ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 57
ಸಾರ
ಧೃಷ್ಟದ್ಯುಮ್ನನಿಂದ ಸಾಮ್ಯಮನಿಪುತ್ರ ವಧೆ (1-36).
06057001 ಸಂಜಯ ಉವಾಚ।
06057001a ದ್ರೌಣಿರ್ಭೂರಿಶ್ರವಾಃ ಶಲ್ಯಶ್ಚಿತ್ರಸೇನಶ್ಚ ಮಾರಿಷ।
06057001c ಪುತ್ರಃ ಸಾಮ್ಯಮನೇಶ್ಚೈವ ಸೌಭದ್ರಂ ಸಮಯೋಧಯನ್।।
ಸಂಜಯನು ಹೇಳಿದನು: “ಮಾರಿಷ! ದ್ರೌಣಿ, ಭೂರಿಶ್ರವ, ಶಲ್ಯ, ಚಿತ್ರಸೇನ, ಮತ್ತು ಸಾಮ್ಯಮನಿಯ ಮಗ ಇವರು ಸೌಭದ್ರನನ್ನು ಎದುರಿಸಿ ಯುದ್ಧಮಾಡಿದರು.
06057002a ಸಂಸಕ್ತಮತಿತೇಜೋಭಿಸ್ತಮೇಕಂ ದದೃಶುರ್ಜನಾಃ।
06057002c ಪಂಚಭಿರ್ಮನುಜವ್ಯಾಘ್ರೈರ್ಗಜೈಃ ಸಿಂಹಶಿಶುಂ ಯಥಾ।।
ಆನೆಗಳಂತಿರುವ ಆ ಐದು ಮನುಜವ್ಯಾಘ್ರರ ಮಧ್ಯದಲ್ಲಿ ಒಂಟಿ ಸಿಂಹದ ಮರಿಯಂತೆ ಅವನು ಅತಿತೇಜಸ್ಸಿನಿಂದಿರುವುದನ್ನು ಜನರು ನೋಡಿದರು.
06057003a ನಾಭಿಲಕ್ಷ್ಯತಯಾ ಕಶ್ಚಿನ್ನ ಶೌರ್ಯೇ ನ ಪರಾಕ್ರಮೇ।
06057003c ಬಭೂವ ಸದೃಶಃ ಕಾರ್ಷ್ಣೇರ್ನಾಸ್ತ್ರೇ ನಾಪಿ ಚ ಲಾಘವೇ।।
ಕಾರ್ಷ್ಣಿಯು ಶೌರ್ಯದಲ್ಲಿಯಾಗಲೀ ಪರಾಕ್ರಮದಲ್ಲಿಯಾಗಲೀ, ಅಸ್ತ್ರಗಳಲ್ಲಿಯೂ ಲಾಘವದಲ್ಲಿಯೂ ಯಾರೂ ಅಲಕ್ಷಿಸುವ ಹಾಗಿರಲಿಲ್ಲ.
06057004a ತಥಾ ತಮಾತ್ಮಜಂ ಯುದ್ಧೇ ವಿಕ್ರಮಂತಮರಿಂದಮಂ।
06057004c ದೃಷ್ಟ್ವಾ ಪಾರ್ಥೋ ರಣೇ ಯತ್ತಃ ಸಿಂಹನಾದಮಥೋಽನದತ್।।
ಯುದ್ಧದಲ್ಲಿ ತನ್ನ ಮಗ ಅರಿಂದಮನ ವಿಕ್ರಮವನ್ನು ನೋಡಿ ರಣದಲ್ಲಿದ್ದ ಪಾರ್ಥನು ಸಿಂಹನಾದಗೈದನು.
06057005a ಪೀಡಯಾನಂ ಚ ತತ್ ಸೈನ್ಯಂ ಪೌತ್ರಂ ತವ ವಿಶಾಂ ಪತೇ।
06057005c ದೃಷ್ಟ್ವಾ ತ್ವದೀಯಾ ರಾಜೇಂದ್ರ ಸಮಂತಾತ್ಪರ್ಯವಾರಯನ್।।
ವಿಶಾಂಪತೇ! ರಾಜೇಂದ್ರ! ಆ ಸೈನ್ಯವನ್ನು ಪೀಡಿಸುತ್ತಿದ್ದ ನಿನ್ನ ಮೊಮ್ಮಗನನ್ನು ನೋಡಿ ನಿನ್ನವರು ಎಲ್ಲ ಕಡೆಗಳಿಂದ ಅವನನ್ನು ಸುತ್ತುವರೆದರು.
