ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಪ್ರತಿಜ್ಞಾ ಪರ್ವ
ಅಧ್ಯಾಯ 56
ಸಾರ
ಪಾಂಡವ ಯೋಧರು ಚಿಂತೆಯಲ್ಲಿಯೇ ರಾತ್ರಿಯನ್ನು ಕಳೆದುದು (1-16). ಕೃಷ್ಣನು ಆಯುಧಗಳೊಂದಿಗೆ ತನ್ನ ರಥವನ್ನು ಸಿದ್ಧಪಡಿಸಿ ಇಟ್ಟಿರಬೇಕೆಂದು ಸಾರಥಿ ದಾರುಕನಿಗೆ ಹೇಳಿದುದು (17-41).
07056001 ಸಂಜಯ ಉವಾಚ।
07056001a ತತೋಽರ್ಜುನಸ್ಯ ಭವನಂ ಪ್ರವಿಶ್ಯಾಪ್ರತಿಮಂ ವಿಭುಃ।
07056001c ಸ್ಪೃಷ್ಟ್ವಾಂಭಃ ಪುಂಡರೀಕಾಕ್ಷಃ ಸ್ಥಂಡಿಲೇ ಶುಭಲಕ್ಷಣೇ।
07056001e ಸಂತಸ್ತಾರ ಶುಭಾಂ ಶಯ್ಯಾಂ ದರ್ಭೈರ್ವೈಡೂರ್ಯಸನ್ನಿಭೈಃ।।
ಸಂಜಯನು ಹೇಳಿದನು: “ಅನಂತರ ವಿಭು ಪುಂಡರೀಕಾಕ್ಷನು ಅರ್ಜುನನ ಅಪ್ರತಿಮ ಭವನವನ್ನು ಪ್ರವೇಶಿಸಿ ಆಚಮನ ಮಾಡಿ ಶುಭಲಕ್ಷಣ ವೇದಿಯ ಮೇಲೆ ವೈಡೂರ್ಯಸನ್ನಿಭ ಶುಭ ದರ್ಭೆಗಳನ್ನು ಹಾಸಿದನು.
07056002a ತತೋ ಮಾಲ್ಯೇನ ವಿಧಿವಲ್ಲಾಜೈರ್ಗಂಧೈಃ ಸುಮಂಗಲೈಃ।
07056002c ಅಲಂಚಕಾರ ತಾಂ ಶಯ್ಯಾಂ ಪರಿವಾರ್ಯಾಯುಧೋತ್ತಮೈಃ।।
ಅನಂತರ ಮಾಲೆಗಳಿಂದ, ಸುಮಂಗಲ ಅರಳು ಮತ್ತು ಗಂಧಗಳಿಂದ ಆ ದರ್ಭೆಯ ಹಾಸಿಗೆಯನ್ನು ವಿಧಿವತ್ತಾಗಿ ಅಲಂಕರಿಸಿ, ಸುತ್ತಲೂ ಉತ್ತಮ ಆಯುಧಗಳನ್ನಿಟ್ಟನು.
07056003a ತತಃ ಸ್ಪೃಷ್ಟೋದಕಂ ಪಾರ್ಥಂ ವಿನೀತಾಃ ಪರಿಚಾರಕಾಃ।
07056003c ದರ್ಶಯಾಂ ನೈತ್ಯಕಂ ಚಕ್ರುರ್ನೈಶಂ ತ್ರೈಯಂಬಕಂ ಬಲಿಂ।।
ಅನಂತರ ಆಚಮನ ಮಾಡಿದ ಪಾರ್ಥನಿಗೆ ವಿನೀತರಾದ ಪರಿಚಾರಕರು ಅದರ ಬಳಿಯೇ ರಾತ್ರಿ ತ್ರ್ಯಂಬಕನಿಗೆ ಬಲಿಯನ್ನು ಕೊಡುವುದರ ಕುರಿತು ಮಾಡಿ ತೋರಿಸಿಕೊಟ್ಟರು.
07056004a ತತಃ ಪ್ರೀತಮನಾಃ ಪಾರ್ಥೋ ಗಂಧೈರ್ಮಾಲ್ಯೈಶ್ಚ ಮಾಧವಂ।
07056004c ಅಲಂಕೃತ್ಯೋಪಹಾರಂ ತಂ ನೈಶಮಸ್ಮೈ ನ್ಯವೇದಯತ್।।
ಆಗ ಪ್ರೀತಮನಸ್ಕ ಪಾರ್ಥನು ಗಂಧಮಾಲೆಗಳಿಂದ ಮಾಧವನನ್ನು ಅಲಂಕರಿಸಿ ರಾತ್ರಿಯ ಉಪಹಾರವನ್ನು ಅವನಿಗೆ ನಿವೇದಿಸಿದನು.
