ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 49
ಸಾರ
12049001 ವಾಸುದೇವ ಉವಾಚ।
12049001a ಶೃಣು ಕೌಂತೇಯ ರಾಮಸ್ಯ ಮಯಾ ಯಾವತ್ಪರಿಶ್ರುತಮ್।
12049001c ಮಹರ್ಷೀಣಾಂ ಕಥಯತಾಂ ಕಾರಣಂ ತಸ್ಯ ಜನ್ಮ ಚ।।
12049002a ಯಥಾ ಚ ಜಾಮದಗ್ನ್ಯೇನ ಕೋಟಿಶಃ ಕ್ಷತ್ರಿಯಾ ಹತಾಃ।
12049002c ಉದ್ಭೂತಾ ರಾಜವಂಶೇಷು ಯೇ ಭೂಯೋ ಭಾರತೇ ಹತಾಃ।।
ವಾಸುದೇವನು ಹೇಳಿದನು: “ಕೌಂತೇಯ! ಮಹರ್ಷಿಗಳಿಂದ ನಾನು ಹೇಗೆ ಕೇಳಿದ್ದೆನೋ ಹಾಗೆ ರಾಮನ ಜನ್ಮದ ಕಾರಣ, ಆ ಜಾಮದಗ್ನಿಯು ಏಕೆ ಕೋಟಿಗಟ್ಟಲೆ ಕ್ಷತ್ರಿಯರನ್ನು ಸಂಹರಿಸಿದನು ಮತ್ತು ಹತರಾಗಿದ್ದ ರಾಜವಂಶಗಳಲ್ಲಿ ಪುನಃ ಹೇಗೆ ಕ್ಷತ್ರಿಯರು ಹುಟ್ಟಿದರು ಎನ್ನುವುದನ್ನು ಕೇಳು.
12049003a ಜಹ್ನೋರಜಹ್ನುಸ್ತನಯೋ ಬಲ್ಲವಸ್ತಸ್ಯ ಚಾತ್ಮಜಃ।
12049003c ಕುಶಿಕೋ ನಾಮ ಧರ್ಮಜ್ಞಸ್ತಸ್ಯ ಪುತ್ರೋ ಮಹೀಪತಿಃ।।
ಜಹ್ನುವೆನ್ನುವ ರಾಜನಿದ್ದನು. ಅವನ ಮಗನೇ ಅಜ. ಬಲ್ಲವನು ಅಜನ ಮಗನಾಗಿದ್ದನು. ಮಹೀಪತಿ ಬಲ್ಲವನಿಗೆ ಕುಶಿಕ ಎಂಬ ಹೆಸರಿನ ಧರ್ಮಜ್ಞ ಮಗನಿದ್ದನು.
12049004a ಉಗ್ರಂ ತಪಃ ಸಮಾತಿಷ್ಠತ್ಸಹಸ್ರಾಕ್ಷಸಮೋ ಭುವಿ।
12049004c ಪುತ್ರಂ ಲಭೇಯಮಜಿತಂ ತ್ರಿಲೋಕೇಶ್ವರಮಿತ್ಯುತ।।
ಭುವಿಯಲ್ಲಿ ಸಹಸ್ರಾಕ್ಷನಂತಿದ್ದ ಆ ಕುಶಿಕನು ಅಪರಾಜಿತನಾದ ತ್ರಿಲೋಕಗಳಿಗೂ ಈಶ್ವರನಾಗುವ ಮಗನನ್ನು ಪಡೆಯಲೋಸುಗ ಉಗ್ರ ತಪಸ್ಸನ್ನಾಚರಿಸಿದನು.
12049005a ತಮುಗ್ರತಪಸಂ ದೃಷ್ಟ್ವಾ ಸಹಸ್ರಾಕ್ಷಃ ಪುರಂದರಃ।
12049005c ಸಮರ್ಥಃ ಪುತ್ರಜನನೇ ಸ್ವಯಮೇವೈತ್ಯ ಭಾರತ।।
ಭಾರತ! ಅವನ ಆ ಉಗ್ರತಪಸ್ಸನ್ನು ನೋಡಿ ಸಹಸ್ರಾಕ್ಷ ಪುರಂದರನು, ಕುಶಿಕನು ಬಯಸಿದ ಪುತ್ರನನ್ನು ಪಡೆಯಲು ಸಮರ್ಥನೆಂದು ತಿಳಿದು, ತಾನೇ ಅವನ ಮಗನಾಗಿ ಹುಟ್ಟಿದನು.
12049006a ಪುತ್ರತ್ವಮಗಮದ್ರಾಜಂಸ್ತಸ್ಯ ಲೋಕೇಶ್ವರೇಶ್ವರಃ।
12049006c ಗಾಧಿರ್ನಾಮಾಭವತ್ಪುತ್ರಃ ಕೌಶಿಕಃ ಪಾಕಶಾಸನಃ।।
ರಾಜನ್! ಲೋಕೇಶ್ವರ ಈಶ್ವರ ಪಾಕಶಾಸನನು ಗಾಧಿ ಎಂಬ ಹೆಸರಿನಲ್ಲಿ ಕುಶಿಕನ ಪುತ್ರನಾಗಿ ಕೌಶಿಕನೆಂದೂ ಕರೆಯಲ್ಪಟ್ಟನು.
12049007a ತಸ್ಯ ಕನ್ಯಾಭವದ್ರಾಜನ್ನಾಮ್ನಾ ಸತ್ಯವತೀ ಪ್ರಭೋ।
12049007c ತಾಂ ಗಾಧಿಃ ಕವಿಪುತ್ರಾಯ ಸೋರ್ಚೀಕಾಯ ದದೌ ಪ್ರಭುಃ।।
ರಾಜನ್! ಪ್ರಭೋ! ಅವನಿಗೆ ಸತ್ಯವತೀ ಎಂಬ ಹೆಸರಿನ ಮಗಳಾದಳು. ಪ್ರಭು ಗಾಧಿಯು ಅವಳನ್ನು ಭೃಗುವಿನ ಮಗ ಋಚೀಕನಿಗೆ ಮದುವೆಮಾಡಿಕೊಟ್ಟನು.
12049008a ತತಃ ಪ್ರೀತಸ್ತು ಕೌಂತೇಯ ಭಾರ್ಗವಃ ಕುರುನಂದನ।
12049008c ಪುತ್ರಾರ್ಥೇ ಶ್ರಪಯಾಮಾಸ ಚರುಂ ಗಾಧೇಸ್ತಥೈವ ಚ।।
ಕೌಂತೇಯ! ಕುರುನಂದನ! ಅದರಿಂದ ಪ್ರೀತನಾದ ಭಾರ್ಗವ ಋಚೀಕನು ತನಗೂ ಮತ್ತು ಮಾವ ಗಾಧಿಗೂ ಪುತ್ರರಾಗಬೇಕೆಂಬ ಇಚ್ಛೆಯಿಂದ ಮಂತ್ರೋಕ್ತವಾದ ಚರುವನ್ನು ಸಿದ್ಧಪಡಿಸಿದನು.
12049009a ಆಹೂಯ ಚಾಹ ತಾಂ ಭಾರ್ಯಾಮೃಚೀಕೋ ಭಾರ್ಗವಸ್ತದಾ।
12049009c ಉಪಯೋಜ್ಯಶ್ಚರುರಯಂ ತ್ವಯಾ ಮಾತ್ರಾಪ್ಯಯಂ ತವ।।
ಅನಂತರ ಭಾರ್ಗವ ಋಚೀಕನು ತನ್ನ ಭಾರ್ಯೆಯನ್ನು ಕರೆದು, ವಿಭಾಗಿಸಿದ ಚರುವಿನ ಎರಡು ಭಾಗಗಳನ್ನೂ ತೋರಿಸಿ ಹೇಳಿದನು: “ನೀನು ಒಂದು ಭಾಗವನ್ನೂ ನಿನ್ನ ತಾಯಿಯು ಮತ್ತೊಂದು ಭಾಗವನ್ನೂ ಭಕ್ಷಿಸಿರಿ!
12049010a ತಸ್ಯಾ ಜನಿಷ್ಯತೇ ಪುತ್ರೋ ದೀಪ್ತಿಮಾನ್ಕ್ಷತ್ರಿಯರ್ಷಭಃ।
12049010c ಅಜಯ್ಯಃ ಕ್ಷತ್ರಿಯೈರ್ಲೋಕೇ ಕ್ಷತ್ರಿಯರ್ಷಭಸೂದನಃ।।
ಅವಳಲ್ಲಿ ಪ್ರದೀಪ್ತಮಾನ ಕ್ಷತ್ರಿಯರ್ಷಭನು ಜನಿಸುತ್ತಾನೆ. ಆ ಕ್ಷತ್ರಿಯರ್ಷಭಸೂದನನು ಕ್ಷತ್ರಿಯ ಲೋಕಗಳನ್ನು ಜಯಿಸುತ್ತಾನೆ.