06057006a ಧ್ವಜಿನೀಂ ಧಾರ್ತರಾಷ್ಟ್ರಾಣಾಂ ದೀನಶತ್ರುರದೀನವತ್।
06057006c ಪ್ರತ್ಯುದ್ಯಯೌ ಸ ಸೌಭದ್ರಸ್ತೇಜಸಾ ಚ ಬಲೇನ ಚ।।
ಆಗ ಸೌಭದ್ರನು ದೀನಶತ್ರುಗಳಾದ ಧ್ವಜವುಳ್ಳ ಧಾರ್ತರಾಷ್ಟ್ರರೊಡನೆ ದೀನನಾಗದೆ ತೇಜಸ್ಸು ಮತ್ತು ಬಲಗಳಿಂದ ಪ್ರತಿಯುದ್ಧಮಾಡಿದನು.
06057007a ತಸ್ಯ ಲಾಘವಮಾರ್ಗಸ್ಥಮಾದಿತ್ಯಸದೃಶಪ್ರಭಂ।
06057007c ವ್ಯದೃಶ್ಯತ ಮಹಚ್ಚಾಪಂ ಸಮರೇ ಯುಧ್ಯತಃ ಪರೈಃ।।
ಸದಾ ಎಳೆದಿದ್ದಿರುವ ಅವನ ಆದಿತ್ಯನ ಸಮನಾದ ಪ್ರಭೆಯುಳ್ಳ ಮಹಾ ಚಾಪವನ್ನು ಸಮರದಲ್ಲಿ ಯುದ್ಧಮಾಡುತ್ತಿದ್ದ ಶತ್ರುಗಳು ನೋಡಿದರು.
06057008a ಸ ದ್ರೌಣಿಮಿಷುಣೈಕೇನ ವಿದ್ಧ್ವಾ ಶಲ್ಯಂ ಚ ಪಂಚಭಿಃ।
06057008c ಧ್ವಜಂ ಸಾಮ್ಯಮನೇಶ್ಚಾಪಿ ಸೋಽಷ್ಟಾಭಿರಪವರ್ಜಯತ್।।
ಅವನು ದ್ರೌಣಿಯನ್ನು ಒಂದೇ ಇಷುಣದಿಂದ ಹೊಡೆದು ಶಲ್ಯನನ್ನು ಐದರಿಂದ ಮತ್ತು ಸಾಮ್ಯಮನಿಯ ಧ್ವಜವನ್ನು ಎಂಟು ಬಾಣಗಳಿಂದ ಹೊಡೆದನು.
06057009a ರುಕ್ಮದಂಡಾಂ ಮಹಾಶಕ್ತಿಂ ಪ್ರೇಷಿತಾಂ ಸೌಮದತ್ತಿನಾ।
06057009c ಶಿತೇನೋರಗಸಂಕಾಶಾಂ ಪತ್ರಿಣಾ ವಿಜಹಾರ ತಾಂ।।
ಸೌಮದತ್ತಿಯು ಪ್ರಯೋಗಿಸಿದ್ದ ರುಕ್ಮದಂಡದ ಮಹಾಶಕ್ತಿಯನ್ನು ಸರ್ಪದಂತೆ ಹರಿತವಾಗಿದ್ದ ಪತ್ರಿಣದಿಂದ ತುಂಡರಿಸಿದನು.
06057010a ಶಲ್ಯಸ್ಯ ಚ ಮಹಾಘೋರಾನಸ್ಯತಃ ಶತಶಃ ಶರಾನ್।
06057010c ನಿವಾರ್ಯಾರ್ಜುನದಾಯಾದೋ ಜಘಾನ ಸಮರೇ ಹಯಾನ್।।
ಅರ್ಜುನದಾಯಾದನು ಶಲ್ಯನು ನೋಡುತ್ತಿದ್ದಂತೆಯೇ ನೂರಾರು ಶರಗಳನ್ನು ಪ್ರಯೋಗಿಸಿ ಸಮರದಲ್ಲಿ ಅವನ ಕುದುರೆಗಳನ್ನು ಸಂಹರಿಸಿದನು.