07056005a ಸ್ಮಯಮಾನಸ್ತು ಗೋವಿಂದಃ ಫಲ್ಗುನಂ ಪ್ರತ್ಯಭಾಷತ।
07056005c ಸುಪ್ಯತಾಂ ಪಾರ್ಥ ಭದ್ರಂ ತೇ ಕಲ್ಯಾಣಾಯ ವ್ರಜಾಮ್ಯಹಂ।।
ನಸುನಗುತ್ತಾ ಗೋವಿಂದನು ಫಲ್ಗುನನಿಗೆ ಉತ್ತರಿಸಿದನು: “ಪಾರ್ಥ! ಮಲಗಿಕೋ! ನಿನಗೆ ಮಂಗಳವಾಗಲಿ. ನಿನ್ನ ಕಲ್ಯಾಣಕ್ಕೆ ನಾನೂ ತೆರಳುತ್ತೇನೆ.”
07056006a ಸ್ಥಾಪಯಿತ್ವಾ ತತೋ ದ್ವಾಃಸ್ಥಾನ್ಗೋಪ್ತುಂ ಚಾತ್ತಾಯುಧಾನ್ನರಾನ್।
07056006c ದಾರುಕಾನುಗತಃ ಶ್ರೀಮಾನ್ವಿವೇಶ ಶಿಬಿರಂ ಸ್ವಕಂ।
07056006e ಶಿಶ್ಯೇ ಚ ಶಯನೇ ಶುಭ್ರೇ ಬಹುಕೃತ್ಯಂ ವಿಚಿಂತಯನ್।।
ಆಗ ಶ್ರೀಮಾನನು ದ್ವಾರದಲ್ಲಿ ಆಯುಧಪಾಣಿ ಅಂಗರಕ್ಷಕರನ್ನು ನಿಲ್ಲಿಸಿ, ದಾರುಕನೊಂದಿಗೆ ತನ್ನ ಶಿಬಿರವನ್ನು ಪ್ರವೇಶಿಸಿದನು. ಬಹಳಷ್ಟು ಚಿಂತಿಸುತ್ತಾ ಅವನು ಶುಭ್ರ ಹಾಸಿಗೆಯ ಮೇಲೆ ಪವಡಿಸಿದನು.
07056007a ನ ಪಾಂಡವಾನಾಂ ಶಿಬಿರೇ ಕಶ್ಚಿತ್ಸುಷ್ವಾಪ ತಾಂ ನಿಶಾಂ।
07056007c ಪ್ರಜಾಗರಃ ಸರ್ವಜನಮಾವಿವೇಶ ವಿಶಾಂ ಪತೇ।।
ಆ ರಾತ್ರಿ ಪಾಂಡವರ ಶಿಬಿರದಲ್ಲಿ ಯಾರೂ ನಿದ್ರಿಸಲಿಲ್ಲ. ವಿಶಾಂಪತೇ! ಎಲ್ಲರನ್ನೂ ಜಾಗರಣೆಯೇ ಆವರಿಸಿಬಿಟ್ಟಿತ್ತು.
07056008a ಪುತ್ರಶೋಕಾಭಿಭೂತೇನ ಪ್ರತಿಜ್ಞಾತೋ ಮಹಾತ್ಮನಾ।
07056008c ಸಹಸಾ ಸಿಂಧುರಾಜಸ್ಯ ವಧೋ ಗಾಂಡೀವಧನ್ವನಾ।।
07056009a ತತ್ಕಥಂ ನು ಮಹಾಬಾಹುರ್ವಾಸವಿಃ ಪರವೀರಹಾ।
07056009c ಪ್ರತಿಜ್ಞಾಂ ಸಫಲಾಂ ಕುರ್ಯಾದಿತಿ ತೇ ಸಮಚಿಂತಯನ್।।
“ಪುತ್ರಶೋಕದಿಂದ ಆವೇಶಗೊಂಡು ಮಹಾತ್ಮ ಗಾಂಡೀವಧನ್ವಿಯು ದುಡುಕಿ ಸಿಂಧುರಾಜನ ವಧೆಯ ಪ್ರತಿಜ್ಞೆಯನ್ನು ಮಾಡಿಬಿಟ್ಟನು! ಆದರೆ ಮಹಾಬಾಹು, ವಾಸವಿ ಪರವೀರಹನು ತನ್ನ ಪ್ರತಿಜ್ಞೆಯನ್ನು ಹೇಗೆ ಸಫಲಗೊಳಿಸಬಲ್ಲನು?” ಎಂದು ಅವರು ತುಂಬಾ ಚಿಂತಿಸಿದರು.
