ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 329
ಸಾರ
ಅಗ್ನಿ ಮತ್ತು ಸೋಮರು ಹೇಗೆ ಏಕಯೋನಿಗಳಾದರು ಎನ್ನುವ ಅರ್ಜುನನ ಪ್ರಶ್ನೆಗೆ ಶ್ರೀಕೃಷ್ಣನು ಸೃಷ್ಟಿಯ ಸಮಯದಲ್ಲಿ ಸೋಮ-ಅಗ್ನಿಯರು ಬ್ರಹ್ಮನಿಂದ ಹುಟ್ಟಿದುದನ್ನು ವರ್ಣಿಸಿ, ಬ್ರಾಹ್ಮಣರ ಮಹಾತ್ಮೆಯನ್ನು ಅನೇಕ ನಿದರ್ಶನಗಳ ಮೂಲಕ ವರ್ಣಿಸಿದುದು (1-50).
12329001 ಅರ್ಜುನ ಉವಾಚ।
12329001a ಅಗ್ನೀಷೋಮೌ ಕಥಂ ಪೂರ್ವಮೇಕಯೋನೀ ಪ್ರವರ್ತಿತೌ।
12329001c ಏಷ ಮೇ ಸಂಶಯೋ ಜಾತಸ್ತಂ ಚಿಂಧಿ ಮಧುಸೂದನ।।
ಅರ್ಜುನನು ಹೇಳಿದನು: “ಮಧುಸೂದನ! ಹಿಂದೆ ಅಗ್ನಿ-ಸೋಮರು ಹೇಗೆ ಏಕಯೋನಿಗಳಾದರು? ನನಗೆ ಈ ಸಂಶಯವುಂಟಾಗಿದೆ. ಇದನ್ನು ನಿವಾರಿಸು!”
12329002 ಶ್ರೀಭಗವಾನುವಾಚ।
12329002a ಹಂತ ತೇ ವರ್ತಯಿಷ್ಯಾಮಿ ಪುರಾಣಂ ಪಾಂಡುನಂದನ।
12329002c ಆತ್ಮತೇಜೋದ್ಭವಂ ಪಾರ್ಥ ಶೃಣುಷ್ವೈಕಮನಾ ಮಮ।।
ಶ್ರೀಭಗವಂತನು ಹೇಳಿದನು: “ಪಾಂಡುನಂದನ! ಪಾರ್ಥ! ನನ್ನ ತೇಜಸ್ಸಿನಿಂದಲೇ ಹುಟ್ಟಿದ ಪುರಾಣವನ್ನು ಹೇಳುತ್ತೇನೆ. ಏಕಮನಸ್ಕನಾಗಿ ಕೇಳು.
12329003A ಸಂಪ್ರಕ್ಷಾಲನಕಾಲೇಽತಿಕ್ರಾಂತೇ ಚತುರ್ಥೇ ಯುಗಸಹಸ್ರಾಂತೇ।
12329003B ಅವ್ಯಕ್ತೇ ಸರ್ವಭೂತಪ್ರಲಯೇ ಸ್ಥಾವರಜಂಗಮೇ।
12329003C ಜ್ಯೋತಿರ್ಧರಣಿವಾಯುರಹಿತೇಽಂಧೇ ತಮಸಿ ಜಲೈಕಾರ್ಣವೇ ಲೋಕೇ।
12329003D ತಮ ಇತ್ಯೇವಾಭಿಭೂತೇಽಸಂಜ್ಞಕೇಽದ್ವಿತೀಯೇ ಪ್ರತಿಷ್ಠಿತೇ।
12329003E ನೈವ ರಾತ್ರ್ಯಾಂ ನ ದಿವಸೇ ನ ಸತಿ ನಾಸತಿ ನ ವ್ಯಕ್ತೇ ನಾವ್ಯಕ್ತೇ ವ್ಯವಸ್ಥಿತೇ।
12329003F ಏತಸ್ಯಾಮವಸ್ಥಾಯಾಂ ನಾರಾಯಣಗುಣಾಶ್ರಯಾದಕ್ಷಯಾದಜರಾದನಿಂದ್ರಿಯಾದ- ಗ್ರಾಹ್ಯಾದಸಂಭವಾತ್ತ್ಯಾದಹಿಂಸ್ರಾಲ್ಲಲಾಮಾದ್ವಿವಿಧಪ್ರವೃತ್ತಿವಿಶೇ- ಷತ್।
12329003G ಅಕ್ಷಯಾದಜರಾಮರಾದಮೂರ್ತಿತಃ ಸರ್ವವ್ಯಾಪಿನಃ ಸರ್ವಕರ್ತುಃ ಶಾಶ್ವತಾತ್ತಮಸಃ ಪುರುಷಃ ಪ್ರಾದುರ್ಭೂತೋ ಹರಿರವ್ಯಯಃ।।
ನಾಲ್ಕು ಸಹಸ್ರ ಯುಗಗಳ ಅಂತ್ಯದಲ್ಲಿ ಪ್ರಲಯಕಾಲವು ಸಂಭವಿಸಿದ್ದಿತು. ಸ್ಥಾವರಜಂಗಮಾತ್ಮಕ ಸರ್ವಭೂತಗಳೂ ಅವ್ಯಕ್ತದಲ್ಲಿ ಲಯಹೊಂದಿದ್ದವು. ಪೃಥ್ವೀ-ತೇಜಸ್ಸು-ವಾಯುಗಳ ರಹಿತವಾದ ಕುರುಡಾದ ಕತ್ತಲೆಯ ಲೋಕದಲ್ಲಿ ಕೇವಲ ಜಲದ ರಾಶಿಯು ಆವರಿಸಿಕೊಂಡಿತ್ತು. ತಮ ಎಂದು ಸಂಜ್ಞಿತವಾಗಿದ್ದ ಅದೊಂದೇ ಇದ್ದಿತು. ಆಗ ರಾತ್ರಿಯಿರಲಿಲ್ಲ. ದಿವಸವಿರಲಿಲ್ಲ. ಯಾವುದೂ ಇರಲಿಲ್ಲ. ಇಲ್ಲದಿರಲಿಲ್ಲ. ವ್ಯಕ್ತವಾಗಲೀ ಅವ್ಯಕ್ತವಾಗಲೀ ಇರಲಿಲ್ಲ. ಈ ಅವಸ್ಥೆಯಲ್ಲಿ ಗುಣಾಶ್ರಯ, ಅಕ್ಷಯ, ಅಜರ, ಇಂದ್ರಿಯಗಳಿಗೆ ಅಗ್ರಾಹ್ಯ, ಅಸಂಭವ, ಅಹಿಂಸ, ಸುಂದರ, ಅಕ್ಷಯ ಅಜರ ಅಮರ ನಾರಾಯಣನಿಂದ ಸರ್ವವ್ಯಾಪೀ, ಸರ್ವಕರ್ತು, ಶಾಶ್ವತವಾಗಿ ಬೆಳಕಿದ್ದ ಹರಿ ಅವ್ಯಯ ಪುರುಷನು ಪ್ರಾದುರ್ಭವಿಸಿದನು.
12329004A ನಿದರ್ಶನಮಪಿ ಹ್ಯತ್ರ ಭವತಿ।
12329004B ನಾಸೀದಹೋ ನ ರಾತ್ರಿರಾಸೀತ್।
12329004C ನ ಸದಾಸೀನ್ನಾಸದಾಸೀತ್।
12329004D ತಮ ಏವ ಪುರಸ್ತಾದಭವದ್ವಿಶ್ವರೂಪಮ್।
12329004E ಸಾ ವಿಶ್ವಸ್ಯ ಜನನೀತ್ಯೇವಮಸ್ಯಾರ್ಥೋಽನುಭಾಷ್ಯತೇ1।।
ಇದರ ಕುರಿತಾದ ನಿದರ್ಶನವೂ ಇದೆ. ಪ್ರಳಯ ಕಾಲದಲ್ಲಿ ಹಗಲೂ ಇರಲಿಲ್ಲ. ರಾತ್ರಿಯೂ ಇರಲಿಲ್ಲ. ಸತ್ತೂ ಇರಲಿಲ್ಲ. ಅಸತ್ತೂ ಇರಲಿಲ್ಲ. ಕೇವಲ ತಮಸ್ಸೇ ಇದ್ದಿತು. ಅದು ವಿಶ್ವರೂಪವಾಗಿತ್ತು. ಆ ರಾತ್ರಿಯೇ ವಿಶ್ವದ ಜನನಿಯೆಂದು ಇದರ ಅರ್ಥ. ಇದನ್ನು ಹಾಗೆಯೇ ತಿಳಿದುಕೊಳ್ಳಬೇಕು.
12329005A ತಸ್ಯೇದಾನೀಂ ತಮಃಸಂಭವಸ್ಯ ಪುರುಷಸ್ಯ ಪದ್ಮಯೋನೇರ್ಬ್ರಹ್ಮಣಃ ಪ್ರಾದುರ್ಭಾವೇ ಸ ಪುರುಷಃ ಪ್ರಜಾಃ ಸಿಸೃಕ್ಷಮಾಣೋ ನೇತ್ರಾಭ್ಯಾಮಗ್ನೀಷೋಮೌ ಸಸರ್ಜ।
12329005B ತತೋ ಭೂತಸರ್ಗೇ ಪ್ರವೃತ್ತೇ ಪ್ರಜಾಕ್ರಮವಶಾದ್ ಬ್ರಹ್ಮಕ್ಷತ್ರಮುಪಾತಿಷ್ಠತ್।
12329005C ಯಃ ಸೋಮಸ್ತದ್ಬ್ರಹ್ಮ ಯದ್ಬ್ರಹ್ಮ ತೇ ಬ್ರಾಹ್ಮಣಾಃ।
12329005D ಯೋಽಗ್ನಿಸ್ತತ್ ಕ್ಷತ್ರಂ ಕ್ಷತ್ರಾದ್ಬ್ರಹ್ಮ ಬಲವತ್ತರಮ್।
12329005E ಕಸ್ಮಾದಿತಿ ಲೋಕಪ್ರತ್ಯಕ್ಷಗುಣಮೇತತ್ತದ್ಯಥಾ।
12329005F ಬ್ರಾಹ್ಮಣೇಭ್ಯಃ ಪರಂ ಭೂತಂ ನೋತ್ಪನ್ನಪೂರ್ವಮ್।
12329005G ದೀಪ್ಯಮಾನೇಽಗ್ನೌ ಜುಹೋತೀತಿ ಕೃತ್ವಾ ಬ್ರವೀಮಿ।
12329005H ಭೂತಸರ್ಗಃ ಕೃತೋ ಬ್ರಹ್ಮಣಾ ಭೂತಾನಿ ಚ ಪ್ರತಿಷ್ಠಾಪ್ಯ ತ್ರೈಲೋಕ್ಯಂ ಧಾರ್ಯತ ಇತಿ।।
ತಮಸ್ಸಿನಿಂದ ಹುಟ್ಟಿದ ಪದ್ಮಯೋನಿ ಪುರುಷನಿಂದ ಬ್ರಹ್ಮನು ಪ್ರಾದುರ್ಭವಿಸಿದನು. ಆ ಪುರುಷನು ಪ್ರಜೆಗಳನ್ನು ಸೃಷ್ಟಿಸಲು ಬಯಸಿ ತನ್ನ ಕಣ್ಣುಗಳಿಂದ ಅಗ್ನಿ-ಸೋಮರನ್ನು ಸೃಷ್ಟಿಸಿದನು. ಹಾಗೆ ಭೂತಗಳ ಸೃಷ್ಟಿಯು ಪ್ರಾರಂಭವಾಗಲು ಪ್ರಜಾಕ್ರಮವಾಗಿ ಬ್ರಾಹ್ಮಣ-ಕ್ಷತ್ರಿಯರು ಹುಟ್ಟಿಕೊಂಡರು. ಸೋಮನೇ ಬ್ರಹ್ಮನು. ಬ್ರಹ್ಮನೇ ಬ್ರಾಹ್ಮಣರು. ಅಗ್ನಿಯು ಕ್ಷತ್ರಿಯ. ಆದರೆ ಕ್ಷತ್ರಿಯತ್ವಕ್ಕಿಂತಲೂ ಬ್ರಾಹ್ಮಣತ್ವವೇ ಬಲವತ್ತರವಾದುದು. ಇದು ಹೀಗೆ ಏಕಾಯಿತೆಂದರೆ ಇದು ಲೋಕಪ್ರತ್ಯಕ್ಷವಾದ ಗುಣವೇ ಆಗಿದೆ. ಬ್ರಾಹ್ಮಣನಿಗಿಂತಲೂ ಶ್ರೇಷ್ಠಭೂತವು ಅದರ ಹಿಂದೆ ಹುಟ್ಟಿರಲಿಲ್ಲ. ಉರಿಯುತ್ತಿರುವ ಅಗ್ನಿಯಲ್ಲಿ ಹೋಮಮಾಡುತ್ತಾನೆಂದು ಹೇಳಿದ್ದೇನೆ. ಬ್ರಹ್ಮನೇ ಭೂತಗಳನ್ನು ಸೃಷ್ಟಿಸಿದ್ದಾನೆ. ಭೂತಗಳನ್ನು ಪ್ರತಿಷ್ಠಾಪಿಸಿ ಮೂರೂ ಲೋಕಗಳನ್ನು ಅದು ಧರಿಸುತ್ತದೆ.
12329006A ಮಂತ್ರವಾದೋಽಪಿ ಹಿ ಭವತಿ।
12329006B ತ್ವಮಗ್ನೇ ಯಜ್ಞಾನಾಂ ಹೋತಾ ವಿಶ್ವೇಷಾಮ್।
12329006C ಹಿತೋ ದೇವೇಭಿರ್ಮಾನುಷೇ ಜನೇ ಇತಿ।
12329006D ನಿದರ್ಶನಂ ಚಾತ್ರ ಭವತಿ।
12329006E ವಿಶ್ವೇಷಾಮಗ್ನೇ ಯಜ್ಞಾನಾಂ ಹೋತೇತಿ।
12329006F ಹಿತೋ ದೇವೈರ್ಮಾನುಷೈರ್ಜಗತ ಇತಿ।
12329006G ಅಗ್ನಿರ್ಹಿ ಯಜ್ಞಾನಾಂ ಹೋತಾ ಕರ್ತಾ।
12329006H ಸ ಚಾಗ್ನಿರ್ಬ್ರಹ್ಮ।।
ಈ ವಿಷಯದಲ್ಲಿ ವೇದವಾಕ್ಯವೂ ಹೀಗಿದೆ: “ಅಗ್ನಿಯೇ! ನೀನು ಯಜ್ಞಗಳಲ್ಲಿ ಹೋತೃವಾಗಿರುವೆ. ಸಂಪೂರ್ಣ ದೇವತೆಗಳಿಗೂ ಮನುಷ್ಯರಿಗೂ ಮತ್ತು ಜಗತ್ತಿಗೂ ಹಿತೈಷಿಯಾಗಿರುವೆ.” ಈ ವಿಷಯದಲ್ಲಿ ನಿದರ್ಶನವೂ ಇದೆ. “ಅಗ್ನಿಯೇ! ನೀನು ಸಕಲ ವಿಧದ ಯಜ್ಞಗಳಿಗೂ ಹೋತೃವಾಗಿರುವೆ. ಸಮಸ್ತ ದೇವತೆಗಳಿಗೂ, ಮನುಷ್ಯರಿಂದ ಸಹಿತವಾದ ಜಗತ್ತಿಗೂ ನೀನು ಹಿತೈಷಿಯಾಗಿರುವೆ. ಅಗ್ನಿಯೇ ಯಜ್ಞಗಳಲ್ಲಿ ಹೋತೃವೂ ಕರ್ತನೂ ಆಗಿದ್ದಾನೆ. ಉಭಯರೂಪೀ ಅಗ್ನಿಯು ಬ್ರಾಹ್ಮಣನು.
