ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಆಪದ್ಧರ್ಮ ಪರ್ವ
ಅಧ್ಯಾಯ 137
ಸಾರ
ಶತ್ರುವಿನೊಂದಿಗೆ ಸದಾ ಸಾವಧಾನದಿಂದ ಇರುವುದರ ಕುರಿತು ರಾಜಾ ಬ್ರಹ್ಮದತ್ತ ಮತ್ತು ಪಕ್ಷೀ ಪೂಜನೀಯರ ಸಂವಾದ (1-109).
12137001 ಯುಧಿಷ್ಠಿರ ಉವಾಚ।
12137001a ಉಕ್ತೋ ಮಂತ್ರೋ ಮಹಾಬಾಹೋ ನ ವಿಶ್ವಾಸೋಽಸ್ತಿ ಶತ್ರುಷು।
12137001c ಕಥಂ ಹಿ ರಾಜಾ ವರ್ತೇತ ಯದಿ ಸರ್ವತ್ರ ನಾಶ್ವಸೇತ್।।
ಯುಧಿಷ್ಠಿರನು ಹೇಳಿದನು: “ಮಹಾಬಾಹೋ! ಶತ್ರುವಿನ ಮೇಲೆ ವಿಶ್ವಾಸವನ್ನಿಡಬಾರದು ಎಂಬ ಸಲಹೆಯನ್ನು ನೀನು ನೀಡಿದ್ದೀಯೆ. ಎಲ್ಲರೊಡನೆಯೂ ಅವಿಶ್ವಾಸದಿಂದಲೇ ಇರಬೇಕಾದರೆ ರಾಜನು ಹೇಗೆ ನಡೆದುಕೊಳ್ಳಬೇಕು?
12137002a ವಿಶ್ವಾಸಾದ್ಧಿ ಪರಂ ರಾಜ್ಞೋ ರಾಜನ್ನುತ್ಪದ್ಯತೇ ಭಯಮ್।
12137002c ಕಥಂ ವೈ ನಾಶ್ವಸನ್ರಾಜಾ ಶತ್ರೂನ್ ಜಯತಿ ಪಾರ್ಥಿವ।।
ರಾಜನ್! ಪಾರ್ಥಿವ! ವಿಶ್ವಾಸದಿಂದ ರಾಜನಿಗೆ ಪರಮ ಭಯವುಂಟಾಗುವುದಾದರೆ ವಿಶ್ವಾಸವನ್ನಿಡದೇ ಅವನು ಶತ್ರುಗಳ ಮೇಲೆ ಜಯವನ್ನು ಹೇಗೆ ಸಾಧಿಸಬಹುದು?
12137003a ಏತನ್ಮೇ ಸಂಶಯಂ ಚಿಂಧಿ ಮನೋ ಮೇ ಸಂಪ್ರಮುಹ್ಯತಿ।
12137003c ಅವಿಶ್ವಾಸಕಥಾಮೇತಾಮುಪಶ್ರುತ್ಯ ಪಿತಾಮಹ।।
ಪಿತಾಮಹ! ಅವಿಶ್ವಾಸದ ಕುರಿತಾದ ಈ ಕಥೆಯನ್ನು ಕೇಳಿ ನನ್ನ ಬುದ್ಧಿಯನ್ನು ಮೋಹವು ಮುಚ್ಚಿಬಿಟ್ಟಿದೆ. ನನ್ನ ಈ ಸಂಶಯವನ್ನು ಹೋಗಲಾಡಿಸು.”
12137004 ಭೀಷ್ಮ ಉವಾಚ।
12137004a ಶೃಣು ಕೌಂತೇಯ ಯೋ ವೃತ್ತೋ ಬ್ರಹ್ಮದತ್ತನಿವೇಶನೇ।
12137004c ಪೂಜನ್ಯಾ ಸಹ ಸಂವಾದೋ ಬ್ರಹ್ಮದತ್ತಸ್ಯ ಪಾರ್ಥಿವ।।
ಭೀಷ್ಮನು ಹೇಳಿದನು: “ಕೌಂತೇಯ! ಪಾರ್ಥಿವ! ಬ್ರಹ್ಮದತ್ತನ ಭವನದಲ್ಲಿ ನಡೆದ ಬ್ರಹ್ಮದತ್ತ ಮತ್ತು ಪೂಜನಿಯ ಸಂವಾದವನ್ನು ಕೇಳು.
12137005a ಕಾಂಪಿಲ್ಯೇ ಬ್ರಹ್ಮದತ್ತಸ್ಯ ಅಂತಃಪುರನಿವಾಸಿನೀ।
12137005c ಪೂಜನೀ ನಾಮ ಶಕುನೀ ದೀರ್ಘಕಾಲಂ ಸಹೋಷಿತಾ।।
ಕಾಂಪಿಲ್ಯದಲ್ಲಿ ಬ್ರಹ್ಮದತ್ತನ ಅಂತಃಪುರದಲ್ಲಿ ಪೂಜನೀ ಎಂಬ ಹೆಸರಿನ ಹಕ್ಕಿಯು ಬಹಳಕಾಲದಿಂದ ವಾಸಿಸುತ್ತಿತ್ತು1.
12137006a ರುತಜ್ಞಾ ಸರ್ವಭೂತಾನಾಂ ಯಥಾ ವೈ ಜೀವಜೀವಕಃ।
12137006c ಸರ್ವಜ್ಞಾ ಸರ್ವಧರ್ಮಜ್ಞಾ ತಿರ್ಯಗ್ಯೋನಿಗತಾಪಿ ಸಾ।।
ಆ ಪಕ್ಷಿಯು ಜೀವಜೀವಕ ಪಕ್ಷಿಯಂತೆ ಸರ್ವಭೂತಗಳ ಮಾತನ್ನು ತಿಳಿಯುವಂಥವಳಾಗಿದ್ದಳು. ಕೀಳು ಯೋನಿಯಲ್ಲಿ ಜನಿಸಿದ್ದರೂ ಅದು ಸರ್ವಜ್ಞಳೂ ಸರ್ವಧರ್ಮಜ್ಞಳೂ ಆಗಿದ್ದಳು.
12137007a ಅಭಿಪ್ರಜಾತಾ ಸಾ ತತ್ರ ಪುತ್ರಮೇಕಂ ಸುವರ್ಚಸಮ್।
12137007c ಸಮಕಾಲಂ ಚ ರಾಜ್ಞೋಽಪಿ ದೇವ್ಯಾಃ ಪುತ್ರೋ ವ್ಯಜಾಯತ।।
ಅಲ್ಲಿ ಅದು ಒಂದು ಸುವರ್ಚಕ ಪುತ್ರನಿಗೆ ಜನ್ಮವಿತ್ತಳು. ಅದೇ ಸಮಯದಲ್ಲಿ ರಾಜನೂ ಕೂಡ ರಾಣಿಯಲ್ಲಿ ಓರ್ವ ಪುತ್ರನನ್ನು ಹುಟ್ಟಿಸಿದನು.
12137008a 2ಸಮುದ್ರತೀರಂ ಗತ್ವಾ ಸಾ ತ್ವಾಜಹಾರ ಫಲದ್ವಯಮ್। 12137008c ಪುಷ್ಟ್ಯರ್ಥಂ ಚ ಸ್ವಪುತ್ರಸ್ಯ ರಾಜಪುತ್ರಸ್ಯ ಚೈವ ಹ।।
ಪೂಜನಿಯು ಸಮುದ್ರತೀರಕ್ಕೆ ಹೋಗಿ ತನ್ನ ಪುತ್ರನ ಮತ್ತು ರಾಜಪುತ್ರನ ಪುಷ್ಟಿಗಾಗಿ ಎರಡು ಫಲಗಳನ್ನು ತೆಗೆದುಕೊಂಡು ಬಂದಳು.
12137009a ಫಲಮೇಕಂ ಸುತಾಯಾದಾದ್ರಾಜಪುತ್ರಾಯ ಚಾಪರಮ್।
12137009c ಅಮೃತಾಸ್ವಾದಸದೃಶಂ ಬಲತೇಜೋವಿವರ್ಧನಮ್।
12137009e ತತ್ರಾಗಚ್ಚತ್ಪರಾಂ ವೃದ್ಧಿಂ ರಾಜಪುತ್ರಃ ಫಲಾಶನಾತ್।।
ಅಮೃತದ ರುಚಿಯಂತಿದ್ದ ಮತ್ತು ಬಲ-ತೇಜಸ್ಸುಗಳನ್ನು ವೃದ್ಧಿಗೊಳಿಸುತ್ತಿದ್ದ ಆ ಒಂದು ಫಲವನ್ನು ತನ್ನ ಮಗನಿಗೂ ಇನ್ನೊಂದನ್ನು ರಾಜಪುತ್ರನಿಗೂ ಕೊಟ್ಟಳು. ಆ ಹಣ್ಣನ್ನು ತಿಂದು ರಾಜಪುತ್ರನು ಪರಮ ವೃದ್ಧಿಯನ್ನು ಹೊಂದಿದನು.
12137010a ಧಾತ್ರ್ಯಾ ಹಸ್ತಗತಶ್ಚಾಪಿ ತೇನಾಕ್ರೀಡತ ಪಕ್ಷಿಣಾ।
12137010c ಶೂನ್ಯೇ ತು ತಮುಪಾದಾಯ ಪಕ್ಷಿಣಂ ಸಮಜಾತಕಮ್।
12137010e ಹತ್ವಾ ತತಃ ಸ ರಾಜೇಂದ್ರ ಧಾತ್ರ್ಯಾ ಹಸ್ತಮುಪಾಗಮತ್।।
ಧಾತ್ರಿಯು ಅವನನ್ನು ಎತ್ತಿಕೊಂಡಿದ್ದರೂ ಅವನು ಪಕ್ಷಿಯೊಂದಿಗೆ ಆಡತೊಡಗಿದನು. ರಾಜೇಂದ್ರ! ತನ್ನ ಜೊತೆಗೇ ಹುಟ್ಟಿದ್ದ ಆ ಪಕ್ಷಿಯನ್ನು ಯಾರೂ ಇಲ್ಲದ ಸ್ಥಾನಕ್ಕೆ ಕೊಂಡೊಯ್ದು ರಾಜಕುಮಾರನು ಅದನ್ನು ಕೊಂದು ಹಾಕಿದನು ಮತ್ತು ನಂತರ ಧಾತ್ರಿಯ ಗೋದಿಯಲ್ಲಿ ಬಂದನು.
12137011a ಅಥ ಸಾ ಶಕುನೀ ರಾಜನ್ನಾಗಮತ್ ಫಲಹಾರಿಕಾ।
12137011c ಅಪಶ್ಯನ್ನಿಹತಂ ಪುತ್ರಂ ತೇನ ಬಾಲೇನ ಭೂತಲೇ।।
ರಾಜನ್! ಪಕ್ಷಿ ಪೂಜನಿಯು ಫಲವನ್ನು ತೆಗೆದುಕೊಂಡು ಹಿಂದಿರುಗಲು ರಾಜಕುಮಾರನಿಂದ ಹತನಾದ ತನ್ನ ಪುತ್ರನನ್ನು ನೆಲದಮೇಲೆ ನೋಡಿದಳು.
12137012a ಬಾಷ್ಪಪೂರ್ಣಮುಖೀ ದೀನಾ ದೃಷ್ಟ್ವಾ ಸಾ ತು ಹತಂ ಸುತಮ್।
12137012c ಪೂಜನೀ ದುಃಖಸಂತಪ್ತಾ ರುದತೀ ವಾಕ್ಯಮಬ್ರವೀತ್।।
ಸುತನು ಹತನಾದುದನ್ನು ನೋಡಿ ದೀನಳಾದ ಅವಳ ಮುಖದ ಮೇಲೆ ಕಣ್ಣೀರು ಸುರಿಯಿತು. ದುಃಖಸಂತಪ್ತಳಾದ ಪೂಜನಿಯು ಅಳುತ್ತಾ ಈ ಮಾತನ್ನಾಡಿದಳು:
12137013a ಕ್ಷತ್ರಿಯೇ ಸಂಗತಂ ನಾಸ್ತಿ ನ ಪ್ರೀತಿರ್ನ ಚ ಸೌಹೃದಮ್।
12137013c ಕಾರಣೇ ಸಂಭಜಂತೀಹ3 ಕೃತಾರ್ಥಾಃ ಸಂತ್ಯಜಂತಿ ಚ।।
“ಕ್ಷತ್ರಿಯನಿಗೆ ಸಂಬಂಧವನ್ನು ನಿಭಾಯಿಸುವ ಭಾವನೆಯು ಇರುವುದಿಲ್ಲ. ಅವನಲ್ಲಿ ಪ್ರೀತಿಯೂ ಇರುವುದಿಲ್ಲ ಮತ್ತು ಸೌಹಾರ್ದತೆಯೂ ಇರುವುದಿಲ್ಲ. ಯಾವುದೇ ಕಾರಣದಿಂದ ಮಾತ್ರ ಅವನು ಇತರರನ್ನು ಪ್ರೀತಿಸುತ್ತಾನೆ. ಆ ಕಾರಣವು ಸಿದ್ಧವಾದ ನಂತರ ಅವರನ್ನು ತ್ಯಜಿಸಿಬಿಡುತ್ತಾನೆ.
12137014a ಕ್ಷತ್ರಿಯೇಷು ನ ವಿಶ್ವಾಸಃ ಕಾರ್ಯಃ ಸರ್ವೋಪಘಾತಿಷು।
12137014c ಅಪಕೃತ್ಯಾಪಿ ಸತತಂ ಸಾಂತ್ವಯಂತಿ ನಿರರ್ಥಕಮ್।।
ಸರ್ವರಿಗೂ ಅಪಘಾತವನ್ನೆಸಗುವ ಕ್ಷತ್ರಿಯರಲ್ಲಿ ವಿಶ್ವಾಸವನ್ನಿಡಬಾರದು. ಸತತವೂ ಅಪಕೃತ್ಯಗಳನ್ನು ಮಾಡುತ್ತಿದ್ದರೂ ನಿರರ್ಥಕವಾದ ಸಾಂತ್ವನವನ್ನು ನೀಡುತ್ತಿರುತ್ತಾರೆ.
