ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 105
ಸಾರ
ಭೀಷ್ಮ-ದುರ್ಯೋಧನರ ಸಂವಾದ (1-27). ಭೀಷ್ಮನ ಪರಾಕ್ರಮ (28-37).
06105001 ಧೃತರಾಷ್ಟ್ರ ಉವಾಚ।
06105001a ಕಥಂ ಶಿಖಂಡೀ ಗಾಂಗೇಯಮಭ್ಯಧಾವತ್ಪಿತಾಮಹಂ।
06105001c ಪಾಂಚಾಲ್ಯಃ ಸಮರೇ ಕ್ರುದ್ಧೋ ಧರ್ಮಾತ್ಮಾನಂ ಯತವ್ರತಂ।।
ಧೃತರಾಷ್ಟ್ರನು ಹೇಳಿದನು: “ಶಿಖಂಡಿ ಪಾಂಚಾಲ್ಯನು ಸಮರದಲ್ಲಿ ಕ್ರುದ್ಧನಾಗಿ ಹೇಗೆ ಪಿತಾಮಹ ಯತವ್ರತ ಧರ್ಮಾತ್ಮ ಗಾಂಗೇಯನನ್ನು ಎದುರಿಸಿದನು?
06105002a ಕೇಽರಕ್ಷನ್ಪಾಂಡವಾನೀಕೇ ಶಿಖಂಡಿನಂ ಉದಾಯುಧಂ।
06105002c ತ್ವರಮಾಣಾಸ್ತ್ವರಾಕಾಲೇ ಜಿಗೀಷಂತೋ ಮಹಾರಥಾಃ।।
ಆಯುಧವನ್ನು ಎತ್ತಿಹಿಡಿದ ಶಿಖಂಡಿಯನ್ನು ಪಾಂಡವರ ಸೇನೆಯಲ್ಲಿ ಯಾವ ಮಹಾರಥರು ವಿಜಯವನ್ನು ಬಯಸಿ ತ್ವರೆಮಾಡಿ ಆ ವರಕಾಲದಲ್ಲಿ ರಕ್ಷಿಸಿದರು?
06105003a ಕಥಂ ಶಾಂತನವೋ ಭೀಷ್ಮಃ ಸ ತಸ್ಮಿನ್ದಶಮೇಽಹನಿ।
06105003c ಅಯುಧ್ಯತ ಮಹಾವೀರ್ಯಃ ಪಾಂಡವೈಃ ಸಹಸೃಂಜಯೈಃ।।
ಶಾಂತನವ ಭೀಷ್ಮನು ಆ ಹತ್ತನೇ ದಿವಸ ಸೃಂಜಯರೊಡನಿರುವ ಮಹಾವೀರ್ಯ ಪಾಂಡವರೊಂದಿಗೆ ಹೇಗೆ ಯುದ್ಧ ಮಾಡಿದನು?
06105004a ನ ಮೃಷ್ಯಾಮಿ ರಣೇ ಭೀಷ್ಮಂ ಪ್ರತ್ಯುದ್ಯಾತಂ ಶಿಖಂಡಿನಂ।
06105004c ಕಚ್ಚಿನ್ನ ರಥಭಂಗೋಽಸ್ಯ ಧನುರ್ವಾಶೀರ್ಯತಾಸ್ಯತಃ।।
ರಣದಲ್ಲಿ ಭೀಷ್ಮನನ್ನು ಶಿಖಂಡಿಯು ಸೋಲಿಸಿದನು ಎನ್ನುವುದನ್ನು ನನಗೆ ಊಹಿಸಲಿಕ್ಕೂ ಸಾಧ್ಯವಾಗುತ್ತಿಲ್ಲ. ಆಗ ಅವನ ರಥವು ತುಂಡಾಗಿರಲಿಲ್ಲ ಅಥವಾ ಧನುಸ್ಸು ಮುರಿದಿರಲಿಲ್ಲ ತಾನೇ?”
