ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 110
ಸಾರ
ಭೀಮಾರ್ಜುನರ ಪರಾಕ್ರಮ (1-46).
06110001 ಸಂಜಯ ಉವಾಚ।
06110001a ಅರ್ಜುನಸ್ತು ರಣೇ ಶಲ್ಯಂ ಯತಮಾನಂ ಮಹಾರಥಂ।
06110001c ಚಾದಯಾಮಾಸ ಸಮರೇ ಶರೈಃ ಸನ್ನತಪರ್ವಭಿಃ।।
ಸಂಜಯನು ಹೇಳಿದನು: “ರಣದಲ್ಲಿ ಅರ್ಜುನನಾದರೋ ಸಮರದಲ್ಲಿ ಪ್ರಯತ್ನಿಸುತ್ತಿದ್ದ ಮಹಾರಥ ಶಲ್ಯನನ್ನು ಸನ್ನತಪರ್ವ ಶರಗಳಿಂದ ಹೊಡೆದನು.
06110002a ಸುಶರ್ಮಾಣಂ ಕೃಪಂ ಚೈವ ತ್ರಿಭಿಸ್ತ್ರಿಭಿರವಿಧ್ಯತ।
06110002c ಪ್ರಾಗ್ಜ್ಯೋತಿಷಂ ಚ ಸಮರೇ ಸೈಂಧವಂ ಚ ಜಯದ್ರಥಂ।।
06110003a ಚಿತ್ರಸೇನಂ ವಿಕರ್ಣಂ ಚ ಕೃತವರ್ಮಾಣಮೇವ ಚ।
06110003c ದುರ್ಮರ್ಷಣಂ ಚ ರಾಜೇಂದ್ರ ಆವಂತ್ಯೌ ಚ ಮಹಾರಥೌ।।
06110004a ಏಕೈಕಂ ತ್ರಿಭಿರಾನರ್ಚತ್ಕಂಕಬರ್ಹಿಣವಾಜಿತೈಃ।
06110004c ಶರೈರತಿರಥೋ ಯುದ್ಧೇ ಪೀಡಯನ್ವಾಹಿನೀಂ ತವ।।
ರಾಜೇಂದ್ರ! ಸುಶರ್ಮನನ್ನೂ ಕೃಪನನ್ನೂ ಮೂರು ಬಾಣಗಳಿಂದ ಹೊಡೆದನು. ಸಮರದಲ್ಲಿ ಪ್ರಗ್ಜ್ಯೋತಿಷನನ್ನು, ಸೈಂಧವ ಜಯದ್ರಥನನ್ನು, ಚಿತ್ರಸೇನನನ್ನು, ವಿಕರ್ಣನನ್ನು, ಕೃತವರ್ಮನನ್ನು ಕೂಡ, ದುರ್ಮರ್ಷಣನನ್ನು, ಮತ್ತು ಅವಂತಿಯ ಮಹಾರಥರೀರ್ವರನ್ನು ಒಬ್ಬೊಬ್ಬರನ್ನೂ ಮೂರು ಮೂರು ಕಂಕಬರ್ಹಿಣ ಬಾಣಗಳಿಂದ ಹೊಡೆದು ಆ ಅತಿರಥನು ನಿನ್ನ ವಾಹಿನಿಯನ್ನು ಯುದ್ಧದಲ್ಲಿ ಪೀಡಿಸಿದನು.
06110005a ಜಯದ್ರಥೋ ರಣೇ ಪಾರ್ಥಂ ಭಿತ್ತ್ವಾ ಭಾರತ ಸಾಯಕೈಃ।
06110005c ಭೀಮಂ ವಿವ್ಯಾಧ ತರಸಾ ಚಿತ್ರಸೇನರಥೇ ಸ್ಥಿತಃ।।
ಭಾರತ! ರಣದಲ್ಲಿ ಚಿತ್ರಸೇನರಥದಲ್ಲಿ ನಿಂತ ಜಯದ್ರಥನು ಪಾರ್ಥನನ್ನು ಸಾಯಕಗಳಿಂದ ಭೇದಿಸಿ, ತಕ್ಷಣವೇ ಭೀಮನನ್ನು ಹೊಡೆದನು.
06110006a ಶಲ್ಯಶ್ಚ ಸಮರೇ ಜಿಷ್ಣುಂ ಕೃಪಶ್ಚ ರಥಿನಾಂ ವರಃ।
06110006c ವಿವ್ಯಧಾತೇ ಮಹಾಬಾಹುಂ ಬಹುಧಾ ಮರ್ಮಭೇದಿಭಿಃ।।
ಸಮರದಲ್ಲಿ ಶಲ್ಯ ಮತ್ತು ರಥಿಗಳಲ್ಲಿ ಶ್ರೇಷ್ಠ ಕೃಪರು ಮಹಾಬಾಹು ಜಿಷ್ಣುವನ್ನು ಅನೇಕ ಮರ್ಮಭೇದಿಗಳಿಂದ ಹೊಡೆದರು.
