107 ದ್ವಂದ್ವಯುದ್ಧ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 107

ಸಾರ

ಸಾತ್ಯಕಿಯೊಡನೆ ಅಲಂಬುಷ-ಭಗದತ್ತರ ಯುದ್ಧ (1-16). ವಿರಾಟ-ದ್ರುಪದರೊಡನೆ ಅಶ್ವತ್ಥಾಮನ ಯುದ್ಧ (17-26). ಕೃಪ-ಸಹದೇವ, ವಿಕರ್ಣ-ನಕುಲ, ದುರ್ಮುಖ-ಘಟೋತ್ಕಚ, ಕೃತವರ್ಮ-ಧೃಷ್ಟದ್ಯುಮ್ನ, ಭೂರಿಶ್ರವ-ಭೀಮಸೇನ, ದ್ರೋಣ-ಯುಧಿಷ್ಠಿರ, ಚಿತ್ರಸೇನ-ಚೇಕಿತಾನ, ಮತ್ತು ದುಃಶಾಸನ-ಅರ್ಜುನರ ದ್ವಂದ್ವಯುದ್ಧಗಳು; ಕೌರವ ಸೇನೆಯನ್ನು ವಧಿಸುತ್ತಾ ಪಾಂಡವ ಸೇನೆಯು ಭೀಷ್ಮನ ಕಡೆ ಮುಂದುವರೆದುದು (27-55).

06107001 ಸಂಜಯ ಉವಾಚ।
06107001a ಸಾತ್ಯಕಿಂ ದಂಶಿತಂ ಯುದ್ಧೇ ಭೀಷ್ಮಾಯಾಭ್ಯುದ್ಯತಂ ತದಾ।
06107001c ಆರ್ಶ್ಯಶೃಂಗಿರ್ಮಹೇಷ್ವಾಸೋ ವಾರಯಾಮಾಸ ಸಂಯುಗೇ।।

ಸಂಜಯನು ಹೇಳಿದನು: “ಭೀಷ್ಮನೊಂದಿಗೆ ಯುದ್ಧಮಾಡಲು ಕವಚವನ್ನು ಧರಿಸಿ ಬರುತ್ತಿದ್ದ ಸಾತ್ಯಕಿಯನ್ನು ಸಂಯುಗದಲ್ಲಿ ಮಹೇಷ್ವಾಸ ಆರ್ಶ್ಯಶೃಂಗಿ (ಅಲಂಬುಷನು) ಯು ತಡೆದನು.

06107002a ಮಾಧವಸ್ತು ಸುಸಂಕ್ರುದ್ಧೋ ರಾಕ್ಷಸಂ ನವಭಿಃ ಶರೈಃ।
06107002c ಆಜಘಾನ ರಣೇ ರಾಜನ್ಪ್ರಹಸನ್ನಿವ ಭಾರತ।।

ಭಾರತ! ಮಾಧವನಾದರೋ ಸುಸಂಕ್ರುದ್ಧನಾಗಿ ರಣದಲ್ಲಿ ನಕ್ಕವನಂತೆ ರಾಕ್ಷಸನನ್ನು ಒಂಭತ್ತು ಶರಗಳಿಂದ ಹೊಡೆದನು.

06107003a ತಥೈವ ರಾಕ್ಷಸೋ ರಾಜನ್ಮಾಧವಂ ನಿಶಿತೈಃ ಶರೈಃ।
06107003c ಅರ್ದಯಾಮಾಸ ರಾಜೇಂದ್ರ ಸಂಕ್ರುದ್ಧಃ ಶಿನಿಪುಂಗವಂ।।

ರಾಜನ್! ರಾಜೇಂದ್ರ! ಹಾಗೆಯೇ ರಾಕ್ಷಸನೂ ಕೂಡ ಸಂಕ್ರುದ್ಧನಾಗಿ ಶಿನಿಪುಂಗವ ಮಾಧವನನ್ನು ನಿಶಿತ ಶರಗಳಿಂದ ಹೊಡೆದನು.

06107004a ಶೈನೇಯಃ ಶರಸಂಘಂ ತು ಪ್ರೇಷಯಾಮಾಸ ಸಂಯುಗೇ।
06107004c ರಾಕ್ಷಸಾಯ ಸುಸಂಕ್ರುದ್ಧೋ ಮಾಧವಃ ಪರವೀರಹಾ।।

ಸಂಯುಗದಲ್ಲಿ ಪರವೀರಹ ಮಾಧವ ಶೈನೇಯನು ಸುಸಂಕ್ರುದ್ಧನಾಗಿ ರಾಕ್ಷಸನ ಮೇಲೆ ಶರಸಂಘಗಳನ್ನು ಪ್ರಯೋಗಿಸಿದನು.

06107005a ತತೋ ರಕ್ಷೋ ಮಹಾಬಾಹುಂ ಸಾತ್ಯಕಿಂ ಸತ್ಯವಿಕ್ರಮಂ।
06107005c ವಿವ್ಯಾಧ ವಿಶಿಖೈಸ್ತೀಕ್ಷ್ಣೈಃ ಸಿಂಹನಾದಂ ನನಾದ ಚ।।

ಆಗ ರಾಕ್ಷಸನು ಮಹಾಬಾಹು ಸತ್ಯವಿಕ್ರಮಿ ಸಾತ್ಯಕಿಯನ್ನು ತೀಕ್ಷ್ಣ ವಿಶಿಖಗಳಿಂದ ಹೊಡೆದು ಸಿಂಹನಾದಗೈದನು.

06107006a ಮಾಧವಸ್ತು ಭೃಶಂ ವಿದ್ಧೋ ರಾಕ್ಷಸೇನ ರಣೇ ತದಾ।
06107006c ಧೈರ್ಯಮಾಲಂಬ್ಯ ತೇಜಸ್ವೀ ಜಹಾಸ ಚ ನನಾದ ಚ।।

ರಣದಲ್ಲಿ ರಾಕ್ಷಸನಿಂದ ತುಂಬಾ ಗಾಯಗೊಂಡ ಮಾಧವನಾದರೋ ಧೈರ್ಯದಿಂದ ಅವನನ್ನು ಹೊಡೆದನು ಮತ್ತು ಜೋರಾಗಿ ಕೂಗಿದನು.

