ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಶಲ್ಯವಧ ಪರ್ವ
ಅಧ್ಯಾಯ 6
ಸಾರ
09001001 ಜನಮೇಜಯ ಉವಾಚ 09001001a ಏವಂ ನಿಪಾತಿತೇ ಕರ್ಣೇ ಸಮರೇ ಸವ್ಯಸಾಚಿನಾ।
09001001c ಅಲ್ಪಾವಶಿಷ್ಟಾಃ ಕುರವಃ ಕಿಮಕುರ್ವತ ವೈ ದ್ವಿಜ।।
ಜನಮೇಜಯನು ಹೇಳಿದನು: “ದ್ವಿಜ! ಹೀಗೆ ಸವ್ಯಸಾಚಿಯು ಸಮರದಲ್ಲಿ ಕರ್ಣನನ್ನು ಕೆಳಗುರುಳಿಸಲು ಅಳಿದುಳಿದ ಅಲ್ಪಸಂಖ್ಯಾತ ಕುರುಗಳು ಏನು ಮಾಡಿದರು?
09001002a ಉದೀರ್ಯಮಾಣಂ ಚ ಬಲಂ ದೃಷ್ಟ್ವಾ ರಾಜಾ ಸುಯೋಧನಃ।
09001002c ಪಾಂಡವೈಃ ಪ್ರಾಪ್ತಕಾಲಂ ಚ ಕಿಂ ಪ್ರಾಪದ್ಯತ ಕೌರವಃ।।
ಪಾಂಡವರ ಬಲವು ಹೆಚ್ಚಾಗುತ್ತಿರುವುದನ್ನು ನೋಡಿ ರಾಜ ಕೌರವ ಸುಯೋಧನನು ಸಮಯೋಚಿತ ಕಾರ್ಯಕೈಗೊಂಡನೇ?
09001003a ಏತದಿಚ್ಚಾಮ್ಯಹಂ ಶ್ರೋತುಂ ತದಾಚಕ್ಷ್ವ ದ್ವಿಜೋತ್ತಮ।
09001003c ನ ಹಿ ತೃಪ್ಯಾಮಿ ಪೂರ್ವೇಷಾಂ ಶೃಣ್ವಾನಶ್ಚರಿತಂ ಮಹತ್।।
ದ್ವಿಜೋತ್ತಮ! ಇದನ್ನು ಕೇಳಲು ಬಯಸುತ್ತೇನೆ. ಅದನ್ನು ಹೇಳು. ಪೂರ್ವಜರ ಈ ಮಹಾನ್ ಚರಿತೆಯಿಂದ ಇನ್ನೂ ತೃಪ್ತನಾಗಿಲ್ಲ!”
09001004 ವೈಶಂಪಾಯನ ಉವಾಚ 09001004a ತತಃ ಕರ್ಣೇ ಹತೇ ರಾಜನ್ಧಾರ್ತರಾಷ್ಟ್ರಃ ಸುಯೋಧನಃ।
09001004c ಭೃಶಂ ಶೋಕಾರ್ಣವೇ ಮಗ್ನೋ ನಿರಾಶಃ ಸರ್ವತೋಽಭವತ್।।
ವೈಶಂಪಾಯನನು ಹೇಳಿದನು: “ರಾಜನ್! ಕರ್ಣನು ಹತನಾಗಲು ಧಾರ್ತರಾಷ್ಟ್ರ ಸುಯೋಧನನು ಅತ್ಯಂತ ಶೋಕಸಾಗರದಲ್ಲಿ ಮುಳುಗಿಹೋದನು. ಎಲ್ಲೆಡೆಯೂ ನಿರಾಶೆಯೇ ಕಂಡುಬಂದಿತು.
09001005a ಹಾ ಕರ್ಣ ಹಾ ಕರ್ಣ ಇತಿ ಶೋಚಮಾನಃ ಪುನಃ ಪುನಃ।
09001005c ಕೃಚ್ಚ್ರಾತ್ಸ್ವಶಿಬಿರಂ ಪ್ರಾಯಾದ್ಧತಶೇಷೈರ್ನೃಪೈಃ ಸಹ।।
“ಹಾ ಕರ್ಣ! ಹಾ ಕರ್ಣ!” ಎಂದು ಪುನಃ ಪುನಃ ಶೋಕಿಸುತ್ತಾ ಬಹಳ ಕಷ್ಟದಿಂದ ಅವನು ಅಳಿದುಳಿದ ನೃಪರೊಂದಿಗೆ ಸ್ವಶಿಬಿರಕ್ಕೆ ತೆರಳಿದನು.
09001006a ಸ ಸಮಾಶ್ವಾಸ್ಯಮಾನೋಽಪಿ ಹೇತುಭಿಃ ಶಾಸ್ತ್ರನಿಶ್ಚಿತೈಃ।
09001006c ರಾಜಭಿರ್ನಾಲಭಚ್ಚರ್ಮ ಸೂತಪುತ್ರವಧಂ ಸ್ಮರನ್।।
ಶಾಸ್ತ್ರನಿಶ್ಚಿತ ಕಾರಣಗಳಿಂದ ರಾಜರು ಸಮಾಧಾನಗೊಳಿಸಲು ಪ್ರಯತ್ನಿಸಿದರೂ ಸೂತಪುತ್ರನ ವಧೆಯನ್ನು ಸ್ಮರಿಸಿಕೊಳ್ಳುತ್ತಾ ರಾಜನಿಗೆ ಶಾಂತಿಯೆನ್ನುವುದೇ ಇಲ್ಲವಾಯಿತು.
09001007a ಸ ದೈವಂ ಬಲವನ್ಮತ್ವಾ ಭವಿತವ್ಯಂ ಚ ಪಾರ್ಥಿವಃ।
09001007c ಸಂಗ್ರಾಮೇ ನಿಶ್ಚಯಂ ಕೃತ್ವಾ ಪುನರ್ಯುದ್ಧಾಯ ನಿರ್ಯಯೌ।।
ಆಗಬೇಕಾದುದನ್ನು ಆಗಿಸಿಕೊಳ್ಳುವುದರಲ್ಲಿ ದೈವವೇ ಬಲಶಾಲಿಯಾದುದೆಂದು ಮನ್ನಿಸಿ ರಾಜನು ಸಂಗ್ರಾಮವನ್ನು ನಿಶ್ಚಯಿಸಿ ಪುನಃ ಯುದ್ಧಕ್ಕೆ ಹೊರಟನು.
09001008a ಶಲ್ಯಂ ಸೇನಾಪತಿಂ ಕೃತ್ವಾ ವಿಧಿವದ್ರಾಜಪುಂಗವಃ।
09001008c ರಣಾಯ ನಿರ್ಯಯೌ ರಾಜಾ ಹತಶೇಷೈರ್ನೃಪೈಃ ಸಹ।।
ವಿಧಿವತ್ತಾಗಿ ಶಲ್ಯನನ್ನು ಸೇನಾಪತಿಯನ್ನಾಗಿ ಮಾಡಿ ರಾಜಾ ರಾಜಪುಂಗವನು ಅಳಿದುಳಿದ ನೃಪರೊಂದಿಗೆ ರಣಕ್ಕೆ ತೆರಳಿದನು.
09001009a ತತಃ ಸುತುಮುಲಂ ಯುದ್ಧಂ ಕುರುಪಾಂಡವಸೇನಯೋಃ।
09001009c ಬಭೂವ ಭರತಶ್ರೇಷ್ಠ ದೇವಾಸುರರಣೋಪಮಂ।।
ಭರತಶ್ರೇಷ್ಠ! ಆಗ ಕುರು-ಪಾಂಡವ ಸೇನೆಗಳ ನಡುವೆ ದೇವಾಸುರರ ರಣದಂತೆ ಅತ್ಯಂತ ತುಮುಲ ಯುದ್ಧವು ನಡೆಯಿತು.
09001010a ತತಃ ಶಲ್ಯೋ ಮಹಾರಾಜ ಕೃತ್ವಾ ಕದನಮಾಹವೇ।
09001010c ಪಾಂಡುಸೈನ್ಯಸ್ಯ1 ಮಧ್ಯಾಹ್ನೇ ಧರ್ಮರಾಜೇನ ಪಾತಿತಃ।।
ಮಹಾರಾಜ! ಆ ದಿನ ಶಲ್ಯನು ಪಾಂಡುಸೇನೆಯೊಂದಿಗೆ ಕದನವಾಡಿ ಮಧ್ಯಾಹ್ನದಲ್ಲಿ ಧರ್ಮರಾಜನಿಂದ ಹತನಾದನು.
09001011a ತತೋ ದುರ್ಯೋಧನೋ ರಾಜಾ ಹತಬಂಧೂ ರಣಾಜಿರಾತ್।
09001011c ಅಪಸೃತ್ಯ ಹ್ರದಂ ಘೋರಂ ವಿವೇಶ ರಿಪುಜಾದ್ಭಯಾತ್।।
ಆಗ ಬಂಧುಗಳನ್ನು ಕಳೆದುಕೊಂಡ ರಾಜಾ ದುರ್ಯೋಧನನು ರಿಪುಗಳ ಭಯದಿಂದ ರಣದಿಂದ ತಪ್ಪಿಸಿಕೊಂಡು ಘೋರ ಸರೋವರವನ್ನು ಪ್ರವೇಶಿಸಿದನು.
09001012a ಅಥಾಪರಾಹ್ಣೇ ತಸ್ಯಾಹ್ನಃ ಪರಿವಾರ್ಯ ಮಹಾರಥೈಃ।
09001012c ಹ್ರದಾದಾಹೂಯ ಯೋಗೇನ ಭೀಮಸೇನೇನ ಪಾತಿತಃ।।
ಆ ದಿನದ ಅಪರಾಹ್ಣದಲ್ಲಿ ಮಹಾರಥರಿಂದ ಸುತ್ತುವರೆಯಲ್ಪಟ್ಟು ಭೀಮಸೇನನು ಸರೋವರದಿಂದ ದುರ್ಯೋಧನನ್ನು ಕರೆದು ಯೋಗವಶಾತ್ ಕೆಳಗುರುಳಿಸಿದನು.