12137015a ಅಹಮಸ್ಯ ಕರೋಮ್ಯದ್ಯ ಸದೃಶೀಂ ವೈರಯಾತನಾಮ್।
12137015c ಕೃತಘ್ನಸ್ಯ ನೃಶಂಸಸ್ಯ ಭೃಶಂ ವಿಶ್ವಾಸಘಾತಿನಃ।।
ಇಂದು ನಾನು ಈ ಕೃತಘ್ನ, ಅತ್ಯಂತ ಕ್ರೂರಿ ಮತ್ತು ವಿಶ್ವಾಸಘಾತಿಯ ವೈರಯಾತನೆಯ ಪ್ರತೀಕಾರವನ್ನು ಮಾಡಿಯೇ ಮಾಡುತ್ತೇನೆ.
12137016a ಸಹಸಂಜಾತವೃದ್ಧಸ್ಯ ತಥೈವ ಸಹಭೋಜಿನಃ। 12137016c ಶರಣಾಗತಸ್ಯ ಚ ವಧಸ್ತ್ರಿವಿಧಂ ಹ್ಯಸ್ಯ ಕಿಲ್ಬಿಷಮ್।।
ಒಟ್ಟಿಗೇ ಹುಟ್ಟಿ ಬೆಳೆದು ಒಟ್ಟಿಗೇ ಊಟಮಾಡುವ ಮತ್ತು ಶರಣಾಗತನಾಗಿರುವವನ ವಧೆಯನ್ನು ಮಾಡುವವನಿಗೆ ಮೂರುವಿಧದ ಪಾಪಗಳು ತಗಲುತ್ತವೆ.”
12137017a ಇತ್ಯುಕ್ತ್ವಾ ಚರಣಾಭ್ಯಾಂ ತು ನೇತ್ರೇ ನೃಪಸುತಸ್ಯ ಸಾ।
12137017c ಭಿತ್ತ್ವಾ ಸ್ವಸ್ಥಾ ತತ ಇದಂ ಪೂಜನೀ ವಾಕ್ಯಮಬ್ರವೀತ್।।
ಹೀಗೆ ಹೇಳಿ ಅವಳು ತನ್ನ ಎರಡೂ ಕಾಲುಗಳ ಪಂಜುಗಳಿಂದ ರಾಜಕುಮಾರನ ಎರಡೂ ಕಣ್ಣುಗಳನ್ನು ಕಿತ್ತು ಹಾಕಿದಳು. ಅನಂತರ ಅಲ್ಲಿ ನಿಂತು ಪೂಜನಿಯು ಈ ಮಾತನ್ನಾಡಿದಳು:
12137018a ಇಚ್ಚಯೈವ ಕೃತಂ ಪಾಪಂ ಸದ್ಯ ಏವೋಪಸರ್ಪತಿ।
12137018c ಕೃತಪ್ರತಿಕ್ರಿಯಂ ತೇಷಾಂ ನ ನಶ್ಯತಿ ಶುಭಾಶುಭಮ್।।
“ಈ ಜಗತ್ತಿನಲ್ಲಿ ಸ್ವೇಚ್ಛೆಯಿಂದ ಪಾಡಿದ ಪಾಪದ ಫಲವು ತತ್ಕಾಲದಲ್ಲಿಯೇ ಕರ್ತಾರನಿಗೆ ದೊರೆಯುತ್ತದೆ. ಯಾವ ಪಾಪಕೃತ್ಯಕ್ಕೆ ಪ್ರತೀಕಾರವು ದೊರೆಯುತ್ತದೆಯೋ ಆ ಶುಭಾಶುಭ ಕರ್ಮವು ನಷ್ಟವಾಗಿಹೋಗುವುದಿಲ್ಲ.
12137019a ಪಾಪಂ ಕರ್ಮ ಕೃತಂ ಕಿಂ ಚಿನ್ನ ತಸ್ಮಿನ್ಯದಿ ವಿದ್ಯತೇ।
12137019c ನಿಪಾತ್ಯತೇಽಸ್ಯ ಪುತ್ರೇಷು ನ ಚೇತ್ಪೌತ್ರೇಷು ನಪ್ತೃಷು।।
ಒಂದು ವೇಳೆ ಇಲ್ಲಿ ಮಾಡಿದ ಪಾಪಕರ್ಮಕ್ಕೆ ಯಾವುದೂ ಫಲವು ಕರ್ತನಿಗೆ ದೊರಕಿದುದು ಕಾಣಿಸದೇ ಇದ್ದರೂ ಅವನ ಪುತ್ರ-ಪೌತ್ರರಿಗೆ ಮತ್ತು ಬಾಂಧವರಿಗೆ ಅದರ ಫಲವನ್ನು ಭೋಗಿಸಬೇಕಾಗುತ್ತದೆ ಎಂದು ತಿಳಿಯಬೇಕು.”
12137020 ಬ್ರಹ್ಮದತ್ತ ಉವಾಚ।
12137020a ಅಸ್ತಿ ವೈ ಕೃತಮಸ್ಮಾಭಿರಸ್ತಿ ಪ್ರತಿಕೃತಂ ತ್ವಯಾ।
12137020c ಉಭಯಂ ತತ್ಸಮೀಭೂತಂ ವಸ ಪೂಜನಿ ಮಾ ಗಮಃ।।
ಬ್ರಹ್ಮದತ್ತನು ಹೇಳಿದನು: “ನಾವು ನಿನಗೆ ಅಪರಾಧವನ್ನೆಸಗಿದ್ದೆವು ಮತ್ತು ಅದಕ್ಕೆ ನೀನು ಪ್ರತೀಕಾರವನ್ನು ಮಾಡಿಯಾಯಿತು. ಈಗ ನಮ್ಮಿಬ್ಬರ ಕಾರ್ಯವೂ ಸರಿಸಮವಾಯಿತು. ಆದುದರಿಂದ ನೀನು ಇಲ್ಲಿಯೇ ಇರು. ಬೇರೆ ಎಲ್ಲಿಯೂ ಹೋಗಬೇಡ!”
12137021 ಪೂಜನ್ಯುವಾಚ।
12137021a ಸಕೃತ್ಕೃತಾಪರಾಧಸ್ಯ ತತ್ರೈವ ಪರಿಲಂಬತಃ।
12137021c ನ ತದ್ಬುಧಾಃ ಪ್ರಶಂಸಂತಿ ಶ್ರೇಯಸ್ತತ್ರಾಪಸರ್ಪಣಮ್।।
ಪೂಜನಿಯು ಹೇಳಿದಳು: “ಅಪರಾಧಗೈದವನ ಆಶ್ರಯವನ್ನೇ ಅವಲಂಬಿಸಿರುವುದನ್ನು ವಿದ್ವಾಂಸರು ಪ್ರಶಂಸಿಸುವುದಿಲ್ಲ. ಅಲ್ಲಿಂದ ಹೋಗುವುದರಲ್ಲಿಯೇ ಶ್ರೇಯಸ್ಸಿದೆ.
12137022a ಸಾಂತ್ವೇ ಪ್ರಯುಕ್ತೇ ನೃಪತೇ ಕೃತವೈರೇ ನ ವಿಶ್ವಸೇತ್।
12137022c ಕ್ಷಿಪ್ರಂ ಪ್ರಬಧ್ಯತೇ4 ಮೂಢೋ ನ ಹಿ ವೈರಂ ಪ್ರಶಾಮ್ಯತಿ।।
ನೃಪತೇ! ಅಪರಾಧಗೈದವನು ಸಮಾಧಾನದ ನುಡಿಗಳನ್ನಾಡಿದರೂ ಅವನ ಮೇಲೆ ವಿಶ್ವಾಸವನ್ನಿಡಬಾರದು. ಅದರಿಂದ ವೈರವಂತೂ ಕಡಿಮೆಯಾಗುವುದಿಲ್ಲ. ಮತ್ತು ಆ ಮೂಢನು ಬೇಗನೇ ಬಾಧೆಗೊಳಗಾಗುತ್ತಾನೆ.
12137023a ಅನ್ಯೋನ್ಯಂ ಕೃತವೈರಾಣಾಂ ಪುತ್ರಪೌತ್ರಂ ನಿಗಚ್ಚತಿ।
12137023c ಪುತ್ರಪೌತ್ರೇ ವಿನಷ್ಟೇ ತು ಪರಲೋಕಂ ನಿಗಚ್ಚತಿ।।
ಅನ್ಯೋನ್ಯರು ಸಾಧಿಸುವ ವೈರವು ಪುತ್ರಪೌತ್ರರನ್ನು ಬಾಧಿಸುತ್ತದೆ. ಪುತ್ರಪೌತ್ರರು ನಷ್ಟವಾದರೆ ಪರಲೋಕವು ತಪ್ಪಿಹೋಗುತ್ತದೆ.
12137024a ಸರ್ವೇಷಾಂ ಕೃತವೈರಾಣಾಮವಿಶ್ವಾಸಃ ಸುಖಾವಹಃ।
12137024c ಏಕಾಂತತೋ ನ ವಿಶ್ವಾಸಃ ಕಾರ್ಯೋ ವಿಶ್ವಾಸಘಾತಕಃ।।
ವೈರಿಗಳೆಲ್ಲರ ಮೇಲೂ ವಿಶ್ವಾಸವನ್ನಿಡದೇ ಇರುವುದು ಸುಖವನ್ನು ತರುತ್ತದೆ. ವಿಶ್ವಾಸಘಾತಕನಮೇಲಂತೂ ವಿಶ್ವಾಸವನ್ನೇ ಇಡಬಾರದು.
12137025a ನ ವಿಶ್ವಸೇದವಿಶ್ವಸ್ತೇ ವಿಶ್ವಸ್ತೇಽಪಿ ನ ವಿಶ್ವಸೇತ್।
12137025c ಕಾಮಂ ವಿಶ್ವಾಸಯೇದನ್ಯಾನ್ ಪರೇಷಾಂ ತು ನ ವಿಶ್ವಸೇತ್।।
ವಿಶ್ವಾಸಪಾತ್ರನಲ್ಲದವನ ಮೇಲೆ ವಿಶ್ವಾಸವನ್ನಿಡಬಾರದು. ವಿಶ್ವಾಸಕ್ಕೆ ಪಾತ್ರನಾದವನಲ್ಲಿಯೂ ಅತ್ಯಂತ ವಿಶ್ವಾಸವನ್ನಿಡಬಾರದು. ಏಕೆಂದರೆ ವಿಶ್ವಾಸದಿಂದ ಉತ್ಪನ್ನವಾಗುವ ಭಯವು ವಿಶ್ವಾಸವನ್ನಿಟ್ಟವನ ಮೂಲವನ್ನೇ ಕಡಿದುಹಾಕುತ್ತದೆ. ತನ್ನ ಮೇಲೆ ಇತರರು ವಿಶ್ವಾಸನವನ್ನಿಟ್ಟರೂ ಇತರರ ಮೇಲೆ ವಿಶ್ವಾಸವನ್ನಿಡಬಾರದು.
12137026a ಮಾತಾ ಪಿತಾ ಬಾಂಧವಾನಾಂ ವರಿಷ್ಠೌ ಭಾರ್ಯಾ ಜರಾ ಬೀಜಮಾತ್ರಂ ತು ಪುತ್ರಃ।
12137026c ಭ್ರಾತಾ ಶತ್ರುಃ ಕ್ಲಿನ್ನಪಾಣಿರ್ವಯಸ್ಯ ಆತ್ಮಾ ಹ್ಯೇಕಃ ಸುಖದುಃಖಸ್ಯ ವೇತ್ತಾ।।
ತಂದೆತಾಯಿಗಳು ಬಾಂಧವರಲ್ಲಿಯೇ ಶ್ರೇಷ್ಠರು. ಭಾರ್ಯೆಯು ವೃದ್ಧಾಪ್ಯ ಸ್ವರೂಪಳು. ಪುತ್ರನು ಬೀಜಮಾತ್ರನು. ಭ್ರಾತನು ಶತ್ರುವು. ಮತ್ತು ಮಿತ್ರನು ಅವನ ಕೈ ಒದ್ದೆಯಾಗಿರುವವರೆಗೆ ಮಾತ್ರ ಮಿತ್ರನು. ಕೇವಲ ಆತ್ಮವೇ ಸುಖ ಮತ್ತು ದುಃಖವನ್ನು ಭೋಗಿಸುವುದು ಎಂದು ಹೇಳಿದ್ದಾರೆ5.
12137027a ಅನ್ಯೋನ್ಯಕೃತವೈರಾಣಾಂ ನ ಸಂಧಿರುಪಪದ್ಯತೇ।
12137027c ಸ ಚ ಹೇತುರತಿಕ್ರಾಂತೋ ಯದರ್ಥಮಹಮಾವಸಮ್।।
ಅನ್ಯೋನ್ಯರಲ್ಲಿ ವೈರವುಂಟಾದಾಗ ಸಂಧಿಮಾಡಿಕೊಳ್ಳುವುದು ಸರಿಯಲ್ಲ. ಯಾವ ಉದ್ದೇಶದಿಂದ ನಾನು ಇಲ್ಲಿ ವಾಸಮಾಡಿಕೊಂಡಿದ್ದೆನೋ ಅದು ಪೂರ್ಣವಾಯಿತು.
12137028a ಪೂಜಿತಸ್ಯಾರ್ಥಮಾನಾಭ್ಯಾಂ ಜಂತೋಃ ಪೂರ್ವಾಪಕಾರಿಣಃ।
12137028c ಚೇತೋ ಭವತ್ಯವಿಶ್ವಸ್ತಂ ಪೂರ್ವಂ ತ್ರಾಸಯತೇ ಬಲಾತ್6।।
ಮೊದಲು ಅಪಕಾರ ಮಾಡಿದ ಜಂತುವನ್ನು ದಾನ-ಮಾನಗಳಿಂದ ಪೂಜಿಸಿದರೂ ಅದರ ಚೇತನವು ವಿಶ್ವಸ್ತವಾಗಿರುವುದಿಲ್ಲ. ಹಿಂದಿನ ಬಲವು ಅದನ್ನು ಬೆದರಿಸುತ್ತಿರುತ್ತದೆ.
