ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 306
ಸಾರ
ಯಾಜ್ಞವಲ್ಕ್ಯನು ಸೂರ್ಯನಿಂದ ವೇದಗಳನ್ನು ಪಡೆದುಕೊಂಡಿದುದನ್ನು ಜನಕನಿಗೆ ಹೇಳಿದುದು (1-25); ವಿಶ್ವಾವಸುವಿಗೆ ಜೀವಾತ್ಮ-ಪರಮಾತ್ಮರ ಏಕತ್ವದ ಉಪದೇಶ (26-108).
12306001 ಯಾಜ್ಞವಲ್ಕ್ಯ ಉವಾಚ।
12306001a ಅವ್ಯಕ್ತಸ್ಥಂ ಪರಂ ಯತ್ತತ್ ಪೃಷ್ಟಸ್ತೇಽಹಂ ನರಾಧಿಪ।
12306001c ಪರಂ ಗುಹ್ಯಮಿಮಂ ಪ್ರಶ್ನಂ ಶೃಣುಷ್ವಾವಹಿತೋ ನೃಪ।।
ಯಾಜ್ಞವಲ್ಕ್ಯನು ಹೇಳಿದನು: “ನರಾಧಿಪ! ಅವ್ಯಕ್ತ ಪರಬ್ರಹ್ಮನ ಕುರಿತು ನೀನು ಕೇಳಿದ ಪ್ರಶ್ನೆಯು ಪರಮ ಗುಹ್ಯವಾದುದು. ನೃಪ! ಏಕಾಗ್ರಚಿತ್ತನಾಗಿ ಕೇಳು.
12306002a ಯಥಾರ್ಷೇಣೇಹ ವಿಧಿನಾ ಚರತಾವಮತೇನ ಹ।
12306002c ಮಯಾದಿತ್ಯಾದವಾಪ್ತಾನಿ ಯಜೂಂಷಿ ಮಿಥಿಲಾಧಿಪ।।
ಮಿಥಿಲಾಧಿಪ! ಆರ್ಷ ವಿಧಿಗಳಿಂದ ವಿನಮ್ರನಾಗಿ ನಡೆದುಕೊಂಡು ನಾನು ಆದಿತ್ಯನಿಂದ ಯಜುರ್ವೇದವನ್ನು ಹೇಗೆ ಪಡೆದುಕೊಂಡೆ ಎನ್ನುವುದನ್ನು ಕೇಳು.
12306003a ಮಹತಾ ತಪಸಾ ದೇವಸ್ತಪಿಷ್ಠಃ ಸೇವಿತೋ ಮಯಾ।
12306003c ಪ್ರೀತೇನ ಚಾಹಂ ವಿಭುನಾ ಸೂರ್ಯೇಣೋಕ್ತಸ್ತದಾನಘ।।
ಅನಘ! ಮಹಾ ತಪಸ್ಸಿನಿಂದ ದೇವ ತಪಿಷ್ಠನನ್ನು ನಾನು ಸೇವಿಸಿದೆ. ಅದರಿಂದ ಪ್ರೀತನಾದ ವಿಭು ಸೂರ್ಯನು ನನಗೆ ಹೀಗೆ ಹೇಳಿದನು:
12306004a ವರಂ ವೃಣೀಷ್ವ ವಿಪ್ರರ್ಷೇ ಯದಿಷ್ಟಂ ತೇ ಸುದುರ್ಲಭಮ್।
12306004c ತತ್ತೇ ದಾಸ್ಯಾಮಿ ಪ್ರೀತಾತ್ಮಾ ಮತ್ಪ್ರಸಾದೋ ಹಿ ದುರ್ಲಭಃ।।
“ವಿಪ್ರರ್ಷೇ! ವರವನ್ನು ಕೇಳು. ಎಷ್ಟೇ ದುರ್ಲಭವಾಗಿದ್ದರೂ ನಿನಗಿಷ್ಟವಾದುದನ್ನು ಪ್ರೀತಾತ್ಮನಾದ ನಾನು ನಿನಗೆ ನೀಡುತ್ತೇನೆ. ದುರ್ಲಭವಾಗಿದ್ದರೂ ನನ್ನ ಪ್ರಸಾದದಿಂದ ಅದು ದೊರೆಯುತ್ತದೆ.”
12306005a ತತಃ ಪ್ರಣಮ್ಯ ಶಿರಸಾ ಮಯೋಕ್ತಸ್ತಪತಾಂ ವರಃ।
12306005c ಯಜೂಂಷಿ ನೋಪಯುಕ್ತಾನಿ ಕ್ಷಿಪ್ರಮಿಚ್ಚಾಮಿ ವೇದಿತುಮ್।।
ಆಗ ನಾನು ಶಿರಸಾ ವಂದಿಸಿ ತಪನ ಶ್ರೇಷ್ಠನಿಗೆ ಹೇಳಿದೆನು: “ಇದೂವರೆಗೂ ಯಾರೂ ಉಪಯೋಗಿಸಿರದ ಯಜುಸ್ಸುಗಳನ್ನು ಕ್ಷಿಪ್ರವಾಗಿ ತಿಳಿಯಬಯಸುತ್ತೇನೆ.”
12306006a ತತೋ ಮಾಂ ಭಗವಾನಾಹ ವಿತರಿಷ್ಯಾಮಿ ತೇ ದ್ವಿಜ।
12306006c ಸರಸ್ವತೀಹ ವಾಗ್ಭೂತಾ ಶರೀರಂ ತೇ ಪ್ರವೇಕ್ಷ್ಯತಿ।।
ಆಗ ಭಗವಂತನು ನನಗೆ ಹೇಳಿದನು: “ದ್ವಿಜ! ನಿನಗೆ ನೀಡುತ್ತೇನೆ. ಇದೋ. ಸರಸ್ವತಿಯು ವಾಗ್ಭೂತಳಾಗಿ ನಿನ್ನ ಶರೀರವನ್ನು ಪ್ರವೇಶಿಸುತ್ತಾಳೆ.”
12306007a ತತೋ ಮಾಮಾಹ ಭಗವಾನಸ್ಯಂ ಸ್ವಂ ವಿವೃತಂ ಕುರು।
12306007c ವಿವೃತಂ ಚ ತತೋ ಮೇಽಸ್ಯಂ ಪ್ರವಿಷ್ಟಾ ಚ ಸರಸ್ವತೀ।।
ಆಗ ಭಗವಂತನು ನನಗೆ ಬಾಯಿಯನ್ನು ಕಳೆಯಲು ಹೇಳಿದನು. ನಾನು ಬಾಯಿಕಳೆಯಲು ಸರಸ್ವತಿಯು ಅದನ್ನು ಪ್ರವೇಶಿಸಿದಳು.
12306008a ತತೋ ವಿದಹ್ಯಮಾನೋಽಹಂ ಪ್ರವಿಷ್ಟೋಽಂಭಸ್ತದಾನಘ।
12306008c ಅವಿಜ್ಞಾನಾದಮರ್ಷಾಚ್ಚ ಭಾಸ್ಕರಸ್ಯ ಮಹಾತ್ಮನಃ।।
ಅನಘ! ಆಗ ದಹಿಸುತ್ತಿದ್ದ ನಾನು, ಭಾಸ್ಕರನ ಮಹಾತ್ಮೆಯನ್ನು ತಿಳಿಯದಿದ್ದ ಮತ್ತು ಅಸಹನಶೀಲನಾಗಿದ್ದ ನಾನು, ನೀರನ್ನು ಪ್ರವೇಶಿಸಿದೆನು.
12306009a ತತೋ ವಿದಹ್ಯಮಾನಂ ಮಾಮುವಾಚ ಭಗವಾನ್ರವಿಃ।
12306009c ಮುಹೂರ್ತಂ ಸಹ್ಯತಾಂ ದಾಹಸ್ತತಃ ಶೀತೀಭವಿಷ್ಯಸಿ।।
ಸುಡುತ್ತಿರುವ ನನಗೆ ಭಗವಾನ್ ರವಿಯು ಹೇಳಿದನು: “ಮುಹೂರ್ತಕಾಲ ಈ ದಾಹವನ್ನು ಸಹಿಸಿಕೋ. ನಂತರ ಶೀತಲನಾಗುತ್ತೀಯೆ.”
12306010a ಶೀತೀಭೂತಂ ಚ ಮಾಂ ದೃಷ್ಟ್ವಾ ಭಗವಾನಾಹ ಭಾಸ್ಕರಃ।
12306010c ಪ್ರತಿಷ್ಠಾಸ್ಯತಿ ತೇ ವೇದಃ ಸೋತ್ತರಃ ಸಖಿಲೋ ದ್ವಿಜ।।
ನಾನು ತಣ್ಣಗಾದುದನ್ನು ನೋಡಿ ಭಗವಾನ್ ಭಾಸ್ಕರನು ಹೇಳಿದನು: “ದ್ವಿಜ! ಖಿಲಗಳಿಂದಲೂ ಉಪನಿಷತ್ತುಗಳಿಂದಲೂ ಸಹಿತವಾದ ಸಂಪೂರ್ಣ ವೇದವು ನಿನ್ನಲ್ಲಿ ಪ್ರತಿಷ್ಠಿತವಾಗುತ್ತದೆ.
12306011a ಕೃತ್ಸ್ನಂ ಶತಪಥಂ ಚೈವ ಪ್ರಣೇಷ್ಯಸಿ ದ್ವಿಜರ್ಷಭ।
12306011c ತಸ್ಯಾಂತೇ ಚಾಪುನರ್ಭಾವೇ ಬುದ್ಧಿಸ್ತವ ಭವಿಷ್ಯತಿ।।
ದ್ವಿಜರ್ಷಭ! ನೀನು ಸಂಪೂರ್ಣವಾದ ಶತಪಥ ಬ್ರಾಹ್ಮಣವನ್ನು ರಚಿಸಿದ ನಂತರ ನಿನ್ನ ಬುದ್ಧಿಯು ಮೋಕ್ಷಮಾರ್ಗದಲ್ಲಿಯೇ ಸ್ಥಿರವಾಗುವುದು.
12306012a ಪ್ರಾಪ್ಸ್ಯಸೇ ಚ ಯದಿಷ್ಟಂ ತತ್ಸಾಂಖ್ಯಯೋಗೇಪ್ಸಿತಂ ಪದಮ್।
12306012c ಏತಾವದುಕ್ತ್ವಾ ಭಗವಾನಸ್ತಮೇವಾಭ್ಯವರ್ತತ।।
ಸಾಂಖ್ಯಯೋಗಿಗಳಿಗೆ ಇಷ್ಟವಾಗಿರುವ ಪರಮ ಪದವನ್ನು ನೀನೂ ಪಡೆದುಕೊಳ್ಳುತ್ತೀಯೆ.” ಹೀಗೆ ಹೇಳಿ ಭಗವಾನನು ಅಲ್ಲಿಯೇ ಅಂತರ್ಧಾನನಾದನು.
12306013a ತತೋಽನುವ್ಯಾಹೃತಂ ಶ್ರುತ್ವಾ ಗತೇ ದೇವೇ ವಿಭಾವಸೌ।
12306013c ಗೃಹಮಾಗತ್ಯ ಸಂಹೃಷ್ಟೋಽಚಿಂತಯಂ ವೈ ಸರಸ್ವತೀಮ್।।
ಹಾಗೆ ದೇವ ವಿಭಾವಸುವು ಅಂತರ್ಹೃತನಾಗಲು ಅವನು ಹೇಳಿದುದನ್ನು ಕೇಳಿ ಸಂಹೃಷ್ಟನಾಗಿ ಮನೆಗೆ ಬಂದು ಸರಸ್ವತಿಯ ಕುರಿತೇ ಚಿಂತಿಸಿದೆನು.
12306014a ತತಃ ಪ್ರವೃತ್ತಾತಿಶುಭಾ ಸ್ವರವ್ಯಂಜನಭೂಷಿತಾ।
12306014c ಓಂಕಾರಮಾದಿತಃ ಕೃತ್ವಾ ಮಮ ದೇವೀ ಸರಸ್ವತೀ।।
ಆಗ ಅತಿಶುಭ ಸ್ವರವ್ಯಂಜನ ವಿಭೂಷಿತ ಓಂಕಾರವನ್ನು ಉಚ್ಚರಿಸುತ್ತಾ ದೇವೀ ಸರಸ್ವತಿಯು ನನ್ನ ಮುಂದೆ ನಿಂತಳು.
12306015a ತತೋಽಹಮರ್ಘ್ಯಂ ವಿಧಿವತ್ಸರಸ್ವತ್ಯೈ ನ್ಯವೇದಯಮ್।
12306015c ತಪತಾಂ ಚ ವರಿಷ್ಠಾಯ ನಿಷಣ್ಣಸ್ತತ್ಪರಾಯಣಃ।।
ಆಗ ನಾನು ವಿಧಿವತ್ತಾಗಿ ಸರಸ್ವತಿಗೂ ತಪನರಲ್ಲಿ ಶ್ರೇಷ್ಠ ಸೂರ್ಯನಿಗೂ ಅರ್ಘ್ಯಗಳನ್ನಿತ್ತು ಅವರನ್ನೇ ಧ್ಯಾನಿಸುತ್ತಾ ಕುಳಿತೆನು.
12306016a ತತಃ ಶತಪಥಂ ಕೃತ್ಸ್ನಂ ಸರಹಸ್ಯಂ ಸಸಂಗ್ರಹಮ್।
12306016c ಚಕ್ರೇ ಸಪರಿಶೇಷಂ ಚ ಹರ್ಷೇಣ ಪರಮೇಣ ಹ।।
ಆಗ ನಾನು ಪರಮ ಹರ್ಷದಿಂದ ರಹಸ್ಯ-ಸಂಗ್ರಹ-ಪರಿಶಿಷ್ಟಗಳಿಂದ ಕೂಡಿದ ಸಂಪೂರ್ಣ ಶತಪಥ ಬ್ರಾಹ್ಮಣವನ್ನು ರಚಿಸಿದೆ.
12306017a ಕೃತ್ವಾ ಚಾಧ್ಯಯನಂ ತೇಷಾಂ ಶಿಷ್ಯಾಣಾಂ ಶತಮುತ್ತಮಮ್।
12306017c ವಿಪ್ರಿಯಾರ್ಥಂ ಸಶಿಷ್ಯಸ್ಯ ಮಾತುಲಸ್ಯ ಮಹಾತ್ಮನಃ।।
12306018a ತತಃ ಸಶಿಷ್ಯೇಣ ಮಯಾ ಸೂರ್ಯೇಣೇವ ಗಭಸ್ತಿಭಿಃ।
12306018c ವ್ಯಾಪ್ತೋ ಯಜ್ಞೋ ಮಹಾರಾಜ ಪಿತುಸ್ತವ ಮಹಾತ್ಮನಃ।।
ಅನಂತರ ನಾನು ನೂರು ಉತ್ತಮ ಶಿಷ್ಯರಿಗೆ ಅದನ್ನು ಅಧ್ಯಯನ ಮಾಡಿಸಿದೆ. ಮಹಾರಾಜ! ಬಳಿಕ ನಾನು ಶಿಷ್ಯಸಹಿತನಾಗಿದ್ದ ಮಹಾತ್ಮ ನನ್ನ ಸೋದರಮಾವ ವೈಶಂಪಾಯನನಿಗೆ ಪ್ರತೀಕಾರ ಮಾಡುವ ಸಲುವಾಗಿ ಕಿರಣಗಳಿಂದ ಕೂಡಿದ ಸೂರ್ಯನಂತೆ ಶಿಷ್ಯರಿಂದೊಡಗೂಡಿ ನಾನು ನಿನ್ನ ಮಹಾತ್ಮ ತಂದೆಯನ್ನು ಯಜ್ಞದಲ್ಲಿ ತೊಡಗಿಸಿದೆನು.