09001013a ತಸ್ಮಿನ್ ಹತೇ ಮಹೇಷ್ವಾಸೇ ಹತಶಿಷ್ಟಾಸ್ತ್ರಯೋ ರಥಾಃ।
09001013c ಸಂರಭಾನ್ನಿಶಿ ರಾಜೇಂದ್ರ ಜಘ್ನುಃ ಪಾಂಚಾಲಸೈನಿಕಾನ್।।
ರಾಜೇಂದ್ರ! ಆ ಮಹೇಷ್ವಾಸನು ಹತನಾಗಲು ಅಳಿದುಳಿದ ಮೂರು ಮಹಾರಥರು ಕೋಪದಿಂದ ರಾತ್ರಿಯಲ್ಲಿ ಪಾಂಚಾಲಸೈನಿಕರನ್ನು ಸಂಹರಿಸಿದರು.
09001014a ತತಃ ಪೂರ್ವಾಹ್ಣಸಮಯೇ ಶಿಬಿರಾದೇತ್ಯ ಸಂಜಯಃ।
09001014c ಪ್ರವಿವೇಶ ಪುರೀಂ ದೀನೋ ದುಃಖಶೋಕಸಮನ್ವಿತಃ।।
ಮರು ದಿನ ಪೂರ್ವಾಹ್ಣ ಸಮಯದಲ್ಲಿ ದುಃಖಶೋಕಸಮನ್ವಿತ ದೀನ ಸಂಜಯನು ಶಿಬಿರದಿಂದ ಹೊರಟು ಹಸ್ತಿನಾಪುರಿಯನ್ನು ಪ್ರವೇಶಿಸಿದನು.
09001015a ಪ್ರವಿಶ್ಯ ಚ ಪುರಂ ತೂರ್ಣಂ ಭುಜಾವುಚ್ಚ್ರಿತ್ಯ ದುಃಖಿತಃ।
09001015c ವೇಪಮಾನಸ್ತತೋ ರಾಜ್ಞಃ ಪ್ರವಿವೇಶ ನಿವೇಶನಂ।।
ಪುರವನ್ನು ಪ್ರವೇಶಿಸಿ ಭುಜಗಳನ್ನು ಮೇಲೆತ್ತಿ ದುಃಖಿತನಾಗಿ ನಡುಗುತ್ತಾ ಅವನು ಬೇಗನೇ ರಾಜನಿವೇಶನವನ್ನು ಪ್ರವೇಶಿಸಿದನು.
09001016a ರುರೋದ ಚ ನರವ್ಯಾಘ್ರ ಹಾ ರಾಜನ್ನಿತಿ ದುಃಖಿತಃ।
09001016c ಅಹೋ ಬತ ವಿವಿಗ್ನಾಃ2 ಸ್ಮ ನಿಧನೇನ ಮಹಾತ್ಮನಃ।।
“ನರವ್ಯಾಘ್ರ! ಹಾ ರಾಜ! ಮಹಾತ್ಮನ ನಿಧನದಿಂದ ನಾವೆಲ್ಲರೂ ವಿವಿಗ್ನರಾಗಿದ್ದೇವೆ!” ಎಂದು ದುಃಖಿತನಾಗಿ ರೋದಿಸಿದನು.
09001017a ಅಹೋ ಸುಬಲವಾನ್ಕಾಲೋ ಗತಿಶ್ಚ ಪರಮಾ ತಥಾ।
09001017c ಶಕ್ರತುಲ್ಯಬಲಾಃ ಸರ್ವೇ ಯತ್ರಾವಧ್ಯಂತ ಪಾರ್ಥಿವಾಃ।।
“ಅಯ್ಯೋ! ಕಾಲವೇ ಅತ್ಯಂತ ಬಲಶಾಲಿ! ಬಲದಲ್ಲಿ ಶಕ್ರನಿಗೆ ಸಮನಾಗಿದ್ದ ಪಾರ್ಥಿವರೆಲ್ಲರೂ ವಧಿಸಲ್ಪಟ್ಟು ಪರಮ ಗತಿಯನ್ನು ಹೊಂದಿದರು.”
09001018a ದೃಷ್ಟ್ವೈವ ಚ ಪುರೋ ರಾಜನ್ಜನಃ ಸರ್ವಃ ಸ ಸಂಜಯಂ।
309001018c ಪ್ರರುರೋದ ಭೃಶೋದ್ವಿಗ್ನೋ ಹಾ ರಾಜನ್ನಿತಿ ಸಸ್ವರಂ।।
ರಾಜನ್! ಸಂಜಯನನ್ನು ನೋಡಿದ ಪುರಜನರೆಲ್ಲರೂ ಅತ್ಯಂತ ಉದ್ವಿಗ್ನರಾಗಿ ಒಟ್ಟು ಸ್ವರದಲ್ಲಿ “ಹಾ ರಾಜಾ!” ಎಂದು ಗೋಳಿಟ್ಟರು.
09001019a ಆಕುಮಾರಂ ನರವ್ಯಾಘ್ರ ತತ್ಪುರಂ ವೈ ಸಮಂತತಃ।
09001019c ಆರ್ತನಾದಂ ಮಹಚ್ಚಕ್ರೇ ಶ್ರುತ್ವಾ ವಿನಿಹತಂ ನೃಪಂ।।
ನರವ್ಯಾಘ್ರ! ನೃಪನು ಹತನಾದುದನ್ನು ಕೇಳಿ ಕುಮಾರಾದ್ಯಂತರಾಗಿ ಸುತ್ತಲಿದ್ದ ಎಲ್ಲರೂ ಆರ್ತನಾದಗೈದರು.
09001020a ಧಾವತಶ್ಚಾಪ್ಯಪಶ್ಯಚ್ಚ ತತ್ರ ತ್ರೀನ್ಪುರುಷರ್ಷಭಾನ್।
09001020c ನಷ್ಟಚಿತ್ತಾನಿವೋನ್ಮತ್ತಾನ್ ಶೋಕೇನ ಭೃಶಪೀಡಿತಾನ್।।
ಅಲ್ಲಿ ಅವರು ಬುದ್ಧಿಕಳೆದುಕೊಂಡು ಅತ್ಯಂತ ಶೋಕದಿಂದ ಪೀಡಿತರಾಗಿ ಹುಚ್ಚರಂತೆ ಓಡಿ ಹೋಗುತ್ತಿದ್ದ ಮೂವರು ಪುರುಷರ್ಷಭರನ್ನು ಕೂಡ ನೋಡಿದರು.
09001021a ತಥಾ ಸ ವಿಹ್ವಲಃ ಸೂತಃ ಪ್ರವಿಶ್ಯ ನೃಪತಿಕ್ಷಯಂ।
09001021c ದದರ್ಶ ನೃಪತಿಶ್ರೇಷ್ಠಂ ಪ್ರಜ್ಞಾಚಕ್ಷುಷಮೀಶ್ವರಂ।।
ಹಾಗೆ ವಿಹ್ವಲನಾಗಿದ್ದ ಸೂತನು ನೃಪತಿಕಕ್ಷವನ್ನು ಪ್ರವೇಶಿಸಿ ಅಲ್ಲಿ ನೃಪತಿಶ್ರೇಷ್ಠ ಪ್ರಜ್ಞಾಚಕ್ಷು ತನ್ನ ಒಡೆಯನನ್ನು ಕಂಡನು.
09001022a ದೃಷ್ಟ್ವಾ ಚಾಸೀನಮನಘಂ ಸಮಂತಾತ್ಪರಿವಾರಿತಂ।
09001022c ಸ್ನುಷಾಭಿರ್ಭರತಶ್ರೇಷ್ಠ ಗಾಂಧಾರ್ಯಾ ವಿದುರೇಣ ಚ।।
09001023a ತಥಾನ್ಯೈಶ್ಚ ಸುಹೃದ್ಭಿಶ್ಚ ಜ್ಞಾತಿಭಿಶ್ಚ ಹಿತೈಷಿಭಿಃ।
09001023c ತಮೇವ ಚಾರ್ಥಂ ಧ್ಯಾಯಂತಂ ಕರ್ಣಸ್ಯ ನಿಧನಂ ಪ್ರತಿ।।
09001024a ರುದನ್ನೇವಾಬ್ರವೀದ್ವಾಕ್ಯಂ ರಾಜಾನಂ ಜನಮೇಜಯ।
09001024c ನಾತಿಹೃಷ್ಟಮನಾಃ ಸೂತೋ ಬಾಷ್ಪಸಂದಿಗ್ಧಯಾ ಗಿರಾ।।
ಜನಮೇಜಯ! ಅಲ್ಲಿ ಕರ್ಣನ ನಿಧನದ ಕುರಿತೇ ಯೋಚಿಸುತ್ತಿದ್ದ, ಗಾಂಧಾರೀ, ಸೊಸೆಯಂದಿರು, ವಿದುರ ಮತ್ತು ಅನ್ಯ ಸುಹೃದಯರು, ಕುಟುಂಬದವರು, ಮತ್ತು ಹಿತೈಷಿಗಳಿಂದ ಸುತ್ತುವರೆಯಲ್ಪಟ್ಟು ಕುಳಿತಿದ್ದ ಅನಘ ಭರತಶ್ರೇಷ್ಠನನ್ನು ನೋಡಿ ದುಃಖಮನಸ್ಕನಾಗಿ ಅಳುತ್ತಾ ಕಣ್ಣೀರಿನಿಂದ ತಡೆಯಲ್ಪಟ್ಟ ಧ್ವನಿಯಿಂದ ಸೂತನು ರಾಜನಿಗೆ ಈ ಮಾತನ್ನಾಡಿದನು.
09001025a ಸಂಜಯೋಽಹಂ ನರವ್ಯಾಘ್ರ ನಮಸ್ತೇ ಭರತರ್ಷಭ।
09001025c ಮದ್ರಾಧಿಪೋ ಹತಃ ಶಲ್ಯಃ ಶಕುನಿಃ ಸೌಬಲಸ್ತಥಾ।।
09001025e ಉಲೂಕಃ ಪುರುಷವ್ಯಾಘ್ರ ಕೈತವ್ಯೋ ದೃಢವಿಕ್ರಮಃ।।
“ನರವ್ಯಾಘ್ರ! ಭರತರ್ಷಭ! ಪುರುಷವ್ಯಾಘ್ರ! ನಾನು ಸಂಜಯ! ಮದ್ರಾಧಿಪ ಶಲ್ಯ ಮತ್ತು ಹಾಗೆಯೇ ಸೌಬಲ ಶಕುನಿ, ಕೈತವ್ಯ ದೃಢವಿಕ್ರಮಿ ಉಲೂಕರು ಹತರಾದರು!
