ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 34
ಸಾರ
ಕರ್ಣ-ಭೀಮಸೇನರ ಯುದ್ಧ; ಕರ್ಣನ ಪರಾಜಯ (1-42).
08034001 ಸಂಜಯ ಉವಾಚ।
08034001a ತಾನಭಿದ್ರವತೋ ದೃಷ್ಟ್ವಾ ಪಾಂಡವಾಂಸ್ತಾವಕಂ ಬಲಂ।
08034001c ಕ್ರೋಶತಸ್ತವ ಪುತ್ರಸ್ಯ ನ ಸ್ಮ ರಾಜನ್ನ್ಯವರ್ತತ।।
ಸಂಜಯನು ಹೇಳಿದನು: “ರಾಜನ್! ಪಾಂಡವರು ಓಡಿಸಿಕೊಂಡು ಹೋಗುತ್ತಿದ್ದ ನಿನ್ನವರು ನಿನ್ನ ಮಗನು ಎಷ್ಟೇ ಕೂಗಿಕೊಂಡರೂ ಹಿಂದಿರುಗಲಿಲ್ಲ.
08034002a ತತಃ ಪಕ್ಷಾತ್ಪ್ರಪಕ್ಷಾಚ್ಚ ಪ್ರಪಕ್ಷೈಶ್ಚಾಪಿ ದಕ್ಷಿಣಾತ್।
08034002c ಉದಸ್ತಶಸ್ತ್ರಾಃ ಕುರವೋ ಭೀಮಮಭ್ಯದ್ರವನ್ರಣೇ।।
ಆಗ ಪಕ್ಷ-ಪ್ರಪಕ್ಷಗಳಲ್ಲಿದ್ದ ಕುರುಗಳು ಸಶಸ್ತ್ರರಾಗಿ ರಣದಲ್ಲಿ ಭೀಮನನ್ನು ಆಕ್ರಮಣಿಸಿದರು.
08034003a ಕರ್ಣೋಽಪಿ ದೃಷ್ಟ್ವಾ ದ್ರವತೋ ಧಾರ್ತರಾಷ್ಟ್ರಾನ್ಪರಾಙ್ಮುಖಾನ್।
08034003c ಹಂಸವರ್ಣಾನ್ ಹಯಾಗ್ರ್ಯಾಂಸ್ತಾನ್ ಪ್ರೈಷೀದ್ಯತ್ರ ವೃಕೋದರಂ।।
ಧಾರ್ತರಾಷ್ಟ್ರರು ಪರಾಙ್ಮುಖರಾಗಿ ಓಡುತ್ತಿರುವುದನ್ನು ನೋಡಿ ಕರ್ಣನೂ ಕೂಡ ಹಂಸವರ್ಣದ ಕುದುರೆಗಳಿಗೆ ವೃಕೋದರನಿದ್ದಲ್ಲಿಗೆ ಹೋಗುವಂತೆ ಹೇಳಿದನು.
08034004a ತೇ ಪ್ರೇಷಿತಾ ಮಹಾರಾಜ ಶಲ್ಯೇನಾಹವಶೋಭಿನಾ।
08034004c ಭೀಮಸೇನರಥಂ ಪ್ರಾಪ್ಯ ಸಮಸಜ್ಜಂತ ವಾಜಿನಃ।।
ಮಹಾರಾಜ! ಆಹವಶೋಭೀ ಶಲ್ಯನಿಂದ ಪ್ರಚೋದಿತಗೊಂಡ ಆ ಕುದುರೆಗಳು ಭೀಮಸೇನನ ರಥವನ್ನು ತಲುಪಿ ಅವನ ಕುದುರೆಗಳೊಂದಿಗೆ ಮಿಳಿತವಾದವು.
08034005a ದೃಷ್ಟ್ವಾ ಕರ್ಣಂ ಸಮಾಯಾಂತಂ ಭೀಮಃ ಕ್ರೋಧಸಮನ್ವಿತಃ।
08034005c ಮತಿಂ ದಧ್ರೇ ವಿನಾಶಾಯ ಕರ್ಣಸ್ಯ ಭರತರ್ಷಭ।।
ಭರತರ್ಷಭ! ತನ್ನ ಬಳಿ ಬರುತ್ತಿದ್ದ ಕರ್ಣನನ್ನು ನೋಡಿ ಕ್ರೋಧಸಮನ್ವಿತ ಭೀಮನು ಕರ್ಣನ ವಿನಾಶಗೊಳಿಸಬೇಕೆಂದೇ ನಿರ್ಧರಿಸಿದನು.