12049011a ತವಾಪಿ ಪುತ್ರಂ ಕಲ್ಯಾಣಿ ಧೃತಿಮಂತಂ ತಪೋನ್ವಿತಮ್।
12049011c ಶಮಾತ್ಮಕಂ ದ್ವಿಜಶ್ರೇಷ್ಠಂ ಚರುರೇಷ ವಿಧಾಸ್ಯತಿ।।
ಕಲ್ಯಾಣೀ! ಚರುವಿನ ಈ ಭಾಗದಿಂದ ನೀನು ದೃತಿಮಂತನೂ, ತಪೋನ್ವಿತನೂ, ಶಾಂತಾತ್ಮನೂ ಆದ ದ್ವಿಜಶ್ರೇಷ್ಠನನ್ನು ಪುತ್ರನನ್ನಾಗಿ ಪಡೆಯುವೆ!”
12049012a ಇತ್ಯೇವಮುಕ್ತ್ವಾ ತಾಂ ಭಾರ್ಯಾಮೃಚೀಕೋ ಭೃಗುನಂದನಃ।
12049012c ತಪಸ್ಯಭಿರತೋ ಧೀಮಾನ್ಜಗಾಮಾರಣ್ಯಮೇವ ಹ।।
ತನ್ನ ಪತ್ನಿಗೆ ಹೀಗೆ ಹೇಳಿ ಭೃಗುನಂದನ ಧೀಮಾನ್ ಋಚೀಕನು ತಪಸ್ಸಿಗಾಗಿ ಅರಣ್ಯಕ್ಕೆ ತೆರಳಿದನು.
12049013a ಏತಸ್ಮಿನ್ನೇವ ಕಾಲೇ ತು ತೀರ್ಥಯಾತ್ರಾಪರೋ ನೃಪಃ।
12049013c ಗಾಧಿಃ ಸದಾರಃ ಸಂಪ್ರಾಪ್ತ ಋಚೀಕಸ್ಯಾಶ್ರಮಂ ಪ್ರತಿ।।
ಇದೇ ಸಮಯದಲ್ಲಿ ತೀರ್ಥಯಾತ್ರೆಗೈಯುತ್ತಿದ್ದ ನೃಪ ಗಾಧಿಯು ಪತ್ನಿಯೊಂದಿಗೆ ಋಚೀಕನ ಆಶ್ರಮಕ್ಕೆ ಬಂದನು.
12049014a ಚರುದ್ವಯಂ ಗೃಹೀತ್ವಾ ತು ರಾಜನ್ಸತ್ಯವತೀ ತದಾ।
12049014c ಭರ್ತುರ್ವಾಕ್ಯಾದಥಾವ್ಯಗ್ರಾ ಮಾತ್ರೇ ಹೃಷ್ಟಾ ನ್ಯವೇದಯತ್।।
ರಾಜನ್! ಆಗ ಸತ್ಯವತಿಯು ಚರುವಿನ ಎರಡು ಭಾಗಗಳನ್ನು ಎತ್ತಿಕೊಂಡು ಹರ್ಷದಿಂದ ತನ್ನ ಪತಿಯ ಮಾತನ್ನು ತಾಯಿಗೆ ತಿಳಿಸಿದಳು.
12049015a ಮಾತಾ ತು ತಸ್ಯಾಃ ಕೌಂತೇಯ ದುಹಿತ್ರೇ ಸ್ವಂ ಚರುಂ ದದೌ।
12049015c ತಸ್ಯಾಶ್ಚರುಮಥಾಜ್ಞಾತಮಾತ್ಮಸಂಸ್ಥಂ ಚಕಾರ ಹ।।
ಕೌಂತೇಯ! ಆ ತಾಯಿಯಾದರೋ ಅಜ್ಞಾನವಶಾತ್ ತನಗೆಂದು ಅಭಿಮಂತ್ರಿಸಿದ್ದ ಚರುವನ್ನು ತನ್ನ ಮಗಳಿಗೆ ಕೊಟ್ಟು, ಅವಳಿಗೆಂದಿದ್ದ ಚರುವಿನ ಭಾಗವನ್ನು ತಾನೇ ಭುಂಜಿಸಿದಳು.
12049016a ಅಥ ಸತ್ಯವತೀ ಗರ್ಭಂ ಕ್ಷತ್ರಿಯಾಂತಕರಂ ತದಾ।
12049016c ಧಾರಯಾಮಾಸ ದೀಪ್ತೇನ ವಪುಷಾ ಘೋರದರ್ಶನಮ್।।
ಆಗ ಸತ್ಯವತಿಯು ಪ್ರದೀಪ್ತತೇಜಸ್ಸಿನಿಂದ ಕೂಡಿದ ಘೋರವಾಗಿ ಕಾಣುತ್ತಿದ್ದ ಕ್ಷತ್ರಿಯಾಂತಕ ಗರ್ಭವನ್ನು ಧರಿಸಿದಳು.
12049017a ತಾಮೃಚೀಕಸ್ತದಾ ದೃಷ್ಟ್ವಾ ಧ್ಯಾನಯೋಗೇನ ವೈ ತತಃ।
12049017c ಅಬ್ರವೀದ್ರಾಜಶಾರ್ದೂಲ ಸ್ವಾಂ ಭಾರ್ಯಾಂ ವರವರ್ಣಿನೀಮ್।।
ರಾಜಶರ್ದೂಲ! ಆಗ ಋಚೀಕನು ಧ್ಯಾನಯೋಗದಿಂದ ಅದನ್ನು ಕಂಡು ತನ್ನ ವರವರ್ಣಿನೀ ಪತ್ನಿಗೆ ಇಂತೆಂದನು:
12049018a ಮಾತ್ರಾಸಿ ವ್ಯಂಸಿತಾ ಭದ್ರೇ ಚರುವ್ಯತ್ಯಾಸಹೇತುನಾ।
12049018c ಜನಿಷ್ಯತೇ ಹಿ ತೇ ಪುತ್ರಃ ಕ್ರೂರಕರ್ಮಾ ಮಹಾಬಲಃ।।
“ಭದ್ರೇ! ಚರುವು ಅದಲುಬದಲಾಗಿದೆ. ತಾಯಿಯಿಂದ ವಂಚಿತಳಾಗಿರುವೆ. ನಿನಗೆ ಹುಟ್ಟುವ ಮಹಾಬಲಶಾಲೀ ಮಗನು ಕ್ರೂರಕರ್ಮಿಯಾಗುವನು.
12049019a ಜನಿಷ್ಯತೇ ಹಿ ತೇ ಭ್ರಾತಾ ಬ್ರಹ್ಮಭೂತಸ್ತಪೋಧನಃ।
12049019c ವಿಶ್ವಂ ಹಿ ಬ್ರಹ್ಮ ತಪಸಾ ಮಯಾ ತತ್ರ ಸಮರ್ಪಿತಮ್।।
ತಪಸ್ಸಿನಿಂದ ಸಕಲ ಬ್ರಹ್ಮತೇಜಸ್ಸನ್ನೂ ಸಪರ್ಪಿಸಿದ್ದ ಆ ಚರುವಿನಿಂದ ಹುಟ್ಟುವ ನಿನ್ನ ತಮ್ಮನು ಬ್ರಹ್ಮಭೂತನೂ ತಪೋಧನನೂ ಆಗುವನು.”
12049020a ಸೈವಮುಕ್ತಾ ಮಹಾಭಾಗಾ ಭರ್ತ್ರಾ ಸತ್ಯವತೀ ತದಾ।
12049020c ಪಪಾತ ಶಿರಸಾ ತಸ್ಮೈ ವೇಪಂತೀ ಚಾಬ್ರವೀದಿದಮ್।।
ಪತಿಯು ಹೀಗೆ ಹೇಳಲು ಮಹಾಭಾಗೆ ಸತ್ಯವತಿಯು ತನ್ನ ತಲೆಯನ್ನು ಪತಿಯ ಪಾದಗಳಲ್ಲಿರಿಸಿ ಭಯದಿಂದ ನಡುಗುತ್ತಾ ಹೇಳಿದಳು:
12049021a ನಾರ್ಹೋಽಸಿ ಭಗವನ್ನದ್ಯ ವಕ್ತುಮೇವಂವಿಧಂ ವಚಃ।
12049021c ಬ್ರಾಹ್ಮಣಾಪಸದಂ ಪುತ್ರಂ ಪ್ರಾಪ್ಸ್ಯಸೀತಿ ಮಹಾಮುನೇ।।
“ಮಹಾಮುನೇ! ಭಗವನ್! ಬ್ರಾಹ್ಮಣಾಪಸದನಾದ ಮಗನನ್ನು ಪಡೆಯುವೆನೆಂದು ಈ ರೀತಿ ಈಗ ಹೇಳುವುದು ಸರಿಯಲ್ಲ! ನಾನು ಅದಕ್ಕೆ ಅರ್ಹಳಲ್ಲ!”