09001026a ಸಂಶಪ್ತಕಾ ಹತಾಃ ಸರ್ವೇ ಕಾಂಬೋಜಾಶ್ಚ ಶಕೈಃ ಸಹ।
09001026c ಮ್ಲೇಚ್ಛಾಶ್ಚ ಪಾರ್ವತೀಯಾಶ್ಚ ಯವನಾಶ್ಚ ನಿಪಾತಿತಾಃ।।
ಕಾಂಬೋಜರು ಮತ್ತು ಶಕರೊಂದಿಗೆ ಸಂಶಪ್ತಕರು ಎಲ್ಲರೂ ಹತರಾದರು! ಮ್ಲೇಚ್ಛರು, ಪರ್ವತೇಯರು, ಮತ್ತು ಯವನರು ಕೂಡ ಕೆಳಗುರುಳಿದರು!
09001027a ಪ್ರಾಚ್ಯಾ ಹತಾ ಮಹಾರಾಜ ದಾಕ್ಷಿಣಾತ್ಯಾಶ್ಚ ಸರ್ವಶಃ।
09001027c ಉದೀಚ್ಯಾ ನಿಹತಾಃ ಸರ್ವೇ ಪ್ರತೀಚ್ಯಾಶ್ಚ ನರಾಧಿಪ।।
09001027e ರಾಜಾನೋ ರಾಜಪುತ್ರಾಶ್ಚ ಸರ್ವತೋ ನಿಹತಾ ನೃಪ।।
ಮಹಾರಾಜ! ಪೂರ್ವದೇಶದವರು ದಕ್ಷಿಣದವರು ಎಲ್ಲರೂ ಹತರಾದರು! ನರಾಧಿಪ! ಉತ್ತರದವರು ಮತ್ತು ಪಶ್ಚಿಮದವರು ಎಲ್ಲರೂ ಹತರಾದರು! ನೃಪ! ರಾಜರು ಮತ್ತು ರಾಜಪುತ್ರರೆಲ್ಲರೂ ಹತರಾದರು!
09001028a ದುರ್ಯೋಧನೋ ಹತೋ ರಾಜನ್ಯಥೋಕ್ತಂ ಪಾಂಡವೇನ ಚ।
09001028c ಭಗ್ನಸಕ್ಥೋ ಮಹಾರಾಜ ಶೇತೇ ಪಾಂಸುಷು ರೂಷಿತಃ।।
ರಾಜನ್! ದುರ್ಯೋಧನನೂ ಹತನಾದನು! ಮಹಾರಾಜ! ಪಾಂಡವನು ಹೇಳಿದ್ದಂತೆಯೇ ಅವನು ತೊಡೆಯೊಡೆದು ಗಾಯಗೊಂಡು ಕೆಸರಿನಲ್ಲಿ ಮಲಗಿದ್ದಾನೆ!
09001029a ಧೃಷ್ಟದ್ಯುಮ್ನೋ ಹತೋ ರಾಜನ್ ಶಿಖಂಡೀ ಚಾಪರಾಜಿತಃ।
09001029c ಉತ್ತಮೌಜಾ ಯುಧಾಮನ್ಯುಸ್ತಥಾ ರಾಜನ್ಪ್ರಭದ್ರಕಾಃ।।
ರಾಜನ್! ಧೃಷ್ಟದ್ಯುಮ್ನ, ಅಪರಾಜಿತ ಶಿಖಂಡೀ, ಉತ್ತಮೌಜ, ಯುಧಾಮನ್ಯು ಮತ್ತು ಇತರ ಪ್ರಭದ್ರಕರೂ ಹತರಾದರು!
09001030a ಪಾಂಚಾಲಾಶ್ಚ ನರವ್ಯಾಘ್ರಾಶ್ಚೇದಯಶ್ಚ ನಿಷೂದಿತಾಃ।
09001030c ತವ ಪುತ್ರಾ ಹತಾಃ ಸರ್ವೇ ದ್ರೌಪದೇಯಾಶ್ಚ ಭಾರತ।।
09001030e ಕರ್ಣಪುತ್ರೋ ಹತಃ ಶೂರೋ ವೃಷಸೇನೋ ಮಹಾಬಲಃ।।
ನರವ್ಯಾಘ್ರ ಪಾಂಚಾಲರೂ, ಚೇದಿದೇಶದವರೂ ಸಂಹರಿಸಲ್ಪಟ್ಟರು! ಭಾರತ! ನಿನ್ನ ಮತ್ತು ದ್ರೌಪದಿಯ ಪುತ್ರರೆಲ್ಲರೂ ಹತರಾಗಿದ್ದಾರೆ! ಕರ್ಣಪುತ್ರ ಶೂರ ಮಹಾಬಲ ವೃಷಸೇನನೂ ಹತನಾಗಿದ್ದಾನೆ!
09001031a ನರಾ ವಿನಿಹತಾಃ ಸರ್ವೇ ಗಜಾಶ್ಚ ವಿನಿಪಾತಿತಾಃ।
09001031c ರಥಿನಶ್ಚ ನರವ್ಯಾಘ್ರ ಹಯಾಶ್ಚ ನಿಹತಾ ಯುಧಿ।।
ನರರು ಹತರಾದರು! ಆನೆಗಳು ಕೆಳಗುರುಳಿದವು! ನರವ್ಯಾಘ್ರ! ಯುದ್ಧದಲ್ಲಿ ರಥಿಗಳು ಮತ್ತು ಕುದುರೆಗಳೂ ಹತವಾದವು!
09001032a ಕಿಂಚಿಚ್ಛೇಷಂ ಚ ಶಿಬಿರಂ ತಾವಕಾನಾಂ ಕೃತಂ ವಿಭೋ।
09001032c ಪಾಂಡವಾನಾಂ ಚ ಶೂರಾಣಾಂ ಸಮಾಸಾದ್ಯ ಪರಸ್ಪರಂ।।
ವಿಭೋ! ಪರಸ್ಪರರನ್ನು ಎದುರಿಸಿದ ಶೂರ ಪಾಂಡವರ ಮತ್ತು ನಿನ್ನ ಶಿಬಿರಗಳಲ್ಲಿ ಕೆಲವರು ಮಾತ್ರ ಉಳಿದುಕೊಂಡಿದ್ದಾರೆ.
09001033a ಪ್ರಾಯಃ ಸ್ತ್ರೀಶೇಷಮಭವಜ್ಜಗತ್ಕಾಲೇನ ಮೋಹಿತಂ।
09001033c ಸಪ್ತ ಪಾಂಡವತಃ ಶೇಷಾ ಧಾರ್ತರಾಷ್ಟ್ರಾಸ್ತಥಾ ತ್ರಯಃ।।
ಕಾಲಮೋಹಿತವಾದ ಈ ಜಗತ್ತಿನಲ್ಲಿ ಪ್ರಾಯಶಃ ಕೇವಲ ಸ್ತ್ರೀಯರು ಮಾತ್ರ ಉಳಿದುಕೊಂಡಿದ್ದಾರೆ. ಪಾಂಡವರು ಏಳು ಮಂದಿ ಮತ್ತು ಧಾರ್ತರಾಷ್ಟ್ರರು ಮೂರು ಮಂದಿ ಉಳಿದುಕೊಂಡಿದ್ದಾರೆ.
09001034a ತೇ ಚೈವ ಭ್ರಾತರಃ ಪಂಚ ವಾಸುದೇವೋಽಥ ಸಾತ್ಯಕಿಃ।
09001034c ಕೃಪಶ್ಚ ಕೃತವರ್ಮಾ ಚ ದ್ರೌಣಿಶ್ಚ ಜಯತಾಂ ವರಃ।।
ಅವರು ಐವರು ಸಹೋದರರು, ವಾಸುದೇವ ಮತ್ತು ಸಾತ್ಯಕಿ. ಕೃಪ, ಕೃತವರ್ಮ ಹಾಗೂ ವಿಜಯಿಗಳಲ್ಲಿ ಶ್ರೇಷ್ಠ ದ್ರೌಣಿ.
09001035a ತವಾಪ್ಯೇತೇ ಮಹಾರಾಜ ರಥಿನೋ ನೃಪಸತ್ತಮ।
09001035c ಅಕ್ಷೌಹಿಣೀನಾಂ ಸರ್ವಾಸಾಂ ಸಮೇತಾನಾಂ ಜನೇಶ್ವರ।।
09001035e ಏತೇ ಶೇಷಾ ಮಹಾರಾಜ ಸರ್ವೇಽನ್ಯೇ ನಿಧನಂ ಗತಾಃ।।
ಮಹಾರಾಜ! ನೃಪಸತ್ತಮ! ಜನೇಶ್ವರ! ಒಂದುಗೂಡಿದ್ದ ಎಲ್ಲ ಅಕ್ಷೌಹಿಣೀ ಸೇನೆಗಳಲ್ಲಿ ಈ ರಥಿಗಳು ಮಾತ್ರ ಉಳಿದುಕೊಂಡಿದ್ದಾರೆ. ಮಹಾರಾಜ! ಅನ್ಯ ಎಲ್ಲರೂ ನಿಧನಹೊಂದಿದರು.
09001036a ಕಾಲೇನ ನಿಹತಂ ಸರ್ವಂ ಜಗದ್ವೈ ಭರತರ್ಷಭ।
09001036c ದುರ್ಯೋಧನಂ ವೈ ಪುರತಃ ಕೃತ್ವಾ ವೈರಸ್ಯ ಭಾರತ।।
ಭರತರ್ಷಭ! ಭಾರತ! ದುರ್ಯೋಧನ ಮತ್ತು ಅವನ ವೈರವನ್ನು ಮುಂದೆಮಾಡಿಕೊಂಡು ಕಾಲನೇ ಈ ಜಗತ್ತೆಲ್ಲವನ್ನೂ ವಿನಾಶಗೊಳಿಸಿದನು!”
09001037a ಏತಚ್ಛ್ರುತ್ವಾ ವಚಃ ಕ್ರೂರಂ ಧೃತರಾಷ್ಟ್ರೋ ಜನೇಶ್ವರಃ।
09001037c ನಿಪಪಾತ ಮಹಾರಾಜ ಗತಸತ್ತ್ವೋ ಮಹೀತಲೇ।।
ಮಹಾರಾಜ! ಈ ಕ್ರೂರ ಮಾತನ್ನು ಕೇಳಿ ಜನೇಶ್ವರ ಧೃತರಾಷ್ಟ್ರನು ಪ್ರಾಣಹೋದಂತಾಗಿ ನೆಲದಮೇಲೆ ಬಿದ್ದನು.