06057011a ಭೂರಿಶ್ರವಾಶ್ಚ ಶಲ್ಯಶ್ಚ ದ್ರೌಣಿಃ ಸಾಮ್ಯಮನಿಃ ಶಲಃ।
06057011c ನಾಭ್ಯವರ್ತಂತ ಸಂರಬ್ಧಾಃ ಕಾರ್ಷ್ಣೇರ್ಬಾಹುಬಲಾಶ್ರಯಾತ್।।
ಆಗ ಸಂರಬ್ಧರಾದ ಭೂರಿಶ್ರವ, ಶಲ್ಯ, ದ್ರೌಣಿ, ಸಾಮ್ಯಮನಿ ಮತ್ತು ಶಲರು ಕಾರ್ಷ್ಣಿಯ ಬಾಹುಬಲದಡಿಯಲ್ಲಿ ಯುದ್ಧಮಾಡಲಾರದಂತಾದರು.
06057012a ತತಸ್ತ್ರಿಗರ್ತಾ ರಾಜೇಂದ್ರ ಮದ್ರಾಶ್ಚ ಸಹ ಕೇಕಯೈಃ।
06057012c ಪಂಚತ್ರಿಂಶತಿಸಾಹಸ್ರಾಸ್ತವ ಪುತ್ರೇಣ ಚೋದಿತಾಃ।।
06057013a ಧನುರ್ವೇದವಿದೋ ಮುಖ್ಯಾ ಅಜೇಯಾಃ ಶತ್ರುಭಿರ್ಯುಧಿ।
06057013c ಸಹಪುತ್ರಂ ಜಿಘಾಂಸಂತಂ ಪರಿವವ್ರುಃ ಕಿರೀಟಿನಂ।।
ರಾಜೇಂದ್ರ! ಆಗ ನಿನ್ನ ಮಗನಿಂದ ಪ್ರಚೋದಿತರಾದ ತ್ರಿಗರ್ತರು ಮತ್ತು ಮದ್ರರು ಕೇಕಯರೊಂದಿಗೆ, ಒಟ್ಟು ಇಪ್ಪತ್ತೈದು ಸಾವಿರ ಧನುವೇದವಿದ ಮುಖ್ಯರು ಯುದ್ಧದಲ್ಲಿ ಶತ್ರುಗಳಿಗೆ ಅಜೇಯರಾದವರು ಪುತ್ರನೊಂದಿಗೆ ಕಿರೀಟಿಯನ್ನು ಸಂಹರಿಸಲು ಸುತ್ತುವರೆದರು.
06057014a ತೌ ತು ತತ್ರ ಪಿತಾಪುತ್ರೌ ಪರಿಕ್ಷಿಪ್ತೌ ರಥರ್ಷಭೌ।
06057014c ದದರ್ಶ ರಾಜನ್ಪಾಂಚಾಲ್ಯಃ ಸೇನಾಪತಿರಮಿತ್ರಜಿತ್।।
ರಾಜನ್! ಅಲ್ಲಿ ತಂದೆ ಮತ್ತು ಮಗ ಇಬ್ಬರು ರಥರ್ಷಭರೂ ಸುತ್ತುವರೆಯಲ್ಪಟ್ಟಿರುವುದನ್ನು ಸೇನಾಪತಿ ಅಮಿತ್ರಜಿತು ಧೃಷ್ಟದ್ಯುಮ್ನನು ನೋಡಿದನು.
