ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 342
ಸಾರ
ಬ್ರಾಹ್ಮಣನು ಅತಿಥಿಯಲ್ಲಿ ಪ್ರಶ್ನೆಗಳನ್ನು ಕೇಳಿದುದು (1-16).
12342001 ಬ್ರಾಹ್ಮಣ ಉವಾಚ।
12342001a ಸಮುತ್ಪನ್ನಾಭಿಧಾನೋಽಸ್ಮಿ ವಾಙ್ಮಾಧುರ್ಯೇಣ ತೇಽನಘ।
12342001c ಮಿತ್ರತಾಮಭಿಪನ್ನಸ್ತ್ವಾಂ ಕಿಂ ಚಿದ್ವಕ್ಷ್ಯಾಮಿ ತಚ್ಚೃಣು।।
ಬ್ರಾಹ್ಮಣನು ಹೇಳಿದನು: “ಅನಘ! ನಿನ್ನ ಮಧುರ ಮಾತುಗಳನ್ನು ಕೇಳಿ ಇನ್ನೂ ಕೆಲವು ವಿಷಯಗಳನ್ನು ಹೇಳಬೇಕೆಂಬ ಮನಸ್ಸಾಗಿದೆ. ನೀನು ಮಿತ್ರತ್ವವನ್ನು ಹೊಂದಿರುವೆ. ನಿನ್ನೊಡನೆ ಕೆಲವು ವಿಷಯಗಳನ್ನು ಹೇಳುತ್ತೇನೆ. ಕೇಳು.
12342002a ಗೃಹಸ್ಥಧರ್ಮಂ ವಿಪ್ರೇಂದ್ರ ಕೃತ್ವಾ ಪುತ್ರಗತಂ ತ್ವಹಮ್।
12342002c ಧರ್ಮಂ ಪರಮಕಂ ಕುರ್ಯಾಂ ಕೋ ಹಿ ಮಾರ್ಗೋ ಭವೇದ್ದ್ವಿಜ।।
“ವಿಪ್ರೇಂದ್ರ! ದ್ವಿಜ! ಗೃಹಸ್ಥಧರ್ಮವನ್ನು ಮಕ್ಕಳಿಗೆ ವಹಿಸಿಕೊಟ್ಟು ನಾನು ಪರಮ ಧರ್ಮವನ್ನು ಆಚರಿಸಬೇಕೆಂದಿದ್ದೇನೆ. ಅದಕ್ಕೆ ಯಾವುದಾದರೂ ಮಾರ್ಗವಿದೆಯೇ?
12342003a ಅಹಮಾತ್ಮಾನಮಾತ್ಮಸ್ಥಮೇಕ ಏವಾತ್ಮನಿ ಸ್ಥಿತಃ।
12342003c ಕರ್ತುಂ ಕಾಂಕ್ಷಾಮಿ ನೇಚ್ಚಾಮಿ ಬದ್ಧಃ ಸಾಧಾರಣೈರ್ಗುಣೈಃ।।
ಏಕಾಂಗಿಯಾಗಿದ್ದು ಆತ್ಮನಲ್ಲಿಯೇ ಯಾವಾಗಲೂ ಇರುವಿಕೆಯನ್ನು ಕಲ್ಪಿಸಿಕೊಳ್ಳಬೇಕೆಂದು ಬಯಸುತ್ತಿದ್ದೇನೆ. ಆದರೆ ಸಾಧಾರಣ ಗುಣಗಳಿಂದ ಬದ್ಧನಾಗಿರುವ ನಾನು ಒಡನೆಯೇ ಇವುಗಳೆಲ್ಲವನ್ನೂ ಬಿಟ್ಟುಬಿಡಲೂ ಇಚ್ಛೆಪಡುತ್ತಿಲ್ಲ.
12342004a ಯಾವದೇವಾನತೀತಂ ಮೇ ವಯಃ ಪುತ್ರಫಲಾಶ್ರಿತಮ್।
12342004c ತಾವದಿಚ್ಚಾಮಿ ಪಾಥೇಯಮಾದಾತುಂ ಪಾರಲೌಕಿಕಮ್।।
ಪುತ್ರಫಲವನ್ನೇ ಆಶ್ರಯಿಸಿದ್ದ ಇದೂವರೆಗಿನ ನನ್ನ ಆಯುಷ್ಯವೆಲ್ಲವೂ ಕಳೆದೇ ಹೋಯಿತು. ಇನ್ನಾದರೂ ಪರಲೌಕಿಕ ಮಾರ್ಗವನ್ನು ಅನುಸರಿಸಲು ಬಯಸುತ್ತೇನೆ.