06110007a ಚಿತ್ರಸೇನಾದಯಶ್ಚೈವ ಪುತ್ರಾಸ್ತವ ವಿಶಾಂ ಪತೇ।
06110007c ಪಂಚಭಿಃ ಪಂಚಭಿಸ್ತೂರ್ಣಂ ಸಂಯುಗೇ ನಿಶಿತೈಃ ಶರೈಃ।
06110007e ಆಜಘ್ನುರರ್ಜುನಂ ಸಂಖ್ಯೇ ಭೀಮಸೇನಂ ಚ ಮಾರಿಷ।।
ವಿಶಾಂಪತೇ! ಚಿತ್ರಸೇನನೇ ಮೊದಲಾದ ನಿನ್ನ ಮಕ್ಕಳು ಕೂಡ ಸಂಯುಗದಲ್ಲಿ ಬೇಗನೇ ಐದು ಐದು ನಿಶಿತ ಶರಗಳಿಂದ ಅರ್ಜುನ ಮತ್ತು ಭೀಮಸೇನರನ್ನು ಹೊಡೆದರು.
06110008a ತೌ ತತ್ರ ರಥಿನಾಂ ಶ್ರೇಷ್ಠೌ ಕೌಂತೇಯೌ ಭರತರ್ಷಭೌ।
06110008c ಅಪೀಡಯೇತಾಂ ಸಮರೇ ತ್ರಿಗರ್ತಾನಾಂ ಮಹದ್ಬಲಂ।।
ಅಲ್ಲಿ ರಥಿಗಳಲ್ಲಿ ಶ್ರೇಷ್ಠರಾದ ಆ ಇಬ್ಬರು ಕೌಂತೇಯ ಭರತರ್ಷಭರೂ ಸಮರದಲ್ಲಿ ತ್ರಿಗರ್ತರ ಮಹಾಬಲವನ್ನು ಪೀಡಿಸುತ್ತಿದ್ದರು.
06110009a ಸುಶರ್ಮಾಪಿ ರಣೇ ಪಾರ್ಥಂ ವಿದ್ಧ್ವಾ ಬಹುಭಿರಾಯಸೈಃ।
06110009c ನನಾದ ಬಲವನ್ನಾದಂ ನಾದಯನ್ವೈ ನಭಸ್ತಲಂ।।
ಸುಶರ್ಮನೂ ಕೂಡ ರಣದಲ್ಲಿ ಪಾರ್ಥನನ್ನು ಅನೇಕ ರಾಯಸಗಳಿಂದ ಹೊಡೆದು ನಭಸ್ತಲವನ್ನೂ ಮೊಳಗಿಸುತ್ತಾ ಮಹಾ ಕೂಗನ್ನು ಕೂಗಿದನು.
06110010a ಅನ್ಯೇ ಚ ರಥಿನಃ ಶೂರಾ ಭೀಮಸೇನಧನಂಜಯೌ।
06110010c ವಿವ್ಯಧುರ್ನಿಶಿತೈರ್ಬಾಣೈ ರುಕ್ಮಪುಂಖೈರಜಿಹ್ಮಗೈಃ।।
ಅನ್ಯ ಶೂರ ರಥಿಗಳೂ ಭೀಮಸೇನ ಧನಂಜಯರನ್ನು ರುಕ್ಮಪುಂಖ, ತೀಕ್ಷ್ಣವಾದ, ನಿಶಿತ ಬಾಣಗಳಿಂದ ಹೊಡೆದರು.
06110011a ತೇಷಾಂ ತು ರಥಿನಾಂ ಮಧ್ಯೇ ಕೌಂತೇಯೌ ರಥಿನಾಂ ವರೌ।
06110011c ಕ್ರೀಡಮಾನೌ ರಥೋದಾರೌ ಚಿತ್ರರೂಪೌ ವ್ಯರೋಚತಾಂ।
06110011e ಆಮಿಷೇಪ್ಸೂ ಗವಾಂ ಮಧ್ಯೇ ಸಿಂಹಾವಿವ ಬಲೋತ್ಕಟೌ।।
ಆ ರಥಿಗಳ ಮಧ್ಯೆ ರಥಿಗಳಲ್ಲಿ ಶ್ರೇಷ್ಠರಾದ, ರಥೋದಾರರಾದ, ಚಿತ್ರರೂಪರಾದ ಕೌಂತೇಯರಿಬ್ಬರೂ ಗೋವುಗಳ ಮಧ್ಯೆ ಬಲೋತ್ಕಟ ಸಿಂಹಗಳಂತೆ ಆಸೆತೋರಿಸಿ ಆಟವಾಡುತ್ತಿದ್ದರು.