09001038a ತಸ್ಮಿನ್ನಿಪತಿತೇ ಭೂಮೌ ವಿದುರೋಽಪಿ ಮಹಾಯಶಾಃ।
09001038c ನಿಪಪಾತ ಮಹಾರಾಜ ರಾಜವ್ಯಸನಕರ್ಶಿತಃ।।
ಮಹಾರಾಜ! ಅವನು ಕೆಳಗೆ ಬೀಳಲು ರಾಜವ್ಯಸನದಿಂದ ದುಃಖಿತನಾಗಿದ್ದ ಮಹಾಯಶಸ್ವಿ ವಿದುರನು ಕೂಡ ಭೂಮಿಯಮೇಲೆ ಬಿದ್ದನು.
09001039a ಗಾಂಧಾರೀ ಚ ನೃಪಶ್ರೇಷ್ಠ ಸರ್ವಾಶ್ಚ ಕುರುಯೋಷಿತಃ।
09001039c ಪತಿತಾಃ ಸಹಸಾ ಭೂಮೌ ಶ್ರುತ್ವಾ ಕ್ರೂರಂ ವಚಶ್ಚ ತಾಃ।।
ನೃಪಶ್ರೇಷ್ಠ! ಆ ಕ್ರೂರ ಮಾತನ್ನು ಕೇಳಿ ಕೂಡಲೇ ಗಾಂಧಾರಿ ಮತ್ತು ಕುರುಸ್ತ್ರೀಯರೆಲ್ಲರೂ ಭೂಮಿಯಮೇಲೆ ಬಿದ್ದರು.
09001040a ನಿಃಸಂಜ್ಞಂ ಪತಿತಂ ಭೂಮೌ ತದಾಸೀದ್ರಾಜಮಂಡಲಂ।
09001040c ಪ್ರಲಾಪಯುಕ್ತಾ ಮಹತೀ ಕಥಾ ನ್ಯಸ್ತಾ ಪಟೇ ಯಥಾ।।
ಪ್ರಲಪಿಸುತ್ತಿದ್ದ ಆ ರಾಜಮಂಡಲವು ಸಂಜ್ಞೆಗಳನ್ನು ಕಳೆದುಕೊಂಡು ವಿಶಾಲ ಚಿತ್ರಪಟದಲ್ಲಿ ಅಂಕಿತ ಚಿತ್ರಗಳಂತೆ ಭೂಮಿಯ ಮೇಲೆ ಬಿದ್ದಿತು.
09001041a ಕೃಚ್ಚ್ರೇಣ ತು ತತೋ ರಾಜಾ ಧೃತರಾಷ್ಟ್ರೋ ಮಹೀಪತಿಃ।
09001041c ಶನೈರಲಭತ ಪ್ರಾಣಾನ್ಪುತ್ರವ್ಯಸನಕರ್ಶಿತಃ।।
ಅನಂತರ ಪುತ್ರವ್ಯಸನದಿಂದ ದುಃಖಿತ ಮಹೀಪತಿ ರಾಜಾ ಧೃತರಾಷ್ಟ್ರನು ಕಷ್ಟದಿಂದ ಮೆಲ್ಲನೆ ಚೇತರಿಸಿಕೊಂಡನು.
09001042a ಲಬ್ಧ್ವಾ ತು ಸ ನೃಪಃ ಸಂಜ್ಞಾಂ ವೇಪಮಾನಃ ಸುದುಃಖಿತಃ।
09001042c ಉದೀಕ್ಷ್ಯ ಚ ದಿಶಃ ಸರ್ವಾಃ ಕ್ಷತ್ತಾರಂ ವಾಕ್ಯಮಬ್ರವೀತ್।।
ಸಂಜ್ಞೆಗಳನ್ನು ಪಡೆದ ಆ ನೃಪನು ಅತಿ ದುಃಖದಿಂದ ಕಂಪಿಸುತ್ತಾ ಎಲ್ಲ ದಿಕ್ಕುಗಳಲ್ಲಿಯೂ ನೋಡುತ್ತಾ ಕ್ಷತ್ತನಿಗೆ ಈ ಮಾತನ್ನಾಡಿದನು:
09001043a ವಿದ್ವನ್ ಕ್ಷತ್ತರ್ಮಹಾಪ್ರಾಜ್ಞ ತ್ವಂ ಗತಿರ್ಭರತರ್ಷಭ।
09001043c ಮಮಾನಾಥಸ್ಯ ಸುಭೃಶಂ ಪುತ್ರೈರ್ಹೀನಸ್ಯ ಸರ್ವಶಃ।।
09001043e ಏವಮುಕ್ತ್ವಾ ತತೋ ಭೂಯೋ ವಿಸಂಜ್ಞೋ ನಿಪಪಾತ ಹ।।
“ವಿದ್ವನ್! ಕ್ಷತ್ತ! ಮಹಾಪ್ರಾಜ್ಞ! ಭರತರ್ಷಭ! ಎಲ್ಲ ಪುತ್ರರನ್ನೂ ಕಳೆದುಕೊಂಡು ಅತೀವ ಅನಾಥನಾಗಿರುವ ನನಗೆ ನೀನೇ ಗತಿ!” ಹೀಗೆ ಹೇಳಿ ಅವನು ಪುನಃ ಮೂರ್ಛಿತನಾಗಿ ಕೆಳಗೆ ಬಿದ್ದನು.
09001044a ತಂ ತಥಾ ಪತಿತಂ ದೃಷ್ಟ್ವಾ ಬಾಂಧವಾ ಯೇಽಸ್ಯ ಕೇ ಚನ।
09001044c ಶೀತೈಸ್ತು ಸಿಷಿಚುಸ್ತೋಯೈರ್ವಿವ್ಯಜುರ್ವ್ಯಜನೈರಪಿ।।
ಹಾಗೆ ಅವನು ಬಿದ್ದುದನ್ನು ನೋಡಿ ಬಾಂಧವರಲ್ಲಿ ಕೆಲವರು ತಣ್ಣೀರನ್ನು ಚಿಮುಕಿಸಿದರು ಮತ್ತು ಬೀಸಣಿಗೆಯನ್ನು ಬೀಸಿದರು.
09001045a ಸ ತು ದೀರ್ಘೇಣ ಕಾಲೇನ ಪ್ರತ್ಯಾಶ್ವಸ್ತೋ ಮಹೀಪತಿಃ।
09001045c ತೂಷ್ಣೀಂ ದಧ್ಯೌ ಮಹೀಪಾಲಃ ಪುತ್ರವ್ಯಸನಕರ್ಶಿತಃ।।
09001045e ನಿಃಶ್ವಸನ್ಜಿಹ್ಮಗ ಇವ ಕುಂಭಕ್ಷಿಪ್ತೋ ವಿಶಾಂ ಪತೇ।।
ವಿಶಾಂಪತೇ! ದೀರ್ಘಕಾಲದ ನಂತರ ಪುನಃ ಎಚ್ಚರಗೊಂಡ ಆ ಮಹೀಪತಿ ಮಹೀಪಾಲನು ಪುತ್ರವ್ಯಸನದಿಂದ ಪೀಡಿತನಾಗಿ ಗಡಿಗೆಯಲ್ಲಿಟ್ಟ ಹಾವಿನಂತೆ ನಿಟ್ಟುಸಿರುಬಿಡುತ್ತಾ ಮೌನಿಯಾಗಿ ಕುಳಿತಿದ್ದನು.
09001046a ಸಂಜಯೋಽಪ್ಯರುದತ್ತತ್ರ ದೃಷ್ಟ್ವಾ ರಾಜಾನಮಾತುರಂ।
09001046c ತಥಾ ಸರ್ವಾಃ ಸ್ತ್ರಿಯಶ್ಚೈವ ಗಾಂಧಾರೀ ಚ ಯಶಸ್ವಿನೀ।।
ಆತುರನಾಗಿದ್ದ ರಾಜನನ್ನು ನೋಡಿ ಸಂಜಯನೂ, ಮತ್ತು ಹಾಗೆಯೇ ಯಶಸ್ವಿನೀ ಗಾಂಧಾರೀ ಮತ್ತು ಎಲ್ಲ ಸ್ತ್ರೀಯರೂ ರೋದಿಸತೊಡಗಿದರು.
09001047a ತತೋ ದೀರ್ಘೇಣ ಕಾಲೇನ ವಿದುರಂ ವಾಕ್ಯಮಬ್ರವೀತ್।
09001047c ಧೃತರಾಷ್ಟ್ರೋ ನರವ್ಯಾಘ್ರೋ ಮುಹ್ಯಮಾನೋ ಮುಹುರ್ಮುಹುಃ।।
ದೀರ್ಘ ಕಾಲದ ನಂತರ ಕ್ಷಣ-ಕ್ಷಣಕ್ಕೂ ಮೂರ್ಛಿತನಾಗುತ್ತಿದ್ದ ನರವ್ಯಾಘ್ರ ಧೃತರಾಷ್ಟ್ರನು ವಿದುರನಲ್ಲಿ ಈ ಮಾತನ್ನಾಡಿದನು:
09001048a ಗಚ್ಚಂತು ಯೋಷಿತಃ ಸರ್ವಾ ಗಾಂಧಾರೀ ಚ ಯಶಸ್ವಿನೀ।
09001048c ತಥೇಮೇ ಸುಹೃದಃ ಸರ್ವೇ ಭ್ರಶ್ಯತೇ ಮೇ ಮನೋ ಭೃಶಂ।।
“ಯಶಸ್ವಿನೀ ಗಾಂಧಾರಿಯೂ, ಎಲ್ಲ ಸ್ತ್ರೀಯರು ಮತ್ತು ಎಲ್ಲ ಸುಹೃದರೂ ಹೊರಟುಹೋಗಲಿ! ನನ್ನ ಮನಸ್ಸು ತುಂಬಾ ಭ್ರಮೆಗೊಂಡಿದೆ!”