06107007a ಭಗದತ್ತಸ್ತತಃ ಕ್ರುದ್ಧೋ ಮಾಧವಂ ನಿಶಿತೈಃ ಶರೈಃ।
06107007c ತಾಡಯಾಮಾಸ ಸಮರೇ ತೋತ್ತ್ರೈರಿವ ಮಹಾಗಜಂ।।

ಆಗ ಭಗದತ್ತನು ಕ್ರುದ್ಧನಾಗಿ ಮಹಾಗಜವನ್ನು ಅಂಕುಶದಿಂದ ಚುಚ್ಚುವಂತೆ ಮಾಧವನನ್ನು ನಿಶಿತ ಶರಗಳಿಂದ ಪೀಡಿಸಿದನು.

06107008a ವಿಹಾಯ ರಾಕ್ಷಸಂ ಯುದ್ಧೇ ಶೈನೇಯೋ ರಥಿನಾಂ ವರಃ।
06107008c ಪ್ರಾಗ್ಜ್ಯೋತಿಷಾಯ ಚಿಕ್ಷೇಪ ಶರಾನ್ಸನ್ನತಪರ್ವಣಃ।।

ಆಗ ರಥಿಗಳಲ್ಲಿ ಶ್ರೇಷ್ಠ ಶೈನೇಯನು ಯುದ್ಧದಲ್ಲಿ ರಾಕ್ಷಸನನ್ನು ಬಿಟ್ಟು ಪ್ರಾಗ್ಜ್ಯೋತಿಷನ ಮೇಲೆ ಸನ್ನತಪರ್ವ ಶರಗಳನ್ನು ಎಸೆದನು.

06107009a ತಸ್ಯ ಪ್ರಾಗ್ಜ್ಯೋತಿಷೋ ರಾಜಾ ಮಾಧವಸ್ಯ ಮಹದ್ಧನುಃ।
06107009c ಚಿಚ್ಛೇದ ಶಿತಧಾರೇಣ ಭಲ್ಲೇನ ಕೃತಹಸ್ತವತ್।।

ರಾಜಾ ಪ್ರಗ್ಜ್ಯೋತಿಷನು ಮಾಧವನ ಮಹಾಧನುವನ್ನು ಕೈಚಳಕದಿಂದ ಶಿತಧಾರ ಭಲ್ಲದಿಂದ ಕತ್ತರಿಸಿದನು.

06107010a ಅಥಾನ್ಯದ್ಧನುರಾದಾಯ ವೇಗವತ್ಪರವೀರಹಾ।
06107010c ಭಗದತ್ತಂ ರಣೇ ಕ್ರುದ್ಧೋ ವಿವ್ಯಾಧ ನಿಶಿತೈಃ ಶರೈಃ।।

ಆಗ ವೇಗದಿಂದ ಪರವೀರಹನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ರಣದಲ್ಲಿ ಕ್ರುದ್ಧನಾಗಿ ಭಗದತ್ತನನ್ನು ನಿಶಿತ ಶರಗಳಿಂದ ಹೊಡೆದನು.

06107011a ಸೋಽತಿವಿದ್ಧೋ ಮಹೇಷ್ವಾಸಃ ಸೃಕ್ಕಿಣೀ ಸಂಲಿಹನ್ಮುಹುಃ।
06107011c ಶಕ್ತಿಂ ಕನಕವೈಡೂರ್ಯಭೂಷಿತಾಮಾಯಸೀಂ ದೃಢಾಂ।
06107011e ಯಮದಂಡೋಪಮಾಂ ಘೋರಾಂ ಪ್ರಾಹಿಣೋತ್ಸಾತ್ಯಕಾಯ ವೈ।।

ಸಾತ್ಯಕಿಯ ಆ ಪ್ರಹಾರದಿಂದ ಅತಿಯಾಗಿ ಗಾಯಗೊಂಡ ಆ ಮಹೇಷ್ವಾಸನು ಕಟವಾಯಿಗಳನ್ನು ನೆಕ್ಕುತ್ತ ಕನಕವೈಡೂರ್ಯಭೂಷಿತ ಉಕ್ಕಿನ ದೃಢ ಯಮದಂಡದಂತಿದ್ದ ಘೋರ ಶಕ್ತಿಯನ್ನು ಸಾತ್ಯಕಿಯ ಮೇಲೆ ಎಸೆದನು.

06107012a ತಾಮಾಪತಂತೀಂ ಸಹಸಾ ತಸ್ಯ ಬಾಹೋರ್ಬಲೇರಿತಾಂ।
06107012c ಸಾತ್ಯಕಿಃ ಸಮರೇ ರಾಜಂಸ್ತ್ರಿಧಾ ಚಿಚ್ಛೇದ ಸಾಯಕೈಃ।
06107012e ಸಾ ಪಪಾತ ತದಾ ಭೂಮೌ ಮಹೋಲ್ಕೇವ ಹತಪ್ರಭಾ।।

ರಾಜನ್! ಅವನ ಬಾಹುಬಲದಿಂದ ಎಸೆಯಲ್ಪಟ್ಟು ವೇಗದಿಂದ ಬರುತ್ತಿದ್ದ ಅದನ್ನು ಸಮರದಲ್ಲಿ ಸಾತ್ಯಕಿಯು ಸಾಯಕಗಳಿಂದ ಮೂರುಭಾಗಗಳನ್ನಾಗಿ ತುಂಡರಿಸಿದನು. ಅದು ಪ್ರಭೆಯನ್ನು ಕಳೆದುಕೊಂಡು ಮಹಾ ಉಲ್ಕೆಯಂತೆ ಭೂಮಿಯ ಮೇಲೆ ಬಿದ್ದಿತು.