06110012a ಚಿತ್ತ್ವಾ ಧನೂಂಷಿ ವೀರಾಣಾಂ ಶರಾಂಶ್ಚ ಬಹುಧಾ ರಣೇ।
06110012c ಪಾತಯಾಮಾಸತುರ್ವೀರೌ ಶಿರಾಂಸಿ ಶತಶೋ ನೃಣಾಂ।।
ಆ ಇಬ್ಬರು ವೀರರು ರಣದಲ್ಲಿ ಅನೇಕ ವೀರರ ಧನುಸ್ಸುಗಳನ್ನೂ ಶಿರಗಳನ್ನೂ ತುಂಡರಿಸಿ, ನೂರಾರು ನರರ ಶಿರಗಳನ್ನು ಕಡಿದುರುಳಿಸಿದರು.
06110013a ರಥಾಶ್ಚ ಬಹವೋ ಭಗ್ನಾ ಹಯಾಶ್ಚ ಶತಶೋ ಹತಾಃ।
06110013c ಗಜಾಶ್ಚ ಸಗಜಾರೋಹಾಃ ಪೇತುರುರ್ವ್ಯಾಂ ಮಹಾಮೃಧೇ।।
ಆ ಮಹಾಯುದ್ಧದಲ್ಲಿ ಅನೇಕ ರಥಗಳು ತುಂಡಾದವು. ನೂರಾರು ಕುದುರೆಗಳು ಹತವಾದವು. ಗಜಾರೋಹರೊಂದಿಗೆ ಗಜಗಳು ನೆಲಕ್ಕುರುಳಿದವು.
06110014a ರಥಿನಃ ಸಾದಿನಶ್ಚೈವ ತತ್ರ ತತ್ರ ನಿಸೂದಿತಾಃ।
06110014c ದೃಶ್ಯಂತೇ ಬಹುಧಾ ರಾಜನ್ವೇಷ್ಟಮಾನಾಃ ಸಮಂತತಃ।।
ರಾಜನ್! ಅನೇಕ ರಥಿಗಳು, ಅಶ್ವಾರೋಹಿಗಳು ಕೊಲ್ಲಲ್ಪಟ್ಟು ಅಲ್ಲಲ್ಲಿ ಎಲ್ಲ ಕಡೆ ಬಿದ್ದಿರುವುದು ಕಂಡಿತು.
06110015a ಹತೈರ್ಗಜಪದಾತ್ಯೋಘೈರ್ವಾಜಿಭಿಶ್ಚ ನಿಸೂದಿತೈಃ।
06110015c ರಥೈಶ್ಚ ಬಹುಧಾ ಭಗ್ನೈಃ ಸಮಾಸ್ತೀರ್ಯತ ಮೇದಿನೀ।।
ಹತರಾದ ಗಜ ಪದಾತಿಗಳಿಂದ, ಸಂಹರಿಸಲ್ಪಟ್ಟ ಕುದುರೆಗಳ ಸಮೂಹಗಳಿಂದ, ಭಗ್ನವಾಗಿದ್ದ ಅನೇಕ ರಥಗಳಿಂದ ಮೇದಿನಿಯು ತುಂಬಿಹೋಗಿತ್ತು.
06110016a ಚತ್ರೈಶ್ಚ ಬಹುಧಾ ಚಿನ್ನೈರ್ಧ್ವಜೈಶ್ಚ ವಿನಿಪಾತಿತೈಃ।
06110016c ಅಂಕುಶೈರಪವಿದ್ಧೈಶ್ಚ ಪರಿಸ್ತೋಮೈಶ್ಚ ಭಾರತ।।
06110017a ಕೇಯೂರೈರಂಗದೈರ್ಹಾರೈ ರಾಂಕವೈರ್ಮೃದಿತೈಸ್ತಥಾ।
06110017c ಉಷ್ಣೀಷೈರಪವಿದ್ಧೈಶ್ಚ ಚಾಮರವ್ಯಜನೈರಪಿ।।
06110018a ತತ್ರ ತತ್ರಾಪವಿದ್ಧೈಶ್ಚ ಬಾಹುಭಿಶ್ಚಂದನೋಕ್ಷಿತೈಃ।
06110018c ಊರುಭಿಶ್ಚ ನರೇಂದ್ರಾಣಾಂ ಸಮಾಸ್ತೀರ್ಯತ ಮೇದಿನೀ।।
ಭಾರತ! ಹರಿದು ಕೆಳಗೆ ಬಿದ್ದಿದ್ದ ಅನೇಕ ಬಣ್ಣಗಳ ಧ್ವಜಗಳಿಂದ, ಚತ್ರಗಳಿಂದ, ಅಂಕುಶಗಳಿಂದ, ಪರಿಸ್ತೋಮಗಳಿಂದ, ಚಿನ್ನದ ಕೇಯೂರ-ಅಂಗದ- ಹಾರಗಳಿಂದ, ಉಷ್ಣೀಷ-ಅಪವಿದ್ಧಗಳಿಂದ, ಚಾಮರ-ವ್ಯಜನಗಳಿಂದ ಅಲ್ಲಲ್ಲಿ ಬಿದ್ದಿದ್ದ ನರೇಂದ್ರರ ತುಂಡಾದ ಬಾಹುಗಳಿಂದ, ಹೊಟ್ಟೆ-ತೊಡೆಗಳಿಂದ ಮೇದಿನಿಯು ಹರಡಿ ಹೋಗಿತ್ತು.