12342005a ಅಸ್ಮಿನ್ ಹಿ ಲೋಕಸಂತಾನೇ ಪರಂ ಪಾರಮಭೀಪ್ಸತಃ।
12342005c ಉತ್ಪನ್ನಾ ಮೇ ಮತಿರಿಯಂ ಕುತೋ ಧರ್ಮಮಯಃ ಪ್ಲವಃ।।
ಈ ಲೋಕಸಂತಾನಗಳ ಮಧ್ಯದಲ್ಲಿರುವ ಮತ್ತು ಈ ಸಂಸಾರಸಾಗರವನ್ನು ದಾಟಬೇಕೆಂದು ಇಚ್ಛಿಸಿರುವ ನನಗೆ ಧರ್ಮಮಯ ದೋಣಿಯು ಎಲ್ಲಿ ದೊರಕಬಹುದು ಎಂಬ ಜಿಜ್ಞಾಸೆಯುಂಟಾಗಿದೆ.
12342006a ಸಮುಹ್ಯಮಾನಾನಿ ನಿಶಮ್ಯ ಲೋಕೇ ನಿರ್ಯಾತ್ಯಮಾನಾನಿ ಚ ಸಾತ್ತ್ವಿಕಾನಿ।
12342006c ದೃಷ್ಟ್ವಾ ಚ ಧರ್ಮಧ್ವಜಕೇತುಮಾಲಾಂ ಪ್ರಕೀರ್ಯಮಾಣಾಮುಪರಿ ಪ್ರಜಾನಾಮ್।।
ಈ ಲೋಕದಲ್ಲಿ ಸಾತ್ವಿಕರೂ ಕೂಡ ವಿಧ-ವಿಧದ ಯಾತನೆಗಳಿಂದ ಪೀಡಿತರಾಗುವುದನ್ನು ನೋಡುತ್ತಿದ್ದೇನೆ. ಜನರ ಮೇಲೆ ಧರ್ಮಧ್ವಜಗಳ ಮಾಲೆಗಳು ಹಾರಾಡುತ್ತಿರುವುದನ್ನೂ ನೋಡುತ್ತಿದ್ದೇನೆ.
12342007a ನ ಮೇ ಮನೋ ರಜ್ಯತಿ ಭೋಗಕಾಲೇ ದೃಷ್ಟ್ವಾ ಯತೀನ್ ಪ್ರಾರ್ಥಯತಃ ಪರತ್ರ।
12342007c ತೇನಾತಿಥೇ ಬುದ್ಧಿಬಲಾಶ್ರಯೇಣ ಧರ್ಮಾರ್ಥತತ್ತ್ವೇ ವಿನಿಯುಂಕ್ಷ್ವ ಮಾಂ ತ್ವಮ್।।
ಭೋಗಕಾಲದಲ್ಲಿ ನನ್ನ ಮನಸ್ಸು ರಮಿಸುವುದಿಲ್ಲ. ಪರರನ್ನು ಪ್ರಾರ್ಥಿಸುವ ಯತಿಗಳನ್ನು ನೋಡಿ ವಿರಕ್ತ ಸಂನ್ಯಾಸಧರ್ಮದಲ್ಲಿಯೂ ಆಸಕ್ತಿಯಿಲ್ಲ. ಅತಿಥೇ! ಆದುದರಿಂದ ನೀನು ನಿನ್ನ ಧರ್ಮಾರ್ಥತತ್ತ್ವಯುಕ್ತ ಬುದ್ಧಿಬಲದ ಆಶ್ರಯದಿಂದ ನನ್ನನ್ನು ಧರ್ಮಮಾರ್ಗದಲ್ಲಿ ತೊಡಗಿಸು.””
