261: ಗೋಕಪಿಲೀಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 261

ಸಾರ

ಪ್ರವೃತ್ತಿ ಮತ್ತು ನಿವೃತ್ತಿ ಮಾರ್ಗಗಳ ವಿಷಯ (1-61).

12261001 ಕಪಿಲ ಉವಾಚ।
12261001a ಏತಾವದನುಪಶ್ಯಂತೋ ಯತಯೋ ಯಾಂತಿ ಮಾರ್ಗಗಾಃ।
12261001c ನೈಷಾಂ ಸರ್ವೇಷು ಲೋಕೇಷು ಕಶ್ಚಿದಸ್ತಿ ವ್ಯತಿಕ್ರಮಃ।।

ಕಪಿಲನು ಹೇಳಿದನು: “ಯತಿಗಳು ತಮ್ಮ ಮಾರ್ಗದಲ್ಲಿ ಇವುಗಳನ್ನು ಕೇವಲ ನೋಡುತ್ತಾ ಹೋಗುತ್ತಿರುತ್ತಾರೆ. ಸರ್ವ ಲೋಕಗಳಲ್ಲಿಯೂ ಇವರನ್ನು ತಡೆಯುವವರು ಯಾರೂ ಇಲ್ಲ.

12261002a ನಿರ್ದ್ವಂದ್ವಾ ನಿರ್ನಮಸ್ಕಾರಾ ನಿರಾಶೀರ್ಬಂಧನಾ ಬುಧಾಃ।
12261002c ವಿಮುಕ್ತಾಃ ಸರ್ವಪಾಪೇಭ್ಯಶ್ಚರಂತಿ ಶುಚಯೋಽಮಲಾಃ।।

ದ್ವಂದ್ವಗಳಿಲ್ಲದ, ಯಾರಿಗೂ ನಮಸ್ಕರಿಸದ, ಆಸೆಗಳಿಲ್ಲದ ಮತ್ತು ಬಂಧನಗಳಿಲ್ಲದ ಆ ವಿವೇಕೀ ಶುಚಿ ಅಮಲರು ಸರ್ವಪಾಪಗಳಿಂದ ವಿಮುಕ್ತರಾಗಿ ಸಂಚರಿಸುತ್ತಿರುತ್ತಾರೆ.

12261003a ಅಪವರ್ಗೇಽಥ ಸಂತ್ಯಾಗೇ ಬುದ್ಧೌ ಚ ಕೃತನಿಶ್ಚಯಾಃ।
12261003c ಬ್ರಹ್ಮಿಷ್ಠಾ ಬ್ರಹ್ಮಭೂತಾಶ್ಚ ಬ್ರಹ್ಮಣ್ಯೇವ ಕೃತಾಲಯಾಃ।।

ಸರ್ವತ್ಯಾಗವು ಮೋಕ್ಷವನ್ನು ನೀಡುತ್ತದೆ ಎನ್ನುವುದನ್ನು ಅವರು ಬುದ್ಧಿಯಿಂದ ನಿಶ್ಚಯಮಾಡಿರುತ್ತಾರೆ. ಬ್ರಹ್ಮಿಷ್ಠರಾಗಿ, ಬ್ರಹ್ಮಭೂತರಾಗಿ ಅವರು ಬ್ರಹ್ಮನಲ್ಲಿಯೇ ನಿವಾಸಿಸುತ್ತಾರೆ.

12261004a ವಿಶೋಕಾ ನಷ್ಟರಜಸಸ್ತೇಷಾಂ ಲೋಕಾಃ ಸನಾತನಾಃ।
12261004c ತೇಷಾಂ ಗತಿಂ ಪರಾಂ ಪ್ರಾಪ್ಯ ಗಾರ್ಹಸ್ಥ್ಯೇ ಕಿಂ ಪ್ರಯೋಜನಮ್।।

ಶೋಕರಹಿತರೂ ರಜೋಗುಣವನ್ನು ಕಳೆದುಕೊಂಡವರೂ ಆದ ಅವರ ಲೋಕಗಳು ಸನಾತನವಾದವುಗಳು. ಅಂಥಹ ಗತಿಗಳನ್ನು ಪಡೆದ ಅವರಿಗೆ ಗೃಹಸ್ಥಾಶ್ರಮದಿಂದ ಏನು ಪ್ರಯೋಜನ?”

12261005 ಸ್ಯೂಮರಶ್ಮಿರುವಾಚ।
12261005a ಯದ್ಯೇಷಾ ಪರಮಾ ನಿಷ್ಠಾ1 ಯದ್ಯೇಷಾ ಪರಮಾ ಗತಿಃ।
12261005c ಗೃಹಸ್ಥಾನವ್ಯಪಾಶ್ರಿತ್ಯ ನಾಶ್ರಮೋಽನ್ಯಃ ಪ್ರವರ್ತತೇ।।

ಸ್ಯೂಮರಶ್ಮಿಯು ಹೇಳಿದನು: “ಇದು ಅವರ ಪರಮ ನಿಷ್ಠೆಯಾಗಿದ್ದರೆ ಮತ್ತು ಪರಮ ಗತಿಯಾಗಿದ್ದರೆ, ಗೃಹಸ್ಥಾಶ್ರಮವನ್ನು ಆಶ್ರಯಿಸದೇ ಬೇರೆ ಯಾವ ಆಶ್ರಮವೂ ಮುಂದುವರಿಯುವುದಿಲ್ಲ.

12261006a ಯಥಾ ಮಾತರಮಾಶ್ರಿತ್ಯ ಸರ್ವೇ ಜೀವಂತಿ ಜಂತವಃ।
12261006c ಏವಂ ಗೃಹಸ್ಥಮಾಶ್ರಿತ್ಯ ವರ್ತಂತ ಇತರೇಽಽಶ್ರಮಾಃ।।

ತಾಯಿಯನ್ನಾಶ್ರಯಿಸಿ ಸರ್ವ ಜಂತುಗಳೂ ಜೀವಿಸುವಂತೆ ಗೃಹಸ್ಥನನ್ನು ಆಶ್ರಯಿಸಿ ಇತರ ಆಶ್ರಮಗಳೂ ನಡೆಯುತ್ತವೆ.

12261007a ಗೃಹಸ್ಥ ಏವ ಯಜತೇ ಗೃಹಸ್ಥಸ್ತಪ್ಯತೇ ತಪಃ।
12261007c ಗಾರ್ಹಸ್ಥ್ಯಮಸ್ಯ ಧರ್ಮಸ್ಯ ಮೂಲಂ ಯತ್ಕಿಂ ಚಿದೇಜತೇ।।

ಗೃಹಸ್ಥನೇ ಯಜ್ಞಮಾಡುತ್ತಾನೆ. ಗೃಹಸ್ಥನೇ ತಪಸ್ಸನ್ನು ತಪಿಸುತ್ತಾನೆ. ಯಾವುದೇ ಧರ್ಮವನ್ನಾಚರಿಸಲು ಇಚ್ಛಿಸಿದರೂ ಅದಕ್ಕೆ ಗೃಹಸ್ಥಾಶ್ರಮವೇ ಮೂಲವು.

12261008a ಪ್ರಜನಾದ್ಧ್ಯಭಿನಿರ್ವೃತ್ತಾಃ ಸರ್ವೇ ಪ್ರಾಣಭೃತೋ ಮುನೇ।
12261008c ಪ್ರಜನಂ ಚಾಪ್ಯುತಾನ್ಯತ್ರ ನ ಕಥಂ ಚನ ವಿದ್ಯತೇ।।

ಮುನೇ! ಪ್ರಾಣವಿರುವ ಎಲ್ಲವೂ ಪ್ರಜನನದಲ್ಲಿ ತೊಡಗಿರುತ್ತದೆ. ಬೇರೆ ಯಾವ ರೀತಿಯಿಂದಲೂ ಸಂತಾನೋತ್ಪತ್ತಿಯಾಗಲು ಸಾಧ್ಯವಿಲ್ಲ.

12261009a ಯಾಸ್ತಾಃ ಸ್ಯುರ್ಬಹಿರೋಷಧ್ಯೋ ಬಹ್ವರಣ್ಯಾಸ್ತಥಾ ದ್ವಿಜ।
12261009c ಓಷಧಿಭ್ಯೋ ಬಹಿರ್ಯಸ್ಮಾತ್ ಪ್ರಾಣೀ ಕಶ್ಚಿನ್ನ ವಿದ್ಯತೇ।
12261009e ಕಸ್ಯೈಷಾ ವಾಗ್ಭವೇತ್ಸತ್ಯಾ ಮೋಕ್ಷೋ ನಾಸ್ತಿ ಗೃಹಾದಿತಿ।।

ದ್ವಿಜ! ಅರಣ್ಯದಲ್ಲಿ ಮತ್ತು ಬೆಟ್ಟಗಳಲ್ಲಿರುವ ಎಲ್ಲ ಓಷಧಿ-ಧಾನ್ಯಗಳು ಇದನ್ನೇ2 ಅವಲಂಬಿಸಿವೆ. ಪ್ರಾಣಗಳೂ ಈ ಓಷಧಿ-ಧಾನ್ಯಗಳನ್ನೇ ಅವಲಂಬಿಸಿವೆ. “ಗೃಹಸ್ಥಾಶ್ರಮದಿಂದ ಮೋಕ್ಷವು ಲಭಿಸುವುದಿಲ್ಲ” ಎಂಬ ಯಾರು ಮಾತು ತಾನೇ ಸತ್ಯವು?