12329007A ನ ಹ್ಯ್ ಋತೇ ಮಂತ್ರಾದ್ಧವನಮಸ್ತಿ।
12329007B ನ ವಿನಾ ಪುರುಷಂ ತಪಃ ಸಂಭವತಿ।
12329007C ಹವಿರ್ಮಂತ್ರಾಣಾಂ ಸಂಪೂಜಾ ವಿದ್ಯತೇ ದೇವಮನುಷ್ಯಾಣಾಮನೇನ ತ್ವಂ ಹೋತೇತಿ ನಿಯುಕ್ತಃ।
12329007D ಯೇ ಚ ಮಾನುಷಾ ಹೋತ್ರಾಧಿಕಾರಾಸ್ತೇ ಚ।
12329007E ಬ್ರಾಹ್ಮಣಸ್ಯ ಹಿ ಯಾಜನಂ ವಿಧೀಯತೇ ನ ಕ್ಷತ್ರವೈಶ್ಯಯೋರ್ದ್ವಿಜಾತ್ಯೋಃ।
12329007F ತಸ್ಮಾದ್ಬ್ರಾಹ್ಮಣಾ ಹ್ಯಗ್ನಿಭೂತಾ ಯಜ್ಞಾನುದ್ವಹಂತಿ।
12329007G ಯಜ್ಞಾ ದೇವಾಂಸ್ತರ್ಪಯಂತಿ ದೇವಾಃ ಪೃಥಿವೀಂ ಭಾವಯಂತಿ।।
ಮಂತ್ರವಿಲ್ಲದೇ ಹವನವಾಗುವುದಿಲ್ಲ. ಪುರುಷನಿಲ್ಲದೇ ತಪಸ್ಸಾಗುವುದಿಲ್ಲ. ಮಂತ್ರೋಕ್ತ ಹವಿಃಪ್ರದಾನದಿಂದ ದೇವ-ಮನುಷ್ಯರು ಸತ್ಕೃತರಾಗುತ್ತಾರೆ. ಆದುದರಿಂದ ನೀನು ಹೋತೃವೆಂದು ನಿಯುಕ್ತನಾಗಿರುವೆ. ಮನುಷ್ಯರಲ್ಲಿ ಹೋತೃವಿನ ಅಧಿಕಾರವು ಬ್ರಾಹ್ಮಣರಿಗೇ ಇದೆ. ಏಕೆಂದರೆ ಬ್ರಾಹ್ಮಣನಿಗೆ ಯಜ್ಞಮಾಡಿಸುವ ವಿಧಾನವು ತಿಳಿದಿದೆ. ದ್ವಿಜಾತಿಯವರೇ ಆದ ಕ್ಷತ್ರಿಯ-ವೈಶ್ಯರಿಗೆ ಈ ಅಧಿಕಾರವಿಲ್ಲ. ಆದುದರಿಂದ ಅಗ್ನಿಭೂತರಾದ ಬ್ರಾಹ್ಮಣರೇ ಯಜ್ಞದ ಭಾರವನ್ನು ನಿರ್ವಹಿಸುತ್ತಾರೆ. ಯಜ್ಞಗಳಿಂದ ದೇವತೆಗಳು ತೃಪ್ತಿಹೊಂದುತ್ತಾರೆ. ದೇವತೆಗಳು ಪೃಥ್ವಿಯನ್ನು ಸಮೃದ್ಧಗೊಳಿಸುತ್ತಾರೆ.
12329008A ಶತಪಥೇ ಹಿ ಬ್ರಾಹ್ಮಣಂ ಭವತಿ।
12329008B ಅಗ್ನೌ ಸಮಿದ್ಧೇ ಸ ಜುಹೋತಿ ಯೋ ವಿದ್ವಾನ್ ಬ್ರಾಹ್ಮಣಮುಖೇ ದಾನಾಹುತಿಂ ಜುಹೋತಿ।
12329008C ಏವಮಪ್ಯಗ್ನಿಭೂತಾ ಬ್ರಾಹ್ಮಣಾ ವಿದ್ವಾಂಸೋಽಗ್ನಿಂ ಭಾವಯಂತಿ।
12329008D ಅಗ್ನಿರ್ವಿಷ್ಣುಃ ಸರ್ವಭೂತಾನ್ಯನುಪ್ರವಿಶ್ಯ ಪ್ರಾಣಾನ್ ಧಾರಯತಿ।
12329008E ಅಪಿ ಚಾತ್ರ ಸನತ್ಕುಮಾರಗೀತಾಃ ಶ್ಲೋಕಾ ಭವಂತಿ।।
ಶತಪಥ ಬ್ರಾಹ್ಮಣದಲ್ಲಿಯೂ ಹೀಗೆ ಹೇಳಲಾಗಿದೆ. ಯಾವ ವಿದ್ವಾಂಸನು ಬ್ರಾಹ್ಮಣನ ಮುಖರೂಪವಾದ ಅಗ್ನಿಯಲ್ಲಿ ಧಾನ್ಯಗಳ ಆಹುತಿಯನ್ನು ಕೊಡುವನೋ ಅವನು ಪ್ರಜ್ವಲಿಸುವ ಅಗ್ನಿಯಲ್ಲಿ ಹೋಮಮಾಡಿದವನಾಗುತ್ತಾನೆ. ಹೀಗೆ ಬ್ರಾಹ್ಮಣರು ಅಗ್ನಿಭೂತರು. ವಿದ್ವಾಂಸರು ಅಗ್ನಿಯನ್ನು ಆರಾಧಿಸುತ್ತಾರೆ. ಅಗ್ನಿಯು ವಿಷ್ಣುವು. ಸರ್ವಭೂತಗಳನ್ನೂ ಪ್ರವೇಶಿಸಿ ಪ್ರಾಣಗಳನ್ನು ಧರಿಸುತ್ತಾನೆ. ಇದಕ್ಕೆ ಸಂಬಂಧಿಸಿದಂತೆ ಸನತ್ಕುಮಾರಗೀತೆಯ ಶ್ಲೋಕಗಳಿವೆ.
12329009a ವಿಶ್ವಂ ಬ್ರಹ್ಮಾಸೃಜತ್ಪೂರ್ವಂ ಸರ್ವಾದಿರ್ನಿರವಸ್ಕರಮ್।
12329009c ಬ್ರಹ್ಮಘೋಷೈರ್ದಿವಂ ತಿಷ್ಠಂತ್ಯಮರಾ ಬ್ರಹ್ಮಯೋನಯಃ।।
ಹಿಂದೆ ಎಲ್ಲಕ್ಕೂ ಆದಿಯಲ್ಲಿ ಬ್ರಹ್ಮನು ನಿರ್ಮಲ ವಿಶ್ವವನ್ನು ಸೃಷ್ಟಿಸಿದನು. ಬ್ರಹ್ಮಯೋನಿ ದೇವತೆಗಳು ಬ್ರಹ್ಮಘೋಷದಿಂದಲೇ ಅಮರರಾಗಿ ದಿವದಲ್ಲಿ ನಿಲ್ಲುತ್ತಾರೆ.
12329010a ಬ್ರಾಹ್ಮಣಾನಾಂ ಮತಿರ್ವಾಕ್ಯಂ ಕರ್ಮ ಶ್ರದ್ಧಾ ತಪಾಂಸಿ ಚ।
12329010c ಧಾರಯಂತಿ ಮಹೀಂ ದ್ಯಾಂ ಚ ಶೈತ್ಯಾದ್ವಾರ್ಯಮೃತಂ ಯಥಾ।।
ಕಾವಡಿಯು ಮನೆಯನ್ನು ಹೇಗೆ ಎತ್ತಿಹಿಡಿದು ನಿಂತಿರುವುದೋ ಹಾಗೆ ಬ್ರಾಹ್ಮಣರ ಬುದ್ಧಿ, ವಾಕ್ಯ, ಕರ್ಮ, ಶ್ರದ್ಧೆ ಮತ್ತು ತಪಸ್ಸುಗಳು ಭೂಮಿ- ಆಕಾಶಗಳನ್ನು ಹಿಡಿದು ನಿಂತಿರುತ್ತವೆ.
12329011a ನಾಸ್ತಿ ಸತ್ಯಾತ್ಪರೋ ಧರ್ಮೋ ನಾಸ್ತಿ ಮಾತೃಸಮೋ ಗುರುಃ।
12329011c ಬ್ರಾಹ್ಮಣೇಭ್ಯಃ ಪರಂ ನಾಸ್ತಿ ಪ್ರೇತ್ಯ ಚೇಹ ಚ ಭೂತಯೇ।।
ಸತ್ಯಕ್ಕಿಂತಲೂ ಶ್ರೇಷ್ಠ ಧರ್ಮವಿಲ್ಲ. ತಾಯಿಗೆ ಸಮನಾದ ಗುರುವಿಲ್ಲ. ಇಹಲೋಕದಲ್ಲಿ ಅಥವಾ ಪರಲೋಕದಲ್ಲಿ ಬ್ರಾಹ್ಮಣನಿಗಿಂತ ಶ್ರೇಷ್ಠನಾದವನು ಇಲ್ಲ.
12329012a ನೈಷಾಮುಕ್ಷಾ ವರ್ಧತೇ ನೋತ ವಾಹಾ ನ ಗರ್ಗರೋ ಮಥ್ಯತೇ ಸಂಪ್ರದಾನೇ।
12329012c ಅಪಧ್ವಸ್ತಾ ದಸ್ಯುಭೂತಾ ಭವಂತಿ ಯೇಷಾಂ ರಾಷ್ಟ್ರೇ ಬ್ರಾಹ್ಮಣಾ ವೃತ್ತಿಹೀನಾಃ।।
ಯಾವ ರಾಷ್ಟ್ರದಲ್ಲಿ ಬ್ರಾಹ್ಮಣರು ವೃತ್ತಿಹೀನರಾಗಿರುವರೋ ಅಲ್ಲಿ ಎತ್ತುಗಳಾಗಲೀ ಕುದುರೆಗಳಾಗಲೀ ಭಾರವನ್ನು ಹೊರುವುದಿಲ್ಲ. ಬೆಣ್ಣೆಯನ್ನಾಗಲೀ ಮಜ್ಜಿಗೆಯನ್ನಾಗಲೀ ಕೊಡಲು ಮೊಸರು ಕಡೆಯುವ ಪಾತ್ರೆಗಳೂ ಇರುವುದಿಲ್ಲ. ಅಂತಹ ರಾಜರು ಎಲ್ಲರಿಂದ ಧಿಕ್ಕರಿಸಲ್ಪಟ್ಟು ದಸ್ಯುಗಳಂತಾಗಿಬಿಡುತ್ತಾರೆ.
12329013A ವೇದಪುರಾಣೇತಿಹಾಸಪ್ರಾಮಾಣ್ಯಾನ್ನಾರಾಯಣಮುಖೋದ್ಗತಾಃ ಸರ್ವಾತ್ಮಾನಃ ಸರ್ವಕರ್ತಾರಃ ಸರ್ವಭಾವನಾಶ್ಚ ಬ್ರಾಹ್ಮಣಾಃ।
12329013B ವಾಕ್ಸಮಕಾಲಂ ಹಿ ತಸ್ಯ2 ದೇವಸ್ಯ ವರಪ್ರದಸ್ಯ ಬ್ರಾಹ್ಮಣಾಃ ಪ್ರಥಮಂ ಪ್ರಾದುರ್ಭೂತಾ ಬ್ರಾಹ್ಮಣೇಭ್ಯಶ್ಚ ಶೇಷಾ ವರ್ಣಾಃ ಪ್ರಾದುರ್ಭೂತಾಃ।
12329013C ಇತ್ಥಂ ಚ ಸುರಾಸುರವಿಶಿಷ್ಟಾ ಬ್ರಾಹ್ಮಣಾ ಯದಾ ಮಯಾ ಬ್ರಹ್ಮಭೂತೇನ ಪುರಾ ಸ್ವಯಮೇವೋತ್ಪಾದಿತಾಃ ಸುರಾಸುರಮಹರ್ಷಯೋ ಭೂತವಿಶೇಷಾಃ ಸ್ಥಾಪಿತಾ ನಿಗೃಹೀತಾಶ್ಚ।।
ಬ್ರಾಹ್ಮಣರು ನಾರಾಯಣನ ಮುಖದಿಂದ ಹುಟ್ಟಿದರೆಂದೂ ಮತ್ತು ಅವರು ಸರ್ವಾತ್ಮರೂ, ಸರ್ವಕರ್ತಾರರೂ ಮತ್ತು ಸರ್ವಭಾವನರೂ ಎಂದು ವೇದ-ಪುರಾಣ-ಇತಿಹಾಸಗಳಲ್ಲಿ ಪ್ರಮಾಣವಿದೆ. ವಾಣಿಯ ಸಮಕಾಲದಲ್ಲಿ ವರಪ್ರದ ದೇವ ಬ್ರಹ್ಮನಿಂದ ಪ್ರಥಮವಾಗಿ ಬ್ರಾಹ್ಮಣರು ಪ್ರಾದುರ್ಭವಿಸಿದರು ಮತ್ತು ಅನಂತರ ಉಳಿದ ವರ್ಣದವರು ಪ್ರಾದುರ್ಭವಿಸಿದರು. ಹೀಗೆ ಬ್ರಾಹ್ಮಣರು ಸುರಾಸುರರಿಗಿಂತಲೂ ವಿಶಿಷ್ಟರಾದವರು. ಹಿಂದೆ ಸ್ವಯಂ ನಾನೇ ಬ್ರಹ್ಮಭೂತನಾಗಿ ಅವರನ್ನು ಸೃಷ್ಟಿಸಿದೆನು. ಸುರಾಸುರಮಹರ್ಷಿಗಳೇ ಮೊದಲಾದ ಭೂತವಿಶೇಷಗಳನ್ನು ಅವರೇ ಸ್ಥಾಪಿಸಿದರು ಮತ್ತು ನಿಗ್ರಹಿಸಿದರು.