12306019a ಮಿಷತೋ ದೇವಲಸ್ಯಾಪಿ ತತೋಽರ್ಧಂ ಹೃತವಾನಹಮ್।
12306019c ಸ್ವವೇದದಕ್ಷಿಣಾಯಾಥ ವಿಮರ್ದೇ ಮಾತುಲೇನ ಹ।।
ಆಗ ಮಾವನ ಆಗ್ರಹದ ಮೇರೆಗೆ ದೇವಲನು ನೋಡುತ್ತಿದ್ದಂತೆಯೇ ವೇದ ದಕ್ಷಿಣೆಯ ಅರ್ಧವನ್ನು ಅವನಿಗೆ ಕೊಟ್ಟೆ ಮತ್ತು ಅರ್ಧವನ್ನು ನಾನೇ ತೆಗೆದುಕೊಂಡೆ.
12306020a ಸುಮಂತುನಾಥ ಪೈಲೇನ ತಥಾ ಜೈಮಿನಿನಾ ಚ ವೈ।
12306020c ಪಿತ್ರಾ ತೇ ಮುನಿಭಿಶ್ಚೈವ ತತೋಽಹಮನುಮಾನಿತಃ।।
ಅನಂತರ ಸುಮಂತು, ಪೈಲ, ಜೈಮಿನಿ, ನಿನ್ನ ತಂದೆ ಮತ್ತು ಅನ್ಯ ಮುನಿಗಳು ನನ್ನನ್ನು ಸತ್ಕರಿಸಿದರು.
12306021a ದಶ ಪಂಚ ಚ ಪ್ರಾಪ್ತಾನಿ ಯಜೂಂಷ್ಯರ್ಕಾನ್ಮಯಾನಘ।
12306021c ತಥೈವ ಲೋಮಹರ್ಷಾಚ್ಚ ಪುರಾಣಮವಧಾರಿತಮ್।।
ಅನಘ! ಹೀಗೆ ಅರ್ಕನಿಂದ ನಾನು ಶುಕ್ಲಯಜುರ್ವೇದದ ಹದಿನೈದು ಶಾಖೆಗಳನ್ನು ಪಡೆದುಕೊಂಡೆನು. ಹಾಗೆಯೇ ಲೋಮಹರ್ಷಣನಿಂದ ಪುರಾಣಗಳನ್ನು ಕಲಿತುಕೊಂಡೆನು.
12306022a ಬೀಜಮೇತತ್ಪುರಸ್ಕೃತ್ಯ ದೇವೀಂ ಚೈವ ಸರಸ್ವತೀಮ್।
12306022c ಸೂರ್ಯಸ್ಯ ಚಾನುಭಾವೇನ ಪ್ರವೃತ್ತೋಽಹಂ ನರಾಧಿಪ।।
12306023a ಕರ್ತುಂ ಶತಪಥಂ ವೇದಮಪೂರ್ವಂ ಕಾರಿತಂ ಚ ಮೇ।
12306023c ಯಥಾಭಿಲಷಿತಂ ಮಾರ್ಗಂ ತಥಾ ತಚ್ಚೋಪಪಾದಿತಮ್।।
ನರಾಧಿಪ! ಅನಂತರ ನಾನು ಬೀಜರೂಪ ಪ್ರಣವ ಮತ್ತು ಸರಸ್ವತೀ ದೇವಿಯನ್ನು ಎದುರಿಟ್ಟುಕೊಂಡು ಭಗವಾನ್ ಸೂರ್ಯನ ಕೃಪೆಯಿಂದ ಶತಪಥದ ರಚನೆಯನ್ನು ಆರಂಭಿಸಿದೆ ಮತ್ತು ಈ ಅಪೂರ್ವ ಗ್ರಂಥವನ್ನು ಪೂರ್ಣಗೊಳಿಸಿದೆ. ಮತ್ತು ನನ್ನ ಅಭಿಲಾಷೆಯ ಮೋಕ್ಷಮಾರ್ಗವನ್ನೂ ಕಂಡುಕೊಂಡೆನು.
12306024a ಶಿಷ್ಯಾಣಾಮಖಿಲಂ ಕೃತ್ಸ್ನಮನುಜ್ಞಾತಂ ಸಸಂಗ್ರಹಮ್।
12306024c ಸರ್ವೇ ಚ ಶಿಷ್ಯಾಃ ಶುಚಯೋ ಗತಾಃ ಪರಮಹರ್ಷಿತಾಃ।।
ನಂತರ ನಾನು ಶಿಷ್ಯರಿಗೆ ಆ ಎಲ್ಲ ಗ್ರಂಥ ರಹಸ್ಯಗಳನ್ನೂ ಸಂಗ್ರಹಸಹಿತ ಕಲಿಸಿದೆನು ಮತ್ತು ಅವರ ಮನೆಗಳಿಗೆ ತೆರಳಲು ಅನುಮತಿಯನ್ನಿತ್ತೆನು. ಆಗ ಆ ಎಲ್ಲ ಶುಚಿ ಶಿಷ್ಯರೂ ಪರಮ ಹರ್ಷಿತರಾಗಿ ತಮ್ಮ ಮನೆಗಳಿಗೆ ತೆರಳಿದರು.
12306025a ಶಾಖಾಃ ಪಂಚದಶೇಮಾಸ್ತು ವಿದ್ಯಾ ಭಾಸ್ಕರದರ್ಶಿತಾಃ।
12306025c ಪ್ರತಿಷ್ಠಾಪ್ಯ ಯಥಾಕಾಮಂ ವೇದ್ಯಂ ತದನುಚಿಂತಯಮ್।।
ಭಾಸ್ಕರನು ತೋರಿಸಿಕೊಟ್ಟ ಈ ಶುಕ್ಲಯಜುರ್ವೇದದ ಹದಿನೈದು ಶಾಖೆಗಳ ಜ್ಞಾನವನ್ನು ಪಡೆದುಕೊಂಡು ನಾನು ಇಚ್ಛಾನುಸಾರ ವೇದ್ಯತತ್ತ್ವದ ಕುರಿತು ಚಿಂತಿಸಿದ್ದೇನೆ.
12306026a ಕಿಮತ್ರ ಬ್ರಹ್ಮಣ್ಯಮೃತಂ ಕಿಂ ಚ ವೇದ್ಯಮನುತ್ತಮಮ್।
12306026c ಚಿಂತಯೇ ತತ್ರ ಚಾಗತ್ಯ ಗಂಧರ್ವೋ ಮಾಮಪೃಚ್ಚತ।।
12306027a ವಿಶ್ವಾವಸುಸ್ತತೋ ರಾಜನ್ವೇದಾಂತಜ್ಞಾನಕೋವಿದಃ।
ರಾಜನ್! ಒಮ್ಮೆ ವೇದಾಂತಜ್ಞಾನ ಕುಶಲ ವಿಶ್ವಾವಸು ಎಂಬ ಹೆಸರಿನ ಗಂಧರ್ವನು ನನ್ನ ಬಳಿಬಂದು “ಬ್ರಾಹ್ಮಣ ಜಾತಿಗೆ ಹಿತಕರವಾದುದು ಯಾವುದು? ಸತ್ಯ ಮತ್ತು ತಿಳಿಯಲು ಸರ್ವೋತ್ತಮವಾದ ವಸ್ತು ಯಾವುದು?” ಎಂದು ಕೇಳತೊಡಗಿದನು.
12306027c ಚತುರ್ವಿಂಶತಿಕಾನ್ ಪ್ರಶ್ನಾನ್ ಪೃಷ್ಟ್ವಾ ವೇದಸ್ಯ ಪಾರ್ಥಿವ।।
12306027e ಪಂಚವಿಂಶತಿಮಂ ಪ್ರಶ್ನಂ ಪಪ್ರಚ್ಚಾನ್ವೀಕ್ಷಿಕೀಂ ತಥಾ।
12306028a ವಿಶ್ವಾವಿಶ್ವಂ ತಥಾಶ್ವಾಶ್ವಂ ಮಿತ್ರಂ ವರುಣಮೇವ ಚ।।
ಪಾರ್ಥಿವ! ಅನಂತರ ಅವನು ವೇದದ ಕುರಿತಾದ ಇಪ್ಪತ್ನಾಲ್ಕು ಪ್ರಶ್ನೆಗಳನ್ನು ಕೇಳಿದನು. ಅನಂತರ ಆನ್ವೀಕ್ಷಿಕೀ ವಿದ್ಯೆಯ ಕುರಿತಾದ ಇಪ್ಪತ್ತೈದನೆಯ ಪ್ರಶ್ನೆಯನ್ನು ಮುಂದಿಟ್ಟನು. ಆ ಇಪ್ಪತ್ನಾಲ್ಕು ಪ್ರಶ್ನೆಗಳು ಈ ರೀತಿ ಇದ್ದವು: (೧) ವಿಶ್ವವು ಏನು? (೨) ಅವಿಶ್ವವು ಏನು? (೩) ಅಶ್ವಾವು ಏನು? (೪) ಅಶ್ವವು ಏನು? (೫) ಮಿತ್ರವು ಏನು? (೬) ವರುಣವು ಏನು?
12306028c ಜ್ಞಾನಂ ಜ್ಞೇಯಂ ತಥಾಜ್ಞೋ ಜ್ಞಃ ಕಸ್ತಪಾ ಅತಪಾಸ್ತಥಾ।
12306028E ಸೂರ್ಯಾದಃ ಸೂರ್ಯ ಇತಿ ಚ ವಿದ್ಯಾವಿದ್ಯೇ ತಥೈವ ಚ।।
(೭) ಜ್ಞಾನವು ಏನು? (೮) ಜ್ಯೇಯವಾದದ್ದು ಯಾವುದು? (೯) ಜ್ಞಾತನು ಯಾರು? (೧೦) ಅಜ್ಞವು ಯಾವುದು? (೧೧) ಕ ಯಾರು? (೧೨) ತಪಸ್ವಿಯು ಯಾರು? (೧೩) ಅತಪಸ್ವಿಯು ಯಾರು? (೧೪) ಸೂರ್ಯನು ಯಾರು? (೧೫) ಅತಿಸೂರ್ಯನು ಯಾರು? (೧೬) ವಿದ್ಯೆಯು ಯಾವುದು? (೧೭) ಅವಿದ್ಯೆಯು ಯಾವುದು?
12306029a ವೇದ್ಯಾವೇದ್ಯಂ ತಥಾ ರಾಜನ್ನಚಲಂ ಚಲಮೇವ ಚ।
12306029c ಅಪೂರ್ವಮಕ್ಷಯಂ ಕ್ಷಯ್ಯಮೇತತ್ ಪ್ರಶ್ನಮನುತ್ತಮಮ್।।
(೧೮) ವೇದ್ಯವು ಯಾವುದು? (೧೯) ಅವೇದ್ಯವು ಯಾವುದು? (೨೦) ಚಲ ಎಂದರೆ ಯಾವುದು? (೨೧) ಅಚಲ ಎಂದರೆ ಯಾವುದು? (೨೨) ಅಪೂರ್ವವು ಯಾವುದು? (೨೩) ಅಕ್ಷಯವು ಯಾವುದು? (೨೪) ವಿನಾಶಶೀಲವು ಯಾವುದು? ರಾಜನ್! ಇವೇ ಅವನ ಪರಮ ಉತ್ತಮ ಪ್ರಶ್ನೆಗಳಾಗಿದ್ದವು.
12306030a ಅಥೋಕ್ತಶ್ಚ ಮಯಾ ರಾಜನ್ರಾಜಾ ಗಂಧರ್ವಸತ್ತಮಃ।
12306030c ಪೃಷ್ಟವಾನನುಪೂರ್ವೇಣ ಪ್ರಶ್ನಮುತ್ತಮಮರ್ಥವತ್।।
12306031a ಮುಹೂರ್ತಂ ಮೃಷ್ಯತಾಂ ತಾವದ್ಯಾವದೇನಂ ವಿಚಿಂತಯೇ।
12306031c ಬಾಢಮಿತ್ಯೇವ ಕೃತ್ವಾ ಸ ತೂಷ್ಣೀಂ ಗಂಧರ್ವ ಆಸ್ಥಿತಃ।।
ರಾಜನ್! ಅದಕ್ಕೆ ನಾನು ರಾಜಾ ಗಂಧರ್ವಸತ್ತಮನಿಗೆ ಹೇಳಿದೆನು: “ನೀನು ಕ್ರಮಶಃ ಅತಿ ಉತ್ತಮ ಪ್ರಶ್ನೆಗಳನ್ನೇ ಇಟ್ಟಿದ್ದೀಯೆ. ನೀನು ಅರ್ಥವನ್ನು ತಿಳಿದುಕೊಂಡಿರುವೆ. ಸ್ವಲ್ಪ ಹೊತ್ತು ನಿಲ್ಲು. ಅಷ್ಟರಲ್ಲಿ ನಾನು ನಿನ್ನ ಈ ಪ್ರಶ್ನೆಗಳ ಕುರಿತು ವಿಚಾರಿಸುತ್ತೇನೆ.” ಆಗ ಹಾಗೆಯೇ ಆಗಲೆಂದು ಗಂಧರ್ವರಾಜನು ಸುಮ್ಮನೇ ಕುಳಿತುಕೊಂಡನು.
12306032a ತತೋಽನ್ವಚಿಂತಯಮಹಂ ಭೂಯೋ ದೇವೀಂ ಸರಸ್ವತೀಮ್।
12306032c ಮನಸಾ ಸ ಚ ಮೇ ಪ್ರಶ್ನೋ ದಧ್ನೋ ಘೃತಮಿವೋದ್ಧೃತಮ್।।
ಆಗ ನಾನು ಪುನಃ ದೇವೀ ಸರಸ್ವತಿಯನ್ನು ಸ್ಮರಿಸಿದೆನು. ಮೊಸರಿನಿಂದ ತುಪ್ಪವು ಮೇಲೇಳುವಂತೆ ನನ್ನ ಮನಸ್ಸಿನಲ್ಲಿ ಆ ಪ್ರಶ್ನೆಗಳಿಗೆ ಉತ್ತರಗಳು ಕಾಣಿಸಿಕೊಂಡವು.