07056010a ಕಷ್ಟಂ ಹೀದಂ ವ್ಯವಸಿತಂ ಪಾಂಡವೇನ ಮಹಾತ್ಮನಾ।
07056010c ಪುತ್ರಶೋಕಾಭಿತಪ್ತೇನ ಪ್ರತಿಜ್ಞಾ ಮಹತೀ ಕೃತಾ।।
“ಮಹಾತ್ಮ ಪಾಂಡವನು ಪುತ್ರಶೋಕದಿಂದ ತಪ್ತನಾಗಿ ಮಹಾ ಪ್ರತಿಜ್ಞೆಯನ್ನು ಮಾಡಿ ಅತಿದೊಡ್ಡ ಕಷ್ಟದ ಕೆಲಸವನ್ನೇ ಕೈಗೊಂಡಿದ್ದಾನೆ.
07056011a ಭ್ರಾತರಶ್ಚಾಪಿ ವಿಕ್ರಾಂತಾ ಬಹುಲಾನಿ ಬಲಾನಿ ಚ।
07056011c ಧೃತರಾಷ್ಟ್ರಸ್ಯ ಪುತ್ರೇಣ ಸರ್ವಂ ತಸ್ಮೈ ನಿವೇದಿತಂ।।
ಸೈಂಧವನ ಸಹೋದರರೂ ವಿಕ್ರಾಂತರು. ಮತ್ತು ಧೃತರಾಷ್ಟ್ರನ ಮಗನು ಬಹಳ ಸೇನೆ ಸರ್ವವನ್ನೂ ಅವನ ರಕ್ಷಣೆಗಾಗಿ ನಿಯೋಜಿಸಿದ್ದಾನೆ.
07056012a ಸ ಹತ್ವಾ ಸೈಂಧವಂ ಸಂಖ್ಯೇ ಪುನರೇತು ಧನಂಜಯಃ।
07056012c ಜಿತ್ವಾ ರಿಪುಗಣಾಂಶ್ಚೈವ ಪಾರಯತ್ವರ್ಜುನೋ ವ್ರತಂ।।
ಯುದ್ಧದಲ್ಲಿ ಸೈಂಧವನನ್ನು ಸಂಹರಿಸಿ ಧನಂಜಯನು ಹಿಂದಿರುಗುವಂತಾಗಲಿ. ಶತ್ರುಗಣಗಳನ್ನು ಗೆದ್ದು ಅರ್ಜುನನು ತನ್ನ ಪ್ರತಿಜ್ಞೆಯನ್ನು ಪೂರೈಸಲಿ.
07056013a ಅಹತ್ವಾ ಸಿಂಧುರಾಜಂ ಹಿ ಧೂಮಕೇತುಂ ಪ್ರವೇಕ್ಷ್ಯತಿ।
07056013c ನ ಹ್ಯೇತದನೃತಂ ಕರ್ತುಮರ್ಹಃ ಪಾರ್ಥೋ ಧನಂಜಯಃ।।
ಸಿಂಧುರಾಜನನ್ನು ಸಂಹರಿಸದೇ ಇದ್ದರೆ ಅವನು ಅಗ್ನಿಯನ್ನು ಪ್ರವೇಶಿಸುತ್ತಾನೆ. ಏಕೆಂದರೆ ಪಾರ್ಥ ಧನಂಜಯನು ಯಾವುದೇ ಕಾರಣದಿಂದ ತನ್ನ ಮಾತನ್ನು ಸುಳ್ಳಾಗಿಸುವುದಿಲ್ಲ.
07056014a ಧರ್ಮಪುತ್ರಃ ಕಥಂ ರಾಜಾ ಭವಿಷ್ಯತಿ ಮೃತೇಽರ್ಜುನೇ।
07056014c ತಸ್ಮಿನ್ ಹಿ ವಿಜಯಃ ಕೃತ್ಸ್ನಃ ಪಾಂಡವೇನ ಸಮಾಹಿತಃ।।
ಅರ್ಜುನನು ಮೃತನಾಗಲು ಧರ್ಮಪುತ್ರನು ಹೇಗೆ ರಾಜನಾಗುತ್ತಾನೆ? ಏಕೆಂದರೆ ಅವನು ವಿಜಯವನ್ನು ಸಂಪೂರ್ಣವಾಗಿ ಪಾಂಡವ ಅರ್ಜುನನಿಗೆ ಹೊರಿಸಿಬಿಟ್ಟಿದ್ದಾನೆ.