09001049a ಏವಮುಕ್ತಸ್ತತಃ ಕ್ಷತ್ತಾ ತಾಃ ಸ್ತ್ರಿಯೋ ಭರತರ್ಷಭ।
09001049c ವಿಸರ್ಜಯಾಮಾಸ ಶನೈರ್ವೇಪಮಾನಃ ಪುನಃ ಪುನಃ।।
ಭರತರ್ಷಭ! ಹೀಗೆ ಹೇಳಲು ಪುನಃ ಪುನಃ ಕಂಪಿಸುತ್ತಿದ್ದ ಕ್ಷತ್ತನು ಮೆಲ್ಲನೆ ಸ್ತ್ರೀಯರನ್ನು ಕಳುಹಿಸಿಕೊಟ್ಟನು.
09001050a ನಿಶ್ಚಕ್ರಮುಸ್ತತಃ ಸರ್ವಾಸ್ತಾಃ ಸ್ತ್ರಿಯೋ ಭರತರ್ಷಭ।
09001050c ಸುಹೃದಶ್ಚ ತತಃ ಸರ್ವೇ ದೃಷ್ಟ್ವಾ ರಾಜಾನಮಾತುರಂ।।
ಭರತರ್ಷಭ! ಆತುರ ರಾಜನನ್ನು ನೋಡಿ ಆ ಎಲ್ಲ ಸ್ತ್ರೀಯರೂ ಎಲ್ಲ ಸುಹೃದರೂ ಅಲ್ಲಿಂದ ಹೊರಟುಹೋದರು.
09001051a ತತೋ ನರಪತಿಂ ತತ್ರ ಲಬ್ಧಸಂಜ್ಞಂ ಪರಂತಪ।
09001051c ಅವೇಕ್ಷ್ಯ ಸಂಜಯೋ ದೀನೋ ರೋದಮಾನಂ ಭೃಶಾತುರಂ।।
ಪರಂತಪ! ಆಗ ಅಲ್ಲಿ ಸಂಜ್ಞೆಗಳನ್ನು ಪಡೆದು ತುಂಬಾ ಆತುರನಾಗಿ ರೋದಿಸುತ್ತಿದ್ದ ನರಪತಿಯನ್ನು ಸಂಜಯನು ನೋಡಿದನು.
09001052a ಪ್ರಾಂಜಲಿರ್ನಿಃಶ್ವಸಂತಂ ಚ ತಂ ನರೇಂದ್ರಂ ಮುಹುರ್ಮುಹುಃ।
09001052c ಸಮಾಶ್ವಾಸಯತ ಕ್ಷತ್ತಾ ವಚಸಾ ಮಧುರೇಣ ಹ।।
ಬಾರಿ ಬಾರಿ ನಿಟ್ಟುಸಿರುಬಿಡುತ್ತಿದ್ದ ಆ ನರೇಂದ್ರನನ್ನು ಅಂಜಲೀಬದ್ಧ ಕ್ಷತ್ತನು ಮಧುರ ಮಾತುಗಳಿಂದ ಸಂತಯಿಸಿದನು.”
09006001 ಸಂಜಯ ಉವಾಚ 09006001a ಏತಚ್ಛೃತ್ವಾ ವಚೋ ರಾಜ್ಞೋ ಮದ್ರರಾಜಃ ಪ್ರತಾಪವಾನ್।
09006001c ದುರ್ಯೋಧನಂ ತದಾ ರಾಜನ್ವಾಕ್ಯಮೇತದುವಾಚ ಹ।।
ಸಂಜಯನು ಹೇಳಿದನು: “ರಾಜನ್! ರಾಜನ ಈ ಮಾತನ್ನು ಕೇಳಿದ ಪ್ರತಾಪವಾನ್ ಮದ್ರರಾಜನು ದುರ್ಯೋಧನನಿಗೆ ಈ ಮಾತುಗಳನ್ನಾಡಿದನು:
09006002a ದುರ್ಯೋಧನ ಮಹಾಬಾಹೋ ಶೃಣು ವಾಕ್ಯವಿದಾಂ ವರ।
09006002c ಯಾವೇತೌ ಮನ್ಯಸೇ ಕೃಷ್ಣೌ ರಥಸ್ಥೌ ರಥಿನಾಂ ವರೌ।।
09006002e ನ ಮೇ ತುಲ್ಯಾವುಭಾವೇತೌ ಬಾಹುವೀರ್ಯೇ ಕಥಂ ಚನ।।
“ಮಹಾಬಾಹೋ! ದುರ್ಯೋಧನ! ವಾಕ್ಯವಿದರಲ್ಲಿ ಶ್ರೇಷ್ಠ! ನನ್ನ ಮಾತನ್ನು ಕೇಳು! ಯಾರನ್ನು ನೀನು ರಥಿಗಳಲ್ಲಿ ಶ್ರೇಷ್ಠರೆಂದು ತಿಳಿದುಕೊಂಡಿರುವೆಯೋ ಆ ರಥಸ್ಥರಾದ ಕೃಷ್ಣರಿಬ್ಬರೂ ಬಾಹುವೀರ್ಯದಲ್ಲಿ ಎಂದೂ ನನಗೆ ಸರಿಸಾಟಿಯಾಗುವವರಲ್ಲ!
09006003a ಉದ್ಯತಾಂ ಪೃಥಿವೀಂ ಸರ್ವಾಂ ಸಸುರಾಸುರಮಾನವಾಂ।
09006003c ಯೋಧಯೇಯಂ ರಣಮುಖೇ ಸಂಕ್ರುದ್ಧಃ ಕಿಮು ಪಾಂಡವಾನ್।।
09006003e ವಿಜೇಷ್ಯೇ ಚ ರಣೇ ಪಾರ್ಥಾನ್ಸೋಮಕಾಂಶ್ಚ ಸಮಾಗತಾನ್।
ಸುರಾಸುರಮಾನವ ಸರ್ವರೊಂದಿಗೆ ಈ ಪೃಥ್ವಿಯೇ ಯುದ್ಧಕ್ಕೆ ನಿಂತರೂ ಸಂಕ್ರುದ್ಧನಾದ ನಾನು ರಣಮುಖದಲ್ಲಿ ಎದುರಿಸಿ ಯುದ್ಧಮಾಡಬಲ್ಲೆ! ಇನ್ನು ಪಾಂಡವರು ಯಾವ ಲೆಖ್ಕಕ್ಕೆ? ರಣದಲ್ಲಿ ಸೇರಿರುವ ಪಾರ್ಥರನ್ನೂ ಸೋಮಕರನ್ನೂ ನಾನು ಗೆಲ್ಲುತ್ತೇನೆ!
09006004a ಅಹಂ ಸೇನಾಪ್ರಣೇತಾ ತೇ ಭವಿಷ್ಯಾಮಿ ನ ಸಂಶಯಃ।
09006004c ತಂ ಚ ವ್ಯೂಹಂ ವಿಧಾಸ್ಯಾಮಿ ನ ತರಿಷ್ಯಂತಿ ಯಂ ಪರೇ।
09006004e ಇತಿ ಸತ್ಯಂ ಬ್ರವೀಮ್ಯೇಷ ದುರ್ಯೋಧನ ನ ಸಂಶಯಃ।।
ನಾನು ನಿನ್ನ ಸೇನಾಪತಿಯಾಗುತ್ತೇನೆ. ಅದರಲ್ಲಿ ಸಂಶಯವಿಲ್ಲ. ಶತ್ರುಗಳಿಗೆ ಭೇದಿಸಲಸಾಧ್ಯ ವ್ಯೂಹವನ್ನೂ ರಚಿಸುತ್ತೇನೆ. ದುರ್ಯೋಧನ! ನಾನುಹೇಳುತ್ತಿರುವುದು ಸತ್ಯವಾದುದು. ಇದರಲ್ಲಿ ಸಂಶಯವಿಲ್ಲ!”
09006005a ಏವಮುಕ್ತಸ್ತತೋ ರಾಜಾ ಮದ್ರಾಧಿಪತಿಮಂಜಸಾ।
09006005c ಅಭ್ಯಷಿಂಚತ ಸೇನಾಯಾ ಮಧ್ಯೇ ಭರತಸತ್ತಮ।।
09006005e ವಿಧಿನಾ ಶಾಸ್ತ್ರದೃಷ್ಟೇನ ಹೃಷ್ಟರೂಪೋ ವಿಶಾಂ ಪತೇ।
ಭರತಸತ್ತಮ! ವಿಶಾಂಪತೇ! ಮದ್ರಾಧಿಪತಿಯು ಹೀಗೆ ಹೇಳಲು ರಾಜನು ಸೇನೆಗಳ ಮಧ್ಯದಲ್ಲಿ ಹೃಷ್ಟರೂಪನಾಗಿ ಶಾಸ್ತ್ರಗಳಲ್ಲಿ ತೋರಿಸಿಕೊಟ್ಟ ವಿಧಿಗಳಿಂದ ಅವನನ್ನು ಅಭಿಷೇಕಿಸಿದನು.
09006006a ಅಭಿಷಿಕ್ತೇ ತತಸ್ತಸ್ಮಿನ್ಸಿಂಹನಾದೋ ಮಹಾನಭೂತ್।।
09006006c ತವ ಸೈನ್ಯೇಷ್ವವಾದ್ಯಂತ ವಾದಿತ್ರಾಣಿ ಚ ಭಾರತ।
ಭಾರತ! ಅವನು ಅಭಿಷಿಕ್ತನಾಗಲು ಅಲ್ಲಿ ಮಹಾ ಸಿಂಹನಾದವು ಕೇಳಿಬಂದಿತು. ನಿನ್ನ ಸೇನೆಗಳಲ್ಲಿ ವಾದ್ಯಗಳು ಮೊಳಗಿದವು.
09006007a ಹೃಷ್ಟಾಶ್ಚಾಸಂಸ್ತದಾ ಯೋಧಾ ಮದ್ರಕಾಶ್ಚ ಮಹಾರಥಾಃ।।
09006007c ತುಷ್ಟುವುಶ್ಚೈವ ರಾಜಾನಂ ಶಲ್ಯಮಾಹವಶೋಭಿನಂ।
ಆಗ ಮದ್ರಕ ಮಹಾರಥ ಯೋಧರು ಹರ್ಷಿತರಾಗಿ ಆಹವಶೋಭೀ ರಾಜಾ ಶಲ್ಯನನ್ನು ಸ್ತುತಿಸಿದರು.
