ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 103
ಸಾರ
ದ್ರೋಣ ಮತ್ತು ಇತರ ಸೇನೆಗಳನ್ನು ಪರಾಜಯಗೊಳಿಸಿ ಭೀಮಸೇನನು ಮುಂದುವರಿದು ಯುದ್ಧಮಾಡುತ್ತಿದ್ದ ಅರ್ಜುನ-ಸಾತ್ಯಕಿಯರನ್ನು ನೋಡಿ ಸಂತೋಷದಿಂದ ಗರ್ಜಿಸಿದುದು; ಅವನ ಗರ್ಜನೆಯನ್ನು ಕೇಳಿ ಕೃಷ್ಣಾರ್ಜುನರೂ ಗರ್ಜಿಸಿದುದು (1-28). ಅವರಗ ರ್ಜನೆಗಳನ್ನು ಕೇಳಿ ಯುಧಿಷ್ಠಿರನು ಹರ್ಷಿತನಾದುದು (29-49).
07103001 ಸಂಜಯ ಉವಾಚ।
07103001a ತಮುತ್ತೀರ್ಣಂ ರಥಾನೀಕಾತ್ತಮಸೋ ಭಾಸ್ಕರಂ ಯಥಾ।
07103001c ದಿಧಾರಯಿಷುರಾಚಾರ್ಯಃ ಶರವರ್ಷೈರವಾಕಿರತ್।।
ಸಂಜಯನು ಹೇಳಿದನು: “ಕತ್ತಲೆಯನ್ನು ಅತಿಕ್ರಮಿಸಿದ ಭಾಸ್ಕರನಂತೆ ಆ ರಥಸೇನೆಯನ್ನು ಭೀಮಸೇನನು ದಾಟಿ ಬರಲು ಆಚಾರ್ಯ ದ್ರೋಣನು ಅವನನ್ನು ತಡೆಯಲು ಅವನ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದನು.
07103002a ಪಿಬನ್ನಿವ ಶರೌಘಾಂಸ್ತಾನ್ದ್ರೋಣಚಾಪವರಾತಿಗಾನ್।
07103002c ಸೋಽಭ್ಯವರ್ತತ ಸೋದರ್ಯಾನ್ಮಾಯಯಾ ಮೋಹಯನ್ಬಲಂ।।
ದ್ರೋಣನ ಬಿಲ್ಲಿನಿಂದ ಹೊರಟುಬಂದ ಆ ಶರ ಸಮೂಹಗಳನ್ನು ಕುಡಿಯುವನೋ ಎಂಬಂತೆ ತನ್ನ ಮಾಯೆಯಿಂದ ಆ ಸೇನೆಯನ್ನು ಭ್ರಾಂತಗೊಳಿಸಿ ಭೀಮನು ತನ್ನ ಸೋದರ ಧಾರ್ತರಾಷ್ಟ್ರರ ಮೇಲೆ ನುಗ್ಗಿದನು.
07103003a ತಂ ಮೃಧೇ ವೇಗಮಾಸ್ಥಾಯ ಪರಂ ಪರಮಧನ್ವಿನಃ।
07103003c ಚೋದಿತಾಸ್ತವ ಪುತ್ರೈಶ್ಚ ಸರ್ವತಃ ಪರ್ಯವಾರಯನ್।।
ಆಗ ರಣದಲ್ಲಿ ನಿನ್ನ ಮಕ್ಕಳಿಂದ ಪ್ರಚೋದಿತರಾದ ಪರಮ ಧನ್ವಿಗಳು ಅತ್ಯಂತ ವೇಗದಿಂದ ಭೀಮನನ್ನು ಎಲ್ಲ ಕಡೆಗಳಿಂದ ಸುತ್ತುವರೆದರು.
07103004a ಸ ತಥಾ ಸಂವೃತೋ ಭೀಮಃ ಪ್ರಹಸನ್ನಿವ ಭಾರತ।
07103004c ಉದಯಚ್ಚದ್ಗದಾಂ ತೇಭ್ಯೋ ಘೋರಾಂ ತಾಂ ಸಿಂಹವನ್ನದನ್।
07103004e ಅವಾಸೃಜಚ್ಚ ವೇಗೇನ ತೇಷು ತಾನ್ಪ್ರಮಥದ್ಬಲೀ।।
ಭಾರತ! ಹಾಗೆ ಮುತ್ತಿಗೆ ಹಾಕಲ್ಪಟ್ಟ ಬಲಶಾಲೀ ಭೀಮನು ನಗುತ್ತಾ ಸಿಂಹನಾದಗೈದು ಘೋರ ಗದೆಯನ್ನು ತೆಗೆದುಕೊಂಡು ವೇಗದಿಂದ ಎಸೆದು ಅವರನ್ನು ನುಚ್ಚುನೂರು ಮಾಡಿದನು.