06110019a ತತ್ರಾದ್ಭುತಮಪಶ್ಯಾಮ ರಣೇ ಪಾರ್ಥಸ್ಯ ವಿಕ್ರಮಂ।
06110019c ಶರೈಃ ಸಂವಾರ್ಯ ತಾನ್ವೀರಾನ್ನಿಜಘಾನ ಬಲಂ ತವ।।
ಅಲ್ಲಿ ರಣದಲ್ಲಿ ಶರಗಳನ್ನು ತೂರಿ ನಿನ್ನ ಬಲದಲ್ಲಿರುವ ವೀರರನ್ನು ಸಂಹರಿಸುತ್ತಿರುವ ಪಾರ್ಥನ ಅದ್ಭುತ ವಿಕ್ರಮವನ್ನು ನೋಡಿದೆವು.
06110020a ಪುತ್ರಸ್ತು ತವ ತಂ ದೃಷ್ಟ್ವಾ ಭೀಮಾರ್ಜುನಸಮಾಗಮಂ।
06110020c ಗಾಂಗೇಯಸ್ಯ ರಥಾಭ್ಯಾಶಂ ಉಪಜಗ್ಮೇ ಮಹಾಭಯೇ।।
ಭೀಮಾರ್ಜುನರ ಸಮಾಗಮವನ್ನು ನೋಡಿ ನಿನ್ನ ಪುತ್ರರಾದರೋ ಮಹಾಭಯದಿಂದ ಗಾಂಗೇಯನ ರಥದ ಹಿಂದೆ ಹೋಗಿ ಅಡಗಿಕೊಂಡರು.
06110021a ಕೃಪಶ್ಚ ಕೃತವರ್ಮಾ ಚ ಸೈಂಧವಶ್ಚ ಜಯದ್ರಥಃ।
06110021c ವಿಂದಾನುವಿಂದಾವಾವಂತ್ಯಾವಾಜಗ್ಮುಃ ಸಂಯುಗಂ ತದಾ।।
ಕೃಪ, ಕೃತವರ್ಮ, ಸೈಂಧವ ಜಯದ್ರಥ, ಅವಂತಿಯ ವಿಂದಾನುವಿಂದರು ಸಂಯುಗದಿಂದ ಹಿಮ್ಮೆಟ್ಟಲಿಲ್ಲ.
06110022a ತತೋ ಭೀಮೋ ಮಹೇಷ್ವಾಸಃ ಫಲ್ಗುನಶ್ಚ ಮಹಾರಥಃ।
06110022c ಕೌರವಾಣಾಂ ಚಮೂಂ ಘೋರಾಂ ಭೃಶಂ ದುದ್ರುವತೂ ರಣೇ।।
ಆಗ ಮಹೇಷ್ವಾಸ ಭೀಮ ಮತ್ತು ಮಹಾರಥ ಫಲ್ಗುನರು ಕೌರವರ ಘೋರ ಸೇನೆಯನ್ನು ರಣದಲ್ಲಿ ನಾಶಗೊಳಿಸತೊಡಗಿದರು.
06110023a ತತೋ ಬರ್ಹಿಣವಾಜಾನಾಮಯುತಾನ್ಯರ್ಬುದಾನಿ ಚ।
06110023c ಧನಂಜಯರಥೇ ತೂರ್ಣಂ ಪಾತಯಂತಿ ಸ್ಮ ಸಂಯುಗೇ।।
ಆಗ ಸಂಯುಗದಲ್ಲಿ ತಕ್ಷಣವೇ ರಾಜರು ಹತ್ತುಸಾವಿರ ಲಕ್ಷಗಟ್ಟಲೆ ಬಾಣಗಳನ್ನು ಧನಂಜಯನ ರಥದಮೇಲೆ ಸುರಿದರು.