12261010a ಅಶ್ರದ್ದಧಾನೈರಪ್ರಾಜ್ಞೈಃ ಸೂಕ್ಷ್ಮದರ್ಶನವರ್ಜಿತೈಃ।
12261010c ನಿರಾಶೈರಲಸೈಃ ಶ್ರಾಂತೈಸ್ತಪ್ಯಮಾನೈಃ ಸ್ವಕರ್ಮಭಿಃ।
12261010e ಶ್ರಮಸ್ಯೋಪರಮೋ ದೃಷ್ಟಃ ಪ್ರವ್ರಜ್ಯಾ ನಾಮ ಪಂಡಿತೈಃ।।

ಶ್ರದ್ಧೆಯಿಲ್ಲದ, ಅಪ್ರಾಜ್ಞ, ಸೂಕ್ಷ್ಮದೃಷ್ಟಿಯಿಲ್ಲದ, ನಿರಾಶರಾದ, ಆಲಸೀ, ಬಳಲಿದ ಮತ್ತು ಸ್ವಕರ್ಮಗಳಿಂದ ತಪಿಸುತ್ತಿರುವವರು ಮಾತ್ರ – ಅವರು ಪಂಡಿತರೆಂದೆನಿಸಿಕೊಂಡಿದ್ದರೂ – ಸಂನ್ಯಾಸಾಶ್ರಮವನ್ನು ಪರಮ ಶ್ರೇಷ್ಠವಾದುದೆಂದು ಕಾಣುತ್ತಾರೆ.

12261011a ತ್ರೈಲೋಕ್ಯಸ್ಯೈವ ಹೇತುರ್ಹಿ ಮರ್ಯಾದಾ ಶಾಶ್ವತೀ ಧ್ರುವಾ।
12261011c ಬ್ರಾಹ್ಮಣೋ ನಾಮ ಭಗವಾನ್ ಜನ್ಮಪ್ರಭೃತಿ ಪೂಜ್ಯತೇ।।

ಶಾಶ್ವತ ನಿಶ್ಚಿತ ಮರ್ಯಾದೆಯೇ ಮೂರೂ ಲೋಕಗಳ ಹೇತುವು. ಆದುದರಿಂದಲೇ ಬ್ರಾಹ್ಮಣನು ಅವನ ಜನ್ಮಪ್ರಭೃತಿ ಎಲ್ಲರಿಗೂ ಪೂಜನೀಯನಾಗಿದ್ದಾನೆ.

12261012a ಪ್ರಾಗ್ಗರ್ಭಾಧಾನಾನ್ಮಂತ್ರಾ ಹಿ ಪ್ರವರ್ತಂತೇ ದ್ವಿಜಾತಿಷು।
12261012c ಅವಿಶ್ರಂಭೇಷು ವರ್ತಂತೇ ವಿಶ್ರಂಭೇಷ್ವಪ್ಯಸಂಶಯಮ್।।

ಲೌಕಿಕ ಮತ್ತು ಪಾರಲೌಕಿಕ ಕರ್ಮಗಳಿಗಿರುವ ಮಂತ್ರಗಳು ದ್ವಿಜಾತಿಯವರಲ್ಲಿ ಗರ್ಭಾದಾನದ ಮೊದಲಿನಿಂದಲೇ ಇರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

12261013a ದಾಹಃ ಪುನಃ ಸಂಶ್ರಯಣೇ ಸಂಸ್ಥಿತೇ ಪಾತ್ರಭೋಜನಮ್।
12261013c ದಾನಂ ಗವಾಂ ಪಶೂನಾಂ ವಾ ಪಿಂಡಾನಾಂ ಚಾಪ್ಸು ಮಜ್ಜನಮ್।।

ದಹನಸಂಸ್ಕಾರ, ಪುನಃ ಶರೀರಪ್ರಾಪ್ತಿ, ಶ್ರಾದ್ಧ, ತರ್ಪಣ-ಗೋದಾನಗಳು, ವೃಷೋತ್ಸರ್ಗ, ಮತ್ತು ಪಿಂಡಗಳ ಮೇಲೆ ಜಲಸಿಂಚನ – ಈ ಎಲ್ಲ ಕಾರ್ಯಗಳಿಗೂ ವೇದಮಂತ್ರಗಳೇ ಮೂಲವು.

12261014a ಅರ್ಚಿಷ್ಮಂತೋ ಬರ್ಹಿಷದಃ ಕ್ರವ್ಯಾದಾಃ ಪಿತರಃ ಸ್ಮೃತಾಃ।
12261014c ಮೃತಸ್ಯಾಪ್ಯನುಮನ್ಯಂತೇ ಮಂತ್ರಾ ಮಂತ್ರಾಶ್ಚ ಕಾರಣಮ್।।

ಅರ್ಚಿಷ್ಮಂತರು, ಬರ್ಹಿಷದರು ಮತ್ತು ಕ್ರವ್ಯಾದರು ಎಂಬ ಪಿತೃಗಳ ಕುರಿತು ಹೇಳುತ್ತಾರೆ. ಅವರು ಮೃತನ ಕಾರ್ಯಗಳಲ್ಲಿ ಮಂತ್ರಪಠನದ ಅನುಮತಿಯನ್ನು ನೀಡುತ್ತಾರೆ. ಆದುದರಿಂದ ಮಂತ್ರಗಳೇ ಎಲ್ಲ ಧರ್ಮಗಳಿಗೂ ಮೂಲ ಕಾರಣಗಳು.

12261015a ಏವಂ ಕ್ರೋಶತ್ಸು ವೇದೇಷು ಕುತೋ ಮೋಕ್ಷೋಽಸ್ತಿ ಕಸ್ಯ ಚಿತ್।
12261015c ಋಣವಂತೋ ಯದಾ ಮರ್ತ್ಯಾಃ ಪಿತೃದೇವದ್ವಿಜಾತಿಷು।।

ಮನುಷ್ಯರು ಪಿತೃ-ದೇವ-ಋಷಿಗಳ ಋಣವಂತರಾಗಿಯೇ ಹುಟ್ಟುತ್ತಾರೆ ಎಂದು ವೇದಗಳು ಕೂಗಿಕೊಳ್ಳುತ್ತಿರುವಾಗ ಇವುಗಳಿಂದ ಮುಕ್ತನಾಗದೇ ಮನುಷ್ಯನಿಗೆ ಮೋಕ್ಷವೆಲ್ಲಿಂದ?

12261016a ಶ್ರಿಯಾ ವಿಹೀನೈರಲಸೈಃ ಪಂಡಿತೈರಪಲಾಪಿತಮ್।
12261016c ವೇದವಾದಾಪರಿಜ್ಞಾನಂ ಸತ್ಯಾಭಾಸಮಿವಾನೃತಮ್।।

ಶ್ರೀಹೀನ ಆಲಸ್ಯ ಪಂಡಿತರು ಕರ್ಮದ ತ್ಯಾಗದಿಂದ ಮೋಕ್ಷವು ದೊರೆಯುತ್ತದೆ ಎಂದು ಅಪಪ್ರಚಾರ ಮಾಡಿದ್ದಾರೆ. ಆದರೆ ಅದು ಸತ್ಯವಾಗಿ ತೋರುವ ಸುಳ್ಳು, ವೇದವಾದಗಳ ಅಜ್ಞಾನವೂ ಆಗಿದೆ.

12261017a ನ ವೈ ಪಾಪೈರ್ಹ್ರಿಯತೇ ಕೃಷ್ಯತೇ ವಾ ಯೋ ಬ್ರಾಹ್ಮಣೋ ಯಜತೇ ವೇದಶಾಸ್ತ್ರೈಃ।
12261017c ಊರ್ಧ್ವಂ ಯಜ್ಞಃ ಪಶುಭಿಃ ಸಾರ್ಧಮೇತಿ ಸಂತರ್ಪಿತಸ್ತರ್ಪಯತೇ ಚ ಕಾಮೈಃ।।

ವೇದಶಾಸ್ತ್ರಗಳಿಗನುಸಾರವಾಗಿ ಯಜ್ಞಮಾಡುವ ಬ್ರಾಹ್ಮಣನನ್ನು ಪಾಪಗಳು ಆಕ್ರಮಣಿಸುವುದಿಲ್ಲ ಅಥವಾ ತಮ್ಮ ಕಡೆ ಸೆಳೆದುಕೊಳ್ಳುವುದಿಲ್ಲ. ತಾನೂ ಕಾಮಗಳಿಂದ ತೃಪ್ತನಾಗಿ ಮತ್ತು ಇತರರನ್ನೂ ತೃಪ್ತಿಪಡಿಸಿ ಅವನು ಯಜ್ಞಪಶುಗಳೊಂದಿಗೆ ಮೇಲಿನ ಲೋಕಗಳಿಗೆ ಹೋಗುತ್ತಾನೆ.

12261018a ನ ವೇದಾನಾಂ ಪರಿಭವಾನ್ನ ಶಾಠ್ಯೇನ ನ ಮಾಯಯಾ।
12261018c ಮಹತ್ ಪ್ರಾಪ್ನೋತಿ ಪುರುಷೋ ಬ್ರಹ್ಮ ಬ್ರಹ್ಮಣಿ ವಿಂದತಿ।।

ವೇದಗಳನ್ನು ನಿಂದಿಸಿ ಅಥವಾ ಉದ್ಧಟತನದಿಂದ ಅಥವಾ ಮಾಯೆಯಿಂದ ಪುರುಷನು ಪರಬ್ರಹ್ಮನನ್ನು ಪಡೆದುಕೊಳ್ಳುವುದಿಲ್ಲ. ವೇದೋಕ್ತ ಕರ್ಮಗಳ ಅನುಷ್ಠಾನದಿಂದಲೇ ಅವನು ಬ್ರಹ್ಮಪದವನ್ನು ಪಡೆದುಕೊಳ್ಳುತ್ತಾನೆ.”