12329014A ಅಹಲ್ಯಾಧರ್ಷಣನಿಮಿತ್ತಂ ಹಿ ಗೌತಮಾದ್ಧರಿಶ್ಮಶ್ರುತಾಮಿಂದ್ರಃ ಪ್ರಾಪ್ತಃ।
12329014B ಕೌಶಿಕನಿಮಿತ್ತಂ ಚೇಂದ್ರೋ ಮುಷ್ಕವಿಯೋಗಂ ಮೇಷವೃಷಣತ್ವಂ ಚಾವಾಪ।
12329014C ಅಶ್ವಿನೋರ್ಗ್ರಹಪ್ರತಿಷೇಧೋದ್ಯತವಜ್ರಸ್ಯ ಪುರಂದರಸ್ಯ ಚ್ಯವನೇನ ಸ್ತಂಭಿತೋ ಬಾಹುಃ।
12329014D ಕ್ರತುವಧಪ್ರಾಪ್ತಮನ್ಯುನಾ ಚ ದಕ್ಷೇಣ ಭೂಯಸ್ತಪಸಾ ಚಾತ್ಮಾನಂ ಸಂಯೋಜ್ಯ ನೇತ್ರಾಕೃತಿರನ್ಯಾ ಲಲಾಟೇ ರುದ್ರಸ್ಯೋತ್ಪಾದಿತಾ।।
ಅಹಲ್ಯೆಯನ್ನು ಕಾಡಿಸಿದ ಕಾರಣಕ್ಕಾಗಿ ಇಂದ್ರನು ಗೌತಮನಿಂದ ಹಸಿರು ಬಣ್ಣದ ಗಡ್ಡ-ಮೀಸೆಗಳನ್ನು ಹೊಂದಿದನು. ಕೌಶಿಕ ಗೌತಮನ ಕಾರಣದಿಂದಲೇ ಇಂದ್ರನು ತನ್ನ ವೃಷಣಗಳನ್ನು ಕಳೆದುಕೊಂಡು ಮೇಷವೃಷಣಗಳನ್ನು ಪಡೆದುಕೊಂಡನು. ಅಶ್ವಿನೀ ದೇವತೆಗಳಿಗೆ ನಿಯತವಾಗಿದ್ದ ಯಜ್ಞಭಾಗವನ್ನು ತಡೆಯಲು ವಜ್ರವನ್ನು ಹಿಡಿದೆತ್ತಿದ್ದ ಪುರಂದರನ ಬಾಹುಗಳನ್ನು ಚ್ಯವನನು ಸ್ತಂಭಿಸಿದನು. ತನ್ನ ಕ್ರತುವು ವಿಧ್ವಸ್ತವಾದುದಕ್ಕಾಗಿ ಕೋಪಗೊಂಡ ದಕ್ಷನು ಕಠೋರ ತಪಸ್ಸಿನ ಮೂಲಕ ರುದ್ರನ ಹಣೆಯಲ್ಲಿ ಮತ್ತೊಂದು ಕಣ್ಣು ಹುಟ್ಟುವಂತೆ ಮಾಡಿದನು.
12329015A ತ್ರಿಪುರವಧಾರ್ಥಂ ದೀಕ್ಷಾಮಭ್ಯುಪಗತಸ್ಯ ರುದ್ರಸ್ಯೋಶನಸಾ ಶಿರಸೋ ಜಟಾ ಉತ್ಕೃತ್ಯ ಪ್ರಯುಕ್ತಾಃ।
12329015B ತತಃ ಪ್ರಾದುರ್ಭೂತಾ ಭುಜಗಾಃ।
12329015C ತೈರಸ್ಯ ಭುಜಗೈಃ ಪೀಡ್ಯಮಾನಃ ಕಂಠೋ ನೀಲತಾಮುಪನೀತಃ।
12329015D ಪೂರ್ವೇ ಚ ಮನ್ವಂತರೇ ಸ್ವಾಯಂಭುವೇ ನಾರಾಯಣಹಸ್ತಬಂಧಗ್ರಹಣಾನ್ನೀಲಕಂಠತ್ವಮೇವ ವಾ।।
ತ್ರಿಪುರವಧೆಗಾಗಿ ರುದ್ರನು ದೀಕ್ಷಾಬದ್ಧನಾಗಿರಲು ಉಶನಸನು ತನ್ನ ಶಿರಸ್ಸಿನ ಜಟೆಗಳನ್ನು ಕಿತ್ತು ಅಭಿಮಂತ್ರಿಸಿ ಅವನ ಮೇಲೆ ಪ್ರಯೋಗಿಸಿದನು. ಕೂಡಲೇ ಅವುಗಳಿಂದ ಸರ್ಪಗಳು ಪ್ರಾದುರ್ಭವಿಸಿದವು. ರುದ್ರನ ಕುತ್ತಿಗೆಯನ್ನು ಸುತ್ತಿ ಆ ಸರ್ಪಗಳು ಪೀಡಿಸಲು ಅವನ ಕಂಠವು ನೀಲಿ ಬಣ್ಣವನ್ನು ಪಡೆದುಕೊಂಡಿತು. ಹಿಂದಿನ ಸ್ವಾಯಂಭುವ ಮನ್ವಂತರದಲ್ಲಿ ನಾರಾಯಣನು ತನ್ನ ಕೈಗಳಿಂದ ರುದ್ರನ ಕುತ್ತಿಗೆಯನ್ನು ಹಿಡಿದಿದ್ದುದರಿಂದಲೂ ಅವನು ನೀಲಕಂಠತ್ವವನ್ನು ಪಡೆದುಕೊಂಡನು3.
12329016A ಅಮೃತೋತ್ಪಾದನೇ ಪುರಶ್ಚರಣತಾಮುಪಗತಸ್ಯಾಂಗಿರಸೋ ಬೃಹಸ್ಪತೇರುಪಸ್ಪೃಶತೋ ನ ಪ್ರಸಾದಂ ಗತವತ್ಯಃ ಕಿಲಾಪಃ।
12329016B ಅಥ ಬೃಹಸ್ಪತಿರಪಾಂ ಚುಕ್ರೋಧ।
12329016C ಯಸ್ಮಾನ್ಮಮೋಪಸ್ಪೃಶತಃ ಕಲುಷೀಭೂತಾ ನ ಪ್ರಸಾದಮುಪಗತಾಸ್ತಸ್ಮಾದದ್ಯಪ್ರಭೃತಿ ಝಷಮಕರಮತ್ಸ್ಯಕಚ್ಚಪಜಂತುಸಂಕೀರ್ಣಾಃ ಕಲುಷೀಭವತೇತಿ।
12329016D ತದಾಪ್ರಭೃತ್ಯಾಪೋ ಯಾದೋಭಿಃ ಸಂಕೀರ್ಣಾಃ ಸಂವೃತ್ತಾಃ।।
ಅಮೃತೋತ್ಪಾದನೆಯ ಸಮಯದಲ್ಲಿ ಅಂಗಿರಸನ ಮಗ ಬೃಹಸ್ಪತಿಯು ಪುರಶ್ಚರಣೆಯ ಪ್ರಾರಂಭದಲ್ಲಿ ಉಪಸ್ಪರ್ಷಮಾಡಲು ಹೋದಾಗ ಜಲಾಶಯಗಳು ಪ್ರಸನ್ನವಾಗಿರಲಿಲ್ಲ ಮತ್ತು ಸ್ವಚ್ಛವಾಗಿಯೂ ಇರಲಿಲ್ಲ. ಆಗ ಬೃಹಸ್ಪತಿಯು ಜಲಾಶಯಗಳ ಮೇಲೆ ಕುಪಿತಗೊಂಡನು. “ನಾನು ಆಚಮನಮಾಡಲು ಬಂದ ಸಮಯದಲ್ಲಿ ನೀವು ಕಲುಷಿತರಾಗಿದ್ದೀರಿ. ಪ್ರಶಾಂತವಾಗಿಲ್ಲ. ಆದುದರಿಂದ ನಾನೀಗ ಶಾಪಕೊಡುತ್ತಿದ್ದೇನೆ. ಇಂದಿನಿಂದ ನೀವು ಮೀನು, ಮೊಸಳೆ, ಆಮೆ ಇವೇ ಮೊದಲಾದ ಜಂತುಗಳಿಂದ ಕಲುಷಿತರಾಗಿರಿ” ಎಂದು ಶಾಪವನ್ನಿತ್ತನು. ಅಂದಿನಿಂದ ಎಲ್ಲ ಜಲಾಶಯಗಳೂ ಜಲಜಂತುಗಳಿಂದ ತುಂಬಿಹೋಗಿವೆ.
12329017A ವಿಶ್ವರೂಪೋ ವೈ ತ್ವಾಷ್ಟ್ರಃ ಪುರೋಹಿತೋ ದೇ ವಾನಾಮಾಸೀತ್ಸ್ವಸ್ರೀಯೋಽಸುರಾಣಾಮ್।
12329017B ಸ ಪ್ರತ್ಯಕ್ಷಂ ದೇವೇಭ್ಯೋ ಭಾಗಮದದತ್ ಪರೋಕ್ಷಮಸುರೇಭ್ಯಃ।।
ತ್ವಷ್ಟೃವಿನ ಮಗ ವಿಶ್ವರೂಪನು ದೇವತೆಗಳ ಪುರೋಹಿತನಾಗಿದ್ದನು. ಅವನು ಅಸುರರಿಗೆ ತಂಗಿಯ ಮಗನಾಗಿದ್ದನು. ಅವನು ಪ್ರತ್ಯಕ್ಷವಾಗಿ ದೇವತೆಗಳಿಗೂ ಮತ್ತು ಪರೋಕ್ಷವಾಗಿ ಅಸುರರಿಗೂ ಯಜ್ಞಭಾಗಗಳನ್ನು ಕೊಡುತ್ತಿದ್ದನು.
12329018A ಅಥ ಹಿರಣ್ಯಕಶಿಪುಂ ಪುರಸ್ಕೃತ್ಯ ವಿಶ್ವರೂಪಮಾತರಂ ಸ್ವಸಾರಮಸುರಾ ವರಮಯಾಚಂತ।
12329018B ಹೇ ಸ್ವಸರಯಂ ತೇ ಪುತ್ರಸ್ತ್ವಾಷ್ಟ್ರೋ ವಿಶ್ವರೂಪಸ್ತ್ರಿಶಿರಾ ದೇವಾನಾಂ ಪುರೋಹಿತಃ ಪ್ರತ್ಯಕ್ಷಂ ದೇವೇಭ್ಯೋ ಭಾಗಮದದತ್ಪರೋಕ್ಷಮಸ್ಮಾಕಮ್।
12329018C ತತೋ ದೇವಾ ವರ್ಧಂತೇ ವಯಂ ಕ್ಷೀಯಾಮಃ।
12329018D ತದೇನಂ ತ್ವಂ ವಾರಯಿತುಮರ್ಹಸಿ ತಥಾ ಯಥಾಸ್ಮಾನ್ ಭಜೇದಿತಿ।।
ಒಮ್ಮೆ ಅಸುರರು ಹಿರಣ್ಯಕಶಿಪುವನ್ನು ಮುಂದಿರಿಸಿಕೊಂಡು ತಮ್ಮ ತಂಗಿ ವಿಶ್ವರೂಪನ ತಾಯಿಯಲ್ಲಿ ವರವನ್ನು ಕೇಳಿಕೊಂಡರು: “ಹೇ ತಂಗಿಯೇ! ನಿನ್ನ ಮತ್ತು ತ್ವಷ್ಟ್ರುವಿನ ಪುತ್ರ ತ್ರಿಶಿರ ವಿಶ್ವರೂಪನು ದೇವತೆಗಳ ಪುರೋಹಿತನು. ಅವನು ದೇವತೆಗಳಿಗೆ ಪ್ರತ್ಯಕ್ಷವಾಗಿ ಮತ್ತು ನಮಗೆ ಪರೋಕ್ಷವಾಗಿ ಯಜ್ಞಭಾಗಗಳನ್ನು ನೀಡುತ್ತಿದ್ದಾನೆ. ಇದರಿಂದಾಗಿ ದೇವತೆಗಳು ವರ್ಧಿಸುತ್ತಿದ್ದಾರೆ ಮತ್ತು ನಾವು ಕ್ಷೀಣಿಸುತ್ತಿದ್ದೇವೆ. ನೀನು ಇದನ್ನು ನಿಲ್ಲಿಸಬೇಕು. ಅವನು ನಮ್ಮ ಕಡೆ ಸೇರುವಂತೆ ಮಾಡಬೇಕು.”
12329019A ಅಥ ವಿಶ್ವರೂಪಂ ನಂದನವನಮುಪಗತಂ ಮಾತೋವಾಚ।
12329019B ಪುತ್ರ ಕಿಂ ಪರಪಕ್ಷವರ್ಧನಸ್ತ್ವಂ ಮಾತುಲಪಕ್ಷಂ ನಾಶಯಸಿ।
12329019C ನಾರ್ಹಸ್ಯೇವಂ ಕರ್ತುಮಿತಿ।
12329019D ಸ ವಿಶ್ವರೂಪೋ ಮಾತುರ್ವಾಕ್ಯಮನತಿಕ್ರಮಣೀಯಮಿತಿ ಮತ್ವಾ ಸಂಪೂಜ್ಯ ಹಿರಣ್ಯಕಶಿಪುಮಗಾತ್।।
ಆಗ ನಂದನವನದಲ್ಲಿದ್ದ ವಿಶ್ವರೂಪನಿಗೆ ಮಾತೆಯು ಹೇಳಿದಳು: “ಪುತ್ರ! ನೀನು ಏಕೆ ಶತ್ರುಪಕ್ಷವನ್ನು ವರ್ಧಿಸುತ್ತಿರುವೆ ಮತ್ತು ತಾಯಿಯ ಪಕ್ಷವನ್ನು ನಾಶಗೊಳಿಸುತ್ತಿದ್ದೀಯೆ. ಹೀಗೆ ಮಾಡುವುದು ಸರಿಯಲ್ಲ.” ವಿಶ್ವರೂಪನು ಮಾತೃವಾಕ್ಯವನ್ನು ಅತಿಕ್ರಮಿಸಬಾರದು ಎಂದು ತಿಳಿದು ಅವಳನ್ನು ಗೌರವಿಸಿ ಹಿರಣ್ಯಕಶಿಪುವಿನ ಬಳಿ ಆಗಮಿಸಿದನು.
12329020A ಹೈರಣ್ಯಗರ್ಭಾಚ್ಚ ವಸಿಷ್ಠಾದ್ಧಿರಣ್ಯಕಶಿಪುಃ ಶಾಪಂ ಪ್ರಾಪ್ತವಾನ್।
12329020B ಯಸ್ಮಾತ್ತ್ವಯಾನ್ಯೋ ವೃತೋ ಹೋತಾ ತಸ್ಮಾದಸಮಾಪ್ತಯಜ್ಞಸ್ತ್ವಮಪೂರ್ವಾತ್ಸತ್ತ್ವಜಾತಾದ್ವಧಂ ಪ್ರಾಪ್ಸ್ಯಸೀತಿ।
12329020C ತಚ್ಚಾಪದಾನಾದ್ಧಿರಣ್ಯಕಶಿಪುಃ ಪ್ರಾಪ್ತವಾನ್ವಧಮ್।।
ಆ ಕಾರಣಕ್ಕಾಗಿ ಹಿರಣ್ಯಗರ್ಭನ ಮಗ ವಸಿಷ್ಠನು ಹಿರಣ್ಯಕಶಿಪುವಿಗೆ ಶಾಪವನ್ನಿತ್ತನು: “ನೀನು ಅನ್ಯನನ್ನು ಹೋತೃವನ್ನಾಗಿ ಆರಿಸಿಕೊಂಡಿದುದರಿಂದ ಈ ಯಜ್ಞವು ಸಮಾಪ್ತವಾಗುವುದರೊಳಗೆ ಅಪೂರ್ವವಾದೊಂದು ಪ್ರಾಣಿಯಿಂದ ವಧೆಯನ್ನು ಪಡೆದುಕೊಳ್ಳುತ್ತೀಯೆ!” ಎಂದು. ಆ ಶಾಪದಿಂದಾಗಿ ಹಿರಣ್ಯಕಶಿಪುವು ವಧಿಸಲ್ಪಟ್ಟನು.