06105005 ಸಂಜಯ ಉವಾಚ।
06105005a ನಾಶೀರ್ಯತ ಧನುಸ್ತಸ್ಯ ರಥಭಂಗೋ ನ ಚಾಪ್ಯಭೂತ್।
06105005c ಯುಧ್ಯಮಾನಸ್ಯ ಸಂಗ್ರಾಮೇ ಭೀಷ್ಮಸ್ಯ ಭರತರ್ಷಭ।
06105005e ನಿಘ್ನತಃ ಸಮರೇ ಶತ್ರೂನ್ ಶರೈಃ ಸನ್ನತಪರ್ವಭಿಃ।।
ಸಂಜಯನು ಹೇಳಿದನು: “ಭರತರ್ಷಭ! ಸಂಗ್ರಾಮದಲ್ಲಿ ಯುದ್ಧ ಮಾಡಿ ಸಮರದಲ್ಲಿ ಶತ್ರುಗಳನ್ನು ಸನ್ನತಪರ್ವ ಶರಗಳಿಂದ ಸಂಹರಿಸುತ್ತಿದ್ದ ಭೀಷ್ಮನ ಧನುಸ್ಸೂ ತುಂಡಾಗಿರಲಿಲ್ಲ ಮತ್ತು ರಥವೂ ಮುರಿದಿರಲಿಲ್ಲ.
06105006a ಅನೇಕಶತಸಾಹಸ್ರಾಸ್ತಾವಕಾನಾಂ ಮಹಾರಥಾಃ।
06105006c ರಥದಂತಿಗಣಾ ರಾಜನ್ ಹಯಾಶ್ಚೈವ ಸುಸಜ್ಜಿತಾಃ।
06105006e ಅಭ್ಯವರ್ತಂತ ಯುದ್ಧಾಯ ಪುರಸ್ಕೃತ್ಯ ಪಿತಾಮಹಂ।।
ರಾಜನ್! ಪಿತಾಮಹನನ್ನು ಮುಂದಿರಿಸಿಕೊಂಡು ನಿನ್ನವರಾದ ಅನೇಕ ಶತ ಸಹಸ್ರ ಮಹಾರಥರು ಸುಸಜ್ಜಿತವಾದ ರಥ, ಆನೆ ಮತ್ತು ಕುದುರೆಗಳ ಗಣಗಳೊಂದಿಗೆ ಯುದ್ಧಕ್ಕೆ ಧಾವಿಸಿದರು.
06105007a ಯಥಾಪ್ರತಿಜ್ಞಂ ಕೌರವ್ಯ ಸ ಚಾಪಿ ಸಮಿತಿಂಜಯಃ।
06105007c ಪಾರ್ಥಾನಾಮಕರೋದ್ಭೀಷ್ಮಃ ಸತತಂ ಸಮಿತಿಕ್ಷಯಂ।।
ಕೌರವ್ಯ! ಪ್ರತಿಜ್ಞೆಮಾಡಿದ್ದಂತೆ ಸಮಿತಿಂಜಯ ಭೀಷ್ಮನು ಸತತವೂ ಪಾಂಡವರ ಸಮಿತಿಕ್ಷಯವನ್ನು ಮಾಡುತ್ತಿದ್ದನು.
06105008a ಯುಧ್ಯಮಾನಂ ಮಹೇಷ್ವಾಸಂ ವಿನಿಘ್ನಂತಂ ಪರಾಂ ಶರೈಃ।
06105008c ಪಾಂಚಾಲಾಃ ಪಾಂಡವೈಃ ಸಾರ್ಧಂ ಸರ್ವ ಏವಾಭ್ಯವಾರಯನ್।।
ಶರಗಳಿಂದ ಶತ್ರುಗಳನ್ನು ವಧಿಸುತ್ತಾ ಯುದ್ಧಮಾಡುತ್ತಿದ್ದ ಆ ಮಾಹೇಷ್ವಾಸನನ್ನು ಪಾಂಚಾಲರು ಪಾಂಡವರೊಂದಿಗೆ ಎಲ್ಲರೂ ಆಕ್ರಮಿಸಿದರು.