12261019 ಕಪಿಲ ಉವಾಚ।
12261019a ದರ್ಶಂ ಚ ಪೌರ್ಣಮಾಸಂ ಚ ಅಗ್ನಿಹೋತ್ರಂ ಚ ಧೀಮತಾಮ್।
12261019c ಚಾತುರ್ಮಾಸ್ಯಾನಿ ಚೈವಾಸಂಸ್ತೇಷು ಯಜ್ಞಃ3 ಸನಾತನಃ।।

ಕಪಿಲನು ಹೇಳಿದನು: “ದರ್ಶ, ಪೌರ್ಣಮಾಸ, ಅಗ್ನಿಹೋತ್ರ ಮತ್ತು ಚಾತುರ್ಮಾಸ್ಯಗಳು ಧೀಮತರಿಗೆ ಹೇಳಲ್ಪಟ್ಟಿವೆ. ಸನಾತನ ಯಜ್ಞವು ಇವುಗಳನ್ನೇ ಆಶ್ರಯಿಸಿವೆ4.

12261020a ಅನಾರಂಭಾಃ ಸುಧೃತಯಃ ಶುಚಯೋ ಬ್ರಹ್ಮಸಂಶ್ರಿತಾಃ।
12261020c ಬ್ರಹ್ಮಣೈವ ಸ್ಮ ತೇ ದೇವಾಂಸ್ತರ್ಪಯಂತ್ಯಮೃತೈಷಿಣಃ।।

ಅನಾರಂಭರೂ5, ಉತ್ತಮ ಧೃತಿಯುಳ್ಳವರೂ, ಶುಚಿಗಳೂ ಆದ ಬ್ರಹ್ಮಸಂಶ್ರಿತ ಮನೀಷಿಣರು ಬ್ರಹ್ಮಜ್ಞಾನದಿಂದಲೇ ದೇವತೆಗಳನ್ನು ತೃಪ್ತಿಪಡಿಸುತ್ತಾರೆ.

12261021a ಸರ್ವಭೂತಾತ್ಮಭೂತಸ್ಯ ಸರ್ವಭೂತಾನಿ ಪಶ್ಯತಃ।
12261021c ದೇವಾಪಿ ಮಾರ್ಗೇ ಮುಹ್ಯಂತಿ ಅಪದಸ್ಯ ಪದೈಷಿಣಃ।।

ಸರ್ವಪ್ರಾಣಿಗಳಿಗೂ ಆತ್ಮರೂಪನಾಗಿರುವ ಮತ್ತು ಸರ್ವಭೂತಗಳನ್ನೂ ಆತ್ಮಭಾವದಿಂದ ಕಾಣುವ ಯತಿಯ ಮಾರ್ಗವನ್ನು ನೋಡಲು ಇಚ್ಛಿಸುವ ದೇವತೆಗಳೂ ಕೂಡ ಮಾರ್ಗಮಧ್ಯದಲ್ಲಿ ಭ್ರಾಂತರಾಗುತ್ತಾರೆ.

12261022a ಚತುರ್ದ್ವಾರಂ ಪುರುಷಂ ಚತುರ್ಮುಖಂ ಚತುರ್ಧಾ ಚೈನಮುಪಯಾತಿ ನಿಂದಾ6
12261022c ಬಾಹುಭ್ಯಾಂ ವಾಚ ಉದರಾದುಪಸ್ಥಾತ್ ತೇಷಾಂ ದ್ವಾರಂ ದ್ವಾರಪಾಲೋ ಬುಭೂಷೇತ್।।

ಒಳಗಿರುವ ಪುರುಷನಿಗೆ ನಾಲ್ಕು ದ್ವಾರಗಳಿವೆ, ನಾಲ್ಕು ಮುಖಗಳಿವೆ, ಮತ್ತು ನಾಲ್ಕು ಕಡೆಗಳಿಂದ ಅವನ ನಿಂದನೆಯಾಗಬಹುದು. ಆದುದರಿಂದ ಬಾಹುಗಳು, ಮಾತು, ಹೊಟ್ಟೆ ಮತ್ತು ಉಪಸ್ಥಗಳನ್ನು ದ್ವಾರಪಾಲಕರನ್ನಾಗಿ ಮಾಡಿಕೊಳ್ಳಬೇಕು.7

12261023a ನಾಕ್ಷೈರ್ದೀವ್ಯೇನ್ನಾದದೀತಾನ್ಯವಿತ್ತಂ ನ ವಾಯೋನೀಯಸ್ಯ ಶೃತಂ8 ಪ್ರಗೃಹ್ಣೇತ್।
12261023c ಕ್ರುದ್ಧೋ ನ ಚೈವ ಪ್ರಹರೇತ ಧೀಮಾಂಸ್ ತಥಾಸ್ಯ ತತ್ಪಾಣಿಪಾದಂ ಸುಗುಪ್ತಮ್।।

ಬುದ್ಧಿವಂತನು ಪಣವನ್ನಿಟ್ಟು ಜೂಜಾಡಬಾರದು. ಪರರ ಸ್ವತ್ತನ್ನು ಅಪಹರಿಸಬಾರದು. ನೀಚರಿಂದ ಅನ್ನವನ್ನು ಸ್ವೀಕರಿಸಬಾರದು. ಕೋಪದಿಂದ ಯಾರನ್ನೂ ಪ್ರಹರಿಸಬಾರದು. ಇದರಿಂದ ಕೈಕಾಲುಗಳೆಂಬ ದ್ವಾರವು ಸುರಕ್ಷಿತವಾಗಿರುತ್ತದೆ.

12261024a ನಾಕ್ರೋಶಮರ್ಚೇನ್ನ ಮೃಷಾ ವದೇಚ್ಚ ನ ಪೈಶುನಂ ಜನವಾದಂ ಚ ಕುರ್ಯಾತ್।
12261024c ಸತ್ಯವ್ರತೋ ಮಿತಭಾಷೋಽಪ್ರಮತ್ತಸ್ ತಥಾಸ್ಯ ವಾಗ್ದ್ವಾರಮಥೋ ಸುಗುಪ್ತಮ್।।

ಯಾರಮೇಲೂ ರೋಷದಿಂದ ಕೂಗಾಡಬಾರದು. ಯಾರೊಡನೆಯೂ ವ್ಯರ್ಥವಾಗಿ ಮಾತನಾಡಬಾರದು. ಯಾರ ಮೇಲೂ ಚಾಡಿಯನ್ನು ಹೇಳಬಾರದು. ಯಾರ ಮೇಲೂ ವ್ಯರ್ಥ ಅಪವಾದವನ್ನು ಹೊರಿಸಬಾರದು. ಸತ್ಯವ್ರತನಾಗಿರಬೇಕು. ಮಿತಭಾಷಿಯಾಗಿರಬೇಕು. ಅಪ್ರಮತ್ತನಾಗಿರಬೇಕು. ಇದರಿಂದ ಮಾತೆಂಬ ದ್ವಾರವು ಸುರಕ್ಷಿತವಾಗಿರುತ್ತದೆ.

12261025a ನಾನಾಶನಃ ಸ್ಯಾನ್ನ ಮಹಾಶನಃ ಸ್ಯಾದ್ ಅಲೋಲುಪಃ ಸಾಧುಭಿರಾಗತಃ ಸ್ಯಾತ್।
12261025c ಯಾತ್ರಾರ್ಥಮಾಹಾರಮಿಹಾದದೀತ ತಥಾಸ್ಯ ಸ್ಯಾಜ್ಜಾಠರೀ ದ್ವಾರಗುಪ್ತಿಃ।।

ಆಹಾರವನ್ನು ತಿನ್ನದೆಯೇ ಇರಬಾರದು. ಅತಿಯಾಗಿಯೂ ತಿನ್ನಬಾರದು. ಭಕ್ಷ್ಯ-ಭೋಜ್ಯಗಳಲ್ಲಿ ಆಸೆಯಿರಬಾರದು. ಬಂದ ಸತ್ಪುರುಷರಿಗೆ ಮೊದಲು ಆಹಾರವನ್ನು ನೀಡಬೇಕು. ಜೀವನಿರ್ವಹಣೆಗೆ ಬೇಕಾಗುವಷ್ಟೇ ಆಹಾರವನ್ನು ಸೇವಿಸಬೇಕು. ಇದರಿಂದ ಹೊಟ್ಟೆಯೆಂಬ ದ್ವಾರವು ಸುರಕ್ಷಿತವಾಗಿರುತ್ತದೆ.

12261026a ನ ವೀರಪತ್ನೀಂ ವಿಹರೇತ ನಾರೀಂ ನ ಚಾಪಿ ನಾರೀಮನೃತಾವಾಹ್ವಯೀತ।
12261026c ಭಾರ್ಯಾವ್ರತಂ ಹ್ಯಾತ್ಮನಿ ಧಾರಯೀತ ತಥಾಸ್ಯೋಪಸ್ಥದ್ವಾರಗುಪ್ತಿರ್ಭವೇತ।।

ವೀರನ ಪತ್ನಿಯೊಡನೆ ವಿಹರಿಸಬಾರದು9. ತನ್ನ ಪತ್ನಿಯೇ ಆದರೂ ಋತುಸಮಯದಲ್ಲಲ್ಲದೇ ಬೇರೆ ಸಮಯದಲ್ಲಿ ಸಮಾಗಮಕ್ಕೆ ಕರೆಯಬಾರದು. ಭಾರ್ಯಾವ್ರತ10ವನ್ನು ಮನಸ್ಸಿನಲ್ಲಿಟ್ಟುಕೊಂಡಿರಬೇಕು. ಇದರಿಂದ ಉಪಸ್ಥವೆಂಬ ದ್ವಾರವು ಸುರಕ್ಷಿತವಾಗಿರುತ್ತದೆ.

12261027a ದ್ವಾರಾಣಿ ಯಸ್ಯ ಸರ್ವಾಣಿ ಸುಗುಪ್ತಾನಿ ಮನೀಷಿಣಃ।
12261027c ಉಪಸ್ಥಮುದರಂ ಬಾಹೂ ವಾಕ್ಚತುರ್ಥೀ ಸ ವೈ ದ್ವಿಜಃ।।

ಬಾಹುಗಳು, ಉಪಸ್ಥ, ಉದರ ಮತ್ತು ಮಾತೆಂಬ ಈ ಎಲ್ಲ ನಾಲ್ಕು ದ್ವಾರಗಳೂ ಸುರಕ್ಷಿತವಾಗಿರುವ ಮನೀಷಿಣಿಯೇ ದ್ವಿಜನು.