12329021A ವಿಶ್ವರೂಪೋ ಮಾತೃಪಕ್ಷವರ್ಧನೋಽತ್ಯರ್ಥಂ ತಪಸ್ಯಭವತ್।
12329021B ತಸ್ಯ ವ್ರತಭಂಗಾರ್ಥಮಿಂದ್ರೋ ಬಹ್ವೀಃ ಶ್ರೀಮತ್ಯೋಽಪ್ಸರಸೋ ನಿಯುಯೋಜ।
12329021C ತಾಶ್ಚ ದೃಷ್ಟ್ವಾ ಮನಃ ಕ್ಷುಭಿತಂ ತಸ್ಯಾಭವತ್ತಾಸು ಚಾಪ್ಸರಃಸು ನಚಿರಾದೇವ ಸಕ್ತೋಽಭವತ್।
12329021D ಸಕ್ತಂ ಚೈನಂ ಜ್ಞಾತ್ವಾಪ್ಸರಸ ಊಚುರ್ಗಚ್ಚಾಮಹೇ ವಯಂ ಯಥಾಗತಮಿತಿ।।
ಅನಂತರ ವಿಶ್ವರೂಪನು ಮಾತೃಪಕ್ಷದ ವರ್ಧನೆಗಾಗಿ ತಪಸ್ಸನ್ನು ತಪಿಸಿದನು. ಅವನ ವ್ರತಭಂಗವನ್ನುಂಟುಮಾಡಲು ಇಂದ್ರನು ಅನೇಕ ಶ್ರೀಮತಿ ಅಪ್ಸರೆಯರನ್ನು ನಿಯೋಜಿಸಿದನು. ಅವರನ್ನು ನೋಡಿ ಅವನ ಮನಸ್ಸು ಕ್ಷೋಭೆಗೊಂಡಿತು. ಕೂಡಲೇ ಆ ಅಪ್ಸರೆಯರಲ್ಲಿ ಅವನ ಮನಸ್ಸು ಅನುರಕ್ತಗೊಂಡಿತು. ಅವನು ತಮ್ಮಲ್ಲಿ ಆಸಕ್ತನಾಗಿದ್ದಾನೆ ಎಂದು ತಿಳಿದ ಅಪ್ಸರೆಯರು “ನಾವು ಎಲ್ಲಿಂದ ಬಂದಿದ್ದೆವೋ ಅಲ್ಲಿಗೆ ಹೋಗುತ್ತೇವೆ” ಎಂದರು.
12329022A ತಾಸ್ತ್ವಾಷ್ಟ್ರ ಉವಾಚ।
12329022B ಕ್ವ ಗಮಿಷ್ಯಥ ಆಸ್ಯತಾಂ ತಾವನ್ಮಯಾ ಸಹ ಶ್ರೇಯೋ ಭವಿಷ್ಯತೀತಿ।
12329022C ತಾಸ್ತಮಬ್ರುವನ್।
12329022D ವಯಂ ದೇವಸ್ತ್ರಿಯೋಽಪ್ಸರಸ ಇಂದ್ರಂ ವರದಂ ಪುರಾ ಪ್ರಭವಿಷ್ಣುಂ ವೃಣೀಮಹ ಇತಿ।।
ತ್ವಾಷ್ಟ್ರನು ಅವರಿಗೆ ಹೇಳಿದನು: “ಎಲ್ಲಿಗೆ ಹೋಗುತ್ತಿದ್ದೀರಿ? ನನ್ನ ಬಳಿಯೇ ಇದ್ದುಬಿಡಿ. ನಿಮಗೆ ಶ್ರೇಯಸ್ಸಾಗುತ್ತದೆ.” ಅವರು ಅವನಿಗೆ ಹೇಳಿದರು: “ನಾವು ದೇವಸ್ತ್ರೀಯರಾದ ಅಪ್ಸರೆಯರು. ಹಿಂದೆಯೇ ನಾವು ವರದ ಪ್ರಭವಿಷ್ಣು ಇಂದ್ರನನ್ನು ವರಿಸಿಬಿಟ್ಟಿದ್ದೇವೆ.”
12329023A ಅಥ ತಾ ವಿಶ್ವರೂಪೋಽಬ್ರವೀದದ್ಯೈವ ಸೇಂದ್ರಾ ದೇವಾ ನ ಭವಿಷ್ಯಂತೀತಿ।
12329023B ತತೋ ಮಂತ್ರಾನ್ ಜಜಾಪ।
12329023C ತೈರ್ಮಂತ್ರೈಃ ಪ್ರಾವರ್ಧತ ತ್ರಿಶಿರಾಃ।
12329023D ಏಕೇನಾಸ್ಯೇನ ಸರ್ವಲೋಕೇಷು ದ್ವಿಜೈಃ ಕ್ರಿಯಾವದ್ಭಿರ್ಯಜ್ಞೇಷು ಸುಹುತಂ ಸೋಮಂ ಪಪಾವೇಕೇನಾಪ ಏಕೇನ ಸೇಂದ್ರಾನ್ದೇವಾನ್।
12329023E ಅಥೇಂದ್ರಸ್ತಂ ವಿವರ್ಧಮಾನಂ ಸೋಮಪಾನಾಪ್ಯಾಯಿತಸರ್ವಗಾತ್ರಂ ದೃಷ್ಟ್ವಾ ಚಿಂತಾಮಾಪೇದೇ।।
ಕೂಡಲೇ ವಿಶ್ವರೂಪನು ಅವರಿಗೆ “ಈ ಕ್ಷಣದಲ್ಲಿಯೇ ಇಂದ್ರಸಹಿತರಾದ ದೇವತೆಗಳಲ್ಲಿ ಯಾರೂ ಉಳಿಯುವುದಿಲ್ಲ” ಎಂದನು. ಅನಂತರ ಮಂತ್ರಗಳನ್ನು ಜಪಿಸಿದನು. ಆ ಮಂತ್ರಗಳಿಂದ ಅವನ ಮೂರು ತಲೆಗಳೂ ಬೆಳೆದವು. ಒಂದು ಮುಖದಿಂದ ಅವನು ಸರ್ವಲೋಕಗಳಲ್ಲಿರುವ ಕ್ರಿಯಾವಂತ ದ್ವಿಜರು ವಿಧಿಪೂರ್ವಕವಾಗಿ ಯಜ್ಞಗಳಲ್ಲಿ ಆಹುತಿಯನ್ನಾಗಿ ನೀಡುತ್ತಿದ್ದ ಸೋಮವನ್ನು, ಇನ್ನೊಂದರಿಂದ ನೀರನ್ನು ಮತ್ತು ಮೂರನೆಯದರಿಂದ ಇಂದ್ರಸಹಿತ ದೇವತೆಗಳ ತೇಜಸ್ಸನ್ನು ಹೀರಿ ಕುಡಿಯುತ್ತಿದ್ದನು. ಸೋಮಪಾನದಿಂದ ವಿಶ್ವರೂಪನ ಸರ್ವ ಶರೀರವೂ ಪರಿಪುಷ್ಟವಾಗುತ್ತಿರುವುದನ್ನು ಇಂದ್ರನು ನೋಡಿ ಚಿಂತಿತನಾದನು.
12329024A ದೇವಾಶ್ಚ ತೇ ಸಹೇಂದ್ರೇಣ ಬ್ರಹ್ಮಾಣಮಭಿಜಗ್ಮುರೂಚುಶ್ಚ।
12329024B ವಿಶ್ವರೂಪೇಣ ಸರ್ವಯಜ್ಞೇಷು ಸುಹುತಃ ಸೋಮಃ ಪೀಯತೇ।
12329024C ವಯಮಭಾಗಾಃ ಸಂವೃತ್ತಾಃ।
12329024D ಅಸುರಪಕ್ಷೋ ವರ್ಧತೇ ವಯಂ ಕ್ಷೀಯಾಮಃ।
12329024E ತದರ್ಹಸಿ ನೋ ವಿಧಾತುಂ ಶ್ರೇಯೋ ಯದನಂತರಮಿತಿ।।
ಇಂದ್ರನೊಂದಿಗೆ ದೇವತೆಗಳು ಬ್ರಹ್ಮನ ಬಳಿಸಾರಿ ಹೀಗೆ ಹೇಳಿದರು: “ಸರ್ವಯಜ್ಞಗಳಲ್ಲಿ ಆಹುತಿಯನ್ನಾಗಿತ್ತ ಸೋಮವನ್ನು ವಿಶ್ವರೂಪನು ಕುಡಿಯುತ್ತಿದ್ದಾನೆ. ನಮಗೆ ಯಜ್ಞಗಳಲ್ಲಿ ಭಾಗವೇ ದೊರೆಯುತ್ತಿಲ್ಲ. ಅಸುರಪಕ್ಷವು ವರ್ಧಿಸುತ್ತಿದೆ ಮತ್ತು ನಾವು ಕ್ಷೀಣಿಸುತ್ತಿದ್ದೇವೆ. ಈ ಸಮಯದಲ್ಲಿ ನೀನು ನಮಗೆ ಶ್ರೇಯಸ್ಸನ್ನುಂಟುಮಾಡಬೇಕು.”
12329025A ತಾನ್ಬ್ರಹ್ಮೋವಾಚ ಋಷಿರ್ಭಾರ್ಗವಸ್ತಪಸ್ತಪ್ಯತೇ ದಧೀಚಃ।
12329025B ಸ ಯಾಚ್ಯತಾಂ ವರಂ ಯಥಾ ಕಲೇವರಂ ಜಹ್ಯಾತ್।
12329025C ತಸ್ಯಾಸ್ಥಿಭಿರ್ವಜ್ರಂ ಕ್ರಿಯತಾಮಿತಿ।।
ಅವರಿಗೆ ಬ್ರಹ್ಮನು ಹೀಗೆ ಹೇಳಿದನು: “ಭಾರ್ಗವ ಋಷಿ ದಧೀಚನು ತಪಸ್ಸನ್ನು ತಪಿಸುತ್ತಿದ್ದಾನೆ. ಅವನು ಶರೀರತ್ಯಾಗಮಾಡುವಂತೆ ವರವನ್ನು ಕೇಳಿಕೊಳ್ಳಿ. ಅವನ ಅಸ್ಥಿಯಿಂದ ವಜ್ರವನ್ನು ನಿರ್ಮಿಸಿರಿ.”
12329026A ದೇವಾಸ್ತತ್ರಾಗಚ್ಚನ್ಯತ್ರ ದಧೀಚೋ ಭಗವಾನ್ ಋಷಿಸ್ತಪಸ್ತೇಪೇ।
12329026B ಸೇಂದ್ರಾ ದೇವಾಸ್ತಮಭಿಗಮ್ಯೋಚುರ್ಭಗವಂಸ್ತಪಸಃ ಕುಶಲಮವಿಘ್ನಂ ಚೇತಿ।
12329026C ತಾನ್ದಧೀಚ ಉವಾಚ ಸ್ವಾಗತಂ ಭವದ್ಭ್ಯಃ ಕಿಂ ಕ್ರಿಯತಾಮ್।
12329026D ಯದ್ವಕ್ಷ್ಯಥ ತತ್ಕರಿಷ್ಯಾಮೀತಿ।
12329026E ತೇ ತಮಬ್ರುವನ್ ಶರೀರಪರಿತ್ಯಾಗಂ ಲೋಕಹಿತಾರ್ಥಂ ಭಗವಾನ್ಕರ್ತುಮರ್ಹತೀತಿ।
12329026F ಅಥ ದಧೀಚಸ್ತಥೈವಾವಿಮನಾಃ ಸುಖದುಃಖಸಮೋ ಮಹಾಯೋಗೀ ಆತ್ಮಾನಂ ಸಮಾಧಾಯ ಶರೀರಪರಿತ್ಯಾಗಂ ಚಕಾರ।।
ಆಗ ದೇವತೆಗಳು ಭಗವಾನ್ ಋಷಿ ದಧೀಚಿಯು ತಪಸ್ಸನ್ನು ತಪಿಸುತ್ತಿದ್ದಲ್ಲಿಗೆ ಹೋದರು. ಇಂದ್ರನೊಂದಿಗೆ ದೇವತೆಗಳು ಅವನಿಗೆ “ಭಗವನ್! ನಿನ್ನ ತಪಸ್ಸು ಕುಶಲವಾಗಿ ಅವಿಘ್ನವಾಗಿ ನಡೆಯುತ್ತಿದೆಯೇ?” ಎಂದು ಕೇಳಿದರು. ಅವರಿಗೆ ದಧೀಚನು ಹೇಳಿದನು: “ಸ್ವಾಗತ! ನಿಮಗೆ ನಾನು ಏನು ಮಾಡಲಿ? ನೀವು ಹೇಳಿದುದನ್ನು ನಾನು ಮಾಡುತ್ತೇನೆ.” ಆಗ ಅವರು “ಲೋಕಹಿತಾರ್ಥಕ್ಕಾಗಿ ನೀನು ಶರೀರ ಪರಿತ್ಯಾಗ ಮಾಡಬೇಕು” ಎಂದು ಹೇಳಿದರು. ಕೂಡಲೇ ಸುಖದುಃಖಗಳನ್ನು ಸಮನಾಗಿ ಕಾಣುತ್ತಿದ್ದ ಮಹಾಯೋಗೀ ದಧೀಚನು ಸ್ವಲ್ಪವೂ ವಿಮನಸ್ಕನಾಗದೇ ಆತ್ಮವನ್ನು ಪರಮಾತ್ಮನಲ್ಲಿ ವಿಲೀನಗೊಳಿಸಿ ಶರೀರ ಪರಿತ್ಯಾಗ ಮಾಡಿದನು.
