062 ವರ್ಣಾಶ್ರಮಧರ್ಮಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 62

ಸಾರ

ವರ್ಣಾಶ್ರಮಧರ್ಮಕಥನ (1-11).

12062001 ಯುಧಿಷ್ಠಿರ ಉವಾಚ।
12062001a ಶಿವಾನ್ಸುಖಾನ್ಮಹೋದರ್ಕಾನಹಿಂಸ್ರಾಽಲ್ಲೋಕಸಂಮತಾನ್।
12062001c ಬ್ರೂಹಿ ಧರ್ಮಾನ್ಸುಖೋಪಾಯಾನ್ಮದ್ವಿಧಾನಾಂ ಸುಖಾವಹಾನ್।।

ಯುಧಿಷ್ಠಿರನು ಹೇಳಿದನು: “ಕಲ್ಯಾಣಕರವಾದ, ಸುಖಮಯವಾದ, ಅಭ್ಯುದಯವನ್ನುಂಟುಮಾಡುವ, ಅಹಿಂಸಾತ್ಮಕವಾದ, ಲೋಕಸಮ್ಮತವಾದ, ನಮ್ಮಂಥವರಿಗೆ ಸುಖಾವಹವಾದ ಧರ್ಮಗಳ ಕುರಿತು ಹೇಳು!”

12062002 ಭೀಷ್ಮ ಉವಾಚ।
12062002a ಬ್ರಾಹ್ಮಣಸ್ಯೇಹ ಚತ್ವಾರ ಆಶ್ರಮಾ ವಿಹಿತಾಃ ಪ್ರಭೋ।
12062002c ವರ್ಣಾಸ್ತಾನನುವರ್ತಂತೇ ತ್ರಯೋ ಭರತಸತ್ತಮ।।

ಭೀಷ್ಮನು ಹೇಳಿದನು: “ಪ್ರಭೋ! ಭರತಸತ್ತಮ! ಬ್ರಾಹ್ಮಣನಿಗೆ ನಾಲ್ಕೂ ಆಶ್ರಮಗಳೂ ವಿಹಿತವಾಗಿವೆ. ಉಳಿದ ಮೂರು ವರ್ಣದವರು ಮೂರು ಆಶ್ರಮಗಳನ್ನು ಅನುಸರಿಸುತ್ತಾರೆ.

12062003a ಉಕ್ತಾನಿ ಕರ್ಮಾಣಿ ಬಹೂನಿ ರಾಜನ್ ಸ್ವರ್ಗ್ಯಾಣಿ ರಾಜನ್ಯಪರಾಯಣಾನಿ।
12062003c ನೇಮಾನಿ ದೃಷ್ಟಾಂತವಿಧೌ ಸ್ಮೃತಾನಿ ಕ್ಷಾತ್ರೇ ಹಿ ಸರ್ವಂ ವಿಹಿತಂ ಯಥಾವತ್।।

ರಾಜನ್! ಸ್ವರ್ಗದಾಯಕವಾದ ಅನೇಕ ಕರ್ಮಗಳು ಹೇಳಲ್ಪಟ್ಟಿವೆ. ಯುದ್ಧವೇ ಮೊದಲಾದ ಹಿಂಸಾಕರ್ಮಗಳು ಕ್ಷತ್ರಿಯರಿಗೆ ಮಾತ್ರ ವಿಹಿತಗೊಂಡಿವೆ.

12062004a ಕ್ಷಾತ್ರಾಣಿ ವೈಶ್ಯಾನಿ ಚ ಸೇವಮಾನಃ ಶೌದ್ರಾಣಿ ಕರ್ಮಾಣಿ ಚ ಬ್ರಾಹ್ಮಣಃ ಸನ್।
12062004c ಅಸ್ಮಿಽಲ್ಲೋಕೇ ನಿಂದಿತೋ ಮಂದಚೇತಾಃ ಪರೇ ಚ ಲೋಕೇ ನಿರಯಂ ಪ್ರಯಾತಿ।।

ಬ್ರಾಹ್ಮಣನಾಗಿದ್ದರೂ ಕ್ಷತ್ರಿಯರ, ವೈಶ್ಯರ ಮತ್ತು ಶೂದ್ರರ ಸೇವಾಕರ್ಮಗಳನ್ನು ಮಾಡುವ ಮಂದಚೇತಸನು ಈ ಲೋಕದಲ್ಲಿ ನಿಂದಿಸಲ್ಪಡುವುದಲ್ಲದೇ ಪರಲೋಕದಲ್ಲಿಯೂ ನರಕಕ್ಕೆ ಹೋಗುತ್ತಾನೆ.

12062005a ಯಾ ಸಂಜ್ಞಾ ವಿಹಿತಾ ಲೋಕೇ ದಾಸೇ ಶುನಿ ವೃಕೇ ಪಶೌ।
12062005c ವಿಕರ್ಮಣಿ ಸ್ಥಿತೇ ವಿಪ್ರೇ ತಾಂ ಸಂಜ್ಞಾಂ ಕುರು ಪಾಂಡವ।।

ಪಾಂಡವ! ಲೋಕದಲ್ಲಿ ದಾಸ, ನಾಯಿ, ತೋಳ ಮತ್ತು ಪಶುಗಳಿಗೆ ಯಾವ ನಿಂದಾಸೂಚಕ ಸಂಜ್ಞೆಗಳಿವೆಯೋ ಅವುಗಳು ಕರ್ಮಭ್ರಷ್ಟನಾದ ಬ್ರಾಹ್ಮಣನಿಗೂ ಅನ್ವಯಿಸುತ್ತವೆ.