12261028a ಮೋಘಾನ್ಯಗುಪ್ತದ್ವಾರಸ್ಯ ಸರ್ವಾಣ್ಯೇವ ಭವಂತ್ಯುತ।
12261028c ಕಿಂ ತಸ್ಯ ತಪಸಾ ಕಾರ್ಯಂ ಕಿಂ ಯಜ್ಞೇನ ಕಿಮಾತ್ಮನಾ।।

ಈ ದ್ವಾರಗಳು ಸುರಕ್ಷಿತವಾಗಿಲ್ಲದೇ ಇರುವವನಿಗೆ ಎಲ್ಲವೂ ವ್ಯರ್ಥವಾಗುತ್ತವೆ. ಅಂಥವನಿಗೆ ತಪಸ್ಸಿನಿಂದಾಗಲೀ, ಯಜ್ಞದಿಂದಾಗಲೀ, ಆತ್ಮಚಿಂತನೆಯಿಂದಾಗಲೀ ಯಾವ ಪ್ರಯೋಜನವಿದೆ?

12261029a ಅನುತ್ತರೀಯವಸನಮನುಪಸ್ತೀರ್ಣಶಾಯಿನಮ್।
12261029c ಬಾಹೂಪಧಾನಂ ಶಾಮ್ಯಂತಂ ತಂ ದೇವಾ ಬ್ರಾಹ್ಮಣಂ ವಿದುಃ।।

ಉತ್ತರೀಯದ ಹೊದಿಕೆಯಿಲ್ಲದೇ, ಹಾಸಿಗೆಯಿಲ್ಲದ ಬರಿಯ ನೆಲದಮೇಲೆ, ತೋಳನ್ನೇ ತಲೆದಿಂಬನ್ನಾಗಿ ಮಾಡಿಕೊಂಡು ಶಾಂತನಾಗಿ ಮಲಗುವವನನ್ನು ದೇವತೆಗಳು ಬ್ರಾಹ್ಮಣನೆಂದೇ ತಿಳಿಯುತ್ತಾರೆ.

12261030a ದ್ವಂದ್ವಾರಾಮೇಷು ಸರ್ವೇಷು ಯ ಏಕೋ ರಮತೇ ಮುನಿಃ।
12261030c ಪರೇಷಾಮನನುಧ್ಯಾಯಂಸ್ತಂ ದೇವಾ ಬ್ರಾಹ್ಮಣಂ ವಿದುಃ।।

ಸರ್ವ ದ್ವಂದ್ವಗಳಲ್ಲಿಯೂ ಏಕೀ ಭಾವವನ್ನು ಹೊಂದಿ ಏಕಾಕಿಯಾಗಿ ರಮಿಸುವ ಮತ್ತು ಇತರರ ಕುರಿತು ಚಿಂತಿಸದ ಮುನಿಯನ್ನು ದೇವತೆಗಳು ಬ್ರಾಹ್ಮಣನೆಂದೇ ತಿಳಿಯುತ್ತಾರೆ.

12261031a ಯೇನ ಸರ್ವಮಿದಂ ಬುದ್ಧಂ ಪ್ರಕೃತಿರ್ವಿಕೃತಿಶ್ಚ ಯಾ।
12261031c ಗತಿಜ್ಞಃ ಸರ್ವಭೂತಾನಾಂ ತಂ ದೇವಾ ಬ್ರಾಹ್ಮಣಂ ವಿದುಃ।।

ಈ ಪ್ರಕೃತಿ-ವಿಕೃತಿಗಳೆಲ್ಲವನ್ನೂ ತಿಳಿದಿರುವ ಮತ್ತು ಸರ್ವಭೂತಗಳ ಗತಿಯನ್ನೂ ತಿಳಿದಿರುವವನನ್ನು ದೇವತೆಗಳು ಬ್ರಾಹ್ಮಣನೆಂದೇ ತಿಳಿಯುತ್ತಾರೆ.

12261032a ಅಭಯಂ ಸರ್ವಭೂತೇಭ್ಯಃ ಸರ್ವೇಷಾಮಭಯಂ ಯತಃ।
12261032c ಸರ್ವಭೂತಾತ್ಮಭೂತೋ ಯಸ್ತಂ ದೇವಾ ಬ್ರಾಹ್ಮಣಂ ವಿದುಃ।।

ಸರ್ವಭೂತಗಳಿಗೂ ಅಭಯನಾದ ಮತ್ತು ಸರ್ವರಿಗೂ ಅಭಯನಾದ ಸರ್ವಭೂತಾತ್ಮಭೂತನನ್ನು ದೇವತೆಗಳು ಬ್ರಾಹ್ಮಣನೆಂದೇ ತಿಳಿಯುತ್ತಾರೆ.

12261033a ನಾಂತರೇಣಾನುಜಾನಂತಿ ವೇದಾನಾಂ ಯತ್ಕ್ರಿಯಾಫಲಮ್।
12261033c ಅನುಜ್ಞಾಯ ಚ ತತ್ಸರ್ವಮನ್ಯದ್ರೋಚಯತೇಽಫಲಮ್।।

ಅಂಥವನು ವೇದಗಳು ಮತ್ತು ಕ್ರಿಯಾಫಲಗಳ ಕುರಿತು ಯೋಚಿಸುವುದಿಲ್ಲ. ಆದರೆ ಅವು ಹೇಳುವುದೆಲ್ಲವನ್ನೂ ಸ್ವೀಕರಿಸಿ ಫಲವಿಲ್ಲದೇ ಇರುವುದರಲ್ಲಿ ಹೆಚ್ಚು ರುಚಿಯನ್ನಿಡುತ್ತಾನೆ.11

1212261034a ಫಲವಂತಿ ಚ ಕರ್ಮಾಣಿ ವ್ಯುಷ್ಟಿಮಂತಿ ಧ್ರುವಾಣಿ ಚ।
12261034c ವಿಗುಣಾನಿ ಚ ಪಶ್ಯಂತಿ ತಥಾನೈಕಾಂತಿಕಾನಿ ಚ।।

ಆದರೆ ಅವನ ಕರ್ಮಗಳು ಫಲವನ್ನು ಕೊಡುತ್ತವೆ ಎನ್ನುವುದು ನಿಶ್ಚಿತವು. ಆ ಫಲಗಳಿಗೆ ಗುಣಗಳಿರುವಂತೆ ಕಾಣುವುದಿಲ್ಲ ಮತ್ತು ಆ ಫಲಗಳು ಏಕಾಂತದಲ್ಲಿ ವ್ಯಕ್ತಿಗತವಾದ ಅನುಭವವಾಗಿರುತ್ತವೆ.13

12261035a ಗುಣಾಶ್ಚಾತ್ರ ಸುದುರ್ಜ್ಞೇಯಾ ಜ್ಞಾತಾಶ್ಚಾಪಿ ಸುದುಷ್ಕರಾಃ।
12261035c ಅನುಷ್ಠಿತಾಶ್ಚಾಂತವಂತ ಇತಿ ತ್ವಮನುಪಶ್ಯಸಿ।।

ಆ ಗುಣಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ. ಪಡೆದುಕೊಳ್ಳುವುದೂ ಅತಿ ಕಷ್ಟ. ಆದರೆ ವೈದಿಕಕರ್ಮಾನುಷ್ಠಾನದ ಫಲಗಳು ಕೊನೆಗೊಳ್ಳುವಂಥವು. ಇದನ್ನು ನೀನೂ ತಿಳಿದುಕೊಂಡಿದ್ದೀಯೆ.14

12261036 ಸ್ಯೂಮರಶ್ಮಿರುವಾಚ।
12261036a ಯಥಾ ಚ ವೇದಪ್ರಾಮಾಣ್ಯಂ ತ್ಯಾಗಶ್ಚ ಸಫಲೋ ಯಥಾ।
12261036c ತೌ ಪಂಥಾನಾವುಭೌ ವ್ಯಕ್ತೌ ಭಗವಂಸ್ತದ್ಬ್ರವೀಹಿ ಮೇ।।

ಸ್ಯೂಮರಶ್ಮಿಯು ಹೇಳಿದನು: “ಭಗವನ್! ತ್ಯಾಗ ಮತ್ತು ಫಲ ಇವೆರಡಕ್ಕೂ ವೇದಗಳಲ್ಲಿ ಪ್ರಮಾಣಗಳಿವೆ. ಇವೆರಡು ಮಾರ್ಗಗಳೂ ವೇದಗಳಲ್ಲಿ ವ್ಯಕ್ತವಾಗಿವೆ. ಅವುಗಳ ಕುರಿತು ನನಗೆ ಹೇಳು.”

12261037 ಕಪಿಲ ಉವಾಚ।
12261037a ಪ್ರತ್ಯಕ್ಷಮಿಹ ಪಶ್ಯಂತಿ ಭವಂತಃ ಸತ್ಪಥೇ ಸ್ಥಿತಾಃ।
12261037c ಪ್ರತ್ಯಕ್ಷಂ ತು ಕಿಮತ್ರಾಸ್ತಿ ಯದ್ಭವಂತ ಉಪಾಸತೇ।।

ಕಪಿಲನು ಹೇಳಿದನು: “ಸತ್ಪಥದಲ್ಲಿರುವ ನೀವು ಯೋಗಮಾರ್ಗದ ಫಲವನ್ನು ಪ್ರತ್ಯಕ್ಷ ಕಾಣುತ್ತಿದ್ದೀರಿ. ನೀನು ಹೇಳುತ್ತಿರುವ ಯಜ್ಞಾನುಷ್ಠಾನಕರ್ಮಗಳ ಪ್ರತ್ಯಕ್ಷ ಫಲವು ಯಾವುದು?”