07056015a ಯದಿ ನಃ ಸುಕೃತಂ ಕಿಂ ಚಿದ್ಯದಿ ದತ್ತಂ ಹುತಂ ಯದಿ।
07056015c ಫಲೇನ ತಸ್ಯ ಸರ್ವಸ್ಯ ಸವ್ಯಸಾಚೀ ಜಯತ್ವರೀನ್।।
ಒಂದುವೇಳೆ ನಾವು ಏನಾದರೂ ಒಳ್ಳೆಯದನ್ನು ಮಾಡಿದ್ದರೆ, ದಾನಮಾಡಿದ್ದರೆ ಮತ್ತು ಆಹುತಿಗಳನ್ನಿತ್ತಿದ್ದರೆ ಅವುಗಳೆಲ್ಲವುಗಳ ಫಲದಿಂದ ಸವ್ಯಸಾಚಿಯು ಅರಿಗಳನ್ನು ಜಯಿಸುವಂಥವನಾಗಲಿ!”
07056016a ಏವಂ ಕಥಯತಾಂ ತೇಷಾಂ ಜಯಮಾಶಂಸತಾಂ ಪ್ರಭೋ।
07056016c ಕೃಚ್ಚ್ರೇಣ ಮಹತಾ ರಾಜನ್ರಜನೀ ವ್ಯತ್ಯವರ್ತತ।।
ಪ್ರಭೋ! ರಾಜನ್! ಹೀಗೆ ಪರಸ್ಪರರಲ್ಲಿ ಮಾತನಾಡಿಕೊಳ್ಳುತ್ತಾ, ಅವನಿಗೆ ಜಯವನ್ನು ಆಶಿಸುತ್ತಾ ಮಹಾ ಕಷ್ಟದಿಂದ ಅವರು ರಾತ್ರಿಯನ್ನು ಕಳೆದರು.
07056017a ತಸ್ಯಾಂ ರಜನ್ಯಾಂ ಮಧ್ಯೇ ತು ಪ್ರತಿಬುದ್ಧೋ ಜನಾರ್ದನಃ।
07056017c ಸ್ಮೃತ್ವಾ ಪ್ರತಿಜ್ಞಾಂ ಪಾರ್ಥಸ್ಯ ದಾರುಕಂ ಪ್ರತ್ಯಭಾಷತ।।
ಆ ರಾತ್ರಿಯ ಮಧ್ಯೆ ಎಚ್ಚೆತ್ತಿದ್ದ ಜನಾರ್ದನನು ಪಾರ್ಥನ ಪ್ರತಿಜ್ಞೆಯನ್ನು ಸ್ಮರಿಸಿಕೊಂಡು ದಾರುಕನಿಗೆ ಹೇಳಿದನು:
07056018a ಅರ್ಜುನೇನ ಪ್ರತಿಜ್ಞಾತಮಾರ್ತೇನ ಹತಬಂಧುನಾ।
07056018c ಜಯದ್ರಥಂ ಹನಿಷ್ಯಾಮಿ ಶ್ವೋಭೂತ ಇತಿ ದಾರುಕ।।
“ದಾರುಕ! ಬಂಧುವು ಹತನಾದುದರಿಂದ ದುಃಖಿತನಾಗಿ ಅರ್ಜುನನು ನಾಳೆ ಜಯದ್ರಥನನ್ನು ಸಂಹರಿಸುತ್ತೇನೆ ಎಂದು ಪ್ರತಿಜ್ಞೆಯನ್ನು ಮಾಡಿಬಿಟ್ಟಿದ್ದಾನೆ.
07056019a ತತ್ತು ದುರ್ಯೋಧನಃ ಶ್ರುತ್ವಾ ಮಂತ್ರಿಭಿರ್ಮಂತ್ರಯಿಷ್ಯತಿ।
07056019c ಯಥಾ ಜಯದ್ರಥಂ ಪಾರ್ಥೋ ನ ಹನ್ಯಾದಿತಿ ಸಂಯುಗೇ।।
ಅತ್ತ ದುರ್ಯೋಧನನು ಇದನ್ನು ಕೇಳಿ ಸಂಯುಗದಲ್ಲಿ ಪಾರ್ಥನು ಜಯದ್ರಥನನ್ನು ಸಂಹರಿಸಬಾರದ ಹಾಗೆ ಮಂತ್ರಾಲೋಚನೆಯನ್ನು ನಡೆಸಿರುವನು.