0900008a ಜಯ ರಾಜಂಶ್ಚಿರಂ ಜೀವ ಜಹಿ ಶತ್ರೂನ್ ಸಮಾಗತಾನ್।।
0900008c ತವ ಬಾಹುಬಲಂ ಪ್ರಾಪ್ಯ ಧಾರ್ತರಾಷ್ಟ್ರಾ ಮಹಾಬಲಾಃ।
09006008e ನಿಖಿಲಾಂ ಪೃಥಿವೀಂ ಸರ್ವಾಂ ಪ್ರಶಾಸಂತು ಹತದ್ವಿಷಃ।।
“ರಾಜನ್! ನಿನಗೆ ಜಯವಾಗಲಿ! ಚಿರಂಜೀವಿಯಾಗು! ಸಮಾಗತರಾಗಿರುವ ಶತ್ರುಗಳನ್ನು ಸಂಹರಿಸು! ನಿನ್ನ ಬಾಹುಬಲವನ್ನು ಪಡೆದಿರುವ ಮಹಾಬಲ ಧಾರ್ತರಾಷ್ಟ್ರರು ಶತ್ರುಗಳು ಹತರಾಗಿ ಅಖಿಲ ಪೃಥ್ವಿಯಲ್ಲವನ್ನೂ ಆಳುತ್ತಾರೆ!
09006009a ತ್ವಂ ಹಿ ಶಕ್ತೋ ರಣೇ ಜೇತುಂ ಸಸುರಾಸುರಮಾನವಾನ್।
09006009c ಮರ್ತ್ಯಧರ್ಮಾಣ ಇಹ ತು ಕಿಮು ಸೋಮಕಸೃಂಜಯಾನ್।।
ರಣದಲ್ಲಿ ಸುರಾಸುರಮಾನವರನ್ನು ನೀನು ಗೆಲ್ಲಲು ಶಕ್ತನಾಗಿರುವಾಗ ಮರ್ತ್ಯಧರ್ಮವನ್ನನುಸರಿಸುವ ಸೋಮಕ-ಸೃಂಜಯರು ಯಾವ ಲೆಖ್ಕಕ್ಕೆ?”
09006010a ಏವಂ ಸಂಸ್ತೂಯಮಾನಸ್ತು ಮದ್ರಾಣಾಮಧಿಪೋ ಬಲೀ।
09006010c ಹರ್ಷಂ ಪ್ರಾಪ ತದಾ ವೀರೋ ದುರಾಪಮಕೃತಾತ್ಮಭಿಃ।।
ಹೀಗೆ ಸಂಸ್ತುತಿಸಲ್ಪಡಲು ಬಲಶಾಲೀ ವೀರ ಮದ್ರಾಧಿಪತಿಯು ಅಕೃತಾತ್ಮರಿಗೆ ದುರ್ಲಭವಾದ ಹರ್ಷವನ್ನು ಪಡೆದನು.
09006011 ಶಲ್ಯ ಉವಾಚ 09006011a ಅದ್ಯೈವಾಹಂ ರಣೇ ಸರ್ವಾನ್ಪಾಂಚಾಲಾನ್ಸಹ ಪಾಂಡವೈಃ।
09006011c ನಿಹನಿಷ್ಯಾಮಿ ರಾಜೇಂದ್ರ ಸ್ವರ್ಗಂ ಯಾಸ್ಯಾಮಿ ವಾ ಹತಃ।।
ಶಲ್ಯನು ಹೇಳಿದನು: “ರಾಜೇಂದ್ರ! ಇಂದು ನಾನು ರಣದಲ್ಲಿ ಪಾಂಚಾಲರೊಂದಿಗೆ ಸರ್ವ ಪಾಂಡವರನ್ನೂ ಸಂಹರಿಸುತ್ತೇನೆ. ಅಥವಾ ಹತನಾಗಿ ಸ್ವರ್ಗಕ್ಕೆ ಹೋಗುತ್ತೇನೆ!
09006012a ಅದ್ಯ ಪಶ್ಯಂತು ಮಾಂ ಲೋಕಾ ವಿಚರಂತಮಭೀತವತ್।
09006012c ಅದ್ಯ ಪಾಂಡುಸುತಾಃ ಸರ್ವೇ ವಾಸುದೇವಃ ಸಸಾತ್ಯಕಿಃ।।
09006013a ಪಾಂಚಾಲಾಶ್ಚೇದಯಶ್ಚೈವ ದ್ರೌಪದೇಯಾಶ್ಚ ಸರ್ವಶಃ।
09006013c ಧೃಷ್ಟದ್ಯುಮ್ನಃ ಶಿಖಂಡೀ ಚ ಸರ್ವೇ ಚಾಪಿ ಪ್ರಭದ್ರಕಾಃ।।
ಇಂದು ನಿರ್ಭೀತನಾಗಿ ಸಂಚರಿಸುವ ನನ್ನನ್ನು ಲೋಕಗಳೆಲ್ಲವೂ, ಪಾಂಡುಸುತರೆಲ್ಲರೂ, ಸಾತ್ಯಕಿಯೊಂದಿಗೆ ವಾಸುದೇವ, ಪಾಂಚಾಲರು ಮತ್ತು ದ್ರೌಪದೇಯರೆಲ್ಲರೂ, ಧೃಷ್ಟದ್ಯುಮ್ನ, ಶಿಖಂಡಿ ಮತ್ತು ಸರ್ವ ಪ್ರಭದ್ರಕರೂ ನೋಡಲಿ!
09006014a ವಿಕ್ರಮಂ ಮಮ ಪಶ್ಯಂತು ಧನುಷಶ್ಚ ಮಹದ್ಬಲಂ।
09006014c ಲಾಘವಂ ಚಾಸ್ತ್ರವೀರ್ಯಂ ಚ ಭುಜಯೋಶ್ಚ ಬಲಂ ಯುಧಿ।।
ಯುದ್ಧದಲ್ಲಿ ನನ್ನ ವಿಕ್ರಮ, ಧನುಸ್ಸಿನ ಮಹಾ ಬಲ, ಹಸ್ತಲಾಘವ, ಅಸ್ತ್ರವೀರ್ಯ ಮತ್ತು ಭುಜಗಳ ಬಲವನ್ನು ನೋಡಲಿದ್ದಾರೆ!
09006015a ಅದ್ಯ ಪಶ್ಯಂತು ಮೇ ಪಾರ್ಥಾಃ ಸಿದ್ಧಾಶ್ಚ ಸಹ ಚಾರಣೈಃ।
09006015c ಯಾದೃಶಂ ಮೇ ಬಲಂ ಬಾಹ್ವೋಃ ಸಂಪದಸ್ತ್ರೇಷು ಯಾ ಚ ಮೇ।।
ನನ್ನಲ್ಲಿರುವ ಬಾಹು ಬಲವನ್ನೂ, ಅಸ್ತ್ರಗಳ ಸಂಪತ್ತನ್ನೂ ಇಂದು ಪಾರ್ಥರು, ಚಾರಣ-ಸಿದ್ಧರೊಂದಿಗೆ ನೋಡಲಿ.
09006016a ಅದ್ಯ ಮೇ ವಿಕ್ರಮಂ ದೃಷ್ಟ್ವಾ ಪಾಂಡವಾನಾಂ ಮಹಾರಥಾಃ।
09006016c ಪ್ರತೀಕಾರಪರಾ ಭೂತ್ವಾ ಚೇಷ್ಟಂತಾಂ ವಿವಿಧಾಃ ಕ್ರಿಯಾಃ।।
ಇಂದು ನನ್ನ ವಿಕ್ರಮವನ್ನು ನೋಡಿ ಮಹಾರಥ ಪಾಂಡವರು ಪ್ರತೀಕಾರಪರರಾಗಿ ವಿವಿಧ ಕ್ರಿಯೆಗಳನ್ನು ಮಾಡುವಂತಾಗಲಿ!
09006017a ಅದ್ಯ ಸೈನ್ಯಾನಿ ಪಾಂಡೂನಾಂ ದ್ರಾವಯಿಷ್ಯೇ ಸಮಂತತಃ।
09006017c ದ್ರೋಣಭೀಷ್ಮಾವತಿ ವಿಭೋ ಸೂತಪುತ್ರಂ ಚ ಸಮ್ಯುಗೇ।।
09006017e ವಿಚರಿಷ್ಯೇ ರಣೇ ಯುಧ್ಯನ್ಪ್ರಿಯಾರ್ಥಂ ತವ ಕೌರವ।।
ಇಂದು ನಾನು ಪಾಂಡವರ ಸೇನೆಗಳನ್ನು ಎಲ್ಲಕಡೆ ಓಡಿಸುತ್ತೇನೆ! ವಿಭೋ! ಕೌರವ! ನಿನ್ನ ಪ್ರಿಯಾರ್ಥವಾಗಿ ಯುದ್ಧದಲ್ಲಿ ದ್ರೋಣ-ಭೀಷ್ಮರನ್ನೂ, ಸೂತಪುತ್ರನನ್ನೂ ಮೀರಿಸಿ ನಾನು ಯುದ್ಧಮಾಡುತ್ತಾ ರಣದಲ್ಲಿ ಚರಿಸುತ್ತೇನೆ!””
09006018 ಸಂಜಯ ಉವಾಚ 09006018a ಅಭಿಷಿಕ್ತೇ ತದಾ ಶಲ್ಯೇ ತವ ಸೈನ್ಯೇಷು ಮಾನದ।
09006018c ನ ಕರ್ಣವ್ಯಸನಂ ಕಿಂ ಚಿನ್ಮೇನಿರೇ ತತ್ರ ಭಾರತ।।
ಸಂಜಯನು ಹೇಳಿದನು: “ಮಾನದ! ಭಾರತ! ಶಲ್ಯನು ಅಭಿಷಿಕ್ತನಾಗಲು ನಿನ್ನ ಸೇನೆಗಳು ಕರ್ಣನ ಕುರಿತಾದ ವ್ಯಸನವನ್ನು ಸ್ವಲ್ಪವೂ ಮನಸ್ಸಿಗೆ ತೆಗೆದುಕೊಳ್ಳಲಿಲ್ಲ!
09006019a ಹೃಷ್ಟಾಃ ಸುಮನಸಶ್ಚೈವ ಬಭೂವುಸ್ತತ್ರ ಸೈನಿಕಾಃ।
09006019c ಮೇನಿರೇ ನಿಹತಾನ್ಪಾರ್ಥಾನ್ಮದ್ರರಾಜವಶಂ ಗತಾನ್।।
ಮದ್ರರಾಜನ ಶರಣಕ್ಕೆ ಬಂದ ಸೈನಿಕರು ಹೃಷ್ಟರಾಗಿ ಸುಮನಸ್ಕರಾದರಲ್ಲದೇ ಪಾರ್ಥರು ಹತರಾದರೆಂದೇ ಭಾವಿಸಿದರು.