12049022 ಋಚೀಕ ಉವಾಚ।
12049022a ನೈಷ ಸಂಕಲ್ಪಿತಃ ಕಾಮೋ ಮಯಾ ಭದ್ರೇ ತಥಾ ತ್ವಯಿ।
12049022c ಉಗ್ರಕರ್ಮಾ ಭವೇತ್ಪುತ್ರಶ್ಚರುರ್ಮಾತಾ ಚ ಕಾರಣಮ್।।
ಋಚೀಕನು ಹೇಳಿದನು: “ಭದ್ರೇ! ನಾನೂ ಕೂಡ ಆ ಆಸೆಯಿಂದ ಸಂಕಲ್ಪಮಾಡಿರಲಿಲ್ಲ. ಆದರೆ ನಿನ್ನ ತಾಯಿಯಿತ್ತ ಚರುವಿನ ಕಾರಣದಿಂದ ನಿನ್ನ ಮಗನು ಉಗ್ರಕರ್ಮಿಯಾಗುತ್ತಾನೆ!”
12049023 ಸತ್ಯವತ್ಯುವಾಚ।
12049023a ಇಚ್ಚಽಲ್ಲೋಕಾನಪಿ ಮುನೇ ಸೃಜೇಥಾಃ ಕಿಂ ಪುನರ್ಮಮ।
12049023c ಶಮಾತ್ಮಕಮೃಜುಂ ಪುತ್ರಂ ಲಭೇಯಂ ಜಪತಾಂ ವರ।।
ಸತ್ಯವತಿಯು ಹೇಳಿದಳು: “ಜಪಿಸುವವರಲ್ಲಿ ಶ್ರೇಷ್ಠನೇ! ಮುನೇ! ನೀನು ಇಚ್ಛಿಸಿದರೆ ಲೋಕಗಳನ್ನೇ ಸೃಷ್ಟಿಸಬಲ್ಲೆ! ಹೀಗಿರುವಾಗ ಶಾಂತಾತ್ಮಕ ಪುತ್ರನನ್ನು ನನಗೆ ಕೊಡಲಾರೆಯೇ?”
12049024 ಋಚೀಕ ಉವಾಚ।
12049024a ನೋಕ್ತಪೂರ್ವಂ ಮಯಾ ಭದ್ರೇ ಸ್ವೈರೇಷ್ವಪ್ಯನೃತಂ ವಚಃ।
12049024c ಕಿಮುತಾಗ್ನಿಂ ಸಮಾಧಾಯ ಮಂತ್ರವಚ್ಚರುಸಾಧನೇ।।
ಋಚೀಕನು ಹೇಳಿದನು: “ಭದ್ರೇ! ಇದಕ್ಕೆ ಮೊದಲು ಎಂದೂ ನಾನು ಸತ್ಯವಾಗದ ಮಾತನ್ನು ಆಡಿರಲಿಲ್ಲ. ಹೀಗಿರುವಾಗ ಅಗ್ನಿಯನ್ನು ಪ್ರತಿಷ್ಠಾಪಿಸಿ ಮಂತ್ರವನ್ನು ಉಚ್ಛರಿಸಿ ಸಿದ್ಧಪಡಿಸಿದ ಚರುವು ಸುಳ್ಳಾಗಲು ಹೇಗೆ ಸಾಧ್ಯ?”
12049025 ಸತ್ಯವತ್ಯುವಾಚ।
12049025a ಕಾಮಮೇವಂ ಭವೇತ್ಪೌತ್ರೋ ಮಮೇಹ ತವ ಚೈವ ಹ।
12049025c ಶಮಾತ್ಮಕಮೃಜುಂ ಪುತ್ರಂ ಲಭೇಯಂ ಜಪತಾಂ ವರ।।
ಸತ್ಯವತಿಯು ಹೇಳಿದಳು: “ಜಪಿಸುವವರಲ್ಲಿ ಶ್ರೇಷ್ಠನೇ! ನಮ್ಮ ಮೊಮ್ಮಗನು ಬೇಕಾದರೆ ನೀನು ಹೇಳಿದಂತೆ ಹುಟ್ಟಲಿ. ಆದರೆ ನನ್ನಲ್ಲಿ ಮಾತ್ರ ಈಗ ಶಾಂತಸ್ವಭಾವದ ಮಗನೇ ಹುಟ್ಟುವಂತೆ ಅನುಗ್ರಹಿಸು!”
12049026 ಋಚೀಕ ಉವಾಚ।
12049026a ಪುತ್ರೇ ನಾಸ್ತಿ ವಿಶೇಷೋ ಮೇ ಪೌತ್ರೇ ವಾ ವರವರ್ಣಿನಿ।
12049026c ಯಥಾ ತ್ವಯೋಕ್ತಂ ತು ವಚಸ್ತಥಾ ಭದ್ರೇ ಭವಿಷ್ಯತಿ।।
ಋಚೀಕನು ಹೇಳಿದನು: “ವರವರ್ಣಿನೀ! ನನಗೆ ಮಗ-ಮೊಮ್ಮಗರಲ್ಲಿ ವ್ಯತ್ಯಾಸವಿಲ್ಲ. ಭದ್ರೇ! ನೀನು ಹೇಳಿದಂತೆಯೇ ಆಗುತ್ತದೆ!””
12049027 ವಾಸುದೇವ ಉವಾಚ।
12049027a ತತಃ ಸತ್ಯವತೀ ಪುತ್ರಂ ಜನಯಾಮಾಸ ಭಾರ್ಗವಮ್।
12049027c ತಪಸ್ಯಭಿರತಂ ಶಾಂತಂ ಜಮದಗ್ನಿಂ ಶಮಾತ್ಮಕಮ್।।
ವಾಸುದೇವನು ಹೇಳಿದನು: “ಅನಂತರ ಸತ್ಯವತಿಯು ಶಾಂತನೂ, ತಪಸ್ಸಿನಲ್ಲಿ ನಿರತನೂ, ಸೌಮ್ಯಸ್ವಭಾವದನೂ ಆದ ಭಾರ್ಗವ ಜಮದಗ್ನಿಯನ್ನು ಪುತ್ರನನ್ನಾಗಿ ಪಡೆದಳು.
12049028a ವಿಶ್ವಾಮಿತ್ರಂ ಚ ದಾಯಾದಂ ಗಾಧಿಃ ಕುಶಿಕನಂದನಃ।
12049028c ಪ್ರಾಪ ಬ್ರಹ್ಮರ್ಷಿಸಮಿತಂ ವಿಶ್ವೇನ ಬ್ರಹ್ಮಣಾ ಯುತಮ್।।
ಕುಶಿಕನಂದನ ಗಾಧಿಯು ಸಮಸ್ತಬ್ರಾಹ್ಮಣಗುಣಗಳಿಂದ ಕೂಡಿದ ಮತ್ತು ನಂತರ ಬ್ರಹ್ಮರ್ಷಿಪದವಿಯನ್ನೂ ಹೊಂದಿದ ವಿಶ್ವಾಮಿತ್ರನನ್ನು ಮಗನನ್ನಾಗಿ ಪಡೆದನು.
12049029a ಆರ್ಚೀಕೋ ಜನಯಾಮಾಸ ಜಮದಗ್ನಿಃ ಸುದಾರುಣಮ್।
12049029c ಸರ್ವವಿದ್ಯಾಂತಗಂ ಶ್ರೇಷ್ಠಂ ಧನುರ್ವೇದೇ ಚ ಪಾರಗಮ್।।
12049029e ರಾಮಂ ಕ್ಷತ್ರಿಯಹಂತಾರಂ ಪ್ರದೀಪ್ತಮಿವ ಪಾವಕಮ್।
ಋಚೀಕನ ಮಗ ಜಮದಗ್ನಿಯು ಅಗ್ನಿಯಂತೆ ಬೆಳಗುತ್ತಿದ್ದ ಸುದಾರುಣ, ಸರ್ವವಿದ್ಯಾಂತಗ, ಧನುರ್ವಿದ್ಯಾ ಪಾರಂಗತ, ಕ್ಷತ್ರಿಯಹಂತಕ ಶ್ರೇಷ್ಠ ರಾಮನಿಗೆ ಜನ್ಮವಿತ್ತನು.
12049030a ಏತಸ್ಮಿನ್ನೇವ ಕಾಲೇ ತು ಕೃತವೀರ್ಯಾತ್ಮಜೋ ಬಲೀ।।
12049030c ಅರ್ಜುನೋ ನಾಮ ತೇಜಸ್ವೀ ಕ್ಷತ್ರಿಯೋ ಹೈಹಯಾನ್ವಯಃ।
ಇದೇ ಸಮಯದಲ್ಲಿ ಹೈಹಯ ಕುಲದಲ್ಲಿ ಕೃತವೀರ್ಯನ ಮಗ ಅರ್ಜುನ ಎಂಬ ಹೆಸರಿನ ಬಲಶಾಲೀ ತೇಜಸ್ವೀ ಕ್ಷತ್ರಿಯನಿದ್ದನು.