12329027A ತಸ್ಯ ಪರಮಾತ್ಮನ್ಯವಸೃತೇ ತಾನ್ಯಸ್ಥೀನಿ ಧಾತಾ ಸಂಗೃಹ್ಯ ವಜ್ರಮಕರೋತ್।
12329027B ತೇನ ವಜ್ರೇಣಾಭೇದ್ಯೇನಾಪ್ರಧೃಷ್ಯೇಣ ಬ್ರಹ್ಮಾಸ್ಥಿಸಂಭೂತೇನ ವಿಷ್ಣುಪ್ರವಿಷ್ಟೇನೇಂದ್ರೋ ವಿಶ್ವರೂಪಂ ಜಘಾನ।
12329027C ಶಿರಸಾಂ ಚಾಸ್ಯ ಚೇದನಮಕರೋತ್।
12329027D ತಸ್ಮಾದನಂತರಂ ವಿಶ್ವರೂಪಗಾತ್ರಮಥನಸಂಭವಂ ತ್ವಷ್ಟ್ರೋತ್ಪಾದಿತಮೇವಾರಿಂ ವೃತ್ರಮಿಂದ್ರೋ ಜಘಾನ।।
ಅವನು ಪರಮಾತ್ಮನಲ್ಲಿ ಲೀನನಾದ ನಂತರ ಧಾತನು ಅವನ ಅಸ್ಥಿಗಳನ್ನು ಸಂಗ್ರಹಿಸಿ ಅದರಿಂದ ವಜ್ರವನ್ನು ನಿರ್ಮಿಸಿದನು. ಅಭೇದ್ಯವಾದ, ಎದುರಿಸಲು ಅಸಾಧ್ಯವಾದ, ಬ್ರಾಹ್ಮಣನ ಅಸ್ಥಿಯಿಂದ ಮಾಡಲ್ಪಟ್ಟಿದ್ದ, ವಿಷ್ಣುವು ಪ್ರವೇಶಿಸಿದ್ದ ಆ ವಜ್ರದಿಂದ ಇಂದ್ರನು ವಿಶ್ವರೂಪನನ್ನು ಪ್ರಹರಿಸಿದನು. ಅವನ ಮೂರು ತಲೆಗಳನ್ನೂ ಕತ್ತರಿಸಿದನು. ಅದರ ನಂತರ ತ್ವಷ್ಟ್ರನು ವಿಶ್ವರೂಪನ ಶರೀರವನ್ನು ಮಥಿಸಿ ಅದರಿಂದ ವೃತ್ರನು ಹುಟ್ಟಿದನು. ಅವನನ್ನೂ ಕೂಡ ಇಂದ್ರನು ವಜ್ರಾಯುಧದಿಂದ ಸಂಹರಿಸಿದನು.
12329028A ತಸ್ಯಾಂ ದ್ವೈಧೀಭೂತಾಯಾಂ ಬ್ರಹ್ಮವಧ್ಯಾಯಾಂ ಭಯಾದಿಂದ್ರೋ ದೇವರಾಜ್ಯಂ ಪರಿತ್ಯಜ್ಯ ಅಪ್ಸು ಸಂಭವಾಂ ಶೀತಲಾಂ ಮಾನಸಸರೋಗತಾಂ ನಲಿನೀಂ ಪ್ರಪೇದೇ।
12329028B ತತ್ರ ಚೈಶ್ವರ್ಯಯೋಗಾದಣುಮಾತ್ರೋ ಭೂತ್ವಾ ಬಿಸಗ್ರಂಥಿಂ ಪ್ರವಿವೇಶ।।
ಈ ರೀತಿ ಎರಡು ಬ್ರಹ್ಮವಧೆಗಳ ಪಾಪಗಳಿಂದ ಭಯಗ್ರಸ್ಥನಾಗಿ ಇಂದ್ರನು ದೇವರಾಜ್ಯವನ್ನು ಪರಿತ್ಯಜಿಸಿ ಶೀತಲ ಮಾನಸಸರೋವರದ ನೀರಿನಲ್ಲಿ ಹುಟ್ಟಿದ ಕಮಲದಲ್ಲಿ ಸೇರಿಕೊಂಡನು. ತನ್ನ ಯೋಗೈಶ್ವರ್ಯದಿಂದ ಅಣುರೂಪನಾಗಿ ಕಮಲದ ದಂಟಿನ ಗೆಣ್ಣನ್ನು ಪ್ರವೇಶಿಸಿದನು.
12329029A ಅಥ ಬ್ರಹ್ಮವಧ್ಯಾಭಯಪ್ರನಷ್ಟೇ ತ್ರೈಲೋಕ್ಯನಾಥೇ ಶಚೀಪತೌ ಜಗದನೀಶ್ವರಂ ಬಭೂವ।
12329029B ದೇವಾನ್ರಜಸ್ತಮಶ್ಚಾವಿವೇಶ।
12329029C ಮಂತ್ರಾ ನ ಪ್ರಾವರ್ತಂತ ಮಹರ್ಷೀಣಾಮ್।
12329029D ರಕ್ಷಾಂಸಿ ಪ್ರಾದುರಭವನ್।
12329029E ಬ್ರಹ್ಮ ಚೋತ್ಸಾದನಂ ಜಗಾಮ।
12329029F ಅನಿಂದ್ರಾಶ್ಚಾಬಲಾ ಲೋಕಾಃ ಸುಪ್ರಧೃಷ್ಯಾ ಬಭೂವುಃ।।
ಬ್ರಹ್ಮವಧೆಯ ಭಯದಿಂದ ತ್ರೈಲೋಕ್ಯನಾಥ ಶಚೀಪತಿಯು ಪ್ರನಷ್ಟನಾಗಲು ಜಗತ್ತಿನಲ್ಲಿ ಈಶ್ವರನೇ ಇಲ್ಲದಂತಾಯಿತು. ರಜಸ್ತಮೋಗುಣಗಳು ದೇವತೆಗಳನ್ನು ಆವೇಶಗೊಂಡವು. ಮಹರ್ಷಿಗಳ ಮಂತ್ರಗಳು ಮೊದಲಿನಂತೆ ನಡೆಯುತ್ತಿರಲಿಲ್ಲ. ರಾಕ್ಷಸರು ಹೆಚ್ಚಿಕೊಂಡರು. ವೇದಗಳ ಅಧ್ಯಯನವೂ ನಿಂತುಹೋಯಿತು. ಇಂದ್ರನಿಲ್ಲದೇ ಲೋಕಗಳು ದುರ್ಬಲವಾದವು. ಯಾರು ಬೇಕಾದರೂ ಗೆಲ್ಲುವಂತೆ ಆಯಿತು.
12329030A ಅಥ ದೇವಾ ಋಷಯಶ್ಚಾಯುಷಃ ಪುತ್ರಂ ನಹುಷಂ ನಾಮ ದೇವರಾಜತ್ವೇಽಭಿಷಿಷಿಚುಃ।
12329030B ನಹುಷಃ ಪಂಚಭಿಃ ಶತೈರ್ಜ್ಯೋತಿಷಾಂ ಲಲಾಟೇ ಜ್ವಲದ್ಭಿಃ ಸರ್ವತೇಜೋಹರೈಸ್ತ್ರಿವಿಷ್ಟಪಂ ಪಾಲಯಾಂ ಬಭೂವ।
12329030C ಅಥ ಲೋಕಾಃ ಪ್ರಕೃತಿಮಾಪೇದಿರೇ ಸ್ವಸ್ಥಾಶ್ಚ ಬಭೂವುಃ।।
ಆಗ ದೇವತೆಗಳೂ ಋಷಿಗಳೂ ಆಯುವಿನ ಪುತ್ರ ನಹುಷನೆನ್ನುವನಿಗೆ ದೇವರಾಜತ್ವವನ್ನಿತ್ತು ಅಭಿಷೇಕಿಸಿದರು. ನಹುಷನು ತನ್ನ ಹಣೆಯಲ್ಲಿ ಸಮಸ್ತಪ್ರಾಣಿಗಳ ತೇಜಸ್ಸನ್ನೂ ಅಪಹರಿಸುವ ಸಾಮರ್ಥ್ಯವಿದ್ದ ಐದುನೂರು ಪ್ರಜ್ವಲಿಸುತ್ತಿದ್ದ ಜ್ಯೋತಿಗಳನ್ನು ಹೊಂದಿದ್ದು ಆ ಮಹಾಶಕ್ತಿಯ ಮೂಲಕ ಸ್ವರ್ಗರಾಜ್ಯವನ್ನು ಪರಿಪಾಲಿಸುತ್ತಿದ್ದನು. ಆಗ ಲೋಕಗಳು ಮೊದಲಿನ ಸ್ಥಿತಿಗೇ ಬಂದವು. ಸ್ವಸ್ಥಗೊಂಡವು.
12329031A ಅಥೋವಾಚ ನಹುಷಃ।
12329031B ಸರ್ವಂ ಮಾಂ ಶಕ್ರೋಪಭುಕ್ತಮುಪಸ್ಥಿತಮೃತೇ ಶಚೀಮಿತಿ।
12329031C ಸ ಏವಮುಕ್ತ್ವಾ ಶಚೀಸಮೀಪಮಗಮದುವಾಚ ಚೈನಾಮ್।
12329031D ಸುಭಗೇಽಹಮಿಂದ್ರೋ ದೇವಾನಾಂ ಭಜಸ್ವ ಮಾಮಿತಿ।
12329031E ತಂ ಶಚೀ ಪ್ರತ್ಯುವಾಚ।
12329031F ಪ್ರಕೃತ್ಯಾ ತ್ವಂ ಧರ್ಮವತ್ಸಲಃ ಸೋಮವಂಶೋದ್ಭವಶ್ಚ।
12329031G ನಾರ್ಹಸಿ ಪರಪತ್ನೀಧರ್ಷಣಂ ಕರ್ತುಮಿತಿ।।
ಒಮ್ಮೆ ನಹುಷನು ಹೇಳಿದನು: “ಶಚಿಯೊಬ್ಬಳನ್ನು ಬಿಟ್ಟು ಇಂದ್ರನು ಉಪಭೋಗಿಸುತ್ತಿದ್ದ ಸಕಲ ವಸ್ತುಗಳೂ ನನ್ನ ಬಳಿಬಂದಿವೆ.” ಹೀಗೆ ಹೇಳಿ ಶಚಿಯ ಬಳಿಸಾರಿ ಅವಳಿಗೆ ಇದನ್ನು ಹೇಳಿದನು: “ಸುಭಗೇ! ನಾನು ದೇವತೆಗಳ ಇಂದ್ರ. ನನ್ನನ್ನು ಸೇವಿಸು.” ಅವನಿಗೆ ಶಚಿಯು ಉತ್ತರಿಸಿದಳು: “ಸ್ವಾಭಾವಿಕವಾಗಿಯೇ ನೀನು ಧರ್ಮವತ್ಸಲನಾಗಿರುವೆ. ಸೋಮವಂಶದಲ್ಲಿ ಹುಟ್ಟಿದ್ದೀಯೆ ಕೂಡ. ನಿನ್ನಂಥವನು ಪರಪತ್ನಿಯನ್ನು ಕಾಡುವುದು ಸರಿಯಲ್ಲ.”
12329032A ತಾಮಥೋವಾಚ ನಹುಷಃ।
12329032B ಐಂದ್ರಂ ಪದಮಧ್ಯಾಸ್ಯತೇ ಮಯಾ।
12329032C ಅಹಮಿಂದ್ರಸ್ಯ ರಾಜ್ಯರತ್ನಹರೋ ನಾತ್ರಾಧರ್ಮಃ ಕಶ್ಚಿತ್ ತ್ವಮಿಂದ್ರಭುಕ್ತೇತಿ।
12329032D ಸಾ ತಮುವಾಚ।
12329032E ಅಸ್ತಿ ಮಮ ಕಿಂ ಚಿದ್ವ್ರತಮಪರ್ಯವಸಿತಮ್।
12329032F ತಸ್ಯಾವಭೃಥೇ ತ್ವಾಮುಪಗಮಿಷ್ಯಾಮಿ ಕೈಶ್ಚಿದೇವಾಹೋಭಿರಿತಿ।
12329032G ಸ ಶಚ್ಯೈವಮಭಿಹಿತೋ ನಹುಷೋ ಜಗಾಮ।।
ಅವಳಿಗೆ ನಹುಷನು ಹೇಳಿದನು: “ನಾನೀಗ ಇಂದ್ರನ ಪದವಿಯನ್ನು ಪಡೆದುಕೊಂಡಿದ್ದೇನೆ. ನಾನು ಇಂದ್ರನ ರಾಜ್ಯವನ್ನೂ ರತ್ನಗಳನ್ನೂ ಪಡೆದಿದ್ದೇನೆ. ಇಂದ್ರನ ಭೋಗವಸ್ತುವಾದ ನಿನ್ನನ್ನೂ ಪಡೆದುಕೊಳ್ಳುವುದರಲ್ಲಿ ಅಧರ್ಮವೇನೂ ಇಲ್ಲ.” ಅವಳು ಅವನಿಗೆ ಹೇಳಿದಳು: “ನನ್ನದೊಂದು ವ್ರತವು ನಡೆಯುತ್ತಿದೆ. ಅದರ ಅವಭೃಥವಾದ ನಂತರ ಕೆಲವೇ ದಿನಗಳಲ್ಲಿ ನಿನ್ನ ಬಳಿ ಬರುತ್ತೇನೆ”. ಶಚಿಯು ಹೀಗೆ ಹೇಳಲು ನಹುಷನು ಹಿಂದಿರುಗಿದನು.
12329033A ಅಥ ಶಚೀ ದುಃಖಶೋಕಾರ್ತಾ ಭರ್ತೃದರ್ಶನಲಾಲಸಾ ನಹುಷಭಯಗೃಹೀತಾ ಬೃಹಸ್ಪತಿಮುಪಾಗಚ್ಚತ್।
12329033B ಸ ಚ ತಾಮಭಿಗತಾಂ ದೃಷ್ಟ್ವೈವ ಧ್ಯಾನಂ ಪ್ರವಿಶ್ಯ ಭರ್ತೃಕಾರ್ಯತತ್ಪರಾಂ ಜ್ಞಾತ್ವಾ ಬೃಹಸ್ಪತಿರುವಾಚ।
12329033C ಅನೇನೈವ ವ್ರತೇನ ತಪಸಾ ಚಾನ್ವಿತಾ ದೇವೀಂ ವರದಾಮುಪಶ್ರುತಿಮಾಹ್ವಯ।
12329033D ಸಾ ತವೇಂದ್ರಂ ದರ್ಶಯಿಷ್ಯತೀತಿ।।
ಆಗ ಶಚಿಯು ದುಃಖಶೋಕಾರ್ತಳಾಗಿ ಪತಿಯ ದರ್ಶನವನ್ನು ಬಯಸಿ ಮತ್ತು ನಹುಷನ ಭಯದಿಂದ ಪೀಡಿತಳಾಗಿ ಬೃಹಸ್ಪತಿಯ ಬಳಿಸಾರಿದಳು. ಅವಳು ಆಗಮಿಸಿರುವುದನ್ನು ಕಂಡು ಅವಳು ಪತಿಯ ಕಾರ್ಯತತ್ಪರಳಾಗಿರುವುದನ್ನು ತಿಳಿದು ಧ್ಯಾನತತ್ಪರನಾಗಿ ಬೃಹಸ್ಪತಿಯು ಹೇಳಿದನು: “ಇದೇ ವ್ರತದಿಂದ ಮತ್ತು ತಪಸ್ಸಿನಿಂದ ಕೂಡಿದವಳಾಗಿ ದೇವಿ ವರದೆ ಉಪಶ್ರುತಿಯನ್ನು ಆಹ್ವಾನಿಸು. ಅವಳು ನಿನಗೆ ಇಂದ್ರನನ್ನು ತೋರಿಸುತ್ತಾಳೆ.”