07056020a ಅಕ್ಷೌಹಿಣ್ಯೋ ಹಿ ತಾಃ ಸರ್ವಾ ರಕ್ಷಿಷ್ಯಂತಿ ಜಯದ್ರಥಂ।
07056020c ದ್ರೋಣಶ್ಚ ಸಹ ಪುತ್ರೇಣ ಸರ್ವಾಸ್ತ್ರವಿಧಿಪಾರಗಃ।।
ಅವನ ಎಲ್ಲ ಅಕ್ಷೌಹಿಣಿಗಳೂ, ಸರ್ವಾಸ್ತ್ರವಿಧಿಪಾರಂಗತ ದ್ರೋಣನೂ ಮಗನೊಂದಿಗೆ ಜಯದ್ರಥನನ್ನು ರಕ್ಷಿಸಲಿದ್ದಾರೆ.
07056021a ಏಕೋ ವೀರಃ ಸಹಸ್ರಾಕ್ಷೋ ದೈತ್ಯದಾನವಮರ್ದಿತಾ।
07056021c ಸೋಽಪಿ ತಂ ನೋತ್ಸಹೇತಾಜೌ ಹಂತುಂ ದ್ರೋಣೇನ ರಕ್ಷಿತಂ।।
ಏಕಮಾತ್ರ ವೀರನಾದ, ದೈತ್ಯದಾನವರ ದರ್ಪವನ್ನಡಗಿಸಿದ ಸಹಸ್ರಾಕ್ಷನೂ ಕೂಡ ದ್ರೋಣನಿಂದ ರಕ್ಷಿತನಾದವನನ್ನು ಸಂಹರಿಸಲು ಉತ್ಸಾಹಿತನಾಗುವುದಿಲ್ಲ.
07056022a ಸೋಽಹಂ ಶ್ವಸ್ತತ್ಕರಿಷ್ಯಾಮಿ ಯಥಾ ಕುಂತೀಸುತೋಽರ್ಜುನಃ।
07056022c ಅಪ್ರಾಪ್ತೇಽಸ್ತಂ ದಿನಕರೇ ಹನಿಷ್ಯತಿ ಜಯದ್ರಥಂ।।
ನಾಳೆ ನಾನು ಸೂರ್ಯನು ಅಸ್ತನಾಗುವ ಮೊದಲೇ ಕುಂತೀಸುತ ಅರ್ಜುನನು ಜಯದ್ರಥನನ್ನು ಕೊಲ್ಲುವ ಹಾಗೆ ಮಾಡುತ್ತೇನೆ.
07056023a ನ ಹಿ ದಾರಾ ನ ಮಿತ್ರಾಣಿ ಜ್ಞಾತಯೋ ನ ಚ ಬಾಂಧವಾಃ।
07056023c ಕಶ್ಚಿನ್ನಾನ್ಯಃ ಪ್ರಿಯತರಃ ಕುಂತೀಪುತ್ರಾನ್ಮಮಾರ್ಜುನಾತ್।।
ಪತ್ನಿಯರಾಗಲೀ ಮಿತ್ರರಾಗಲೀ ಜ್ಞಾತಿ-ಬಾಂಧವರಾಗಲೀ ಕುಂತೀಪುತ್ರ ಅರ್ಜುನನಿಗಿಂತ ಹೆಚ್ಚು ಪ್ರಿಯರು ನನಗೆ ಬೇರೆ ಯಾರೂ ಇಲ್ಲ.
07056024a ಅನರ್ಜುನಮಿಮಂ ಲೋಕಂ ಮುಹೂರ್ತಮಪಿ ದಾರುಕ।
07056024c ಉದೀಕ್ಷಿತುಂ ನ ಶಕ್ತೋಽಹಂ ಭವಿತಾ ನ ಚ ತತ್ತಥಾ।।
ದಾರುಕ! ಅರ್ಜುನನಿಲ್ಲದ ಈ ಲೋಕವನ್ನು ಮುಹೂರ್ತಕಾಲವೂ ನೋಡಲು ನಾನು ಶಕ್ಯನಿಲ್ಲ. ಆದರೆ ಹಾಗೆ ಆಗುವುದಿಲ್ಲ.
07056025a ಅಹಂ ಧ್ವಜಿನ್ಯಃ ಶತ್ರೂಣಾಂ ಸಹಯಾಃ ಸರಥದ್ವಿಪಾಃ।
07056025c ಅರ್ಜುನಾರ್ಥೇ ಹನಿಷ್ಯಾಮಿ ಸಕರ್ಣಾಃ ಸಸುಯೋಧನಾಃ।।
ಅರ್ಜುನನಿಗಾಗಿ ನಾನು ನಾಳೆ ರಥ-ಆನೆಗಳೊಂದಿಗೆ ಧ್ವಜಿಗಳಾದ ಶತ್ರುಗಳನ್ನು ಕರ್ಣ-ಸುಯೋಧನರೊಡನೆ, ಸಂಹರಿಸುತ್ತೇನೆ.