07103005a ಸೇಂದ್ರಾಶನಿರಿವೇಂದ್ರೇಣ ಪ್ರವಿದ್ಧಾ ಸಂಹತಾತ್ಮನಾ।
07103005c ಘೋಷೇಣ ಮಹತಾ ರಾಜನ್ಪೂರಯಿತ್ವೇವ ಮೇದಿನೀಂ।
07103005e ಜ್ವಲಂತೀ ತೇಜಸಾ ಭೀಮಾ ತ್ರಾಸಯಾಮಾಸ ತೇ ಸುತಾನ್।।
ರಾಜನ್! ಇಂದ್ರನಿಂದಲೇ ಪ್ರಹರಿಸಲ್ಪಟ್ಟ ಇಂದ್ರನ ವಜ್ರಾಯುಧದಂತೆ ಎಸೆಯಲ್ಪಟ್ಟ ಆ ಅತಿ ಸಾಮರ್ಥ್ಯದ ಗದೆಯು ತನ್ನ ಘೋಷದಿಂದ ಇಡೀ ಮೇದಿನಿಯನ್ನೇ ತುಂಬಿಸಿಬಿಟ್ಟಿತು. ತೇಜಸ್ಸಿನಿಂದ ಪ್ರಜ್ವಲಿಸುತ್ತಿದ್ದ ಆ ಭಯಂಕರ ಗದೆಯು ನಿನ್ನ ಸುತರನ್ನು ಭೀತರನ್ನಾಗಿಸಿತು.
07103006a ತಾಂ ಪತಂತೀಂ ಮಹಾವೇಗಾಂ ದೃಷ್ಟ್ವಾ ತೇಜೋಭಿಸಂವೃತಾಂ।
07103006c ಪ್ರಾದ್ರವಂಸ್ತಾವಕಾಃ ಸರ್ವೇ ನದಂತೋ ಭೈರವಾನ್ರವಾನ್।।
ತೇಜಸ್ಸಿನಿಂದ ಸುತ್ತುವರೆಯಲ್ಪಟ್ಟು ಮಹಾವೇಗದಿಂದ ಬೀಳುತ್ತಿದ್ದ ಆ ಗದೆಯನ್ನು ನೋಡಿ ನಿನ್ನವರೆಲ್ಲರೂ ಭೈರವ ಕೂಗನ್ನು ಕೂಗುತ್ತಾ ಓಡತೊಡಗಿದರು.
07103007a ತಂ ಚ ಶಬ್ದಮಸಂಸಹ್ಯಂ ತಸ್ಯಾಃ ಸಂಲಕ್ಷ್ಯ ಮಾರಿಷ।
07103007c ಪ್ರಾಪತನ್ಮನುಜಾಸ್ತತ್ರ ರಥೇಭ್ಯೋ ರಥಿನಸ್ತದಾ।।
ಸಹಿಸಲಾಧ್ಯವಾದ ಅದರ ಶಬ್ಧದಿಂದಾಗಿ ಮನುಷ್ಯರು ನಿಂತಲ್ಲಿಯೇ ಬಿದ್ದುಬಿಟ್ಟರು ಮತ್ತು ರಥಿಗಳು ರಥಗಳ ಮೇಲಿಂದ ಬಿದ್ದರು.
07103008a ಸ ತಾನ್ವಿದ್ರಾವ್ಯ ಕೌಂತೇಯಃ ಸಂಖ್ಯೇಽಮಿತ್ರಾನ್ದುರಾಸದಃ।
07103008c ಸುಪರ್ಣ ಇವ ವೇಗೇನ ಪಕ್ಷಿರಾಡತ್ಯಗಾಚ್ಚಮೂಂ।।
ಯುದ್ಧದಲ್ಲಿ ದುರಾಸದ ಕೌಂತೇಯನು ತನ್ನ ಶತ್ರುಗಳನ್ನು ಸದೆಬಡಿಯುತ್ತಾ ಗರುಡನಂತೆ ವೇಗದಿಂದ ಆ ಸೇನೆಯನ್ನು ಅತಿಕ್ರಮಿಸಿದನು.
07103009a ತಥಾ ತಂ ವಿಪ್ರಕುರ್ವಾಣಂ ರಥಯೂಥಪಯೂಥಪಂ।
07103009c ಭಾರದ್ವಾಜೋ ಮಹಾರಾಜ ಭೀಮಸೇನಂ ಸಮಭ್ಯಯಾತ್।।
ಮಹಾರಾಜ! ರಥಯೋಧಿಗಳ ನಾಯಕರ ನಾಯಕನಾದ ಭೀಮಸೇನನು ಹಾಗೆ ಸೇನೆಯನ್ನು ನಾಶಪಡಿಸುತ್ತಿರಲು ಅವನನ್ನು ಆಕ್ರಮಣಿಸಲು ಭಾರದ್ವಾಜ ದ್ರೋಣನು ಮುನ್ನುಗ್ಗಿದನು.
07103010a ದ್ರೋಣಸ್ತು ಸಮರೇ ಭೀಮಂ ವಾರಯಿತ್ವಾ ಶರೋರ್ಮಿಭಿಃ।
07103010c ಅಕರೋತ್ಸಹಸಾ ನಾದಂ ಪಾಂಡೂನಾಂ ಭಯಮಾದಧತ್।।
ದ್ರೋಣನಾದರೋ ಸಮರದಲ್ಲಿ ಭೀಮನನ್ನು ತೀಕ್ಷ್ಣ ಶರಗಳಿಂದ ತಡೆಯುತ್ತಾ ಒಮ್ಮಿಂದೊಮ್ಮೆಲೇ ಜೋರಾಗಿ ಗರ್ಜಿಸಿ ಪಾಂಡವರಿಗೆ ಭಯವನ್ನು ತಂದನು.