12261038 ಸ್ಯೂಮರಶ್ಮಿರುವಾಚ।
12261038a ಸ್ಯೂಮರಶ್ಮಿರಹಂ ಬ್ರಹ್ಮನ್ ಜಿಜ್ಞಾಸಾರ್ಥಮಿಹಾಗತಃ।
12261038c ಶ್ರೇಯಸ್ಕಾಮಃ ಪ್ರತ್ಯವೋಚಮಾರ್ಜವಾನ್ನ ವಿವಕ್ಷಯಾ।।

ಸ್ಯೂಮರಶ್ಮಿಯು ಹೇಳಿದನು: “ಬ್ರಹ್ಮನ್! ನಾನು ಸ್ಯೂಮರಶ್ಮಿ. ಜಿಜ್ಞಾಸೆಗೆಂದೇ15 ನಾನು ಇಲ್ಲಿಗೆ ಬಂದಿದ್ದೇನೆ. ಶ್ರೇಯಸ್ಕರವಾದುದನ್ನು ಬಯಸುತ್ತೇನೆ. ಆದುದರಿಂದ ನಾನು ಆರ್ಜವದಿಂದ ಈ ಸಂವಾದವನ್ನು ಪ್ರಾರಂಭಿಸಿದೆ. ವಾದಕ್ಕಾಗಿ ಅಲ್ಲ.

12261038e ಇಮಂ ಚ ಸಂಶಯಂ ಘೋರಂ ಭಗವಾನ್ ಪ್ರಬ್ರವೀತು ಮೇ।
12261039a ಪ್ರತ್ಯಕ್ಷಮಿಹ ಪಶ್ಯಂತೋ ಭವಂತಃ ಸತ್ಪಥೇ ಸ್ಥಿತಾಃ।।

ಭಗವಾನ್! “ಸತ್ಪಥದಲ್ಲಿರುವ ನೀವು ಯೋಗಮಾರ್ಗದ ಫಲವನ್ನು ಪ್ರತ್ಯಕ್ಷ ಕಾಣುತ್ತಿದ್ದೀರಿ” ಎಂಬ ನಿನ್ನ ಈ ಮಾತಿನ ಕುರಿತು ನನ್ನಲ್ಲಿ ಈ ಘೋರ ಸಂಶಯವೊಂದು ಉಂಟಾಗಿದೆ. ಅದರ ಕುರಿತು ಹೇಳಬೇಕು.

12261039c ಕಿಮತ್ರ ಪ್ರತ್ಯಕ್ಷತಮಂ ಭವಂತೋ ಯದುಪಾಸತೇ।
12261039e ಅನ್ಯತ್ರ ತರ್ಕಶಾಸ್ತ್ರೇಭ್ಯ ಆಗಮಾಚ್ಚ ಯಥಾಗಮಮ್।।

ನೀನು ಉಪಾಸಿಸುವ ಮಾರ್ಗದಲ್ಲಿ ಪ್ರತ್ಯಕ್ಷವಾಗಿರುವುದು ಯಾವುದು? ತರ್ಕಶಾಸ್ತ್ರಗಳನ್ನು ಬಿಟ್ಟು ಆಗಮಶಾಸ್ತ್ರಗಳನ್ನು ನಾನು ಅಧ್ಯಯನ ಮಾಡಿದ್ದೇನೆ.

12261040a ಆಗಮೋ ವೇದವಾದಸ್ತು ತರ್ಕಶಾಸ್ತ್ರಾಣಿ ಚಾಗಮಃ।
12261040c ಯಥಾಗಮಮುಪಾಸೀತ16 ಆಗಮಸ್ತತ್ರ ಸಿಧ್ಯತಿ।
12261040e ಸಿದ್ಧಿಃ ಪ್ರತ್ಯಕ್ಷರೂಪಾ ಚ ದೃಶ್ಯತ್ಯಾಗಮನಿಶ್ಚಯಾತ್।।

ವೇದವಾದಗಳು ಆಗಮಗಳು. ತರ್ಕಶಾಸ್ತ್ರಗಳೂ ಆಗಮಗಳೇ. ಆಗಮದಲ್ಲಿರುವವುಗಳ ಅನುಷ್ಠಾನದಿಂದ ಸಿದ್ಧಿಯುಂಟಾಗುತ್ತದೆ. ಸಿದ್ಧಿಯು ಪ್ರತ್ಯಕ್ಷರೂಪವಾಗಿರುತ್ತದೆ. ಇದು ಆಗಮಗಳ ನಿಶ್ಚಯವು.

12261041a ನೌರ್ನಾವೀವ ನಿಬದ್ಧಾ ಹಿ ಸ್ರೋತಸಾ ಸನಿಬಂಧನಾ।
12261041c ಹ್ರಿಯಮಾಣಾ ಕಥಂ ವಿಪ್ರ ಕುಬುದ್ಧೀಂಸ್ತಾರಯಿಷ್ಯತಿ।
12261041e ಏತದ್ಬ್ರವೀತು ಭಗವಾನುಪಪನ್ನೋಽಸ್ಮ್ಯಧೀಹಿ ಭೋಃ।।

ವಿಪ್ರ! ಒಂದು ಕಡೆ ಹೋಗಬೇಕೆಂದಿರುವ ನಾವೆಗೆ ಇನ್ನೊಂದು ಕಡೆ ಹೋಗಬೇಕೆಂದಿರುವ ನಾವೆಯನ್ನು ಕಟ್ಟಿದರೆ ಪ್ರವಾಹವು ಅದನ್ನು ಎಲ್ಲಿಗೆ ಕೊಂಡ್ಯೊಯ್ಯುತ್ತದೆ? ಹಾಗೆಯೇ ಪೂರ್ವಜನ್ಮದ ಕರ್ಮಗಳ ವಾಸನೆಗಳಿಂದ ಕಟ್ಟಲ್ಪಟ್ಟಿರುವ ನಮ್ಮ ಈ ಕರ್ಮಮಯೀ ನೌಕೆಯು ನಮ್ಮಂಥಹ ಕುಬುದ್ಧಿಗಳನ್ನು ಹೇಗೆ ಭವಸಾಗರದಿಂದ ಪಾರುಮಾಡಬಲ್ಲದು? ಭಗವನ್! ಇದನ್ನು ನನಗೆ ಹೇಳು. ನಾನು ನಿನ್ನ ಶರಣು ಬಂದಿದ್ದೇನೆ. ನನಗೆ ಉಪದೇಶಿಸು.”

12261042a ನೈವ ತ್ಯಾಗೀ ನ ಸಂತುಷ್ಟೋ ನಾಶೋಕೋ ನ ನಿರಾಮಯಃ।
12261042c ನ ನಿರ್ವಿವಿತ್ಸೋ ನಾವೃತ್ತೋ ನಾಪವೃತ್ತೋಽಸ್ತಿ ಕಶ್ಚನ।।

ವಾಸ್ತವವಾಗಿ ಈ ಜಗತ್ತಿನಲ್ಲಿ ತ್ಯಾಗಿ ಯಾರೂ ಇಲ್ಲ, ಸಂತುಷ್ಟನೂ ಇಲ್ಲ, ಶೋಕವಿಲ್ಲದವನೂ ಇಲ್ಲ, ನಿರೋಗಿಯೂ ಇಲ್ಲ. ಕರ್ಮಮಾಡುವ ಇಚ್ಛೆಯು ಶೂನ್ಯವಾಗಿರುವವರೂ ಯಾರೂ ಇಲ್ಲ. ಆಸಕ್ತಿ ರಹಿತರೂ ಇಲ್ಲ. ಸರ್ವಥಾ ಕರ್ಮಗಳನ್ನು ತ್ಯಜಿಸಿದವರೂ ಯಾರೂ ಇಲ್ಲ.

12261043a ಭವಂತೋಽಪಿ ಚ ಹೃಷ್ಯಂತಿ ಶೋಚಂತಿ ಚ ಯಥಾ ವಯಮ್।
12261043c ಇಂದ್ರಿಯಾರ್ಥಾಶ್ಚ ಭವತಾಂ ಸಮಾನಾಃ ಸರ್ವಜಂತುಷು।।

ನೀನೂ ಕೂಡ ನಮ್ಮಂತೆ ಹರ್ಷ-ಶೋಕಗಳನ್ನು ಪ್ರಕಟಪಡಿಸುತ್ತೀಯೆ. ಸರ್ವಜಂತುಗಳೂ ನಿನ್ನ ಸಮಾನ ಇಂದ್ರಿಯಾರ್ಥಗಳನ್ನು ಗ್ರಹಿಸುತ್ತವೆ.

12261044a ಏವಂ ಚತುರ್ಣಾಂ ವರ್ಣಾನಾಮಾಶ್ರಮಾಣಾಂ ಪ್ರವೃತ್ತಿಷು।
12261044c ಏಕಮಾಲಂಬಮಾನಾನಾಂ ನಿರ್ಣಯೇ ಕಿಂ ನಿರಾಮಯಮ್।।

ಹೀಗೆ ನಾಲ್ಕೂ ವರ್ಣಗಳಲ್ಲಿ ಮತ್ತು ಆಶ್ರಮಗಳಲ್ಲಿರುವವರು ಏಕಮಾತ್ರ ಸುಖಕ್ಕಾಗಿ ಕಾರ್ಯಪ್ರವೃತರಾಗಿರುತ್ತಾರೆ. ಆದುದರಿಂದ ಅಕ್ಷಯ ಸುಖವು ಯಾವುದು?”