06105009a ದಶಮೇಽಹನಿ ಸಂಪ್ರಾಪ್ತೇ ತತಾಪ ರಿಪುವಾಹಿನೀಂ।
06105009c ಕೀರ್ಯಮಾಣಾಂ ಶಿತೈರ್ಬಾಣೈಃ ಶತಶೋಽಥ ಸಹಸ್ರಶಃ।।
06105010a ನ ಹಿ ಭೀಷ್ಮಂ ಮಹೇಷ್ವಾಸಂ ಪಾಂಡವಾಃ ಪಾಂಡುಪೂರ್ವಜ।
06105010c ಅಶಕ್ನುವನ್ರಣೇ ಜೇತುಂ ಪಾಶಹಸ್ತಮಿವಾಂತಕಂ।।
ಪಾಂಡುಪೂರ್ವಜ! ಹತ್ತನೆಯ ದಿನವು ಪ್ರಾರಂಭವಾಗಲು ರಿಪುವಾಹಿನಿಯನ್ನು ನೂರಾರು ಸಹಸ್ರಾರು ನಿಶಿತ ಬಾಣಗಳನ್ನು ತೂರಿ ಸುಡುತ್ತಿದ್ದ ಮಹೇಷ್ವಾಸ ಭೀಷ್ಮನನ್ನು ಪಾಂಡವರು ಪಾಶಹಸ್ತ ಅಂತಕನನ್ನು ಹೇಗೋ ಹಾಗೆ ರಣದಲ್ಲಿ ಗೆಲ್ಲಲು ಅಶಕ್ತರಾದರು.
06105011a ಅಥೋಪಾಯಾನ್ಮಹಾರಾಜ ಸವ್ಯಸಾಚೀ ಪರಂತಪಃ।
06105011c ತ್ರಾಸಯನ್ರಥಿನಃ ಸರ್ವಾನ್ಬೀಭತ್ಸುರಪರಾಜಿತಃ।।
06105012a ಸಿಂಹವದ್ವಿನದನ್ನುಚ್ಚೈರ್ಧನುರ್ಜ್ಯಾಂ ವಿಕ್ಷಿಪನ್ಮುಹುಃ।
06105012c ಶರೌಘಾನ್ವಿಸೃಜನ್ಪಾರ್ಥೋ ವ್ಯಚರತ್ಕಾಲವದ್ರಣೇ।।
ಮಹಾರಾಜ! ಆಗ ಉಪಾಯದಂತೆ ಪರಂತಪ ಸವ್ಯಸಾಚಿ ಬೀಭತ್ಸು ಅಪರಾಜಿತನು ಸಿಂಹದಂತೆ ಗರ್ಜಿಸುತ್ತಾ ಧನುಸ್ಸನ್ನು ಪುನಃ ಪುನಃ ಎಳೆದು ಟೇಂಕರಿಸುತ್ತಾ ಸರ್ವ ರಥಿಗಳನ್ನೂ ನಡುಗಿಸುತ್ತಾ ಶರೌಘಗಳನ್ನು ಸೃಷ್ಟಿಸುತ್ತಾ ಕಾಲನಂತೆ ರಣದಲ್ಲಿ ಚರಿಸಿದನು.
06105013a ತಸ್ಯ ಶಬ್ದೇನ ವಿತ್ರಸ್ತಾಸ್ತಾವಕಾ ಭರತರ್ಷಭ।
06105013c ಸಿಂಹಸ್ಯೇವ ಮೃಗಾ ರಾಜನ್ವ್ಯದ್ರವಂತ ಮಹಾಭಯಾತ್।।
ಭರತರ್ಷಭ! ರಾಜನ್! ಅವನ ಶಬ್ಧದಿಂದ ನಡುಗಿದ ನಿನ್ನವರು ಸಿಂಹನನ್ನು ನೋಡಿದ ಜಿಂಕೆಗಳಂತೆ ಮಹಾಭಯದಿಂದ ಓಡಿಹೋದರು.