12049031a ದದಾಹ ಪೃಥಿವೀಂ ಸರ್ವಾಂ ಸಪ್ತದ್ವೀಪಾಂ ಸಪತ್ತನಾಮ್।।
12049031c ಸ್ವಬಾಹ್ವಸ್ತ್ರಬಲೇನಾಜೌ ಧರ್ಮೇಣ ಪರಮೇಣ ಚ।
ಅವನು ತನ್ನದೇ ಬಾಹುಬಲ-ಅಸ್ತ್ರಬಲಗಳಿಂದ ಹಾಗೂ ಪರಮ ಧರ್ಮದಿಂದ ಈ ಸಪ್ತದ್ವೀಪಗಳುಳ್ಳ ಪೃಥ್ವಿಯನ್ನು ಅದರ ಪಟ್ಟಣಗಳೊಂದಿಗೆ ಸುಟ್ಟುಹಾಕಿದನು.
12049032a ತೃಷಿತೇನ ಸ ಕೌರವ್ಯ ಭಿಕ್ಷಿತಶ್ಚಿತ್ರಭಾನುನಾ।।
12049032c ಸಹಸ್ರಬಾಹುರ್ವಿಕ್ರಾಂತಃ ಪ್ರಾದಾದ್ಭಿಕ್ಷಾಮಥಾಗ್ನಯೇ।
ಕೌರವ್ಯ! ಒಮ್ಮೆ ಹಸಿವು ಬಾಯಾರಿಕೆಗಳಿಂದ ಬಳಲಿದ್ದ ಚಿತ್ರಭಾನು ಅಗ್ನಿಯು ಸಹಸ್ರಬಾಹುಗಳಿದ್ದ ವಿಕ್ರಾಂತ ಕಾರ್ತವೀರ್ಯಾರ್ಜುನನಲ್ಲಿ ಭಿಕ್ಷೆಯನ್ನು ಯಾಚಿಸಿ ಬಂದಿದ್ದನು. ಅವನು ಅಗ್ನಿಗೆ ಭಿಕ್ಷೆಯನ್ನಿತ್ತಿದ್ದನು.
12049033a ಗ್ರಾಮಾನ್ಪುರಾಣಿ ಘೋಷಾಂಶ್ಚ ಪತ್ತನಾನಿ ಚ ವೀರ್ಯವಾನ್।।
12049033c ಜಜ್ವಾಲ ತಸ್ಯ ಬಾಣೈಸ್ತು ಚಿತ್ರಭಾನುರ್ದಿಧಕ್ಷಯಾ।
ಗ್ರಾಮ-ಪುರ-ಘೋಷ-ಪಟ್ಟಣಗಳನ್ನೂ ಸುಡಲು ಬಯಸಿ ಚಿತ್ರಭಾನುವು ಅರ್ಜುನನ ಬಾಣದ ತುದಿಯಿಂದ ಪ್ರಜ್ವಲಿಸತೊಡಗಿದನು.
12049034a ಸ ತಸ್ಯ ಪುರುಷೇಂದ್ರಸ್ಯ ಪ್ರಭಾವೇನ ಮಹಾತಪಾಃ।।
12049034c ದದಾಹ ಕಾರ್ತವೀರ್ಯಸ್ಯ ಶೈಲಾನಥ ವನಾನಿ ಚ।
ಆ ಪುರುಷೇಂದ್ರ ಮಹಾತಪಸ್ವಿ ಕಾರ್ತವೀರ್ಯನ ಪ್ರಭಾವದಿಂದ ಅಗ್ನಿಯು ಶೈಲ-ವನಗಳನ್ನು ಸುಟ್ಟುಹಾಕಿದನು.
12049035a ಸ ಶೂನ್ಯಮಾಶ್ರಮಾರಣ್ಯಂ ವರುಣಸ್ಯಾತ್ಮಜಸ್ಯ ತತ್।।
12049035c ದದಾಹ ಪವನೇನೇದ್ಧಶ್ಚಿತ್ರಭಾನುಃ ಸಹೈಹಯಃ।
ವಾಯುವಿನ ಮತ್ತು ಹೈಹಯನ ಸಹಾಯವನ್ನು ಪಡೆದುಕೊಂಡಿದ್ದ ಚಿತ್ರಭಾನುವು ಜನಶೂನ್ಯವಾಗಿದ್ದ ವರುಣನ ಮಗ ವಸಿಷ್ಠನ ಆಶ್ರಮವನ್ನೂ ಸುಟ್ಟುಬಿಟ್ಟನು.
12049036a ಆಪವಸ್ತಂ ತತೋ ರೋಷಾಚ್ಚಶಾಪಾರ್ಜುನಮಚ್ಯುತ।।
12049036c ದಗ್ಧೇಽಶ್ರಮೇ ಮಹಾರಾಜ ಕಾರ್ತವೀರ್ಯೇಣ ವೀರ್ಯವಾನ್।
ಅಚ್ಯುತ! ಮಹಾರಾಜ! ವೀರ್ಯವಾನ್ ಕಾರ್ತವೀರ್ಯನಿಂದ ತನ್ನ ಆಶ್ರಮವು ಸುಟ್ಟುಹೋಗಲು ರೋಷದಿಂದ ಆಪವ ವಸಿಷ್ಠನು ಅರ್ಜುನನನ್ನು ಶಪಿಸಿದನು:
12049037a ತ್ವಯಾ ನ ವರ್ಜಿತಂ ಮೋಹಾದ್ಯಸ್ಮಾದ್ವನಮಿದಂ ಮಮ।।
12049037c ದಗ್ಧಂ ತಸ್ಮಾದ್ರಣೇ ರಾಮೋ ಬಾಹೂಂಸ್ತೇ ಚೇತ್ಸ್ಯತೇಽರ್ಜುನ।
“ಅರ್ಜುನ! ಮೋಹದಿಂದ ನೀನು ನನ್ನ ಈ ವನವನ್ನೂ ಬಿಡದೇ ಸುಟ್ಟುಹಾಕಿದ ಕಾರಣ ರಣದಲ್ಲಿ ರಾಮನು ನಿನ್ನ ಬಾಹುಗಳನ್ನು ಕತ್ತರಿಸುತ್ತಾನೆ!”
12049038a ಅರ್ಜುನಸ್ತು ಮಹಾರಾಜ ಬಲೀ ನಿತ್ಯಂ ಶಮಾತ್ಮಕಃ।।
12049038c ಬ್ರಹ್ಮಣ್ಯಶ್ಚ ಶರಣ್ಯಶ್ಚ ದಾತಾ ಶೂರಶ್ಚ ಭಾರತ।
ಮಹಾರಾಜ! ಭಾರತ! ಬಲಶಾಲೀ ಅರ್ಜುನನಾದರೋ ನಿತ್ಯವು ಶಮಾತ್ಮಕನಾಗಿದ್ದುಕೊಂಡು ಬ್ರಾಹ್ಮಣರ ಶರಣ್ಯನೂ ದಾನಿಯೂ ಶೂರನೂ ಆಗಿದ್ದನು.
12049039a ತಸ್ಯ ಪುತ್ರಾಃ ಸುಬಲಿನಃ ಶಾಪೇನಾಸನ್ಪಿತುರ್ವಧೇ।।
12049039c ನಿಮಿತ್ತಮವಲಿಪ್ತಾ ವೈ ನೃಶಂಸಾಶ್ಚೈವ ನಿತ್ಯದಾ।
ಆದುದರಿಂದ ನಿತ್ಯವೂ ಅಹಿಂಸಿಯಾಗಿದ್ದ ಅವನು ಆ ಶಾಪದ ಕುರಿತು ಚಿಂತಿಸಲೇ ಇಲ್ಲ. ಆದರೆ ಅವನ ಬಲಶಾಲಿ ಮಕ್ಕಳೇ ತಂದೆಯ ವಧೆ ಮತ್ತು ಆ ಶಾಪವು ಫಲಿಸಲು ಕಾರಣರಾದರು.
12049040a ಜಮದಗ್ನಿಧೇನ್ವಾಸ್ತೇ ವತ್ಸಮಾನಿನ್ಯುರ್ಭರತರ್ಷಭ।।
12049040c ಅಜ್ಞಾತಂ ಕಾರ್ತವೀರ್ಯಸ್ಯ ಹೈಹಯೇಂದ್ರಸ್ಯ ಧೀಮತಃ।
ಭರತರ್ಷಭ! ಹೈಹಯೇಂದ್ರ ಧೀಮಂತ ಕಾರ್ತವೀರ್ಯನಿಗೆ ತಿಳಿಯದಂತೆ ಅವನ ಮಕ್ಕಳು ಜಮದಗ್ನಿಯ ಹೋಮಧೇನುವಿನ ಕರುವನ್ನು ಅಪಹರಿಸಿಕೊಂಡು ಹೋದರು.