06057015a ಸ ವಾರಣರಥೌಘಾನಾಂ ಸಹಸ್ರೈರ್ಬಹುಭಿರ್ವೃತಃ।
06057015c ವಾಜಿಭಿಃ ಪತ್ತಿಭಿಶ್ಚೈವ ವೃತಃ ಶತಸಹಸ್ರಶಃ।।
06057016a ಧನುರ್ವಿಸ್ಫಾರ್ಯ ಸಂಕ್ರುದ್ಧಶ್ಚೋದಯಿತ್ವಾ ವರೂಥಿನೀಂ।
06057016c ಯಯೌ ತನ್ಮದ್ರಕಾನೀಕಂ ಕೇಕಯಾಂಶ್ಚ ಪರಂತಪಃ।।
ಆ ಪರಂತಪನು ಅನೇಕ ಸಹಸ್ರ ವಾರಣ-ರಥ ಸೇನೆಗಳಿಂದ ಆವೃತನಾಗಿ, ಸಹಸ್ರಾರು ಕುದುರೆಗಳ ಮತ್ತು ಪದಾತಿಸೇನೆಗಳಿಂದ ಆವೃತನಾಗಿ, ಸಂಕ್ರುದ್ಧನಾಗಿ ಧನುಸ್ಸನ್ನು ಟೇಂಕರಿಸುತ್ತಾ, ಸೇನೆಯನ್ನು ಹುರುದುಂಬಿಸುತ್ತಾ ಆ ಮದ್ರ-ಕೇಕಯ ಸೇನೆಗಳಿರುವಲ್ಲಿಗೆ ಬಂದನು.
06057017a ತೇನ ಕೀರ್ತಿಮತಾ ಗುಪ್ತಮನೀಕಂ ದೃಢಧನ್ವನಾ।
06057017c ಪ್ರಯುಕ್ತರಥನಾಗಾಶ್ವಂ ಯೋತ್ಸ್ಯಮಾನಮಶೋಭತ।।
ಆ ಕೀರ್ತಿಮತ ದೃಢಧನ್ವಿಯಿಂದ ರಕ್ಷಿತಗೊಂಡು ಯುದ್ಧ ಮಾಡುತ್ತಿದ್ದ ರಥನಾಗಾಶ್ವಗಳಿಂದ ಕೂಡಿದ್ದ ಸೇನೆಯು ಶೋಭಿಸಿತು.
06057018a ಸೋಽರ್ಜುನಂ ಪ್ರಮುಖೇ ಯಾಂತಂ ಪಾಂಚಾಲ್ಯಃ ಕುರುನಂದನ।
06057018c ತ್ರಿಭಿಃ ಶಾರದ್ವತಂ ಬಾಣೈರ್ಜತ್ರುದೇಶೇ ಸಮರ್ಪಯತ್।।
ಕುರುನಂದನ! ಅರ್ಜುನನ ಹತ್ತಿರ ಬರುತ್ತಲೇ ಪಾಂಚಾಲ್ಯನು ಶಾರದ್ವತನ ಜತ್ರುಪ್ರದೇಶಕ್ಕೆ ಗುರಿಯಿಟ್ಟು ಮೂರು ಬಾಣಗಳನ್ನು ಹೊಡೆದನು.
06057019a ತತಃ ಸ ಮದ್ರಕಾನ್ ಹತ್ವಾ ದಶಭಿರ್ದಶಭಿಃ ಶರೈಃ।
06057019c ಹೃಷ್ಟ ಏಕೋ ಜಘಾನಾಶ್ವಂ ಭಲ್ಲೇನ ಕೃತವರ್ಮಣಃ।।
ಆಗ ಅವನು ಹತ್ತು ಬಾಣಗಳಿಂದ ಹತ್ತು ಮದ್ರಕರನ್ನು ಸಂಹರಿಸಿ ಹೃಷ್ಟನಾಗಿ ಒಂದೇ ಭಲ್ಲದಿಂದ ಕೃತವರ್ಮನ ಕುದುರೆಯನ್ನು ಹೊಡೆದನು.
06057020a ದಮನಂ ಚಾಪಿ ದಾಯಾದಂ ಪೌರವಸ್ಯ ಮಹಾತ್ಮನಃ।
06057020c ಜಘಾನ ವಿಪುಲಾಗ್ರೇಣ ನಾರಾಚೇನ ಪರಂತಪಃ।।
ಪರಂತಪ ಮಹಾತ್ಮನು ಪೌರವನ ಮಗ ದಮನನನ್ನೂ ವಿಪುಲಾಗ್ರ ನಾರಾಚದಿಂದ ಸಂಹರಿಸಿದನು.