12306033a ತತ್ರೋಪನಿಷದಂ ಚೈವ ಪರಿಶೇಷಂ ಚ ಪಾರ್ಥಿವ।
12306033c ಮಥ್ನಾಮಿ ಮನಸಾ ತಾತ ದೃಷ್ಟ್ವಾ ಚಾನ್ವೀಕ್ಷಿಕೀಂ ಪರಾಮ್।।
ಅಯ್ಯಾ! ಪಾರ್ಥಿವ! ಅಲ್ಲಿ ನಾನು ಉಪನಿಷತ್, ಅದರ ಪರಿಶಿಷ್ಟ ಭಾಗ, ಮತ್ತು ಪರಮ ಅನ್ವೀಕ್ಷಿಕೀ ವಿದ್ಯೆಗಳನ್ನು ಕಂಡು ಮನಸ್ಸಿನಲ್ಲಿಯೇ ಅವುಗಳ ಮಂಥನ ಮಾಡಿದೆನು.
12306034a ಚತುರ್ಥೀ ರಾಜಶಾರ್ದೂಲ ವಿದ್ಯೈಷಾ ಸಾಂಪರಾಯಿಕೀ।
12306034c ಉದೀರಿತಾ ಮಯಾ ತುಭ್ಯಂ ಪಂಚವಿಂಶೇಽಧಿ ಧಿಷ್ಠಿತಾ।।
ರಾಜಶಾರ್ದೂಲ! ಈ ಅನ್ವೀಕ್ಷಿಕೀ ವಿದ್ಯೆಯನ್ನು ನಾಲ್ಕನೆಯ1 ವಿದ್ಯೆ ಎಂದು ಹೇಳುತ್ತಾರೆ. ಇದು ಮೋಕ್ಷ ಸಹಾಯಕವಾಗಿದೆ. ಇಪ್ಪತ್ತೈದನೇ ತತ್ತ್ವರೂಪ ಪುರುಷನಿಂದ ಅಧಿಷ್ಠಿತ ಆ ವಿದ್ಯೆಯನ್ನು ನಿನಗೆ ಈ ಮೊದಲೇ ಹೇಳಿದ್ದೇನೆ.
12306035a ಅಥೋಕ್ತಸ್ತು ಮಯಾ ರಾಜನ್ರಾಜಾ ವಿಶ್ವಾವಸುಸ್ತದಾ।
12306035c ಶ್ರೂಯತಾಂ ಯದ್ಭವಾನಸ್ಮಾನ್ ಪ್ರಶ್ನಂ ಸಂಪೃಷ್ಟವಾನಿಹ।।
ರಾಜನ್! ಆಗ ನಾನು ರಾಜಾ ವಿಶ್ವಾವಸುವಿಗೆ ಹೇಳಿದೆನು: “ನೀನು ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಕೇಳು.
12306036a ವಿಶ್ವಾವಿಶ್ವೇತಿ ಯದಿದಂ ಗಂಧರ್ವೇಂದ್ರಾನುಪೃಚ್ಚಸಿ।
12306036c ವಿಶ್ವಾವ್ಯಕ್ತಂ ಪರಂ ವಿದ್ಯಾದ್ಭೂತಭವ್ಯಭಯಂಕರಮ್।।
ಗಂಧರ್ವೇಂದ್ರ! ವಿಶ್ವ-ಅವಿಶ್ವ ಎಂದು ನೀನೇನು ಪ್ರಶ್ನಿಸಿದೆಯೋ ಅವುಗಳಲ್ಲಿ ವಿಶ್ವಾ ಎನ್ನುವುದು ಅವ್ಯಕ್ತ ಪ್ರಕೃತಿಯ ಹೆಸರು. ಸಂಸಾರಬಂಧನದಲ್ಲಿ ತೊಡಗಿಸುವ ಕಾರಣದಿಂದ ಅದು ಭೂತ, ಭವಿಷ್ಯ ಮತ್ತು ವರ್ತಮಾನ – ಈ ಮೂರೂ ಕಾಲಗಳಲ್ಲಿಯೂ ಭಯಂಕರವಾಗಿರುತ್ತದೆ. ಇದನ್ನು ಚೆನ್ನಾಗಿ ತಿಳಿದುಕೋ.
12306037a ತ್ರಿಗುಣಂ ಗುಣಕರ್ತೃತ್ವಾದವಿಶ್ವೋ ನಿಷ್ಕಲಸ್ತಥಾ।
12306037c ಅಶ್ವಸ್ತಥೈವ ಮಿಥುನಮೇವಮೇವಾನುದೃಶ್ಯತೇ।।
ವಿಶ್ವಾ ಅಥವಾ ಅವ್ಯಕ್ತ ಪ್ರಕೃತಿಯು ತ್ರಿಗುಣಮಯಿಯು. ಏಕೆಂದರೆ ಅದು ತ್ರಿಗುಣಾತ್ಮಕ ಜಗತ್ತಿನ ಉತ್ಪತ್ತಿಕಾರಕವು. ಅದಕ್ಕಿಂತಲೂ ಭಿನ್ನವಾದ ನಿಷ್ಕಲ ಅಂದರೆ ಕಲೆಗಳಿಲ್ಲದ ಆತ್ಮವನ್ನೇ ಅವಿಶ್ವ ಎಂದು ಹೇಳುತ್ತಾರೆ. ಅಶ್ವ ಮತ್ತು ಅಶ್ವಾಗಳ ಜೋಡಿಯನ್ನೂ ಹೀಗೆಯೇ ವರ್ಣಿಸಿದ್ದಾರೆ. ಅರ್ಥಾತ್ ಅಶ್ವಾ ಅವ್ಯಕ್ತ ಪ್ರಕೃತಿ ಮತ್ತು ಅಶ್ವ ಪುರುಷ.
12306038a ಅವ್ಯಕ್ತಂ ಪ್ರಕೃತಿಂ ಪ್ರಾಹುಃ ಪುರುಷೇತಿ ಚ ನಿರ್ಗುಣಮ್।
12306038c ತಥೈವ ಮಿತ್ರಂ ಪುರುಷಂ ವರುಣಂ ಪ್ರಕೃತಿಂ ತಥಾ।।
ಅವ್ಯಕ್ತ ಪ್ರಕೃತಿಯನ್ನು ಸಗುಣವೆಂದೂ ಪುರುಷನನ್ನು ನಿರ್ಗುಣನೆಂದೂ ಹೇಳಿದ್ದಾರೆ. ಇದೇ ರೀತಿ ವರುಣನನ್ನು ಪ್ರಕೃತಿಯೆಂದೂ ಮಿತ್ರನನ್ನು ಪುರುಷನೆಂದೂ ಅರ್ಥಮಾಡಿಕೊಳ್ಳಬೇಕು.
12306039a ಜ್ಞಾನಂ ತು ಪ್ರಕೃತಿಂ ಪ್ರಾಹುರ್ಜ್ಞೇಯಂ ನಿಷ್ಕಲಮೇವ ಚ।
12306039c ಅಜ್ಞಶ್ಚ ಜ್ಞಶ್ಚ ಪುರುಷಸ್ತಸ್ಮಾನ್ನಿಷ್ಕಲ ಉಚ್ಯತೇ।।
ಜ್ಞಾನವು ಪ್ರಕೃತಿ ಮತ್ತು ಜ್ಞೇಯವು ನಿಷ್ಕಲ ಪುರುಷ ಆತ್ಮ ಎಂದು ಹೇಳುತ್ತಾರೆ. ಹೀಗೆಯೇ ಅಜ್ಞವು ಪ್ರಕೃತಿ ಮತ್ತು ನಿಷ್ಕಲ ಪುರುಷನು ಜ್ಞಾತಾ ಎಂದು ಹೇಳಿದ್ದಾರೆ.
12306040a ಕಸ್ತಪಾ ಅತಪಾಃ ಪ್ರೋಕ್ತಃ ಕೋಽಸೌ ಪುರುಷ ಉಚ್ಯತೇ।
12306040c ತಪಾಃ ಪ್ರಕೃತಿರಿತ್ಯಾಹುರತಪಾ ನಿಷ್ಕಲಃ ಸ್ಮೃತಃ।।
ಕ, ತಪಾ ಮತ್ತು ಅತಪಾ ಇವುಗಳ ಕುರಿತು ಕೇಳಿದ್ದೀಯೆ. ಪುರುಷನೇ ಕ ಎಂದು ಹೇಳಿದ್ದಾರೆ. ಪ್ರಕೃತಿಯು ತಪಾ ಮತ್ತು ನಿಷ್ಕಲ ಪುರುಷನು ಅತಪಾ ಎಂದು ಹೇಳಿದ್ದಾರೆ.
212306041a ತಥೈವಾವೇದ್ಯಮವ್ಯಕ್ತಂ ವೇದ್ಯಃ ಪುರುಷ ಉಚ್ಯತೇ।
12306041c ಚಲಾಚಲಮಿತಿ ಪ್ರೋಕ್ತಂ ತ್ವಯಾ ತದಪಿ ಮೇ ಶೃಣು।।
ಹೀಗೆಯೇ ಅವ್ಯಕ್ತ ಪ್ರಕೃತಿಯನ್ನು ಅವೇದ್ಯ ಎಂದೂ ಪುರುಷನನ್ನು ವೇದ್ಯ ಎಂದೂ ಹೇಳಿದ್ದಾರೆ. ಚಲ ಮತ್ತು ಅಚಲ ಇವುಗಳ ಕುರಿತು ನೀನು ಕೇಳಿದ್ದೀಯೆ. ಅವುಗಳ ಕುರಿತೂ ಕೇಳು.
12306042a ಚಲಾಂ ತು ಪ್ರಕೃತಿಂ ಪ್ರಾಹುಃ ಕಾರಣಂ ಕ್ಷೇಪಸರ್ಗಯೋಃ।
12306042c ಅಕ್ಷೇಪಸರ್ಗಯೋಃಕರ್ತಾ ನಿಶ್ಚಲಃ ಪುರುಷಃ ಸ್ಮೃತಃ।।
ಸೃಷ್ಟಿ ಮತ್ತು ಸಂಹಾರಗಳ ಕಾರಣೀಭೂತ ಪ್ರಕೃತಿಯನ್ನು ಚಲಾ ಎನ್ನುತ್ತಾರೆ ಮತ್ತು ಸೃಷ್ಟಿ-ಪ್ರಲಯಗಳ ಕರ್ತಾ ಪುರುಷನೇ ನಿಶ್ಚಲ ಪುರುಷನೆಂದು ಹೇಳಿದ್ದಾರೆ.
312306043a ಅಜಾವುಭಾವಪ್ರಜೌ4 ಚ ಅಕ್ಷಯೌ ಚಾಪ್ಯುಭಾವಪಿ।
12306043c ಅಜೌ ನಿತ್ಯಾವುಭೌ ಪ್ರಾಹುರಧ್ಯಾತ್ಮಗತಿನಿಶ್ಚಯಾಃ।।
ಆಧ್ಯಾತ್ಮಗತಿನಿಶ್ಚಯಿಗಳು ಪ್ರಕೃತಿ ಮತ್ತು ಪುರುಷ ಎರಡೂ ಅಜ್ಞಗಳು. ಎರಡೂ ನಿಶ್ಚಲವಾದವುಗಳು ಮತ್ತು ಎರಡೂ ಅಕ್ಷಯ, ಅಜನ್ಮ ಮತ್ತು ನಿತ್ಯವಾದವುಗಳು ಎಂದು ಹೇಳುತ್ತಾರೆ.
12306044a ಅಕ್ಷಯತ್ವಾತ್ ಪ್ರಜನನೇ ಅಜಮತ್ರಾಹುರವ್ಯಯಮ್।
12306044c ಅಕ್ಷಯಂ ಪುರುಷಂ ಪ್ರಾಹುಃ ಕ್ಷಯೋ ಹ್ಯಸ್ಯ ನ ವಿದ್ಯತೇ।।
ಜನ್ಮವನ್ನು ಸ್ವೀಕರಿಸಿದರೂ ಕ್ಷಯರಹಿತನಾಗಿರುವುದರಿಂದ ಪುರುಷನು ಅಜನ್ಮ, ಅವಿನಾಶೀ ಮತ್ತು ಅಕ್ಷಯನೆಂದು ಹೇಳಿದ್ದಾರೆ. ಏಕೆಂದರೆ ಎಂದೂ ಅದರ ಕ್ಷಯವಾಗುವುದಿಲ್ಲ.
12306045a ಗುಣಕ್ಷಯತ್ವಾತ್ ಪ್ರಕೃತಿಃ ಕರ್ತೃತ್ವಾದಕ್ಷಯಂ ಬುಧಾಃ।
12306045c ಏಷಾ ತೇಽಽನ್ವೀಕ್ಷಿಕೀ ವಿದ್ಯಾ ಚತುರ್ಥೀ ಸಾಂಪರಾಯಿಕೀ।।
ಗುಣಗಳ ಕ್ಷಯವಾಗುವ ಕಾರಣದಿಂದ ಪ್ರಕೃತಿಯು ಕ್ಷಯಶೀಲ ಎಂದೂ ಮತ್ತು ಅದರ ಪ್ರೇರಕವಾಗಿರುವುದರಿಂದ ಪುರುಷನು ಅಕ್ಷಯನೆಂದೂ ವಿದ್ವಾನರು ಹೇಳಿದ್ದಾರೆ. ಈಗ ನಿನಗೆ ಹೇಳಿದುದೇ ಮೋಕ್ಷಕ್ಕೆ ಸಹಾಯಕವಾಗುವ ನಾಲ್ಕನೆಯ ಅನ್ವೀಕ್ಷಿಕೀ ವಿದ್ಯೆ.
12306046a ವಿದ್ಯೋಪೇತಂ ಧನಂ ಕೃತ್ವಾ ಕರ್ಮಣಾ ನಿತ್ಯಕರ್ಮಣಿ।
12306046c ಏಕಾಂತದರ್ಶನಾ ವೇದಾಃ ಸರ್ವೇ ವಿಶ್ವಾವಸೋ ಸ್ಮೃತಾಃ।।
ವಿಶ್ವಾವಸೋ! ಈ ಅನ್ವೀಕ್ಷಿಕೀ ವಿದ್ಯೆಯೊಡನೆ ವೇದವಿದ್ಯಾರೂಪೀ ಧನವನ್ನು ಗಳಿಸಿ ನಿತ್ಯಕರ್ಮದಲ್ಲಿ ತೊಡಗಿಕೊಂಡಿರಬೇಕು. ಎಲ್ಲ ವೇದಗಳೂ ಏಕಾಂತದರ್ಶನಗಳೆಂದು ಹೇಳಿದ್ದಾರೆ.