12137029a ಪೂರ್ವಂ ಸಂಮಾನನಾ ಯತ್ರ ಪಶ್ಚಾಚ್ಚೈವ ವಿಮಾನನಾ।
12137029c ಜಹ್ಯಾತ್ತಂ ಸತ್ತ್ವವಾನ್ವಾಸಂ ಸಂಮಾನಿತವಿಮಾನಿತಃ7।।
ಮೊದಲು ಎಲ್ಲಿ ಸನ್ಮಾನವು ದೊರಕಿತ್ತೋ ನಂತರ ಅಲ್ಲಿಯೇ ಅಪಮಾನವಾದಾಗ ಸಮ್ಮಾನಿತನಾಗಿ ನಂತರ ಅಪಮಾನಿತನಾದ ಆ ಸತ್ವವಾನನು ಅಲ್ಲಿ ವಾಸಮಾಡಿಕೊಂಡಿರಬಾರದು.
12137030a ಉಷಿತಾಸ್ಮಿ ತವಾಗಾರೇ ದೀರ್ಘಕಾಲಮಹಿಂಸಿತಾ8।
12137030c ತದಿದಂ ವೈರಮುತ್ಪನ್ನಂ ಸುಖಮಾಸ್ಸ್ವ ವ್ರಜಾಮ್ಯಹಮ್।।
ನಾನು ನಿನ್ನ ಭವನದಲ್ಲಿ ದೀರ್ಘಕಾಲದಿಂದ ಹಿಂಸೆಗೊಳಗಾಗಿದೇ ವಾಸಿಸಿಕೊಂಡಿದ್ದೆ. ಆದರೆ ಈಗ ಈ ವೈರವು ಉತ್ಪನ್ನವಾಗಿಬಿಟ್ಟಿತು. ಆದುದರಿಂದ ನಾನು ಸುಖವಾಗಿಯೇ ಇಲ್ಲಿಂದ ಹೊರಟುಹೋಗುತ್ತೇನೆ.”
12137031 ಬ್ರಹ್ಮದತ್ತ ಉವಾಚ।
12137031a ಯತ್ಕೃತೇ ಪ್ರತಿಕುರ್ಯಾದ್ವೈ ನ ಸ ತತ್ರಾಪರಾಧ್ನುಯಾತ್।
12137031c ಅನೃಣಸ್ತೇನ ಭವತಿ ವಸ ಪೂಜನಿ ಮಾ ಗಮಃ।।
ಬ್ರಹ್ಮದತ್ತನು ಹೇಳಿದನು: “ಪೂಜನಿ! ಒಬ್ಬನ ಅಪರಾಧದ ಪ್ರತೀಕಾರವಾಗಿ ಇನ್ನೊಬ್ಬನೂ ಅಪರಾಧವನ್ನೆಸಗಿದರೆ ಅದನ್ನು ಅಪರಾಧವೆಂದು ಎಣಿಸಲಾಗುವುದಿಲ್ಲ. ಇದರಿಂದ ಮೊದಲು ಅಪರಾಧವನ್ನೆಸಗಿದವನು ಋಣಮುಕ್ತನಾಗಿಹೋಗುತ್ತಾನೆ. ಆದುದರಿಂದ ನೀನು ಇಲ್ಲಿಯೇ ಇರು. ಹೋಗಬೇಡ.”
12137032 ಪೂಜನ್ಯುವಾಚ।
12137032a ನ ಕೃತಸ್ಯ ನ ಕರ್ತುಶ್ಚ ಸಖ್ಯಂ ಸಂಧೀಯತೇ ಪುನಃ।
12137032c ಹೃದಯಂ ತತ್ರ ಜಾನಾತಿ ಕರ್ತುಶ್ಚೈವ ಕೃತಸ್ಯ ಚ।।
ಪೂಜನಿಯು ಹೇಳಿದಳು: “ಯಾರಿಗೆ ಅಪಕಾರವನ್ನು ಮಾಡಲಾಗಿದೆಯೋ ಮತ್ತು ಯಾರು ಅಪಕಾರವನ್ನು ಮಾಡಿದ್ದಾನೋ ಅವರಿಬ್ಬರ ನಡುವೆ ಸಖ್ಯ ಮತ್ತು ಒಡನಾಟವು ಪುನಃ ಆಗುವುದಿಲ್ಲ. ಅಪರಾಧಮಾಡಿದವನ ಮತ್ತು ಅಪರಾಧವಾದವನ ಇಬ್ಬರ ಹೃದಯಗಳಲ್ಲಿಯೂ ಈ ವಿಷಯವು ಕುಟುಕುತ್ತಿರುತ್ತದೆ.”
12137033 ಬ್ರಹ್ಮದತ್ತ ಉವಾಚ।
12137033a ಕೃತಸ್ಯ ಚೈವ ಕರ್ತುಶ್ಚ ಸಖ್ಯಂ ಸಂಧೀಯತೇ ಪುನಃ।
12137033c ವೈರಸ್ಯೋಪಶಮೋ ದೃಷ್ಟಃ ಪಾಪಂ ನೋಪಾಶ್ನುತೇ ಪುನಃ।।
ಬ್ರಹ್ಮದತ್ತನು ಹೇಳಿದನು: “ಪ್ರತೀಕಾರವನ್ನೆಸಗಿದ ನಂತರ ವೈರವು ಶಾಂತವಾಗಿಬಿಡುತ್ತದೆ ಮತ್ತು ಅಪಕಾರವನ್ನು ಮಾಡಿದವನಿಗೆ ಆ ಪಾಪದ ಫಲವನ್ನೂ ಭೋಗಿಸಬೇಕಾಗುವುದಿಲ್ಲ. ಆದುದರಿಂದ ಅಪರಾಧ ಮಾಡಿದ ಮತ್ತು ಸಹಿಸಿಕೊಂಡ ಇಬ್ಬರ ನಡುವೆಯೂ ಪುನಃ ಸಖ್ಯ-ಒಡನಾಟಗಳು ನಡೆಯಬಹುದು.”
12137034 ಪೂಜನ್ಯುವಾಚ।
12137034a ನಾಸ್ತಿ ವೈರಮುಪಕ್ರಾಂತಂ ಸಾಂತ್ವಿತೋಽಸ್ಮೀತಿ ನಾಶ್ವಸೇತ್।
12137034c ವಿಶ್ವಾಸಾದ್ಬಧ್ಯತೇ ಬಾಲಸ್ತಸ್ಮಾಚ್ಚ್ರೇಯೋ ಹ್ಯದರ್ಶನಮ್9।।
ಪೂಜನಿಯು ಹೇಳಿದಳು: “ವೈರವು ಎಂದೂ ಶಾಂತವಾಗುವುದಿಲ್ಲ. ಶತ್ರುವು ನನಗೆ ಸಾಂತ್ವನವನ್ನಿತ್ತಿದ್ದಾನೆ ಎಂದು ತಿಳಿದು ಅವನ ಮೇಲೆ ಎಂದೂ ವಿಶ್ವಾಸವನ್ನಿಡಬಾರದು. ಈ ಬಾಲತನದಿಂದ ಶ್ರೇಯಸ್ಸಾಗಿದ್ದುದು ಕಾಣುವುದಿಲ್ಲ.
12137035a ತರಸಾ ಯೇ ನ ಶಕ್ಯಂತೇ ಶಸ್ತ್ರೈಃ ಸುನಿಶಿತೈರಪಿ।
12137035c ಸಾಮ್ನಾ ತೇ ವಿನಿಗೃಹ್ಯಂತೇ ಗಜಾ ಇವ ಕರೇಣುಭಿಃ।।
ಹರಿತ ಖಡ್ಗದಿಂದಲೂ ವಶಮಾಡಿಕೊಳ್ಳಲಾರದವರನ್ನೂ ಕೂಡ, ಆನೆಯನ್ನು ಆನೆಯನ್ನು ಬಳಸಿಯೇ ವಶಪಡಿಸಿಕೊಳ್ಳುವಂತೆ ಸಿಹಿಮಾತುಗಳಿಂದ ಬಂಧಿಸುತ್ತಾರೆ.”
12137036 ಬ್ರಹ್ಮದತ್ತ ಉವಾಚ।
12137036a ಸಂವಾಸಾಜ್ಜಾಯತೇ ಸ್ನೇಹೋ ಜೀವಿತಾಂತಕರೇಷ್ವಪಿ।
12137036c ಅನ್ಯೋನ್ಯಸ್ಯ ಚ ವಿಶ್ವಾಸಃ ಶ್ವಪಚೇನ ಶುನೋ ಯಥಾ।।
ಬ್ರಹ್ಮದತ್ತನು ಹೇಳಿದನು: “ಶ್ವಪಚ10ನೊಂದಿಗೆ ನಾಯಿಯು ಹೇಗೋ ಹಾಗೆ ಒಟ್ಟಿಗೇ ವಾಸಿಸುವುದರಿಂದ ಜೀವದ ಅಂತಕನೊಂದಿಗೂ ಸ್ನೇಹವಾಗಿಬಿಡುತ್ತದೆ ಮತ್ತು ಪರಸ್ಪರರಲ್ಲಿ ವಿಶ್ವಾಸವೂ ಮೂಡುತ್ತದೆ.
12137037a ಅನ್ಯೋನ್ಯಕೃತವೈರಾಣಾಂ ಸಂವಾಸಾನ್ಮೃದುತಾಂ ಗತಮ್।
12137037c ನೈವ ತಿಷ್ಠತಿ ತದ್ವೈರಂ ಪುಷ್ಕರಸ್ಥಮಿವೋದಕಮ್।।
ಒಟ್ಟಿಗೇ ವಾಸಿಸುವುದರಿಂದ ಅನ್ಯೋನ್ಯರಿಗೆ ಮಾಡಿದುದರ ವೈರವೂ ಕೂಡ ಮೃದುವಾಗಿ ಬಿಡುತ್ತದೆ. ಕಮಲದ ದಳದ ಮೇಲೆ ಬಿದ್ದ ನೀರಿನಂತೆ ಆ ವೈರವು ಅಲ್ಲಿ ನಿಂತುಕೊಳ್ಳುವುದಿಲ್ಲ.”
12137038 ಪೂಜನ್ಯುವಾಚ।
12137038a ವೈರಂ ಪಂಚಸಮುತ್ಥಾನಂ ತಚ್ಚ ಬುಧ್ಯಂತಿ ಪಂಡಿತಾಃ।
12137038c ಸ್ತ್ರೀಕೃತಂ ವಾಸ್ತುಜಂ ವಾಗ್ಜಂ ಸಸಪತ್ನಾಪರಾಧಜಮ್।।
ಪೂಜನಿಯು ಹೇಳಿದಳು: “ವೈರವು ಐದು ಕಾರಣಗಳಿಂದ ಉತ್ಪನ್ನವಾಗುತ್ತದೆ ಎಂದು ಪಂಡಿತರು ತಿಳಿದಿದ್ದಾರೆ: ಸ್ತ್ರೀಗಾಗಿ, ಮನೆ/ಸ್ವತ್ತಿಗಾಗಿ, ಕಠೋರ ಮಾತಿನಿಂದಾಗಿ, ಜಾತಿಗತ ದ್ವೇಷದಿಂದಾಗಿ ಮತ್ತು ಹಿಂದೆ ಮಾಡಿದ್ದ ಅಪರಾಧದಿಂದಾಗಿ.
12137039a ತತ್ರ ದಾತಾ ನಿಹಂತವ್ಯಃ ಕ್ಷತ್ರಿಯೇಣ ವಿಶೇಷತಃ।
12137039c ಪ್ರಕಾಶಂ ವಾಪ್ರಕಾಶಂ ವಾ ಬುದ್ಧ್ವಾ ದೇಶಬಲಾದಿಕಮ್।।
ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ದಾನಮಾಡಿದವನನ್ನು, ಅದರಲ್ಲೂ ವಿಶೇಷವಾಗಿ ಕ್ಷತ್ರಿಯನನ್ನು ಕೊಲ್ಲಬಾರದು. ಅಪರಾಧದ ಮಹತ್ವ ಅಥವಾ ಲಘುತ್ವವನ್ನು ಬುದ್ಧಿಯಿಂದ ಪರಿಶೀಲಿಸಿದ ನಂತರವೇ ಕಾರ್ಯಕೈಗೊಳ್ಳಬೇಕು.
12137040a ಕೃತವೈರೇ ನ ವಿಶ್ವಾಸಃ ಕಾರ್ಯಸ್ತ್ವಿಹ ಸುಹೃದ್ಯಪಿ।
12137040c ಚನ್ನಂ ಸಂತಿಷ್ಠತೇ ವೈರಂ ಗೂಢೋಽಗ್ನಿರಿವ ದಾರುಷು।।
ಯಾರು ವೈರವನ್ನು ಕಟ್ಟಿಕೊಂಡಿದ್ದಾರೋ ಅವರು ಸುಹೃದರಾಗಿದ್ದರೂ ಅವರಲ್ಲಿ ವಿಶ್ವಾಸವನ್ನಿಡಬಾರದು. ಕಟ್ಟಿಗೆಯಲ್ಲಿ ಬೆಂಕಿಯು ಅಡಗಿಕೊಂಡಿರುವಂತೆ ಅವರಲ್ಲಿ ವೈರವು ಅಡಗಿಕೊಂಡಿರುತ್ತದೆ.
12137041a ನ ವಿತ್ತೇನ ನ ಪಾರುಷ್ಯೈರ್ನ ಸಾಂತ್ವೇನ ನ ಚ ಶ್ರುತೈಃ।
12137041c ವೈರಾಗ್ನಿಃ ಶಾಮ್ಯತೇ ರಾಜನ್ನೌರ್ವಾಗ್ನಿರಿವ ಸಾಗರೇ।।
ರಾಜನ್! ಸಾಗರದಲ್ಲಿರುವ ಔರ್ವಾಗ್ನಿ11ಯಂತೆ ವೈರಾಗ್ನಿಯು ವಿತ್ತದಿಂದ, ಕಠೋರತೆಯಿಂದ, ಸಾಂತ್ವನದಿಂದ ಮತ್ತು ಬುದ್ಧಿಹೇಳುವುದರಿಂದ ಶಾಂತವಾಗುವುದಿಲ್ಲ.