06107013a ಶಕ್ತಿಂ ವಿನಿಹತಾಂ ದೃಷ್ಟ್ವಾ ಪುತ್ರಸ್ತವ ವಿಶಾಂ ಪತೇ।
06107013c ಮಹತಾ ರಥವಂಶೇನ ವಾರಯಾಮಾಸ ಮಾಧವಂ।।

ವಿಶಾಂಪತೇ! ಶಕ್ತಿಯನ್ನು ನಾಶಪಡಿಸಿದುದನ್ನು ನೋಡಿ ನಿನ್ನ ಮಗನು ದೊಡ್ಡ ರಥಸೇನೆಯಿಂದ ಮಾಧವನನ್ನು ತಡೆದನು.

06107014a ತಥಾ ಪರಿವೃತಂ ದೃಷ್ಟ್ವಾ ವಾರ್ಷ್ಣೇಯಾನಾಂ ಮಹಾರಥಂ।
06107014c ದುರ್ಯೋಧನೋ ಭೃಶಂ ಹೃಷ್ಟೋ ಭ್ರಾತೄನ್ಸರ್ವಾನುವಾಚ ಹ।।

ಮಹಾರಥ ವಾರ್ಷ್ಣೇಯನನ್ನು ಸುತ್ತುವರೆದು ದುರ್ಯೋಧನನು ತುಂಬಾ ಹರ್ಷಿತನಾಗಿ ತನ್ನ ತಮ್ಮಂದಿರಿಗೆಲ್ಲರಿಗೆ ಹೇಳಿದನು:

06107015a ತಥಾ ಕುರುತ ಕೌರವ್ಯಾ ಯಥಾ ವಃ ಸಾತ್ಯಕೋ ಯುಧಿ।
06107015c ನ ಜೀವನ್ಪ್ರತಿನಿರ್ಯಾತಿ ಮಹತೋಽಸ್ಮಾದ್ರಥವ್ರಜಾತ್।
06107015e ಅಸ್ಮಿನ್ ಹತೇ ಹತಂ ಮನ್ಯೇ ಪಾಂಡವಾನಾಂ ಮಹದ್ಬಲಂ।।

“ಕೌರವ್ಯರೇ! ಸಾತ್ಯಕಿಯು ಯುದ್ಧದಲ್ಲಿ ಜೀವಂತವಾಗಿ ಹಿಂದಿರುಗದಂತೆ ಮಹಾ ಒಮ್ಮುಖವಾಗಿ ನೀವೆಲ್ಲ ಯುದ್ಧಮಾಡಿ. ಇವನು ಹತನಾದರೆ ಪಾಂಡವರ ಮಹಾಬಲವು ಹತವಾದಂತೆ ಎಂದು ನನಗನ್ನಿಸುತ್ತದೆ.”

06107016a ತತ್ತಥೇತಿ ವಚಸ್ತಸ್ಯ ಪರಿಗೃಹ್ಯ ಮಹಾರಥಾಃ।
06107016c ಶೈನೇಯಂ ಯೋಧಯಾಮಾಸುರ್ಭೀಷ್ಮಸ್ಯ ಪ್ರಮುಖೇ ತದಾ।।

ಹಾಗೆಯೇ ಆಗಲೆಂದು ಅವನ ಮಾತನ್ನು ಸ್ವೀಕರಿಸಿ ಮಹಾರಥರು ಭೀಷ್ಮನನ್ನು ಎದುರಿಸಲು ಹೋಗುತ್ತಿದ್ದ ಶೈನೇಯನೊಂದಿಗೆ ಯುದ್ಧಮಾಡಗಿದರು.

06107017a ಅಭಿಮನ್ಯುಂ ತದಾಯಾಂತಂ ಭೀಷ್ಮಾಯಾಭ್ಯುದ್ಯತಂ ಮೃಧೇ।
06107017c ಕಾಂಬೋಜರಾಜೋ ಬಲವಾನ್ವಾರಯಾಮಾಸ ಸಂಯುಗೇ।।

ಸಮರದಲ್ಲಿ ಭೀಷ್ಮನೆಡೆಗೆ ಬರುತ್ತಿದ್ದ ಅಭಿಮನ್ಯುವನ್ನು ಬಲವಾನ್ ಕಾಂಬೋಜರಾಜನು ಸಂಯುಗದಲ್ಲಿ ತಡೆದನು.

06107018a ಆರ್ಜುನಿರ್ನೃಪತಿಂ ವಿದ್ಧ್ವಾ ಶರೈಃ ಸನ್ನತಪರ್ವಭಿಃ।
06107018c ಪುನರೇವ ಚತುಃಷಷ್ಟ್ಯಾ ರಾಜನ್ವಿವ್ಯಾಧ ತಂ ನೃಪಂ।।

ಆರ್ಜುನಿಯು ಆ ನೃಪತಿಯನ್ನು ಸನ್ನತಪರ್ವ ಶರಗಳಿಂದ ಹೊಡೆದು ಪುನಃ ಅವನನ್ನು ಅರವತ್ನಾಲ್ಕು ಬಾಣಗಳಿಂದ ಹೊಡೆದನು.

06107019a ಸುದಕ್ಷಿಣಸ್ತು ಸಮರೇ ಕಾರ್ಷ್ಣಿಂ ವಿವ್ಯಾಧ ಪಂಚಭಿಃ।
06107019c ಸಾರಥಿಂ ಚಾಸ್ಯ ನವಭಿರಿಚ್ಛನ್ಭೀಷ್ಮಸ್ಯ ಜೀವಿತಂ।।

ಭೀಷ್ಮನ ಜೀವಿತವನ್ನು ಬಯಸಿದ ಸುದಕ್ಷಿಣನಾದರೋ ಸಮರದಲ್ಲಿ ಕಾರ್ಷ್ಣಿಯನ್ನು ಐದರಿಂದ ಮತ್ತು ಸಾರಥಿಯನ್ನು ಒಂಭತ್ತರಿಂದ ಹೊಡೆದನು.

06107020a ತದ್ಯುದ್ಧಮಾಸೀತ್ಸುಮಹತ್ತಯೋಸ್ತತ್ರ ಪರಾಕ್ರಮೇ।
06107020c ಯದಭ್ಯಧಾವದ್ಗಾಂಗೇಯಂ ಶಿಖಂಡೀ ಶತ್ರುತಾಪನಃ।।

ಶತ್ರುತಾಪನ ಶಿಖಂಡಿಯು ಗಾಂಗೇಯನನ್ನು ಎದುರಿಸಿದಾಗ ಇವರಿಬ್ಬರ ನಡುವೆ ಪರಾಕ್ರಮದ ಮಹಾ ಯದ್ಧವು ನಡೆಯಿತು.