12062006a ಷಟ್ಕರ್ಮಸಂಪ್ರವೃತ್ತಸ್ಯ ಆಶ್ರಮೇಷು ಚತುರ್ಷ್ವಪಿ।
12062006c ಸರ್ವಧರ್ಮೋಪಪನ್ನಸ್ಯ ಸಂಭೂತಸ್ಯ ಕೃತಾತ್ಮನಃ।।
12062007a ಬ್ರಾಹ್ಮಣಸ್ಯ ವಿಶುದ್ಧಸ್ಯ ತಪಸ್ಯಭಿರತಸ್ಯ ಚ।
12062007c ನಿರಾಶಿಷೋ ವದಾನ್ಯಸ್ಯ ಲೋಕಾ ಹ್ಯಕ್ಷರಸಂಜ್ಞಿತಾಃ।।

ಷಟ್ಕರ್ಮಗಳಲ್ಲಿ ತೊಡಗಿಕೊಂಡು, ನಾಲ್ಕೂ ಆಶ್ರಮಗಳನ್ನೂ ನಡೆಸಿಕೊಂಡು ಸರ್ವಧರ್ಮೋಪಪನ್ನನಾಗಿರುವ, ಕೃತಾತ್ಮನೂ ಜಿತಚಿತ್ತನೂ, ವಿಶುದ್ಧನೂ, ತಪೋನಿರತನೂ, ಆಶಾರಹಿತನೂ, ಉದಾರನೂ ಆಗಿರುವ ಬ್ರಾಹ್ಮಣನಿಗೆ ಅಕ್ಷರ ಲೋಕಗಳೆಂದು ಹೇಳಲ್ಪಟ್ಟಿದೆ.

12062008a ಯೋ ಯಸ್ಮಿನ್ಕುರುತೇ ಕರ್ಮ ಯಾದೃಶಂ ಯೇನ ಯತ್ರ ಚ।
12062008c ತಾದೃಶಂ ತಾದೃಶೇನೈವ ಸ ಗುಣಂ ಪ್ರತಿಪದ್ಯತೇ।।

ಯಾರು ಯಾವ ಆಶ್ರಮದಲ್ಲಿ ಯಾವ ಕರ್ಮವನ್ನು ಯಾವ ಕಾರಣದಿಂದ ಎಲ್ಲಿ ಮಾಡುತ್ತಾರೋ ಅವರು ಆ ಕರ್ಮಕ್ಕೆ ತಕ್ಕುದಾದ ಫಲವನ್ನು ಅದೇ ವಿಧಾನದಲ್ಲಿಯೇ ಪಡೆಯುತ್ತಾರೆ.

12062009a ವೃದ್ಧ್ಯಾ ಕೃಷಿವಣಿಕ್ತ್ವೇನ ಜೀವಸಂಜೀವನೇನ ಚ।
12062009c ವೇತ್ತುಮರ್ಹಸಿ ರಾಜೇಂದ್ರ ಸ್ವಾಧ್ಯಾಯಗಣಿತಂ ಮಹತ್।।

ವೈಶ್ಯರಿಗೆ ಹೇಗೆ ಕೃಷಿ, ವಾಣಿಜ್ಯಗಳು ಮತ್ತು ಕ್ಷತ್ರಿಯರಿಗೆ ಪ್ರಜಾಪರಿಪಾಲನೆಯು ಮುಖ್ಯ ಕರ್ಮಗಳೋ ಹಾಗೆ ಬ್ರಾಹ್ಮಣನಿಗೆ ಸ್ವಾಧ್ಯಾಯವು ಮಹತ್ತರ ಕರ್ಮವಾಗಿದೆ.

12062010a ಕಾಲಸಂಚೋದಿತಃ ಕಾಲಃ ಕಾಲಪರ್ಯಾಯನಿಶ್ಚಿತಃ।
12062010c ಉತ್ತಮಾಧಮಮಧ್ಯಾನಿ ಕರ್ಮಾಣಿ ಕುರುತೇಽವಶಃ।।

ಕಾಲನಿಂದ ಪ್ರೇರಿತರಾಗಿ ಮತ್ತು ಹಿಂದಿನ ಕರ್ಮಫಲಗಳ ವಾಸನೆಯಿಂದ ಪ್ರಭಾವಿತರಾಗಿ ಮನುಷ್ಯರು ಅವಶರಾಗಿ ಉತ್ತಮ-ಅಧಮ-ಮಧ್ಯಮ ಕರ್ಮಗಳನ್ನು ಮಾಡುತ್ತಾರೆ.

12062011a ಅಂತವಂತಿ ಪ್ರದಾನಾನಿ ಪುರಾ ಶ್ರೇಯಸ್ಕರಾಣಿ ಚ।
12062011c ಸ್ವಕರ್ಮನಿರತೋ ಲೋಕೋ ಹ್ಯಕ್ಷರಃ ಸರ್ವತೋಮುಖಃ।।

ದೇಹಪ್ರಾಪ್ತಿಯೆಂಬ ಶ್ರೇಯಸ್ಸಿಗೆ ಹಿಂದಿನ ಕಾರಣಗಳು ದೇಹದೊಡನೆಯೇ ಅಂತ್ಯವಾಗುವವು. ಆದುದರಿಂದ ಸ್ವಕರ್ಮನಿರತನಾದವನು ಸರ್ವತೋಮುಖನಾಗಿ ಅಕ್ಷರ ಲೋಕಗಳನ್ನು ಸೇರುತ್ತಾನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವರ್ಣಾಶ್ರಮಧರ್ಮಕಥನೇ ದ್ವಿಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವರ್ಣಾಶ್ರಮಧರ್ಮಕಥನ ಎನ್ನುವ ಅರವತ್ತೆರಡನೇ ಅಧ್ಯಾಯವು.