12329034A ಸಾಥ ಮಹಾನಿಯಮಮಾಸ್ಥಿತಾ ದೇವೀಂ ವರದಾಮುಪಶ್ರುತಿಂ ಮಂತ್ರೈರಾಹ್ವಯತ್।
12329034B ಸೋಪಶ್ರುತಿಃ ಶಚೀಸಮೀಪಮಗಾತ್।
12329034C ಉವಾಚ ಚೈನಾಮಿಯಮಸ್ಮಿ ತ್ವಯೋಪಹೂತೋಪಸ್ಥಿತಾ।
12329034D ಕಿಂ ತೇ ಪ್ರಿಯಂ ಕರವಾಣೀತಿ।
12329034E ತಾಂ ಮೂರ್ಧ್ನಾ ಪ್ರಣಮ್ಯೋವಾಚ ಶಚೀ ಭಗವತ್ಯರ್ಹಸಿ ಮೇ ಭರ್ತಾರಂ ದರ್ಶಯಿತುಂ ತ್ವಂ ಸತ್ಯಾ ಮತಾ ಚೇತಿ।
12329034F ಸೈನಾಂ ಮಾನಸಂ ಸರೋಽನಯತ್।
12329034G ತತ್ರೇಂದ್ರಂ ಬಿಸಗ್ರಂಥಿಗತಮದರ್ಶಯತ್।।
ಆಗ ಮಹಾನಿಯಮಸ್ಥಿತಳಾಗಿದ್ದ ಶಚಿಯು ವರದೆ ದೇವೀ ಉಪಶ್ರುತಿಯನ್ನು ಮಂತ್ರಪೂರ್ವಕವಾಗಿ ಆಹ್ವಾನಿಸಿದಳು. ಉಪಶ್ರುತಿಯು ಶಚಿಯ ಬಳಿಬಂದು ಹೇಳಿದಳು: “ನಿನ್ನಿಂದ ಕರೆಯಲ್ಪಟ್ಟ ನಾನು ಇಲ್ಲಿಗೆ ಬಂದಿದ್ದೇನೆ. ನಿನಗೆ ಪ್ರಿಯವಾದ ಏನನ್ನು ಮಾಡಲಿ?” ಶಚಿಯು ಅವಳಿಗೆ ತಲೆಬಾಗಿ ನಮಸ್ಕರಿಸಿ ಹೇಳಿದಳು: “ಭಗವತಿ! ನೀನು ಸತ್ಯವೂ ಮತಿಯೂ ಆಗಿರುವೆ. ನನ್ನ ಪತಿಯನ್ನು ತೋರಿಸಿಕೊಡು.” ಅವಳು ಶಚಿಯನ್ನು ಮಾನಸ ಸರೋವರಕ್ಕೆ ಕರೆದೊಯ್ದು ಅಲ್ಲಿ ಕಮಲದ ದಂಟಿನ ಗಣ್ಣಿನಲ್ಲಿ ಅಣುರೂಪದಲ್ಲಿದ್ದ ಇಂದ್ರನನ್ನು ತೋರಿಸಿದಳು.
12329035A ತಾಮಿಂದ್ರಃ ಪತ್ನೀಂ ಕೃಶಾಂ ಗ್ಲಾನಾಂ ಚ ದೃಷ್ಟ್ವಾ ಚಿಂತಯಾಂ ಬಭೂವ।
12329035B ಅಹೋ ಮಮ ಮಹದ್ದುಃಖಮಿದಮದ್ಯೋಪಗತಮ್।
12329035C ನಷ್ಟಂ ಹಿ ಮಾಮಿಯಮನ್ವಿಷ್ಯೋಪಾಗಮದ್ದುಃಖಾರ್ತೇತಿ।
12329035D ತಾಮಿಂದ್ರ ಉವಾಚ ಕಥಂ ವರ್ತಯಸೀತಿ।
12329035E ಸಾ ತಮುವಾಚ।
12329035F ನಹುಷೋ ಮಾಮಾಹ್ವಯತಿ।
12329035G ಕಾಲಶ್ಚಾಸ್ಯ ಮಯಾ ಕೃತ ಇತಿ।।
ಕೃಶಳೂ, ದುರ್ಬಲಳೂ ಆಗಿದ್ದ ಪತ್ನಿಯನ್ನು ನೋಡಿ ಇಂದ್ರನು ಚಿಂತಾಪರನಾದನು. “ಅಯ್ಯೋ! ನನಗೆ ಈ ಮಹಾದುಃಖವು ಒದಗಿ ಬಂದಿತಲ್ಲ! ಕಳೆದುಹೋಗಿದ್ದ ನನ್ನನ್ನು ಹುಡುಕಿಕೊಂಡು ಅತಿದುಃಖಿತಳಾಗಿರುವ ಇವಳು ಇಲ್ಲಿಗೆ ಬಂದಿದ್ದಾಳಲ್ಲಾ!” ಆಗ ಇಂದ್ರನು ಅವಳಿಗೆ “ನೀನು ಹೇಗಿದ್ದೀಯೆ?” ಎಂದು ಕೇಳಿದನು. ಶಚಿಯು ಅವನಿಗೆ ಹೇಳಿದಳು: “ನಹುಷನು ನನ್ನನ್ನು ಕರೆಯುತ್ತಿದ್ದಾನೆ. ಆದರೆ ನಾನು ಅವನಿಂದ ಸ್ವಲ್ಪ ಸಮಯವನ್ನು ಕೇಳಿದ್ದೇನೆ.”
12329036A ತಾಮಿಂದ್ರ ಉವಾಚ।
12329036B ಗಚ್ಚ।
12329036C ನಹುಷಸ್ತ್ವಯಾ ವಾಚ್ಯೋಽಪೂರ್ವೇಣ ಮಾಮ್ ಋಷಿಯುಕ್ತೇನ ಯಾನೇನ ತ್ವಮಧಿರೂಢ ಉದ್ವಹಸ್ವ।
12329036D ಇಂದ್ರಸ್ಯ ಹಿ ಮಹಾಂತಿ ವಾಹನಾನಿ ಮನಸಃ ಪ್ರಿಯಾಣ್ಯಧಿರೂಢಾನಿ ಮಯಾ।
12329036E ತ್ವಮನ್ಯೇನೋಪಯಾತುಮರ್ಹಸೀತಿ।
12329036F ಸೈವಮುಕ್ತಾ ಹೃಷ್ಟಾ ಜಗಾಮ।
12329036G ಇಂದ್ರೋಽಪಿ ಬಿಸಗ್ರಂಥಿಮೇವಾವಿವೇಶ ಭೂಯಃ।।
ಇಂದ್ರನು ಅವಳಿಗೆ ಹೇಳಿದನು: “ಹೋಗು! ನಹುಷನಿಗೆ ನೀನು ಇದನ್ನು ಹೇಳಬೇಕು: “ಋಷಿಗಳಿಂದ ಹೊರಲ್ಪಟ್ಟ ಅಪೂರ್ವ ವಾಹನವನ್ನೇರಿ ನನ್ನ ಬಳಿ ಬಾ. ಇಂದ್ರನ ಮಹಾ ವಾಹನಗಳಲ್ಲಿ ಕುಳಿತು ಮನಃಸಂತೋಷವನ್ನು ಹೊಂದಿದ್ದೇನೆ. ನೀನು ಅನ್ಯ ಯಾನದಲ್ಲಿ ಬರಬೇಕು.”” ಅದನ್ನು ಕೇಳಿ ಶಚಿಯು ಹೃಷ್ಟಳಾಗಿ ಹಿಂದಿರುಗಿದಳು. ಇಂದ್ರನಾದರೋ ಪುನಃ ಕಮಲಗ್ರಂಥಿಯನ್ನು ಪ್ರವೇಶಿಸಿದನು.
12329037A ಅಥೇಂದ್ರಾಣೀಮಭ್ಯಾಗತಾಂ ದೃಷ್ಟ್ವೋವಾಚ ನಹುಷಃ ಪೂರ್ಣಃ ಸ ಕಾಲ ಇತಿ।
12329037B ತಂ ಶಚ್ಯಬ್ರವೀಚ್ಚಕ್ರೇಣ ಯಥೋಕ್ತಮ್।
12329037C ಸ ಮಹರ್ಷಿಯುಕ್ತಂ ವಾಹನಮಧಿರೂಢಃ ಶಚೀಸಮೀಪಮುಪಾಗಚ್ಚತ್।।
ಇಂದ್ರಾಣಿಯು ಆಗಮಿಸಿದುದನ್ನು ಕಂಡು ನಹುಷನು “ಕಾಲವು ಪೂರ್ಣವಾಯಿತು” ಎಂದು ಹೇಳಿದನು. ಶಚಿಯು ಅವನಿಗೆ ಶಕ್ರನು ಹೇಳಿದಂತೆಯೇ ಹೇಳಿದಳು. ನಹುಷನು ಮಹರ್ಷಿಗಳು ಹೊತ್ತ ವಾಹನವನ್ನೇರಿ ಶಚಿಯ ಬಳಿ ಹೊರಟನು.
12329038A ಅಥ ಮೈತ್ರಾವರುಣಿಃ ಕುಂಭಯೋನಿರಗಸ್ತ್ಯೋ ಮಹರ್ಷೀನ್ ವಿಕ್ರಿಯಮಾಣಾಂಸ್ತಾನ್ನಹುಷೇಣಾಪಶ್ಯತ್।
12329038B ಪದ್ಭ್ಯಾಂ ಚ ತೇನಾಸ್ಪೃಶ್ಯತ।
12329038C ತತಃ ಸ ನಹುಷಮಬ್ರವೀದಕಾರ್ಯಪ್ರವೃತ್ತ ಪಾಪ ಪತಸ್ವ ಮಹೀಮ್।
12329038D ಸರ್ಪೋ ಭವ ಯಾವದ್ಭೂಮಿರ್ಗಿರಯಶ್ಚ ತಿಷ್ಠೇಯುಸ್ತಾವದಿತಿ।
12329038E ಸ ಮಹರ್ಷಿವಾಕ್ಯಸಮಕಾಲಮೇವ ತಸ್ಮಾದ್ಯಾನಾದವಾಪತತ್।।
ಆಗ ನಹುಷನು ವಾಹನವನ್ನು ಹೊತ್ತಿದ್ದ ಮೈತ್ರಾವರುಣಿ, ಕುಂಭಯೋನಿ ಮಹರ್ಷಿ ಅಗಸ್ತ್ಯನನ್ನು ನೋಡಿದನು. ಅವನನ್ನು ಕಾಲಿನಿಂದ ಮುಟ್ಟಿದನು ಕೂಡ. ಆಗ ಅವನು ನಹುಷನಿಗೆ ಹೇಳಿದನು: “ಅಕಾರ್ಯಪ್ರವೃತ್ತ! ಪಾಪಿ! ಭೂಮಿಯ ಮೇಲೆ ಬೀಳು. ಎಲ್ಲಿಯವರಿಗೆ ಭೂಮಿ-ಗಿರಿಗಳಿರುತ್ತವೆಯೋ ಅಲ್ಲಿಯವರೆಗೆ ಸರ್ಪವಾಗಿಯೇ ಇರು.” ಆ ಮಹರ್ಷಿಯು ತನ್ನ ಮಾತನ್ನು ಮುಗಿಸುತ್ತಿದ್ದಂತೆಯೇ ಅವನು ಯಾನದಿಂದ ಕೆಳಗೆ ಬಿದ್ದನು.
12329039A ಅಥಾನಿಂದ್ರಂ ಪುನಸ್ತ್ರೈಲೋಕ್ಯಮಭವತ್।
12329039B ತತೋ ದೇವಾ ಋಷಯಶ್ಚ ಭಗವಂತಂ ವಿಷ್ಣುಂ ಶರಣಮಿಂದ್ರಾರ್ಥೇಽಭಿಜಗ್ಮುಃ।
12329039C ಊಚುಶ್ಚೈನಂ ಭಗವನ್ನಿಂದ್ರಂ ಬ್ರಹ್ಮವಧ್ಯಾಭಿಭೂತಂ ತ್ರಾತುಮರ್ಹಸೀತಿ।
12329039D ತತಃ ಸ ವರದಸ್ತಾನಬ್ರವೀದಶ್ವಮೇಧಂ ಯಜ್ಞಂ ವೈಷ್ಣವಂ ಶಕ್ರೋಽಭಿಯಜತು।
12329039E ತತಃ ಸ್ವಂ ಸ್ಥಾನಂ ಪ್ರಾಪ್ಸ್ಯತೀತಿ।।
ಪುನಃ ತ್ರೈಲೋಕ್ಯದಲ್ಲಿ ಇಂದ್ರನಿಲ್ಲದಂತಾಯಿತು. ಆಗ ದೇವತೆಗಳು ಮತ್ತು ಋಷಿಗಳು ಇಂದ್ರನಿಗಾಗಿ ಭಗವಂತ ವಿಷ್ಣುವಿನ ಮೊರೆಹೊಕ್ಕರು. “ಭಗವನ್! ಬ್ರಹ್ಮವಧೆಯಿಂದ ಪೀಡಿತನಾಗಿರುವ ಇಂದ್ರನನ್ನು ಪಾರುಮಾಡಬೇಕು” ಎಂದು ಅವನಲ್ಲಿ ಕೇಳಿಕೊಂಡರು. ಆಗ ಆ ವರದನು ಅವರಿಗೆ ಹೇಳಿದನು: “ವೈಷ್ಣವ ಯಜ್ಞ ಅಶ್ವಮೇಧವನ್ನು ಮಾಡಲಿ. ಅದರಿಂದ ಶಕ್ರನಿಗೆ ಜಯವಾಗುತ್ತದೆ. ಅನಂತರ ಅವನು ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತಾನೆ.”
12329040A ತತೋ ದೇವಾ ಋಷಯಶ್ಚೇಂದ್ರಂ ನಾಪಶ್ಯನ್ಯದಾ ತದಾ ಶಚೀಮೂಚುರ್ಗಚ್ಚ ಸುಭಗೇ ಇಂದ್ರಮಾನಯಸ್ವೇತಿ।
12329040B ಸಾ ಪುನಸ್ತತ್ಸರಃ ಸಮಭ್ಯಗಚ್ಚತ್।
12329040C ಇಂದ್ರಶ್ಚ ತಸ್ಮಾತ್ಸರಸಃ ಸಮುತ್ಥಾಯ ಬೃಹಸ್ಪತಿಮಭಿಜಗಾಮ।
12329040D ಬೃಹಸ್ಪತಿಶ್ಚಾಶ್ವಮೇಧಂ ಮಹಾಕ್ರತುಂ ಶಕ್ರಾಯಾಹರತ್।
12329040E ತತಃ ಕೃಷ್ಣಸಾರಂಗಂ ಮೇಧ್ಯಮಶ್ವಮುತ್ಸೃಜ್ಯ ವಾಹನಂ ತಮೇವ ಕೃತ್ವಾ ಇಂದ್ರಂ ಮರುತ್ಪತಿಂ ಬೃಹಸ್ಪತಿಃ ಸ್ವಸ್ಥಾನಂ ಪ್ರಾಪಯಾಮಾಸ।।
ಅನಂತರ ದೇವತೆಗಳು ಮತ್ತು ಋಷಿಗಳು ಇಂದ್ರನನ್ನು ಕಾಣದೇ ಶಚಿಗೆ “ಸುಭಗೇ! ಹೋಗು! ಇಂದ್ರನನ್ನು ಕರೆದುಕೊಂಡು ಬಾ!” ಎಂದು ಹೇಳಿದರು. ಅವಳು ಪುನಃ ಆ ಸರೋವರದ ಬಳಿ ಬಂದಳು. ಇಂದ್ರನಾದರೋ ಆ ಸರೋವರದಿಂದ ಮೇಲೆದ್ದು ಬೃಹಸ್ಪತಿಯ ಬಳಿಸಾರಿದನು. ಬೃಹಸ್ಪತಿಯು ಶಕ್ರನ ಮೂಲಕ ಮಹಾಕ್ರತು ಅಶ್ವಮೇಧವನ್ನು ಮಾಡಿಸಿದನು. ಆಗ ಬೃಹಸ್ಪತಿಯು ಕೃಷ್ಣಸಾರಂಗವರ್ಣದ ಮೇಧ್ಯಾಶ್ವವನ್ನು ಬಿಟ್ಟಿದ್ದನು. ಅದನ್ನೇ ವಾಹನವನ್ನಾಗಿ ಮಾಡಿ ಅವನು ಮರುತ್ಪತಿ ಇಂದ್ರನನ್ನು ಸ್ವಸ್ಥಾನದಲ್ಲಿ ಪ್ರತಿಷ್ಠಾಪಿಸಿದನು.