08034006a ಸೋಽಬ್ರವೀತ್ಸಾತ್ಯಕಿಂ ವೀರಂ ಧೃಷ್ಟದ್ಯುಮ್ನಂ ಚ ಪಾರ್ಷತಂ।
08034006c ಏನಂ ರಕ್ಷತ ರಾಜಾನಂ ಧರ್ಮಾತ್ಮಾನಂ ಯುಧಿಷ್ಠಿರಂ।
08034006e ಸಂಶಯಾನ್ಮಹತೋ ಮುಕ್ತಂ ಕಥಂ ಚಿತ್ಪ್ರೇಕ್ಷತೋ ಮಮ।।
ಅವನು ವೀರ ಸಾತ್ಯಕಿಗೂ ಪಾರ್ಷತ ಧೃಷ್ಟದ್ಯುಮ್ನನಿಗೂ ಹೇಳಿದನು: “ನನ್ನ ಕಣ್ಣೆದುರಿಗೇ ಮಹಾಸಂಕಟದಿಂದ ಮುಕ್ತನಾದಂತೆ ತೋರುತ್ತಿರುವ ಧರ್ಮಾತ್ಮ ರಾಜಾ ಯುಧಿಷ್ಠಿರನನ್ನು ರಕ್ಷಿಸಿ.
08034007a ಅಗ್ರತೋ ಮೇ ಕೃತೋ ರಾಜಾ ಚಿನ್ನಸರ್ವಪರಿಚ್ಚದಃ।
08034007c ದುರ್ಯೋಧನಸ್ಯ ಪ್ರೀತ್ಯರ್ಥಂ ರಾಧೇಯೇನ ದುರಾತ್ಮನಾ।।
ನನ್ನ ಎದುರಿಗೇ ದುರಾತ್ಮ ಕರ್ಣನು ದುರ್ಯೋಧನನ ಪ್ರೀತ್ಯರ್ಥವಾಗಿ ರಾಜ ಯುಧಿಷ್ಠಿರನನ್ನು ಸಕಲವಿಧಧ ಯುದ್ಧ ಸಾಮಗ್ರಿಗಳಿಂದ ವಿಹೀನನ್ನಾಗಿ ಮಾಡಿದ್ದಾನೆ!
08034008a ಅಂತಮದ್ಯ ಕರಿಷ್ಯಾಮಿ ತಸ್ಯ ದುಃಖಸ್ಯ ಪಾರ್ಷತ।
08034008c ಹಂತಾ ವಾಸ್ಮಿ ರಣೇ ಕರ್ಣಂ ಸ ವಾ ಮಾಂ ನಿಹನಿಷ್ಯತಿ।
08034008e ಸಂಗ್ರಾಮೇಣ ಸುಘೋರೇಣ ಸತ್ಯಮೇತದ್ಬ್ರವೀಮಿ ವಃ।।
ಪಾರ್ಷತ! ಇಂದು ಯುಧಿಷ್ಠಿರನ ದುಃಖವನ್ನು ಅಂತ್ಯಗೊಳಿಸುತ್ತೇನೆ. ಘೋರ ಸಂಗ್ರಾಮ ರಣದಲ್ಲಿ ಕರ್ಣನನ್ನು ನಾನು ಕೊಲ್ಲುತ್ತೇನೆ ಅಥವಾ ಅವನು ನನ್ನನ್ನು ಸಂಹರಿಸುತ್ತಾನೆ. ಸತ್ಯವನ್ನೇ ನಾನು ಹೇಳುತ್ತಿದ್ದೇನೆ!
08034009a ರಾಜಾನಮದ್ಯ ಭವತಾಂ ನ್ಯಾಸಭೂತಂ ದದಾಮಿ ವೈ।
08034009c ಅಸ್ಯ ಸಂರಕ್ಷಣೇ ಸರ್ವೇ ಯತಧ್ವಂ ವಿಗತಜ್ವರಾಃ।।
ಇಂದು ರಾಜನನ್ನು ನಿಮ್ಮಲ್ಲಿ ನ್ಯಾಸಭೂತವಾಗಿ ಇಡುತ್ತಿದ್ದೇನೆ. ನೀವು ವಿಗತಜ್ವರರಾಗಿ ಇವನ ಸಂರಕ್ಷಣೆಗೆ ಸರ್ವ ಪ್ರಯತ್ನವನ್ನೂ ಮಾಡಿರಿ!”
08034010a ಏವಮುಕ್ತ್ವಾ ಮಹಾಬಾಹುಃ ಪ್ರಾಯಾಮಾಧಿರಥಿಂ ಪ್ರತಿ।
08034010c ಸಿಂಹನಾದೇನ ಮಹತಾ ಸರ್ವಾಃ ಸಂನಾದಯನ್ದಿಶಃ।।
ಹೀಗೆ ಹೇಳಿ ಆ ಮಹಾಬಾಹುವು ಮಹಾ ಸಿಂಹನಾದದಿಂದ ದಿಕ್ಕುಗಳೆಲ್ಲವನ್ನೂ ಮೊಳಗಿಸಿ ಆಧಿರಥಿ ಕರ್ಣನ ಬಳಿಸಾರಿದನು.