06057021a ತತಃ ಸಾಮ್ಯಮನೇಃ ಪುತ್ರಃ ಪಾಂಚಾಲ್ಯಂ ಯುದ್ಧದುರ್ಮದಂ।
06057021c ಅವಿಧ್ಯತ್ತ್ರಿಂಶತಾ ಬಾಣೈರ್ದಶಭಿಶ್ಚಾಸ್ಯ ಸಾರಥಿಂ।।
ಆಗ ಸಾಮ್ಯಮನಿಯ ಮಗನು ಯುದ್ಧ ದುರ್ಮದ ಪಾಂಚಾಲ್ಯನನ್ನು ಮೂವತ್ತು ಬಾಣಗಳಿಂದ ಮತ್ತು ಅವನ ಸಾರಥಿಯನ್ನು ಹತ್ತರಿಂದ ಹೊಡೆದನು.
06057022a ಸೋಽತಿವಿದ್ಧೋ ಮಹೇಷ್ವಾಸಃ ಸೃಕ್ಕಿಣೀ ಪರಿಸಂಲಿಹನ್।
06057022c ಭಲ್ಲೇನ ಭೃಶತೀಕ್ಷ್ಣೇನ ನಿಚಕರ್ತಾಸ್ಯ ಕಾರ್ಮುಕಂ।।
ಅತಿಯಾಗಿ ಗಾಯಗೊಂಡ ಮಹೇಷ್ವಾಸನು ಕಟಬಾಯಿಯನ್ನು ನೆಕ್ಕುತ್ತಾ ತಕ್ಷಣವೇ ತೀಕ್ಷ್ಣ ಭಲ್ಲದಿಂದ ಅವನ ಕಾರ್ಮುಕವನ್ನು ಕತ್ತರಿಸಿದನು.
06057023a ಅಥೈನಂ ಪಂಚವಿಂಶತ್ಯಾ ಕ್ಷಿಪ್ರಮೇವ ಸಮರ್ಪಯತ್।
06057023c ಅಶ್ವಾಂಶ್ಚಾಸ್ಯಾವಧೀದ್ರಾಜನ್ನುಭೌ ತೌ ಪಾರ್ಷ್ಣಿಸಾರಥೀ।।
ಮರುಕ್ಷಣದಲ್ಲಿಯೇ ಇಪ್ಪತ್ತೈದು ಬಾಣಗಳಿಂದ ಅವನನ್ನು ಹೊಡೆದು ಅವನ ಕುದುರೆಗಳನ್ನೂ, ಪಕ್ಷರಕ್ಷಕರ ಸಾರಥಿಗಳಿಬ್ಬರನ್ನೂ ಸಂಹರಿಸಿದನು.
06057024a ಸ ಹತಾಶ್ವೇ ರಥೇ ತಿಷ್ಠನ್ದದರ್ಶ ಭರತರ್ಷಭ।
06057024c ಪುತ್ರಃ ಸಾಮ್ಯಮನೇಃ ಪುತ್ರಂ ಪಾಂಚಾಲ್ಯಸ್ಯ ಮಹಾತ್ಮನಃ।।
ಭರತರ್ಷಭ! ಕುದುರೆಗಳು ಹತರಾದ ರಥದ ಮೇಲೆಯೇ ನಿಂತುಕೊಂಡು ಮಹಾತ್ಮ ಸಾಮ್ಯಮನಿಯ ಮಗನು ಪಾಂಚಾಲ್ಯನ ಮಗನನ್ನು ನೋಡಿದನು.
06057025a ಸ ಸಂಗೃಹ್ಯ ಮಹಾಘೋರಂ ನಿಸ್ತ್ರಿಂಶವರಮಾಯಸಂ।
06057025c ಪದಾತಿಸ್ತೂರ್ಣಮಭ್ಯರ್ಚದ್ರಥಸ್ಥಂ ದ್ರುಪದಾತ್ಮಜಂ।।
ತಕ್ಷಣವೇ ಮಹಾಘೋರ ಲೋಹಮಯ ಖಡ್ಗವನ್ನು ಕೈಯಲ್ಲಿ ಹಿಡಿದು ರಥದಿಂದ ಧುಮುಕಿ ಕಾಲ್ನಡುಗೆಯಲ್ಲಿಯೇ ದ್ರುಪದಾತ್ಮಜನ ಕಡೆ ಧಾವಿಸಿದನು.