06110024a ತತಸ್ತಾಂ ಶರಜಾಲೇನ ಸನ್ನಿವಾರ್ಯ ಮಹಾರಥಾನ್।
06110024c ಪಾರ್ಥಃ ಸಮಂತಾತ್ಸಮರೇ ಪ್ರೇಷಯಾಮಾಸ ಮೃತ್ಯವೇ।।
ಆಗ ಆ ಶರಜಾಲಗಳನ್ನು ತಡೆದು ಪಾರ್ಥನು ಸಮರದಲ್ಲಿ ಸೇರಿರುವ ಮಹಾರಥರನ್ನು ಒಟ್ಟಿಗೇ ಮೃತ್ಯುವಿಗೆ ಕಳುಹಿಸಿದನು.
06110025a ಶಲ್ಯಸ್ತು ಸಮರೇ ಜಿಷ್ಣುಂ ಕ್ರೀಡನ್ನಿವ ಮಹಾರಥಃ।
06110025c ಆಜಘಾನೋರಸಿ ಕ್ರುದ್ಧೋ ಭಲ್ಲೈಃ ಸನ್ನತಪರ್ವಭಿಃ।।
ಸಮರದಲ್ಲಿ ಆಡುತ್ತಿರುವಂತೆ ಮಹಾರಥ ಶಲ್ಯನು ಕ್ರುದ್ಧನಾಗಿ ಭಲ್ಲ ಮತ್ತು ಸನ್ನತಪರ್ವಗಳಿಂದ ಜಿಷ್ಣುವಿನ ಎದೆಗೆ ಹೊಡೆದು ಗಾಯಗೊಳಿಸಿದನು.
06110026a ತಸ್ಯ ಪಾರ್ಥೋ ಧನುಶ್ಚಿತ್ತ್ವಾ ಹಸ್ತಾವಾಪಂ ಚ ಪಂಚಭಿಃ।
06110026c ಅಥೈನಂ ಸಾಯಕೈಸ್ತೀಕ್ಷ್ಣೈರ್ಭೃಶಂ ವಿವ್ಯಾಧ ಮರ್ಮಣಿ।।
ಪಾರ್ಥನು ಐದು ಬಾಣಗಳಿಂದ ಅವನ ಧನುಸ್ಸನ್ನು ಮತ್ತು ಹಸ್ತಾವಾಪವನ್ನು ಕತ್ತರಿಸಿ, ತೀಕ್ಷ್ಣ ಸಾಯಕಗಳಿಂದ ಜೋರಾಗಿ ಅವನ ಮರ್ಮಗಳಿಗೆ ಹೊಡೆದನು.
06110027a ಅಥಾನ್ಯದ್ಧನುರಾದಾಯ ಸಮರೇ ಭಾರಸಾಧನಂ।
06110027c ಮದ್ರೇಶ್ವರೋ ರಣೇ ಜಿಷ್ಣುಂ ತಾಡಯಾಮಾಸ ರೋಷಿತಃ।।
06110028a ತ್ರಿಭಿಃ ಶರೈರ್ಮಹಾರಾಜ ವಾಸುದೇವಂ ಚ ಪಂಚಭಿಃ।
06110028c ಭೀಮಸೇನಂ ಚ ನವಭಿರ್ಬಾಹ್ವೋರುರಸಿ ಚಾರ್ಪಯತ್।।
ಮದ್ರೇಶ್ವರನು ಇನ್ನೊಂದು ಭಾರಸಾಧನ ಧನುಸ್ಸನ್ನು ಎತ್ತಿಕೊಂಡು ರಣದಲ್ಲಿ ರೋಷಿತನಾಗಿ ಮೂರು ಶರಗಳಿಂದ ಜಿಷ್ಣುವನ್ನೂ, ಐದರಿಂದ ವಾಸುದೇವನನ್ನೂ, ಒಂಭತ್ತು ಬಾಣಗಳಿಂದ ಭೀಮಸೇನನ ಭುಜ-ತೊಡೆಗಳಿಗೆ ಹೊಡೆದನು.