06105014a ಜಯಂತಂ ಪಾಂಡವಂ ದೃಷ್ಟ್ವಾ ತ್ವತ್ಸೈನ್ಯಂ ಚಾಭಿಪೀಡಿತಂ।
06105014c ದುರ್ಯೋಧನಸ್ತತೋ ಭೀಷ್ಮಮಬ್ರವೀದ್ಭೃಶಪೀಡಿತಃ।।
ತನ್ನ ಸೇನೆಯನ್ನು ಪಾಂಡವ ಜಯಂತನು ಪೀಡಿಸುತ್ತಿರುವುದನ್ನು ನೋಡಿ ದುರ್ಯೋಧನನು ತುಂಬಾ ಪೀಡಿತನಾಗಿ ಭೀಷ್ಮನಿಗೆ ಹೇಳಿದನು:
06105015a ಏಷ ಪಾಂಡುಸುತಸ್ತಾತ ಶ್ವೇತಾಶ್ವಃ ಕೃಷ್ಣಸಾರಥಿಃ।
06105015c ದಹತೇ ಮಾಮಕಾನ್ಸರ್ವಾನ್ಕೃಷ್ಣವರ್ತ್ಮೇವ ಕಾನನಂ।।
“ಅಯ್ಯಾ! ಈ ಪಾಂಡುಸುತ ಕೃಷ್ಣಸಾರಥಿ ಶ್ವೇತಾಶ್ವನು ಅಗ್ನಿಯು ಕಾನನದಂತೆ ನನ್ನವರೆಲ್ಲರನ್ನೂ ಸುಡುತ್ತಿದ್ದಾನೆ.
06105016a ಪಶ್ಯ ಸೈನ್ಯಾನಿ ಗಾಂಗೇಯ ದ್ರವಮಾಣಾನಿ ಸರ್ವಶಃ।
06105016c ಪಾಂಡವೇನ ಯುಧಾಂ ಶ್ರೇಷ್ಠ ಕಾಲ್ಯಮಾನಾನಿ ಸಂಯುಗೇ।।
ಗಾಂಗೇಯ! ಯೋಧರಲ್ಲಿ ಶ್ರೇಷ್ಠ! ನೋಡು! ಸಂಯುಗದಲ್ಲಿ ಪಾಂಡವನಿಂದ ವಧಿಸಲ್ಪಡುತ್ತಿರುವ ಸೇನೆಗಳು ಎಲ್ಲಕಡೆ ಓಡಿಹೋಗುತ್ತಿವೆ.
06105017a ಯಥಾ ಪಶುಗಣಾನ್ಪಾಲಃ ಸಂಕಾಲಯತಿ ಕಾನನೇ।
06105017c ತಥೇದಂ ಮಾಮಕಂ ಸೈನ್ಯಂ ಕಾಲ್ಯತೇ ಶತ್ರುತಾಪನ।।
ಶತ್ರುತಾಪನ! ಕಾನನದಲ್ಲಿ ಪಾಲಕನು ಪಶುಗಣಗಳನ್ನು ಹೇಗೆ ಕೊಲ್ಲುತ್ತಾನೋ ಹಾಗೆ ನನ್ನ ಸೈನ್ಯವೂ ಕೊಲ್ಲಲ್ಪಡುತ್ತಿದೆ.
06105018a ಧನಂಜಯಶರೈರ್ಭಗ್ನಂ ದ್ರವಮಾಣಮಿತಸ್ತತಃ।
06105018c ಭೀಮೋ ಹ್ಯೇಷ ದುರಾಧರ್ಷೋ ವಿದ್ರಾವಯತಿ ಮೇ ಬಲಂ।।
ಧನಂಜಯನ ಶರಗಳಿಂದ ಭಗ್ನವಾಗಿ ಇಲ್ಲಿ ಅಲ್ಲಿ ಓಡಿಹೋಗುತ್ತಿರುವ ನನ್ನ ಸೇನೆಯನ್ನು ಈ ದುರಾಧರ್ಷ ಭೀಮನು ಓಡಿಸುತ್ತಿದ್ದಾನೆ.