12049041a ತತೋಽರ್ಜುನಸ್ಯ ಬಾಹೂಂಸ್ತು ಚಿತ್ತ್ವಾ ವೈ ಪೌರುಷಾನ್ವಿತಃ।।
12049041c ತಂ ರುವಂತಂ ತತೋ ವತ್ಸಂ ಜಾಮದಗ್ನ್ಯಃ ಸ್ವಮಾಶ್ರಮಮ್।
12049041e ಪ್ರತ್ಯಾನಯತ ರಾಜೇಂದ್ರ ತೇಷಾಮಂತಃಪುರಾತ್ಪ್ರಭುಃ।।
ರಾಜೇಂದ್ರ! ಆಗ ಜಮದಗ್ನಿಯ ಮಗ ಪೌರುಷಾನ್ವಿತ ಪ್ರಭು ರಾಮನು ಅರ್ಜುನನ ಬಾಹುಗಳನ್ನು ತುಂಡರಿಸಿ ಅವನ ಅಂತಃಪುರದಿಂದ ರೋದಿಸುತ್ತಿದ್ದ ಹಸುಕರುವನ್ನು ತನ್ನ ಆಶ್ರಮಕ್ಕೆ ಪುನಃ ಕರೆತಂದನು.
12049042a ಅರ್ಜುನಸ್ಯ ಸುತಾಸ್ತೇ ತು ಸಂಭೂಯಾಬುದ್ಧಯಸ್ತದಾ।
12049042c ಗತ್ವಾಶ್ರಮಮಸಂಬುದ್ಧಂ ಜಮದಗ್ನೇರ್ಮಹಾತ್ಮನಃ।।
12049043a ಅಪಾತಯಂತ ಭಲ್ಲಾಗ್ರೈಃ ಶಿರಃ ಕಾಯಾನ್ನರಾಧಿಪ।
12049043c ಸಮಿತ್ಕುಶಾರ್ಥಂ ರಾಮಸ್ಯ ನಿರ್ಗತಸ್ಯ ಮಹಾತ್ಮನಃ।।
ನರಾಧಿಪ! ಅನಂತರ ಅರ್ಜುನನ ಮಕ್ಕಳು ಮೂಢತನದಿಂದ ಒಟ್ಟಾಗಿ, ಮಹಾತ್ಮ ರಾಮನು ಸಮಿತ್ತು-ದರ್ಬೆಗಳಿಗಾಗಿ ಹೊರ ಹೋಗಿರಲು, ತಪೋನಿರತನಾಗಿದ್ದ ಮಹಾತ್ಮ ಜಮದಗ್ನಿಯ ಶಿರವನ್ನು ಭಲ್ಲಗಳಿಂದ ಕಾಯದಿಂದ ಬೇರ್ಪಡಿಸಿ ಕೆಳಗುರುಳಿಸಿದರು.
12049044a ತತಃ ಪಿತೃವಧಾಮರ್ಷಾದ್ರಾಮಃ ಪರಮಮನ್ಯುಮಾನ್।
12049044c ನಿಃಕ್ಷತ್ರಿಯಾಂ ಪ್ರತಿಶ್ರುತ್ಯ ಮಹೀಂ ಶಸ್ತ್ರಮಗೃಹ್ಣತ।।
ಆಗ ಪಿತೃವಧೆಯನ್ನು ಸಹಿಸಿಕೊಳ್ಳಲಾಗಿದೇ ಅತ್ಯಂತ ಕುಪಿತನಾದ ರಾಮನು ಭೂಮಿಯಲ್ಲಿ ಕ್ಷತ್ರಿಯರೇ ಇಲ್ಲದಂತೆ ಮಾಡುತ್ತೇನೆಂದು ಪ್ರತಿಜ್ಞೆಮಾಡಿ ಶಸ್ತ್ರವನ್ನು ಹಿಡಿದನು.
12049045a ತತಃ ಸ ಭೃಗುಶಾರ್ದೂಲಃ ಕಾರ್ತವೀರ್ಯಸ್ಯ ವೀರ್ಯವಾನ್।
12049045c ವಿಕ್ರಮ್ಯ ನಿಜಘಾನಾಶು ಪುತ್ರಾನ್ಪೌತ್ರಾಂಶ್ಚ ಸರ್ವಶಃ।।
ಆಗ ವೀರ್ಯವಾನ್ ಭೃಗುಶಾರ್ದೂಲನು ವಿಕ್ರಮದಿಂದ ಕಾರ್ತವೀರ್ಯನ ಮಕ್ಕಳು-ಮೊಮ್ಮಕ್ಕಳು ಎಲ್ಲರನ್ನೂ ಸಂಹರಿಸಿದನು.
12049046a ಸ ಹೈಹಯಸಹಸ್ರಾಣಿ ಹತ್ವಾ ಪರಮಮನ್ಯುಮಾನ್।
12049046c ಚಕಾರ ಭಾರ್ಗವೋ ರಾಜನ್ಮಹೀಂ ಶೋಣಿತಕರ್ದಮಾಮ್।।
ರಾಜನ್! ಸಹಸ್ರಾರು ಹೈಹಯರನ್ನು ಸಂಹರಿಸಿ ಪರಮಕೋಪಿ ಭಾರ್ಗವನು ರಕ್ತದ ಕೆಸರಿನಿಂದ ಭೂಮಿಯನ್ನೇ ತುಂಬಿಸಿಬಿಟ್ಟನು.
12049047a ಸ ತಥಾ ಸುಮಹಾತೇಜಾಃ ಕೃತ್ವಾ ನಿಃಕ್ಷತ್ರಿಯಾಂ ಮಹೀಮ್।
12049047c ಕೃಪಯಾ ಪರಯಾವಿಷ್ಟೋ ವನಮೇವ ಜಗಾಮ ಹ।।
ಹಾಗೆ ಭೂಮಿಯನ್ನು ನಿಃಕ್ಷತ್ರಿಯರನ್ನಾಗಿಸಿ ಆ ಮಹಾತೇಜಸ್ವಿಯು ಪರಮ ಕೃಪಾವಿಷ್ಟನಾಗಿ ವನಕ್ಕೆ ತೆರಳಿದನು.
12049048a ತತೋ ವರ್ಷಸಹಸ್ರೇಷು ಸಮತೀತೇಷು ಕೇಷು ಚಿತ್।
12049048c ಕ್ಷೋಭಂ ಸಂಪ್ರಾಪ್ತವಾಂಸ್ತೀವ್ರಂ ಪ್ರಕೃತ್ಯಾ ಕೋಪನಃ ಪ್ರಭುಃ।।
ಸಹಸ್ರವರ್ಷಗಳು ಕಳೆದನಂತರ ಸ್ವಭಾವತಃ ಕೋಪಿಷ್ಟನಾದ ಪ್ರಭು ರಾಮನು ಯಾವುದೋ ಒಂದು ಸಮಿತಿಯಲ್ಲಿ ತನ್ನ ಕುರಿತಾದ ಒಂದು ತೀವ್ರ ಆಕ್ಷೇಪವನ್ನು ಕೇಳಿದನು.
12049049a ವಿಶ್ವಾಮಿತ್ರಸ್ಯ ಪೌತ್ರಸ್ತು ರೈಭ್ಯಪುತ್ರೋ ಮಹಾತಪಾಃ।
12049049c ಪರಾವಸುರ್ಮಹಾರಾಜ ಕ್ಷಿಪ್ತ್ವಾಹ ಜನಸಂಸದಿ।।
ಮಹಾರಾಜ! ವಿಶ್ವಾಮಿತ್ರನ ಮೊಮ್ಮಗ, ರೈಭ್ಯನ ಮಗ ಮಹಾತಪಸ್ವೀ ಪರಾವಸುವು ಜನಸಂಸದಿಯಲ್ಲಿ ಪರಶುರಾಮನನ್ನು ಆಕ್ಷೇಪಿಸುತ್ತಾ ಹೀಗೆ ಹೇಳಿದನು:
12049050a ಯೇ ತೇ ಯಯಾತಿಪತನೇ ಯಜ್ಞೇ ಸಂತಃ ಸಮಾಗತಾಃ।
12049050c ಪ್ರತರ್ದನಪ್ರಭೃತಯೋ ರಾಮ ಕಿಂ ಕ್ಷತ್ರಿಯಾ ನ ತೇ।।
“ರಾಮನೇ! ಯಯಾತಿಯು ಸ್ವರ್ಗಲೋಕದಿಂದ ಭೂಮಿಗೆ ಬಿದ್ದ ಸ್ಥಳದಲ್ಲಿ ಯಜ್ಞಭಾಗಿಗಳಾಗಿದ್ದ ಪ್ರತರ್ದನನೇ ಮೊದಲಾದ ಸತ್ಪುರುಷರು ನಿನ್ನ ಪಾಲಿಗೆ ಕ್ಷತ್ರಿಯರಲ್ಲವೇನು?