07103011a ತದ್ಯುದ್ಧಮಾಸೀತ್ಸುಮಹದ್ಘೋರಂ ದೇವಾಸುರೋಪಮಂ।
07103011c ದ್ರೋಣಸ್ಯ ಚ ಮಹಾರಾಜ ಭೀಮಸ್ಯ ಚ ಮಹಾತ್ಮನಃ।।
ಮಹಾರಾಜ! ಆಗ ಮಹಾತ್ಮ ದ್ರೋಣ ಮತ್ತು ಭೀಮರ ನಡುವೆ ದೇವಾಸುರರ ಯುದ್ಧದಂತೆ ಘೋರ ಯುದ್ಧವು ನಡೆಯಿತು.
07103012a ಯದಾ ತು ವಿಶಿಖೈಸ್ತೀಕ್ಷ್ಣೈರ್ದ್ರೋಣಚಾಪವಿನಿಃಸೃತೈಃ।
07103012c ವಧ್ಯಂತೇ ಸಮರೇ ವೀರಾಃ ಶತಶೋಽಥ ಸಹಸ್ರಶಃ।।
ದ್ರೋಣನ ಚಾಪದಿಂದ ಹೊರಟ ತೀಕ್ಷ್ಣ ವಿಶಿಖಗಳು ಸಮರದಲ್ಲಿ ನೂರಾರು ಸಹಸ್ರಾರು ವೀರರನ್ನು ವಧಿಸಿದವು.
07103013a ತತೋ ರಥಾದವಪ್ಲುತ್ಯ ವೇಗಮಾಸ್ಥಾಯ ಪಾಂಡವಃ।
07103013c ನಿಮೀಲ್ಯ ನಯನೇ ರಾಜನ್ಪದಾತಿರ್ದ್ರೋಣಮಭ್ಯಯಾತ್।।
ಆಗ ಪಾಂಡವನು ರಥದಿಂದ ಹಾರಿ ವೇಗವನ್ನು ಬಳಸಿ ಕಣ್ಣುಗಳನ್ನು ಮುಚ್ಚಿಕೊಂಡು ಓಡಿಕೊಂಡು ದ್ರೋಣನ ಕಡೆ ಮುನ್ನುಗ್ಗಿದ್ದನು.
07103014a ಯಥಾ ಹಿ ಗೋವೃಷೋ ವರ್ಷಂ ಪ್ರತಿಗೃಹ್ಣಾತಿ ಲೀಲಯಾ।
07103014c ತಥಾ ಭೀಮೋ ನರವ್ಯಾಘ್ರಃ ಶರವರ್ಷಂ ಸಮಗ್ರಹೀತ್।।
ಹೋರಿಯೊಂದು ಹೇಗೆ ಬಹುಲೀಲೆಯಿಂದ ಜೋರಾಗಿ ಸುರಿಯುವ ಮಳೆಯನ್ನು ತಡೆದುಕೊಳ್ಳುತ್ತದೆಯೋ ಹಾಗೆ ನರವ್ಯಾಘ್ರ ಭೀಮನು ಆ ಶರಗಳ ಮಳೆಯನ್ನು ತಡೆದುಕೊಂಡನು.
07103015a ಸ ವಧ್ಯಮಾನಃ ಸಮರೇ ರಥಂ ದ್ರೋಣಸ್ಯ ಮಾರಿಷ।
07103015c ಈಷಾಯಾಂ ಪಾಣಿನಾ ಗೃಹ್ಯ ಪ್ರಚಿಕ್ಷೇಪ ಮಹಾಬಲಃ।।
ಮಾರಿಷ! ವಧಿಸುತ್ತಿರುವ ಆ ಮಹಾಬಲನು ಸಮರದಲ್ಲಿ ದ್ರೋಣನ ರಥದ ಮೂಕನ್ನು ಕೈಯಿಂದ ಹಿಡಿದು ಹಿಂದಕ್ಕೆ ನೂಕಿ ಎಸೆದನು.
07103016a ದ್ರೋಣಸ್ತು ಸತ್ವರೋ ರಾಜನ್ ಕ್ಷಿಪ್ತೋ ಭೀಮೇನ ಸಂಯುಗೇ।
07103016c ರಥಮನ್ಯಂ ಸಮಾಸ್ಥಾಯ ವ್ಯೂಹದ್ವಾರಮುಪಾಯಯೌ।।
07103017a ತಸ್ಮಿನ್ ಕ್ಷಣೇ ತಸ್ಯ ಯಂತಾ ತೂರ್ಣಮಶ್ವಾನಚೋದಯತ್।
07103017c ಭೀಮಸೇನಸ್ಯ ಕೌರವ್ಯ ತದದ್ಭುತಮಿವಾಭವತ್।।
ರಾಜನ್! ಸಂಯುಗದಲ್ಲಿ ಭೀಮನಿಂದ ಎಸೆಯಲ್ಪಟ್ಟ ದ್ರೋಣನಾದರೋ ತ್ವರೆಮಾಡಿ ಇನ್ನೊಂದು ರಥದಲ್ಲಿ ಕುಳಿತು ವ್ಯೂಹದ್ವಾರದಲ್ಲಿ ಮತ್ತೆ ಕಾಣಿಸಿಕೊಂಡನು. ಅವನ ಸಾರಥಿಯು ಕುದುರೆಗಳನ್ನು ಬೇಗನೆ ಓಡಿಸಿದನು. ಕೌರವ್ಯ! ಭೀಮಸೇನನ ಆ ಕೃತ್ಯವು ಅದ್ಭುತವಾಗಿತ್ತು.
