರಿಪಾಲಯನ್।।
ನಾನು ಗೋಮತೀ ನದಿಯ ಶುಭ ತೀರದಲ್ಲಿ ಮಿತಾಹಾರನಾಗಿ ನೀನು ಹೇಳಿರುವ ಕಾಲವನ್ನು ಕಾಯುತ್ತಿರುತ್ತೇನೆ.””
12345013 ಭೀಷ್ಮ ಉವಾಚ।
12345013a ತತಃ ಸ ವಿಪ್ರಸ್ತಾಂ ನಾಗೀಂ ಸಮಾಧಾಯ ಪುನಃ ಪುನಃ।
12345013c ತದೇವ ಪುಲಿನಂ ನದ್ಯಾಃ ಪ್ರಯಯೌ ಬ್ರಾಹ್ಮಣರ್ಷಭಃ।।
ಭೀಷ್ಮನು ಹೇಳಿದನು: “ಆಗ ಆ ವಿಪ್ರ ಬ್ರಾಹ್ಮಣರ್ಷಭನು ನಾಗಪತ್ನಿಯನ್ನು ಪುನಃ ಪುನಃ ಸಮಾಧಾನಗೊಳಿಸುತ್ತಾ ನದಿಯ ತಟಪ್ರದೇಶಕ್ಕೆ ಹೊರಟುಹೋದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ಪಂಚಚತ್ವಾರಿಂಶಾಧಿಕತ್ರಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾನಲ್ವತ್ತೈದನೇ ಅಧ್ಯಾಯವು.