12049051a ಮಿಥ್ಯಾಪ್ರತಿಜ್ಞೋ ರಾಮ ತ್ವಂ ಕತ್ಥಸೇ ಜನಸಂಸದಿ।
12049051c ಭಯಾತ್ಕ್ಷತ್ರಿಯವೀರಾಣಾಂ ಪರ್ವತಂ ಸಮುಪಾಶ್ರಿತಃ।।
ರಾಮ! ನೀನು ಮಿಥ್ಯಾಪ್ರತಿಜ್ಞನು! ಜನಸಂಸಧಿಯಲ್ಲಿ ಹೇಗೆ ನೀನು ನಿನ್ನನ್ನೇ ಪ್ರಶಂಸಿಸಿಕೊಳ್ಳುವೆ? ಕ್ಷತ್ರಿಯ ವೀರರ ಭಯದಿಂದ ನೀನು ಪರ್ವತವನ್ನು ಆಶ್ರಯಿಸಿರುವೆ!”
12049052a ಸ ಪುನಃ ಕ್ಷತ್ರಿಯಶತೈಃ ಪೃಥಿವೀಮನುಸಂತತಾಮ್।
12049052c ಪರಾವಸೋಸ್ತದಾ ಶ್ರುತ್ವಾ ಶಸ್ತ್ರಂ ಜಗ್ರಾಹ ಭಾರ್ಗವಃ।।
ಪರಾವಸುವಿನ ಆ ಮಾತನ್ನು ಕೇಳಿ ಭಾರ್ಗವನು ಭೂಮಿಯಲ್ಲಿ ಸಂತಾನಗಳನ್ನು ಪಡೆದಿದ್ದ ನೂರಾರು ಕ್ಷತ್ರಿಯರನ್ನು ಸಂಹರಿಸಲು ಪುನಃ ಶಸ್ತ್ರವನ್ನು ಹಿಡಿದನು.
12049053a ತತೋ ಯೇ ಕ್ಷತ್ರಿಯಾ ರಾಜನ್ಶತಶಸ್ತೇನ ಜೀವಿತಾಃ।
12049053c ತೇ ವಿವೃದ್ಧಾ ಮಹಾವೀರ್ಯಾಃ ಪೃಥಿವೀಪತಯೋಽಭವನ್।।
ರಾಜನ್! ಜೀವಿತರಾಗಿದ್ದ ನೂರಾರು ಮಹಾವೀರ್ಯ ಕ್ಷತ್ರಿಯರು ವೃದ್ಧರಾಗಿ ಪೃಥ್ವೀಪತಿಗಳಾಗಿದ್ದರು.
12049054a ಸ ಪುನಸ್ತಾನ್ಜಘಾನಾಶು ಬಾಲಾನಪಿ ನರಾಧಿಪ।
12049054c ಗರ್ಭಸ್ಥೈಸ್ತು ಮಹೀ ವ್ಯಾಪ್ತಾ ಪುನರೇವಾಭವತ್ತದಾ।।
ನರಾಧಿಪ! ಅವನು ಪುನಃ ಬಾಲಕರನ್ನೂ ಬಿಡದೇ ಅವರನ್ನು ಸಂಹರಿಸಿದನು. ಆದರೆ ಗರ್ಭಿಣಿಯರಾಗಿದ್ದ ಕ್ಷತ್ರಿಯಸ್ತ್ರೀಯರಿಂದ ಭೂಮಿಯು ವ್ಯಾಪ್ತವಾಗಿತ್ತು.
12049055a ಜಾತಂ ಜಾತಂ ಸ ಗರ್ಭಂ ತು ಪುನರೇವ ಜಘಾನ ಹ।
12049055c ಅರಕ್ಷಂಶ್ಚ ಸುತಾನ್ಕಾಂಶ್ಚಿತ್ತದಾ ಕ್ಷತ್ರಿಯಯೋಷಿತಃ।।
ಮಕ್ಕಳು ಹುಟ್ಟುತ್ತಿದ್ದಂತೆಯೇ ಅವರನ್ನೂ ಪುನಃ ರಾಮನು ಸಂಹರಿಸಿದನು. ಆ ಕೆಲವು ಕ್ಷತ್ರಿಯ ಸ್ತ್ರೀಯರು ತಮ್ಮ ಮಕ್ಕಳನ್ನು ರಕ್ಷಿಸಿಕೊಂಡರು.
12049056a ತ್ರಿಃಸಪ್ತಕೃತ್ವಃ ಪೃಥಿವೀಂ ಕೃತ್ವಾ ನಿಃಕ್ಷತ್ರಿಯಾಂ ಪ್ರಭುಃ।
12049056c ದಕ್ಷಿಣಾಮಶ್ವಮೇಧಾಂತೇ ಕಶ್ಯಪಾಯಾದದತ್ತತಃ।।
ಪ್ರಭು ರಾಮನು ಇಪ್ಪತ್ತೇಳು ಬಾರಿ ಭೂಮಿಯನ್ನು ನಿಃಕ್ಷತ್ರಿಯರನ್ನಾಗಿ ಮಾಡಿ ಅಶ್ವಮೇಧದ ಅಂತ್ಯದಲ್ಲಿ ಭೂಮಿಯನ್ನು ಕಶ್ಯಪನಿಗೆ ದಕ್ಷಿಣೆಯನ್ನಾಗಿತ್ತನು.
12049057a ಕ್ಷತ್ರಿಯಾಣಾಂ ತು ಶೇಷಾರ್ಥಂ ಕರೇಣೋದ್ದಿಶ್ಯ ಕಶ್ಯಪಃ।
12049057c ಸ್ರುಕ್ಪ್ರಗ್ರಹವತಾ ರಾಜನ್ಶ್ರೀಮಾನ್ವಾಕ್ಯಮಥಾಬ್ರವೀತ್।।
ರಾಜನ್! ಆಗ ಉಳಿದ ಕ್ಷತ್ರಿಯರನ್ನು ರಕ್ಷಿಸುವ ಉದ್ದೇಶದಿಂದ ಶ್ರೀಮಾನ್ ಕಶ್ಯಪನು ಕೈಯಲ್ಲಿ ಸ್ರುಕ್ಕನ್ನು ಹಿಡಿದು ಈ ಮಾತನ್ನಾಡಿದನು:
12049058a ಗಚ್ಚ ಪಾರಂ ಸಮುದ್ರಸ್ಯ ದಕ್ಷಿಣಸ್ಯ ಮಹಾಮುನೇ।
12049058c ನ ತೇ ಮದ್ವಿಷಯೇ ರಾಮ ವಸ್ತವ್ಯಮಿಹ ಕರ್ಹಿ ಚಿತ್।।
“ಮಹಾಮುನೇ! ರಾಮ! ನನ್ನ ಈ ರಾಜ್ಯದಲ್ಲಿ ನೀನು ಯಾವಾಗಲೂ ವಾಸಿಸಬಾರದು. ಸಮುದ್ರದ ದಕ್ಷಿಣತೀರಕ್ಕೆ ಹೊರಟುಹೋಗು!”
12049059a ತತಃ ಶೂರ್ಪಾರಕಂ ದೇಶಂ ಸಾಗರಸ್ತಸ್ಯ ನಿರ್ಮಮೇ।
12049059c ಸಂತ್ರಾಸಾಜ್ಜಾಮದಗ್ನ್ಯಸ್ಯ ಸೋಽಪರಾಂತಂ ಮಹೀತಲಮ್।।
ಅನಂತರ ಸಾಗರನು ಜಾಮದಗ್ನಿಯು ತಂಗಲೋಸುಗ ಶೂರ್ಪಾರಕವೆಂಬ ದೇಶವನ್ನು ನಿರ್ಮಿಸಿದನು, ಆ ಭೂಮಿಯನ್ನು ಅಪರಾಂತಭೂಮಿಯೆಂದೂ ಕರೆಯುತ್ತಾರೆ.
12049060a ಕಶ್ಯಪಸ್ತು ಮಹಾರಾಜ ಪ್ರತಿಗೃಹ್ಯ ಮಹೀಮಿಮಾಮ್।
12049060c ಕೃತ್ವಾ ಬ್ರಾಹ್ಮಣಸಂಸ್ಥಾಂ ವೈ ಪ್ರವಿವೇಶ ಮಹಾವನಮ್।।
ಮಹಾರಾಜ! ಕಶ್ಯಪನಾದರೋ ಈ ಭೂಮಿಯನ್ನು ಸ್ವೀಕರಿಸಿ, ಅದನ್ನು ಬ್ರಾಹ್ಮಣರಿಗೆ ಕೊಟ್ಟು, ಮಹಾವನವನ್ನು ಪ್ರವೇಶಿಸಿದನು.