07103018a ತತಃ ಸ್ವರಥಮಾಸ್ಥಾಯ ಭೀಮಸೇನೋ ಮಹಾಬಲಃ।
07103018c ಅಭ್ಯವರ್ತತ ವೇಗೇನ ತವ ಪುತ್ರಸ್ಯ ವಾಹಿನೀಂ।।
ಆಗ ಮಹಾಬಲ ಭೀಮಸೇನನು ತನ್ನ ರಥವನ್ನೇರಿ ವೇಗದಿಂದ ನಿನ್ನ ಮಗನ ಸೇನೆಯ ಮೇಲೆ ಎರಗಿದನು.
07103019a ಸ ಮೃದ್ನನ್ ಕ್ಷತ್ರಿಯಾನಾಜೌ ವಾತೋ ವೃಕ್ಷಾನಿವೋದ್ಧತಃ।
07103019c ಅಗಚ್ಚದ್ದಾರಯನ್ಸೇನಾನ್ಸಿಂಧುವೇಗೋ ನಗಾನಿವ।।
ಭಿರುಗಾಳಿಯು ವೃಕ್ಷಗಳನ್ನು ಧ್ವಂಸಗೊಳಿಸುವಂತೆ ಅವನು ಕ್ಷತ್ರಿಯರನ್ನು ಧ್ವಂಸಗೊಳಿಸಿದನು. ಮತ್ತು ವೇಗವಾಗಿ ಹರಿದು ಬರುತ್ತಿರುವ ನದಿಯನ್ನು ಪರ್ವತವು ಹೇಗೋ ಹಾಗೆ ಅವರ ಆ ಸೇನೆಗಳನ್ನು ತಡೆಗಟ್ಟಿದನು.
07103020a ಭೋಜಾನೀಕಂ ಸಮಾಸಾದ್ಯ ಹಾರ್ದಿಕ್ಯೇನಾಭಿರಕ್ಷಿತಂ।
07103020c ಪ್ರಮಥ್ಯ ಬಹುಧಾ ರಾಜನ್ಭೀಮಸೇನಃ ಸಮಭ್ಯಯಾತ್।।
ರಾಜನ್! ಅನಂತರ ಹಾರ್ದಿಕ್ಯ ಕೃತವರ್ಮನಿಂದ ರಕ್ಷಿತವಾದ ಭೋಜಸೇನೆಯನ್ನು ಚೆನ್ನಾಗಿ ಸದೆಬಡಿದು ದಾಟಿ ಮುಂದುವರೆದನು.
07103021a ಸಂತ್ರಾಸಯನ್ನನೀಕಾನಿ ತಲಶಬ್ದೇನ ಮಾರಿಷ।
07103021c ಅಜಯತ್ ಸರ್ವಸೈನ್ಯಾನಿ ಶಾರ್ದೂಲ ಇವ ಗೋವೃಷಾನ್।।
ಮಾರಿಷ! ಚಪ್ಪಾಳೆ ಶಬ್ಧದಿಂದ ಸೇನೆಗಳನ್ನು ಬೆದರಿಸುತ್ತಾ ಭೀಮನು ಹುಲಿಯು ಹಸು ಹೋರಿಗಳನ್ನು ಹೇಗೋ ಹಾಗೆ ಎಲ್ಲ ಸೇನೆಗಳನ್ನೂ ಜಯಿಸಿದನು.
07103022a ಭೋಜಾನೀಕಮತಿಕ್ರಮ್ಯ ಕಾಂಬೋಜಾನಾಂ ಚ ವಾಹಿನೀಂ।
07103022c ತಥಾ ಮ್ಲೇಚ್ಚಗಣಾಂಶ್ಚಾನ್ಯಾನ್ಬಹೂನ್ಯುದ್ಧವಿಶಾರದಾನ್।।
07103023a ಸಾತ್ಯಕಿಂ ಚಾಪಿ ಸಂಪ್ರೇಕ್ಷ್ಯ ಯುಧ್ಯಮಾನಂ ನರರ್ಷಭಂ।
07103023c ರಥೇನ ಯತ್ತಃ ಕೌಂತೇಯೋ ವೇಗೇನ ಪ್ರಯಯೌ ತದಾ।।
07103024a ಭೀಮಸೇನೋ ಮಹಾರಾಜ ದ್ರಷ್ಟುಕಾಮೋ ಧನಂಜಯಂ।
ಮಹಾರಾಜ! ಭೋಜರ ಮತ್ತು ಕಾಂಬೋಜರ ಸೇನೆಗಳನ್ನು ಅತಿಕ್ರಮಿಸಿ ಹಾಗೆಯೇ ಅನೇಕ ಯುದ್ಧವಿಶಾರದ ಮ್ಲೇಚ್ಛಗಣಗಳನ್ನೂ ಅನ್ಯರನ್ನೂ ಸೋಲಿಸಿ, ಯುದ್ಧಮಾಡುತ್ತಿರುವ ನರರ್ಷಭ ಸಾತ್ಯಕಿಯನ್ನು ಕೂಡ ನೋಡಿ, ಧನಂಜಯನನ್ನು ಕಾಣಲು ಬಯಸಿ ಕೌಂತೇಯ ಭೀಮಸೇನನು ವೇಗವಾಗಿ ರಥದಲ್ಲಿ ಪ್ರಯಾಣಿಸಿದನು.