12306047a ಜಾಯಂತೇ ಚ ಮ್ರಿಯಂತೇ ಚ ಯಸ್ಮಿನ್ನೇತೇ ಯತಶ್ಚ್ಯುತಾಃ।
12306047c ವೇದಾರ್ಥಂ ಯೇ ನ ಜಾನಂತಿ ವೇದ್ಯಂ ಗಂಧರ್ವಸತ್ತಮ।।
ಗಂಧರ್ವಸತ್ತಮ! ಎಲ್ಲವೂ ಯಾವುದರಿಂದ ಉತ್ಪನ್ನವಾಗಿದೆಯೋ, ಯಾವುದರಲ್ಲಿ ಸ್ಥಿತವಾಗಿದೆಯೋ ಮತ್ತು ಯಾವುದರಲ್ಲಿ ಲೀನವಾಗುವುದೋ ಆ ವೇದಾರ್ಥ ವೇದ್ಯ ಪರಮಾತ್ಮನನ್ನು ಅರಿಯದೇ ಇರುವವರು ಅದರಿಂದ ಚ್ಯುತರಾಗಿ ಪುನಃ ಪುನಃ ಹುಟ್ಟುತ್ತಾರೆ ಮತ್ತು ಸಾಯುತ್ತಾರೆ.
12306048a ಸಾಂಗೋಪಾಂಗಾನಪಿ ಯದಿ ಪಂಚ5 ವೇದಾನಧೀಯತೇ।
12306048c ವೇದವೇದ್ಯಂ ನ ಜಾನೀತೇ ವೇದಭಾರವಹೋ ಹಿ ಸಃ।।
ಸಾಂಗೋಪಾಂಗವಾದ ಪಂಚ ವೇದಗಳನ್ನು ಪಡೆದುಕೊಂಡೂ ವೇದವೇದ್ಯನಾದ ಪರಮಾತ್ಮನನ್ನು ಅರಿತುಕೊಳ್ಳದವರು ಕೇವಲ ವೇದಗಳ ಭಾರವನ್ನು ಹೊರುತ್ತಾರೆ.
12306049a ಯೋ ಘೃತಾರ್ಥೀ ಖರೀಕ್ಷೀರಂ ಮಥೇದ್ಗಂಧರ್ವಸತ್ತಮ।
12306049c ವಿಷ್ಠಾಂ ತತ್ರಾನುಪಶ್ಯೇತ ನ ಮಂಡಂ ನಾಪಿ ವಾ ಘೃತಮ್।।
ಗಂಧರ್ವಸತ್ತಮ! ತುಪ್ಪವನ್ನು ಬಯಸಿದವನು ಒಡೆದ ಹಾಲನ್ನು ಕಡೆದರೆ ಅವನಿಗೆ ಅದರಲ್ಲಿ ಮಲವು ದೊರಕುವುದೇ ಹೊರತು ಬೆಣ್ಣೆಯಾಗಲೀ ತುಪ್ಪವಾಗಲೀ ದೊರಕುವುದಿಲ್ಲ.
12306050a ತಥಾ ವೇದ್ಯಮವೇದ್ಯಂ ಚ ವೇದವಿದ್ಯೋ ನ ವಿಂದತಿ।
12306050c ಸ ಕೇವಲಂ ಮೂಢಮತಿರ್ಜ್ಞಾನಭಾರವಹಃ ಸ್ಮೃತಃ।।
ಹಾಗೆಯೇ ವೇದಾಧ್ಯಯನ ಮಾಡಿದ್ದರೂ ವೇದ್ಯ ಮತ್ತು ಅವೇದ್ಯಗಳ ತತ್ತ್ವವನ್ನು ಅರಿಯದ ಮೂಢ ಬುದ್ಧಿ ಮಾನವನು ಕೇವಲ ಜ್ಞಾನದ ಹೊರೆಯನ್ನು ಹೊರವವನೆಂದು ಹೇಳುತ್ತಾರೆ.
12306051a ದ್ರಷ್ಟವ್ಯೌ ನಿತ್ಯಮೇವೈತೌ ತತ್ಪರೇಣಾಂತರಾತ್ಮನಾ।
12306051c ಯಥಾಸ್ಯ ಜನ್ಮನಿಧನೇ ನ ಭವೇತಾಂ ಪುನಃ ಪುನಃ।।
ನಿತ್ಯವೂ ಅಂತರಾತ್ಮನ ಮೂಲಕ ಪ್ರಕೃತಿ ಮತ್ತು ಪುರುಷರ ಜ್ಞಾನವನ್ನು ಪಡೆದುಕೊಳ್ಳಬೇಕು. ಅದರಿಂದ ಅವನು ಪುನಃ ಪುನಃ ಜನ್ಮ-ನಿಧನಗಳ ಚಕ್ರದಲ್ಲಿ ಸಿಲುಕುವುದಿಲ್ಲ.
12306052a ಅಜಸ್ರಂ ಜನ್ಮನಿಧನಂ ಚಿಂತಯಿತ್ವಾ ತ್ರಯೀಮಿಮಾಮ್।
12306052c ಪರಿತ್ಯಜ್ಯ ಕ್ಷಯಮಿಹ ಅಕ್ಷಯಂ ಧರ್ಮಮಾಸ್ಥಿತಃ।।
ಸಂಸಾರದಲ್ಲಿ ಜನ್ಮ-ನಿಧನಗಳು ನಿರಂತರವಾಗಿ ನಡೆಯುತ್ತವೆ ಎಂದು ಯೋಚಿಸಿ ವೈದಿಕ ಕರ್ಮಕಾಂಡಗಳಲ್ಲಿ ಹೇಳಿರುವ ಎಲ್ಲ ಕರ್ಮಗಳೂ ಮತ್ತು ಅವುಗಳ ಫಲಗಳೂ ವಿನಾಶಶೀಲ ಎಂದು ತಿಳಿದು ಅವುಗಳನ್ನು ಪರಿತ್ಯಜಿಸಿ ಮನುಷ್ಯನು ಇಲ್ಲಿ ಅಕ್ಷಯ ಧರ್ಮವನ್ನು ಆಶ್ರಯಿಸಬೇಕು.
12306053a ಯದಾ ತು ಪಶ್ಯತೇಽತ್ಯಂತಮಹನ್ಯಹನಿ ಕಾಶ್ಯಪ।
12306053c ತದಾ ಸ ಕೇವಲೀಭೂತಃ ಷಡ್ವಿಂಶಮನುಪಶ್ಯತಿ।।
ಕಾಶ್ಯಪ! ಪ್ರತಿದಿನ ಪರಮಾತ್ಮನ ಸ್ವರೂಪದ ಕುರಿತು ಚಿಂತನೆಯನ್ನು ಮಾಡುವ ಸಾಧಕನಿಗೆ ಪ್ರಕೃತಿಯ ಸಂಸರ್ಗ ರಹಿತನಾದ ಇಪ್ಪತ್ತಾರನೇ ತತ್ತ್ವರೂಪ ಪರಮೇಶ್ವರನು ಪ್ರಾಪ್ತನಾಗುತ್ತಾನೆ.
12306054a ಅನ್ಯಶ್ಚ ಶಶ್ವದವ್ಯಕ್ತಸ್ತಥಾನ್ಯಃ6 ಪಂಚವಿಂಶಕಃ।
12306054c ತಸ್ಯ ದ್ವಾವನುಪಶ್ಯೇತ ತಮೇಕಮಿತಿ ಸಾಧವಃ।।
ಅನ್ಯರು ಆತ್ಮನ ಕುರಿತು ದ್ವೈತಭಾವವನ್ನು ತಾಳಿ “ಸನಾತನ ಅವ್ಯಕ್ತ ಪರಮಾತ್ಮನು ಬೇರೆ ಮತ್ತು ಇಪ್ಪತ್ತೈದನೇ ತತ್ತ್ವರೂಪ ಜೀವಾತ್ಮನು ಬೇರೆ ಎಂದು ಹೇಳುತ್ತಾರೆ. ಆದರೆ ಸಾಧುಗಳು ಇವೆರಡೂ ಒಂದೇ ಎಂದು ಹೇಳುತ್ತಾರೆ.
12306055a ತೇನೈತನ್ನಾಭಿಜಾನಂತಿ ಪಂಚವಿಂಶಕಮಚ್ಯುತಮ್।
12306055c ಜನ್ಮಮೃತ್ಯುಭಯಾದ್ಯೋಗಾಃ ಸಾಂಖ್ಯಾಶ್ಚ ಪರಮೈಷಿಣಃ।।
ಜನ್ಮ-ಮೃತ್ಯುಗಳ ಭಯರಹಿತರಾದ ಪರಮ ಪದವನ್ನು ಪಡೆಯಲಿಚ್ಛಿಸುವ ಸಾಂಖ್ಯ ಯೋಗಿಗಳು ಜೀವಾತ್ಮಾ ಮತ್ತು ಪರಮಾತ್ಮರು ಪರಸ್ಪರರಿಂದ ಭಿನ್ನರಲ್ಲರೆಂದೇ ಅಭಿಪ್ರಾಯಪಡುತ್ತಾರೆ. ಆದರೂ ಅವರು ಜೀವ ಮತ್ತು ಈಶ್ವರರನ್ನು ಭಿನ್ನರೆಂದು ಕಾಣುವ ದರ್ಶನವನ್ನೂ ಅಭಿನಂದಿಸುತ್ತಾರೆ.”
12306056 ವಿಶ್ವಾವಸುರುವಾಚ।
12306056a ಪಂಚವಿಂಶಂ ಯದೇತತ್ತೇ ಪ್ರೋಕ್ತಂ ಬ್ರಾಹ್ಮಣಸತ್ತಮ।
12306056c ತಥಾ ತನ್ನ ತಥಾ ವೇತಿ ತದ್ಭವಾನ್ವಕ್ತುಮರ್ಹತಿ।।
ವಿಶ್ವಾವಸುವು ಹೇಳಿದನು: “ಬ್ರಾಹ್ಮಣಸತ್ತಮ! ನೀನು ಹೇಳಿದ ಈ ಇಪ್ಪತ್ತೈದನೆಯ ತತ್ತ್ವರೂಪ, ಪರಮಾತ್ಮನಿಗಿಂತ ಭಿನ್ನವಾಗಿಲ್ಲದ, ಜೀವಾತ್ಮದ ಕುರಿತು ನನಗೊಂದು ಸಂದೇಹವಿದೆ. ಜೀವಾತ್ಮನು ಪರಮಾತ್ಮನಿಗಿಂತ ಅಭಿನ್ನವೋ ಅಥವಾ ಅಲ್ಲವೋ? ಇದರ ಕುರಿತು ನನಗೆ ಹೇಳಬೇಕು.
12306057a ಜೈಗೀಷವ್ಯಸ್ಯಾಸಿತಸ್ಯ ದೇವಲಸ್ಯ ಚ ಮೇ ಶ್ರುತಮ್।
12306057c ಪರಾಶರಸ್ಯ ವಿಪ್ರರ್ಷೇರ್ವಾರ್ಷಗಣ್ಯಸ್ಯ ಧೀಮತಃ।।
12306058a ಭಿಕ್ಷೋಃ7 ಪಂಚಶಿಖಸ್ಯಾಥ ಕಪಿಲಸ್ಯ ಶುಕಸ್ಯ ಚ।
12306058c ಗೌತಮಸ್ಯಾರ್ಷ್ಟಿಷೇಣಸ್ಯ ಗರ್ಗಸ್ಯ ಚ ಮಹಾತ್ಮನಃ।।
12306059a ನಾರದಸ್ಯಾಸುರೇಶ್ಚೈವ ಪುಲಸ್ತ್ಯಸ್ಯ ಚ ಧೀಮತಃ।
12306059c ಸನತ್ಕುಮಾರಸ್ಯ ತತಃ ಶುಕ್ರಸ್ಯ ಚ ಮಹಾತ್ಮನಃ।।
12306060a ಕಶ್ಯಪಸ್ಯ ಪಿತುಶ್ಚೈವ ಪೂರ್ವಮೇವ ಮಯಾ ಶ್ರುತಮ್।
ಜೈಗೀಷವ್ಯ, ಅಸಿತ, ದೇವಲ, ವಿಪ್ರರ್ಷಿ ಪರಾಶರ, ಧೀಮತ ವಾರ್ಷಗಣ್ಯ, ಭಿಕ್ಷು ಪಂಚಶಿಖ, ಕಪಿಲ, ಶುಕ, ಗೌತಮ, ಆರ್ಷ್ಟಿಷೇಣ, ಮಹಾತ್ಮಾ ಗರ್ಗ, ನಾರದ, ಆಸುರಿ, ಧೀಮತ ಪುಲಸ್ತ್ಯ, ಸನತ್ಕುಮಾರ, ಮಹಾತ್ಮಾ ಶುಕ್ರ ಮತ್ತು ತಂದೆ ಕಶ್ಯಪ ಇವರಿಂದಲೂ ಕೂಡ ಹಿಂದೆ ನಾನು ಈ ವಿಷಯದ ಕುರಿತು ಕೇಳಿದ್ದೆ.
12306060c ತದನಂತರಂ ಚ ರುದ್ರಸ್ಯ ವಿಶ್ವರೂಪಸ್ಯ ಧೀಮತಃ।।
12306061a ದೈವತೇಭ್ಯಃ ಪಿತೃಭ್ಯಶ್ಚ ದೈತ್ಯೇಭ್ಯಶ್ಚ ತತಸ್ತತಃ।
12306061c ಪ್ರಾಪ್ತಮೇತನ್ಮಯಾ ಕೃತ್ಸ್ನಂ ವೇದ್ಯಂ ನಿತ್ಯಂ ವದಂತ್ಯುತ।।
ತದನಂತರ ರುದ್ರ, ಧೀಮತ ವಿಶ್ವರೂಪ, ಅನ್ಯ ದೇವತೆಗಳು, ಪಿತೃಗಳು ಮತ್ತು ದೈತ್ಯರಿಂದಲೂ ಕೂಡ ಅಲ್ಲಲ್ಲಿಂದ ನಾನು ಸಂಪೂರ್ಣ ಜ್ಞಾನವನ್ನು ಪಡೆದುಕೊಂಡೆನು. ಅವರೆಲ್ಲರೂ ವೇದ್ಯವಾದುದನ್ನು ಪೂರ್ಣ ಮತ್ತು ನಿತ್ಯ ಎಂದು ಹೇಳುತ್ತಾರೆ.
12306062a ತಸ್ಮಾತ್ತದ್ವೈ ಭವದ್ಬುದ್ಧ್ಯಾ ಶ್ರೋತುಮಿಚ್ಚಾಮಿ ಬ್ರಾಹ್ಮಣ।
12306062c ಭವಾನ್ಪ್ರಬರ್ಹಃ ಶಾಸ್ತ್ರಾಣಾಂ ಪ್ರಗಲ್ಭಶ್ಚಾತಿಬುದ್ಧಿಮಾನ್।।
ಬ್ರಾಹ್ಮಣ! ಈಗ ನಾನು ಈ ವಿಷಯದಲ್ಲಿ ನಿನ್ನ ಬುದ್ಧಿಯ ನಿರ್ಣಯವನ್ನು ಕೇಳ ಬಯಸುತ್ತೇನೆ. ಏಕೆಂದರೆ ನೀನು ವಿದ್ವಾನರಲ್ಲಿ ಶ್ರೇಷ್ಠನು. ಶಾಸ್ತ್ರಗಳ ಪ್ರಗಲ್ಭ ಪಂಡಿತನು ಮತ್ತು ಅತ್ಯಂತ ಬುದ್ಧಿವಂತನೂ ಹೌದು.