06105019a ಸಾತ್ಯಕಿಶ್ಚೇಕಿತಾನಶ್ಚ ಮಾದ್ರೀಪುತ್ರೌ ಚ ಪಾಂಡವೌ।
06105019c ಅಭಿಮನ್ಯುಶ್ಚ ವಿಕ್ರಾಂತೋ ವಾಹಿನೀಂ ದಹತೇ ಮಮ।।
ಸಾತ್ಯಕಿ, ಚೇಕಿತಾನ, ಪಾಂಡವ ಮಾದ್ರೀಪುತ್ರರೀರ್ವರು ಮತ್ತು ವಿಕ್ರಾಂತ ಅಭಿಮನ್ಯುವು ನನ್ನ ಸೇನೆಯನ್ನು ಸುಡುತ್ತಿದ್ದಾರೆ.
06105020a ಧೃಷ್ಟದ್ಯುಮ್ನಸ್ತಥಾ ಶೂರೋ ರಾಕ್ಷಸಶ್ಚ ಘಟೋತ್ಕಚಃ।
06105020c ವ್ಯದ್ರಾವಯೇತಾಂ ಸಹಸಾ ಸೈನ್ಯಂ ಮಮ ಮಹಾಬಲೌ।।
ಮಹಾಬಲ ಧೃಷ್ಟದ್ಯುಮ್ನ ಮತ್ತು ರಾಕ್ಷಸ ಘಟೋತ್ಕಚರು ವೇಗದಿಂದ ನನ್ನ ಸೈನ್ಯವನ್ನು ಓಡಿಸುತ್ತಿದ್ದಾರೆ.
06105021a ವಧ್ಯಮಾನಸ್ಯ ಸೈನ್ಯಸ್ಯ ಸರ್ವೈರೇತೈರ್ಮಹಾಬಲೈಃ।
06105021c ನಾನ್ಯಾಂ ಗತಿಂ ಪ್ರಪಶ್ಯಾಮಿ ಸ್ಥಾನೇ ಯುದ್ಧೇ ಚ ಭಾರತ।।
06105022a ಋತೇ ತ್ವಾಂ ಪುರುಷವ್ಯಾಘ್ರ ದೇವತುಲ್ಯಪರಾಕ್ರಮ।
06105022c ಪರ್ಯಾಪ್ತಶ್ಚ ಭವಾನ್ ಕ್ಷಿಪ್ರಂ ಪೀಡಿತಾನಾಂ ಗತಿರ್ಭವ।।
ಭಾರತ! ಪುರುಷವ್ಯಾಘ್ರ! ಈ ಮಹಾಬಲರಿಂದ ಸೈನ್ಯವೆಲ್ಲವೂ ವಧಿಸಲ್ಪಡುತ್ತಿರಲು ನಾನು ಯುದ್ಧದಲ್ಲಿ ದೇವತುಲಪರಾಕ್ರಮಿಯಾದ ನೀನಲ್ಲದೇ ಅನ್ಯ ಗತಿಯನ್ನೂ ಸ್ಥಾನವನ್ನೂ ಕಾಣುತ್ತಿಲ್ಲ. ನೀನೊಬ್ಬನೇ ಸಾಕು. ಬೇಗನೆ ಪೀಡಿತರಾಗುತ್ತಿರುವವರ ಗತಿಯಾಗು!”