12329041A ತತಃ ಸ ದೇವರಾಡ್ದೇವೈರೃಷಿಭಿಃ ಸ್ತೂಯಮಾನಸ್ತ್ರಿವಿಷ್ಟಪಸ್ಥೋ ನಿಷ್ಕಲ್ಮಷೋ ಬಭೂವ।
12329041B ಬ್ರಹ್ಮವಧ್ಯಾಂ ಚತುರ್ಷು ಸ್ಥಾನೇಷು ವನಿತಾಗ್ನಿವನಸ್ಪತಿಗೋಷು ವ್ಯಭಜತ್।
12329041C ಏವಮಿಂದ್ರೋ ಬ್ರಹ್ಮತೇಜಃಪ್ರಭಾವೋಪಬೃಂಹಿತಃ ಶತ್ರುವಧಂ ಕೃತ್ವಾ ಸ್ವಸ್ಥಾನಂ ಪ್ರಾಪಿತಃ।।
ಅನಂತರ ದೇವರಾಜನು ದೇವತೆಗಳು ಮತ್ತು ಋಷಿಗಳಿಂದ ಸ್ತುತಿಸಲ್ಪಡುತ್ತಾ ತ್ರಿವಿಷ್ಟಪದಲ್ಲಿ ನೆಲೆಸಿ ನಿಷ್ಕಲ್ಮಷನಾದನು. ಬ್ರಹ್ಮವಧೆಯನ್ನು ನಾಲ್ಕು ಸ್ಥಾನಗಳಲ್ಲಿ – ವನಿತೆಯರು, ಅಗ್ನಿ, ವನಸ್ಪತಿ ಮತ್ತು ಗೋವುಗಳಲ್ಲಿ ವಿಭಜಿಸಿದನು. ಹೀಗೆ ಇಂದ್ರನು ಬ್ರಹ್ಮತೇಜಸ್ಸಿನ ಪ್ರಭಾವದಿಂದ ವೃದ್ಧಿಯನ್ನು ಹೊಂದಿ ಶತ್ರುವಧೆಗೈದು ಸ್ವಸ್ಥಾನದಲ್ಲಿ ನೆಲೆಸಿದನು.
12329042A ಆಕಾಶಗಂಗಾಗತಶ್ಚ ಪುರಾ ಭರದ್ವಾಜೋ ಮಹರ್ಷಿರುಪಾಸ್ಪೃಶಂಸ್ತ್ರೀನ್ ಕ್ರಮಾನ್ ಕ್ರಮತಾ ವಿಷ್ಣುನಾಭ್ಯಾಸಾದಿತಃ।
12329042B ಸ ಭರದ್ವಾಜೇನ ಸಸಲಿಲೇನ ಪಾಣಿನೋರಸಿ ತಾಡಿತಃ ಸಲಕ್ಷಣೋರಸ್ಕಃ ಸಂವೃತ್ತಃ।।
ಹಿಂದೆ ಮಹರ್ಷಿ ಭರದ್ವಾಜನು ಆಕಾಶಗಂಗೆಗೆ ಹೋಗಿ ಆಚಮನ ಮಾಡುತ್ತಿದ್ದಾಗ ಮೂರು ಹೆಜ್ಜೆಗಳಿಂದ ಮೂರು ಲೋಕಗಳನ್ನೂ ಅಳೆಯುತ್ತಿದ್ದ ಮಹಾವಿಷ್ಣುವು ಅಲ್ಲಿಗೆ ಬಂದನು. ಆಗ ಭರದ್ವಾಜನು ಆಚಮನ ಜಲದಿಂದ ಕೂಡಿದ್ದ ತನ್ನ ಕೈಯಿಂದ ಅವನ ವಕ್ಷಃಸ್ಥಳವನ್ನು ಪ್ರಹರಿಸಿದನು. ಅದರಿಂದ ಮಹಾವಿಷ್ಣುವಿನ ವಕ್ಷಃಸ್ಥಳದ ಮೇಲೆ ಗುರುತಾಯಿತು.
12329043A ಭೃಗುಣಾ ಮಹರ್ಷಿಣಾ ಶಪ್ತೋಽಗ್ನಿಃ ಸರ್ವಭಕ್ಷತ್ವಮುಪನೀತಃ।।
ಮಹರ್ಷಿ ಭೃಗುವಿನಿಂದ ಶಪಿತನಾದ ಅಗ್ನಿಯು ಸರ್ವಭಕ್ಷತ್ವವನ್ನು ಪಡೆದುಕೊಂಡನು.
12329044A ಅದಿತಿರ್ವೈ ದೇವಾನಾಮನ್ನಮಪಚದೇತದ್ ಭುಕ್ತ್ವಾಸುರಾನ್ ಹನಿಷ್ಯಂತೀತಿ।
12329044B ತತ್ರ ಬುಧೋ ವ್ರತಚರ್ಯಾಸಮಾಪ್ತಾವಾಗಚ್ಚತ್।
12329044C ಅದಿತಿಂ ಚಾವೋಚದ್ಭಿಕ್ಷಾಂ ದೇಹೀತಿ।
12329044D ತತ್ರ ದೇವೈಃ ಪೂರ್ವಮೇತತ್ಪ್ರಾಶ್ಯಂ ನಾನ್ಯೇನೇತ್ಯದಿತಿರ್ಭಿಕ್ಷಾಂ ನಾದಾತ್।
12329044E ಅಥ ಭಿಕ್ಷಾಪ್ರತ್ಯಾಖ್ಯಾನರುಷಿತೇನ ಬುಧೇನ ಬ್ರಹ್ಮಭೂತೇನ ವಿವಸ್ವತೋ ದ್ವಿತೀಯೇ ಜನ್ಮನ್ಯಂಡಸಂಜ್ಞಿತಸ್ಯಾಂಡಂ ಮಾರಿತಮದಿತ್ಯಾಃ।
12329044F ಸ ಮಾರ್ತಂಡೋ ವಿವಸ್ವಾನಭವಚ್ಚ್ರಾದ್ಧದೇವಃ।।
ದೇವತೆಗಳು ಭುಂಜಿಸಿ ಅಸುರರನ್ನು ಸಂಹರಿಸಬೇಕೆಂದು ಅದಿತಿಯು ಅನ್ನವನ್ನು ಬೇಯಿಸುತ್ತಿದ್ದಳು. ಅಲ್ಲಿಗೆ ವ್ರತಚರ್ಯಗಳನ್ನು ಮುಗಿಸಿದ ಬುಧನು ಆಗಮಿಸಿದನು. “ಭಿಕ್ಷಾಂದೇಹೀ” ಎಂದು ಅದಿತಿಗೆ ಹೇಳಿದನು. ತನ್ನ ಅನ್ನವನ್ನು ಮೊದಲು ದೇವತೆಗಳು ಭುಂಜಿಸಬೇಕು. ಬೇರೆ ಯಾರೂ ಅದನ್ನು ತಿನ್ನಬಾರದು ಎಂದು ಅದಿತಿಯು ಅವನಿಗೆ ಭಿಕ್ಷವನ್ನು ನೀಡಲಿಲ್ಲ. ಭಿಕ್ಷೆಯು ಸಿಗದಿದ್ದ ರೋಷದಿಂದ ಬ್ರಹ್ಮಭೂತ ಬುಧನು “ಅಂಡ ಎನ್ನುವ ವಿವಸ್ವತನ ಎರಡನೆಯ ಜನ್ಮದ ಸಮಯದಲ್ಲಿ ತಾಯಿ ಅದಿತಿಗೆ ಉದರಪೀಡೆಯಾಗುತ್ತದೆ” ಎಂದು ಶಾಪವನ್ನಿತ್ತನು. ಶ್ರಾದ್ಧದೇವ ವಿವಸ್ವಾನನು ಮಾರ್ತಂಡನಾದನು.
12329045A ದಕ್ಷಸ್ಯ ವೈ ದುಹಿತರಃ ಷಷ್ಟಿರಾಸನ್।
12329045B ತಾಭ್ಯಃ ಕಶ್ಯಪಾಯ ತ್ರಯೋದಶ ಪ್ರಾದಾದ್ದಶ ಧರ್ಮಾಯ ದಶ ಮನವೇ ಸಪ್ತವಿಂಶತಿಮಿಂದವೇ।
12329045C ತಾಸು ತುಲ್ಯಾಸು ನಕ್ಷತ್ರಾಖ್ಯಾಂ ಗತಾಸು ಸೋಮೋ ರೋಹಿಣ್ಯಾಮಭ್ಯಧಿಕಾಂ ಪ್ರೀತಿಮಕರೋತ್।
12329045D ತತಸ್ತಾಃ ಶೇಷಾಃ ಪತ್ನ್ಯ ಈರ್ಷ್ಯಾವತ್ಯಃ ಪಿತುಃ ಸಮೀಪಂ ಗತ್ವೇಮಮರ್ಥಂ ಶಶಂಸುಃ।
12329045E ಭಗವನ್ನಸ್ಮಾಸು ತುಲ್ಯಪ್ರಭಾವಾಸು ಸೋಮೋ ರೋಹಿಣೀಮಧಿಕಂ ಭಜತೀತಿ।
12329045F ಸೋಽಬ್ರವೀದ್ಯಕ್ಷ್ಮೈನಮಾವೇಕ್ಷ್ಯತೀತಿ।।
ದಕ್ಷನಿಗೆ ಅರವತ್ತು ಪುತ್ರಿಯರಿದ್ದರು. ಅವರಲ್ಲಿ ಹನ್ನೆರಡು ಪುತ್ರಿಯರನ್ನು ಕಶ್ಯಪನಿಗೆ, ಹತ್ತು ಪುತ್ರಿಯರನ್ನು ಧರ್ಮನಿಗೆ, ಹತ್ತನ್ನು ಮನುವಿಗೆ ಮತ್ತು ಇಪ್ಪತ್ತೇಳು ಪುತ್ರಿಯರನ್ನು ಇಂದುವಿಗೆ ಕೊಟ್ಟನು. ಸೋಮನು ನಕ್ಷತ್ರಗಳೆಂದು ಪ್ರಸಿದ್ಧರಾಗಿದ್ದ ಒಂದೇ ತರನಾಗಿದ್ದ ಅವರಲ್ಲಿ ರೋಹಿಣಿಯನ್ನು ಅಧಿಕವಾಗಿ ಪ್ರೀತಿಸಿದನು. ಆಗ ಉಳಿದ ಪತ್ನಿಯರು ಈರ್ಷೆಯಿಂದ ತಂದೆಯ ಸಮೀಪಹೋಗಿ ಇದನ್ನು ಹೇಳಿದರು: “ಭಗವನ್! ನಾವು ಸಮಾನಪ್ರಭಾವವುಳ್ಳವರಾಗಿದ್ದರೂ ಸೋಮನು ರೋಹಿಣಿಯನ್ನು ಅಧಿಕವಾಗಿ ಪ್ರೀತಿಸುತ್ತಿದ್ದಾನೆ.” ಅವನು “ಚಂದ್ರನಿಗೆ ಕ್ಷಯರೋಗವು ಪ್ರವೇಶಿಸಲಿ!” ಎಂದನು.