12261045 ಕಪಿಲ ಉವಾಚ।
12261045a ಯದ್ಯದಾಚರತೇ ಶಾಸ್ತ್ರಮಥ ಸರ್ವಪ್ರವೃತ್ತಿಷು।
12261045c ಯಸ್ಯ ಯತ್ರ ಹ್ಯನುಷ್ಠಾನಂ ತತ್ರ ತತ್ರ ನಿರಾಮಯಮ್।।

ಕಪಿಲನು ಹೇಳಿದನು: “ಶಾಸ್ತ್ರಗಳಲ್ಲಿರುವಂತೆ ಎಲ್ಲವನ್ನೂ ಮಾಡಿದರೆ, ಅದು ಅನುಷ್ಠಾನದಲ್ಲಿರುವಲ್ಲಿ ನಿರಾಮಯವೇ ಉಂಟಾಗುತ್ತದೆ.

12261046a ಸರ್ವಂ ಪಾವಯತೇ17 ಜ್ಞಾನಂ ಯೋ ಜ್ಞಾನಂ ಹ್ಯನುವರ್ತತೇ।
12261046c ಜ್ಞಾನಾದಪೇತ್ಯ ಯಾ ವೃತ್ತಿಃ ಸಾ ವಿನಾಶಯತಿ ಪ್ರಜಾಃ।।

ಜ್ಞಾನವನ್ನು ಅನುಸರಿಸುವವನ ಎಲ್ಲವನ್ನೂ ಜ್ಞಾನವು ಪಾವನಗೊಳಿಸುತ್ತದೆ. ಜ್ಞಾನವಿಲ್ಲದ ಪ್ರವೃತ್ತಿಯು ಪ್ರಜೆಗಳನ್ನು ವಿನಾಶಗೊಳಿಸುತ್ತದೆ18.

12261047a ಭವಂತೋ ಜ್ಞಾನಿನೋ ನಿತ್ಯಂ19 ಸರ್ವತಶ್ಚ ನಿರಾಗಮಾಃ।
12261047c ಐಕಾತ್ಮ್ಯಂ ನಾಮ ಕಶ್ಚಿದ್ಧಿ ಕದಾ ಚಿದಭಿಪದ್ಯತೇ।।

ನೀವು ನಿತ್ಯ ಜ್ಞಾನಿಗಳಾಗಿದ್ದೀರಿ. ಸರ್ವತಃ ಉಪದ್ರವರಹಿತರೂ ಆಗಿರುವಿರಿ. ಬ್ರಹ್ಮದೊಡನೆ ಐಕಾತ್ಮ್ಯ ಭಾವವು ನಿಮ್ಮಲ್ಲಿ ಯಾರಿಗಾದರೂ ಉಂಟಾಗಿದೆಯೇ? 20

12261048a ಶಾಸ್ತ್ರಂ ಹ್ಯಬುದ್ಧ್ವಾ ತತ್ತ್ವೇನ ಕೇ ಚಿದ್ವಾದಬಲಾ ಜನಾಃ।
12261048c ಕಾಮದ್ವೇಷಾಭಿಭೂತತ್ವಾದಹಂಕಾರವಶಂ ಗತಾಃ।।

ಶಾಸ್ತ್ರವನ್ನು ಅರ್ಥಮಾಡಿಕೊಳ್ಳದೇ ಕೆಲವು ಅಬಲ ಜನರು ಕಾಮ-ದ್ವೇಷಗಳಿಗೊಳಗಾಗಿ ಅಹಂಕಾರವಶರಾಗುತ್ತಾರೆ.

12261049a ಯಾಥಾತಥ್ಯಮವಿಜ್ಞಾಯ ಶಾಸ್ತ್ರಾಣಾಂ ಶಾಸ್ತ್ರದಸ್ಯವಃ।
12261049c ಬ್ರಹ್ಮಸ್ತೇನಾ ನಿರಾರಂಭಾ ಅಪಕ್ವಮತಯೋಽಶಿವಾಃ21।।

ಶಾಸ್ತ್ರಗಳ ಯಥಾರ್ಥರೂಪವನ್ನು ತಿಳಿಯದೇ ಶಾಸ್ತ್ರದ ಮಾತುಗಳನ್ನು ಕದಿಯುವ ಅವರು ಬ್ರಹ್ಮನನ್ನು ಹೊಂದಲು ಪ್ರಯತ್ನಿಸದೇ ಅಪಕ್ವರೂ ಅಮಂಗಳರೂ ಆಗುತ್ತಾರೆ.

12261050a ವೈಗುಣ್ಯಮೇವ ಪಶ್ಯಂತಿ ನ ಗುಣಾನನುಯುಂಜತೇ।
12261050c ತೇಷಾಂ ತಮಃಶರೀರಾಣಾಂ ತಮ ಏವ ಪರಾಯಣಮ್।।

ಅವರು ದೋಷಗಳನ್ನೇ ಕಾಣುತ್ತಾರೆ. ಗುಣಗಳನ್ನು ವಿಮರ್ಶಿಸುವುದಿಲ್ಲ. ತಮೋಗುಣವೇ ತುಂಬಿರುವ ಅವರು ತಮೋಗುಣವನ್ನೇ ಆಶ್ರಯಿಸಿರುತ್ತಾರೆ.

12261051a ಯೋ ಯಥಾಪ್ರಕೃತಿರ್ಜಂತುಃ ಪ್ರಕೃತೇಃ ಸ್ಯಾದ್ವಶಾನುಗಃ।
12261051c ತಸ್ಯ ದ್ವೇಷಶ್ಚ ಕಾಮಶ್ಚ ಕ್ರೋಧೋ ದಂಭೋಽನೃತಂ ಮದಃ।
12261051e ನಿತ್ಯಮೇವಾಭಿವರ್ತಂತೇ ಗುಣಾಃ ಪ್ರಕೃತಿಸಂಭವಾಃ।।

ಜಂತುವಿನ ಪ್ರಕೃತಿಯು ಹೇಗಿರುವುದೋ ಹಾಗೆ ಅದು ಪ್ರಕೃತಿಯ ವಶದಲ್ಲಿಯೇ ವರ್ತಿಸುತ್ತದೆ. ಪ್ರಕೃತಿಜನ್ಯವಾದ ದ್ವೇಷ, ಕಾಮ, ಕ್ರೋಧ, ದಂಭತ್ವ, ಅಸತ್ಯ ಮತ್ತು ಮದ ಈ ಗುಣಗಳು ನಿತ್ಯವೂ ಅವರಲ್ಲಿರುತ್ತವೆ.

12261052a ಏತದ್ಬುದ್ಧ್ಯಾನುಪಶ್ಯಂತಃ ಸಂತ್ಯಜೇಯುಃ ಶುಭಾಶುಭಮ್।
12261052c ಪರಾಂ ಗತಿಮಭೀಪ್ಸಂತೋ ಯತಯಃ ಸಂಯಮೇ ರತಾಃ।।

ಯತಿಗಳು ಬುದ್ಧಿಯ ಮೂಲಕ ಇದನ್ನು ಕಂಡುಕೊಂಡು ಶುಭಾಶುಭ ಕರ್ಮಗಳನ್ನು ತ್ಯಜಿಸಿ ಪರಮ ಗತಿಯನ್ನೇ ಗುರಿಯನ್ನಾಗಿಟ್ಟುಕೊಂಡು ಸಂಯಮದಲ್ಲಿಯೇ ನಿರತರಾಗಿರುತ್ತಾರೆ.”

12261053 ಸ್ಯೂಮರಶ್ಮಿರುವಾಚ।
12261053a ಸರ್ವಮೇತನ್ಮಯಾ ಬ್ರಹ್ಮನ್ ಶಾಸ್ತ್ರತಃ ಪರಿಕೀರ್ತಿತಮ್।
12261053c ನ ಹ್ಯವಿಜ್ಞಾಯ ಶಾಸ್ತ್ರಾರ್ಥಂ ಪ್ರವರ್ತಂತೇ ಪ್ರವೃತ್ತಯಃ।।

ಸ್ಯೂಮರಶ್ಮಿಯು ಹೇಳಿದನು: “ಬ್ರಹ್ಮನ್! ನಾನು ಹೇಳಿದುದೆಲ್ಲವೂ ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿವೆ. ಶಾಸ್ತ್ರಗಳ ಅರ್ಥವನ್ನು ತಿಳಿಯದೇ ಪ್ರವೃತಿಮಾರ್ಗದಲ್ಲಿ ಜನರು ತೊಡಗುತ್ತಾರೆ.

12261054a ಯಃ ಕಶ್ಚಿನ್ನ್ಯಾಯ್ಯ ಆಚಾರಃ ಸರ್ವಂ ಶಾಸ್ತ್ರಮಿತಿ ಶ್ರುತಿಃ।
12261054c ಯದನ್ಯಾಯ್ಯಮಶಾಸ್ತ್ರಂ ತದಿತ್ಯೇಷಾ ಶ್ರೂಯತೇ ಶ್ರುತಿಃ।।

ನ್ಯಾಯಬದ್ಧವಾದ ಯಾವುದೇ ಆಚಾರವಿರಲಿ ಅವೆಲ್ಲವೂ ಶಾಸ್ತ್ರಗಳಲ್ಲಿವೆ ಎಂಬ ಶ್ರುತಿಯಿದೆ. ಯಾವುದು ನ್ಯಾಯವಾದದ್ದಲ್ಲವೋ ಅದು ಅಶಾಸ್ತ್ರೀಯವಾದುದು ಎಂದೂ ಶ್ರುತಿಗಳು ಹೇಳುತ್ತವೆ.

12261055a ನ ಪ್ರವೃತ್ತಿರೃತೇ ಶಾಸ್ತ್ರಾತ್ಕಾ ಚಿದಸ್ತೀತಿ ನಿಶ್ಚಯಃ।
12261055c ಯದನ್ಯದ್ವೇದವಾದೇಭ್ಯಸ್ತದಶಾಸ್ತ್ರಮಿತಿ ಶ್ರುತಿಃ।।

ಶಾಸ್ತ್ರವನ್ನು ಬಿಟ್ಟು ಯಾವುದೇ ವಿಧದ ಪ್ರವೃತ್ತಿಯೂ ಇಲ್ಲವೆನ್ನುವುದು ನಿಶ್ಚಿತವಾಗಿದೆ. ವೇದಕ್ಕಿಂತ ಬೇರೆಯಾಗಿರುವುದು ಅಶಾಸ್ತ್ರವೆಂದು ಶೃತಿಯೇ ಹೇಳಿದೆ.