06105023a ಏವಮುಕ್ತೋ ಮಹಾರಾಜ ಪಿತಾ ದೇವವ್ರತಸ್ತವ।
06105023c ಚಿಂತಯಿತ್ವಾ ಮುಹೂರ್ತಂ ತು ಕೃತ್ವಾ ನಿಶ್ಚಯಮಾತ್ಮನಃ।
06105023e ತವ ಸಂಧಾರಯನ್ಪುತ್ರಮಬ್ರವೀಚ್ಚಂತನೋಃ ಸುತಃ।।
ಮಹಾರಾಜ! ಹೀಗೆ ಹೇಳಲು ನಿನ್ನ ಪಿತ ದೇವವ್ರತ ಶಂತನುಸುತನು ಒಂದು ಕ್ಷಣ ಆಲೋಚಿಸಿ, ತನ್ನಲ್ಲಿಯೇ ನಿಶ್ಚಯ ಮಾಡಿಕೊಂಡು, ಸಮಾಧಾನಗೊಳಿಸುತ್ತಾ ನಿನ್ನ ಪುತ್ರನಿಗೆ ಹೀಗೆ ಹೇಳಿದನು:
06105024a ದುರ್ಯೋಧನ ವಿಜಾನೀಹಿ ಸ್ಥಿರೋ ಭವ ವಿಶಾಂ ಪತೇ।
06105024c ಪೂರ್ವಕಾಲಂ ತವ ಮಯಾ ಪ್ರತಿಜ್ಞಾತಂ ಮಹಾಬಲ।।
“ವಿಶಾಂಪತೇ! ದುರ್ಯೋಧನ! ಮಹಾಬಲ! ಇದನ್ನು ತಿಳಿದು ಸ್ಥಿರನಾಗು. ಹಿಂದೆ ನಾನು ನಿನಗೆ ಪ್ರತಿಜ್ಞೆಮಾಡಿದ್ದೆ.
06105025a ಹತ್ವಾ ದಶ ಸಹಸ್ರಾಣಿ ಕ್ಷತ್ರಿಯಾಣಾಂ ಮಹಾತ್ಮನಾಂ।
06105025c ಸಂಗ್ರಾಮಾದ್ವ್ಯಪಯಾತವ್ಯಮೇತತ್ಕರ್ಮ ಮಮಾಹ್ನಿಕಂ।
06105025e ಇತಿ ತತ್ಕೃತವಾಂಶ್ಚಾಹಂ ಯಥೋಕ್ತಂ ಭರತರ್ಷಭ।।
ಭರತರ್ಷಭ! ಪ್ರತಿದಿನವೂ ಹತ್ತು ಸಾವಿರ ಮಹಾತ್ಮ ಕ್ಷತ್ರಿಯರನ್ನು ಸಂಹರಿಸಿ ಸಂಗ್ರಾಮದಿಂದ ಹಿಂದಿರುಗುತ್ತೇನೆ ಎಂದು. ನಾನು ಹೇಳಿದಂತೆಯೇ ಆ ಕೆಲಸವನ್ನು ನಾನು ಮಾಡಿ ಮುಗಿಸಿದ್ದೇನೆ.
06105026a ಅದ್ಯ ಚಾಪಿ ಮಹತ್ಕರ್ಮ ಪ್ರಕರಿಷ್ಯೇ ಮಹಾಹವೇ।
06105026c ಅಹಂ ವಾ ನಿಹತಃ ಶೇಷ್ಯೇ ಹನಿಷ್ಯೇ ವಾದ್ಯ ಪಾಂಡವಾನ್।।
ಇಂದು ಕೂಡ ಮಹಾಹವದಲ್ಲಿ ಮಹಾಕರ್ಮವನ್ನು ಮಾಡುತ್ತೇನೆ. ಇಂದು ನಾನು ನಿಹತನಾಗಿ ಮಲಗುತ್ತೇನೆ ಅಥವಾ ಪಾಂಡವರನ್ನು ಕೊಲ್ಲುತ್ತೇನೆ.
06105027a ಅದ್ಯ ತೇ ಪುರುಷವ್ಯಾಘ್ರ ಪ್ರತಿಮೋಕ್ಷ್ಯೇ ಋಣಂ ಮಹತ್।
06105027c ಭರ್ತೃಪಿಂಡಕೃತಂ ರಾಜನ್ನಿಹತಃ ಪೃತನಾಮುಖೇ।।
ಪುರುಷವ್ಯಾಘ್ರ! ರಾಜನ್! ಊಟವನ್ನು ಉಂಡಿದುದರಿಂದ ನನಗೆ ನಿನ್ನ ಮೇಲಿರುವ ಮಹಾ ಋಣದಿಂದ ಇಂದು ಸೇನೆಯ ಮುಂದೆ ಸತ್ತು ನನ್ನನ್ನು ಬಿಡುಗಡೆಗೊಳಿಸಿಕೊಳ್ಳುತ್ತೇನೆ.”