07103024c ಅತೀತ್ಯ ಸಮರೇ ಯೋಧಾಂಸ್ತಾವಕಾನ್ಪಾಂಡುನಂದನಃ।।
07103025a ಸೋಽಪಶ್ಯದರ್ಜುನಂ ತತ್ರ ಯುಧ್ಯಮಾನಂ ನರರ್ಷಭಂ।
07103025c ಸೈಂಧವಸ್ಯ ವಧಾರ್ಥಂ ಹಿ ಪರಾಕ್ರಾಂತಂ ಪರಾಕ್ರಮೀ।।
ನಿನ್ನ ಕಡೆಯ ಯೋಧರನ್ನು ಸಮರದಲ್ಲಿ ಅತಿಕ್ರಮಿಸಿ ಪಾಂಡುನಂದನ ಪರಾಕ್ರಮೀ ಭೀಮನು ಸೈಂಧವನ ವಧೆಗೋಸ್ಕರವಾಗಿ ಯುದ್ಧಮಾಡುತ್ತಿದ್ದ ನರರ್ಷಭ ಪರಾಕ್ರಾಂತ ಅರ್ಜುನನನ್ನು ಅಲ್ಲಿ ನೋಡಿದನು.
07103026a ಅರ್ಜುನಂ ತತ್ರ ದೃಷ್ಟ್ವಾಥ ಚುಕ್ರೋಶ ಮಹತೋ ರವಾನ್।
07103026c ತಂ ತು ತಸ್ಯ ಮಹಾನಾದಂ ಪಾರ್ಥಃ ಶುಶ್ರಾವ ನರ್ದತಃ।।
ಅಲ್ಲಿ ಅರ್ಜುನನನ್ನು ನೋಡಿ ಮಹಾ ಕೂಗನ್ನು ಕೂಗಿದನು. ಕೂಗುತ್ತಿರುವ ಅವನ ಮಹಾನಾದವು ಪಾರ್ಥ ಅರ್ಜುನನಿಗೆ ಕೇಳಿತು.
07103027a ತತಃ ಪಾರ್ಥೋ ಮಹಾನಾದಂ ಮುಂಚನ್ವೈ ಮಾಧವಶ್ಚ ಹ।
07103027c ಅಭ್ಯಯಾತಾಂ ಮಹಾರಾಜ ನರ್ದಂತೌ ಗೋವೃಷಾವಿವ।।
ಮಹಾರಾಜ! ಆ ಮಹಾನಾದವನ್ನು ಕೇಳಿ ಪಾರ್ಥ ಮತ್ತು ಮಾಧವರಿಬ್ಬರೂ ಗೂಳಿಗಳಂತೆ ಜೋರಾಗಿ ಕೂಗಿದರು.
07103028a ವಾಸುದೇವಾರ್ಜುನೌ ಶ್ರುತ್ವಾ ನಿನಾದಂ ತಸ್ಯ ಶುಷ್ಮಿಣಃ।
07103028c ಪುನಃ ಪುನಃ ಪ್ರಣದತಾಂ ದಿದೃಕ್ಷಂತೌ ವೃಕೋದರಂ।।
ಭೀಮಸೇನನ ಗರ್ಜನೆಯನ್ನು ಕೇಳಿ ವಾಸುದೇವ-ಅರ್ಜುನರು ವೃಕೋದರನನ್ನು ಕಾಣಲೋಸುಗ ಪುನಃ ಪುನಃ ಗರ್ಜಿಸಿದರು.
07103029a ಭೀಮಸೇನರವಂ ಶ್ರುತ್ವಾ ಫಲ್ಗುನಸ್ಯ ಚ ಧನ್ವಿನಃ।
07103029c ಅಪ್ರೀಯತ ಮಹಾರಾಜ ಧರ್ಮಪುತ್ರೋ ಯುಧಿಷ್ಠಿರಃ।।
ಮಹಾರಾಜ! ಭೀಮಸೇನನ ಮತ್ತು ಧನ್ವಿ ಅರ್ಜುನನ ಕೂಗುಗಳನ್ನು ಕೇಳಿ ಧರ್ಮಪುತ್ರ ಯುಧಿಷ್ಠಿರನು ಅತ್ಯಂತ ಪ್ರೀತನಾದನು.
07103030a ವಿಶೋಕಶ್ಚಾಭವದ್ರಾಜಾ ಶ್ರುತ್ವಾ ತಂ ನಿನದಂ ಮಹತ್।
07103030c ಧನಂಜಯಸ್ಯ ಚ ರಣೇ ಜಯಮಾಶಾಸ್ತವಾನ್ವಿಭುಃ।।
ಭೀಮನ ಮತ್ತು ಧನಂಜಯನ ಮಹಾನಿನಾದವನ್ನು ಕೇಳಿ ರಾಜಾ ವಿಭುವು ಶೋಕವನ್ನು ಕಳೆದುಕೊಂಡು ಜಯದ ಆಸೆಯನ್ನು ಹೊತ್ತನು.
07103031a ತಥಾ ತು ನರ್ದಮಾನೇ ವೈ ಭೀಮಸೇನೇ ರಣೋತ್ಕಟೇ।
07103031c ಸ್ಮಿತಂ ಕೃತ್ವಾ ಮಹಾಬಾಹುರ್ಧರ್ಮಪುತ್ರೋ ಯುಧಿಷ್ಠಿರಃ।।
ರಣೋತ್ಕಟ ಭೀಮಸೇನನು ಹಾಗೆ ಗರ್ಜಿಸುತ್ತಿರಲು ಮಹಾಬಾಹು ಧರ್ಮಪುತ್ರ ಯುಧಿಷ್ಠಿರನು ನಸುನಕ್ಕನು.