06057026a ತಂ ಮಹೌಘಮಿವಾಯಾಂತಂ ಖಾತ್ಪತಂತಮಿವೋರಗಂ।
06057026c ಭ್ರಾಂತಾವರಣನಿಸ್ತ್ರಿಂಶಂ ಕಾಲೋತ್ಸೃಷ್ಟಮಿವಾಂತಕಂ।।
ವೇಗವಾಗಿ ಬರುತ್ತಿದ್ದ ದೊಡ್ಡ ಜಲಪ್ರವಾಹದಂತೆ ಮತ್ತು ಆಕಾಶದಿಂದ ಬೀಳುತ್ತಿದ್ದ ಸರ್ಪದಂತೆ ತೋರುತ್ತಿದ್ದ ಅವನು ಖಡ್ಗವನ್ನು ತಿರುಗಿಸುತ್ತಾ ಅಂತಕನಂತೆ ತೋರುತ್ತಿದ್ದನು.
06057027a ದೀಪ್ಯಂತಮಿವ ಶಸ್ತ್ರಾರ್ಚ್ಯಾ ಮತ್ತವಾರಣವಿಕ್ರಮಂ।
06057027c ಅಪಶ್ಯನ್ಪಾಂಡವಾಸ್ತತ್ರ ಧೃಷ್ಟದ್ಯುಮ್ನಶ್ಚ ಪಾರ್ಷತಃ।।
ಶಸ್ತ್ರದೊಂದಿಗೆ ಸೂರ್ಯನಂತೆ ಬೆಳಗುತ್ತಿರುವ ಆ ಮತ್ತವಾರಣವಿಕ್ರಮನನ್ನು ಅಲ್ಲಿ ಪಾಂಡವರೂ ಪಾರ್ಷತ ಧೃಷ್ಟದ್ಯುಮ್ನನೂ ನೋಡಿದರು.
06057028a ತಸ್ಯ ಪಾಂಚಾಲಪುತ್ರಸ್ತು ಪ್ರತೀಪಮಭಿಧಾವತಃ।
06057028c ಶಿತನಿಸ್ತ್ರಿಂಶಹಸ್ತಸ್ಯ ಶರಾವರಣಧಾರಿಣಃ।।
06057029a ಬಾಣವೇಗಮತೀತಸ್ಯ ರಥಾಭ್ಯಾಶಮುಪೇಯುಷಃ।
06057029c ತ್ವರನ್ಸೇನಾಪತಿಃ ಕ್ರುದ್ಧೋ ಬಿಭೇದ ಗದಯಾ ಶಿರಃ।।
ಹರಿತ ಖಡ್ಗವನ್ನೂ, ಬಾಣವನ್ನು ತಡೆಯುವ ಗುರಾಣಿಯನ್ನೂ ಹಿಡಿದು ಉರಿಯುತ್ತಾ ಬಾಣವೇಗದಿಂದ ರಥದಕಡೆ ಓಡಿಬರುತ್ತಿದ್ದ ಅವನನ್ನು ರಥದ ಬಳಿ ಬಂದ ಕೂಡಲೇ ಸೇನಾಪತಿಯು ಕ್ರುದ್ಧನಾಗಿ ಗದೆಯಿಂದ ಅವನ ಶಿರವನ್ನು ಒಡೆದನು.
06057030a ತಸ್ಯ ರಾಜನ್ಸನಿಸ್ತ್ರಿಂಶಂ ಸುಪ್ರಭಂ ಚ ಶರಾವರಂ।
06057030c ಹತಸ್ಯ ಪತತೋ ಹಸ್ತಾದ್ವೇಗೇನ ನ್ಯಪತದ್ಭುವಿ।।
ರಾಜನ್! ಹೊಡೆತಕ್ಕೆ ಸಿಕ್ಕ ಅವನ ಪ್ರಭೆಯುಳ್ಳ ಖಡ್ಗವೂ ಗುರಾಣಿಯೂ ವೇಗದಿಂದ ಅವನ ಕೈಯಿಂದ ಬೀಳಲು ಅವನೂ ಭೂಮಿಯ ಮೇಲೆ ಬಿದ್ದನು.
06057031a ತಂ ನಿಹತ್ಯ ಗದಾಗ್ರೇಣ ಲೇಭೇ ಸ ಪರಮಂ ಯಶಃ।
06057031c ಪುತ್ರಃ ಪಾಂಚಾಲರಾಜಸ್ಯ ಮಹಾತ್ಮಾ ಭೀಮವಿಕ್ರಮಃ।।
ಗದಾಗ್ರದಿಂದ ಅವನನ್ನು ಕೊಂದು ಭೀಮವಿಕ್ರಮ ಮಹಾತ್ಮ ಪಾಂಚಾಲರಾಜಪುತ್ರನು ಪರಮ ಯಶಸ್ಸನ್ನು ಪಡೆದನು.