12329046A ದಕ್ಷಶಾಪಾತ್ಸೋಮಂ ರಾಜಾನಂ ಯಕ್ಷ್ಮಾವಿವೇಶ।
12329046B ಸ ಯಕ್ಷ್ಮಣಾವಿಷ್ಟೋ ದಕ್ಷಮಗಮತ್।
12329046C ದಕ್ಷಶ್ಚೈನಮಬ್ರವೀನ್ನ ಸಮಂ ವರ್ತಸ ಇತಿ।
12329046D ತತ್ರರ್ಷಯಃ ಸೋಮಮಬ್ರುವನ್ ಕ್ಷೀಯಸೇ ಯಕ್ಷ್ಮಣಾ।
12329046E ಪಶ್ಚಿಮಸ್ಯಾಂ ದಿಶಿ ಸಮುದ್ರೇ ಹಿರಣ್ಯಸರಸ್ತೀರ್ಥಮ್।
12329046F ತತ್ರ ಗತ್ವಾತ್ಮಾನಮಭಿಷೇಚಯಸ್ವೇತಿ।
12329046G ಅಥಾಗಚ್ಚತ್ಸೋಮಸ್ತತ್ರ ಹಿರಣ್ಯಸರಸ್ತೀರ್ಥಮ್।
12329046H ಗತ್ವಾ ಚಾತ್ಮನಃ ಸ್ನಪನಮಕರೋತ್।
12329046I ಸ್ನಾತ್ವಾ ಚಾತ್ಮಾನಂ ಪಾಪ್ಮನೋ ಮೋಕ್ಷಯಾಮಾಸ।
12329046J ತತ್ರ ಚಾವಭಾಸಿತಸ್ತೀರ್ಥೇ ಯದಾ ಸೋಮಸ್ತದಾಪ್ರಭೃತಿ ತೀರ್ಥಂ ತತ್ಪ್ರಭಾಸಮಿತಿ ನಾಮ್ನಾ ಖ್ಯಾತಂ ಬಭೂವ।
12329046K ತಚ್ಚಾಪಾದದ್ಯಾಪಿ ಕ್ಷೀಯತೇ ಸೋಮೋಽಮಾವಾಸ್ಯಾಂತರಸ್ಥಃ।
12329046L ಪೌರ್ಣಮಾಸೀಮಾತ್ರೇಽಧಿಷ್ಠಿತೋ ಮೇಘಲೇಖಾಪ್ರತಿಚ್ಚನ್ನಂ ವಪುರ್ದರ್ಶಯತಿ।
12329046M ಮೇಘಸದೃಶಂ ವರ್ಣಮಗಮತ್ತದಸ್ಯ ಶಶಲಕ್ಷ್ಮ ವಿಮಲಮಭವತ್।।
ದಕ್ಷನ ಶಾಪದಿಂದಾಗಿ ಕ್ಷಯರೋಗವು ರಾಜಾ ಸೋಮನನ್ನು ಪ್ರವೇಶಿಸಿತು. ಕ್ಷಯದಿಂದ ಪೀಡಿತ ಅವನು ದಕ್ಷನ ಬಳಿ ಹೋದನು. ನೀನು ಪತ್ನಿಯರಲ್ಲಿ ಸಮನಾಗಿ ವರ್ತಿಸದೇ ಇದ್ದುದರಿಂದ ಹೀಗಾಯಿತೆಂದು ಹೇಳಿದನು. ಅಲ್ಲಿದ್ದ ಋಷಿಗಳು ಸೋಮನಿಗೆ ಹೇಳಿದರು. “ಕ್ಷಯರೋಗದಿಂದ ಕ್ಷೀಣಿಸುತ್ತಿರುವೆ. ಪಶ್ಚಿಮ ದಿಕ್ಕಿನ ಸಮುದ್ರತೀರದಲ್ಲಿ ಹಿರಣ್ಯಸರೋವರವೆಂಬ ತೀರ್ಥವಿದೆ. ಅಲ್ಲಿ ಹೋಗಿ ಸ್ನಾನಮಾಡು!” ಕೂಡಲೇ ಸೋಮನು ಹಿರಣ್ಯಸರೋವರ ತೀರ್ಥಕ್ಕೆ ಹೋದನು. ಹೋಗಿ ಅಲ್ಲಿ ಸ್ನಾನಮಾಡಿದನು. ಸ್ನಾನಮಾಡಿ ತನ್ನನ್ನು ಪಾಪರಹಿತನನ್ನಾಗಿ ಮಾಡಿಕೊಂಡನು. ಯಾವಾಗ ಸೋಮನು ಆ ತೀರ್ಥದಲ್ಲಿ ಸ್ನಾನಮಾಡಿ ತನ್ನ ಪ್ರಭೆಯನ್ನು ಪಡೆದುಕೊಂಡನೋ ಅಂದಿನಿಂದ ಆ ತೀರ್ಥವು ಪ್ರಭಾಸ ಎಂಬ ಹೆಸರಿನಿಂದ ಪ್ರಖ್ಯಾತವಾಯಿತು. ಆ ಶಾಪದಿಂದಾಗಿ ಸೋಮನು ಈಗಲೂ ಕೂಡ ಅಮವಾಸ್ಯೆಯವರೆಗೆ ಕ್ಷೀಣಿಸುತ್ತಿರುತ್ತಾನೆ. ಪುನಃ ಹುಣ್ಣಿಮೆಯವರೆಗೆ ವೃದ್ಧಿಸುತ್ತಾನೆ. ಅವನ ಶರೀರವು ಮೇಘದಂತಿರುವ ಶ್ಯಾಮಲವರ್ಣದ ರೇಖೆಯಿಂದ ಆಚ್ಛಾದಿತವಾಗಿದೆ. ಮೇಘವರ್ಣದ ಮೊಲದ ಚಿಹ್ನೆಯು ಸ್ಪಷ್ಟವಾಗಿ ಕಾಣುತ್ತದೆ.
12329047A ಸ್ಥೂಲಶಿರಾ ಮಹರ್ಷಿರ್ಮೇರೋಃ ಪ್ರಾಗುತ್ತರೇ ದಿಗ್ಭಾಗೇ ತಪಸ್ತೇಪೇ।
12329047B ತಸ್ಯ ತಪಸ್ತಪ್ಯಮಾನಸ್ಯ ಸರ್ವಗಂಧವಹಃ ಶುಚಿರ್ವಾಯುರ್ವಿವಾಯಮಾನಃ ಶರೀರಮಸ್ಪೃಶತ್।
12329047C ಸ ತಪಸಾ ತಾಪಿತಶರೀರಃ ಕೃಶೋ ವಾಯುನೋಪವೀಜ್ಯಮಾನೋ ಹೃದಯಪರಿತೋಷಮಗಮತ್।
12329047D ತತ್ರ ತಸ್ಯಾನಿಲವ್ಯಜನಕೃತಪರಿತೋಷಸ್ಯ ಸದ್ಯೋ ವನಸ್ಪತಯಃ ಪುಷ್ಪಶೋಭಾಂ ನ ದರ್ಶಿತವಂತ ಇತಿ ಸ ಏತಾನ್ ಶಶಾಪ ನ ಸರ್ವಕಾಲಂ ಪುಷ್ಪವಂತೋ ಭವಿಷ್ಯಥೇತಿ।।
ಮಹರ್ಷಿ ಸ್ಥೂಲಶಿರನು ಮೇರುವಿನ ಈಶಾನ್ಯದಿಕ್ಕಿನ ಪ್ರದೇಶದಲ್ಲಿ ತಪಸ್ಸನ್ನು ತಪಿಸುತ್ತಿದ್ದನು. ಅವನು ತಪಸ್ಸನ್ನು ತಪಿಸುತ್ತಿರಲು ಸರ್ವಗಂಧಗಳನ್ನೂ ಹೊತ್ತು ಬೀಸುತ್ತಿದ್ದ ಶುಚಿಯಾದ ವಾಯುವು ಅವನ ಶರೀವನ್ನು ಸ್ಪರ್ಶಿಸಿತು. ತಪಸ್ಸಿನಿಂದ ಸಂತಪ್ತನಾಗಿದ್ದ ಮತ್ತು ಶರೀರವು ಕೃಶವಾಗಿದ್ದ ಅವನು ಸುಗಂಧಯುಕ್ತ ವಾತಾವರಣದಿಂದ ಪ್ರಹೃಷ್ಟನಾದನು. ಅಲ್ಲಿ ಹಾಗೆ ಬೀಸಣಿಗೆಯಂತೆ ಬೀಸುತ್ತಿದ್ದ ಗಾಳಿಯಿಂದ ತಾನು ಪರಿತುಷ್ಟನಾದರೂ ಅಲ್ಲಿದ್ದ ವನಸ್ಪತಿಗಳು ಪುಷ್ಪಗಳಿಂದ ಶೊಭಿಸುತ್ತಿಲ್ಲವೆಂದು ಸರ್ವಕಾಲವೂ ಅವು ಪುಷ್ಪಭರಿತವಾಗದಂತೆ ಶಾಪವನ್ನಿತ್ತನು.
12329048A ನಾರಾಯಣೋ ಲೋಕಹಿತಾರ್ಥಂ ವಡವಾಮುಖೋ ನಾಮ ಮಹರ್ಷಿಃ ಪುರಾಭವತ್।
12329048B ತಸ್ಯ ಮೇರೌ ತಪಸ್ತಪ್ಯತಃ ಸಮುದ್ರ ಆಹೂತೋ ನಾಗತಃ।
12329048C ತೇನಾಮರ್ಷಿತೇನಾತ್ಮಗಾತ್ರೋಷ್ಮಣಾ ಸಮುದ್ರಃ ಸ್ತಿಮಿತಜಲಃ ಕೃತಃ।
12329048D ಸ್ವೇದಪ್ರಸ್ಯಂದನಸದೃಶಶ್ಚಾಸ್ಯ ಲವಣಭಾವೋ ಜನಿತಃ।
12329048E ಉಕ್ತಶ್ಚಾಪೇಯೋ ಭವಿಷ್ಯಸಿ।
12329048F ಏತಚ್ಚ ತೇ ತೋಯಂ ವಡವಾಮುಖಸಂಜ್ಞಿತೇನ ಪೀಯಮಾನಂ ಮಧುರಂ ಭವಿಷ್ಯತಿ।
12329048G ತದೇತದದ್ಯಾಪಿ ವಡವಾಮುಖಸಂಜ್ಞಿತೇನಾನುವರ್ತಿನಾ ತೋಯಂ ಸಾಮುದ್ರಂ ಪೀಯತೇ।।
ಹಿಂದೆ ನಾರಾಯಣನು ಲೊಕಹಿತಾರ್ಥಕ್ಕಾಗಿ ವಡವಾಮುಖ ಎಂಬ ಹೆಸರಿನ ಮಹರ್ಷಿಯಾದನು. ಅವನು ಮೇರು ಪರ್ವತದಲ್ಲಿ ತಪಸ್ಸನ್ನು ತಪಿಸುತ್ತಿದ್ದಾಗ ಸಮುದ್ರನನ್ನು ಆಹ್ವಾನಿಸಿದನು. ಆದರೆ ಸಮುದ್ರನು ಬರಲಿಲ್ಲ. ಅದರಿಂದ ಕುಪಿತನಾದ ಅವನು ತನ್ನ ಶರೀರದ ಉಷ್ಣದಿಂದಲೇ ಸಮುದ್ರವನ್ನು ಸ್ತಿಮಿತಗೊಳಿಸಿದನು. ಬೆವರಿನ ಹನಿಯಂತ ಲವಣಭಾವವನ್ನೂ ಉಂಟುಮಾಡಿದನು. “ನೀನು ಕುಡಿಯಲು ಅಯೋಗ್ಯನಾಗುತ್ತೀಯೆ! ಆದರೆ ವಡವಾಮುಖವೆಂಬ ಅಗ್ನಿಯು ಕುಡಿದ ನಿನ್ನ ನೀರು ಮಧುರವಾಗುತ್ತದೆ” ಎಂದನು. ಅವನು ಹೇಳಿದಂತೆ ವಡವಾಮುಖವೆಂಬ ಅಗ್ನಿಯು ಈಗಲೂ ಕೂಡ ಸಮುದ್ರದ ನೀರನ್ನು ಕುಡಿಯುತ್ತದೆ.
12329049A ಹಿಮವತೋ ಗಿರೇರ್ದುಹಿತರಮುಮಾಂ ರುದ್ರಶ್ಚಕಮೇ।
12329049B ಭೃಗುರಪಿ ಚ ಮಹರ್ಷಿರ್ಹಿಮವಂತಮಾಗಮ್ಯಾಬ್ರವೀತ್ ಕನ್ಯಾಮುಮಾಂ ಮೇ ದೇಹೀತಿ।
12329049C ತಮಬ್ರವೀದ್ಧಿಮವಾನಭಿಲಷಿತೋ ವರೋ ರುದ್ರ ಇತಿ।
12329049D ತಮಬ್ರವೀದ್ ಭೃಗುರ್ಯಸ್ಮಾತ್ತ್ವಯಾಹಂ ಕನ್ಯಾವರಣಕೃತಭಾವಃ ಪ್ರತ್ಯಾಖ್ಯಾತಸ್ತಸ್ಮಾನ್ನ ರತ್ನಾನಾಂ ಭವಾನ್ ಭಾಜನಂ ಭವಿಷ್ಯತೀತಿ। 12329049E ಅದ್ಯಪ್ರಭೃತ್ಯೇತದವಸ್ಥಿತಮೃಷಿವಚನಮ್।।
ಗಿರಿ ಹಿಮವತನು ಪುತ್ರಿ ಉಮೆಯನ್ನು ರುದ್ರನಿಗೆ ಕೊಡಲು ಬಯಸಿದ್ದನು. ಮಹರ್ಷಿ ಭೃಗುವೂ ಕೂಡ ಹಿಮವಂತನ ಬಳಿ ಆಗಮಿಸಿ “ಕನ್ಯೆ ಉಮೆಯನ್ನು ನನಗೆ ಕೊಡು” ಎಂದು ಹೇಳಿದನು. ಅವನಿಗೆ ಹಿಮವಾನನು “ರುದ್ರನನ್ನು ವರನನ್ನಾಗಿ ಬಯಸಿದ್ದೇನೆ” ಎಂದನು. ಭೃಗುವು ಅವನಿಗೆ ಹೇಳಿದನು: “ನಾನು ಕನ್ಯೆಯನ್ನು ವರಿಸಲು ಭಾವನೆಯನ್ನಿಟ್ಟುಕೊಂಡು ಬಂದಿದ್ದರೂ ನನ್ನನ್ನು ಉಪೇಕ್ಷೆಮಾಡಿರುವೆಯಾದುದರಿಂದ ನೀನು ರತ್ನಗಳಿಗೆ ನಿಧಿಯಾಗುವುದಿಲ್ಲ!” ಅಂದಿನಿಂದ ಋಷಿವಚನದಂತೆ ಹಾಗೆಯೇ ಆಯಿತು.
12329050A ತದೇವಂವಿಧಂ ಮಾಹಾತ್ಮ್ಯಂ ಬ್ರಾಹ್ಮಣಾನಾಮ್।
12329050B ಕ್ಷತ್ರಮಪಿ ಶಾಶ್ವತೀಮವ್ಯಯಾಂ ಪೃಥಿವೀಂ ಪತ್ನೀಮಭಿಗಮ್ಯ ಬುಭುಜೇ।
12329050C ತದೇತದ್ಬ್ರಹ್ಮಾಗ್ನೀಷೋಮೀಯಮ್।
12329050D ತೇನ ಜಗದ್ಧಾರ್ಯತೇ।।
ಬ್ರಾಹ್ಮಣರ ಮಹಾತ್ಮೆಯು ಅಂಥಹುದು. ಕ್ಷತ್ರಿಯರೂ ಕೂಡ ಅವರ ಅನುಗ್ರಹದಿಂದಲೇ ಈ ಶಾಶ್ವತೀ ಪೃಥ್ವಿಯನ್ನು ಪತ್ನಿಯಂತೆ ಪರಿಗ್ರಹಿಸಿ ಉಪಭೋಗಿಸುತ್ತಾರೆ. ಅದೇ ಬ್ರಹ್ಮಾಗ್ನಿಷೋಮೀಯವು. ಅದರಿಂದಲೇ ಜಗತ್ತು ನಿಂತಿದೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ಏಕೋನತ್ರಿಂಶಾಧಿಕತ್ರಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಇಪ್ಪತ್ತೊಂಭತ್ತನೇ ಅಧ್ಯಾಯವು.
-
ಸಾ ವಿಶ್ವರೂಪಸ್ಯ ರಜನೀ ಹಿ ಏವಮಸ್ಯಾರ್ಥೋಽನುಭಾಷ್ಯಃ।। (ಭಾರತ ದರ್ಶನ). ↩︎
-
ವಾಕ್ಸಂಯಮಕಾಲೇ ಹಿತಸ್ಯ (ಭಾರತ ದರ್ಶನ). ↩︎
-
ಬೇರೆ ಬೇರೆ ಮನ್ವಂತರಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ಶಿವನಿಗೆ ನೀಲಕಂಠತ್ವವು ಪ್ರಾಪ್ತವಾಯಿತು ಇಂದು ಇವು ಸೂಚಿಸುತ್ತವೆ. ಈಗಿನ ವೈವಸ್ವತ ಮನ್ವಂತರದಲ್ಲಿ ಕ್ಷೀರಸಾಗರವನ್ನು ದೇವ-ದಾನವರು ಮಥನಮಾಡಿದಾಗ ಅದರಿಂದ ಹೊರಬಂದ ವಿಷವನ್ನು ಕುಡಿದು ಅದನ್ನು ತನ್ನ ಕೊರಳಿನಲ್ಲಿಯೇ ನಿಲ್ಲಿಸಿದುದಕ್ಕಾಗಿ ಶಿವನ ಕಂಠವು ನೀಲವಾಯಿತು. ↩︎