08034011a ದೃಷ್ಟ್ವಾ ತ್ವರಿತಮಾಯಾಂತಂ ಭೀಮಂ ಯುದ್ಧಾಭಿನಂದಿನಂ।
08034011c ಸೂತಪುತ್ರಮಥೋವಾಚ ಮದ್ರಾಣಾಮೀಶ್ವರೋ ವಿಭುಃ।।
ಯುದ್ಧಾಭಿನಂದಿನಿ ಭೀಮನು ತ್ವರೆಮಾಡಿ ಬರುತ್ತಿರುವುದನ್ನು ನೋಡಿ ವಿಭೂ ಮದ್ರರಾಜನು ಸೂತಪುತ್ರನಿಗೆ ಹೀಗೆಂದನು:
08034012a ಪಶ್ಯ ಕರ್ಣ ಮಹಾಬಾಹುಂ ಕ್ರುದ್ಧಂ ಪಾಂಡವನಂದನಂ।
08034012c ದೀರ್ಘಕಾಲಾರ್ಜಿತಂ ಕ್ರೋಧಂ ಮೋಕ್ತುಕಾಮಂ ತ್ವಯಿ ಧ್ರುವಂ।।
“ಕರ್ಣ! ದೀರ್ಘಕಾಲದಿಂದಲೂ ಕೂಡಿಟ್ಟುಕೊಂಡಿರುವ ಕ್ರೋಧವನ್ನು ನಿನ್ನ ಮೇಲೆ ಸುರಿಸಲು ನಿಶ್ಚಯಿಸಿರುವ ಕ್ರುದ್ಧ ಮಹಾಬಾಹು ಪಾಂಡವನಂದನನ್ನು ನೋಡು!
08034013a ಈದೃಶಂ ನಾಸ್ಯ ರೂಪಂ ಮೇ ದೃಷ್ಟಪೂರ್ವಂ ಕದಾ ಚನ।
08034013c ಅಭಿಮನ್ಯೌ ಹತೇ ಕರ್ಣ ರಾಕ್ಷಸೇ ವಾ ಘಟೋತ್ಕಚೇ।।
ಕರ್ಣ! ಹಿಂದೆಂದೂ - ಅಭಿಮನ್ಯು ಅಥವಾ ರಾಕ್ಷಸ ಘಟೋತ್ಕಚರು ಹತರಾದಾಗಲೂ - ಇವನ ಇಂತಹ ರೂಪವನ್ನು ನಾನು ಕಂಡಿರಲಿಲ್ಲ!
08034014a ತ್ರೈಲೋಕ್ಯಸ್ಯ ಸಮಸ್ತಸ್ಯ ಶಕ್ತಃ ಕ್ರುದ್ಧೋ ನಿವಾರಣೇ।
08034014c ಬಿಭರ್ತಿ ಯಾದೃಶಂ ರೂಪಂ ಕಾಲಾಗ್ನಿಸದೃಶಂ ಶುಭಂ।।
ಕ್ರುದ್ಧನಾಗಿ ಕಾಲಾಗ್ನಿ ಸದೃಶ ಶುಭ ರೂಪವನ್ನು ತಾಳಿರುವ ಇವನು ತ್ರೈಲೋಕ್ಯದ ಸರ್ವವನ್ನೂ ನಿವಾರಿಸಲು ಶಕ್ತನಾಗಿದ್ದಾನೆ.”
08034015a ಇತಿ ಬ್ರುವತಿ ರಾಧೇಯಂ ಮದ್ರಾಣಾಮೀಶ್ವರೇ ನೃಪ।
08034015c ಅಭ್ಯವರ್ತತ ವೈ ಕರ್ಣಂ ಕ್ರೋಧದೀಪ್ತೋ ವೃಕೋದರಃ।।
ನೃಪ! ಮದ್ರರಾಜನು ರಾಧೇಯನಿಗೆ ಹೀಗೆ ಹೇಳುತ್ತಿರಲು ಕ್ರೋಧದೀಪ್ತ ಕರ್ಣನು ವೃಕೋದರನನ್ನು ಎದುರಿಸಿದನು.