06110029a ತತೋ ದ್ರೋಣೋ ಮಹಾರಾಜ ಮಾಗಧಶ್ಚ ಮಹಾರಥಃ।
06110029c ದುರ್ಯೋಧನಸಮಾದಿಷ್ಟೌ ತಂ ದೇಶಮುಪಜಗ್ಮತುಃ।।
06110030a ಯತ್ರ ಪಾರ್ಥೋ ಮಹಾರಾಜ ಭೀಮಸೇನಶ್ಚ ಪಾಂಡವಃ।
06110030c ಕೌರವ್ಯಸ್ಯ ಮಹಾಸೇನಾಂ ಜಘ್ನತುಸ್ತೌ ಮಹಾರಥೌ।।
ಮಹಾರಾಜ! ಆಗ ಮಹಾರಥ ದ್ರೋಣ ಮಾಗಧರು ದುರ್ಯೋಧನನ್ನೊಡಗೂಡಿ ಎಲ್ಲಿ ಮಹಾರಥ ಪಾರ್ಥ ಮತ್ತು ಪಾಂಡವ ಭೀಮಸೇನರು ಕೌರವ ಮಹಾಸೇನೆಯನ್ನು ಸಂಹರಿಸುತ್ತಿರುವ ಪ್ರದೇಶಕ್ಕೆ ಬಂದರು.
06110031a ಜಯತ್ಸೇನಸ್ತು ಸಮರೇ ಭೀಮಂ ಭೀಮಾಯುಧಂ ಯುವಾ।
06110031c ವಿವ್ಯಾಧ ನಿಶಿತೈರ್ಬಾಣೈರಷ್ಟಭಿರ್ಭರತರ್ಷಭ।।
ಭರತರ್ಷಭ! ಯುವಕ ಜಯತ್ಸೇನನು ಸಮರದಲ್ಲಿ ಭೀಮಾಯುಧ ಭೀಮನನ್ನು ಎಂಟು ನಿಶಿತ ಬಾಣಗಳಿಂದ ಹೊಡೆದನು.
06110032a ತಂ ಭೀಮೋ ದಶಭಿರ್ವಿದ್ಧ್ವಾ ಪುನರ್ವಿವ್ಯಾಧ ಸಪ್ತಭಿಃ।
06110032c ಸಾರಥಿಂ ಚಾಸ್ಯ ಭಲ್ಲೇನ ರಥನೀಡಾದಪಾಹರತ್।।
ಅವನನ್ನು ಭೀಮನು ಹತ್ತು ಭಲ್ಲಗಳಿಂದ ಹೊಡೆದು ಪುನಃ ಏಳರಿಂದ ಹೊಡೆದನು. ಮತ್ತು ಅವನ ಸಾರಥಿಯನ್ನು ಭಲ್ಲದಿಂದ ಹೊಡೆದು ರಥನೀಡದಿಂದ ಉರುಳಿಸಿದನು.
06110033a ಉದ್ಭ್ರಾಂತೈಸ್ತುರಗೈಃ ಸೋಽಥ ದ್ರವಮಾಣೈಃ ಸಮಂತತಃ।
06110033c ಮಾಗಧೋಽಪಹೃತೋ ರಾಜಾ ಸರ್ವಸೈನ್ಯಸ್ಯ ಪಶ್ಯತಃ।।
ರಾಜಾ! ಉದ್ಭ್ರಾಂತ ಕುದುರೆಗಳು ಎಲ್ಲಕಡೆ ಓಡುತ್ತಾ ಎಲ್ಲ ಸೈನ್ಯಗಳು ನೋಡುತ್ತಿದ್ದಂತೆ ಮಾಗಧನನ್ನು ಎತ್ತಿಕೊಂಡು ಹೋದವು.
06110034a ದ್ರೋಣಸ್ತು ವಿವರಂ ಲಬ್ಧ್ವಾ ಭೀಮಸೇನಂ ಶಿಲೀಮುಖೈಃ।
06110034c ವಿವ್ಯಾಧ ಬಾಣೈಃ ಸುಶಿತೈಃ ಪಂಚಷಷ್ಟ್ಯಾ ತಮಾಯಸೈಃ।।
ದ್ರೋಣನು ಅಂತರವನ್ನು ಪಡೆದು ಭೀಮಸೇನನನ್ನು ಅರವತ್ತೈದು ಚೆನ್ನಾಗಿ ಹರಿತಮಾಡಿದ ಆಯಸಗಳ ಶಿಲೀಮುಖ ಬಾಣಗಳಿಂದ ಹೊಡೆದನು.
06110035a ತಂ ಭೀಮಃ ಸಮರಶ್ಲಾಘೀ ಗುರುಂ ಪಿತೃಸಮಂ ರಣೇ।
06110035c ವಿವ್ಯಾಧ ನವಭಿರ್ಭಲ್ಲೈಸ್ತಥಾ ಷಷ್ಟ್ಯಾ ಚ ಭಾರತ।।
ಭಾರತ! ಪಿತೃಸಮನಾದ ಗುರುವನ್ನು ರಣದಲ್ಲಿ ಸಮರಶ್ಲಾಘೀ ಭೀಮನು ಒಂಭತ್ತು ಭಲ್ಲಗಳಿಂದ ಮತ್ತು ನಂತರ ಅರವತ್ತರಿಂದ ಹೊಡೆದನು.