09006020a ಪ್ರಹರ್ಷಂ ಪ್ರಾಪ್ಯ ಸೇನಾ ತು ತಾವಕೀ ಭರತರ್ಷಭ।
09006020c ತಾಂ ರಾತ್ರಿಂ ಸುಖಿನೀ ಸುಪ್ತಾ ಸ್ವಸ್ಥಚಿತ್ತೇವ ಸಾಭವತ್।।
ಭರತರ್ಷಭ! ಹರ್ಷವನ್ನು ಪಡೆದ ನಿನ್ನ ಸೇನೆಯು ಆ ರಾತ್ರಿಯನ್ನು ಅಲ್ಲಿಯೇ ಸ್ವಸ್ಥಚಿತ್ತದಿಂದ ಸುಖವಾಗಿ ಮಲಗಿ ಕಳೆಯಿತು.
09006021a ಸೈನ್ಯಸ್ಯ ತವ ತಂ ಶಬ್ದಂ ಶ್ರುತ್ವಾ ರಾಜಾ ಯುಧಿಷ್ಠಿರಃ।
09006021c ವಾರ್ಷ್ಣೇಯಮಬ್ರವೀದ್ವಾಕ್ಯಂ ಸರ್ವಕ್ಷತ್ರಸ್ಯ ಶೃಣ್ವತಃ।।
ನಿನ್ನ ಸೇನೆಯ ಆ ಶಬ್ಧವನ್ನು ಕೇಳಿದ ರಾಜಾ ಯುಧಿಷ್ಠಿರನು ಸರ್ವ ಕ್ಷತ್ರಿಯರೂ ಕೇಳುವಂತೆ ವಾರ್ಷ್ಣೇಯನಿಗೆ ಈ ಮಾತನ್ನಾಡಿದನು:
09006022a ಮದ್ರರಾಜಃ ಕೃತಃ ಶಲ್ಯೋ ಧಾರ್ತರಾಷ್ಟ್ರೇಣ ಮಾಧವ।
09006022c ಸೇನಾಪತಿರ್ಮಹೇಷ್ವಾಸಃ ಸರ್ವಸೈನ್ಯೇಷು ಪೂಜಿತಃ।।
“ಮಾಧವ! ಧಾರ್ತರಾಷ್ಟ್ರರು ಸರ್ವಸೇನೆಗಳಿಂದ ಪೂಜಿತನಾಗಿರುವ ಮಹೇಷ್ವಾಸ ಮದ್ರರಾಜ ಶಲ್ಯನನ್ನು ಸೇನಾಪತಿಯನ್ನಾಗಿ ಮಾಡಿಕೊಂಡಿದ್ದಾರೆ.
09006023a ಏತಚ್ಛೃತ್ವಾ ಯಥಾಭೂತಂ ಕುರು ಮಾಧವ ಯತ್ ಕ್ಷಮಂ।
09006023c ಭವಾನ್ನೇತಾ ಚ ಗೋಪ್ತಾ ಚ ವಿಧತ್ಸ್ವ ಯದನಂತರಂ।।
ಮಾಧವ! ಇದನ್ನು ಕೇಳಿ ಏನು ಉಚಿತವೋ ಅದನ್ನು ಮಾಡು. ನೀನು ನಮ್ಮ ನೇತಾರನೂ, ರಕ್ಷಕನೂ ಆಗಿರುವೆ. ಆದುದರಿಂದ ನಂತರ ಏನು ಮಾಡಬೇಕೆನ್ನುವುದನ್ನು ನಿಶ್ಚಯಿಸು!”
09006024a ತಮಬ್ರವೀನ್ಮಹಾರಾಜ ವಾಸುದೇವೋ ಜನಾಧಿಪಂ।
09006024c ಆರ್ತಾಯನಿಮಹಂ ಜಾನೇ ಯಥಾತತ್ತ್ವೇನ ಭಾರತ।।
ಮಹಾರಾಜ! ವಾಸುದೇವನು ಆ ಜನಾಧಿಪನಿಗೆ ಹೇಳಿದನು: “ಭಾರತ! ಋತಾಯನನ ಮಗ ಶಲ್ಯನನ್ನು ಯಥಾತತ್ತ್ವವಾಗಿ ತಿಳಿದುಕೊಂಡಿದ್ದೇನೆ.
09006025a ವೀರ್ಯವಾಂಶ್ಚ ಮಹಾತೇಜಾ ಮಹಾತ್ಮಾ ಚ ವಿಶೇಷತಃ।
09006025c ಕೃತೀ ಚ ಚಿತ್ರಯೋಧೀ ಚ ಸಂಯುಕ್ತೋ ಲಾಘವೇನ ಚ।।
ಅವನು ವೀರ್ಯವಾನನೂ, ಮಹಾತೇಜಸ್ವಿಯೂ, ಮಹಾತ್ಮನೂ, ವಿಶೇಷತಃ ಯುದ್ಧವಿಶಾರದನೂ, ಚಿತ್ರಯೋಧಿಯೂ, ಲಾಘವ ಸಂಯುಕ್ತನೂ ಆಗಿದ್ದಾನೆ.
09006026a ಯಾದೃಗ್ಭೀಷ್ಮಸ್ತಥಾ ದ್ರೋಣೋ ಯಾದೃಕ್ಕರ್ಣಶ್ಚ ಸಂಯುಗೇ।
09006026c ತಾದೃಶಸ್ತದ್ವಿಶಿಷ್ಟೋ ವಾ ಮದ್ರರಾಜೋ ಮತೋ ಮಮ।।
ಮದ್ರರಾಜನು ರಣದಲ್ಲಿ ಭೀಷ್ಮ, ದ್ರೋಣ ಮತ್ತು ಕರ್ಣರು ಹೇಗಿದ್ದರೋ ಹಾಗೆ ಅಥವಾ ಅವರಿಗಿಂತಲೂ ವಿಶಿಷ್ಟನಾಗಿದ್ದಾನೆ ಎಂದು ನನಗನ್ನಿಸುತ್ತದೆ.
09006027a ಯುಧ್ಯಮಾನಸ್ಯ ತಸ್ಯಾಜೌ ಚಿಂತಯನ್ನೇವ ಭಾರತ।
09006027c ಯೋದ್ಧಾರಂ ನಾಧಿಗಚ್ಚಾಮಿ ತುಲ್ಯರೂಪಂ ಜನಾಧಿಪ।।
ಭಾರತ! ಜನಾಧಿಪ! ಎಷ್ಟು ಯೋಚಿಸಿದರೂ ಯುದ್ಧಮಾಡುತ್ತಿರುವ ಅವನ ಸಮಾನರೂಪ ಯೋಧನನ್ನು ನಾನು ಕಾಣುತ್ತಿಲ್ಲ.
09006028a ಶಿಖಂಡ್ಯರ್ಜುನಭೀಮಾನಾಂ ಸಾತ್ವತಸ್ಯ ಚ ಭಾರತ।
09006028c ಧೃಷ್ಟದ್ಯುಮ್ನಸ್ಯ ಚ ತಥಾ ಬಲೇನಾಭ್ಯಧಿಕೋ ರಣೇ।।
ಭಾರತ! ರಣದಲ್ಲಿ ಅವನು ಶಿಖಂಡಿ, ಅರ್ಜುನ, ಭೀಮಸೇನ, ಸಾತ್ವತ ಮತ್ತು ಧೃಷ್ಟದ್ಯುಮ್ನರಿಗಿಂತ ಅಧಿಕ ಬಲಶಾಲಿಯು.
09006029a ಮದ್ರರಾಜೋ ಮಹಾರಾಜ ಸಿಂಹದ್ವಿರದವಿಕ್ರಮಃ।
09006029c ವಿಚರಿಷ್ಯತ್ಯಭೀಃ ಕಾಲೇ ಕಾಲಃ ಕ್ರುದ್ಧಃ ಪ್ರಜಾಸ್ವಿವ।।
ಮಹಾರಾಜ! ಮದ್ರರಾಜನು ಸಿಂಹ-ಆನೆಗಳ ವಿಕ್ರಮವುಳ್ಳವನು. ಪ್ರಳಕಾಲದಲ್ಲಿ ಪ್ರಜೆಗಳ ಮೇಲೆ ಕ್ರುದ್ಧನಾಗಿರುವ ಕಾಲನಂತೆ ಅವನು ರಣದಲ್ಲಿ ಸಂಚರಿಸುತ್ತಾನೆ.
09006030a ತಸ್ಯಾದ್ಯ ನ ಪ್ರಪಶ್ಯಾಮಿ ಪ್ರತಿಯೋದ್ಧಾರಮಾಹವೇ।
09006030c ತ್ವಾಂ ಋತೇ ಪುರುಷವ್ಯಾಘ್ರ ಶಾರ್ದೂಲಸಮವಿಕ್ರಮಂ।।
ಪುರುಷವ್ಯಾಘ್ರ! ಶಾರ್ದೂಲಸಮವಿಕ್ರಮಿಯಾದ ನಿನ್ನನ್ನು ಬಿಟ್ಟರೆ ಇಂದು ಅವನನ್ನು ರಣದಲ್ಲಿ ಎದುರಿಸುವ ಬೇರೆ ಯಾವ ಯೋಧನನ್ನೂ ನಾನು ಕಾಣಲಾರೆ!
09006031a ಸದೇವಲೋಕೇ ಕೃತ್ಸ್ನೇಽಸ್ಮಿನ್ನಾನ್ಯಸ್ತ್ವತ್ತಃ ಪುಮಾನ್ಭವೇತ್।
09006031c ಮದ್ರರಾಜಂ ರಣೇ ಕ್ರುದ್ಧಂ ಯೋ ಹನ್ಯಾತ್ಕುರುನಂದನ।
09006031e ಅಹನ್ಯಹನಿ ಯುಧ್ಯಂತಂ ಕ್ಷೋಭಯಂತಂ ಬಲಂ ತವ।।
ಕುರುನಂದನ! ರಣದಲ್ಲಿ ಕ್ರುದ್ಧನಾಗಿ ಪ್ರತಿದಿನವೂ ಯುದ್ಧಮಾಡುತ್ತಾ ನಿನ್ನ ಸೇನೆಯನ್ನು ಕ್ಷೋಭೆಗೊಳಿಸುತ್ತಿರುವ ಮದ್ರರಾಜನನ್ನು ಸಂಹರಿಸಬಲ್ಲ ನಿನ್ನಂತಹ ಪುರುಷನು ದೇವಲೋಕವೂ ಸೇರಿ ಇಡೀ ಜಗತ್ತಿನಲ್ಲಿಯೇ ಇಲ್ಲ.