12342008 ಭೀಷ್ಮ ಉವಾಚ।
12342008a ಸೋಽತಿಥಿರ್ವಚನಂ ತಸ್ಯ ಶ್ರುತ್ವಾ ಧರ್ಮಾಭಿಲಾಷಿಣಃ।
12342008c ಪ್ರೋವಾಚ ವಚನಂ ಶ್ಲಕ್ಷ್ಣಂ ಪ್ರಾಜ್ಞೋ ಮಧುರಯಾ ಗಿರಾ।।
ಭೀಷ್ಮನು ಹೇಳಿದನು: “ಧರ್ಮವನ್ನು ಅಭಿಲಾಶಿಸಿ ಮಾತನಾಡಿದ ಅವನನ್ನು ಕೇಳಿ ಅತಿಥಿಯು ಮೃದು ವಚನವನ್ನು ಮಧುರವಾಣಿಯಲ್ಲಿ ಉತ್ತರಿಸಿದನು:
12342009a ಅಹಮಪ್ಯತ್ರ ಮುಹ್ಯಾಮಿ ಮಮಾಪ್ಯೇಷ ಮನೋರಥಃ।
12342009c ನ ಚ ಸಂನಿಶ್ಚಯಂ ಯಾಮಿ ಬಹುದ್ವಾರೇ ತ್ರಿವಿಷ್ಟಪೇ।।
“ತ್ರಿವಿಷ್ಟಪಕ್ಕೆ ಅನೇಕ ದ್ವಾರಗಳಿರುವಾಗ ಇದೇ ಮನೋರಥವುಳ್ಳ ನಾನೂ ಕೂಡ ಈ ವಿಷಯದಲ್ಲಿ ಗೊಂದಲಕ್ಕೀಡಾಗಿದ್ದೇನೆ. ಯಾವುದೆಂದು ನಿರ್ಣಯಕ್ಕೆ ಬರಲಾರದವನಾಗಿದ್ದೇನೆ.
12342010a ಕೇ ಚಿನ್ಮೋಕ್ಷಂ ಪ್ರಶಂಸಂತಿ ಕೇ ಚಿದ್ಯಜ್ಞಫಲಂ ದ್ವಿಜಾಃ।
12342010c ವಾನಪ್ರಸ್ಥಾಶ್ರಮಂ ಕೇ ಚಿದ್ಗಾರ್ಹಸ್ಥ್ಯಂ ಕೇ ಚಿದಾಶ್ರಿತಾಃ।।
ಕೆಲವರು ಮೋಕ್ಷವನ್ನು ಪ್ರಶಂಸಿಸುತ್ತಾರೆ. ಕೆಲವು ದ್ವಿಜರು ಯಜ್ಞಫಲವನ್ನು ಪ್ರಶಂಸಿಸುತ್ತಾರೆ. ಕೆಲವರು ವಾನಪ್ರಸ್ಥಾಶ್ರಮವನ್ನು ಆಶ್ರಯಿಸಿದರೆ ಇನ್ನು ಕೆಲವರು ಗೃಹಸ್ಥಾಶ್ರಮವನ್ನು ಆಶ್ರಯಿಸುತ್ತಾರೆ.
12342011a ರಾಜಧರ್ಮಾಶ್ರಯಂ ಕೇ ಚಿತ್ಕೇ ಚಿದಾತ್ಮಫಲಾಶ್ರಯಮ್।
12342011c ಗುರುಚರ್ಯಾಶ್ರಯಂ ಕೇ ಚಿತ್ಕೇ ಚಿದ್ವಾಕ್ಯಂ ಯಮಾಶ್ರಯಮ್।।
ಕೆಲವರು ರಾಜಧರ್ಮವನ್ನು ಆಶ್ರಯಿಸುತ್ತಾರೆ. ಕೆಲವರು ಆತ್ಮಫಲವನ್ನು ಆಶ್ರಯಿಸುತ್ತಾರೆ. ಕೆಲವರು ಗುರುಸೇವೆಯನ್ನು ಆಶ್ರಯಿಸಿದರೆ ಇನ್ನು ಕೆಲವರು ಮೌನವ್ರತವನ್ನು ಆಶ್ರಯಿಸುತ್ತಾರೆ.
12342012a ಮಾತರಂ ಪಿತರಂ ಕೇ ಚಿಚ್ಚುಶ್ರೂಷಂತೋ ದಿವಂ ಗತಾಃ।
12342012c ಅಹಿಂಸಯಾ ಪರೇ ಸ್ವರ್ಗಂ ಸತ್ಯೇನ ಚ ತಥಾ ಪರೇ।।
ಮಾತಾ-ಪಿತೃಗಳ ಸೇವೆಯನ್ನು ಮಾಡಿ ಕೆಲವರು ಸ್ವರ್ಗಕ್ಕೆ ಹೋಗಿರುತ್ತಾರೆ. ಇತರರು ಅಹಿಂಸಾಧರ್ಮವನ್ನು ಆಶ್ರಯಿಸಿ ಮತ್ತು ಇನ್ನು ಕೆಲವರು ಸತ್ಯದಿಂದ ಸ್ವರ್ಗಕ್ಕೆ ಹೋಗಿರುತ್ತಾರೆ.