06105028a ಇತ್ಯುಕ್ತ್ವಾ ಭರತಶ್ರೇಷ್ಠಃ ಕ್ಷತ್ರಿಯಾನ್ಪ್ರತಪಂ ಶರೈಃ।
06105028c ಆಸಸಾದ ದುರಾಧರ್ಷಃ ಪಾಂಡವಾನಾಮನೀಕಿನೀಂ।।
ಹೀಗೆ ಹೇಳಿ ದುರಾಧರ್ಷ ಭರತಶ್ರೇಷ್ಠನು ಕ್ಷತ್ರಿಯರನ್ನು ಶರಗಳಿಂದ ಸುಡುತ್ತಾ ಪಾಂಡವರ ಸೇನೆಯನ್ನು ತಲುಪಿದನು.
06105029a ಅನೀಕಮಧ್ಯೇ ತಿಷ್ಠಂತಂ ಗಾಂಗೇಯಂ ಭರತರ್ಷಭ।
06105029c ಆಶೀವಿಷವಿವ ಕ್ರುದ್ಧಂ ಪಾಂಡವಾಃ ಪರ್ಯವಾರಯನ್।।
ಭರತರ್ಷಭ! ಸೇನೆಯ ಮಧ್ಯೆ ನಾಗದ ವಿಷದಂತೆ ಕ್ರುದ್ಧನಾಗಿ ನಿಂತಿದ್ದ ಗಾಂಗೇಯನನ್ನು ಪಾಂಡವರು ಸುತ್ತುವರೆದರು.
06105030a ದಶಮೇಽಹನಿ ತಸ್ಮಿಂಸ್ತು ದರ್ಶಯನ್ ಶಕ್ತಿಮಾತ್ಮನಃ।
06105030c ರಾಜನ್ ಶತಸಹಸ್ರಾಣಿ ಸೋಽವಧೀತ್ಕುರುನಂದನ।।
ರಾಜನ್! ಕುರುನಂದನ! ಆ ಹತ್ತನೆಯ ದಿನ ಅವನು ನೂರು ಸಾವಿರರನ್ನು ಕೊಂದು ತನ್ನ ಶಕ್ತಿಯನ್ನು ಪ್ರದರ್ಶಿಸಿದನು.
06105031a ಪಂಚಾಲಾನಾಂ ಚ ಯೇ ಶ್ರೇಷ್ಠಾ ರಾಜಪುತ್ರಾ ಮಹಾಬಲಾಃ।
06105031c ತೇಷಾಮಾದತ್ತ ತೇಜಾಂಸಿ ಜಲಂ ಸೂರ್ಯ ಇವಾಂಶುಭಿಃ।।
ಪಾಂಚಾಲರ ಕಡೆಯಲ್ಲಿದ್ದ ಶ್ರೇಷ್ಠ ರಾಜಪುತ್ರ ಮಹಾಬಲರನ್ನು ಇವನು ಸೂರ್ಯನು ನೀರಿನಿಂದ ತೇವಾಂಶವನ್ನು ಹೀರಿಕೊಳ್ಳುವಂತೆ ಹೀರಿಕೊಂಡನು.
06105032a ಹತ್ವಾ ದಶ ಸಹಸ್ರಾಣಿ ಕುಂಜರಾಣಾಂ ತರಸ್ವಿನಾಂ।
06105032c ಸಾರೋಹಾಣಾಂ ಮಹಾರಾಜ ಹಯಾನಾಂ ಚಾಯುತಂ ಪುನಃ।।
06105033a ಪೂರ್ಣೇ ಶತಸಹಸ್ರೇ ದ್ವೇ ಪದಾತೀನಾಂ ನರೋತ್ತಮಃ।
06105033c ಪ್ರಜಜ್ವಾಲ ರಣೇ ಭೀಷ್ಮೋ ವಿಧೂಮ ಇವ ಪಾವಕಃ।।
ಮಹಾರಾಜ! ತರಸ್ವಿಗಳಾಗಿದ್ದ ಹತ್ತು ಸಾವಿರ ಆನೆಗಳನ್ನು, ಪುನಃ ಹತ್ತು ಸಾವಿರ ಆರೋಹಿಗಳೊಂದಿಗೆ ಕುದುರೆಗಳನ್ನು, ಮತ್ತು ಎರಡು ಲಕ್ಷ ಪದಾತಿಗಳನ್ನು ಸಂಪೂರ್ಣವಾಗಿ ಸಂಹರಿಸಿ ಆ ನರೋತ್ತಮ ಭೀಷ್ಮನು ರಣದಲ್ಲಿ ಧೂಮವಿಲ್ಲದ ಪಾವಕನಂತೆ ಪ್ರಜ್ವಲಿಸಿದನು.