06110036a ಅರ್ಜುನಸ್ತು ಸುಶರ್ಮಾಣಂ ವಿದ್ಧ್ವಾ ಬಹುಭಿರಾಯಸೈಃ।
06110036c ವ್ಯಧಮತ್ತಸ್ಯ ತತ್ಸೈನ್ಯಂ ಮಹಾಭ್ರಾಣಿ ಯಥಾನಿಲಃ।।
ಅರ್ಜುನನಾದರೋ ಸುಶರ್ಮನನ್ನು ಅನೇಕ ಆಯಸಗಳಿಂದ ಹೊಡೆದು ಗಾಳಿಯು ದೊಡ್ಡ ದೊಡ್ಡ ಮೋಡಗಳನ್ನು ಹೇಗೋ ಹಾಗೆ ಅವನ ಸೇನೆಯನ್ನು ಚದುರಿಸಿದನು.
06110037a ತತೋ ಭೀಷ್ಮಶ್ಚ ರಾಜಾ ಚ ಸೌಬಲಶ್ಚ ಬೃಹದ್ಬಲಃ।
06110037c ಅಭ್ಯದ್ರವಂತ ಸಂಕ್ರುದ್ಧಾ ಭೀಮಸೇನಧನಂಜಯೌ।।
ಆಗ ರಾಜ ಭೀಷ್ಮ, ಸೌಬಲ ಮತ್ತು ಬೃಹದ್ಬಲರು ಭೀಮಸೇನ-ಧನಂಜಯರನ್ನು ಧಾವಿಸಿ ಎದುರಿಸಿದರು.
06110038a ತಥೈವ ಪಾಂಡವಾಃ ಶೂರಾ ಧೃಷ್ಟದ್ಯುಮ್ನಶ್ಚ ಪಾರ್ಷತಃ।
06110038c ಅಭ್ಯದ್ರವನ್ರಣೇ ಭೀಷ್ಮಂ ವ್ಯಾದಿತಾಸ್ಯಮಿವಾಂತಕಂ।।
ಆಗ ಅಂತಕನು ಬಾಯಿಕಳೆದಿರುವಂತಿರುವ ಭೀಷ್ಮನನ್ನು ರಣದಲ್ಲಿ ಪಾಂಡವ ಶೂರರೂ ಪಾರ್ಷತ ಧೃಷ್ಟದ್ಯುಮ್ನನೂ ಎದುರಿಸಿದರು.
06110039a ಶಿಖಂಡೀ ತು ಸಮಾಸಾದ್ಯ ಭಾರತಾನಾಂ ಪಿತಾಮಹಂ।
06110039c ಅಭ್ಯದ್ರವತ ಸಂಹೃಷ್ಟೋ ಭಯಂ ತ್ಯಕ್ತ್ವಾ ಯತವ್ರತಂ।।
ಶಿಖಂಡಿಯಾದರೋ ಸಂಹೃಷ್ಟನಾಗಿ ಭಯವನ್ನು ತ್ಯಜಿಸಿ ಭಾರತರ ಪಿತಾಮಹ ಯತವ್ರತನನ್ನು ಸಮೀಪಿಸಿ ಎದುರಿಸಿದನು.
06110040a ಯುಧಿಷ್ಠಿರಮುಖಾಃ ಪಾರ್ಥಾಃ ಪುರಸ್ಕೃತ್ಯ ಶಿಖಂಡಿನಂ।
06110040c ಅಯೋಧಯನ್ರಣೇ ಭೀಷ್ಮಂ ಸಂಹತಾಃ ಸಹ ಸೃಂಜಯೈಃ।।
ಯುಧಿಷ್ಠಿರ ಪ್ರಮುಖರಾದ ಪಾರ್ಥರು ಸೃಂಜಯರೊಡನೆ ಶಿಖಂಡಿಯನ್ನು ಮುಂದಿರಿಸಿಕೊಂಡು ರಣದಲ್ಲಿ ಭೀಷ್ಮನನ್ನು ಎದರಿಸಿ ಯದ್ಧಮಾಡಿದರು.
06110041a ತಥೈವ ತಾವಕಾಃ ಸರ್ವೇ ಪುರಸ್ಕೃತ್ಯ ಯತವ್ರತಂ।
06110041c ಶಿಖಂಡಿಪ್ರಮುಖಾನ್ಪಾರ್ಥಾನ್ಯೋಧಯಂತಿ ಸ್ಮ ಸಂಯುಗೇ।।
ಹಾಗೆಯೇ ನಿನ್ನವರೆಲ್ಲರೂ ಯತವ್ರತನನ್ನು ಮುಂದಿರಿಸಿಕೊಂಡು ಸಂಯುಗದಲ್ಲಿ ಶಿಖಂಡಿಪ್ರಮುಖ ಪಾರ್ಥರೊಡನೆ ಯುದ್ಧಮಾಡಿದರು.