12137042a ನ ಹಿ ವೈರಾಗ್ನಿರುದ್ಭೂತಃ ಕರ್ಮ ವಾಪ್ಯಪರಾಧಜಮ್।
12137042c ಶಾಮ್ಯತ್ಯದಗ್ಧ್ವಾ ನೃಪತೇ ವಿನಾ ಹ್ಯೇಕತರಕ್ಷಯಾತ್।।
ನೃಪತೇ! ಒಂದು ಪಕ್ಷವನ್ನು ಸುಟ್ಟು ಭಸ್ಮಮಾಡದೇ ವೈರಾಗ್ನಿಯು ತಣ್ಣಗಾಗುವುದಿಲ್ಲ ಮತ್ತು ಅಪರಾಧಜನಿತ ಕರ್ಮವೂ ಒಂದು ಪಕ್ಷವನ್ನು ಸಂಹಾರಮಾಡದೇ ಶಾಂತವಾಗುವುದಿಲ್ಲ.
12137043a ಸತ್ಕೃತಸ್ಯಾರ್ಥಮಾನಾಭ್ಯಾಂ ಸ್ಯಾತ್ತು ಪೂರ್ವಾಪಕಾರಿಣಃ।
12137043c ನೈವ ಶಾಂತಿರ್ನ ವಿಶ್ವಾಸಃ ಕರ್ಮ ತ್ರಾಸಯತೇ ಬಲಾತ್।। ಲ್
ಮೊದಲು ಅಪಕಾರವನ್ನಿಸಗಿದವನನ್ನು ಅಪಕೃತ ವ್ಯಕ್ತಿಯು ಧನಮಾನಗಳಿಂದ ಸತ್ಕರಿಸಿದರೂ ಅವನ ಶತ್ರುವಿನ ಮೇಲೆ ವಿಶ್ವಾಸವನ್ನಿಡಬಾರದು. ಏಕೆಂದರೆ ತಾನು ಮಾಡಿದ ಪಾಪಕರ್ಮವು ದುರ್ಬಲರನ್ನು ಹೆದರಿಸುತ್ತಲೇ ಇರುತ್ತದೆ.
12137044a ನೈವಾಪಕಾರೇ ಕಸ್ಮಿಂಶ್ಚಿದಹಂ ತ್ವಯಿ ತಥಾ ಭವಾನ್।
12137044c ವಿಶ್ವಾಸಾದುಷಿತಾ ಪೂರ್ವಂ ನೇದಾನೀಂ ವಿಶ್ವಸಾಮ್ಯಹಮ್।।
ಇದೂವರೆಗೆ ಎಂದೂ ನಾನು ನಿನ್ನ ಕುರಿತು ಅಪರಾಧವನ್ನೆಸಗಿಲ್ಲ ಮತ್ತು ನೀನೂ ಕೂಡ ನನಗೆ ಯಾವ ಹಾನಿಯನ್ನೂ ಉಂಟುಮಾಡಿಲ್ಲ. ಆದುದರಿಂದ ನಾನು ನಿನ್ನ ಭವನದಲ್ಲಿ ವಾಸಿಸುತ್ತಿದ್ದೆ. ಆದರೆ ಈಗ ನಾನು ನಿನ್ನ ಮೇಲೆ ವಿಶ್ವಾಸವನ್ನಿಡಲಾರೆ.”
12137045 ಬ್ರಹ್ಮದತ್ತ ಉವಾಚ।
12137045a ಕಾಲೇನ ಕ್ರಿಯತೇ ಕಾರ್ಯಂ ತಥೈವ ವಿವಿಧಾಃ ಕ್ರಿಯಾಃ।
12137045c ಕಾಲೇನೈವ ಪ್ರವರ್ತಂತೇ ಕಃ ಕಸ್ಯೇಹಾಪರಾಧ್ಯತಿ।।
ಬ್ರಹ್ಮದತ್ತನು ಹೇಳಿದನು: “ಕಾಲವೇ ಎಲ್ಲವನ್ನೂ ಮಾಡುತ್ತದೆ ಮತ್ತು ಕಾಲದಿಂದಲೇ ವಿವಿಧ ಕ್ರಿಯೆಗಳು ನಡೆಯುತ್ತವೆ. ಕಾಲವೇ ಎಲ್ಲವನ್ನೂ ನಡೆಸುತ್ತಿರುವಾಗ ಯಾರು ಯಾರಿಗೆ ಅಪರಾಧವನ್ನೆಸಗುತ್ತಾರೆ?
12137046a ತುಲ್ಯಂ ಚೋಭೇ ಪ್ರವರ್ತೇತೇ ಮರಣಂ ಜನ್ಮ ಚೈವ ಹ।
12137046c ಕಾರ್ಯತೇ ಚೈವ ಕಾಲೇನ ತನ್ನಿಮಿತ್ತಂ ಹಿ ಜೀವತಿ।।
ಮರಣ ಮತ್ತು ಜನ್ಮ ಇವೆರಡೂ ಒಂದೇ ಸಮನಾಗಿ ನಡೆಯುತ್ತಿರುತ್ತವೆ ಮತ್ತು ಕಾಲವೇ ಇವುಗಳನ್ನುಂಟುಮಾಡುತ್ತಿರುತ್ತದೆ. ಆದುದರಿಂದ ಪ್ರಾಣಿಯು ಜೀವಿತವಾಗಿರಲಾರದು.
12137047a ಬಧ್ಯಂತೇ12 ಯುಗಪತ್ಕೇ ಚಿದೇಕೈಕಸ್ಯ ನ ಚಾಪರೇ।
12137047c ಕಾಲೋ ದಹತಿ ಭೂತಾನಿ ಸಂಪ್ರಾಪ್ಯಾಗ್ನಿರಿವೇಂಧನಮ್।।
ಕೆಲವರು ಒಟ್ಟಾಗಿ ಸಾಯುತ್ತಾರೆ ಮತ್ತೆ ಇನ್ನು ಕೆಲವರು ಒಬ್ಬೊಬ್ಬರಾಗಿ ಸಾಯುತ್ತಾರೆ. ಕೆಲವರು ಬಹಳ ಕಾಲದವರೆಗೆ ಸಾಯುವುದೇ ಇಲ್ಲ. ಬೆಂಕಿಯು ಕಟ್ಟಿಗೆಗೆ ಹತ್ತಿಕೊಂಡು ಅದನ್ನು ಸುಟ್ಟುಬಿಡುವಂತೆ ಕಾಲವೇ ಸಮಸ್ತ ಪ್ರಾಣಿಗಳನ್ನೂ ಸುಟ್ಟುಬಿಡುತ್ತದೆ.
12137048a ನಾಹಂ ಪ್ರಮಾಣಂ ನೈವ ತ್ವಮನ್ಯೋನ್ಯಕರಣೇ ಶುಭೇ।
12137048c ಕಾಲೋ ನಿತ್ಯಮುಪಾಧತ್ತೇ ಸುಖಂ ದುಃಖಂ ಚ ದೇಹಿನಾಮ್।।
ಶುಭೇ! ಅನ್ಯೋನ್ಯರಿಗೆ ಮಾಡಿದ ಅಪರಾಧಗಳಲ್ಲಿ ನೀನೂ ಯಥಾರ್ಥ ಕಾರಣಳಲ್ಲ ಮತ್ತು ನಾನೂ ವಾಸ್ತವಿಕ ಕಾರಣನಲ್ಲ. ಕಾಲವೇ ಸದಾ ಸಮಸ್ತ ದೇಹಧಾರಿಗಳಿಗೆ ಸುಖ-ದುಃಖಗಳನ್ನು ನೀಡುತ್ತಿರುತ್ತದೆ.
12137049a ಏವಂ ವಸೇಹ ಸಸ್ನೇಹಾ ಯಥಾಕಾಲಮಹಿಂಸಿತಾ13।
12137049c ಯತ್ಕೃತಂ ತಚ್ಚ ಮೇ ಕ್ಷಾಂತಂ ತ್ವಂ ಚೈವ ಕ್ಷಮ ಪೂಜನಿ।।
ಪೂಜನಿ! ನೀನಗೆ ಬೇಕಾದಷ್ಟು ಸಮಯ ಇಲ್ಲಿ ಸ್ನೇಹದಿಂದ ವಾಸಮಾಡಿಕೊಂಡಿರು. ನಾನು ನಿನ್ನನ್ನು ಹಿಂಸಿಸುವುದಿಲ್ಲ. ನೀನು ಮಾಡಿದುದನ್ನು ನಾನು ಕ್ಷಮಿಸಿದ್ದೇನೆ. ನೀನೂ ಕೂಡ ನನ್ನಿಂದಾದುದನ್ನು ಕ್ಷಮಿಸಿ ಬಿಡು.”
12137050 ಪೂಜನ್ಯುವಾಚ।
12137050a ಯದಿ ಕಾಲಃ ಪ್ರಮಾಣಂ ತೇ ನ ವೈರಂ ಕಸ್ಯ ಚಿದ್ಭವೇತ್।
12137050c ಕಸ್ಮಾತ್ತ್ವಪಚಿತಿಂ ಯಾಂತಿ ಬಾಂಧವಾ ಬಾಂಧವೇ ಹತೇ।।
ಪೂಜನಿಯು ಹೇಳಿದಳು: “ಒಂದುವೇಳೆ ಕಾಲವೇ ಎಲ್ಲಕ್ಕೂ ಕಾರಣವಾಗಿದ್ದರೆ ಯಾರಿಗೆ ಯಾರೊಡನೆಯೂ ವೈರವೇ ಆಗುತ್ತಿರಲಿಲ್ಲ. ಆದರೂ ಬಾಂಧವರು ಹತರಾದಾಗ ಅವರ ಬಾಂಧವರು ಏಕೆ ಪ್ರತೀಕಾರವನ್ನೆಸಗುತ್ತಾರೆ?
12137051a ಕಸ್ಮಾದ್ದೇವಾಸುರಾಃ ಪೂರ್ವಮನ್ಯೋನ್ಯಮಭಿಜಘ್ನಿರೇ।
12137051c ಯದಿ ಕಾಲೇನ ನಿರ್ಯಾಣಂ ಸುಖದುಃಖೇ ಭವಾಭವೌ।।
ಕಾಲವೇ ಮೃತ್ಯು-ಜನ್ಮ, ಸುಖ-ದುಃಖ, ಉನ್ನತಿ-ಅವನತಿಗಳನ್ನು ನೀಡುತ್ತದೆಯಾದರೆ ಪೂರ್ವಕಾಲದಲ್ಲಿ ದೇವತೆಗಳು ಮತ್ತು ಅಸುರರು ಏಕೆ ಅನ್ಯೋನ್ಯರನ್ನು ಸಂಹರಿಸಿದರು?
12137052a ಭಿಷಜೋ ಭೇಷಜಂ ಕರ್ತುಂ ಕಸ್ಮಾದಿಚ್ಚಂತಿ ರೋಗಿಣೇ।
12137052c ಯದಿ ಕಾಲೇನ ಪಚ್ಯಂತೇ ಭೇಷಜೈಃ ಕಿಂ ಪ್ರಯೋಜನಮ್।।
ಕಾಲವೇ ಎಲ್ಲವನ್ನೂ ಮಾಡುತ್ತದೆ ಎಂದಾದರೆ ವೈದ್ಯರು ರೋಗಿಗಳಿಗೆ ಚಿಕಿತ್ಸೆಗಳನ್ನು ಮಾಡಲು ಏಕೆ ಇಚ್ಛಿಸುತ್ತಿದ್ದರು? ಮತ್ತು ಚಿಕಿತ್ಸೆಯಿಂದ ಪ್ರಯೋಜನವಾದರೂ ಏಕಾಗುತ್ತಿತ್ತು?
12137053a ಪ್ರಲಾಪಃ ಕ್ರಿಯತೇ ಕಸ್ಮಾತ್ಸುಮಹಾನ್ ಶೋಕಮೂರ್ಚಿತೈಃ।
12137053c ಯದಿ ಕಾಲಃ ಪ್ರಮಾಣಂ ತೇ ಕಸ್ಮಾದ್ಧರ್ಮೋಽಸ್ತಿ ಕರ್ತೃಷು।।
ಕಾಲವೇ ಎಲ್ಲಕ್ಕೂ ಪ್ರಮಾಣವೆಂದಾದರೆ ಶೋಕಮೂರ್ಛಿತರಾದವರು ಏಕೆ ಪ್ರಲಾಪಮಾಡುತ್ತಾರೆ? ಮತ್ತು ಕರ್ಮಮಾಡುವವರಿಗೆ ಧರ್ಮಪಾಲನೆಯ ನಿಯಮವು ಏಕಿದೆ?
12137054a ತವ ಪುತ್ರೋ ಮಮಾಪತ್ಯಂ ಹತವಾನ್ ಹಿಂಸಿತೋ ಮಯಾ14।
12137054c ಅನಂತರಂ ತ್ವಯಾ ಚಾಹಂ ಬಂಧನೀಯಾ ಮಹೀಪತೇ15।।
ಮಹೀಪತೇ! ನಿನ್ನ ಮಗನು ನನ್ನ ಮಗನನ್ನು ಕೊಂದನು ಮತ್ತು ನಾನು ಅವನನ್ನು ಹಿಂಸಿಸಿದೆ. ಅನಂತರ ನೀನು ನನ್ನನ್ನು ಬಂಧಿಸುತ್ತೀಯೆ.
12137055a ಅಹಂ ಹಿ ಪುತ್ರಶೋಕೇನ ಕೃತಪಾಪಾ ತವಾತ್ಮಜೇ।
12137055c ತಥಾ ತ್ವಯಾ ಪ್ರಹರ್ತವ್ಯಂ ಮಯಿ ತತ್ತ್ವಂ ಚ ಮೇ ಶೃಣು।।
ಪುತ್ರಶೋಕದಿಂದ ಸಂತಪ್ತಳಾಗಿ ನಾನು ನಿನ್ನ ಪುತ್ರನ ಮೇಲೆ ಹೇಗೆ ಪಾಪಕೃತ್ಯವನ್ನೆಸಗಿದೆನೋ ಹಾಗೆ ನೀನೂ ಕೂಡ ನನ್ನನ್ನು ಪ್ರಹರಿಸಬಹುದು. ಇಲ್ಲಿ ತತ್ತ್ವಾರ್ಥವೇನು ಎನ್ನುವುದನ್ನು ಕೇಳು.