08034016a ತಥಾಗತಂ ತು ಸಂಪ್ರೇಕ್ಷ್ಯ ಭೀಮಂ ಯುದ್ಧಾಭಿನಂದಿನಂ।
08034016c ಅಬ್ರವೀದ್ವಚನಂ ಶಲ್ಯಂ ರಾಧೇಯಃ ಪ್ರಹಸನ್ನಿವ।।
ಅಲ್ಲಿದ್ದ ಯುದ್ಧಾಭಿನಂದನ ಭೀಮನನ್ನು ನೋಡಿ ರಾಧೇಯನು ನಗುತ್ತಿರುವನೋ ಎನ್ನುವಂತೆ ಶಲ್ಯನಿಗೆ ಇಂತೆಂದನು:
08034017a ಯದುಕ್ತಂ ವಚನಂ ಮೇಽದ್ಯ ತ್ವಯಾ ಮದ್ರಜನೇಶ್ವರ।
08034017c ಭೀಮಸೇನಂ ಪ್ರತಿ ವಿಭೋ ತತ್ಸತ್ಯಂ ನಾತ್ರ ಸಂಶಯಃ।।
“ವಿಭೋ! ಮದ್ರಜನೇಶ್ವರ! ಇಂದು ಭೀಮಸೇನನ ಕುರಿತು ನೀನು ನನಗೆ ಹೇಳುತ್ತಿರುವುದು ಸತ್ಯ ಎನ್ನುವುದರಲ್ಲಿ ಸಂಶಯವಿಲ್ಲ.
08034018a ಏಷ ಶೂರಶ್ಚ ವೀರಶ್ಚ ಕ್ರೋಧನಶ್ಚ ವೃಕೋದರಃ।
08034018c ನಿರಪೇಕ್ಷಃ ಶರೀರೇ ಚ ಪ್ರಾಣತಶ್ಚ ಬಲಾಧಿಕಃ।।
ವೃಕೋದರನು ಶೂರ, ವೀರ, ಕೋಪಿಷ್ಟ. ಶರೀರ ಮತ್ತು ಪ್ರಾಣಗಳ ಭಯವನ್ನು ತೊರೆದವನು ಮತ್ತು ಬಲದಲ್ಲಿ ಅತ್ಯಧಿಕನು.
08034019a ಅಜ್ಞಾತವಾಸಂ ವಸತಾ ವಿರಾಟನಗರೇ ತದಾ।
08034019c ದ್ರೌಪದ್ಯಾಃ ಪ್ರಿಯಕಾಮೇನ ಕೇವಲಂ ಬಾಹುಸಂಶ್ರಯಾತ್।
08034019e ಗೂಢಭಾವಂ ಸಮಾಶ್ರಿತ್ಯ ಕೀಚಕಃ ಸಗಣೋ ಹತಃ।।
ಅಂದು ವಿರಾಟನಗರದಲ್ಲಿ ಅಜ್ಞಾತವಾಸದಲ್ಲಿರುವಾಗ ದ್ರೌಪದಿಯ ಹಿತವನ್ನು ಬಯಸಿ ಇವನು ಕೇವಲ ಬಾಹುಗಳನ್ನು ಬಳಸಿ ಗೂಢಭಾವವನ್ನು ಬಳಸಿ ಗಣಗಳೊಂದಿಗೆ ಕೀಚಕನನ್ನು ಸಂಹರಿಸಿದ್ದನು.
08034020a ಸೋಽದ್ಯ ಸಂಗ್ರಾಮಶಿರಸಿ ಸಂನದ್ಧಃ ಕ್ರೋಧಮೂರ್ಚ್ಛಿತಃ।
08034020c ಕಿಂಕರೋದ್ಯತದಂಡೇನ ಮೃತ್ಯುನಾಪಿ ವ್ರಜೇದ್ರಣಂ।।
ಅವನು ಇಂದು ಕ್ರೋಧಮೂರ್ಛಿತನಾಗಿ ಸನ್ನದ್ಧನಾಗಿ ಸಂಗ್ರಾಮದ ಶಿರೋಭಾಗದಲ್ಲಿ ಬಂದಿದ್ದಾನೆ. ಆದರೆ ರಣದಲ್ಲಿ ದಂಡವನ್ನು ಎತ್ತಿಹಿಡಿದಿರುವ ಮೃತ್ಯುವಿನೊಂದಿಗೆ ಇವನು ಹೋರಾಡಬಲ್ಲನೇ?
08034021a ಚಿರಕಾಲಾಭಿಲಷಿತೋ ಮಮಾಯಂ ತು ಮನೋರಥಃ।
08034021c ಅರ್ಜುನಂ ಸಮರೇ ಹನ್ಯಾಂ ಮಾಂ ವಾ ಹನ್ಯಾದ್ಧನಂಜಯಃ।
08034021e ಸ ಮೇ ಕದಾ ಚಿದದ್ಯೈವ ಭವೇದ್ಭೀಮಸಮಾಗಮಾತ್।।
ಸಮರದಲ್ಲಿ ಅರ್ನುನನನ್ನು ನಾನು ಅಥವಾ ಧನಂಜಯನು ನನ್ನನ್ನು ಸಂಹರಿಸಬೇಕೆಂದು ಬಹುಕಾಲದಿಂದ ನನ್ನ ಅಭಿಲಾಷೆಯೂ ಮನೋರಥವೂ ಆಗಿತ್ತು. ಬಹುಷಃ ಅದಕ್ಕಾಗಿಯೇ ಭೀಮನೊಡನೆ ನನ್ನ ಸಮಾಗಮವಾಗುತ್ತಿದೆ.