07056026a ಶ್ವೋ ನಿರೀಕ್ಷಂತು ಮೇ ವೀರ್ಯಂ ತ್ರಯೋ ಲೋಕಾ ಮಹಾಹವೇ।
07056026c ಧನಂಜಯಾರ್ಥಂ ಸಮರೇ ಪರಾಕ್ರಾಂತಸ್ಯ ದಾರುಕ।।
ದಾರುಕ! ನಾಳಿನ ಮಹಾಯುದ್ಧದಲ್ಲಿ ಧನಂಜಯನಿಗಾಗಿ ನಾನು ತೋರಿಸುವ ಪರಾಕ್ರಮವನ್ನೂ ವೀರ್ಯವನ್ನೂ ಮೂರು ಲೋಕಗಳೂ ನೋಡಲಿ!
07056027a ಶ್ವೋ ನರೇಂದ್ರಸಹಸ್ರಾಣಿ ರಾಜಪುತ್ರಶತಾನಿ ಚ।
07056027c ಸಾಶ್ವದ್ವಿಪರಥಾನ್ಯಾಜೌ ವಿದ್ರವಿಷ್ಯಂತಿ ದಾರುಕ।।
ದಾರುಕ! ನಾಳೆ ಸಹಸ್ರಾರು ನರೇಂದ್ರರೂ, ನೂರಾರು ರಾಜಪುತ್ರರೂ ಗಜ-ಅಶ್ವ-ರಥ-ಪದಾತಿ ಸೈನ್ಯಗಳೊಂದಿಗೆ ಓಡಿ ಹೋಗುವಂತೆ ಮಾಡುತ್ತೇನೆ.
07056028a ಶ್ವಸ್ತಾಂ ಚಕ್ರಪ್ರಮಥಿತಾಂ ದ್ರಕ್ಷ್ಯಸೇ ನೃಪವಾಹಿನೀಂ।
07056028c ಮಯಾ ಕ್ರುದ್ಧೇನ ಸಮರೇ ಪಾಂಡವಾರ್ಥೇ ನಿಪಾತಿತಾಂ।।
ನಾಳೆ ನಾನು ಸಮರದಲ್ಲಿ ಪಾಂಡವನಿಗಾಗಿ ಕ್ರುದ್ಧನಾಗಿ ಚಕ್ರದಿಂದ ನೃಪವಾಹಿನಿಯನ್ನು ಕತ್ತರಿಸಿ ಬೀಳಿಸುವುದನ್ನು ನೀನು ನೋಡುವೆ!
07056029a ಶ್ವಃ ಸದೇವಾಃ ಸಗಂಧರ್ವಾಃ ಪಿಶಾಚೋರಗರಾಕ್ಷಸಾಃ।
07056029c ಜ್ಞಾಸ್ಯಂತಿ ಲೋಕಾಃ ಸರ್ವೇ ಮಾಂ ಸುಹೃದಂ ಸವ್ಯಸಾಚಿನಃ।।
ನಾಳೆ ದೇವ-ಗಂಧರ್ವ-ಪಿಶಾಚ-ಉರಗ-ರಾಕ್ಷಸ ಲೋಕಗಳೆಲ್ಲವೂ ನಾನು ಸವ್ಯಸಾಚಿಯ ಸುಹೃದನೆನ್ನುವುದನ್ನು ಅರ್ಥಮಾಡಿಕೊಳ್ಳುತ್ತವೆ.
07056030a ಯಸ್ತಂ ದ್ವೇಷ್ಟಿ ಸ ಮಾಂ ದ್ವೇಷ್ಟಿ ಯಸ್ತಮನು ಸ ಮಾಮನು।
07056030c ಇತಿ ಸಂಕಲ್ಪ್ಯತಾಂ ಬುದ್ಧ್ಯಾ ಶರೀರಾರ್ಧಂ ಮಮಾರ್ಜುನಃ।।
ಅವನನ್ನು ಯಾರು ದ್ವೇಷಿಸುತ್ತಾರೋ ಅವರು ನನ್ನನ್ನೂ ದ್ವೇಷಿಸುತ್ತಾರೆ. ಅವನನ್ನು ಯಾರು ಅನುಸರಿಸುತ್ತಾರೋ ಅವರು ನನ್ನನ್ನೂ ಅನುಸರಿಸುತ್ತಾರೆ. ಅರ್ಜುನನು ನನ್ನ ಶರೀರದ ಅರ್ಧಭಾಗವೆಂದೇ ನೀನು ಯೋಚಿಸಿ ತಿಳಿದುಕೋ.