12137056a ಭಕ್ಷಾರ್ಥಂ ಕ್ರೀಡನಾರ್ಥಂ ವಾ ನರಾ ವಾಂಚಂತಿ ಪಕ್ಷಿಣಃ।
12137056c ತೃತೀಯೋ ನಾಸ್ತಿ ಸಂಯೋಗೋ ವಧಬಂಧಾದೃತೇ ಕ್ಷಮಃ।।
ಮನುಷ್ಯನು ತಿನ್ನುವುದಕ್ಕಾಗಿ ಅಥವಾ ಆಡುವುದಕ್ಕಾಗಿ ಪಕ್ಷಿಯನ್ನು ಬಯಸುತ್ತಾನೆ. ವಧಿಸಲು ಅಥವಾ ಬಂಧನದಲ್ಲಿಡುವ ಹೊರತಾಗಿ ಬೇರೆ ಯಾವ ಮೂರನೆಯ ಪ್ರಕಾರದ ಸಂಪರ್ಕವೂ ಪಕ್ಷಿ ಮತ್ತು ಮನುಷ್ಯರಲ್ಲಿ ಕಾಣುವುದಿಲ್ಲ.
12137057a ವಧಬಂಧಭಯಾದೇಕೇ ಮೋಕ್ಷತಂತ್ರಮುಪಾಗತಾಃ।
12137057c ಮರಣೋತ್ಪಾತಜಂ ದುಃಖಮಾಹುರ್ಧರ್ಮವಿದೋ ಜನಾಃ।।
ಈ ವಧೆ ಮತ್ತು ಬಂಧನದ ಭಯದಿಂದ ಮುಮುಕ್ಷುಗಳು ಮೋಕ್ಷತಂತ್ರದ ಆಶ್ರಯವನ್ನು ಪಡೆಯುತ್ತಾರೆ. ಏಕೆಂದರೆ ಮರಣ-ಜನನಗಳು ದುಃಖವನ್ನುಂಟುಮಾಡುತ್ತವೆ ಎಂದು ಧರ್ಮವಿದ ಜನರು ಹೇಳುತ್ತಾರೆ.
12137058a ಸರ್ವಸ್ಯ ದಯಿತಾಃ ಪ್ರಾಣಾಃ ಸರ್ವಸ್ಯ ದಯಿತಾಃ ಸುತಾಃ।
12137058c ದುಃಖಾದುದ್ವಿಜತೇ ಸರ್ವಃ ಸರ್ವಸ್ಯ ಸುಖಮೀಪ್ಸಿತಮ್।।
ಸರ್ವರಿಗೂ ಪ್ರಾಣವು ಪ್ರಿಯವಾಗಿರುತ್ತದೆ ಮತ್ತು ಸರ್ವರಿಗೂ ತಮ್ಮ ಸುತರು ಪ್ರಿಯರಾಗಿರುತ್ತಾರೆ. ಸರ್ವರೂ ದುಃಖವಾದಾಗ ಉದ್ವಿಗ್ನರಾಗುತ್ತಾರೆ ಮತ್ತು ಸರ್ವರೂ ಸುಖವಾಗಬೇಕೆಂದು ಬಯಸುತ್ತಾರೆ.
12137059a ದುಃಖಂ ಜರಾ ಬ್ರಹ್ಮದತ್ತ ದುಃಖಮರ್ಥವಿಪರ್ಯಯಃ।
12137059c ದುಃಖಂ ಚಾನಿಷ್ಟಸಂವಾಸೋ ದುಃಖಮಿಷ್ಟವಿಯೋಗಜಮ್।।
ಬ್ರಹ್ಮದತ್ತ! ವೃದ್ಧಾಪ್ಯವು ದುಃಖ, ಅರ್ಥನಾಶವು ದುಃಖ, ಅಪ್ರಿಯರೊಂದಿಗೆ ಇರುವುದು ದುಃಖ ಮತ್ತು ಪ್ರಿಯಜನರ ಅಗಲುವಿಕೆಯು ದುಃಖ.
12137060a ವೈರಬಂಧಕೃತಂ ದುಃಖಂ ಹಿಂಸಾಜಂ ಸ್ತ್ರೀಕೃತಂ ತಥಾ16।
12137060c ದುಃಖಂ ಸುಖೇನ17 ಸತತಂ ಜನಾದ್ವಿಪರಿವರ್ತತೇ।।
ವೈರ ಮತ್ತು ಬಂಧನದಿಂದ ದುಃಖವಾಗುತ್ತದೆ. ಸ್ತ್ರೀಯಕಾರಣದಿಂದ ಉಂಟಾಗುವ ಹಿಂಸೆಯು ದುಃಖ. ಸತತವಾಗಿದ್ದ ಸುಖವು ನಷ್ಟವಾದಾಗಲೂ ದುಃಖವಾಗುತ್ತದೆ.
12137061a ನ ದುಃಖಂ ಪರದುಃಖೇ ವೈ ಕೇ ಚಿದಾಹುರಬುದ್ಧಯಃ।
12137061c ಯೋ ದುಃಖಂ ನಾಭಿಜಾನಾತಿ ಸ ಜಲ್ಪತಿ ಮಹಾಜನೇ।।
ಕೆಲವು ಮೂಢರು ಪರದುಃಖವು ದುಃಖವಲ್ಲವೆಂದು ಹೇಳುತ್ತಾರೆ. ಆದರೆ ದುಃಖವನ್ನು ತಿಳಿಯದವರು ಮಾತ್ರ ಅಂಥಹ ಮಾತನ್ನು ಮಹಾಜನರಮುಂದೆ ಹೇಳುತ್ತಾರೆ.
12137062a ಯಸ್ತು ಶೋಚತಿ ದುಃಖಾರ್ತಃ ಸ ಕಥಂ ವಕ್ತುಮುತ್ಸಹೇತ್।
12137062c ರಸಜ್ಞಃ ಸರ್ವದುಃಖಸ್ಯ ಯಥಾತ್ಮನಿ ತಥಾ ಪರೇ।।
ದುಃಖಾರ್ತನಾಗಿ ಶೋಕಿಸುವವನು ಮತ್ತು ತನ್ನ ಮತ್ತು ಇತರರೆಲ್ಲರ ದುಃಖದ ರಸವನ್ನು ಅರ್ಥಮಾಡಿಕೊಂಡಿರುವವನು ಹೇಗೆ ತಾನೇ ಈ ರೀತಿ ಹೇಳಬಲ್ಲನು?
12137063a ಯತ್ಕೃತಂ ತೇ ಮಯಾ ರಾಜಂಸ್ತ್ವಯಾ ಚ ಮಮ ಯತ್ಕೃತಮ್।
12137063c ನ ತದ್ವರ್ಷಶತೈಃ ಶಕ್ಯಂ ವ್ಯಪೋಹಿತುಮರಿಂದಮ।।
ರಾಜನ್! ಅರಿಂದಮ! ನೀನು ನನಗೆ ಮಾಡಿದ ಅಪರಾಧ ಮತ್ತು ನಾನು ಪ್ರತೀಕಾರವನ್ನೆಸಗಿದುದು ಇವುಗಳನ್ನು ನೂರು ವರ್ಷಗಳಾದರೂ ಮರೆಯಲು ಸಾಧ್ಯವಾಗುವುದಿಲ್ಲ.
12137064a ಆವಯೋಃ ಕೃತಮನ್ಯೋನ್ಯಂ ತತ್ರ ಸಂಧಿರ್ನ ವಿದ್ಯತೇ।
12137064c ಸ್ಮೃತ್ವಾ ಸ್ಮೃತ್ವಾ ಹಿ ತೇ ಪುತ್ರಂ ನವಂ ವೈರಂ ಭವಿಷ್ಯತಿ।।
ಹೀಗೆ ಪರಸ್ಪರರಿಗೆ ಅಪಕಾರವನ್ನೆಸಗಿದ ಕಾರಣದಿಂದ ಈಗ ಮತ್ತೊಮ್ಮೆ ನಮ್ಮಿಬ್ಬರ ನಡುವೆ ಒಡನಾಟವು ಸಾಧ್ಯವಿಲ್ಲ. ನಿನ್ನ ಪುತ್ರನಿಗಾದುದನ್ನು ಪುನಃ ಪುನಃ ನೆನಪಿಸಿಕೊಂಡು ನಿನ್ನ ವೈರವು ಹೊಸತಾಗಿಯೇ ಇರುತ್ತದೆ.
12137065a ವೈರಮಂತಿಕಮಾಸಜ್ಯ ಯಃ ಪ್ರೀತಿಂ ಕರ್ತುಮಿಚ್ಚತಿ।
12137065c ಮೃನ್ಮಯಸ್ಯೇವ ಭಗ್ನಸ್ಯ ತಸ್ಯ ಸಂಧಿರ್ನ ವಿದ್ಯತೇ।।
ಮಣ್ಣಿನ ಗಡಿಗೆಯು ಒಡೆದುಹೋದನಂತರ ಅದನ್ನು ಪುನಃ ಹೇಗೆ ಜೋಡಿಸಲು ಆಗುವುದಿಲ್ಲವೋ ಹಾಗೆ ಮರಣಾಂತಿಕ ವೈರವಿದ್ದವರಲ್ಲಿ ಪುನಃ ಪ್ರೀತಿಯನ್ನು ಬಯಸಿದರೂ ಅದು ಅಸಂಭವವಾಗುತ್ತದೆ.
12137066a ನಿಶ್ಚಿತಶ್ಚಾರ್ಥಶಾಸ್ತ್ರಜ್ಞೈರವಿಶ್ವಾಸಃ ಸುಖೋದಯಃ18।
12137066c ಉಶನಾಶ್ಚಾಥ ಗಾಥೇ ದ್ವೇ ಪ್ರಹ್ರಾದಾಯಾಬ್ರವೀತ್ ಪುರಾ।।
ಅವಿಶ್ವಾಸದಿಂದ ಸುಖವುಂಟಾಗುತ್ತದೆ ಎನ್ನುವುದು ಶಾಸ್ತ್ರಜ್ಞರ ನಿಶ್ಚಯವಾಗಿದೆ. ಹಿಂದೆ ಉಶನ ಶುಕ್ರಾಚಾರ್ಯನು ಪ್ರಹ್ರಾದನಿಗೆ ಈ ಎರಡು ಗಾಥೆಗಳನ್ನು ಹೇಳಿದ್ದನು:
12137067a ಯೇ ವೈರಿಣಃ ಶ್ರದ್ದಧತೇ ಸತ್ಯೇ ಸತ್ಯೇತರೇಽಪಿ ವಾ।
12137067c ತೇ ಶ್ರದ್ದಧಾನಾ ವಧ್ಯಂತೇ ಮಧು ಶುಷ್ಕತೃಣೈರ್ಯಥಾ।।
ಒಣಗಿದ ಹುಲ್ಲನ್ನು ಮುಚ್ಚಿದ್ದ ಬಾವಿಯ ಮೇಲೆ ಇಟ್ಟಿದ್ದ ಮಧುವನ್ನು ತರಲು ಹೋಗುವವನು ಸತ್ತುಹೋಗುವಂತೆ ವೈರಿಯ ಸುಳ್ಳು ಅಥವಾ ಸತ್ಯ ಮಾತಿನ ಮೇಲೆ ವಿಶ್ವಾಸವನ್ನಿಡುವವನೂ ಕೂಡ ಹತನಾಗುತ್ತಾನೆ.
12137068a ನ ಹಿ ವೈರಾಣಿ ಶಾಮ್ಯಂತಿ ಕುಲೇಷ್ವಾ ದಶಮಾದ್ಯುಗಾತ್।
12137068c ಆಖ್ಯಾತಾರಶ್ಚ ವಿದ್ಯಂತೇ ಕುಲೇ ಚೇದ್ವಿದ್ಯತೇ ಪುಮಾನ್।।
ಒಂದು ಕುಲದಲ್ಲಿ ಯಾವುದಾದರೂ ವೈರವುಂಟಾದರೆ ಅದು ಹತ್ತು ತಲೆಮಾರುಗಳ ವರೆಗೂ ಇರುತ್ತದೆ. ಅದನ್ನು ಹೇಳಿಕೊಳ್ಳುವವರು ಇರುತ್ತಾರೆ. ಕುಲದಲ್ಲಿ ಒಬ್ಬ ಪುರುಷನೂ ಇಲ್ಲದಂತಾಗುವವರೆಗೆ ಅದು ಇರುತ್ತದೆ.
12137069a ಉಪಗುಹ್ಯ ಹಿ ವೈರಾಣಿ ಸಾಂತ್ವಯಂತಿ ನರಾಧಿಪಾಃ19।
12137069c ಅಥೈನಂ ಪ್ರತಿಪಿಂಷಂತಿ ಪೂರ್ಣಂ ಘಟಮಿವಾಶ್ಮನಿ।।
ನರಾಧಿಪರು ವೈರಗಳನ್ನು ಮುಚ್ಚಿಟ್ಟುಕೊಂಡು ಸಾಂತ್ವನದ ಮಾತುಗಳನ್ನಾಡುತ್ತಿರುತ್ತಾರೆ. ಅನಂತರ ಅವಕಾಶವನ್ನು ನೋಡಿಕೊಂಡು ನೀರುತುಂಬಿದ ಮಣ್ಣಿನ ಕೊಡವನ್ನು ಬಂಡೆಗಲ್ಲಿಗೆ ಬಡಿದು ಚೂರು ಚೂರು ಮಾಡುವಂತೆ ಪುಡಿಮಾಡಿಬಿಡುತ್ತಾರೆ.
12137070a ಸದಾ ನ ವಿಶ್ವಸೇದ್ರಾಜನ್ಪಾಪಂ ಕೃತ್ವೇಹ ಕಸ್ಯ ಚಿತ್।
12137070c ಅಪಕೃತ್ಯ ಪರೇಷಾಂ ಹಿ ವಿಶ್ವಾಸಾದ್ದುಃಖಮಶ್ನುತೇ।।
ರಾಜನ್! ಅಪರಾಧವನ್ನೆಸಗಿ ಅವನ ಮೇಲೆಯೇ ಪುನಃ ವಿಶ್ವಾಸವನ್ನಿಡಬಾರದು. ಇತರರಿಗೆ ಅಪರಾಧವನ್ನೆಸಗಿ ಪುನಃ ಅವರ ಮೇಲೆ ವಿಶ್ವಾಸವನ್ನಿಡುವವರು ದುಃಖವನ್ನು ಅನುಭವಿಸಬೇಕಾಗುತ್ತದೆ.”