08034022a ನಿಹತೇ ಭೀಮಸೇನೇ ತು ಯದಿ ವಾ ವಿರಥೀಕೃತೇ।
08034022c ಅಭಿಯಾಸ್ಯತಿ ಮಾಂ ಪಾರ್ಥಸ್ತನ್ಮೇ ಸಾಧು ಭವಿಷ್ಯತಿ।
08034022e ಅತ್ರ ಯನ್ಮನ್ಯಸೇ ಪ್ರಾಪ್ತಂ ತಚ್ಛೀಘ್ರಂ ಸಂಪ್ರಧಾರಯ।
ಭೀಮಸೇನನನ್ನು ಸಂಹರಿಸಿದರೆ ಅಥವಾ ವಿರಥನನ್ನಾಗಿ ಮಾಡಿದರೆ ಪಾರ್ಥನು ನನ್ನೊಡನೆ ಯುದ್ಧಮಾಡಲು ಬಂದೇಬರುತ್ತಾನೆ. ಆಗ ಒಳ್ಳೆಯದೇ ಆಗುತ್ತದೆ. ಇದರ ಕುರಿತು ನಿನ್ನ ಅಭಿಪ್ರಾಯವೇನೆಂದು ಬೇಗನೇ ನನಗೆ ಹೇಳು!”
08034023a ಏತಚ್ಛೃತ್ವಾ ತು ವಚನಂ ರಾಧೇಯಸ್ಯ ಮಹಾತ್ಮನಃ।
08034023c ಉವಾಚ ವಚನಂ ಶಲ್ಯಃ ಸೂತಪುತ್ರಂ ತಥಾಗತಂ।।
ಮಹಾತ್ಮ ರಾಧೇಯನ ಆ ಮಾತನ್ನು ಕೇಳಿ ಶಲ್ಯನು ಕಾಲೋಚಿತವಾಗಿ ಸೂತಪುತ್ರನಿಗೆ ಹೀಗೆಂದನು:
08034024a ಅಭಿಯಾಸಿ ಮಹಾಬಾಹೋ ಭೀಮಸೇನಂ ಮಹಾಬಲಂ।
08034024c ನಿರಸ್ಯ ಭೀಮಸೇನಂ ತು ತತಃ ಪ್ರಾಪ್ಸ್ಯಸಿ ಫಲ್ಗುನಂ।।
“ಮಾಹಾಬಾಹೋ! ಮೊದಲು ಮಹಾಬಲ ಭೀಮಸೇನನನ್ನು ಎದುರಿಸು. ಭೀಮಸೇನನನ್ನು ಸೋಲಿಸಿದರೆ ಅರ್ಜುನನು ನಿನಗೆ ದೊರೆಯುತ್ತಾನೆ.
08034025a ಯಸ್ತೇ ಕಾಮೋಽಭಿಲಷಿತಶ್ಚಿರಾತ್ಪ್ರಭೃತಿ ಹೃದ್ಗತಃ।
08034025c ಸ ವೈ ಸಂಪತ್ಸ್ಯತೇ ಕರ್ಣ ಸತ್ಯಮೇತದ್ಬ್ರವೀಮಿ ತೇ।।
ಕರ್ಣ! ಬಹಳಕಾಲದಿಂದ ಹೃದ್ಗತವಾಗಿದ್ದ ನಿನ್ನ ಅಭೀಷ್ಟವು ಪೂರೈಸುತ್ತದೆ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ!”
08034026a ಏವಮುಕ್ತೇ ತತಃ ಕರ್ಣಃ ಶಲ್ಯಂ ಪುನರಭಾಷತ।
08034026c ಹಂತಾಹಮರ್ಜುನಂ ಸಂಖ್ಯೇ ಮಾಂ ವಾ ಹಂತಾ ಧನಂಜಯಃ।
08034026e ಯುದ್ಧೇ ಮನಃ ಸಮಾಧಾಯ ಯಾಹಿ ಯಾಹೀತ್ಯಚೋದಯತ್।।
ಇದನ್ನು ಕೇಳಿ ಕರ್ಣನು ಪುನಃ ಶಲ್ಯನಿಗೆ ಹೇಳಿದನು: “ಯುದ್ಧದಲ್ಲಿ ನಾನು ಅರ್ಜುನನನ್ನು ಸಂಹರಿಸುತ್ತೇನೆ ಅಥವಾ ಧನಂಜಯನು ನನ್ನನ್ನು ಸಂಹರಿಸುತ್ತಾನೆ. ಯುದ್ಧದಲ್ಲಿ ಮನಸ್ಸನ್ನಿಟ್ಟು ರಥವನ್ನು ಮುಂದೊಯ್ಯಿ!”