06110042a ತತಃ ಪ್ರವವೃತೇ ಯುದ್ಧಂ ಕೌರವಾಣಾಂ ಭಯಾವಹಂ।
06110042c ತತ್ರ ಪಾಂಡುಸುತೈಃ ಸಾರ್ಧಂ ಭೀಷ್ಮಸ್ಯ ವಿಜಯಂ ಪ್ರತಿ।।
ಆಗ ಅಲ್ಲಿ ಭೀಷ್ಮನ ವಿಜಯಕ್ಕಾಗಿ ಪಾಂಡುಸುತರೊಂದಿಗೆ ಕೌರವರ ಭಯಾವಹ ಯುದ್ಧವು ನಡೆಯಿತು.
06110043a ತಾವಕಾನಾಂ ರಣೇ ಭೀಷ್ಮೋ ಗ್ಲಹ ಆಸೀದ್ವಿಶಾಂ ಪತೇ।
06110043c ತತ್ರ ಹಿ ದ್ಯೂತಮಾಯಾತಂ ವಿಜಯಾಯೇತರಾಯ ವಾ।।
ವಿಶಾಂಪತೇ! ರಣದಲ್ಲಿ ಭೀಷ್ಮನು ನಿನ್ನವರ ಪಣವಾದನು. ಏಕೆಂದರೆ ಅಲ್ಲಿ ವಿಜಯ ಅಥವ ಸೋಲಿನ ದ್ಯೂತವು ನಡೆದಿತ್ತು.
06110044a ಧೃಷ್ಟದ್ಯುಮ್ನೋ ಮಹಾರಾಜ ಸರ್ವಸೈನ್ಯಾನ್ಯಚೋದಯತ್।
06110044c ಅಭಿದ್ರವತ ಗಾಂಗೇಯಂ ಮಾ ಭೈಷ್ಟ ನರಸತ್ತಮಾಃ।।
ಮಹಾರಾಜ! ಧೃಷ್ಟದ್ಯುಮ್ನನು ಸರ್ವ ಸೇನೆಗಳನ್ನೂ “ನರಸತ್ತಮರೇ! ಗಾಂಗೇಯನನ್ನು ಆಕ್ರಮಿಸಿ! ಭಯಪಡಬೇಡಿ!” ಎಂದು ಹುರಿದುಂಬಿಸಿದನು.
06110045a ಸೇನಾಪತಿವಚಃ ಶ್ರುತ್ವಾ ಪಾಂಡವಾನಾಂ ವರೂಥಿನೀ।
06110045c ಭೀಷ್ಮಮೇವಾಭ್ಯಯಾತ್ತೂರ್ಣಂ ಪ್ರಾಣಾಂಸ್ತ್ಯಕ್ತ್ವಾ ಮಹಾಹವೇ।।
ಸೇನಾಪತಿಯ ಮಾತನ್ನು ಕೇಳಿ ತಕ್ಷಣವೇ ಪಾಂಡವರ ಸೇನೆಯು ಮಹಾಹವದಲ್ಲಿ ಪ್ರಾಣವನ್ನೂ ತೊರೆದು ಭೀಷ್ಮನ ಮೇಲೆರಗಿತು.
06110046a ಭೀಷ್ಮೋಽಪಿ ರಥಿನಾಂ ಶ್ರೇಷ್ಠಃ ಪ್ರತಿಜಗ್ರಾಹ ತಾಂ ಚಮೂಂ।
06110046c ಆಪತಂತೀಂ ಮಹಾರಾಜ ವೇಲಾಮಿವ ಮಹೋದಧಿಃ।।
ಮಹಾರಾಜ! ರಥಿಗಳಲ್ಲಿ ಶ್ರೇಷ್ಠ ಭೀಷ್ಮನೂ ಕೂಡ ಮೇಲೆ ಬೀಳುತ್ತಿರುವ ಆ ಸೇನೆಯನ್ನು ಮಹಾಸಾಗರವನ್ನು ಖಂಡವು ಹೇಗೋ ಹಾಗೆ ತಡೆ ಹಿಡಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಮಾರ್ಜುನಪರಾಕ್ರಮೇ ದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಮಾರ್ಜುನಪರಾಕ್ರಮ ಎನ್ನುವ ನೂರಾಹತ್ತನೇ ಅಧ್ಯಾಯವು.