12306063a ನ ತವಾವಿದಿತಂ ಕಿಂ ಚಿದ್ಭವಾನ್ ಶ್ರುತಿನಿಧಿಃ ಸ್ಮೃತಃ।
12306063c ಕಥ್ಯತೇ ದೇವಲೋಕೇ ಚ ಪಿತೃಲೋಕೇ ಚ ಬ್ರಾಹ್ಮಣ।।
ಬ್ರಾಹ್ಮಣ! ನಿನಗೆ ತಿಳಿಯದೇ ಇರುವ ವಿಷಯವ್ಯಾವುದೂ ಇಲ್ಲ. ನಿನ್ನನ್ನು ವೈದಿಕ ಜ್ಞಾನದ ಭಂಡಾರವೆಂದು ತಿಳಿಯುತ್ತಾರೆ. ದೇವಲೋಕ ಮತ್ತು ಪಿತೃಲೋಕಗಳಲ್ಲಿಯೂ ನಿನ್ನ ಖ್ಯಾತಿಯಿದೆ.
12306064a ಬ್ರಹ್ಮಲೋಕಗತಾಶ್ಚೈವ ಕಥಯಂತಿ ಮಹರ್ಷಯಃ।
12306064c ಪತಿಶ್ಚ ತಪತಾಂ ಶಶ್ವದಾದಿತ್ಯಸ್ತವ ಭಾಷತೇ।।
ಬ್ರಹ್ಮಲೋಕಕ್ಕೆ ಹೋಗಿರುವ ಮಹರ್ಷಿಗಳೂ ನಿನ್ನ ಕುರಿತು ಹೇಳುತ್ತಾರೆ. ತಪತರ ಪತಿ ಆದಿತ್ಯನು ನಿನಗೆ ವೇದಗಳನ್ನು ಉಪದೇಶಿಸಿದ್ದಾನೆ.
12306065a ಸಾಂಖ್ಯಜ್ಞಾನಂ ತ್ವಯಾ ಬ್ರಹ್ಮನ್ನವಾಪ್ತಂ ಕೃತ್ಸ್ನಮೇವ ಚ।
12306065c ತಥೈವ ಯೋಗಜ್ಞಾನಂ ಚ ಯಾಜ್ಞವಲ್ಕ್ಯ ವಿಶೇಷತಃ।।
ಬ್ರಹ್ಮನ್! ಯಾಜ್ಞವಲ್ಕ್ಯ! ನೀನು ಸಂಪೂರ್ಣ ಸಾಂಖ್ಯ ಮತ್ತು ಯೋಗ ಶಾಸ್ತ್ರದ ವಿಶೇಷ ಜ್ಞಾನಿಯು.
12306066a ನಿಃಸಂದಿಗ್ಧಂ ಪ್ರಬುದ್ಧಸ್ತ್ವಂ ಬುಧ್ಯಮಾನಶ್ಚರಾಚರಮ್।
12306066c ಶ್ರೋತುಮಿಚ್ಚಾಮಿ ತಜ್ಜ್ಞಾನಂ ಘೃತಂ ಮಂಡಮಯಂ ಯಥಾ।।
ನೀನು ಪ್ರಬುದ್ಧನು ಎನ್ನುವುದರಲ್ಲಿ ಸಂದಿಗ್ಧತೆಯೇ ಇಲ್ಲ. ಚರಾಚರಗಳನ್ನೂ ನೀನು ತಿಳಿದುಕೊಂಡಿದ್ದೀಯೆ. ಬೆಣ್ಣೆಯಿಂದ ಕೂಡಿದ ತುಪ್ಪದಂತಿರುವ ಆ ಜ್ಞಾನವನ್ನು ಕೇಳಬಯಸುತ್ತೇನೆ.”
12306067 ಯಾಜ್ಞವಲ್ಕ್ಯ ಉವಾಚ।
12306067a ಕೃತ್ಸ್ನಧಾರಿಣಮೇವ ತ್ವಾಂ ಮನ್ಯೇ ಗಂಧರ್ವಸತ್ತಮ।
12306067c ಜಿಜ್ಞಾಸಸಿ ಚ ಮಾಂ ರಾಜಂಸ್ತನ್ನಿಬೋಧ ಯಥಾಶ್ರುತಮ್।।
ಯಾಜ್ಞವಲ್ಕ್ಯನು ಹೇಳಿದನು: “ಗಂಧರ್ವ ಸತ್ತಮ! ರಾಜನ್! ನೀನು ಸಂಪೂರ್ಣ ಜ್ಞಾನವನ್ನೂ ಧರಿಸಬಲ್ಲೆ ಎಂದು ತಿಳಿಯುತ್ತೇನೆ. ನೀನು ಸಂಪೂರ್ಣ ಜ್ಞಾನಿಯಾಗಿದ್ದರೂ ನನ್ನ ಮತವನ್ನು ಕೇಳಿ ತಿಳಿಯಲು ಬಯಸುತ್ತಿರುವೆ. ಆದುದರಿಂದ ನಾನು ಕೇಳಿದುದನ್ನು ನೀನು ಕೇಳು.
12306068a ಅಬುಧ್ಯಮಾನಾಂ ಪ್ರಕೃತಿಂ ಬುಧ್ಯತೇ ಪಂಚವಿಂಶಕಃ।
12306068c ನ ತು ಬುಧ್ಯತಿ ಗಂಧರ್ವ ಪ್ರಕೃತಿಃ ಪಂಚವಿಂಶಕಮ್।।
ಗಂಧರ್ವ! ಜಡವಾದ ಪ್ರಕೃತಿಯನ್ನು ಇಪ್ಪತ್ತೈದನೆಯ ತತ್ತ್ವ ಜೀವಾತ್ಮನು ಅರಿತುಕೊಂಡಿದ್ದಾನೆ, ಆದರೆ ಪ್ರಕೃತಿಗೆ ಜೀವಾತ್ಮನ ಅರಿವಿಲ್ಲ.
12306069a ಅನೇನಾಪ್ರತಿಬೋಧೇನ ಪ್ರಧಾನಂ ಪ್ರವದಂತಿ ತಮ್।
12306069c ಸಾಂಖ್ಯಯೋಗಾಶ್ಚ ತತ್ತ್ವಜ್ಞಾ ಯಥಾಶ್ರುತಿನಿದರ್ಶನಾತ್।।
ಸಾಂಖ್ಯಯೋಗದ ತತ್ತ್ವಜ್ಞರು ಶೃತಿಯ ನಿದರ್ಶನದಂತೆ ನೀರಿನಲ್ಲಿ ಪ್ರತಿಬಿಂಬಿತಗೊಳ್ಳುವ ಚಂದ್ರಮನಂತೆ ಪ್ರಕೃತಿಯಲ್ಲಿ ಜ್ಞಾನಸ್ವರೂಪ ಜೀವಾತ್ಮಕನ ಅರಿವು ಉಂಟಾಗುವುದರಿಂದ ಪ್ರಕೃತಿಯನ್ನು ಪ್ರಧಾನ ಎಂದು ಕರೆಯುತ್ತಾರೆ.
12306070a ಪಶ್ಯಂಸ್ತಥೈವಾಪಶ್ಯಂಶ್ಚ ಪಶ್ಯತ್ಯನ್ಯಸ್ತಥಾನಘ।
12306070c ಷಡ್ವಿಂಶಃ ಪಂಚವಿಂಶಂ ಚ ಚತುರ್ವಿಂಶಂ ಚ ಪಶ್ಯತಿ।।
ಅನಘ! ಜೀವಾತ್ಮನು ಜಾಗ್ರತಾದಿ ಅವಸ್ಥೆಗಳಲ್ಲಿ ಎಲ್ಲವನ್ನೂ ನೋಡುತ್ತಾನೆ. ಸುಷುಪ್ತಿ ಮತ್ತು ಸಮಾಧಿ ಅವಸ್ಥೆಗಳಲ್ಲಿ ಏನನ್ನೂ ನೋಡುವುದಿಲ್ಲ. ಹಾಗೆಯೇ ಪರಮಾತ್ಮನು ಸದಾ ಇಪ್ಪತ್ತಾರನೆಯ ತತ್ತ್ವರೂಪ ಅಂದರೆ ತನ್ನನ್ನು ತಾನು, ಇಪ್ಪತ್ತೈದನೆಯ ತತ್ತ್ವರೂಪ ಜೀವಾತ್ಮಕ ಮತ್ತು ಇಪ್ಪತ್ನಾಲ್ಕನೆಯ ತತ್ತ್ವರೂಪ ಪ್ರಕೃತಿ – ಇವುಗಳನ್ನು ನೋಡುತ್ತಿರುತ್ತಾನೆ.
12306070e ನ ತು ಪಶ್ಯತಿ ಪಶ್ಯಂಸ್ತು ಯಶ್ಚೈನಮನುಪಶ್ಯತಿ।
12306071a ಪಂಚವಿಂಶೋಽಭಿಮನ್ಯೇತ ನಾನ್ಯೋಽಸ್ತಿ ಪರಮೋ8 ಮಮ।।
ಪರಮಾತ್ಮನು ಅದನ್ನು ನಿರಂತರವಾಗಿ ನೋಡುತ್ತಿದ್ದರೂ ಜೀವಾತ್ಮವು ತನಗಿಂತ ಹೆಚ್ಚಿನ ಬೇರೆಯಾವುದೂ ಇಲ್ಲ ಎಂದು ಅಭಿಮಾನ ಪಟ್ಟರೆ ಅದು ಬುದ್ಧಿಯಿದ್ದರೂ ತಿಳುವಳಿಕೆಯಿಲ್ಲದ ಹಾಗೆ.
12306071c ನ ಚತುರ್ವಿಂಶಕೋಽಗ್ರಾಹ್ಯೋ ಮನುಜೈರ್ಜ್ಞಾನದರ್ಶಿಭಿಃ।
12306072a ಮತ್ಸ್ಯೇವೋದಕಮನ್ವೇತಿ ಪ್ರವರ್ತತಿ ಪ್ರವರ್ತನಾತ್।।
ಜ್ಞಾನದರ್ಶೀ ಮನುಷ್ಯರು ಇಪ್ಪತ್ನಾಲ್ಕನೆಯ ತತ್ತ್ವರೂಪ ಪ್ರಕೃತಿಯನ್ನು ಆತ್ಮಭಾವದಿಂದ ಗ್ರಹಿಸಬಾರದು. ಮೀನು ನೀರಿನಲ್ಲಿ ಓಡಾಡುತ್ತಿದ್ದರೂ ತನ್ನನ್ನು ಹೇಗೆ ನೀರಿಗಿಂತ ಭಿನ್ನ ಎಂದು ತಿಳಿದುಕೊಂಡಿರುತ್ತದೆಯೋ ಹಾಗೆ ಮನುಷ್ಯನು ತನ್ನ ಪ್ರಕೃತಿಯಂತೆ ನಡೆದುಕೊಳ್ಳುತ್ತಿದ್ದರೂ ಪ್ರಕೃತಿಯೇ ತನ್ನ ಸ್ವರೂಪವೆಂದು ತಿಳಿದುಕೊಳ್ಳಬಾರದು.
12306072c ಯಥೈವ ಬುಧ್ಯತೇ ಮತ್ಸ್ಯಸ್ತಥೈಷೋಽಪ್ಯನುಬುಧ್ಯತೇ।
12306072e ಸಸ್ನೇಹಃ ಸಹವಾಸಾಚ್ಚ ಸಾಭಿಮಾನಶ್ಚ ನಿತ್ಯಶಃ।।
12306073a ಸ ನಿಮಜ್ಜತಿ ಕಾಲಸ್ಯ ಯದೈಕತ್ವಂ ನ ಬುಧ್ಯತೇ।
12306073c ಉನ್ಮಜ್ಜತಿ ಹಿ ಕಾಲಸ್ಯ ಮಮತ್ವೇನಾಭಿಸಂವೃತಃ।।
ಮೀನು ನೀರಿನಲ್ಲಿದ್ದುಕೊಂಡೂ ಹೇಗೆ ನೀರನ್ನು ತನಗಿಂತ ಭಿನ್ನ ಎಂದು ತಿಳಿಯುತ್ತದೆಯೋ ಹಾಗೆ ಜೀವಾತ್ಮನು ಪ್ರಾಕೃತ ಶರೀರದಲ್ಲಿ ಇದ್ದುಕೊಂಡೂ ತಾನು ಪ್ರಕೃತಿಗಿಂತ ಭಿನ್ನ ಎಂದು ತಿಳಿದುಕೊಳ್ಳುತ್ತಾನೆ. ಆದರೂ ಅವನು ಶರೀರದ ಮೇಲಿನ ಸ್ನೇಹ, ಸಹವಾಸ ಮತ್ತು ಅಭಿಮಾನದ ಕಾರಣದಿಂದ ಪರಮಾತ್ಮನೊಂದಿಗೆ ತನ್ನ ಏಕತೆಯನ್ನು ಅನುಭವಿಸದೇ ಇರುವುದರಿಂದ ಕಾಲದ ಸಮುದ್ರದಲ್ಲಿ ಮುಳುಗಿಹೋಗುತ್ತಾನೆ. ಸಮತ್ವಬುದ್ಧಿಯಿಂದ ತನ್ನ ಮತ್ತು ಪರಮಾತ್ಮನ ಏಕತೆಯನ್ನು ಅರಿತುಕೊಂಡಾಗ ಆ ಕಾಲಸಮುದ್ರದಿಂದ ಅವನ ಉದ್ಧಾರವಾಗುತ್ತದೆ.
12306074a ಯದಾ ತು ಮನ್ಯತೇಽನ್ಯೋಽಹಮನ್ಯ ಏಷ ಇತಿ ದ್ವಿಜಃ।
12306074c ತದಾ ಸ ಕೇವಲೀಭೂತಃ ಷಡ್ವಿಂಶಮನುಪಶ್ಯತಿ।।
ದ್ವಿಜನು ಯಾವಾಗ ತಾನು ಅನ್ಯ ಮತ್ತು ಈ ಪ್ರಾಕೃತ ಶರೀರ ಅಥವಾ ಅನ್ನಾತ್ಮ ಜಗತ್ತು ತನಗಿಂತ ಸರ್ವಥಾ ಭಿನ್ನವಾಗಿದೆ ಎಂದು ತಿಳಿದುಕೊಳ್ಳುತ್ತಾನೋ ಆಗ ಅವನು ಪ್ರಕೃತಿಯ ಸಂಸರ್ಗ ರಹಿತನಾಗಿ ಇಪ್ಪತ್ತಾರನೆಯ ತತ್ತ್ವ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.