07103032a ಹೃದ್ಗತಂ ಮನಸಾ ಪ್ರಾಹ ಧ್ಯಾತ್ವಾ ಧರ್ಮಭೃತಾಂ ವರಃ।
07103032c ದತ್ತಾ ಭೀಮ ತ್ವಯಾ ಸಂವಿತ್ಕೃತಂ ಗುರುವಚಸ್ತಥಾ।।
ಆ ಧರ್ಮಭೃತರಲ್ಲಿ ಶ್ರೇಷ್ಠನು ಹೃದಯದಿಂದ ಹೊರಟ ಮಾತನ್ನು ಮನಸ್ಸಿನಲ್ಲಿಯೇ ಅಂದುಕೊಂಡನು: “ಭೀಮ! ನೀನು ನನಗೆ ಈ ಸಂದೇಶವನ್ನಿತ್ತು ಹಿರಿಯನ ವಚನದಂತೆಯೇ ಮಾಡಿದ್ದೀಯೆ!
07103033a ನ ಹಿ ತೇಷಾಂ ಜಯೋ ಯುದ್ಧೇ ಯೇಷಾಂ ದ್ವೇಷ್ಟಾಸಿ ಪಾಂಡವ।
07103033c ದಿಷ್ಟ್ಯಾ ಜೀವತಿ ಸಂಗ್ರಾಮೇ ಸವ್ಯಸಾಚೀ ಧನಂಜಯಃ।।
ಪಾಂಡವ! ನಿನ್ನನ್ನು ದ್ವೇಷಿಸುವವರಿಗೆ ಯುದ್ಧದಲ್ಲಿ ಜಯವೆಂಬುದೇ ಇಲ್ಲ. ಅದೃಷ್ಟವಶಾತ್ ಸವ್ಯಸಾಚೀ ಧನಂಜಯನು ಸಂಗ್ರಾಮದಲ್ಲಿ ಜೀವಂತವಿದ್ದಾನೆ.
07103034a ದಿಷ್ಟ್ಯಾ ಚ ಕುಶಲೀ ವೀರಃ ಸಾತ್ಯಕಿಃ ಸತ್ಯವಿಕ್ರಮಃ।
07103034c ದಿಷ್ಟ್ಯಾ ಶೃಣೋಮಿ ಗರ್ಜಂತೌ ವಾಸುದೇವಧನಂಜಯೌ।।
ಒಳ್ಳೆಯದಾಯಿತು! ವೀರ ಸತ್ಯವಿಕ್ರಮ ಸಾತ್ಯಕಿಯು ಕುಶಲನಾಗಿದ್ದಾನೆ. ಅದೃಷ್ಟವಶಾತ್ ವಾಸುದೇವ-ಧನಂಜಯರ ಗರ್ಜನೆಯನ್ನು ಕೇಳುತ್ತಿದ್ದೇನೆ!
07103035a ಯೇನ ಶಕ್ರಂ ರಣೇ ಜಿತ್ವಾ ತರ್ಪಿತೋ ಹವ್ಯವಾಹನಃ।
07103035c ಸ ಹಂತಾ ದ್ವಿಷತಾಂ ಸಂಖ್ಯೇ ದಿಷ್ಟ್ಯಾ ಜೀವತಿ ಫಲ್ಗುನಃ।।
ಒಳ್ಳೆಯದಾಯಿತು! ರಣದಲ್ಲಿ ಶಕ್ರನನ್ನು ಗೆದ್ದು ಹವ್ಯವಾಹನನನ್ನು ತೃಪ್ತಿಪಡಿಸಿದ ಫಲ್ಗುನನು ರಣದಲ್ಲಿ ದ್ವೇಷಿಗಳನ್ನು ಸಂಹರಿಸಿ ಜೀವಂತನಿದ್ದಾನೆ!
07103036a ಯಸ್ಯ ಬಾಹುಬಲಂ ಸರ್ವೇ ವಯಮಾಶ್ರಿತ್ಯ ಜೀವಿತಾಃ।
07103036c ಸ ಹಂತಾ ರಿಪುಸೈನ್ಯಾನಾಂ ದಿಷ್ಟ್ಯಾ ಜೀವತಿ ಫಲ್ಗುನಃ।।
ಒಳ್ಳೆಯದಾಯಿತು! ಯಾರ ಬಾಹುಬಲವನ್ನು ಆಶ್ರಯಿಸಿ ನಾವು ಜೀವಿತರಾಗಿದ್ದೆವೋ ಆ ಫಲ್ಗುನನು ಶತ್ರುಸೇನೆಗಳನ್ನು ಸಂಹರಿಸಿ ಜೀವಂತವಿದ್ದಾನೆ!
07103037a ನಿವಾತಕವಚಾ ಯೇನ ದೇವೈರಪಿ ಸುದುರ್ಜಯಾಃ।
07103037c ನಿರ್ಜಿತಾ ರಥಿನೈಕೇನ ದಿಷ್ಟ್ಯಾ ಪಾರ್ಥಃ ಸ ಜೀವತಿ।।
ಒಳ್ಳೆಯದಾಯಿತು! ದೇವತೆಗಳಿಗೂ ದುರ್ಜಯರಾದ ನಿವಾತಕವಚರನ್ನು ಯಾವ ಒಬ್ಬನೇ ರಥಿಯು ಗೆದ್ದನೋ ಆ ಪಾರ್ಥನು ಜೀವಿಸಿದ್ದಾನೆ.