12137071 ಬ್ರಹ್ಮದತ್ತ ಉವಾಚ।
12137071a ನಾವಿಶ್ವಾಸಾಚ್ಚಿನ್ವತೇಽರ್ಥಾನ್ನೇಹಂತೇ ಚಾಪಿ ಕಿಂ ಚನ।
12137071c ಭಯಾದೇಕತರಾನ್ನಿತ್ಯಂ ಮೃತಕಲ್ಪಾ ಭವಂತಿ ಚ।।
ಬ್ರಹ್ಮದತ್ತನು ಹೇಳಿದನು: “ಅವಿಶ್ವಾಸದಿಂದ ಮನುಷ್ಯನು ತನ್ನ ಉದ್ದೇಶಗಳನ್ನು ಎಂದೂ ಪೂರೈಸಿಕೊಳ್ಳಲಾರನು. ಭಯವೊಂದರಿಂದಲೇ ಇದ್ದರೆ ಅವನು ಮೃತಕಲ್ಪನಾಗಿಬಿಡುತ್ತಾನೆ.”
12137072 ಪೂಜನ್ಯುವಾಚ।
12137072a ಯಸ್ಯೇಹ ವ್ರಣಿನೌ ಪಾದೌ ಪದ್ಭ್ಯಾಂ ಚ ಪರಿಸರ್ಪತಿ।
12137072c ಕ್ಷಣ್ಯೇತೇ ತಸ್ಯ ತೌ ಪಾದೌ ಸುಗುಪ್ತಮಭಿಧಾವತಃ।।
ಪೂಜನಿಯು ಹೇಳಿದಳು: “ಎರಡೂ ಕಾಲುಗಳಲ್ಲಿ ಗಾಯವಾಗಿರುವವನು ಕಾಲ್ನಡುಗೆಯಲ್ಲಿ ಹೋದರೆ ಅವನು ಎಷ್ಟೇ ಸಾವಕಾಶವಾಗಿ ನಡೆದರೂ ಅವನ ಕಾಲಿನ ಗಾಯಗಳು ಹೆಚ್ಚಾಗುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ.
12137073a ನೇತ್ರಾಭ್ಯಾಂ ಸರುಜಾಭ್ಯಾಂ ಯಃ ಪ್ರತಿವಾತಮುದೀಕ್ಷತೇ।
12137073c ತಸ್ಯ ವಾಯುರುಜಾತ್ಯರ್ಥಂ ನೇತ್ರಯೋರ್ಭವತಿ ಧ್ರುವಮ್।।
ಕಣ್ಣಿನ ರೋಗವಿರುವವನು ಗಾಳಿಗೆ ಎದುರಾಗಿ ನೋಡುತ್ತಿದ್ದರೆ ಗಾಳಿಯ ಹೊಡೆತದಿಂದ ಅವನ ಕಣ್ಣುಗಳಿಗೆ ನಿಶ್ಚಯವಾಗಿಯೂ ಹೆಚ್ಚಿನ ಪೀಡೆಯಾಗುತ್ತದೆ.
12137074a ದುಷ್ಟಂ ಪಂಥಾನಮಾಶ್ರಿತ್ಯ ಯೋ ಮೋಹಾದಭಿಪದ್ಯತೇ।
12137074c ಆತ್ಮನೋ ಬಲಮಜ್ಞಾತ್ವಾ ತದಂತಂ ತಸ್ಯ ಜೀವಿತಮ್।।
ತನ್ನ ಬಲವನ್ನು ಅರ್ಥಮಾಡಿಕೊಳ್ಳದೇ ಮೋಹವಶನಾಗಿ ದುಷ್ಟ ಮಾರ್ಗದಲ್ಲಿ ಹೋಗುವವನ ಜೀವನವು ಅಲ್ಲಿಯೇ ಸಮಾಪ್ತವಾಗುತ್ತದೆ.
12137075a ಯಸ್ತು ವರ್ಷಮವಿಜ್ಞಾಯ ಕ್ಷೇತ್ರಂ ಕೃಷತಿ ಮಾನವಃ।
12137075c ಹೀನಂ ಪುರುಷಕಾರೇಣ ಸಸ್ಯಂ ನೈವಾಪ್ನುತೇ ಪುನಃ।।
ಮಳೆಬೀಳುವ ಸಮಯವನ್ನು ತಿಳಿದುಕೊಳ್ಳದೇ ಹೊಲದಲ್ಲಿ ಕೃಷಿಮಾಡುವ ಮನುಷ್ಯನ ಪುರುಷಾರ್ಥವು ವ್ಯರ್ಥವಾಗಿಹೋಗುತ್ತದೆ. ಹಾಗೆ ಬಿತ್ತುವುದರಿಂದ ಬೆಳೆಯು ಪುನಃ ಬೆಳೆಯುವುದಿಲ್ಲ.
12137076a ಯಶ್ಚ ತಿಕ್ತಂ ಕಷಾಯಂ ವಾಪ್ಯಾಸ್ವಾದವಿಧುರಂ ಹಿತಮ್20।
12137076c ಆಹಾರಂ ಕುರುತೇ ನಿತ್ಯಂ ಸೋಽಮೃತತ್ವಾಯ ಕಲ್ಪತೇ।।
ಯಾರು ನಿತ್ಯವೂ ತನ್ನ ರುಚಿಗೆ ತಕ್ಕಂತೆ ಖಾರ, ಕಹಿ ಅಥವಾ ಸ್ವಾದಿಷ್ಟವಾದ ಆಹಾರವನ್ನು ಸೇವಿಸುತ್ತಾನೋ ಅದೇ ಅವನಿಗೆ ಅಮೃತಕಲ್ಪವಾಗುತ್ತದೆ.
12137077a ಪಥ್ಯಂ ಭುಕ್ತ್ವಾ ನರೋ ಲೋಭಾದ್ಯೋಽನ್ಯದಶ್ನಾತಿ ಭೋಜನಮ್।
12137077c ಪರಿಣಾಮಮವಿಜ್ಞಾಯ ತದಂತಂ ತಸ್ಯ ಜೀವಿತಮ್।।
ಆದರೆ ಪರಿಣಾಮವನ್ನು ತಿಳಿದುಕೊಳ್ಳದೇ ಲೋಭದಿಂದ ಪಥ್ಯವನ್ನು ಬಿಟ್ಟು ಅಪಥ್ಯ ಭೋಜನವನ್ನು ಮಾಡುವ ನರನ ಜೀವವು ಅಲ್ಲಿಯೇ ಅಂತ್ಯವಾಗಿಬಿಡುತ್ತದೆ.
12137078a ದೈವಂ ಪುರುಷಕಾರಶ್ಚ ಸ್ಥಿತಾವನ್ಯೋನ್ಯಸಂಶ್ರಯಾತ್।
12137078c ಉದಾತ್ತಾನಾಂ ಕರ್ಮ ತಂತ್ರಂ21 ದೈವಂ ಕ್ಲೀಬಾ ಉಪಾಸತೇ।।
ದೈವ ಮತ್ತು ಪುರುಷಾರ್ಥ ಇವೆರಡೂ ಅನ್ಯೋನ್ಯ ಆಶ್ರಯಿಸಿಕೊಂಡಿರುತ್ತವೆ. ಆದರೆ ಉದಾರ ಬುದ್ಧಿಯುಳ್ಳವರು ಕರ್ಮದ ತಂತ್ರವನ್ನು ಬಳಸುತ್ತಾರೆ ಮತ್ತು ದುರ್ಬಲರು ದೈವದ ಭರವಸೆಯಲ್ಲಿಯೇ ಇರುತ್ತಾರೆ.
12137079a ಕರ್ಮ ಚಾತ್ಮಹಿತಂ ಕಾರ್ಯಂ ತೀಕ್ಷ್ಣಂ ವಾ ಯದಿ ವಾ ಮೃದು।
12137079c ಗ್ರಸ್ಯತೇಽಕರ್ಮಶೀಲಸ್ತು ಸದಾನರ್ಥೈರಕಿಂಚನಃ।।
ಕಠೋರವಾಗಿರಲಿ ಅಥವಾ ಮೃದುವಾಗಿರಲಿ, ತನಗೆ ಹಿತವಾದ ಕರ್ಮವನ್ನು ಮಾಡುತ್ತಿರಬೇಕು. ಕರ್ಮವನ್ನು ಬಿಟ್ಟು ಕುಳಿತುಕೊಳ್ಳುವವನು ನಿರ್ಧನಿಕನಾಗಿ ಸದಾ ಅನರ್ಥಗಳಿಗೆ ಗುರಿಯಾಗುತ್ತಾನೆ.
12137080a ತಸ್ಮಾತ್ಸಂಶಯಿತೇಽಪ್ಯರ್ಥೇ ಕಾರ್ಯ ಏವ ಪರಾಕ್ರಮಃ।
12137080c ಸರ್ವಸ್ವಮಪಿ ಸಂತ್ಯಜ್ಯ ಕಾರ್ಯಮಾತ್ಮಹಿತಂ ನರೈಃ।।
ಆದುದರಿಂದ ಕಾಲ, ದೈವ ಮತ್ತು ಸ್ವಭಾವ ಇವುಗಳ ಮೇಲಿನ ಭರವಸೆಯನ್ನು ಬಿಟ್ಟು ಪರಾಕ್ರಮದಿಂದಲೇ ಕಾರ್ಯಮಾಡಬೇಕು. ಮನುಷ್ಯನು ಸರ್ವಸ್ವವನ್ನೂ ಪಣವನ್ನಾಗಿಟ್ಟು ತನ್ನ ಹಿತಕ್ಕಾಗಿ ಕಾರ್ಯಕೈಗೊಳ್ಳಬೇಕಾಗುತ್ತದೆ.
12137081a ವಿದ್ಯಾ ಶೌರ್ಯಂ ಚ ದಾಕ್ಷ್ಯಂ ಚ ಬಲಂ ಧೈರ್ಯಂ ಚ ಪಂಚಮಮ್।
12137081c ಮಿತ್ರಾಣಿ ಸಹಜಾನ್ಯಾಹುರ್ವರ್ತಯಂತೀಹ ಯೈರ್ಬುಧಾಃ।।
ವಿದ್ಯೆ, ಶೌರ್ಯ, ದಕ್ಷತೆ, ಬಲ ಮತ್ತು ಐದನೆಯ ಧೈರ್ಯ ಇವು ಮನುಷ್ಯನ ಸಹಜ ಮಿತ್ರರೆಂದು ಹೇಳುತ್ತಾರೆ. ವಿದ್ವಾಂಸರು ಇವುಗಳ ಮೂಲಕವೇ ಎಲ್ಲ ಕೆಲಸಗಳನ್ನೂ ಮಾಡುತ್ತಾರೆ.
12137082a ನಿವೇಶನಂ ಚ ಕುಪ್ಯಂ ಚ ಕ್ಷೇತ್ರಂ ಭಾರ್ಯಾ ಸುಹೃಜ್ಜನಃ।
12137082c ಏತಾನ್ಯುಪಚಿತಾನ್ಯಾಹುಃ22 ಸರ್ವತ್ರ ಲಭತೇ ಪುಮಾನ್।।
ಮನೆ, ಚಿನ್ನ-ಬೆಳ್ಳಿಗಳನ್ನು ಬಿಟ್ಟು ಇತರ ಲೋಹಗಳು, ಹೊಲ, ಹೆಂಡತಿ, ಸುಹೃಜ್ಜನರು ಇವರೆಲ್ಲರೂ ಉಪಮಿತ್ರರೆಂದು ಹೇಳುತ್ತಾರೆ. ಇವುಗಳನ್ನು ಮನುಷ್ಯನು ಸಂಪಾದಿಸಿಕೊಳ್ಳಬಹುದು.
12137083a ಸರ್ವತ್ರ ರಮತೇ ಪ್ರಾಜ್ಞಃ ಸರ್ವತ್ರ ಚ ವಿರೋಚತೇ।
12137083c ನ ವಿಭೀಷಯತೇ ಕಂ ಚಿದ್ಭೀಷಿತೋ ನ ಬಿಭೇತಿ ಚ।।
ಪ್ರಾಜ್ಞನು ಸರ್ವತ್ರ ಆನಂದಿಸುತ್ತಾನೆ. ಮತ್ತು ಸರ್ವತ್ರ ವಿರಾಜಿಸುತ್ತಾನೆ. ಅವನನ್ನು ಯಾವುದೂ ಬೆದರಿಸುವುದಿಲ್ಲ ಮತ್ತು ಯಾರ ಬೆದರಿಕೆಗೂ ಅವನು ಹೆದರುವುದಿಲ್ಲ.
12137084a ನಿತ್ಯಂ ಬುದ್ಧಿಮತೋ ಹ್ಯರ್ಥಃ ಸ್ವಲ್ಪಕೋಽಪಿ ವಿವರ್ಧತೇ।
12137084c ದಾಕ್ಷ್ಯೇಣ ಕುರುತೇ ಕರ್ಮ ಸಂಯಮಾತ್ ಪ್ರತಿತಿಷ್ಠತಿ।।
ಬುದ್ಧಿವಂತನಲ್ಲಿ ಸ್ವಲ್ಪವೇ ಧನವಿದ್ದರೂ ಅದು ನಿತ್ಯವೂ ವರ್ಧಿಸುತ್ತಿರುತ್ತದೆ. ದಕ್ಷತೆಯಿಂದ ಮತ್ತು ಸಂಯಮದಿಂದ ಕರ್ಮಗಳನ್ನು ಮಾಡುವ ಅವನು ಪ್ರತಿಷ್ಠಿತನಾಗುತ್ತಾನೆ.