12342013a ಆಹವೇಽಭಿಮುಖಾಃ ಕೇ ಚಿನ್ನಿಹತಾಃ ಸ್ವಿದ್ದಿವಂ ಗತಾಃ।
12342013c ಕೇ ಚಿದುಂಚವ್ರತೈಃ ಸಿದ್ಧಾಃ ಸ್ವರ್ಗಮಾರ್ಗಸಮಾಶ್ರಿತಾಃ।।
ಕೆಲವರು ಶತ್ರುಗಳಿಗೆ ಅಭಿಮುಖವಾಗಿ ನಿಂತು ಯುದ್ಧದಲ್ಲಿ ಹತರಾಗಿ ದಿವಕ್ಕೆ ಹೋಗಿದ್ದಾರೆ. ಕೆಲವರು ಉಂಛವೃತ್ತಿಯನ್ನು ಆಶ್ರಯಿಸಿ ಸಿದ್ಧಿಯನ್ನು ಪಡೆದು ಸ್ವರ್ಗಕ್ಕೆ ಹೋಗಿದ್ದಾರೆ.
12342014a ಕೇ ಚಿದಧ್ಯಯನೇ ಯುಕ್ತಾ ವೇದವ್ರತಪರಾಃ ಶುಭಾಃ।
12342014c ಬುದ್ಧಿಮಂತೋ ಗತಾಃ ಸ್ವರ್ಗಂ ತುಷ್ಟಾತ್ಮಾನೋ ಜಿತೇಂದ್ರಿಯಾಃ।।
ಕೆಲವು ಬುದ್ಧಿವಂತರು ವೇದಾಧ್ಯಯದಲ್ಲಿಯೇ ಯುಕ್ತರಾಗಿ, ವೇದವ್ರತಪರಾಯಣರಾಗಿ, ಶುಭ ತೃಪ್ತಾತ್ಮರೂ ಜಿತೇಂದ್ರಿಯರೂ ಆಗಿ ಸ್ವರ್ಗಕ್ಕೆ ಹೋಗಿದ್ದಾರೆ.
12342015a ಆರ್ಜವೇನಾಪರೇ ಯುಕ್ತಾ ನಿಹತಾನಾರ್ಜವೈರ್ಜನೈಃ।
12342015c ಋಜವೋ ನಾಕಪೃಷ್ಠೇ ವೈ ಶುದ್ಧಾತ್ಮಾನಃ ಪ್ರತಿಷ್ಠಿತಾಃ।।
ಕೆಲವು ಶುದ್ಧಾತ್ಮ ಸರಳಜೀವಿಗಳು ಋಜುಮಾರ್ಗದಲ್ಲಿಯೇ ಇರುತ್ತಿದ್ದು ರುಜುಮಾರ್ಗವಿಲ್ಲದ ವಂಚಕರಿಂದ ಕೊಲ್ಲಲ್ಪಟ್ಟು ಸ್ವರ್ಗದಲ್ಲಿ ಪ್ರತಿಷ್ಠಿತರಾಗಿದ್ದಾರೆ.
12342016a ಏವಂ ಬಹುವಿಧೈರ್ಲೋಕೇ ಧರ್ಮದ್ವಾರೈರನಾವೃತೈಃ।
12342016c ಮಮಾಪಿ ಮತಿರಾವಿಗ್ನಾ ಮೇಘಲೇಖೇವ ವಾಯುನಾ।।
ಹೀಗೆ ಲೋಕದಲ್ಲಿ ಬಹುವಿಧದ ಧರ್ಮದ್ವಾರಗಳು ತೆರೆದಿರುವಾಗ ಯಾವುದನ್ನು ಅನುಸರಿಸಬೇಕು ಎಂದು ನಾನೂ ಕೂಡ – ಗಾಳಿಯಿಂದ ಚದುರಿಸಲ್ಪಟ್ಟ ಮೋಡಗಳ ಸಾಲಿನಂತೆ – ಉದ್ವಿಗ್ನನಾಗಿದ್ದೇನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ದ್ವಾಚತ್ವಾರಿಂಶಾಧಿಕತ್ರಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾನಲ್ವತ್ತೆರಡನೇ ಅಧ್ಯಾಯವು.