09006032a ತಸ್ಮಾಜ್ಜಹಿ ರಣೇ ಶಲ್ಯಂ ಮಘವಾನಿವ ಶಂಬರಂ।
09006032c ಅತಿಪಶ್ಚಾದಸೌ18 ವೀರೋ ಧಾರ್ತರಾಷ್ಟ್ರೇಣ ಸತ್ಕೃತಃ।।
ಆದುದರಿಂದ ಮಘವಾನನು ಶಂಬರನನ್ನು ಹೇಗೋ ಹಾಗೆ ರಣದಲ್ಲಿ ಶಲ್ಯನನ್ನು ಸಂಹರಿಸು. ಅವನು ಅತಿ ವೀರನೂ ಧಾರ್ತರಾಷ್ಟ್ರರಿಂದ ಸತ್ಕೃತನೂ ಆಗಿದ್ದಾನೆ.
09006033a ತವೈವ ಹಿ ಜಯೋ ನೂನಂ ಹತೇ ಮದ್ರೇಶ್ವರೇ ಯುಧಿ।
09006033c ತಸ್ಮಿನ್ ಹತೇ ಹತಂ ಸರ್ವಂ ಧಾರ್ತರಾಷ್ಟ್ರಬಲಂ ಮಹತ್।।
ಯುದ್ಧದಲ್ಲಿ ಮದ್ರೇಶ್ವರನು ಹತನಾದನೆಂದರೆ ನಿನಗೇ ಜಯವೊದಗುತ್ತದೆ. ಅವನು ಹತನಾದರೆ ಧಾರ್ತರಾಷ್ಟ್ರರ ಮಹಾ ಸೇನೆಯಲ್ಲವೂ ಹತಗೊಂಡಂತೆ.
09006034a ಏತಚ್ಛೃತ್ವಾ ಮಹಾರಾಜ ವಚನಂ ಮಮ ಸಾಂಪ್ರತಂ।
09006034c ಪ್ರತ್ಯುದ್ಯಾಹಿ ರಣೇ ಪಾರ್ಥ ಮದ್ರರಾಜಂ ಮಹಾಬಲಂ।।
09006034e ಜಹಿ ಚೈನಂ ಮಹಾಬಾಹೋ ವಾಸವೋ ನಮುಚಿಂ ಯಥಾ।।
ಮಹಾರಾಜ! ಪಾರ್ಥ! ಮಹಾಬಾಹೋ! ನನ್ನ ಈ ಮಾತನ್ನು ಕೇಳಿ ನನ್ನ ಸಲಹೆಯಂತೆ ರಣದಲ್ಲಿ ಮಹಾಬಲ ಮದ್ರರಾಜನನ್ನು ಎದುರಿಸಿ ಯುದ್ಧಮಾಡಿ ವಾಸವನು ನಮುಚಿಯನ್ನು ಹೇಗೋ ಹಾಗೆ ಅವನನ್ನು ಸಂಹರಿಸು!
09006035a ನ ಚೈವಾತ್ರ ದಯಾ ಕಾರ್ಯಾ ಮಾತುಲೋಽಯಂ ಮಮೇತಿ ವೈ।
09006035c ಕ್ಷತ್ರಧರ್ಮಂ ಪುರಸ್ಕೃತ್ಯ ಜಹಿ ಮದ್ರಜನೇಶ್ವರಂ।।
ನನ್ನ ಮಾತುಲನಿವನು ಎಂದು ಅವನ ಮೇಲೆ ದಯವನ್ನು ತೋರಿಸದೆಯೇ ಕ್ಷತ್ರಧರ್ಮವನ್ನು ಪುರಸ್ಕರಿಸಿ ಮದ್ರಜನೇಶ್ವರನನ್ನು ಸಂಹರಿಸು.
09006036a ಭೀಷ್ಮದ್ರೋಣಾರ್ಣವಂ ತೀರ್ತ್ವಾ ಕರ್ಣಪಾತಾಲಸಂಭವಂ।
09006036c ಮಾ ನಿಮಜ್ಜಸ್ವ ಸಗಣಃ ಶಲ್ಯಮಾಸಾದ್ಯ ಗೋಷ್ಪದಂ।।
ಭೀಷ್ಮ-ದ್ರೋಣರೆಂಬ ಮಹಾ ಸಾಗರವನ್ನೂ, ಕರ್ಣನೆಂಬ ಪಾತಾಳದಷ್ಟು ಆಳವಾಗಿದ್ದ ಮಡುವನ್ನೂ ದಾಟಿದ ನೀನು ಶಲ್ಯನೆಂಬ ಗೋವಿನ ಪಾದದಷ್ಟಿರುವ ಗುಂಡಿಯಲ್ಲಿ ಗಣಸಮೇತನಾಗಿ ಮುಳುಗಿಹೋಗಬೇಡ!
09006037a ಯಚ್ಚ ತೇ ತಪಸೋ ವೀರ್ಯಂ ಯಚ್ಚ ಕ್ಷಾತ್ರಂ ಬಲಂ ತವ।
09006037c ತದ್ದರ್ಶಯ ರಣೇ ಸರ್ವಂ ಜಹಿ ಚೈನಂ ಮಹಾರಥಂ।।
ನಿನ್ನಲ್ಲಿರುವ ತಪಸ್ಸು, ವೀರ್ಯ, ಮತ್ತು ಕ್ಷಾತ್ರಬಲಗಳೆಲ್ಲವನ್ನೂ ರಣದಲ್ಲಿ ತೋರಿಸಿ ಆ ಮಹಾರಥನನ್ನು ಸಂಹರಿಸು!”
09006038a ಏತಾವದುಕ್ತ್ವಾ ವಚನಂ ಕೇಶವಃ ಪರವೀರಹಾ।
09006038c ಜಗಾಮ ಶಿಬಿರಂ ಸಾಯಂ ಪೂಜ್ಯಮಾನೋಽಥ ಪಾಂಡವೈಃ।।
ಈ ಮಾತುಗಳನ್ನು ಹೇಳಿ ಪರವೀರಹ ಕೇಶವನು ಪಾಂಡವರಿಂದ ಗೌರವಿಸಲ್ಪಟ್ಟು ಸಾಯಂಕಾಲದ ಹೊತ್ತಿಗೆ ತನ್ನ ಶಿಬಿರಕ್ಕೆ ಹೋದನು.
09006039a ಕೇಶವೇ ತು ತದಾ ಯಾತೇ ಧರ್ಮರಾಜೋ ಯುಧಿಷ್ಠಿರಃ।
09006039c ವಿಸೃಜ್ಯ ಸರ್ವಾನ್ಭ್ರಾತೄಂಶ್ಚ ಪಾಂಚಾಲಾನಥ ಸೋಮಕಾನ್।।
09006039e ಸುಷ್ವಾಪ ರಜನೀಂ ತಾಂ ತು ವಿಶಲ್ಯ ಇವ ಕುಂಜರಃ।।
ಕೇಶವನು ಹೊರಟು ಹೋಗಲು ಧರ್ಮರಾಜ ಯುಧಿಷ್ಠಿರನು ತನ್ನ ಭ್ರಾತೃಗಳನ್ನೂ, ಪಾಂಚಾಲ-ಸೋಮಕರೆಲ್ಲರನ್ನೂ ಕಳುಹಿಸಿ ಅಂಕುಶವಿಲ್ಲದ ಸಲಗದಂತೆ ಸುಖವಾಗಿ ಆ ರಾತ್ರಿ ನಿದ್ರಿಸಿದನು.
09006040a ತೇ ಚ ಸರ್ವೇ ಮಹೇಷ್ವಾಸಾಃ ಪಾಂಚಾಲಾಃ ಪಾಂಡವಾಸ್ತಥಾ।
09006040c ಕರ್ಣಸ್ಯ ನಿಧನೇ ಹೃಷ್ಟಾಃ ಸುಷುಪುಸ್ತಾಂ ನಿಶಾಂ ತದಾ।।
ಕರ್ಣನ ನಿಧನದಿಂದ ಹೃಷ್ಟರಾಗಿದ್ದ ಮಹೇಷ್ವಾಸ ಪಾಂಚಾಲ-ಪಾಂಡವರೆಲ್ಲರೂ ಆ ರಾತ್ರಿ ಸುಖವಾಗಿ ನಿದ್ರಿಸಿದರು.
09006041a ಗತಜ್ವರಂ ಮಹೇಷ್ವಾಸಂ ತೀರ್ಣಪಾರಂ ಮಹಾರಥಂ।
09006041c ಬಭೂವ ಪಾಂಡವೇಯಾನಾಂ ಸೈನ್ಯಂ ಪ್ರಮುದಿತಂ ನಿಶಿ।।
09006041e ಸೂತಪುತ್ರಸ್ಯ ನಿಧನೇ ಜಯಂ ಲಬ್ಧ್ವಾ ಚ ಮಾರಿಷ।।
ಮಾರಿಷ! ಸೂತಪುತ್ರನ ನಿಧನದಿಂದಾಗಿ ಜಯವನ್ನು ಪಡೆದ ಪಾಂಡವ ಸೇನೆಯು, ಕರ್ಣನಂಥ ಮಹಾರಥ ಮಹೇಷ್ವಾಸನನ್ನು ದಾಟಿ ಚಿಂತೆಗಳನ್ನು ಕಳೆದುಕೊಂಡು ಆ ರಾತ್ರಿ ಅತ್ಯಂತ ಮುದಿತವಾಗಿತ್ತು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಶಲ್ಯಸೈನಾಪತ್ಯಾಭಿಷೇಕೇ ಷಷ್ಠೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಶಲ್ಯಸೈನಾಪತ್ಯಾಭಿಷೇಕ ಎನ್ನುವ ಆರನೇ ಅಧ್ಯಾಯವು.