08034027a ತತಃ ಪ್ರಾಯಾದ್ರಥೇನಾಶು ಶಲ್ಯಸ್ತತ್ರ ವಿಶಾಂ ಪತೇ।
08034027c ಯತ್ರ ಭೀಮೋ ಮಹೇಷ್ವಾಸೋ ವ್ಯದ್ರಾವಯತ ವಾಹಿನೀಂ।।
ವಿಶಾಂಪತೇ! ಆಗ ಶಲ್ಯನು ಮಹೇಷ್ವಾಸ ಭೀಮನು ಎಲ್ಲಿ ಸೇನೆಗಳನ್ನು ಓಡಿಸುತ್ತಿದ್ದನೋ ಅಲ್ಲಿಗೆ ರಥವನ್ನು ಕೊಂಡೊಯ್ದನು.
08034028a ತತಸ್ತೂರ್ಯನಿನಾದಶ್ಚ ಭೇರೀಣಾಂ ಚ ಮಹಾಸ್ವನಃ।
08034028c ಉದತಿಷ್ಠತ ರಾಜೇಂದ್ರ ಕರ್ಣಭೀಮಸಮಾಗಮೇ।।
ರಾಜೇಂದ್ರ! ಆಗ ಕರ್ಣ-ಭೀಮರ ಸಮಾಗಮ ಸಮಯದಲ್ಲಿ ತೂರ್ಯ-ಭೇರಿಗಳ ಮಹಾನಿನಾದವುಂಟಾಯಿತು.
08034029a ಭೀಮಸೇನೋಽಥ ಸಂಕ್ರುದ್ಧಸ್ತವ ಸೈನ್ಯಂ ದುರಾಸದಂ।
08034029c ನಾರಾಚೈರ್ವಿಮಲೈಸ್ತೀಕ್ಷ್ಣೈರ್ದಿಶಃ ಪ್ರಾದ್ರಾವಯದ್ಬಲೀ।।
ಬಲಶಾಲೀ ಭೀಮಸೇನನು ಸಂಕ್ರುದ್ಧನಾಗಿ ದುರಾಸದವಾಗಿದ್ದ ನಿನ್ನ ಸೇನೆಯನ್ನು ವಿಮಲ ತೀಕ್ಷ್ಣ ನಾರಾಚಗಳಿಂದ ಪಲಾಯನಗೊಳಿಸಿದನು.
08034030a ಸ ಸನ್ನಿಪಾತಸ್ತುಮುಲೋ ಭೀಮರೂಪೋ ವಿಶಾಂ ಪತೇ।
08034030c ಆಸೀದ್ರೌದ್ರೋ ಮಹಾರಾಜ ಕರ್ಣಪಾಂಡವಯೋರ್ಮೃಧೇ।
08034030e ತತೋ ಮುಹೂರ್ತಾದ್ರಾಜೇಂದ್ರ ಪಾಂಡವಃ ಕರ್ಣಮಾದ್ರವತ್।।
ವಿಶಾಂಪತೇ! ಮಹಾರಾಜ! ರಾಜೇಂದ್ರ! ಕರ್ಣ-ಪಾಂಡವರ ನಡುವೆ ರೌದ್ರ ಭೀಮರೂಪ ತುಮುಲ ಯುದ್ಧವು ನಡೆಯಿತು. ಆಗ ಸ್ವಲ್ಪಹೊತ್ತಿನಲ್ಲಿಯೇ ಪಾಂಡವನು ಕರ್ಣನ ಮೇಲೆ ಎರಗಿದನು.
08034031a ತಮಾಪತಂತಂ ಸಂಪ್ರೇಕ್ಷ್ಯ ಕರ್ಣೋ ವೈಕರ್ತನೋ ವೃಷಃ।
08034031c ಆಜಘಾನೋರಸಿ ಕ್ರುದ್ಧೋ ನಾರಾಚೇನ ಸ್ತನಾಂತರೇ।
08034031e ಪುನಶ್ಚೈನಮಮೇಯಾತ್ಮಾ ಶರವರ್ಷೈರವಾಕಿರತ್।।
ತನ್ನ ಮೇಲೆ ಆಕ್ರಮಣಿಸುತ್ತಿದ್ದ ಅವನನ್ನು ನೋಡಿ ವೃಷ ವೈಕರ್ತನನು ಕ್ರುದ್ಧನಾಗಿ ಅವನ ಸ್ತನಾಂತರದಲ್ಲಿ ಪ್ರಹರಿಸಿದನು. ಪುನಃ ಆ ಅಮೇಯಾತ್ಮನು ಶರವರ್ಷಗಳಿಂದ ಭೀಮಸೇನನನ್ನು ಮುಚ್ಚಿಬಿಟ್ಟನು.