07103038a ಕೌರವಾನ್ಸಹಿತಾನ್ಸರ್ವಾನ್ಗೋಗ್ರಹಾರ್ಥೇ ಸಮಾಗತಾನ್।
07103038c ಯೋಽಜಯನ್ಮತ್ಸ್ಯನಗರೇ ದಿಷ್ಟ್ಯಾ ಪಾರ್ಥಃ ಸ ಜೀವತಿ।।
ಒಳ್ಳೆಯದಾಯಿತು! ಮತ್ಸ್ಯನಗರದಲ್ಲಿ ಗೋವುಗಳನ್ನು ಹಿಡಿಯಲು ಒಟ್ಟಿಗೇ ಸೇರಿದ್ದ ಕೌರವರೆಲ್ಲರನ್ನೂ ಜಯಿಸಿದ ಪಾರ್ಥನು ಜೀವಿಸಿದ್ದಾನೆ.
07103039a ಕಾಲಕೇಯಸಹಸ್ರಾಣಿ ಚತುರ್ದಶ ಮಹಾರಣೇ।
07103039c ಯೋಽವಧೀದ್ಭುಜವೀರ್ಯೇಣ ದಿಷ್ಟ್ಯಾ ಪಾರ್ಥಃ ಸ ಜೀವತಿ।।
ಒಳ್ಳೆಯದಾಯಿತು! ಮಹಾರಣದಲ್ಲಿ ಹದಿನಾಲ್ಕು ಸಾವಿರ ಕಾಲಕೇಯರನ್ನು ಭುಜವೀರ್ಯದಿಂದ ವಧಿಸಿದ ಪಾರ್ಥನು ಜೀವಿಸಿದ್ದಾನೆ.
07103040a ಗಂಧರ್ವರಾಜಂ ಬಲಿನಂ ದುರ್ಯೋಧನಕೃತೇನ ವೈ।
07103040c ಜಿತವಾನ್ಯೋಽಸ್ತ್ರವೀರ್ಯೇಣ ದಿಷ್ಟ್ಯಾ ಪಾರ್ಥಃ ಸ ಜೀವತಿ।।
ಒಳ್ಳೆಯದಾಯಿತು! ದುರ್ಯೋಧನನಿಗಾಗಿ ಬಲಶಾಲೀ ಗಂಧರ್ವರಾಜನನ್ನು ಅಸ್ತ್ರವೀರ್ಯದಿಂದ ಜಯಿಸಿದ ಪಾರ್ಥನು ಜೀವಿಸಿದ್ದಾನೆ.
07103041a ಕಿರೀಟಮಾಲೀ ಬಲವಾನ್ ಶ್ವೇತಾಶ್ವಃ ಕೃಷ್ಣಸಾರಥಿಃ।
07103041c ಮಮ ಪ್ರಿಯಶ್ಚ ಸತತಂ ದಿಷ್ಟ್ಯಾ ಜೀವತಿ ಫಲ್ಗುನಃ।।
ಒಳ್ಳೆಯದಾಯಿತು! ನನಗೆ ಸತತವೂ ಪ್ರಿಯನಾಗಿರುವ ಕಿರೀಟಮಾಲೀ, ಬಲವಾನ್, ಶ್ವೇತಾಶ್ವ, ಕೃಷ್ಣಸಾರಥಿ ಫಲ್ಗುನನು ಜೀವಿಸಿದ್ದಾನೆ.
07103042a ಪುತ್ರಶೋಕಾಭಿಸಂತಪ್ತಶ್ಚಿಕೀರ್ಷುಃ ಕರ್ಮ ದುಷ್ಕರಂ।
07103042c ಜಯದ್ರಥವಧಾನ್ವೇಷೀ ಪ್ರತಿಜ್ಞಾಂ ಕೃತವಾನ್ ಹಿ ಯಃ।
07103042e ಕಚ್ಚಿತ್ಸ ಸೈಂಧವಂ ಸಂಖ್ಯೇ ಹನಿಷ್ಯತಿ ಧನಂಜಯಃ।।
ಪುತ್ರಶೋಕದಿಂದ ಸಂತಪ್ತನಾಗಿ ಜಯದ್ರಥನ ವದೆಯಂಥಹ ದುಷ್ಕರ ಕರ್ಮವನ್ನು ಮಾಡಲು ಬಯಸಿ ಪ್ರತಿಜ್ಞೆಯನ್ನು ಕೈಗೊಂಡಿರುವ ಧನಂಜಯನು ರಣದಲ್ಲಿ ಸೈಂಧವನನ್ನು ಕೊಲ್ಲುತ್ತಾನೆಯೇ?
07103043a ಕಚ್ಚಿತ್ತೀರ್ಣಪ್ರತಿಜ್ಞಂ ಹಿ ವಾಸುದೇವೇನ ರಕ್ಷಿತಂ।
07103043c ಅನಸ್ತಮಿತ ಆದಿತ್ಯೇ ಸಮೇಷ್ಯಾಮ್ಯಹಮರ್ಜುನಂ।।
ವಾಸುದೇವನಿಂದ ರಕ್ಷಿತನಾಗಿ, ಆದಿತ್ಯನು ಅಸ್ತನಾಗುವುದರೊಳಗೇ ಪ್ರತಿಜ್ಞೆಯನ್ನು ಪೂರೈಸಿದ ಅರ್ಜುನನನ್ನು ನಾನು ಭೇಟಿಯಾಗಬಲ್ಲೆನೇ?