12306075a ಅನ್ಯಶ್ಚ ರಾಜನ್ನವರಸ್ತಥಾನ್ಯಃ ಪಂಚವಿಂಶಕಃ।
12306075c ತತ್ಸ್ಥತ್ವಾದನುಪಶ್ಯಂತಿ ಏಕ ಏವೇತಿ ಸಾಧವಃ।।
ರಾಜನ್! ಪರಮಾತ್ಮನು ಭಿನ್ನ ಮತ್ತು ಜೀವಾತ್ಮನು ಭಿನ್ನ. ಏಕೆಂದರೆ ಪರಮಾತ್ಮನು ಜೀವಾತ್ಮಕ್ಕೆ ಆಶ್ರಯನು. ಆದರೆ ಜ್ಞಾನೀ ಸಂತ ಮಹಾತ್ಮರು ಇವೆರಡನ್ನೂ ಒಂದೇ ಎಂದು ನೋಡುತ್ತಾರೆ ಮತ್ತು ತಿಳಿಯುತ್ತಾರೆ ಕೂಡ.
12306076a ತೇನೈತನ್ನಾಭಿನಂದಂತಿ ಪಂಚವಿಂಶಕಮಚ್ಯುತಮ್।
12306076c ಜನ್ಮಮೃತ್ಯುಭಯಾದ್ಭೀತಾ ಯೋಗಾಃ ಸಾಂಖ್ಯಾಶ್ಚ ಕಾಶ್ಯಪ।
ಕಾಶ್ಯಪ! ಜನ್ಮ-ಮೃತ್ಯುಗಳ ಭಯದಿಂದ ಭೀತರಾದ ಸಾಂಖ್ಯ ಮತ್ತು ಯೋಗ ಸಾಧಕರು ಜೀವಾತ್ಮ ಮತ್ತು ಪರಮಾತ್ಮ ಎರಡೂ ಒಂದೇ ಎಂದು ಕಾಣುತ್ತಾರೆ ಮತ್ತು ಆ ಅಭೇದ-ದರ್ಶನವನ್ನು ಅಭಿನಂದಿಸುತ್ತಾರೆ.
12306076e ಷಡ್ವಿಂಶಮನುಪಶ್ಯಂತಿ ಶುಚಯಸ್ತತ್ಪರಾಯಣಾಃ।।
12306077a ಯದಾ ಸ ಕೇವಲೀಭೂತಃ ಷಡ್ವಿಂಶಮನುಪಶ್ಯತಿ।
12306077c ತದಾ ಸ ಸರ್ವವಿದ್ವಿದ್ವಾನ್ನ ಪುನರ್ಜನ್ಮ ವಿಂದತಿ।।
ಯಾವಾಗ ಜೀವಾತ್ಮವು ಪ್ರಕೃತಿಯ ಸಂಸರ್ಗದಿಂದ ಹೊರಬಂದು ಪರಮಾತ್ಮನ ಸಾಕ್ಷಾತ್ಕಾರ ಮಾಡಿಕೊಳ್ಳುತ್ತದೆಯೋ ಆಗ ಅವನು ಸರ್ವಜ್ಞನಾಗಿ ಈ ಸಂಸಾರದಲ್ಲಿ ಪುನರ್ಜನ್ಮವನ್ನು ಹೊಂದುವುದಿಲ್ಲ.
12306078a ಏವಮಪ್ರತಿಬುದ್ಧಶ್ಚ ಬುಧ್ಯಮಾನಶ್ಚ ತೇಽನಘ।
12306078c ಬುದ್ಧಶ್ಚೋಕ್ತೋ ಯಥಾತತ್ತ್ವಂ ಮಯಾ ಶ್ರುತಿನಿದರ್ಶನಾತ್।।
ಅನಘ! ಹೀಗೆ ನಾನು ನಿನಗೆ ಜಡ ಪ್ರಕೃತಿ, ಚೇತನ ಜೀವಾತ್ಮಾ ಮತ್ತು ಬೋಧಸ್ವರೂಪ ಪರಮಾತ್ಮರನ್ನು ಶ್ರುತಿಯ ಅನುಸಾರವಾಗಿ ಯಥಾವತ್ತಾಗಿ ನಿರೂಪಿಸಿದ್ದೇನೆ.
12306079a ಪಶ್ಯಾಪಶ್ಯಂ ಯೋಽನುಪಶ್ಯೇತ್ ಕ್ಷೇಮಂ ತತ್ತ್ವಂ ಚ ಕಾಶ್ಯಪ।
12306079c ಕೇವಲಾಕೇವಲಂ ಚಾದ್ಯಂ ಪಂಚವಿಂಶಾತ್ಪರಂ ಚ ಯತ್।।
ಕಾಶ್ಯಪ! ಜೀವಾತ್ಮ ಮತ್ತು ಪ್ರಕೃತಿಗಳು ಬೇರೆಯೆಂದು ತಿಳಿಯದ ಮನುಷ್ಯನು ಮಂಗಲಕಾರೀ ತತ್ತ್ವದ ಮೇಲೆ ದೃಷ್ಟಿಯನ್ನು ಹಾಯಿಸುವುದಿಲ್ಲ. ಆಗ ಅವನು ಕೇವಲ9 ಮತ್ತು ಅಕೇವಲ10, ಸರ್ವಕ್ಕೆ ಆದಿಕಾರಣ ಪರಮಾತ್ಮನನ್ನು ಯಥಾರ್ಥರೂಪದಲ್ಲಿ ತಿಳಿಯುವುದಿಲ್ಲ.”
12306080 ವಿಶ್ವಾವಸುರುವಾಚ।
12306080a ತಥ್ಯಂ ಶುಭಂ ಚೈತದುಕ್ತಂ ತ್ವಯಾ ಭೋಃ ಸಮ್ಯಕ್ ಕ್ಷೇಮ್ಯಂ ದೇವತಾದ್ಯಂ ಯಥಾವತ್।
12306080c ಸ್ವಸ್ತ್ಯಕ್ಷಯಂ ಭವತಶ್ಚಾಸ್ತು ನಿತ್ಯಂ ಬುದ್ಧ್ಯಾ ಸದಾ ಬುದ್ಧಿಯುಕ್ತಂ ನಮಸ್ತೇ11।।
ವಿಶ್ವಾವಸುವು ಹೇಳಿದನು: “ವಿಭೋ! ದೇವತೆಗಳ ಆದಿಕಾರಣ ಬ್ರಹ್ಮನ ವಿಷಯದಲ್ಲಿ ನೀನು ಯಥಾವತ್ತಾಗಿ ವರ್ಣಿಸಿದುದು ಸತ್ಯ, ಶುಭ, ಸುಂದರ ಮತ್ತು ಪರಮ ಮಂಗಲಕಾರಿಯಾಗಿದೆ. ನಿನ್ನ ಮನಸ್ಸು ಸದಾ ಹೀಗೆ ಜ್ಞಾನದಲ್ಲಿ ಸ್ಥಿತವಾಗಿರಲಿ ಮತ್ತು ನಿನಗೆ ನಿತ್ಯವೂ ಅಕ್ಷಯ ಕಲ್ಯಾಣವಾಗಲಿ! ನಮಸ್ಕಾರ!”
12306081 ಯಾಜ್ಞವಲ್ಕ್ಯ ಉವಾಚ।
12306081a ಏವಮುಕ್ತ್ವಾ ಸಂಪ್ರಯಾತೋ ದಿವಂ ಸ ವಿಭ್ರಾಜನ್ವೈ ಶ್ರೀಮತಾ ದರ್ಶನೇನ।
12306081c ತುಷ್ಟಶ್ಚ ತುಷ್ಟ್ಯಾ ಪರಯಾಭಿನಂದ್ಯ ಪ್ರದಕ್ಷಿಣಂ ಮಮ ಕೃತ್ವಾ ಮಹಾತ್ಮಾ।।
ಯಾಜ್ಜವಲ್ಕ್ಯನು ಹೇಳಿದನು: “ರಾಜನ್! ಹೀಗೆ ಹೇಳಿ ಮಹಾತ್ಮಾ ಗಂಧರ್ವರಾಜನು ತನ್ನ ಕಾಂತಿಯುಕ್ತ ದರ್ಶನದಿಂದ ಪ್ರಕಾಶಿತನಾಗಿ ನನ್ನನ್ನು ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಸ್ವರ್ಗಲೋಕಕ್ಕೆ ಹೊರಟುಹೋದನು. ಆಗ ನಾನೂ ಕೂಡ ಅತ್ಯಂತ ಸಂತೋಷದಿಂದ ಅವನ ಕಡೆ ನೋಡುತ್ತಿದ್ದೆ.
12306082a ಬ್ರಹ್ಮಾದೀನಾಂ ಖೇಚರಾಣಾಂ ಕ್ಷಿತೌ ಚ ಯೇ ಚಾಧಸ್ತಾತ್ಸಂವಸಂತೇ ನರೇಂದ್ರ।
12306082c ತತ್ರೈವ ತದ್ದರ್ಶನಂ ದರ್ಶಯನ್ವೈ ಸಮ್ಯಕ್ ಕ್ಷೇಮ್ಯಂ ಯೇ ಪಥಂ ಸಂಶ್ರಿತಾ ವೈ।।
ನರೇಂದ್ರ! ಆಕಾಶದಲ್ಲಿ ಸಂಚರಿಸುವ ಬ್ರಹ್ಮಾದಿ ದೇವತೆಗಳು, ಭೂಮಿಯ ಮೇಲೆ ವಾಸಿಸುವ ಮನುಷ್ಯರು, ಮತ್ತು ಭೂಮಿಯ ಕೆಳಗಿನ ಲೋಕಗಳಲ್ಲಿರುವವರಲ್ಲಿ ಮೋಕ್ಷಮಾರ್ಗದ ಆಶ್ರಯವನ್ನು ಪಡೆದಿರುವ ಎಲ್ಲರಿಗೂ ಅವರಿದ್ದಲ್ಲಿಗೇ ಹೋಗಿ ವಿಶ್ವಾವಸುವು ನಾನು ಹೇಳಿದ ಆ ಸತ್ಯದರ್ಶನದ ಉಪದೇಶವನ್ನು ನೀಡಿದನು.
12306083a ಸಾಂಖ್ಯಾಃ ಸರ್ವೇ ಸಾಂಖ್ಯಧರ್ಮೇ ರತಾಶ್ಚ ತದ್ವದ್ಯೋಗಾ ಯೋಗಧರ್ಮೇ ರತಾಶ್ಚ।
12306083c ಯೇ ಚಾಪ್ಯನ್ಯೇ ಮೋಕ್ಷಕಾಮಾ ಮನುಷ್ಯಾಸ್ ತೇಷಾಮೇತದ್ದರ್ಶನಂ ಜ್ಞಾನದೃಷ್ಟಮ್।।
ಸಾಂಖ್ಯಧರ್ಮರತ ಸರ್ವ ಸಾಂಖ್ಯರಿಗೂ, ಯೋಗಧರ್ಮರತ ಸರ್ವ ಯೋಗಿಗಳಿಗೂ ಮತ್ತು ಅನ್ಯ ಮೋಕ್ಷಕಾಮೀ ಮನುಷ್ಯರಿಗೂ ಈ ಉಪದೇಶವು ಜ್ಞಾನದ ಪ್ರತ್ಯಕ್ಷ ಫಲವನ್ನು ನೀಡುತ್ತದೆ.
12306084a ಜ್ಞಾನಾನ್ಮೋಕ್ಷೋ ಜಾಯತೇ ಪೂರುಷಾಣಾಂ12 ನಾಸ್ತ್ಯಜ್ಞಾನಾದೇವಮಾಹುರ್ನರೇಂದ್ರ।
12306084c ತಸ್ಮಾಜ್ಜ್ಞಾನಂ ತತ್ತ್ವತೋಽನ್ವೇಷಿತವ್ಯಂ ಯೇನಾತ್ಮಾನಂ ಮೋಕ್ಷಯೇಜ್ಜನ್ಮಮೃತ್ಯೋಃ।।
ನರೇಂದ್ರ! ಜ್ಞಾನದಿಂದಲೇ ಮೋಕ್ಷವುಂಟಾಗುತ್ತದೆ. ಅಜ್ಞಾನದಿಂದಲ್ಲ. ಇದನ್ನು ವಿದ್ವಾಂಸರು ಹೇಳುತ್ತಾರೆ. ಆದುದರಿಂದ ತನ್ನನ್ನು ತಾನು ಜನ್ಮ-ಮೃತ್ಯುವಿನ ಬಂಧನದಿಂದ ಬಿಡಿಸಿಕೊಳ್ಳಬಹುದಾದ ಯಥಾರ್ಥ ಜ್ಞಾನವನ್ನು ಅನ್ವೇಷಿಸಬೇಕು.
12306085a ಪ್ರಾಪ್ಯ ಜ್ಞಾನಂ ಬ್ರಾಹ್ಮಣಾತ್ ಕ್ಷತ್ರಿಯಾದ್ವಾ ವೈಶ್ಯಾಚ್ಚೂದ್ರಾದಪಿ ನೀಚಾದಭೀಕ್ಷ್ಣಮ್।
12306085c ಶ್ರದ್ಧಾತವ್ಯಂ ಶ್ರದ್ದಧಾನೇನ ನಿತ್ಯಂ ನ ಶ್ರದ್ಧಿನಂ ಜನ್ಮಮೃತ್ಯೂ ವಿಶೇತಾಮ್।।
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಅಥವಾ ನೀಚ ವರ್ಣಗಳಲ್ಲಿ ಜನಿಸಿದ ಪುರುಷರಿಂದಲೂ ಜ್ಞಾನವು ದೊರೆಯುವುದಾದರೆ ಅವರಿಂದ ಜ್ಞಾನವನ್ನು ಪಡೆದುಕೊಂಡು ಶ್ರದ್ಧಾಲು ಮನುಷ್ಯನು ಸದಾ ಅದರಲ್ಲಿ ಶ್ರದ್ಧೆಯನ್ನಿಡಬೇಕು. ಯಾರಲ್ಲಿ ಶ್ರದ್ಧೆಯಿದೆಯೋ ಅವನಲ್ಲಿ ಜನ್ಮ-ಮೃತ್ಯುವಿನ ಪ್ರವೇಶವಾಗುವುದಿಲ್ಲ.
12306086a ಸರ್ವೇ ವರ್ಣಾ ಬ್ರಾಹ್ಮಣಾ ಬ್ರಹ್ಮಜಾಶ್ಚ ಸರ್ವೇ ನಿತ್ಯಂ ವ್ಯಾಹರಂತೇ ಚ ಬ್ರಹ್ಮ।
12306086c ತತ್ತ್ವಂ ಶಾಸ್ತ್ರಂ ಬ್ರಹ್ಮಬುದ್ಧ್ಯಾ ಬ್ರವೀಮಿ ಸರ್ವಂ ವಿಶ್ವಂ ಬ್ರಹ್ಮ ಚೈತತ್ಸಮಸ್ತಮ್।।
ಬ್ರಹ್ಮನಿಂದ ಹುಟ್ಟಿದ ಕಾರಣದಿಂದ ಸರ್ವವರ್ಣದವರೂ ಬ್ರಾಹ್ಮಣರೇ. ಎಲ್ಲರೂ ಸದಾ ಬ್ರಹ್ಮನ ಉಚ್ಚಾರಣೆಯನ್ನೇ ಮಾಡುತ್ತಾರೆ. ನಾನು ಬ್ರಹ್ಮಬುದ್ಧಿಯಿಂದಲೇ ಯಥಾರ್ಥ ಶಾಸ್ತ್ರದ ಸಿದ್ಧಾಂತವನ್ನು ಹೇಳುತ್ತಿದ್ದೇನೆ. ಈ ಸಂಪೂರ್ಣ ಜಗತ್ತು, ಈ ಎಲ್ಲ ದೃಶ್ಯಪ್ರಪಂಚವೂ ಬ್ರಹ್ಮವೇ ಆಗಿದೆ.