08034032a ಸ ವಿದ್ಧಃ ಸೂತಪುತ್ರೇಣ ಚಾದಯಾಮಾಸ ಪತ್ರಿಭಿಃ।
08034032c ವಿವ್ಯಾಧ ನಿಶಿತೈಃ ಕರ್ಣ ನವಭಿರ್ನತಪರ್ವಭಿಃ।।
ಹೀಗೆ ಪ್ರಹರಿಸಿದ ಸೂತಪುತ್ರನನ್ನು ಭೀಮನು ಪತ್ರಿಗಳಿಂದ ಮುಸುಕಿದನು. ಪುನಃ ಕರ್ಣನನ್ನು ಎಂಭತ್ತು ನಿಶಿತ ನತಪರ್ವ ಬಾಣಗಳಿಂದ ಹೊಡೆದನು.
08034033a ತಸ್ಯ ಕರ್ಣೋ ಧನುರ್ಮಧ್ಯೇ ದ್ವಿಧಾ ಚಿಚ್ಚೇದ ಪತ್ರಿಣಾ।
08034033c ಅಥ ತಂ ಚಿನ್ನಧನ್ವಾನಮಭ್ಯವಿಧ್ಯತ್ಸ್ತನಾಂತರೇ।
08034033e ನಾರಾಚೇನ ಸುತೀಕ್ಷ್ಣೇನ ಸರ್ವಾವರಣಭೇದಿನಾ।।
ಕರ್ಣನು ಪತ್ರಿಯಿಂದ ಅವನ ಧನುಸ್ಸನ್ನು ನಡುವಿನಲ್ಲಿಯೇ ತುಂಡರಿಸಿದನು. ಕೂಡಲೇ ಸರ್ವಾವರಣಭೇದೀ ತೀಕ್ಷ್ಣ ನಾರಾಚದಿಂದ ಧನುಸ್ಸು ತುಂಡಾಗಿದ್ದ ಭೀಮನ ವಕ್ಷಸ್ಥಳಕ್ಕೆ ಹೊಡೆದನು.
08034034a ಸೋಽನ್ಯತ್ಕಾರ್ಮುಕಮಾದಾಯ ಸೂತಪುತ್ರಂ ವೃಕೋದರಃ।
08034034c ರಾಜನ್ಮರ್ಮಸು ಮರ್ಮಜ್ಞೋ ವಿದ್ಧ್ವಾ ಸುನಿಶಿತೈಃ ಶರೈಃ।
08034034e ನನಾದ ಬಲವನ್ನಾದಂ ಕಂಪಯನ್ನಿವ ರೋದಸೀ।।
ರಾಜನ್! ಅನಂತರ ಮರ್ಮಜ್ಞ ವೃಕೋದರನು ಅನ್ಯ ಧನುಸ್ಸನ್ನು ಎತ್ತಿಕೊಂಡು ನಿಶಿತ ಶರಗಳಿಂದ ಸೂತಪುತ್ರನ ಮರ್ಮಗಳನ್ನು ಪ್ರಹರಿಸಿ ಭೂಮ್ಯಾಕಾಶಗಳನ್ನು ನಡುಗಿಸುವಂತೆ ಬಲವತ್ತಾಗಿ ಗರ್ಜಿಸಿದನು.
08034035a ತಂ ಕರ್ಣಃ ಪಂಚವಿಂಶತ್ಯಾ ನಾರಾಚಾನಾಂ ಸಮಾರ್ದಯತ್।
08034035c ಮದೋತ್ಕಟಂ ವನೇ ದೃಪ್ತಮುಲ್ಕಾಭಿರಿವ ಕುಂಜರಂ।।
ವನದಲ್ಲಿ ಮದೋತ್ಕಟ ಆನೆಯನ್ನು ಪಂಜುಗಳಿಂದ ಆಕ್ರಮಣಿಸುವಂತೆ ಕರ್ಣನು ಭೀಮಸೇನನನ್ನು ಇಪ್ಪತ್ತೈದು ನಾರಾಚಗಳಿಂದ ಪ್ರಹರಿಸಿದನು.
08034036a ತತಃ ಸಾಯಕಭಿನ್ನಾಂಗಃ ಪಾಂಡವಃ ಕ್ರೋಧಮೂರ್ಚ್ಚಿತಃ।
08034036c ಸಂರಂಭಾಮರ್ಷತಾಮ್ರಾಕ್ಷಃ ಸೂತಪುತ್ರವಧೇಚ್ಚಯಾ।।
08034037a ಸ ಕಾರ್ಮುಕೇ ಮಹಾವೇಗಂ ಭಾರಸಾಧನಮುತ್ತಮಂ।
08034037c ಗಿರೀಣಾಮಪಿ ಭೇತ್ತಾರಂ ಸಾಯಕಂ ಸಮಯೋಜಯತ್।।
ಸಾಯಕಗಳಿಂದ ಗಾಯಗೊಂಡ ಪಾಂಡವನು ಕ್ರೋಧಮೂರ್ಛಿತನಾಗಿ, ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು, ಸೂತಪುತ್ರನನ್ನು ವಧಿಸಲು ಬಯಸಿ. ಆ ಮಹಾವೇಗಶಾಲೀ, ಭಾರವನ್ನು ಹೊರಬಲ್ಲ ಉತ್ತಮ ಧನುಸ್ಸಿಗೆ ಗಿರಿಗಳನ್ನು ಕೂಡ ಭೇದಿಸಬಲ್ಲ ಸಾಯಕವನ್ನು ಹೂಡಿದನು.