06107021a ವಿರಾಟದ್ರುಪದೌ ವೃದ್ಧೌ ವಾರಯಂತೌ ಮಹಾಚಮೂಂ।
06107021c ಭೀಷ್ಮಂ ಚ ಯುಧಿ ಸಂರಬ್ಧಾವಾದ್ರವಂತೌ ಮಹಾರಥೌ।।

ಮಹಾರಥ ವೃದ್ಧ ವಿರಾಟದ್ರುಪದರು ಯುದ್ಧದಲ್ಲಿ ಸಂರಬ್ಧರಾಗಿ ಮಹಾಸೇನೆಯನ್ನು ತಡೆಯುತ್ತಾ ಭೀಷ್ಮನ ಕಡೆಗೆ ಮುನ್ನುಗ್ಗಿದರು.

06107022a ಅಶ್ವತ್ಥಾಮಾ ತತಃ ಕ್ರುದ್ಧಃ ಸಮಾಯಾದ್ರಥಸತ್ತಮಃ।
06107022c ತತಃ ಪ್ರವವೃತೇ ಯುದ್ಧಂ ತವ ತೇಷಾಂ ಚ ಭಾರತ।।

ಭಾರತ! ಆಗ ರಥಸತ್ತಮ ಅಶ್ವತ್ಥಾಮನು ಕ್ರುದ್ಧನಾಗಿ ಅಲ್ಲಿಗೆ ಬರಲು ಅವನು ಮತ್ತು ಅವರ ನಡುವೆ ಯುದ್ಧವು ನಡೆಯಿತು.

06107023a ವಿರಾಟೋ ದಶಭಿಭಲ್ಲೈರಾಜಘಾನ ಪರಂತಪ।
06107023c ಯತಮಾನಂ ಮಹೇಷ್ವಾಸಂ ದ್ರೌಣಿಮಾಹವಶೋಭಿನಂ।।

ಪರಂತಪ! ವಿರಾಟನು ಆಹವಶೋಭಿ, ಮಹೇಷ್ವಾಸ, ಪ್ರಯತ್ನಿಸುತ್ತಿದ್ದ ದ್ರೌಣಿಯನ್ನು ಹತ್ತು ಭಲ್ಲಗಳಿಂದ ಹೊಡೆದನು.

06107024a ದ್ರುಪದಶ್ಚ ತ್ರಿಭಿರ್ಬಾಣೈರ್ವಿವ್ಯಾಧ ನಿಶಿತೈಸ್ತಥಾ।
06107024c ಗುರುಪುತ್ರಂ ಸಮಾಸಾದ್ಯ ಭೀಷ್ಮಸ್ಯ ಪುರತಃ ಸ್ಥಿತಂ।।

ದ್ರುಪದನೂ ಕೂಡ ಭೀಷ್ಮನ ಮುಂದೆ ನಿಂತಿದ್ದ ಗುರುಪುತ್ರನನ್ನು ಎದುರಿಸಿ ಅವನನ್ನು ಮೂರು ನಿಶಿತ ಬಾಣಗಳಿಂದ ಹೊಡೆದನು.

06107025a ಅಶ್ವತ್ಥಾಮಾ ತತಸ್ತೌ ತು ವಿವ್ಯಾಧ ದಶಭಿಃ ಶರೈಃ।
06107025c ವಿರಾಟದ್ರುಪದೌ ವೃದ್ಧೌ ಭೀಷ್ಮಂ ಪ್ರತಿ ಸಮುದ್ಯತೌ।।

ಅಶ್ವತ್ಥಾಮನು ಭೀಷ್ಮನ ಕಡೆ ಮುನ್ನುಗ್ಗುತ್ತಿರುವ ವೃದ್ಧ ವಿರಾಟ-ದ್ರುಪದರನ್ನು ಹತ್ತು ಶರಗಳಿಂದ ಹೊಡೆದನು.

06107026a ತತ್ರಾದ್ಭುತಮಪಶ್ಯಾಮ ವೃದ್ಧಯೋಶ್ಚರಿತಂ ಮಹತ್।
06107026c ಯದ್ದ್ರೌಣೇಃ ಸಾಯಕಾನ್ಘೋರಾನ್ಪ್ರತ್ಯವಾರಯತಾಂ ಯುಧಿ।।

ಆಗ ಯುದ್ಧದಲ್ಲಿ ಆ ಇಬ್ಬರು ವೃದ್ಧರು ಘೋರ ಸಾಯಕಗಳಿಂದ ದ್ರೌಣಿಯನ್ನು ತಿರುಗಿ ಹೊಡೆಯುವ ಮಹಾ ಅದ್ಭುತವನ್ನು ನೋಡಿದೆವು.

06107027a ಸಹದೇವಂ ತಥಾ ಯಾಂತಂ ಕೃಪಃ ಶಾರದ್ವತೋಽಭ್ಯಯಾತ್।
06107027c ಯಥಾ ನಾಗೋ ವನೇ ನಾಗಂ ಮತ್ತೋ ಮತ್ತಮುಪಾದ್ರವತ್।।

ವನದಲ್ಲಿ ಮದಿಸಿದ ಆನೆಯ ಮೇಲೆ ಮತ್ತೊಂದು ಆನೆಯು ಎರಗುವಂತೆ ಮುನ್ನುಗ್ಗುತ್ತಿದ್ದ ಸಹದೇವನನ್ನು ಶಾರದ್ವತ ಕೃಪನು ಎದುರಿಸಿದನು.

06107028a ಕೃಪಶ್ಚ ಸಮರೇ ರಾಜನ್ಮಾದ್ರೀಪುತ್ರಂ ಮಹಾರಥಂ।
06107028c ಆಜಘಾನ ಶರೈಸ್ತೂರ್ಣಂ ಸಪ್ತತ್ಯಾ ರುಕ್ಮಭೂಷಣೈಃ।।

ರಾಜನ್! ಸಮರದಲ್ಲಿ ಕೃಪನು ಮಹಾರಥ ಮಾದ್ರೀಪುತ್ರನನ್ನು ಬೇಗನೇ ಎಪ್ಪತ್ತು ರುಕ್ಮಭೂಷಣ ಬಾಣಗಳಿಂದ ಹೊಡೆದನು.