12306087a ಬ್ರಹ್ಮಾಸ್ಯತೋ ಬ್ರಾಹ್ಮಣಾಃ ಸಂಪ್ರಸೂತಾ ಬಾಹುಭ್ಯಾಂ ವೈ ಕ್ಷತ್ರಿಯಾಃ ಸಂಪ್ರಸೂತಾಃ।
12306087c ನಾಭ್ಯಾಂ ವೈಶ್ಯಾಃ ಪಾದತಶ್ಚಾಪಿ ಶೂದ್ರಾಃ ಸರ್ವೇ ವರ್ಣಾ ನಾನ್ಯಥಾ ವೇದಿತವ್ಯಾಃ।।
ಬ್ರಹ್ಮನ ಮುಖದಿಂದ ಬ್ರಾಹ್ಮಣರು ಹುಟ್ಟಿದರು. ಅವನ ಬಾಹುಗಳಿಂದ ಕ್ಷತ್ರಿಯರು ಹುಟ್ಟಿದರು. ನಾಭಿಯಿಂದ ವೈಶ್ಯರು ಮತ್ತು ಪಾದಗಳಿಂದ ಶೂದ್ರರು ಹುಟ್ಟಿದರು. ಆದುದರಿಂದ ಸರ್ವ ವರ್ಣದವರೂ ಬ್ರಹ್ಮರೂಪಿಗಳು. ಅನ್ಯಥಾ ತಿಳಿದುಕೊಳ್ಳಬಾರದು.
12306088a ಅಜ್ಞಾನತಃ ಕರ್ಮಯೋನಿಂ ಭಜಂತೇ ತಾಂ ತಾಂ ರಾಜಂಸ್ತೇ ಯಥಾ ಯಾಂತ್ಯಭಾವಮ್।
12306088c ತಥಾ ವರ್ಣಾ ಜ್ಞಾನಹೀನಾಃ ಪತಂತೇ ಘೋರಾದಜ್ಞಾನಾತ್ ಪ್ರಾಕೃತಂ ಯೋನಿಜಾಲಮ್।।
ರಾಜನ್! ಅಜ್ಞಾನದ ಕಾರಣದಿಂದ ಮನುಷ್ಯನು ಕರ್ಮಗಳ ಫಲವಾಗಿ ಬೇರೆ ಬೇರೆ ಯೋನಿಗಳಲ್ಲಿ ಜನ್ಮವೆತ್ತುತ್ತಾನೆ ಮತ್ತು ಸಾಯುತ್ತಾನೆ. ಜ್ಞಾನಹೀನ ಮನುಷ್ಯನು ತನ್ನ ಭಯಂಕರ ಅಜ್ಞಾನದ ಕಾರಣದಿಂದಲೇ ನಾನಾ ಪ್ರಕಾರದ ಪ್ರಾಕೃತ ಯೋನಿಗಳಲ್ಲಿ ಬೀಳುತ್ತಾನೆ.
12306089a ತಸ್ಮಾಜ್ಜ್ಞಾನಂ ಸರ್ವತೋ ಮಾರ್ಗಿತವ್ಯಂ ಸರ್ವತ್ರಸ್ಥಂ ಚೈತದುಕ್ತಂ ಮಯಾ ತೇ।
12306089c ತಸ್ಥೌ ಬ್ರಹ್ಮಾ ತಸ್ಥಿವಾಂಶ್ಚಾಪರೋ ಯಸ್ ತಸ್ಮೈ ನಿತ್ಯಂ ಮೋಕ್ಷಮಾಹುರ್ದ್ವಿಜೇಂದ್ರಾಃ।।
ಆದುದರಿಂದ ಎಲ್ಲಕಡೆಗಳಿಂದಲೂ ಜ್ಞಾನಪ್ರಾಪ್ತಿಗೆ ಪ್ರಯತ್ನಿಸಬೇಕು. ನಾನು ನಿನಗೆ ಮೊದಲೇ ಹೇಳಿದಂತೆ ಎಲ್ಲವರ್ಣದವರೂ ತಮ್ಮ ತಮ್ಮ ಆಶ್ರಮಗಳಲ್ಲಿದ್ದುಕೊಂಡೇ ಜ್ಞಾನ ಪ್ರಾಪ್ತಿಯನ್ನು ಮಾಡಿಕೊಳ್ಳಬಹುದು. ಆದುದರಿಂದ ಜ್ಞಾನದಲ್ಲಿ ಸ್ಥಿತನಾಗಿರುವ ಬ್ರಾಹ್ಮಣ ಅಥವ ಇತರ ವರ್ಣದವರಿಗೂ ನಿತ್ಯ ಮೋಕ್ಷಪ್ರಾಪ್ತಿಯ ಕುರಿತು ಹೇಳಲಾಗಿದೆ.
12306090a ಯತ್ತೇ ಪೃಷ್ಟಂ ತನ್ಮಯಾ ಚೋಪದಿಷ್ಟಂ ಯಾಥಾತಥ್ಯಂ ತದ್ವಿಶೋಕೋ ಭವಸ್ವ।
12306090c ರಾಜನ್ಗಚ್ಚಸ್ವೈತದರ್ಥಸ್ಯ ಪಾರಂ ಸಮ್ಯಕ್ ಪ್ರೋಕ್ತಂ ಸ್ವಸ್ತಿ ತೇಽಸ್ತ್ವತ್ರ ನಿತ್ಯಮ್।।
ರಾಜನ್! ನೀನು ಕೇಳಿದುದಕ್ಕೆ ನಾನು ನಿನಗೆ ಯಥಾತಥ್ಯ ಉಪದೇಶವನ್ನು ನೀಡಿದ್ದೇನೆ. ಈಗ ನೀನು ಶೋಕರಹಿತನಾಗು ಮತ್ತು ಈ ತತ್ತ್ವಜ್ಞಾನದಲ್ಲಿ ಪಾರಂಗತನಾಗು. ನಾನು ನಿನಗೆ ಜ್ಞಾನದ ಉತ್ತಮ ಉಪದೇಶವನ್ನು ನೀಡಿದ್ದೇನೆ. ನಿನಗೆ ನಿತ್ಯವೂ ಮಂಗಳವಾಗಲಿ!””
12306091 ಭೀಷ್ಮ ಉವಾಚ।
12306091a ಸ ಏವಮನುಶಾಸ್ತಸ್ತು ಯಾಜ್ಞವಲ್ಕ್ಯೇನ ಧೀಮತಾ।
12306091c ಪ್ರೀತಿಮಾನಭವದ್ರಾಜಾ ಮಿಥಿಲಾಧಿಪತಿಸ್ತದಾ।।
ಭೀಷ್ಮನು ಹೇಳಿದನು: “ಧೀಮತ ಯಾಜ್ಞವಲ್ಕ್ಯನ ಈ ರೀತಿಯ ಉಪದೇಶದಿಂದ ಮಿಥಿಲಾಧಿಪತಿ ರಾಜಾ ಜನಕನು ಅತ್ಯಂತ ಪ್ರಸನ್ನನಾದನು.
12306092a ಗತೇ ಮುನಿವರೇ ತಸ್ಮಿನ್ ಕೃತೇ ಚಾಪಿ ಪ್ರದಕ್ಷಿಣೇ।
12306092c ದೈವರಾತಿರ್ನರಪತಿರಾಸೀನಸ್ತತ್ರ ಮೋಕ್ಷವಿತ್।।
12306093a ಗೋಕೋಟಿಂ ಸ್ಪರ್ಶಯಾಮಾಸ ಹಿರಣ್ಯಸ್ಯ ತಥೈವ ಚ।
12306093c ರತ್ನಾಂಜಲಿಮಥೈಕಂ ಚ ಬ್ರಾಹ್ಮಣೇಭ್ಯೋ ದದೌ ತದಾ।।
ಆ ಮುನಿವರನಿಗೆ ಪ್ರದಕ್ಷಿಣೆ ನಮಸ್ಕಾರಗೈಯಲು ಅವನು ಹೊರಟು ಹೋದನು. ಆಗ ಮೋಕ್ಷವಿದು ದೇವರಾತನಂದನ ರಾಜಾ ಜನಕನು ಕುಳಿತಲ್ಲಿಂದಲೇ ಕೋಟಿ ಗೋವುಗಳನ್ನು ಸ್ಪರ್ಶಿಸಿ ಬ್ರಾಹ್ಮಣರಿಗೆ ದಾನಮಾಡಿದನು ಮತ್ತು ಪ್ರತ್ಯೇಕ ಬ್ರಾಹ್ಮಣನಿಗೆ ಒಂದೊಂದು ಬೊಗಸೆ ರತ್ನ ಮತ್ತು ಸುವರ್ಣಗಳನ್ನಿತ್ತನು.
12306094a ವಿದೇಹರಾಜ್ಯಂ ಚ ತಥಾ ಪ್ರತಿಷ್ಠಾಪ್ಯ ಸುತಸ್ಯ ವೈ।
12306094c ಯತಿಧರ್ಮಮುಪಾಸಂಶ್ಚಾಪ್ಯವಸನ್ಮಿಥಿಲಾಧಿಪಃ।।
ಅನಂತರ ಮಿಥಿಲಾಧಿಪನು ವಿದೇಹ ರಾಜ್ಯವನ್ನು ತನ್ನ ಮಗನಲ್ಲಿ ಪ್ರತಿಷ್ಠಾಪಿಸಿ ಯತಿಧರ್ಮವನ್ನು ಪಾಲಿಸುತ್ತಾ ಇರತೊಡಗಿದನು.
12306095a ಸಾಂಖ್ಯಜ್ಞಾನಮಧೀಯಾನೋ ಯೋಗಶಾಸ್ತ್ರಂ ಚ ಕೃತ್ಸ್ನಶಃ।
12306095c ಧರ್ಮಾಧರ್ಮೌ ಚ ರಾಜೇಂದ್ರ ಪ್ರಾಕೃತಂ ಪರಿಗರ್ಹಯನ್।।
12306096a ಅನಂತಮಿತಿ ಕೃತ್ವಾ ಸ ನಿತ್ಯಂ ಕೇವಲಮೇವ ಚ।
12306096c ಧರ್ಮಾಧರ್ಮೌ ಪುಣ್ಯಪಾಪೇ ಸತ್ಯಾಸತ್ಯೇ ತಥೈವ ಚ।।
12306097a ಜನ್ಮಮೃತ್ಯೂ ಚ ರಾಜೇಂದ್ರ ಪ್ರಾಕೃತಂ ತದಚಿಂತಯತ್।
12306097c ಬ್ರಹ್ಮಾವ್ಯಕ್ತಸ್ಯ ಕರ್ಮೇದಮಿತಿ ನಿತ್ಯಂ ನರಾಧಿಪ।।
ರಾಜೇಂದ್ರ! ನರಾಧಿಪ! ಅವನು ಸಂಪೂರ್ಣ ಸಾಂಖ್ಯ, ಜ್ಞಾನ ಮತ್ತು ಯೋಗಶಾಸ್ತ್ರಗಳನ್ನು ಸ್ವಾಧ್ಯಾಯಗೈದು ಪ್ರಾಕೃತ ಧರ್ಮ ಮತ್ತು ಅಧರ್ಮಗಳನ್ನು ತ್ಯಾಜ್ಯವೆಂದು ಪರಿಗಣಿಸಿ “ನಾನು ಅನಂತ” ಎನ್ನುವ ನಿಶ್ಚಯಕ್ಕೆ ಬಂದನು. ಧರ್ಮ-ಅಧರ್ಮ, ಪಾಪ-ಪುಣ್ಯ, ಸತ್ಯ-ಅಸತ್ಯ ಮತ್ತು ಜನ್ಮ-ಮೃತ್ಯುಗಳು ವ್ಯಕ್ತ ಮತ್ತು ಅವ್ಯಕ್ತಗಳ ಕಾರ್ಯವೆಂದು ತಿಳಿದು, ಎಲ್ಲವೂ ಪ್ರಕೃತಿಜನ್ಯ ಮಿಥ್ಯವೆಂದು ತಿಳಿದು ಪ್ರಕೃತಿಸಂಸರ್ಗ ರಹಿತ ತನ್ನ ಶುದ್ಧ ಮತ್ತು ನಿತ್ಯ ಸ್ವರೂಪದ ಚಿಂತನೆಯಲ್ಲಿ ತೊಡಗಿದನು.
12306098a ಪಶ್ಯಂತಿ ಯೋಗಾಃ ಸಾಂಖ್ಯಾಶ್ಚ ಸ್ವಶಾಸ್ತ್ರಕೃತಲಕ್ಷಣಾಃ।
12306098c ಇಷ್ಟಾನಿಷ್ಟವಿಯುಕ್ತಂ ಹಿ ತಸ್ಥೌ ಬ್ರಹ್ಮ ಪರಾತ್ಪರಮ್।।
ಸಾಂಖ್ಯ ಮತ್ತು ಯೋಗ ವಿದ್ವಾಂಸರು ತಮ್ಮ ತಮ್ಮ ಶಾಸ್ತ್ರಗಳಲ್ಲಿ ವರ್ಣಿತ ಲಕ್ಷಣಗಳ ಅನುಸಾರ ಬ್ರಹ್ಮನು ಇಷ್ಟ ಮತ್ತು ಅನಿಷ್ಟಗಳಿಂದ ಮುಕ್ತನು, ಅಚಲ ಭಾವದಿಂದಿರುವವನು ಮತ್ತು ಪರಾತ್ಪರನು ಎಂದು ಕಾಣುತ್ತಾರೆ ಮತ್ತು ತಿಳಿದುಕೊಳ್ಳುತ್ತಾರೆ.