07056031a ಯಥಾ ತ್ವಮಪ್ರಭಾತಾಯಾಮಸ್ಯಾಂ ನಿಶಿ ರಥೋತ್ತಮಂ।
07056031c ಕಲ್ಪಯಿತ್ವಾ ಯಥಾಶಾಸ್ತ್ರಮಾದಾಯ ವ್ರತಸಮ್ಯತಃ।।
ನೀನು ಈ ರಾತ್ರಿ ಕಳೆದು ಬೆಳಗಾಗುವುದರೊಳಗೆ ನನ್ನ ಉತ್ತಮ ರಥವನ್ನು ಯಥಾಶಾಸ್ತ್ರವಾಗಿ ವ್ರತಸಮ್ಯತನಾಗಿ ಸಿದ್ಧಗೊಳಿಸು.
07056032a ಗದಾಂ ಕೌಮೋದಕೀಂ ದಿವ್ಯಾಂ ಶಕ್ತಿಂ ಚಕ್ರಂ ಧನುಃ ಶರಾನ್।
07056032c ಆರೋಪ್ಯ ವೈ ರಥೇ ಸೂತ ಸರ್ವೋಪಕರಣಾನಿ ಚ।।
07056033a ಸ್ಥಾನಂ ಹಿ ಕಲ್ಪಯಿತ್ವಾ ಚ ರಥೋಪಸ್ಥೇ ಧ್ವಜಸ್ಯ ಮೇ।
07056033c ವೈನತೇಯಸ್ಯ ವೀರಸ್ಯ ಸಮರೇ ರಥಶೋಭಿನಃ।।
ಸೂತ! ಕೌಮೋದಕೀ ಗದೆಯನ್ನೂ, ದಿವ್ಯ ಶಕ್ತಿ, ಚಕ್ರ, ಧನುಸ್ಸು, ಶರಗಳನ್ನೂ ಸರ್ವ ಉಪಕರಣಗಳನ್ನು ರಥದಲ್ಲಿ ಏರಿಸಿ, ರಥದಲ್ಲಿರುವ ನನ್ನ ಧ್ವಜದಲ್ಲಿ ಸಮರದಲ್ಲಿ ರಥಶೋಭಿನಿಯಾದ ವೀರ ವೈನತೇಯನಿಗೆ ಸ್ಥಳವನ್ನು ಕಲ್ಪಿಸು.
07056034a ಚತ್ರಂ ಜಾಂಬೂನದೈರ್ಜಾಲೈರರ್ಕಜ್ವಲನಸನ್ನಿಭೈಃ।
07056034c ವಿಶ್ವಕರ್ಮಕೃತೈರ್ದಿವ್ಯೈರಶ್ವಾನಪಿ ಚ ಭೂಷಿತಾನ್।।
07056035a ಬಲಾಹಕಂ ಮೇಘಪುಷ್ಪಂ ಸೈನ್ಯಂ ಸುಗ್ರೀವಮೇವ ಚ।
07056035c ಯುಕ್ತ್ವಾ ವಾಜಿವರಾನ್ಯತ್ತಃ ಕವಚೀ ತಿಷ್ಠ ದಾರುಕ।।
ದಾರುಕ! ಚತ್ರವನ್ನೂ, ಬಂಗಾರದ ಜಾಲಗಳಿಂದ ಕೂಡಿದ ಸೂರ್ಯನ ಜ್ವಲನದಂತಿರುವ ವಿಶ್ವಕರ್ಮನಿಂದ ನಿರ್ಮಿತ ಭೂಷಣಗಳಿಂದ ಅಲಂಕೃತವಾದ ಬಲಾಹಕ, ಮೇಘಪುಷ್ಪ, ಸೈನ್ಯ ಮತ್ತು ಸುಗ್ರೀವಗಳೆಂಬ ದಿವ್ಯ ಶ್ರೇಷ್ಠ ಅಶ್ವಗಳನ್ನು ಕಟ್ಟಿ ಕವಚವನ್ನು ಧರಿಸಿ ನಿಂತಿರು.
07056036a ಪಾಂಚಜನ್ಯಸ್ಯ ನಿರ್ಘೋಷಮಾರ್ಷಭೇಣೈವ ಪೂರಿತಂ।
07056036c ಶ್ರುತ್ವಾ ತು ಭೈರವಂ ನಾದಮುಪಯಾಯಾ ಜವೇನ ಮಾಂ।।
ಋಷಭಸ್ವರದಿಂದಲೇ ಊದಲ್ಪಡುವ ಪಾಂಚಜನ್ಯದ ನಿರ್ಘೋಷವನ್ನೂ ಭೈರವ ನಾದವನ್ನೂ ಕೇಳಿದೊಡನೆಯೇ ನೀನು ವೇಗದಿಂದ ನನ್ನ ಬಳಿ ಬರಬೇಕು.