07103044a ಕಚ್ಚಿತ್ಸೈಂಧವಕೋ ರಾಜಾ ದುರ್ಯೋಧನಹಿತೇ ರತಃ।
07103044c ನಂದಯಿಷ್ಯತ್ಯಮಿತ್ರಾಣಿ ಫಲ್ಗುನೇನ ನಿಪಾತಿತಃ।।
ದುರ್ಯೋಧನನ ಹಿತದಲ್ಲಿಯೇ ನಿರತನಾಗಿರುವ ರಾಜಾ ಸೈಂಧವನು ಫಲ್ಗುನನಿಂದ ಹತನಾಗಿ ಬಿದ್ದು ಶತ್ರುಗಳಿಗೆ49 ಆನಂದವನ್ನುಂಟು ಮಾಡುತ್ತಾನೆಯೇ?
07103045a ಕಚ್ಚಿದ್ದುರ್ಯೋಧನೋ ರಾಜಾ ಫಲ್ಗುನೇನ ನಿಪಾತಿತಂ।
07103045c ದೃಷ್ಟ್ವಾ ಸೈಂಧವಕಂ ಸಂಖ್ಯೇ ಶಮಮಸ್ಮಾಸು ಧಾಸ್ಯತಿ।।
ರಣದಲ್ಲಿ ಫಲ್ಗುನನು ಉರುಳಿಸಿದ ಸೈಂಧವಕನನ್ನು ನೋಡಿಯಾದರೂ ರಾಜಾ ದುರ್ಯೋಧನನು ನಮ್ಮೊಡನೆ ಸಂಧಾನವನ್ನು ಮಾಡಿಕೊಳ್ಳುವನೇ?
07103046a ದೃಷ್ಟ್ವಾ ವಿನಿಹತಾನ್ಭ್ರಾತೄನ್ಭೀಮಸೇನೇನ ಸಂಯುಗೇ।
07103046c ಕಚ್ಚಿದ್ದುರ್ಯೋಧನೋ ಮಂದಃ ಶಮಮಸ್ಮಾಸು ಧಾಸ್ಯತಿ।।
ರಣದಲ್ಲಿ ಭೀಮಸೇನನು ಸಂಹರಿಸಿದ ಸಹೋದರರನ್ನು ನೋಡಿಯಾದರೂ ಮಂದಬುದ್ಧಿ ದುರ್ಯೋಧನನು ನಮ್ಮೊಡನೆ ಸಂಧಾನವನ್ನು ಮಾಡಿಕೊಳ್ಳುವನೇ?
07103047a ದೃಷ್ಟ್ವಾ ಚಾನ್ಯಾನ್ಬಹೂನ್ಯೋಧಾನ್ಪಾತಿತಾನ್ಧರಣೀತಲೇ।
07103047c ಕಚ್ಚಿದ್ದುರ್ಯೋಧನೋ ಮಂದಃ ಪಶ್ಚಾತ್ತಾಪಂ ಕರಿಷ್ಯತಿ।।
ಇನ್ನೂ ಅನೇಕ ಯೋಧರು ರಣಭೂಮಿಯಲ್ಲಿ ಹತರಾಗಿ ಬಿದ್ದಿರುವುದನ್ನು ನೋಡಿಯಾದರೂ ಮಂದಬುದ್ಧಿ ದುರ್ಯೋಧನನು ಪಶ್ಚಾತ್ತಾಪ ಪಡುತ್ತಾನೆಯೇ?
07103048a ಕಚ್ಚಿದ್ಭೀಷ್ಮೇಣ ನೋ ವೈರಮೇಕೇನೈವ ಪ್ರಶಾಮ್ಯತಿ।
07103048c ಶೇಷಸ್ಯ ರಕ್ಷಣಾರ್ಥಂ ಚ ಸಂಧಾಸ್ಯತಿ ಸುಯೋಧನಃ।।
ಭೀಷ್ಮನೊಬ್ಬನ ಪತನದೊಂದಿಗೇ ನಮ್ಮ ಈ ವೈರವು ಕೊನೆಗೊಳ್ಳುತ್ತದೆಯೇ? ಮತ್ತು ಉಳಿದವರ ರಕ್ಷಣೆಗಾಗಿಯಾದರೂ ಸುಯೋಧನನು ಸಂಧಿಮಾಡಿಕೊಳ್ಳುತ್ತಾನೆಯೇ?”
07103049a ಏವಂ ಬಹುವಿಧಂ ತಸ್ಯ ಚಿಂತಯಾನಸ್ಯ ಪಾರ್ಥಿವ।
07103049c ಕೃಪಯಾಭಿಪರೀತಸ್ಯ ಘೋರಂ ಯುದ್ಧಮವರ್ತತ।।
ಹೀಗೆ ಬಹುವಿಧವಾಗಿ ಕೃಪೆಯಿಂದ ತುಂಬಿ ತುಳುಕುತ್ತಿದ್ದ ರಾಜ ಯುಧಿಷ್ಠಿರನು ಯೋಚಿಸುತ್ತಿರಲು, ಇನ್ನೊಂದುಕಡೆ ಘೋರ ಯುದ್ಧವು ನಡೆಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭಿಮಸೇನಪ್ರವೇಶೇ ಯುಧಿಷ್ಠಿರಹರ್ಷೇ ತ್ರ್ಯಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೀಮಸೇನಪ್ರವೇಶೇ ಯುಧಿಷ್ಠಿರಹರ್ಷ ಎನ್ನುವ ನೂರಾಮೂರನೇ ಅಧ್ಯಾಯವು.