06107029a ತಸ್ಯ ಮಾದ್ರೀಸುತಶ್ಚಾಪಂ ದ್ವಿಧಾ ಚಿಚ್ಛೇದ ಸಾಯಕೈಃ।
06107029c ಅಥೈನಂ ಚಿನ್ನಧನ್ವಾನಂ ವಿವ್ಯಾಧ ನವಭಿಃ ಶರೈಃ।।

ಅವನ ಚಾಪವನ್ನು ಮಾದ್ರೀಸುತನು ಸಾಯಕಗಳಿಂದ ಎರಡಾಗಿ ತುಂಡರಿಸಿದನು. ಕೂಡಲೇ ಧನುಸ್ಸನ್ನು ತುಂಡರಿಸಿ ಅವನನ್ನು ಒಂಭತ್ತು ಶರಗಳಿಂದ ಹೊಡೆದನು.

06107030a ಸೋಽನ್ಯತ್ಕಾರ್ಮುಕಮಾದಾಯ ಸಮರೇ ಭಾರಸಾಧನಂ।
06107030c ಮಾದ್ರೀಪುತ್ರಂ ಸುಸಂಹೃಷ್ಟೋ ದಶಭಿರ್ನಿಶಿತೈಃ ಶರೈಃ।
06107030e ಆಜಘಾನೋರಸಿ ಕ್ರುದ್ಧ ಇಚ್ಛನ್ಭೀಷ್ಮಸ್ಯ ಜೀವಿತಂ।।

ಅವನು ಸಮರದಲ್ಲಿ ಭಾರಸಾಧನದ ಇನ್ನೊಂದು ಬಿಲ್ಲನ್ನು ತೆಗೆದುಕೊಂಡು ಸುಸಂಹೃಷ್ಟನಾಗಿ, ಭೀಷ್ಮನ ಜೀವಿತವನ್ನು ಇಚ್ಛಿಸಿ ಕ್ರುದ್ಧನಾಗಿ ಮಾದ್ರೀಪುತ್ರನನ್ನು ಹತ್ತು ನಿಶಿತ ಬಾಣಗಳಿಂದ ಅವನ ಎದೆಗೆ ಗುರಿಯಿಟ್ಟು ಹೊಡೆದನು.

06107031a ತಥೈವ ಪಾಂಡವೋ ರಾಜನ್ ಶಾರದ್ವತಮಮರ್ಷಣಂ।
06107031c ಆಜಘಾನೋರಸಿ ಕ್ರುದ್ಧೋ ಭೀಷ್ಮಸ್ಯ ವಧಕಾಂಕ್ಷಯಾ।
06107031e ತಯೋರ್ಯುದ್ಧಂ ಸಮಭವದ್ಘೋರರೂಪಂ ಭಯಾವಹಂ।।

ರಾಜನ್! ಹಾಗೆಯೇ ಪಾಂಡವನೂ ಕೂಡ ಭೀಷ್ಮನ ವಧೆಯನ್ನು ಬಯಸಿ ಕ್ರುದ್ಧನಾಗಿ ಅಮರ್ಷಣ ಶಾರದ್ವತನ ಎದೆಗೆ ಹೊಡೆದನು. ಅವರಿಬ್ಬರ ಯುದ್ಧವು ಘೋರರೂಪಿಯೂ ಭಯಾವಹವೂ ಆಗಿದ್ದಿತು.

06107032a ನಕುಲಂ ತು ರಣೇ ಕ್ರುದ್ಧಂ ವಿಕರ್ಣಃ ಶತ್ರುತಾಪನಃ।
06107032c ವಿವ್ಯಾಧ ಸಾಯಕೈಃ ಷಷ್ಟ್ಯಾ ರಕ್ಷನ್ಭೀಷ್ಮಸ್ಯ ಜೀವಿತಂ।।

ಆದರೆ ಭೀಷ್ಮನ ಜೀವವನ್ನು ರಕ್ಷಿಸುತ್ತಾ ಶತ್ರುತಾಪನ ವಿಕರ್ಣನು ಅರವತ್ತು ಸಾಯಕಗಳಿಂದ ರಣದಲ್ಲಿ ಕ್ರುದ್ಧನಾದ ನಕುಲನನ್ನು ಹೊಡೆದನು.

06107033a ನಕುಲೋಽಪಿ ಭೃಶಂ ವಿದ್ಧಸ್ತವ ಪುತ್ರೇಣ ಧನ್ವಿನಾ।
06107033c ವಿಕರ್ಣಂ ಸಪ್ತಸಪ್ತತ್ಯಾ ನಿರ್ಬಿಭೇದ ಶಿಲೀಮುಖೈಃ।।

ನಿನ್ನ ಪುತ್ರ ಧನ್ವಿಯಿಂದ ತುಂಬಾ ಗಾಯಗೊಂಡ ನಕುಲನೂ ಕೂಡ ವಿಕರ್ಣನನ್ನು ಎಪ್ಪತ್ತೇಳು ಶಿಲೀ ಮುಖಗಳಿಂದ ಹೊಡೆದನು.

06107034a ತತ್ರ ತೌ ನರಶಾರ್ದೂಲೌ ಭೀಷ್ಮಹೇತೋಃ ಪರಂತಪೌ।
06107034c ಅನ್ಯೋನ್ಯಂ ಜಘ್ನತುರ್ವೀರೌ ಗೋಷ್ಠೇ ಗೋವೃಷಭಾವಿವ।।

ಗೋಹಟ್ಟಿಯಲ್ಲಿ ಗೋವಿಗಾಗಿ ಹೋರಿಗಳೆರಡು ಹೋರಾಡುವಂತೆ ಭೀಷ್ಮನ ಕಾರಣದಿಂದ ಆ ಇಬ್ಬರು ಪರಂತಪರೂ ನರಶಾರ್ದೂಲ ವೀರರೂ ಅನ್ಯೋನ್ಯರನ್ನು ಗಾಯಗೊಳಿಸಿದರು.