12049061a ತತಃ ಶೂದ್ರಾಶ್ಚ ವೈಶ್ಯಾಶ್ಚ ಯಥಾಸ್ವೈರಪ್ರಚಾರಿಣಃ।
12049061c ಅವರ್ತಂತ ದ್ವಿಜಾಗ್ರ್ಯಾಣಾಂ ದಾರೇಷು ಭರತರ್ಷಭ।।
ಭರತರ್ಷಭ! ಆಗ ವೈಶ್ಯ-ಶೂದ್ರರು ದ್ವಿಜಾಗ್ರರ ಪತ್ನಿಯರೊಡನೆ ದುರ್ವ್ಯವಹಾರಗಳಲ್ಲಿ ತೊಡಗಿದರು.
12049062a ಅರಾಜಕೇ ಜೀವಲೋಕೇ ದುರ್ಬಲಾ ಬಲವತ್ತರೈಃ।
12049062c ಬಾಧ್ಯಂತೇ ನ ಚ ವಿತ್ತೇಷು ಪ್ರಭುತ್ವಮಿಹ ಕಸ್ಯ ಚಿತ್।।
ಅರಾಜಕತೆಯಾಗಿ ಜೀವಲೋಕದಲ್ಲಿ ಬಲಶಾಲಿಗಳು ದುರ್ಬಲರನ್ನು ಬಾಧಿಸತೊಡಗಿದರು. ಸಂಪತ್ತು ಯಾರ ಪ್ರಭುತ್ವದಲ್ಲಿಯೂ ಉಳಿಯಲಿಲ್ಲ.
12049063a ತತಃ ಕಾಲೇನ ಪೃಥಿವೀ ಪ್ರವಿವೇಶ ರಸಾತಲಮ್।
12049063c ಅರಕ್ಷ್ಯಮಾಣಾ ವಿಧಿವತ್ಕ್ಷತ್ರಿಯೈರ್ಧರ್ಮರಕ್ಷಿಭಿಃ।।
ಕಾಲಾಂತರದಲ್ಲಿ ಧರ್ಮರಕ್ಷಿಗಳಾದ ಕ್ಷತ್ರಿಯರಿಂದ ವಿಧಿವತ್ತಾಗಿ ರಕ್ಷಿಸಲ್ಪಡದ ಪೃಥ್ವಿಯು ರಸಾತಲವನ್ನು ಪ್ರವೇಶಿಸಿತು.
12049064a ಊರುಣಾ ಧಾರಯಾಮಾಸ ಕಶ್ಯಪಃ ಪೃಥಿವೀಂ ತತಃ।
12049064c ನಿಮಜ್ಜಂತೀಂ ತದಾ ರಾಜಂಸ್ತೇನೋರ್ವೀತಿ ಮಹೀ ಸ್ಮೃತಾ।।
ರಾಜನ್! ಮುಳುಗಿಹೋಗುತ್ತಿರುವ ಆ ಭೂಮಿಯನ್ನು ಕಶ್ಯಪನು ತನ್ನ ತೊಡೆಯಲ್ಲಿ ಧರಿಸಿದನು. ಆದುದರಿಂದಲೇ ಈ ಮಹಿಗೆ ಉರ್ವೀ ಎಂದೂ ಕರೆಯಲ್ಪಡುತ್ತದೆ.
12049065a ರಕ್ಷಿಣಶ್ಚ ಸಮುದ್ದಿಶ್ಯ ಪ್ರಾಯಾಚತ್ಪೃಥಿವೀ ತದಾ।
12049065c ಪ್ರಸಾದ್ಯ ಕಶ್ಯಪಂ ದೇವೀ ಕ್ಷತ್ರಿಯಾನ್ಬಾಹುಶಾಲಿನಃ।।
ಆಗ ಪೃಥ್ವೀ ದೇವಿಯು ಕಶ್ಯಪನನ್ನು ಪ್ರಸನ್ನಗೊಳಿಸಿ ತನ್ನ ರಕ್ಷಣಾರಾರ್ಥವಾಗಿ ಬಾಹುಶಾಲೀ ಕ್ಷತ್ರಿಯರನ್ನು ಯಾಚಿಸಿದಳು.
12049066a ಸಂತಿ ಬ್ರಹ್ಮನ್ಮಯಾ ಗುಪ್ತಾ ನೃಷು ಕ್ಷತ್ರಿಯಪುಂಗವಾಃ।
12049066c ಹೈಹಯಾನಾಂ ಕುಲೇ ಜಾತಾಸ್ತೇ ಸಂರಕ್ಷಂತು ಮಾಂ ಮುನೇ।।
“ಮುನೇ! ಬ್ರಹ್ಮನ್! ನಾನು ಗೌಪ್ಯವಾಗಿ ಸಂರಕ್ಷಿಸಿದ್ದ ಹೈಹಯ ಕುಲದಲ್ಲಿ ಹುಟ್ಟಿದ ಕ್ಷತ್ರಿಯಪುಂಗವ ನರರಿದ್ದಾರೆ. ಅವರು ನನ್ನನ್ನು ರಕ್ಷಿಸಲಿ!
12049067a ಅಸ್ತಿ ಪೌರವದಾಯಾದೋ ವಿಡೂರಥಸುತಃ ಪ್ರಭೋ।
12049067c ಋಕ್ಷೈಃ ಸಂವರ್ಧಿತೋ ವಿಪ್ರ ಋಕ್ಷವತ್ಯೇವ ಪರ್ವತೇ।।
ಪ್ರಭೋ! ವಿಪ್ರ! ಪೌರವ ವಿಡೂರರಥನ ಮಗನಿದ್ದಾನೆ. ಅವನು ಋಕ್ಷವತ್ಪರ್ವತದಲ್ಲಿ ಕರಡಿಗಳಿಂದ ಬೆಳೆಸಲ್ಪಟ್ಟಿದ್ದಾನೆ.
12049068a ತಥಾನುಕಂಪಮಾನೇನ ಯಜ್ವನಾಥಾಮಿತೌಜಸಾ।
12049068c ಪರಾಶರೇಣ ದಾಯಾದಃ ಸೌದಾಸಸ್ಯಾಭಿರಕ್ಷಿತಃ।।
ಹಾಗೆಯೇ ಯಜ್ಞಪರಾಯಣನಾದ ಅಮಿತ ತೇಜಸ್ವಿಯಾದ ಸೌದಾಸನ ಮಗನನ್ನು ಪರಾಶರನು ಅನುಕಂಪದಿಂದ ರಕ್ಷಿಸಿಕೊಂಡಿದ್ದಾನೆ.
12049069a ಸರ್ವಕರ್ಮಾಣಿ ಕುರುತೇ ತಸ್ಯರ್ಷೇಃ ಶೂದ್ರವದ್ಧಿ ಸಃ।
12049069c ಸರ್ವಕರ್ಮೇತ್ಯಭಿಖ್ಯಾತಃ ಸ ಮಾಂ ರಕ್ಷತು ಪಾರ್ಥಿವಃ।।
ಅವನು ಆ ಋಷಿಯಲ್ಲಿದ್ದುಕೊಂಡು ಶೂದ್ರನಂತೆ ಎಲ್ಲ ಕರ್ಮಗಳನ್ನೂ ಮಾಡುತ್ತಿದ್ದಾನೆ. ಸರ್ವಕರ್ಮನೆಂದು ವಿಖ್ಯಾತನಾಗಿರುವ ಆ ಪಾರ್ಥಿವನು ನನ್ನನ್ನು ರಕ್ಷಿಸಲಿ!
12049070a ಶಿಬೇಃ ಪುತ್ರೋ ಮಹಾತೇಜಾ ಗೋಪತಿರ್ನಾಮ ನಾಮತಃ।
12049070c ವನೇ ಸಂರಕ್ಷಿತೋ ಗೋಭಿಃ ಸೋಽಭಿರಕ್ಷತು ಮಾಂ ಮುನೇ।।
ಮುನೇ! ಶಿಬಿಯ ಪುತ್ರ ಮಹಾತೇಜಸ್ವಿಯು ಗೋಪತಿಯೆಂಬ ಹೆಸರಿನಿಂದ ವನದಲ್ಲಿ ಗೋವುಗಳಿಂದ ಸಂರಕ್ಷಿಸಲ್ಪಡುತ್ತಿದ್ದಾನೆ. ಅವನೂ ಕೂಡ ನನ್ನನ್ನು ರಕ್ಷಿಸಲಿ!
12049071a ಪ್ರತರ್ದನಸ್ಯ ಪುತ್ರಸ್ತು ವತ್ಸೋ ನಾಮ ಮಹಾಯಶಾಃ।
12049071c ವತ್ಸೈಃ ಸಂವರ್ಧಿತೋ ಗೋಷ್ಠೇ ಸ ಮಾಂ ರಕ್ಷತು ಪಾರ್ಥಿವಃ।।
ಪ್ರತರ್ದನನ ವತ್ಸ ಎಂಬ ಹೆಸರಿನ ಮಗನು ಮಹಾಯಶಸ್ವಿಯು. ಅವನು ಗೋಶಾಲೆಯಲ್ಲಿ ಹಸುಕರುಗಳ ಜೊತೆಗೆ ಬೆಳೆದಿದ್ದಾನೆ. ಆ ಪಾರ್ಥಿವನು ನನ್ನನ್ನು ರಕ್ಷಿಸಲಿ!