06105034a ನ ಚೈನಂ ಪಾಂಡವೇಯಾನಾಂ ಕೇ ಚಿಚ್ಚೇಕುರ್ನಿರೀಕ್ಷಿತುಂ।
06105034c ಉತ್ತರಂ ಮಾರ್ಗಮಾಸ್ಥಾಯ ತಪಂತಮಿವ ಭಾಸ್ಕರಂ।।
ಉತ್ತರಾಯಣದ ಮಾರ್ಗದಲ್ಲಿರುವ ಭಾಸ್ಕರನಂತೆ ಸುಡುತ್ತಿರುವ ಅವನನ್ನು ಪಾಂಡವೇಯರಲ್ಲಿ ಯಾರೂ ಕೂಡ ನೋಡಲೂ ಬಯಸುತ್ತಿರಲಿಲ್ಲ.
06105035a ತೇ ಪಾಂಡವೇಯಾಃ ಸಂರಬ್ಧಾ ಮಹೇಷ್ವಾಸೇನ ಪೀಡಿತಾಃ।
06105035c ವಧಾಯಾಭ್ಯದ್ರವನ್ಭೀಷ್ಮಂ ಸೃಂಜಯಾಶ್ಚ ಮಹಾರಥಾಃ।।
ಆ ಮಹೇಷ್ವಾಸನಿಂದ ಪೀಡಿತರಾದ ಭೀಷ್ಮನನ್ನು ಸಂರಬ್ಧ ಮಹಾರಥ ಸೃಂಜಯರೂ ಪಾಂಡವರೂ ವಧಿಸಲೆಂದು ಆಕ್ರಮಣ ಮಾಡಿದರು.
06105036a ಸ ಯುಧ್ಯಮಾನೋ ಬಹುಭಿರ್ಭೀಷ್ಮಃ ಶಾಂತನವಸ್ತದಾ।
06105036c ಅವಕೀರ್ಣೋ ಮಹಾಬಾಹುಃ ಶೈಲೋ ಮೇಘೈರಿವಾಸಿತೈಃ।।
ಬಹುಸೇನೆಗಳಿಂದ ಆಕ್ರಮಣಿಸಲ್ಪಟ್ಟ ಮಹಾಬಾಹು ಭೀಷ್ಮ ಶಾಂತನವನು ಮೇಘಗಳಿಂದ ಮುತ್ತಲ್ಪಟ್ಟ ಶೈಲದಂತೆ ತೋರಿದನು.
06105037a ಪುತ್ರಾಸ್ತು ತವ ಗಾಂಗೇಯಂ ಸಮಂತಾತ್ಪರ್ಯವಾರಯನ್।
06105037c ಮಹತ್ಯಾ ಸೇನಯಾ ಸಾರ್ಧಂ ತತೋ ಯುದ್ಧಮವರ್ತತ।।
ನಿನ್ನ ಮಗನಾದರೋ ಗಾಂಗೇಯನನ್ನು ಎಲ್ಲ ಕಡೆಗಳಿಂದಲೂ ಸುತ್ತುವರೆದು ಆ ಮಹಾ ಸೇನೆಯೊಂದಿಗೆ ಯುದ್ಧದಲ್ಲಿ ತೊಡಗಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮದುರ್ಯೋಧನಸಂವಾದೇ ಪಂಚಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮದುರ್ಯೋಧನಸಂವಾದ ಎನ್ನುವ ನೂರಾಐದನೇ ಅಧ್ಯಾಯವು.