12261056a ಶಾಸ್ತ್ರಾದಪೇತಂ ಪಶ್ಯಂತಿ ಬಹವೋ ವ್ಯಕ್ತಮಾನಿನಃ।
12261056c ಶಾಸ್ತ್ರದೋಷಾನ್ನ ಪಶ್ಯಂತಿ ಇಹ ಚಾಮುತ್ರ ಚಾಪರೇ।
2212261056e ಅವಿಜ್ಞಾನಹತಪ್ರಜ್ಞಾ ಹೀನಪ್ರಜ್ಞಾಸ್ತಮೋವೃತಾಃ।।

ಅನೇಕ ವ್ಯಕ್ತಮಾನಿನರು ಶಾಸ್ತ್ರಗಳ ವಿರುದ್ಧ ನಡೆಯುವುದನ್ನು ನೋಡುತ್ತೇವೆ. ಇಹ-ಪರ ಎರಡರ ವಿಷಯದಲ್ಲಿಯೂ ಅವರು ಶಾಸ್ತ್ರಗಳಲ್ಲಿ ದೋಷಗಳನ್ನೇ ಕಾಣುತ್ತಾರೆ. ಅವಿಜ್ಞಾನದಿಂದ ಹತಪ್ರಜ್ಞರಾದ ಅವರು ಪ್ರಜ್ಞೆಯನ್ನು ಕಳೆದುಕೊಳ್ಳುವ ತಮೋಗುಣದಿಂದ ಆವೃತರಾಗಿರುತ್ತಾರೆ.

12261057a ಶಕ್ಯಂ ತ್ವೇಕೇನ ಮುಕ್ತೇನ ಕೃತಕೃತ್ಯೇನ ಸರ್ವಶಃ।
12261057c ಪಿಂಡಮಾತ್ರಂ ವ್ಯಪಾಶ್ರಿತ್ಯ ಚರಿತುಂ ಸರ್ವತೋದಿಶಮ್23
12261057e ವೇದವಾದಂ ವ್ಯಪಾಶ್ರಿತ್ಯ ಮೋಕ್ಷೋಽಸ್ತೀತಿ ಪ್ರಭಾಷಿತುಮ್।।

ಕೃತಕೃತ್ಯನಾಗಿ, ಎಲ್ಲದರಿಂದಲೂ ಮುಕ್ತನಾಗಿ, ಶರೀರಮಾತ್ರವನ್ನೇ ಇಟ್ಟುಕೊಂಡು ಸರ್ವತೋದಿಶಗಳಲ್ಲಿ ಸಂಚರಿಸುವ ಏಕಾಂಗಿಗೆ ಮಾತ್ರ ವೇದವಾದವನ್ನು ಆಶ್ರಯಿಸಿ ಮೋಕ್ಷವು ಇದೆ ಇಂದು ಹೇಳಲು ಶಕ್ಯವು.

12261058a ಇದಂ ತು ದುಷ್ಕರಂ ಕರ್ಮ ಕುಟುಂಬಮಭಿಸಂಶ್ರಿತಮ್।
12261058c ದಾನಮಧ್ಯಯನಂ ಯಜ್ಞಃ ಪ್ರಜಾಸಂತಾನಮಾರ್ಜವಮ್।।

ಆದರೆ ಕುಟುಂಬವನ್ನು ಆಶ್ರಯಿಸಿರುವವನಿಗೆ ಇದು ಅತ್ಯಂತ ದುಷ್ಕರವಾದುದು. ದಾನ, ಅಧ್ಯಯನ, ಯಜ್ಞ, ಪ್ರಜಾಸಂತಾನ ಮತ್ತು ಸರಳತೆಯನ್ನು ಆಚರಿಸಿದರೂ ಅವನಿಗೆ ಮೋಕ್ಷವನ್ನು ಪಡೆಯುವುದು ಕಷ್ಟವೇ ಆಗುತ್ತದೆ.

12261059a ಯದ್ಯೇತದೇವಂ ಕೃತ್ವಾಪಿ ನ ವಿಮೋಕ್ಷೋಽಸ್ತಿ ಕಸ್ಯ ಚಿತ್।
12261059c ಧಿಕ್ಕರ್ತಾರಂ ಚ ಕಾರ್ಯಂ ಚ ಶ್ರಮಶ್ಚಾಯಂ ನಿರರ್ಥಕಃ।।

ಇವೆಲ್ಲವನ್ನೂ ಮಾಡಿಯೂ ಮೋಕ್ಷವಿಲ್ಲವೆಂದಮೇಲೆ ಕರ್ತ್ರುವಿಗೆ ಧಿಕ್ಕಾರ! ಕಾರ್ಯಕ್ಕೆ ಧಿಕ್ಕಾರ! ಅವನ ಶ್ರಮವು ನಿರರ್ಥಕವಾದಂತೆ!

12261060a ನಾಸ್ತಿಕ್ಯಮನ್ಯಥಾ ಚ ಸ್ಯಾದ್ವೇದಾನಾಂ ಪೃಷ್ಠತಃಕ್ರಿಯಾ।
12261060c ಏತಸ್ಯಾನಂತ್ಯಮಿಚ್ಚಾಮಿ ಭಗವನ್ ಶ್ರೋತುಮಂಜಸಾ।।

ವೇದಗಳನ್ನು ಅವಹೇಳನ ಮಾಡುವ ಈ ಕ್ರಿಯೆಯು ನಾಸ್ತಿಕ್ಯವನ್ನುಂಟುಮಾಡುತ್ತದೆ. ಭಗವನ್! ಇದರ ಕುರಿತು ನಿನ್ನಿಂದ ಬೇಗನೇ ಕೇಳಬಯಸುತ್ತೇನೆ.

12261061a ತಥ್ಯಂ ವದಸ್ವ ಮೇ ಬ್ರಹ್ಮನ್ನುಪಸನ್ನೋಽಸ್ಮ್ಯಧೀಹಿ ಭೋಃ।
12261061c ಯಥಾ ತೇ ವಿದಿತೋ ಮೋಕ್ಷಸ್ತಥೇಚ್ಚಾಮ್ಯುಪಶಿಕ್ಷಿತುಮ್।।

ಬ್ರಹ್ಮನ್! ನನಗೆ ತತ್ತ್ವವನ್ನು ಹೇಳು. ನಿನ್ನ ಶಿಷ್ಯನಾಗಿದ್ದೇನೆ. ನನಗೆ ಉಪದೇಶಿಸು. ಮೋಕ್ಷವೆನ್ನುವುದು ನಿನಗೆ ಹೇಗೆ ತಿಳಿದಿದೆಯೋ ಅದನ್ನು ನಿನ್ನಿಂದ ತಿಳಿಯ ಬಯಸುತ್ತೇನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಗೋಕಪಿಲೀಯೇ ಏಕಷಷ್ಟ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಗೋಕಪಿಲೀಯ ಎನ್ನುವ ಇನ್ನೂರಾಅರವತ್ತೊಂದನೇ ಅಧ್ಯಾಯವು.


  1. ಕಾಷ್ಠಾ (ಭಾರತ ದರ್ಶನ). ↩︎

  2. ಸಂತಾನೋತ್ಪತ್ತಿಯ ಕ್ರಮವನ್ನು. ↩︎

  3. ಧರ್ಮಃ (ಭಾರತ ದರ್ಶನ). ↩︎

  4. ಸನಾತನ ಯಜ್ಞವು ಅಹಿಂಸಾಯುಕ್ತ ಯಜ್ಞಗಳನ್ನಾಶ್ರಯಿಸಿಲ್ಲ. ↩︎

  5. ಅಹಿಂಸಾಯುಕ್ತ ಯಜ್ಞಾದಿಗಳನ್ನು ಮಾಡದೇ ಇರುವವರು. ↩︎

  6. ವಾಚಾ (ಭಾರತ ದರ್ಶನ/ಗೀತಾ ಪ್ರೆಸ್). ↩︎

  7. ಈ ಶ್ಲೋಕಕ್ಕೆ ಬೇರೆ ಬೇರೆ ಅರ್ಥಬರುವ ಅನುವಾದಗಳಿವೆ: (1) ಮನುಷ್ಯನಿಗೆ ಕೈ-ಕಾಲುಗಳು, ಮಾತು, ಹೊಟ್ಟೆ ಮತ್ತು ಉಪಸ್ಥ – ಎಂಬ ನಾಲ್ಕು ದ್ವಾರಗಳಿವೆ. ಇವುಗಳಿಗೆ ದ್ವಾರಪಾಲಕನಾಗುವ ಇಚ್ಛೆಯನ್ನು ಮನುಷ್ಯನು ತಾಳಬೇಕು. ಅರ್ಥಾತ್ ಇವುಗಳನ್ನು ಮಾನವನು ಸಂಯಮದಲ್ಲಿಟ್ಟುಕೊಳ್ಳಬೇಕು. ಋಗ್ಯಜುಸ್ಸಾಮಾಥರ್ವಣಗಳೆಂಬ ನಾಲ್ಕು ಮುಖಗಳನ್ನು ಹೊಂದಿರುವ ಪರಮಪುರುಷನನ್ನು ನಾಲ್ಕು ದ್ವಾರಗಳ ಸಂಯಮದಿಂದಲೂ, ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ ಮತ್ತು ಅಷ್ಠಾಂಗಯೋಗಗಳೆಂದ ನಾಲ್ಕು ಪ್ರಕಾರತ ಉಪಾಯಗಳಿಂದಲೂ ಹೊಂದಬೇಕು. (ಭಾರತ ದರ್ಶನ/ಗೀತಾ ಪ್ರೆಸ್). (2) बाहु, वाक्य, उदर और उपस्थ, यॆ चारॊं द्वारकी भांति आवरण कर रखतॆ हैं; दॆह, इंद्रिय, मन, बुद्धि, यॆ चारॊं जिसकॆ भॊगसाधन मुखस्वरूप हैं, मनुष्य गुरूपदॆशसॆ इस शरीरकॆ भीतर स्थित सर्वमय पुरुषकॊ विराट्‍, सूत्राण्तर्यामी और शुद्ध-चैतन्य इन चारॊं भांतिसॆ जानता है। जॊ उसॆ जाननॆकी इच्छा करॆ, वह दॊनॊं भुजा, वचन, उदर और उपस्थकी उत्तम रीतिसे रक्षा करनेमॆं यत्नवान् हॊवॆ॥ (दामॊदर सात्वालॆकर) ↩︎