12049072a ದಧಿವಾಹನಪೌತ್ರಸ್ತು ಪುತ್ರೋ ದಿವಿರಥಸ್ಯ ಹ।
12049072c ಅಂಗಃ ಸ ಗೌತಮೇನಾಪಿ ಗಂಗಾಕೂಲೇಽಭಿರಕ್ಷಿತಃ।।
ದಧಿವಾಹನನ ಮೊಮ್ಮಗ, ದಿವಿರಥನ ಮಗ ಅಂಗನನ್ನು ಗೌತಮನು ಗಂಗಾಕೂಲದಲ್ಲಿ ರಕ್ಷಿಸಿಕೊಂಡಿದ್ದಾನೆ.
12049073a ಬೃಹದ್ರಥೋ ಮಹಾಬಾಹುರ್ಭುವಿ ಭೂತಿಪುರಸ್ಕೃತಃ।
12049073c ಗೋಲಾಂಗೂಲೈರ್ಮಹಾಭಾಗೋ ಗೃಧ್ರಕೂಟೇಽಭಿರಕ್ಷಿತಃ।।
ಭೂಮಿಯಲ್ಲಿ ಅತ್ಯಂತ ಪುರಸ್ಕೃತನಾದ ಮಹಾಭಾಗ ಮಹಾಬಾಹು ಬೃಹದ್ರಥನು ಗೃಧ್ರಕೂಟದಲ್ಲಿ ಗೋಲಾಂಗೂಲ1ಗಳಿಂದ ರಕ್ಷಿಸಲ್ಪಟ್ಟಿದ್ದಾನೆ.
12049074a ಮರುತ್ತಸ್ಯಾನ್ವವಾಯೇ ತು ಕ್ಷತ್ರಿಯಾಸ್ತುರ್ವಸೋಸ್ತ್ರಯಃ।
12049074c ಮರುತ್ಪತಿಸಮಾ ವೀರ್ಯೇ ಸಮುದ್ರೇಣಾಭಿರಕ್ಷಿತಾಃ।।
ವೀರ್ಯದಲ್ಲಿ ದೇವರಾಜನ ಸಮನಾದ ಮರುತ್ತನ ವಂಶದಲ್ಲಿ ಹುಟ್ಟಿದ ಕ್ಷತ್ರಿಯರಾಜಕುಮಾರನನ್ನು ಸಮುದ್ರನು ರಕ್ಷಿಸಿರುತ್ತಾನೆ. ಅವನೂ ಕೂಡ ನನ್ನನ್ನು ಸಂರಕ್ಷಿಸಲಿ!
12049075a ಏತೇ ಕ್ಷತ್ರಿಯದಾಯಾದಾಸ್ತತ್ರ ತತ್ರ ಪರಿಶ್ರುತಾಃ।
12049075c ಸಮ್ಯಗ್ಮಾಮಭಿರಕ್ಷಂತು ತತಃ ಸ್ಥಾಸ್ಯಾಮಿ ನಿಶ್ಚಲಾ।।
ಅಲ್ಲಲ್ಲಿಯೇ ವಿಖ್ಯಾತರಾಗಿರುವ ಈ ಕ್ಷತ್ರಿಯ ಕುಮಾರರು ನನ್ನನ್ನು ರಕ್ಷಿಸಿದ್ದೇ ಆದರೆ ನಾನು ನಿಶ್ಚಿಂತಳಾಗಿ ಅಚಲಳಾಗಿ ನನ್ನ ಹಿಂದಿನ ಸ್ಥಾನದಲ್ಲಿಯೇ ನಿಲ್ಲುತ್ತೇನೆ.
12049076a ಏತೇಷಾಂ ಪಿತರಶ್ಚೈವ ತಥೈವ ಚ ಪಿತಾಮಹಾಃ।
12049076c ಮದರ್ಥಂ ನಿಹತಾ ಯುದ್ಧೇ ರಾಮೇಣಾಕ್ಲಿಷ್ಟಕರ್ಮಣಾ।।
ಇವರ ತಂದೆಯಂದಿರು ಮತ್ತು ಪಿತಾಮಹರು ನನಗಾಗಿ ಯುದ್ಧದಲ್ಲಿ ಅಕ್ಲಿಷ್ಟಕರ್ಮಣಿ ರಾಮನೊಂದಿಗೆ ಹೋರಾಡಿ ಮಡಿದರು.
12049077a ತೇಷಾಮಪಚಿತಿಶ್ಚೈವ ಮಯಾ ಕಾರ್ಯಾ ನ ಸಂಶಯಃ।
12049077c ನ ಹ್ಯಹಂ ಕಾಮಯೇ ನಿತ್ಯಮವಿಕ್ರಾಂತೇನ ರಕ್ಷಣಮ್।।
ಅವರ ಮಕ್ಕಳ ಪ್ರತಿ ಇದು ನನ್ನ ಕರ್ತ್ಯವ್ಯವೂ ಹೌದು ಎನ್ನುವುದರಲ್ಲಿ ಸಂಶಯವಿಲ್ಲ. ನಿತ್ಯವೂ ಕೇವಲ ವಿಕ್ರಾಂತದಿಂದ ರಕ್ಷಿಸುವವನನ್ನು ನಾನು ಬಯಸುವುದಿಲ್ಲ!”
12049078a ತತಃ ಪೃಥಿವ್ಯಾ ನಿರ್ದಿಷ್ಟಾಂಸ್ತಾನ್ಸಮಾನೀಯ ಕಶ್ಯಪಃ।
12049078c ಅಭ್ಯಷಿಂಚನ್ಮಹೀಪಾಲಾನ್ಕ್ಷತ್ರಿಯಾನ್ವೀರ್ಯಸಂಮತಾನ್।।
ಆಗ ಕಶ್ಯಪನು ಪೃಥ್ವಿಯು ನಿರ್ದಿಷ್ಟಪಡಿಸಿದ ಆ ವೀರ್ಯಸಂಮತ ಕ್ಷತ್ರಿಯರನ್ನು ಕರೆಯಿಸಿ ಮಹೀಪಾಲರನ್ನಾಗಿ ಅಭಿಷೇಕಿಸಿದನು.
12049079a ತೇಷಾಂ ಪುತ್ರಾಶ್ಚ ಪೌತ್ರಾಶ್ಚ ಯೇಷಾಂ ವಂಶಾಃ ಪ್ರತಿಷ್ಠಿತಾಃ।
12049079c ಏವಮೇತತ್ಪುರಾ ವೃತ್ತಂ ಯನ್ಮಾಂ ಪೃಚ್ಚಸಿ ಪಾಂಡವ।।
ಅವರ ಪುತ್ರ-ಪೌತ್ರರು ಅವರವರ ವಂಶಗಳಲ್ಲಿ ರಾಜ್ಯವಾಳುತ್ತಿದ್ದಾರೆ. ಪಾಂಡವ! ಇದೇ ನೀನು ಕೇಳಿದಂಥಹ ಪುರಾತನ ವೃತ್ತಾಂತ!””
12049080 ವೈಶಂಪಾಯನ ಉವಾಚ।
12049080a ಏವಂ ಬ್ರುವನ್ನೇವ ಯದುಪ್ರವೀರೋ ಯುಧಿಷ್ಠಿರಂ ಧರ್ಮಭೃತಾಂ ವರಿಷ್ಠಮ್।
12049080c ರಥೇನ ತೇನಾಶು ಯಯೌ ಯಥಾರ್ಕೋ ವಿಶನ್ಪ್ರಭಾಭಿರ್ಭಗವಾಂಸ್ತ್ರಿಲೋಕಮ್।।
ವೈಶಂಪಾಯನನು ಹೇಳಿದನು: “ಧರ್ಮಭೃತರಲ್ಲಿ ಶ್ರೇಷ್ಠ ಯುಧಿಷ್ಠಿರನಿಗೆ ಇದನ್ನು ಹೇಳುತ್ತಾ ಯದುಪ್ರವೀರ ಕೃಷ್ಣನು ರಥದಲ್ಲಿ ಕುಳಿತು ಸೂರ್ಯನು ಹೇಗೆ ತನ್ನ ಕಿರಣಗಳಿಂದ ವಿಶ್ವವನ್ನೇ ಬೆಳಗುವನೋ ಹಾಗೆ ಬೇಗ ಬೇಗ ಮುಂದೆಸಾರಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ರಾಮೋಪಾಖ್ಯಾನೇ ಏಕೋನಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ರಾಮೋಪಾಖ್ಯಾನ ಎನ್ನುವ ನಲ್ವತ್ತೊಂಭತ್ತನೇ ಅಧ್ಯಾಯವು.
-
ಗೋವಿನ ಬಾಲದಂಥಹ ಬಾಲವುಳ್ಳ ಒಂದು ಜಾತಿಯ ಕಪಿಗಳು. ↩︎