12306098E ನಿತ್ಯಂ ತಮಾಹುರ್ವಿದ್ವಾಂಸಃ ಶುಚಿಸ್ತಸ್ಮಾಚ್ಚುಚಿರ್ಭವ।
12306099a ದೀಯತೇ ಯಚ್ಚ ಲಭತೇ ದತ್ತಂ ಯಚ್ಚಾನುಮನ್ಯತೇ।।
12306099c ದದಾತಿ ಚ ನರಶ್ರೇಷ್ಠ ಪ್ರತಿಗೃಹ್ಣಾತಿ ಯಚ್ಚ ಹ।
12306099E ದದಾತ್ಯವ್ಯಕ್ತಮೇವೈತತ್ಪ್ರತಿಗೃಹ್ಣಾತಿ ತಚ್ಚ ವೈ।।
ವಿದ್ವಾಂಸರು ಆ ಬ್ರಹ್ಮನನ್ನು ನಿತ್ಯ ಮತ್ತು ಪವಿತ್ರ ಎಂದು ಹೇಳುತ್ತಾರೆ. ಅದನ್ನು ತಿಳಿದುಕೊಂಡು ನೀನೂ ಕೂಡ ಪವಿತ್ರನಾಗು. ನರಶ್ರೇಷ್ಠ! ಕೊಟ್ಟಿದ್ದುದು, ಸ್ವೀಕರಿಸಿದವನು, ಕೊಡುವವನು, ದಾನಕ್ಕೆ ಅನುಮೋದಿಸಿದವನು ಎಲ್ಲರೂ ಆ ಅವ್ಯಕ್ತ ಪರಮಾತ್ಮನೇ ಹೌದು. ಪರಮಾತ್ಮನೇ ಈ ಎಲ್ಲವನ್ನೂ ಕೊಡುತ್ತಾನೆ ಮತ್ತು ತೆಗೆದುಕೊಳ್ಳುತ್ತಾನೆ.
12306100a ಆತ್ಮಾ ಹ್ಯೇವಾತ್ಮನೋ ಹ್ಯೇಕಃ ಕೋಽನ್ಯಸ್ತ್ವತ್ತೋಽಧಿಕೋ ಭವೇತ್।
12306100c ಏವಂ ಮನ್ಯಸ್ವ ಸತತಮನ್ಯಥಾ ಮಾ ವಿಚಿಂತಯ।।
ಪರಮಾತ್ಮನೊಬ್ಬನೇ ಆತ್ಮೀಯನು. ಅವನಿಗಿಂತ ಹೆಚ್ಚಿನ ಅತ್ಮೀಯನು ಬೇರೆ ಯಾರಾಗಲು ಸಾಧ್ಯ? ಸದಾ ನೀನು ಇದನ್ನೇ ಸ್ವೀಕರಿಸು; ಅನ್ಯಥಾ ಯೋಚಿಸಬೇಡ.
12306101a ಯಸ್ಯಾವ್ಯಕ್ತಂ ನ ವಿದಿತಂ ಸಗುಣಂ ನಿರ್ಗುಣಂ ಪುನಃ।
12306101c ತೇನ ತೀರ್ಥಾನಿ ಯಜ್ಞಾಶ್ಚ ಸೇವಿತವ್ಯಾವಿಪಶ್ಚಿತಾ।।
ಅವ್ಯಕ್ತ ಪ್ರಕೃತಿಯ ಜ್ಞಾನವಾಗಿರದ ಮತ್ತು ಸಗುಣ-ನಿರ್ಗುಣ ಪರಮಾತ್ಮನ ಅರಿವಾಗಿರದ ವಿದ್ವಾನನು ತೀರ್ಥಯಾತ್ರೆ ಮತ್ತು ಯಜ್ಞಗಳ ಅನುಷ್ಠಾನ ಮಾಡಬೇಕು.
12306102a ನ ಸ್ವಾಧ್ಯಾಯೈಸ್ತಪೋಭಿರ್ವಾ ಯಜ್ಞೈರ್ವಾ ಕುರುನಂದನ।
12306102c ಲಭತೇಽವ್ಯಕ್ತಸಂಸ್ಥಾನಂ ಜ್ಞಾತ್ವಾವ್ಯಕ್ತಂ ಮಹೀಪತೇ13।।
ಕುರುನಂದನ! ಮಹೀಪತೇ! ಸ್ವಾಧ್ಯಾಯ, ತಪಸ್ಸು ಅಥವಾ ಯಜ್ಞಗಳಿಂದ ಮೋಕ್ಷ ಅಥವಾ ಪರಮಾತ್ಮಪದವು ಪ್ರಾಪ್ತವಾಗುವುದಿಲ್ಲ. ಇವುಗಳ ಮುಖಾಂತರ ಮನುಷ್ಯನು ಪರಮಾತ್ಮನ ಸ್ಪಷ್ಟ ಜ್ಞಾನವನ್ನು ಪಡೆದುಕೊಳ್ಳಬಹುದು.
12306103a ತಥೈವ ಮಹತಃ ಸ್ಥಾನಮಾಹಂಕಾರಿಕಮೇವ ಚ।
12306103c ಅಹಂಕಾರಾತ್ಪರಂ ಚಾಪಿ ಸ್ಥಾನಾನಿ ಸಮವಾಪ್ನುಯಾತ್।।
ಹಾಗೆಯೇ ಮಹತ್ತತ್ತ್ವ ಮತ್ತು ಅಹಂಕಾರಗಳನ್ನು ಉಪಾಸನೆಮಾಡುವವನು ಅಹಂಕಾರವನ್ನು ಪಡೆದುಕೊಳ್ಳುತ್ತಾನೆ. ಆದರೆ ಅವರು ಮಹತ್ತತ್ತ್ವ ಮತ್ತು ಅಹಂಕಾರಕ್ಕಿಂತಲೂ ಶ್ರೇಷ್ಠವಾದ ಸ್ಥಾನವನ್ನು ಪಡೆದುಕೊಳ್ಳಬೇಕು.
12306104a ಯೇ ತ್ವವ್ಯಕ್ತಾತ್ಪರಂ ನಿತ್ಯಂ ಜಾನತೇ ಶಾಸ್ತ್ರತತ್ಪರಾಃ।
12306104c ಜನ್ಮಮೃತ್ಯುವಿಯುಕ್ತಂ ಚ ವಿಯುಕ್ತಂ ಸದಸಚ್ಚ ಯತ್।।
ಶಾಸ್ತ್ರಗಳ ಸ್ವಾಧ್ಯಾಯದಲ್ಲಿ ತತ್ಪರರಾಗಿರುವವರು ಪ್ರಕೃತಿಯ ಆಚೆಯಿರುವ ನಿತ್ಯ, ಜನ್ಮ-ಮೃತ್ಯು ರಹಿತ, ಮುಕ್ತ ಮತ್ತು ಸದಸತ್ಸ್ವರೂಪ ಪರಮಾತ್ಮನ ಜ್ಞಾನವನ್ನು ಪಡೆದುಕೊಳ್ಳುತ್ತಾರೆ.
12306105a ಏತನ್ಮಯಾಪ್ತಂ ಜನಕಾತ್ಪುರಸ್ತಾತ್ ತೇನಾಪಿ ಚಾಪ್ತಂ ನೃಪ ಯಾಜ್ಞವಲ್ಕ್ಯಾತ್।
12306105c ಜ್ಞಾನಂ ವಿಶಿಷ್ಟಂ ನ ತಥಾ ಹಿ ಯಜ್ಞಾ ಜ್ಞಾನೇನ ದುರ್ಗಂ ತರತೇ ನ ಯಜ್ಞೈಃ।।
ಈ ಜ್ಞಾನವು ನನಗೆ ಹಿಂದೆ ಜನಕನಿಂದಲೇ ದೊರಕಿತ್ತು ಮತ್ತು ಜನಕನಿಗೆ ಅದು ಯಾಜ್ಞವಲ್ಕ್ಯನಿಂದ ಪ್ರಾಪ್ತವಾಗಿತ್ತು. ಜ್ಞಾನವು ಎಲ್ಲಕ್ಕಿಂತಲೂ ಉತ್ತಮ ಸಾಧನವು. ಯಜ್ಞವು ಇದರ ಸಮನಾಗಲಾರದು. ಜ್ಞಾನದಿಂದಲೇ ಮನುಷ್ಯನು ಈ ದುರ್ಗಮ ಸಂಸಾರ ಸಾಗರದಿಂದ ಪಾರಾಗಬಲ್ಲನು. ಯಜ್ಞದಿಂದ ಅಲ್ಲ.
12306106a ದುರ್ಗಂ ಜನ್ಮ ನಿಧನಂ ಚಾಪಿ ರಾಜನ್ ನ ಭೂತಿಕಂ ಜ್ಞಾನವಿದೋ ವದಂತಿ।
12306106c ಯಜ್ಞೈಸ್ತಪೋಭಿರ್ನಿಯಮೈರ್ವ್ರತೈಶ್ಚ ದಿವಂ ಸಮಾಸಾದ್ಯ ಪತಂತಿ ಭೂಮೌ।।
ರಾಜನ್! ಭೌತಿಕ ಜನ್ಮ-ಮೃತ್ಯುಗಳನ್ನು ದಾಟುವುದು ಅತ್ಯಂತ ಕಠಿಣವೆಂದು ಜ್ಞಾನವಿದರು ಹೇಳುತ್ತಾರೆ. ಯಜ್ಞಾದಿಗಳಿಂದಲೂ ಆ ದುರ್ಗಮ ಸಂಕಟದಿಂದ ಪಾರಾಗಲು ಸಾಧ್ಯವಿಲ್ಲ. ಯಜ್ಞ, ತಪಸ್ಸು, ನಿಯಮ ಮತ್ತು ವ್ರತಗಳ ಮೂಲಕ ಜನರು ಸ್ವರ್ಗಲೋಕಕ್ಕೆ ಹೋಗುತ್ತಾರೆ ಮತ್ತು ಪುಣ್ಯ ಕ್ಷೀಣವಾಗಲು ಪುನಃ ಈ ಭೂಮಿಗೆ ಬೀಳುತ್ತಾರೆ.
12306107a ತಸ್ಮಾದುಪಾಸಸ್ವ ಪರಂ ಮಹಚ್ಚುಚಿ ಶಿವಂ ವಿಮೋಕ್ಷಂ ವಿಮಲಂ ಪವಿತ್ರಮ್।
12306107c ಕ್ಷೇತ್ರಜ್ಞವಿತ್ಪಾರ್ಥಿವ ಜ್ಞಾನಯಜ್ಞಮ್ ಉಪಾಸ್ಯ ವೈ ತತ್ತ್ವಮೃಷಿರ್ಭವಿಷ್ಯಸಿ।।
ಆದುದರಿಂದ ನೀನು ಪರ, ಮಹತ್, ಪವಿತ್ರ, ಕಲ್ಯಾಣಮಯ, ನಿರ್ಮಲ, ಶುದ್ಧ ಮತ್ತು ಮೋಕ್ಷಸ್ವರೂಪ ಬ್ರಹ್ಮನನ್ನು ಉಪಾಸಿಸು. ಪಾರ್ಥಿವ! ಕ್ಷೇತ್ರವನ್ನು ತಿಳಿದುಕೊಂಡು ಮತ್ತು ಜ್ಞಾನಯಜ್ಞವನ್ನು ಆಶ್ರಯಿಸಿ ನೀನು ನಿಶ್ಚಯವಾಗಿಯೂ ತತ್ತ್ವಜ್ಞಾನೀ ಋಷಿಯಾಗುತ್ತೀಯೆ.
12306108a ಉಪನಿಷದಮುಪಾಕರೋತ್ತದಾ ವೈ ಜನಕನೃಪಸ್ಯ ಪುರಾ ಹಿ ಯಾಜ್ಞವಲ್ಕ್ಯಃ।
12306108c ಯದುಪಗಣಿತಶಾಶ್ವತಾವ್ಯಯಂ ತಚ್ ಚುಭಮಮೃತತ್ವಮಶೋಕಮ್ ಋಚ್ಚತೀತಿ।।
ಹಿಂದೆ ಯಾಜ್ಞವಲ್ಕ್ಯನು ರಾಜಾ ಜನಕನಿಗೆ ಯಾವ ಉಪನಿಷತ್ತಿನ ಉಪದೇಶವನ್ನಿತ್ತಿದ್ದನೋ ಅದನ್ನು ಮನನ ಮಾಡುವುದರಿಂದ ಮನುಷ್ಯನು ಹಿಂದೆ ಹೇಳಿದ ಸನಾತನ ಅವಿನಾಶೀ ಶುಭ ಅಮೃತಮಯ ಮತ್ತು ಶೋಕರಹಿತ ಪರಬ್ರಹ್ಮ ಪರಮಾತ್ಮನನ್ನು ಸೇರುತ್ತಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಯಾಜ್ಞವಲ್ಕ್ಯಜನಕಸಂವಾದಸಮಾಪ್ತೌ ಷಡಾಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಯಾಜ್ಞವಲ್ಕ್ಯಜನಕಸಂವಾದಸಮಾಪ್ತಿ ಎನ್ನುವ ಮುನ್ನೂರಾಆರನೇ ಅಧ್ಯಾಯವು.-
ತ್ರಯೀ, ವಾರ್ತಾ ಮತ್ತು ದಂಡನೀತಿ ಇವು ಉಳಿದ ಮೂರು ವಿದ್ಯೆಗಳು (ಗೀತಾ ಪ್ರೆಸ್). ↩︎
-
ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಸ್ಊರ್ಯಮವ್ಯಕ್ತಮಿತ್ಯುಕ್ತಮತಿಸೂರ್ಯಸ್ತು ನಿಷ್ಕಲಃ। ಅವಿದ್ಯಾ ಪ್ರಕೃತಿಜ್ಞೇಯಾ ವಿದ್ಯಾ ಪುರುಷ ಉಚ್ಯತೇ।। (ಗೀತಾ ಪ್ರೆಸ್). ↩︎
-
ಇದಕ್ಕೆ ಮೊದಲು ಈ ಅಧಿಕ ಶ್ಲೋಕಾರ್ಧವಿದೆ: ತಥೈವ ವೇದ್ಯಮವ್ಯಕ್ತಮವೇದ್ಯಃ ಪುರುಷಸ್ತಥಾ। (ಗೀತಾ ಪ್ರೆಸ್). ↩︎
-
ಅಜ್ಞಾವುಭೌ ಧೃವೌ ಚೈವ (ಗೀತಾ ಪ್ರೆಸ್). ↩︎
-
ಯಶ್ಚ (ಗೀತಾ ಪ್ರೆಸ್). ↩︎
-
ಶಾಶ್ವತೋಽವ್ಯಕ್ತಸ್ತಥಾನ್ಯಃ (ಗೀತಾ ಪ್ರೆಸ್). ↩︎
-
ಭೃಗೋಃ (ಗೀತಾ ಪ್ರೆಸ್). ↩︎
-
ಪರತೋ (ಗೀತಾ ಪ್ರೆಸ್). ↩︎
-
ಪ್ರಕೃತಿಯ ಸಂಸರ್ಗ ರಹಿತ (ಗೀತಾ ಪ್ರೆಸ್). ↩︎
-
ಪ್ರಕೃತಿಯ ಸಂಸರ್ಗಯುಕ್ತ (ಗೀತಾ ಪ್ರೆಸ್). ↩︎
-
ಮನಸ್ತೇ (ಗೀತಾ ಪ್ರೆಸ್). ↩︎
-
ರಾಜಸಿಂಹ (ಗೀತಾ ಪ್ರೆಸ್). ↩︎
-
ಮಹೀಯತೇ (ಗೀತಾ ಪ್ರೆಸ್). ↩︎