  8. ಶ್ರುತಂ ಎನ್ನುವುದಕ್ಕೆ ವ್ಯಾಖ್ಯಾನಕಾರರು ಅನ್ನ ಎಂದು ಅರ್ಥೈಸಿದ್ದಾರೆ. ನ ಶೃತಂ ಪ್ರಹೃಹ್ಣಾತ್ ನ ಯಾಜಯೇತ್ – ನೀಚಪುರುಷನಿಗೆ ಯಜ್ಞಮಾಡಿಸಿ ಹವಿಸ್ಸನ್ನು ತಿನ್ನಬಾರದು. (ಭಾರತ ದರ್ಶನ) ↩︎

  9. When there is a brave wife, he will not have intercourse with another woman. (Bibek Debroy) ↩︎

  10. ಭಾರ್ಯೆಯನ್ನು ಬಿಟ್ಟು ಅನ್ಯರೊಂದಿಗೆ ಸಮಾಗಮ ಮಾಡುವುದೆಲ್ಲವೆಂಬ ಮನಸ್ಸಿನ ದೃಢ ಪ್ರತಿಜ್ಞೆ. ↩︎

  11. ಈ ಶ್ಲೋಕಕ್ಕೆ ಬೇರೆ ಅರ್ಥವನ್ನು ಕೊಡುವ ಅನುವಾದವೂ ಇದೆ: ಆದರೆ ಮೂಢರಾದವರು ಯಜ್ಞ ಮತ್ತು ದಾನಗಳಿಂದ ಪ್ರಾಪ್ತವಾಗಬಹುದಾದ ಸ್ವರ್ಗಾದಿ ಫಲಗಳನ್ನು ಬಿಟ್ಟು ಬೇರೆ ಯಾವುದನ್ನೂ ತಿಳಿದುಕೊಂಡಿರುವುದಿಲ್ಲ. ಮೋಕ್ಷ, ತಾಮಸಾಕ್ಷಾತ್ಕಾರ, ಬ್ರಹ್ಮಭಾವ – ಇವೇ ಮುಂದಾದವುಗಳ ವಿಷಯವಾಗಿ ಸ್ವಲ್ಪವಾದರೂ ತಿಳುವಳಿಕೆಯಿಲ್ಲದ ಅವರು ಸ್ವರ್ಗಾದಿ ಫಲಗಳಲ್ಲಿಯೇ ಅಭಿರುಚಿಯುಳ್ಳವರಾಗಿರುತ್ತಾರೆ. (ಭಾರತ ದರ್ಶನ/ಗೀತಾ ಪ್ರೆಸ್/ದಾಮೋದರ್ ಸಾತ್ವಾಲೇಕರ್) ↩︎

  12. ಇದಕ್ಕೆ ಮೊದಲು ಈ ಎರಡು ಅಧಿಕ ಶ್ಲೋಕಗಳಿವೆ: ಸ್ವಕರ್ಮಭಿಃ ಸಂಶ್ರಿತಾನಾಂ ತಪೋ ಘೋರತ್ವಮಾಗತಮ್। ತಂ ಸದಾಚಾರಮಾಶ್ರಿತ್ಯ ಪುರಾಣಂ ಶಾಶ್ವತಂ ಧ್ರುವಮ್।। ಅಶಕ್ನುವಂತಶ್ಚರಿತುಂ ಕಿಂಚಿದ್ಧರ್ಮೇಷು ಸೂತ್ರಿತಮ್। ನಿರಾಪದ್ಧರ್ಮ ಆಚಾರೋ ಹ್ಯಪ್ರಮಾದೋಽಪರಾಭವಃ।। (ಭಾರತ ದರ್ಶನ/ಗೀತಾ ಪ್ರೆಸ್). ↩︎

  13. ಈ ಶ್ಲೋಕಕ್ಕೆ ಬೇರೆ ಅರ್ಥವನ್ನು ಕೊಡುವ ಅನುವಾದವೂ ಇದೆ: ಯೋಗಶಾಸ್ತ್ರದಲ್ಲಿ ಹೇಳಿರುವ ಕರ್ಮಗಳು ಶ್ರೇಷ್ಠವಾದ ಮತ್ತು ಶಾಶ್ವತವಾದ ಫಲಗಳನ್ನು ಕೊಡತಕ್ಕವುಗಳಾಗಿವೆ. ಸಾಧಕನನ್ನು ಉನ್ನತಿಗೆ ಒಯ್ಯುತ್ತವೆ. ಆದರೆ ಪ್ರವೃತ್ತಿಮಾರ್ಗಿಗಳಾದ ಜನರು ಯೋಗಮಾರ್ಗವನ್ನು ಗುಣರಹಿತವಾದುದೆಂದೂ ನಿಯತವಾಗಿ ಫಲವನ್ನು ಕೊಡುವುದಲ್ಲವೆಂದೂ ಭಾವಿಸುತ್ತಾರೆ. (ಭಾರತ ದರ್ಶನ/ಗೀತಾ ಪ್ರೆಸ್/ದಾಮೋದರ್ ಸಾತ್ವಾಲೇಕರ್) ↩︎

  14. ಈ ಶ್ಲೋಕಕ್ಕೆ ಬೇರೆ ಅರ್ಥವನ್ನು ಕೊಡುವ ಅನುವಾದವೂ ಇದೆ: ಯಜ್ಞಗಳ ಗುಣಗಳು (ಸ್ವರೂಪ-ವಿಧಿ-ವಿಧಾನಗಳು, ಸಾಮಗ್ರಿಗಳು) ತಿಳಿಯಲು ದುಃಸಾಧ್ಯವಾದವುಗಳು. ಒಂದೆ ವೇಳೆ ಅವುಗಳನ್ನು ತಿಳಿದುಕೊಂಡರೂ ಯಜ್ಞಗಳ ಅನುಷ್ಠಾನವು ದುಷ್ಕರವಾದುದು. ಒಂದು ವೇಳೆ ಅತ್ಯಂತ ಕಷ್ಟದಿಂದ ಅನುಷ್ಠಾನಮಾಡಿದರೂ ಅವುಗಳು ಶಾಶ್ವತ ಸುಖವನ್ನು ಕೊಡತಕ್ಕವುಗಳಲ್ಲ. ಈ ವಿಷಯಗಳನ್ನು ನೀನೂ ತಿಳಿದುಕೊಂಡಿರುವೆ. (ಭಾರತ ದರ್ಶನ/ಗೀತಾ ಪ್ರೆಸ್/ದಾಮೋದರ್ ಸಾತ್ವಾಲೇಕರ್) ↩︎

  15. ಬ್ರಹ್ಮತತ್ತ್ವವನ್ನು ತಿಳಿಯಲೆಂದೇ ↩︎

  16. ಯಥಾಶ್ರಮಮುಪಾಸೀತ (ಭಾರತ ದರ್ಶನ). ↩︎

  17. ಪ್ಲಾವಯತೇ (ಭಾರತ ದರ್ಶನ/ಗೀತಾ ಪ್ರೆಸ್). ↩︎

  18. ಜ್ಞಾನವನ್ನು ಬಿಟ್ಟಿರುವ ವೃತ್ತಿ (ಕರ್ಮಮಾರ್ಗ)ಯು ಪ್ರಜೆಗಳನ್ನು ಜನನ-ಮರಣಪ್ರವಾಹದಲ್ಲಿ ಮುಳುಗಿಸಿ ನಾಶಗೊಳಿಸುತ್ತದೆ (ಭಾರತ ದರ್ಶನ). ↩︎

  19. ವ್ಯಕ್ತಂ (ಭಾರತ ದರ್ಶನ). ↩︎

  20. That is the reason learned people are always happy in every way. Sometimes, one obtains the sense of complete unit. (Bibek Debroy) ↩︎

  21. ದಂಭಮೋಹವಶಾನುಗಾಃ। (ಭಾರತ ದರ್ಶನ). ↩︎

  22. ಇದಕ್ಕೆ ಮೊದಲು ಈ ಎರಡು ಅಧಿಕ ಶ್ಲೋಕಗಳಿವೆ: ಇಂದ್ರಿಯಾರ್ಥಾಶ್ಚ ಭವತಾಂ ಸಮಾನಾಃ ಸರ್ವಜಂತುಷು। ಏವಂ ಚತುರ್ಣಾಂ ವರ್ಣಾನಾಮಾಶ್ರಮಾಣಾಂ ಪ್ರವೃತ್ತಿಷು।। ಏಕಮಾಲಂಬನಾನಾಂ ನಿರ್ಣಯೇ ಸರ್ವತೋದಿಶಮ್। ಆನಂತಂ ವದಮಾನೇನ ಶಕ್ತೇನಾವರ್ಜಿತಾತ್ಮನಾ।। (ಭಾರತ ದರ್ಶನ). ↩︎

  23. ವಿಜಿತಾತ್ಮನಾ (ಭಾರತ ದರ್ಶನ). ↩︎