12137085a ಗೃಹಸ್ನೇಹಾವಬದ್ಧಾನಾಂ ನರಾಣಾಮಲ್ಪಮೇಧಸಾಮ್।
12137085c ಕುಸ್ತ್ರೀ ಖಾದತಿ ಮಾಂಸಾನಿ ಮಾಘಮಾ ಸೇಗವಾಮಿವ।।
ಗೃಹಸ್ನೇಹದಲ್ಲಿಯೇ ಇರುವ ಮಂದಬುದ್ಧಿ ಮನುಷ್ಯನ ಮಾಂಸವನ್ನು, ಚೇಳಿನ ಮರಿಗಳು ತಾಯಿಚೇಳನ್ನೇ ತಿಂದುಹಾಕುವಂತೆ, ಕುಟಿಲ ಸ್ತ್ರೀಯು ತಿಂದುಬಿಡುತ್ತಾಳೆ.
12137086a ಗೃಹಂ ಕ್ಷೇತ್ರಾಣಿ ಮಿತ್ರಾಣಿ ಸ್ವದೇಶ ಇತಿ ಚಾಪರೇ।
12137086c ಇತ್ಯೇವಮವಸೀದಂತಿ ನರಾ ಬುದ್ಧಿವಿಪರ್ಯಯೇ।।
ಬುದ್ಧಿಯು ವಿಪರೀತಗೊಂಡಾಗ ನರರು ಮನೆ, ಹೊಲ, ಮಿತ್ರರು, ಸ್ವದೇಶ ಮೊದಲಾದವುಗಳ ಕುರಿತು ಚಿಂತಾಗ್ರಸ್ತರಾಗಿ ಸದಾ ದುಃಖದಲ್ಲಿಯೇ ಇರುತ್ತಾರೆ.
12137087a ಉತ್ಪತೇತ್ಸರುಜಾದ್ದೇಶಾದ್ವ್ಯಾಧಿದುರ್ಭಿಕ್ಷಪೀಡಿತಾತ್।
12137087c ಅನ್ಯತ್ರ ವಸ್ತುಂ ಗಚ್ಚೇದ್ವಾ ವಸೇದ್ವಾ ನಿತ್ಯಮಾನಿತಃ।।
ತನ್ನ ಜನ್ಮಸ್ಥಾನವು ರೋಗ ಮತ್ತು ದುರ್ಭಿಕ್ಷದಿಂದ ಪೀಡಿತವಾದರೆ ಆತ್ಮರಕ್ಷಣೆಗಾಗಿ ಆ ಸ್ಥಳವನ್ನೂ ಬಿಟ್ಟು ಬೇರೆ ಕಡೆ ಹೋಗಬೇಕು. ಅಲ್ಲಿ ಇರಲೇಬೇಕಾದರೂ ಸಮ್ಮಾನಿತನಾಗಿರಬೇಕು.
12137088a ತಸ್ಮಾದನ್ಯತ್ರ ಯಾಸ್ಯಾಮಿ ವಸ್ತುಂ ನಾಹಮಿಹೋತ್ಸಹೇ।
12137088c ಕೃತಮೇತದನಾಹಾರ್ಯಂ ತವ ಪುತ್ರೇಣ ಪಾರ್ಥಿವ।।
ಪಾರ್ಥಿವ! ನಿನ್ನ ಪುತ್ರನೊಡನೆ ನಾನು ದುಷ್ಟಳಾಗಿ ನಡೆದುಕೊಂಡಿದ್ದೇನೆ. ಆದುದರಿಂದ ನಾನು ಇಲ್ಲಿ ಇರುವ ಸಾಹಸವನ್ನು ಮಾಡುವುದಿಲ್ಲ. ಬೇರೆ ಎಲ್ಲಿಯಾದರೂ ಹೊರಟುಹೋಗುತ್ತೇನೆ.
12137089a ಕುಭಾರ್ಯಾಂ ಚ ಕುಪುತ್ರಂ ಚ ಕುರಾಜಾನಂ ಕುಸೌಹೃದಮ್।
12137089c ಕುಸಂಬಂಧಂ ಕುದೇಶಂ ಚ ದೂರತಃ ಪರಿವರ್ಜಯೇತ್।।
ಕುಭಾರ್ಯೆಯನ್ನು, ಕುಪುತ್ರನನ್ನು, ಕುರಾಜನನ್ನು, ಕುಸೌಹೃದನನ್ನು, ಕುಸಂಬಂಧವನ್ನು ಮತ್ತು ಕುದೇಶವನ್ನು ದೂರದಿಂದಲೇ ವರ್ಜಿಸಬೇಕು.
12137090a ಕುಮಿತ್ರೇ23 ನಾಸ್ತಿ ವಿಶ್ವಾಸಃ ಕುಭಾರ್ಯಾಯಾಂ ಕುತೋ ರತಿಃ।
12137090c ಕುರಾಜ್ಯೇ ನಿರ್ವೃತಿರ್ನಾಸ್ತಿ ಕುದೇಶೇ ನ ಪ್ರಜೀವ್ಯತೇ।।
ಕುಮಿತ್ರನಲ್ಲಿ ವಿಶ್ವಾಸವಿರುವುದಿಲ್ಲ. ಕುಭಾರ್ಯೆಯಲ್ಲಿ ಎಲ್ಲಿಯ ಸುಖ? ಕುರಾಜ್ಯದಲ್ಲಿ ಶಾಂತಿಯಿರುವುದಿಲ್ಲ ಮತ್ತು ಕುದೇಶದಲ್ಲಿ ಜೀವಿಸಲು ಸಾಧ್ಯವಿಲ್ಲ.
12137091a ಕುಮಿತ್ರೇ ಸಂಗತಂ ನಾಸ್ತಿ ನಿತ್ಯಮಸ್ಥಿರಸೌಹೃದೇ।
12137091c ಅವಮಾನಃ ಕುಸಂಬಂಧೇ ಭವತ್ಯರ್ಥವಿಪರ್ಯಯೇ।।
ಕುಮಿತ್ರನೊಡನೆಯ ಸಂಬಂಧವು ಸ್ಥಿರವಾಗಿರುವುದಿಲ್ಲ. ಅವನೊಡನೆ ಸದಾ ಸೌಹಾರ್ದತೆಯಿಂದಿರುವುದು ಅಸಂಭವ. ಯಾವ ಸಂಬಂಧವು ದೂಷಿತವಾಗಿರುವುದೋ ಅಲ್ಲಿ ಸ್ವಾರ್ಥದಲ್ಲಿ ವ್ಯತ್ಯಾಸಬಂದಾಗ ಅಪಮಾನವಾಗತೊಡಗುತ್ತದೆ.
12137092a ಸಾ ಭಾರ್ಯಾ ಯಾ ಪ್ರಿಯಂ ಬ್ರೂತೇ ಸ ಪುತ್ರೋ ಯತ್ರ ನಿರ್ವೃತಿಃ।
12137092c ತನ್ಮಿತ್ರಂ ಯತ್ರ ವಿಶ್ವಾಸಃ ಸ ದೇಶೋ ಯತ್ರ ಜೀವ್ಯತೇ।।
ಪ್ರಿಯಮಾತನ್ನಾಡುವ ಪತ್ನಿಯು ಶ್ರೇಷ್ಠಳು. ಸುಖವನ್ನೀಡುವ ಪುತ್ರನೇ ಶ್ರೇಷ್ಠನು. ಯಾರಲ್ಲಿ ವಿಶ್ವಾಸವನ್ನಿಡಬಹುದೇ ಅವನೇ ಮಿತ್ರನು. ಮತ್ತು ಎಲ್ಲಿ ಜೀವನವನ್ನು ನಡೆಸಬಹುದೋ ಆ ದೇಶವು ಉತ್ತಮವು.
12137093a ಯತ್ರ ನಾಸ್ತಿ ಬಲಾತ್ಕಾರಃ ಸ ರಾಜಾ ತೀವ್ರಶಾಸನಃ।
12137093c ನ ಚೈವ ಹ್ಯಭಿಸಂಬಂಧೋ ದರಿದ್ರಂ ಯೋ ಬುಭೂಷತಿ24।।
ಎಲ್ಲಿ ಬಲಾತ್ಕಾರವಿಲ್ಲವೋ, ಯಾವುದೇ ಪ್ರಕಾರದ ಭಯವಿಲ್ಲವೋ ಮತ್ತು ಎಲ್ಲಿ ದರಿದ್ರನು ವೃದ್ಧಿಹೊಂದುತ್ತಾನೋ ಆ ದೇಶದ ತೀವ್ರಶಾಸನ ರಾಜನು ಶ್ರೇಷ್ಠನು.
12137094a ಭಾರ್ಯಾ ದೇಶೋಽಥ ಮಿತ್ರಾಣಿ ಪುತ್ರಸಂಬಂಧಿಬಾಂಧವಾಃ।
12137094c ಏತತ್ಸರ್ವಂ ಗುಣವತಿ ಧರ್ಮನೇತ್ರೇ ಮಹೀಪತೌ।।
ಯಾವ ದೇಶದ ರಾಜನು ಗುಣವಂತನೂ ಧರ್ಮಪರಾಯಣನೂ ಆಗಿರುತ್ತಾನೋ ಅಲ್ಲಿ ಸ್ತ್ರೀ, ಪುತ್ರ, ಮಿತ್ರ, ಸಂಬಂಧಿಗಳು ಮತ್ತು ದೇಶ ಎಲ್ಲವೂ ಉತ್ತಮ ಗುಣಗಳಿಂದ ಸಂಪನ್ನವಾಗಿರುತ್ತವೆ.
12137095a ಅಧರ್ಮಜ್ಞಸ್ಯ ವಿಲಯಂ ಪ್ರಜಾ ಗಚ್ಚಂತ್ಯನಿಗ್ರಹಾತ್।
12137095c ರಾಜಾ ಮೂಲಂ ತ್ರಿವರ್ಗಸ್ಯ ಅಪ್ರಮತ್ತೋಽನುಪಾಲಯನ್।।
ಧರ್ಮವನ್ನು ತಿಳಿಯದ ರಾಜನ ಅತ್ಯಾಚಾರಗಳಿಂದ ಪ್ರಜೆಗಳು ನಾಶವಾಗುತ್ತಾರೆ. ರಾಜನೇ ಧರ್ಮ-ಅರ್ಥ-ಕಾಮ ಈ ತ್ರಿವರ್ಗಗಳ ಮೂಲ. ಆದುದರಿಂದ ರಾಜನಾದವನು ಅಪ್ರಮತ್ತನಾಗಿದ್ದುಕೊಂಡು ಪ್ರಜಾಪಾಲನೆಯನ್ನು ಮಾಡಬೇಕು.
12137096a ಬಲಿಷಡ್ಭಾಗಮುದ್ಧೃತ್ಯ ಬಲಿಂ ತಮುಪಯೋಜಯೇತ್।
12137096c ನ ರಕ್ಷತಿ ಪ್ರಜಾಃ ಸಮ್ಯಗ್ಯಃ ಸ ಪಾರ್ಥಿವತಸ್ಕರಃ।।
ಪ್ರಜೆಗಳ ಆದಾಯದ ಆರನೆಯ ಒಂದು ಭಾಗವನ್ನು ಕರದ ರೂಪದಲ್ಲಿ ಪಡೆದುಕೊಂಡು ಅದನ್ನು ತಾನೇ ಉಪಭೋಗಿಸುವ ಮತ್ತು ಪ್ರಜೆಗಳನ್ನು ಸರಿಯಾಗಿ ಪಾಲಿಸದ ರಾಜನು ರಾಜರಲ್ಲಿಯೇ ಕಳ್ಳನೆಂದೆನಿಸಿಕೊಳ್ಳುತ್ತಾನೆ.
12137097a ದತ್ತ್ವಾಭಯಂ ಯಃ ಸ್ವಯಮೇವ ರಾಜಾ ನ ತತ್ ಪ್ರಮಾಣಂ ಕುರುತೇ ಯಥಾವತ್।
12137097c ಸ ಸರ್ವಲೋಕಾದುಪಲಭ್ಯ ಪಾಪಮ್ ಅಧರ್ಮಬುದ್ಧಿರ್ನಿರಯಂ ಪ್ರಯಾತಿ।।
ಪ್ರಜೆಗಳಿಗೆ ಅಭಯದಾನವನ್ನು ನೀಡಿ ಧನದ ಲೋಭದಿಂದಾಗಿ ಸ್ವಯಂ ತಾನೇ ಅದನು ಪಾಲಿಸದೇ ಇರುವ ಪಾಪಬುದ್ಧಿ ರಾಜನು ಸಂಪೂರ್ಣ ಜಗತ್ತಿನ ಪಾಪವನ್ನು ಪಡೆದುಕೊಂಡು ನರಕಕ್ಕೆ ಹೋಗುತ್ತಾನೆ.
12137098a ದತ್ತ್ವಾಭಯಂ ಯಃ ಸ್ಮ ರಾಜಾ ಪ್ರಮಾಣಂ ಕುರುತೇ ಸದಾ।
12137098c ಸ ಸರ್ವಸುಖಕೃಜ್ಞೇಯಃ ಪ್ರಜಾ ಧರ್ಮೇಣ ಪಾಲಯನ್।।
ಅಭಯವನ್ನು ನೀಡಿ ಧರ್ಮಪೂರ್ವಕವಾಗಿ ಪ್ರಜಾಪಾಲನೆ ಮಾಡುತ್ತಾ ತನ್ನನ್ನು ತಾನು ಆ ಪ್ರತಿಜ್ಞೆಯನ್ನು ಸತ್ಯವನ್ನಾಗಿಸುವ ರಾಜನು ಸರ್ವರಿಗೂ ಸುಖವನ್ನು ನೀಡುವವನು ಎಂದು ತಿಳಿಯಲಾಗುತ್ತದೆ.
12137099a ಪಿತಾ ಮಾತಾ ಗುರುರ್ಗೋಪ್ತಾ ವಹ್ನಿರ್ವೈಶ್ರವಣೋ ಯಮಃ।
12137099c ಸಪ್ತ ರಾಜ್ಞೋ ಗುಣಾನೇತಾನ್ಮನುರಾಹ ಪ್ರಜಾಪತಿಃ।।
ಪ್ರಜಾಪತಿ ಮನುವು ಹೇಳಿದ ರಾಜನ ಏಳು ಗುಣಗಳ ಪ್ರಕಾರ ರಾಜನು ಪಿತಾ, ಮಾತಾ, ಗುರು, ರಕ್ಷಕ, ಅಗ್ನಿ, ಕುಬೇರ, ಮತ್ತು ಯಮರಿಗೆ ಸಮಾನನು.