06107035a ಘಟೋತ್ಕಚಂ ರಣೇ ಯತ್ತಂ ನಿಘ್ನಂತಂ ತವ ವಾಹಿನೀಂ।
06107035c ದುರ್ಮುಖಃ ಸಮರೇ ಪ್ರಾಯಾದ್ಭೀಷ್ಮಹೇತೋಃ ಪರಾಕ್ರಮೀ।।

ಭೀಷ್ಮನನ್ನು ಉದ್ದೇಶಿಸಿ ನಿನ್ನ ಸೇನೆಯನ್ನು ನಾಶಪಡಿಸುತ್ತಾ ರಣದಲ್ಲಿ ಮುನ್ನುಗ್ಗಿ ಬರುತ್ತಿದ್ದ ಘಟೋತ್ಕಚನನ್ನು ಸಮರದಲ್ಲಿ ದುರ್ಮುಖನು ಎದುರಿಸಿದನು.

06107036a ಹೈಡಿಂಬಸ್ತು ತತೋ ರಾಜನ್ದುರ್ಮುಖಂ ಶತ್ರುತಾಪನಂ।
06107036c ಆಜಘಾನೋರಸಿ ಕ್ರುದ್ಧೋ ನವತ್ಯಾ ನಿಶಿತೈಃ ಶರೈಃ।।

ಆಗ ರಾಜನ್! ಹೈಡಿಂಬಿಯಾದರೋ ಕ್ರುದ್ಧನಾಗಿ ಶತ್ರುತಾಪನ ದುರ್ಮುಖನನ್ನು ತೊಂಭತ್ತು ನಿಶಿತ ಶರಗಳಿಂದ ಎದೆಗೆ ಗುರಿಯಿಟ್ಟು ಹೊಡೆದನು.

06107037a ಭೀಮಸೇನಸುತಂ ಚಾಪಿ ದುರ್ಮುಖಃ ಸುಮುಖೈಃ ಶರೈಃ।
06107037c ಷಷ್ಟ್ಯಾ ವೀರೋ ನದನ್ ಹೃಷ್ಟೋ ವಿವ್ಯಾಧ ರಣಮೂರ್ಧನಿ।।

ಭೀಮಸೇನಸುತನನ್ನೂ ಕೂಡ ವೀರ ದುರ್ಮುಖನು ಅರವತ್ತು ಸುಮುಖ ಶರಗಳಿಂದ ರಣಮೂರ್ದನಿಯಲ್ಲಿ ಹೊಡೆದು ಹರ್ಷದಿಂದ ಕೂಗಿದನು.

06107038a ಧೃಷ್ಟದ್ಯುಮ್ನಂ ರಣೇ ಯಾಂತಂ ಭೀಷ್ಮಸ್ಯ ವಧಕಾಂಕ್ಷಿಣಂ।
06107038c ಹಾರ್ದಿಕ್ಯೋ ವಾರಯಾಮಾಸ ರಕ್ಷನ್ಭೀಷ್ಮಸ್ಯ ಜೀವಿತಂ।।

ಭೀಷ್ಮನ ವಧೆಯನ್ನು ಬಯಸಿ ರಣದಲ್ಲಿ ಮುಂದೆ ಬರುತ್ತಿದ್ದ ಧೃಷ್ಟದ್ಯುಮ್ನನನ್ನು ಭೀಷ್ಮನ ಜೀವವನ್ನು ರಕ್ಷಿಸುತ್ತಾ ಹಾರ್ದಿಕ್ಯನು ತಡೆದನು.

06107039a ವಾರ್ಷ್ಣೇಯಃ ಪಾರ್ಷತಂ ಶೂರಂ ವಿದ್ಧ್ವಾ ಪಂಚಭಿರಾಯಸೈಃ।
06107039c ಪುನಃ ಪಂಚಾಶತಾ ತೂರ್ಣಮಾಜಘಾನ ಸ್ತನಾಂತರೇ।।

ವಾರ್ಷ್ಣೇಯನು ಶೂರ ಪಾರ್ಷತನನ್ನು ಐದು ಆಯಸಗಳಿಂದ ಹೊಡೆದು ಒಡನೆಯೇ ಪುನಃ ಸ್ತನಾಂತರಕ್ಕೆ ಐವತ್ತು ಬಾಣಗಳಿಂದ ಹೊಡೆದನು.

06107040a ತಥೈವ ಪಾರ್ಷತೋ ರಾಜನ್ ಹಾರ್ದಿಕ್ಯಂ ನವಭಿಃ ಶರೈಃ।
06107040c ವಿವ್ಯಾಧ ನಿಶಿತೈಸ್ತೀಕ್ಷ್ಣೈಃ ಕಂಕಪತ್ರಪರಿಚ್ಛದೈಃ।।

ಹಾಗೆಯೇ ರಾಜನ್! ಪಾರ್ಷತನು ಹಾರ್ದಿಕ್ಯನನ್ನು ಒಂಭತ್ತು ನಿಶಿತ ತೀಕ್ಷ್ಣ ಕಂಕಪತ್ರಗಳಿಂದ ಮುಚ್ಚಲ್ಪಟ್ಟ ಶರಗಳಿಂದ ಹೊಡೆದನು.

06107041a ತಯೋಃ ಸಮಭವದ್ಯುದ್ಧಂ ಭೀಷ್ಮಹೇತೋರ್ಮಹಾರಣೇ।
06107041c ಅನ್ಯೋನ್ಯಾತಿಶಯೈರ್ಯುಕ್ತಂ ಯಥಾ ವೃತ್ರಮಹೇಂದ್ರಯೋಃ।।

ಆಗ ಭೀಷ್ಮನಿಗಾಗಿ ಮಹಾರಣದಲ್ಲಿ ವೃತ್ರ-ಮಹೇಂದ್ರರ ನಡುವೆ ನಡೆದಂತೆ ಅನ್ಯೋನ್ಯರಲ್ಲಿ ನಾನು ಹೆಚ್ಚು ತಾನು ಹೆಚ್ಚು ಎಂದು ಹೊಡೆದಾಡಿದ ಯುದ್ಧವು ನಡೆಯಿತು.