08034038a ವಿಕೃಷ್ಯ ಬಲವಚ್ಚಾಪಮಾ ಕರ್ಣಾದತಿಮಾರುತಿಃ।
08034038c ತಂ ಮುಮೋಚ ಮಹೇಷ್ವಾಸಃ ಕ್ರುದ್ಧಃ ಕರ್ಣಜಿಘಾಂಸಯಾ।।
ಬಲವನ್ನುಪಯೋಗಿಸಿ ಧನುಸ್ಸನ್ನು ಆಕರ್ಣಾಂತವಾಗಿ ಎಳೆದು ಕ್ರುದ್ಧ ಮಹೇಷ್ವಾಸ ಮಾರುತಿಯು ಕರ್ಣನನ್ನು ವಧಿಸಲು ಬಯಸಿ ಆ ಬಾಣವನ್ನು ಪ್ರಯೋಗಿಸಿದನು.
08034039a ಸ ವಿಸೃಷ್ಟೋ ಬಲವತಾ ಬಾಣೋ ವಜ್ರಾಶನಿಸ್ವನಃ।
08034039c ಅದಾರಯದ್ರಣೇ ಕರ್ಣಂ ವಜ್ರವೇಗ ಇವಾಚಲಂ।।
ರಣದಲ್ಲಿ ಬಲಿಷ್ಟನಿಂದ ಪ್ರಯೋಗಿಸಲ್ಪಟ್ಟ ಆ ಬಾಣವು ಸಿಡಿಲಿನಂತೆ ಶಬ್ಧಮಾಡುತ್ತಾ ವಜ್ರವು ವೇಗವಾಗಿ ಪರ್ವತವನ್ನು ಹೇಗೋ ಹಾಗೆ ಕರ್ಣನನ್ನು ಸೀಳಿತು.
08034040a ಸ ಭೀಮಸೇನಾಭಿಹತೋ ಸೂತಪುತ್ರಃ ಕುರೂದ್ವಹ।
08034040c ನಿಷಸಾದ ರಥೋಪಸ್ಥೇ ವಿಸಂಜ್ಞಃ ಪೃತನಾಪತಿಃ।।
ಕುರೂದ್ವಹ! ಭೀಮಸೇನನಿಂದ ಪ್ರಹೃತನಾದ ಸೂತಪುತ್ರ ಪೃತನಾಪತಿಯು ಮೂರ್ಛೆಹೋಗಿ ರಥದಲ್ಲಿಯೇ ಒರಗಿದನು.
08034041a ತತೋ ಮದ್ರಾಧಿಪೋ ದೃಷ್ಟ್ವಾ ವಿಸಂಜ್ಞಂ ಸೂತನಂದನಂ।
08034041c ಅಪೋವಾಹ ರಥೇನಾಜೌ ಕರ್ಣಮಾಹವಶೋಭಿನಂ।।
ಆಗ ಮದ್ರಾಧಿಪನು ವಿಸಂಜ್ಞ ಸೂತನಂದನನನ್ನು ನೋಡಿ ಆಹವಶೋಭೀ ಕರ್ಣನ ರಥವನ್ನು ಅಲ್ಲಿಂದ ದೂರ ಕೊಂಡೊಯ್ದನು.
08034042a ತತಃ ಪರಾಜಿತೇ ಕರ್ಣೇ ಧಾರ್ತರಾಷ್ಟ್ರೀಂ ಮಹಾಚಮೂಂ।
08034042c ವ್ಯದ್ರಾವಯದ್ಭೀಮಸೇನೋ ಯಥೇಂದ್ರೋ ದಾನವೀಂ ಚಮೂಂ।।
ಕರ್ಣನು ಪರಾಜಿತನಾಗಲು ಭೀಮಸೇನನು ಇಂದ್ರನು ದಾನವೀ ಸೇನೆಯನ್ನು ಹೇಗೋ ಹಾಗೆ ಧಾರ್ತರಾಷ್ಟ್ರರ ಮಹಾಸೇನೆಯನ್ನು ಪಲಾಯನಗೊಳಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕರ್ಣಾಪಯಾನೇ ಚತುಸ್ತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣಾಪಯಾನ ಎನ್ನುವ ಮೂವತ್ನಾಲ್ಕನೇ ಅಧ್ಯಾಯವು.