12137100a ಪಿತಾ ಹಿ ರಾಜಾ ರಾಷ್ಟ್ರಸ್ಯ ಪ್ರಜಾನಾಂ ಯೋಽನುಕಂಪಕಃ।
12137100c ತಸ್ಮಿನ್ಮಿಥ್ಯಾಪ್ರಣೀತೇ ಹಿ ತಿರ್ಯಗ್ಗಚ್ಚತಿ ಮಾನವಃ।।
ರಾಷ್ಟ್ರದ ಪ್ರಜೆಗಳ ಅನುಕಂಪಕನಾದ ರಾಜನು ಪಿತನಿಗೆ ಸಮಾನನು. ಅವನ ಕುರಿತಾಗಿ ಮಿಥ್ಯಾಭಾವವನ್ನು ಪ್ರದರ್ಶಿಸಿದ ಮಾನವನು ತಿರ್ಯಗ್ಯೋನಿಯಲ್ಲಿ ಜನ್ಮತಾಳುತ್ತಾನೆ.
12137101a ಸಂಭಾವಯತಿ ಮಾತೇವ ದೀನಮಭ್ಯವಪದ್ಯತೇ।
12137101c ದಹತ್ಯಗ್ನಿರಿವಾನಿಷ್ಟಾನ್ಯಮಯನ್ ಭವತೇ ಯಮಃ।।
ಅವನು ದೀನ-ದುಃಖಿಗಳನ್ನೂ ನೋಡಿಕೊಳ್ಳುತ್ತಾನಾದುದರಿಂದ ಮಾತೆಗೆ ಸಮಾನನು. ಅನಿಷ್ಟ ಜನರನ್ನು ಸುಡುತ್ತಿರುವುದರಿಂದ ಅವನು ಅಗ್ನಿಯ ಸಮಾನನು ಮತ್ತು ದುಷ್ಟರನ್ನು ನಿಯಂತ್ರಿಸುವುದರಿಂದ ಅವನು ಯಮನ ಸಮಾನನು.
12137102a ಇಷ್ಟೇಷು ವಿಸೃಜತ್ಯರ್ಥಾನ್ಕುಬೇರ ಇವ ಕಾಮದಃ।
12137102c ಗುರುರ್ಧರ್ಮೋಪದೇಶೇನ ಗೋಪ್ತಾ ಚ ಪರಿಪಾಲನಾತ್।।
ಇಷ್ಟಜನರರಿಗೆ ಬಯಸಿದಷ್ಟು ಧನವನ್ನು ಹಂಚುವುದರಿಂದ ಅವನು ಕುಬೇರನು. ಧರ್ಮೋಪದೇಶವನ್ನು ಮಾಡುವುದರಿಂದ ಗುರು ಮತ್ತು ಪರಿಪಾಲನೆಮಾಡುವುದರಿಂದ ರಕ್ಷಕನಾಗುತ್ತಾನೆ.
12137103a ಯಸ್ತು ರಂಜಯತೇ ರಾಜಾ ಪೌರಜಾನಪದಾನ್ಗುಣೈಃ।
12137103c ನ ತಸ್ಯ ಭ್ರಶ್ಯತೇ ರಾಜ್ಯಂ ಗುಣಧರ್ಮಾನುಪಾಲನಾತ್।।
ಯಾವ ರಾಜನು ತನ್ನ ಗುಣಗಳಿಂದ ನಗರ-ಗ್ರಾಮೀಣ ಪ್ರಜೆಗಳನ್ನು ರಂಜಿಸುತ್ತಾನೋ ಅವನ ಗುಣಧರ್ಮಗಳ ಅನುಪಾಲನೆಯಿಂದ ಅವನು ರಾಜ್ಯದಿಂದ ಭ್ರಷ್ಟನಾಗುವುದಿಲ್ಲ.
12137104a ಸ್ವಯಂ ಸಮುಪಜಾನನ್ ಹಿ ಪೌರಜಾನಪದಕ್ರಿಯಾಃ।
12137104c ಸ ಸುಖಂ ಮೋದತೇ ಭೂಪ ಇಹ ಲೋಕೇ ಪರತ್ರ ಚ।।
ಪುರದ ಮತ್ತು ಗ್ರಾಮಗಳ ನಾಗರೀಕರನ್ನು ಸ್ವಯಂ ತಾನೇ ಗೌರವಿಸುವುದನ್ನು ತಿಳಿದುಕೊಂಡಿರುವ ಭೂಪನು ಇಹದಲ್ಲಿ ಮತ್ತು ಪರಲೋಕದಲ್ಲಿ ಸುಖವನ್ನು ಹೊಂದುತ್ತಾನೆ.
12137105a ನಿತ್ಯೋದ್ವಿಗ್ನಾಃ ಪ್ರಜಾ ಯಸ್ಯ ಕರಭಾರಪ್ರಪೀಡಿತಾಃ।
12137105c ಅನರ್ಥೈರ್ವಿಪ್ರಲುಪ್ಯಂತೇ ಸ ಗಚ್ಚತಿ ಪರಾಭವಮ್।।
ಕರಭಾರದಿಂದ ಪೀಡಿತರಾಗಿ ಯಾರ ಪ್ರಜೆಗಳು ನಿತ್ಯವೂ ಉದ್ವಿಗ್ನರಾಗಿರುತ್ತಾರೋ ಮತ್ತು ಅನರ್ಥಗಳಿಂದ ಪೀಡಿತರಾಗಿರುತ್ತಾರೋ ಆ ರಾಜನು ಪರಾಭವವನ್ನು ಹೊಂದುತ್ತಾನೆ.
12137106a ಪ್ರಜಾ ಯಸ್ಯ ವಿವರ್ಧಂತೇ ಸರಸೀವ ಮಹೋತ್ಪಲಮ್।
12137106c ಸ ಸರ್ವಯಜ್ಞಫಲಭಾಗ್ರಾಜಾ ಲೋಕೇ ಮಹೀಯತೇ।।
ಸರೋವರದಲ್ಲಿರುವ ಕಮಲಗಳಂತೆ ಯಾರ ಪ್ರಜೆಗಳು ವೃದ್ಧಿಹೊಂದುತ್ತಾರೋ ಆ ರಾಜನು ಸರ್ವ ಯಜ್ಞಗಳ ಫಲದ ಭಾಗಿಯಾಗುತ್ತಾನೆ ಮತ್ತು ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ.
12137107a ಬಲಿನಾ ವಿಗ್ರಹೋ ರಾಜನ್ನ ಕಥಂ ಚಿತ್ ಪ್ರಶಸ್ಯತೇ।
12137107c ಬಲಿನಾ ವಿಗೃಹೀತಸ್ಯ ಕುತೋ ರಾಜ್ಯಂ ಕುತಃ ಸುಖಮ್।।
ರಾಜನ್! ಬಲಶಾಲಿಯೊಡನೆ ಯುದ್ಧಮಾಡುವುದು ಎಂದೂ ಪ್ರಶಂಸಿಸಲ್ಪಡುವುದಿಲ್ಲ. ಬಲಶಾಲಿಯೊಡನೆ ಯುದ್ಧಮಾಡುವವನಿಗೆ ಎಲ್ಲಿಯ ರಾಜ್ಯ ಮತ್ತು ಎಲ್ಲಿಯ ಸುಖ?””
12137108 ಭೀಷ್ಮ ಉವಾಚ।
12137108a ಸೈವಮುಕ್ತ್ವಾ ಶಕುನಿಕಾ ಬ್ರಹ್ಮದತ್ತಂ ನರಾಧಿಪಮ್।
12137108c ರಾಜಾನಂ ಸಮನುಜ್ಞಾಪ್ಯ ಜಗಾಮಾಥೇಪ್ಸಿತಾಂ ದಿಶಮ್।।
ಭೀಷ್ಮನು ಹೇಳಿದನು: “ನರಾಧಿಪ ಬ್ರಹ್ಮದತ್ತನಿಗೆ ಹೀಗೆ ಹೇಳಿ ಆ ಪಕ್ಷಿಯು ರಾಜನ ಅನುಮತಿಯನ್ನು ಪಡೆದು ಬಯಸಿದ ದಿಕ್ಕಿನಲ್ಲಿ ಹೊರಟುಹೋಯಿತು.
12137109a ಏತತ್ತೇ ಬ್ರಹ್ಮದತ್ತಸ್ಯ ಪೂಜನ್ಯಾ ಸಹ ಭಾಷಿತಮ್।
12137109c ಮಯೋಕ್ತಂ ಭರತಶ್ರೇಷ್ಠ ಕಿಮನ್ಯಚ್ಚ್ರೋತುಮಿಚ್ಚಸಿ।।
ಭರತಶ್ರೇಷ್ಠ! ಪಕ್ಷಿ ಪೂಜನಿಯೊಡನೆ ಬ್ರಹ್ಮದತ್ತನ ಈ ಸಂಭಾಷಣೆಯನ್ನು ನಾನು ಹೇಳಿದ್ದೇನೆ. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಬ್ರಹ್ಮದತ್ತಪೂಜನ್ಯೋಃಸಂವಾದೇ ಸಪ್ತತ್ರಿಂಶಾತ್ಯಧಿಕಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಬ್ರಹ್ಮದತ್ತಪೂಜನ್ಯೋಃ ಸಂವಾದ ಎನ್ನುವ ನೂರಾಮೂವತ್ತೇಳನೇ ಅಧ್ಯಾಯವು.-
ಬ್ರಹ್ಮದತ್ತ-ಪೂಜನಿಯರ ಈ ಕಥೆಯು ಮುಂದೆ ಹರಿವಂಶದ ಅಧ್ಯಾಯ ೨೦ರಲ್ಲಿ ಬರುತ್ತದೆ. ↩︎
-
ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ತಯೋರರ್ಥೇ ಕೃತಜ್ಞಾ ಸಾ ಖೇಚರೀ ಪೂಜನೀ ಸದಾ। ↩︎
-
ಕಾರಣಾತ್ ಸಾಂತ್ವಯತ್ಯೇತೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಕ್ಷಿಪ್ರಂ ಸ ವಧ್ಯತೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಸ್ವಾಭಾವಿಕ ಸ್ನೇಹವಿರುವುದರಿಂದ ತಂದೆ ತಾಯಿಗಳು ಬಾಂಧವಗಣಗಳಲ್ಲಿಯೇ ಶ್ರೇಷ್ಠರು. ಪತ್ನಿಯು ವೀಯನಾಶಕಳಾದುದರಿಂದ ವೃದ್ಧಾವಸ್ಥೆಯ ಮೂರ್ತಿಮಾನ ರೂಪಳು. ಪುತ್ರನು ತನ್ನದೇ ಅಂಶದಿಂದ ಹುಟ್ಟಿದವನು. ಸಹೋದರನು ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲುದಾರನಾದುದರಿಂದ ಶತ್ರುವಿಗೆ ಸಮಾನನು. ಮಿತ್ರನು ಅವನ ಕೈ ಒದ್ದೆಯಾಗಿರುವವರೆಗೆ ಅರ್ಥಾತ್ ಅವನ ಸ್ವಾರ್ಥವು ಸಿದ್ಧಿಯಾಗುವವರೆಗೆ ಮಿತ್ರನಾಗಿಗಿರುತ್ತಾನೆ. ಕೇವಲ ಆತ್ಮವೇ ಸುಖ ಮತ್ತು ದುಃಖಗಳನ್ನು ಭೋಗಿಸುವಂಥಹುದು ಎಂದು ಹೇಳುತ್ತಾರೆ (ಗೀತಾ ಪ್ರೆಸ್). ↩︎
-
ಮನೋ ಭವತ್ಯವಿಶ್ವಸ್ತಂ ಕರ್ಮ ತ್ರಾಸಯತೇಽಬಲಾನ್। ಎಂಬ ಪಾಠಾಂತರವಿದೆ( ಗೀತಾ ಪ್ರೆಸ್). ↩︎
-
ಜಹ್ಯಾತ್ತತ್ಸತ್ವವಾನ್ ಸ್ಥಾನಂ ಶತ್ರೋಃ ಸಮ್ಮನಿತೋಽಪಿಸನ್। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ದೀರ್ಘಕಾಲಂ ಸಮರ್ಚಿತಾ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ವಿಶ್ವಾಸಾದ್ ವಧ್ಯತೇ ಲೋಕೇ ತಸ್ಮಾಚ್ಛ್ರೇಯೋಽಪ್ಯದರ್ಶನಮ್। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ನಾಯಿಯ ಮಾಂಸವನ್ನು ತಿನ್ನುವವನು. ↩︎
-
ಔರ್ವಾಗ್ನಿಯ ಕುರಿತು ಹರಿವಂಶದ ಅಧ್ಯಾಯ 45ರಲ್ಲಿ ಬರುತ್ತದೆ. ↩︎
-
ವಧ್ಯಂತೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಯಥಾಕಾಮಮಹಿಂಸಿತಾ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಸ ಹತೋ ಮಯಾ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಅನಂತರಂ ತ್ವಯಾಹಂ ಚ ಹಂತವ್ಯಾ ಹಿ ನರಾಧಿಪ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ವಧಬಂಧಕೃತಂ ದುಃಖಂ ಸ್ತ್ರೀಕೃತಂ ಸಹಜಂ ತಥಾ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಸುತೇನ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ನಿಶ್ಚಯಃ ಸರ್ವಶಾಸ್ತ್ರೇಷು ವಿಶ್ವಾಸಶ್ಚಾಸುಖೋದಯಃ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಉಪಗೃಹ್ಯ ತು ವೈರಾಣಿ ಸಾಂತ್ವಯಂತಿ ನರಾಧಿಪ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಯಸ್ತು ತಿಕ್ತಂ ಕಷಾಯಂ ವಾ ಸ್ವಾದು ವಾ ಮಧುರಂ ಹಿತಮ್। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಉದಾರಾಣಾಂ ತು ಸತ್ಕರ್ಮ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಏತಾನ್ಯುಪಹಿತಾನ್ಯಾಹುಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
] ಕುಪುತ್ರೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಭೀರೇವ ನಾಸ್ತಿ ಸಂಬಂಧೋ ದರಿದ್ರಂ ಯೋ ಬುಭೂಷತೇ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