06107042a ಭೀಮಸೇನಮಥಾಯಾಂತಂ ಭೀಷ್ಮಂ ಪ್ರತಿ ಮಹಾಬಲಂ।
06107042c ಭೂರಿಶ್ರವಾಭ್ಯಯಾತ್ತೂರ್ಣಂ ತಿಷ್ಠ ತಿಷ್ಠೇತಿ ಚಾಬ್ರವೀತ್।।

ಭೀಷ್ಮನ ಕಡೆಗೆ ಬರುತ್ತಿದ್ದ ಮಹಾಬಲ ಭೀಮಸೇನನಿಗೆ ತಕ್ಷಣವೇ ಭೂರಿಶ್ರವನು “ನಿಲ್ಲು! ನಿಲ್ಲು!” ಎಂದು ಹೇಳಿದನು.

06107043a ಸೌಮದತ್ತಿರಥೋ ಭೀಮಮಾಜಘಾನ ಸ್ತನಾಂತರೇ।
06107043c ನಾರಾಚೇನ ಸುತೀಕ್ಷ್ಣೇನ ರುಕ್ಮಪುಂಖೇನ ಸಂಯುಗೇ।।

ಆಗ ಸಂಯುಗದಲ್ಲಿ ಸೌಮದತ್ತಿಯು ಭೀಮಸೇನನನ್ನು ಸ್ತನಾಂತರದಲ್ಲಿ ಸುತೀಕ್ಷ್ಣ ರುಕ್ಮಪುಂಖ ನಾರಾಚಗಳಿಂದ ಹೊಡೆದನು.

06107044a ಉರಃಸ್ಥೇನ ಬಭೌ ತೇನ ಭೀಮಸೇನಃ ಪ್ರತಾಪವಾನ್।
06107044c ಸ್ಕಂದಶಕ್ತ್ಯಾ ಯಥಾ ಕ್ರೌಂಚಃ ಪುರಾ ನೃಪತಿಸತ್ತಮ।।

ನೃಪತಿ ಸತ್ತಮ! ಹಿಂದೆ ಸ್ಕಂದನು ಶಕ್ತಿಯಿಂದ ಹೊಡೆದಾಗ ಕ್ರೌಂಚ ಪರ್ವತವು ಶೋಭಿಸಿದಂತೆ ಪ್ರತಾಪವಾನ್ ಭೀಮಸೇನನು ಎದೆಗೆ ಹೊಡೆತವನ್ನು ತಿಂದು ಶೋಭಿಸಿದನು.

06107045a ತೌ ಶರಾನ್ಸೂರ್ಯಸಂಕಾಶಾನ್ಕರ್ಮಾರಪರಿಮಾರ್ಜಿತಾನ್।
06107045c ಅನ್ಯೋನ್ಯಸ್ಯ ರಣೇ ಕ್ರುದ್ಧೌ ಚಿಕ್ಷಿಪಾತೇ ಮುಹುರ್ಮುಹುಃ।।

ಅವರಿಬ್ಬರೂ ಕಮ್ಮಾರರಿಂದ ಹದಗೊಳಿಸಲ್ಪಟ್ಟ ಸೂರ್ಯಸಂಕಾಶ ಬಾಣಗಳಿಂದ ಅನ್ಯೋನ್ಯರನ್ನು ರಣದಲ್ಲಿ ಕ್ರುದ್ಧರಾಗಿ ಪುನಃ ಪುನಃ ಹೊಡೆದು ಗಾಯಗೊಳಿಸಿದರು.

06107046a ಭೀಮೋ ಭೀಷ್ಮವಧಾಕಾಂಕ್ಷೀ ಸೌಮದತ್ತಿಂ ಮಹಾರಥಂ।
06107046c ತಥಾ ಭೀಷ್ಮಜಯೇ ಗೃಧ್ನುಃ ಸೌಮದತ್ತಿಶ್ಚ ಪಾಂಡವಂ।
06107046e ಕೃತಪ್ರತಿಕೃತೇ ಯತ್ತೌ ಯೋಧಯಾಮಾಸತೂ ರಣೇ।।

ಭೀಷ್ಮವಧಾಕಾಂಕ್ಷಿಯಾದ ಭೀಮನು ಮಹಾರಥ ಸೌಮದತ್ತಿಯನ್ನು ಮತ್ತು ಹಾಗೆಯೇ ಭೀಷ್ಮನ ಜಯವನ್ನು ಆಶಿಸಿದ್ದ ಸೌಮದತ್ತಿಯು ಪಾಂಡವನನ್ನೂ ರಣದಲ್ಲಿ ಮಾಡಿದುದಕ್ಕೆ ಪ್ರತಿಮಾಡುತ್ತಾ ಪ್ರಯತ್ನಪಟ್ಟು ಯುದ್ಧಮಾಡುತ್ತಿದ್ದರು.

06107047a ಯುಧಿಷ್ಠಿರಂ ಮಹಾರಾಜ ಮಹತ್ಯಾ ಸೇನಯಾ ವೃತಂ।
06107047c ಭೀಷ್ಮಾಯಾಭಿಮುಖಂ ಯಾಂತಂ ಭಾರದ್ವಾಜೋ ನ್ಯವಾರಯತ್।।

ಮಹಾರಾಜ! ಮಹಾ ಸೇನೆಯಿಂದ ಆವೃತನಾಗಿ ಭೀಷ್ಮಾಭಿಮುಖನಾಗಿ ಬರುತ್ತಿದ್ದ ಯುಧಿಷ್ಠಿರನನ್ನು ಭಾರದ್ವಾಜನು ತಡೆದನು.

06107048a ದ್ರೋಣಸ್ಯ ರಥನಿರ್ಘೋಷಂ ಪರ್ಜನ್ಯನಿನದೋಪಮಂ।
06107048c ಶ್ರುತ್ವಾ ಪ್ರಭದ್ರಕಾ ರಾಜನ್ಸಮಕಂಪಂತ ಮಾರಿಷ।।

ರಾಜನ್! ಮಾರಿಷ! ಮೋಡದ ಗುಡುಗಿನಂತಿದ್ದ ದ್ರೋಣನ ರಥನಿರ್ಘೋಷವನ್ನು ಕೇಳಿ ಪ್ರಭದ್ರಕನು ಥರಥರಿಸಿದನು.