07056037a ಏಕಾಹ್ನಾಹಮಮರ್ಷಂ ಚ ಸರ್ವದುಃಖಾನಿ ಚೈವ ಹ।
07056037c ಭ್ರಾತುಃ ಪಿತೃಷ್ವಸೇಯಸ್ಯ ವ್ಯಪನೇಷ್ಯಾಮಿ ದಾರುಕ।।
ದಾರುಕ! ತಂದೆಯ ತಂಗಿಯ ಮಗನ ತಮ್ಮನಾದ ಅವನ ಸರ್ವದುಃಖಗಳನ್ನೂ ಒಂದೇ ದಿನದಲ್ಲಿ ಕೋಪಗೊಂಡು ಕಳೆದುಬಿಡುತ್ತೇನೆ.
07056038a ಸರ್ವೋಪಾಯೈರ್ಯತಿಷ್ಯಾಮಿ ಯಥಾ ಬೀಭತ್ಸುರಾಹವೇ।
07056038c ಪಶ್ಯತಾಂ ಧಾರ್ತರಾಷ್ಟ್ರಾಣಾಂ ಹನಿಷ್ಯತಿ ಜಯದ್ರಥಂ।।
ಆಹವದಲ್ಲಿ ಧಾರ್ತರಾಷ್ಟ್ರರು ನೋಡುತ್ತಿರುವಂತೆಯೇ ಬೀಭತ್ಸುವು ಜಯದ್ರಥನನ್ನು ಕೊಲ್ಲುವಂತೆ ಸರ್ವ ಉಪಾಯಗಳಿಂದಲೂ ಪ್ರಯತ್ನಿಸುತ್ತೇನೆ.
07056039a ಯಸ್ಯ ಯಸ್ಯ ಚ ಬೀಭತ್ಸುರ್ವಧೇ ಯತ್ನಂ ಕರಿಷ್ಯತಿ।
07056039c ಆಶಂಸೇ ಸಾರಥೇ ತತ್ರ ಭವಿತಾಸ್ಯ ಧ್ರುವೋ ಜಯಃ।।
ಸಾರಥೇ! ಬೀಭತ್ಸುವು ಯಾರ್ಯಾರನ್ನು ವಧಿಸಲು ಪ್ರಯತ್ನಿಸುತ್ತಾನೋ ಅಲ್ಲಿ ಅವನಿಗೆ ನಿಶ್ಚಯವಾದ ಜಯವುಂಟಾಗಬೇಕೆಂದು ಆಶಿಸುತ್ತೇನೆ.”
07056040 ದಾರುಕ ಉವಾಚ।
07056040a ಜಯ ಏವ ಧ್ರುವಸ್ತಸ್ಯ ಕುತ ಏವ ಪರಾಜಯಃ।
07056040c ಯಸ್ಯ ತ್ವಂ ಪುರುಷವ್ಯಾಘ್ರ ಸಾರಥ್ಯಮುಪಜಗ್ಮಿವಾನ್।।
ದಾರುಕನು ಹೇಳಿದನು: “ಪುರುಷವ್ಯಾಘ್ರ! ನೀನು ಯಾರ ಸಾರಥ್ಯವನ್ನು ವಹಿಸಿಕೊಂಡಿರುವೆಯೋ ಅವನ ಜಯವು ನಿಶ್ಚಿತವಾದುದು. ಎಲ್ಲಿಯ ಪರಾಜಯ?
07056041a ಏವಂ ಚೈತತ್ ಕರಿಷ್ಯಾಮಿ ಯಥಾ ಮಾಮನುಶಾಸಸಿ।
07056041c ಸುಪ್ರಭಾತಾಮಿಮಾಂ ರಾತ್ರಿಂ ಜಯಾಯ ವಿಜಯಸ್ಯ ಹಿ।।
ನೀನು ನನಗೆ ಆಜ್ಞೆಯಿತ್ತಿರುವಂತೆಯೇ ವಿಜಯನ ಜಯಕ್ಕಾಗಿ ಈ ರಾತ್ರಿ ಬೆಳಗಾಗುವುದರೊಳಗೆ ಎಲ್ಲವನ್ನೂ ಮಾಡುತ್ತೇನೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಣಿ ಕೃಷ್ಣದಾರುಕಸಂಭಾಷಣೇ ಷಟ್ಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವದಲ್ಲಿ ಕೃಷ್ಣದಾರುಕಸಂಭಾಷಣೆ ಎನ್ನುವ ಐವತ್ತಾರನೇ ಅಧ್ಯಾಯವು.