06107049a ಸಾ ಸೇನಾ ಮಹತೀ ರಾಜನ್ಪಾಂಡುಪುತ್ರಸ್ಯ ಸಂಯುಗೇ।
06107049c ದ್ರೋಣೇನ ವಾರಿತಾ ಯತ್ತಾ ನ ಚಚಾಲ ಪದಾತ್ಪದಂ।।

ರಾಜನ್! ಸಂಯುಗದಲ್ಲಿ ದ್ರೋಣನಿಂದ ತಡೆಯಲ್ಪಟ್ಟ ಪಾಂಡುಪುತ್ರನ ಆ ಮಹಾ ಸೇನೆಯು ಒಂದು ಹೆಜ್ಜೆಯೂ ಮುಂದೆ ಚಲಿಸಲು ಸಾಧ್ಯವಾಗಲಿಲ್ಲ.

06107050a ಚೇಕಿತಾನಂ ರಣೇ ಕ್ರುದ್ಧಂ ಭೀಷ್ಮಂ ಪ್ರತಿ ಜನೇಶ್ವರ।
06107050c ಚಿತ್ರಸೇನಸ್ತವ ಸುತಃ ಕ್ರುದ್ಧರೂಪಮವಾರಯತ್।।

ಜನೇಶ್ವರ! ಕ್ರುದ್ಧನಾಗಿ ರಣದಲ್ಲಿ ಭೀಷ್ಮನ ಕಡೆ ಬರುತ್ತಿದ್ದ ಚೇಕಿತಾನನನ್ನು ನಿನ್ನ ಮಗ ಕ್ರುದ್ಧರೂಪಿ ಚಿತ್ರಸೇನನು ತಡೆದನು.

06107051a ಭೀಷ್ಮಹೇತೋಃ ಪರಾಕ್ರಾಂತಶ್ಚಿತ್ರಸೇನೋ ಮಹಾರಥಃ।
06107051c ಚೇಕಿತಾನಂ ಪರಂ ಶಕ್ತ್ಯಾ ಯೋಧಯಾಮಾಸ ಭಾರತ।।

ಭಾರತ! ಭೀಷ್ಮನ ಕಾರಣದಿಂದ ಪರಾಕ್ರಾಂತನಾಗಿದ್ದ ಮಹಾರಥ ಚಿತ್ರಸೇನನು ಚೇಕಿತಾನನೊಂದಿಗೆ ಪರಮ ಶಕ್ತಿಯಿಂದ ಯುದ್ಧಮಾಡಿದನು.

06107052a ತಥೈವ ಚೇಕಿತಾನೋಽಪಿ ಚಿತ್ರಸೇನಮಯೋಧಯತ್।
06107052c ತದ್ಯುದ್ಧಮಾಸೀತ್ಸುಮಹತ್ತಯೋಸ್ತತ್ರ ಪರಾಕ್ರಮೇ।।

ಹಾಗೆಯೇ ಚೇಕಿತಾನನೂ ಕೂಡ ಚಿತ್ರಸೇನನೊಡನೆ ಹೋರಾಡಿದನು. ಆಗ ಅಲ್ಲಿ ಪರಾಕ್ರಮಯುಕ್ತ ಮಹಾಯುದ್ಧವು ನಡೆಯಿತು.

06107053a ಅರ್ಜುನೋ ವಾರ್ಯಮಾಣಸ್ತು ಬಹುಶಸ್ತನಯೇನ ತೇ।
06107053c ವಿಮುಖೀಕೃತ್ಯ ಪುತ್ರಂ ತೇ ತವ ಸೇನಾಂ ಮಮರ್ದ ಹ।।

ಅರ್ಜುನನನ್ನು ತಡೆಯಲು ಬಹುವಾಗಿ ಪ್ರಯತ್ನಿಸುತ್ತಿದ್ದ ನಿನ್ನ ಮಗನನ್ನು ವಿಮುಖನನ್ನಾಗಿ ಮಾಡಿ ಅವನು ನಿನ್ನ ಸೇನೆಯುನ್ನು ಮರ್ದಿಸಿದನು.

06107054a ದುಃಶಾಸನೋಽಪಿ ಪರಯಾ ಶಕ್ತ್ಯಾ ಪಾರ್ಥಮವಾರಯತ್।
06107054c ಕಥಂ ಭೀಷ್ಮಂ ಪರೋ ಹನ್ಯಾದಿತಿ ನಿಶ್ಚಿತ್ಯ ಭಾರತ।।

ಭಾರತ! ಶತ್ರುಗಳು ಭೀಷ್ಮನನ್ನು ಕೊಲ್ಲಬಾರದೆಂದು ನಿಶ್ಚಯಿಸಿ ದುಃಶಾಸನನೂ ಕೂಡ ಪರಮ ಶಕ್ತಿಯಿಂದ ಪಾರ್ಥನನ್ನು ತಡೆದನು.

06107055a ಸಾ ವಧ್ಯಮಾನಾ ಸಮರೇ ಪುತ್ರಸ್ಯ ತವ ವಾಹಿನೀ।
06107055c ಲೋಡ್ಯತೇ ರಥಿಭಿಃ ಶ್ರೇಷ್ಠೈಸ್ತತ್ರ ತತ್ರೈವ ಭಾರತ।।

ಭಾರತ! ಅಲ್ಲಲ್ಲಿ ಸಮರದಲ್ಲಿ ನಿನ್ನ ಮಗನ ಸೇನೆಯನ್ನು ವಧಿಸುತ್ತಾ ಆ ಶ್ರೇಷ್ಠ ರಥರು ಮುಂದುವರೆದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ದ್ವಂದ್ವಯುದ್ಧೇ ಸಪ್ತಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ದ್ವಂದ್ವಯುದ್ಧ ಎನ್ನುವ ನೂರಾಏಳನೇ ಅಧ್ಯಾಯವು.