06057032a ತಸ್ಮಿನ್ ಹತೇ ಮಹೇಷ್ವಾಸೇ ರಾಜಪುತ್ರೇ ಮಹಾರಥೇ।
06057032c ಹಾಹಾಕಾರೋ ಮಹಾನಾಸೀತ್ತವ ಸೈನ್ಯಸ್ಯ ಮಾರಿಷ।।
ಮಾರಿಷ! ಆ ಮಹೇಷ್ವಾಸ ಮಹಾರಥ ರಾಜಪುತ್ರನು ಹತನಾಗಲು ನಿನ್ನ ಸೈನ್ಯದಲ್ಲಿ ಮಹಾ ಹಾಹಾಕಾರವುಂಟಾಯಿತು.
06057033a ತತಃ ಸಾಮ್ಯಮನಿಃ ಕ್ರುದ್ಧೋ ದೃಷ್ಟ್ವಾ ನಿಹತಮಾತ್ಮಜಂ।
06057033c ಅಭಿದುದ್ರಾವ ವೇಗೇನ ಪಾಂಚಾಲ್ಯಂ ಯುದ್ಧದುರ್ಮದಂ।।
ಆಗ ಮಗನು ನಿಹತನಾದುದನ್ನು ನೋಡಿ ಕ್ರುದ್ಧನಾದ ಸಾಮ್ಯಮನಿಯು ವೇಗದಿಂದ ಯುದ್ಧದುರ್ಮದ ಪಾಂಚಾಲ್ಯನ್ನು ಆಕ್ರಮಿಸಿದನು.
06057034a ತೌ ತತ್ರ ಸಮರೇ ವೀರೌ ಸಮೇತೌ ರಥಿನಾಂ ವರೌ।
06057034c ದದೃಶುಃ ಸರ್ವರಾಜಾನಃ ಕುರವಃ ಪಾಂಡವಾಸ್ತಥಾ।।
ಅಲ್ಲಿ ಸಮರದಲ್ಲಿ ಅವರಿಬ್ಬರು ರಥಶ್ರೇಷ್ಠ ವೀರರೂ ಒಟ್ಟಿಗೇ ಯುದ್ಧಮಾಡುವುದನ್ನು ಕುರುಗಳ ಮತ್ತು ಪಾಂಡವರ ಎಲ್ಲ ರಾಜರು ನೋಡಿದರು.
06057035a ತತಃ ಸಾಮ್ಯಮನಿಃ ಕ್ರುದ್ಧಃ ಪಾರ್ಷತಂ ಪರವೀರಹಾ।
06057035c ಆಜಘಾನ ತ್ರಿಭಿರ್ಬಾಣೈಸ್ತೋತ್ತ್ರೈರಿವ ಮಹಾದ್ವಿಪಂ।।
ಆಗ ಕ್ರುದ್ಧನಾದ ಪರವೀರಹ ಸಾಮ್ಯಮನಿಯು ಮಹಾಗಜವನ್ನು ಅಂಕುಶದಿಂದ ತಿವಿಯುವಂತೆ ಪಾರ್ಷತನನ್ನು ಮೂರು ಬಾಣಗಳಿಂದ ಹೊಡೆದನು.
06057036a ತಥೈವ ಪಾರ್ಷತಂ ಶೂರಂ ಶಲ್ಯಃ ಸಮಿತಿಶೋಭನಃ।
06057036c ಆಜಘಾನೋರಸಿ ಕ್ರುದ್ಧಸ್ತತೋ ಯುದ್ಧಮವರ್ತತ।।
ಆಗ ಸಮಿತಿಶೋಭನ ಶಲ್ಯನೂ ಕೂಡ ಶೂರ ಪಾರ್ಷತನನ್ನು ಕ್ರುದ್ಧನಾಗಿ ಎದೆಯಮೇಲೆ ಹೊಡೆದನು. ಆಗ ಯುದ್ಧವು ಮುಂದುವರೆಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಚತುರ್ಥಯುದ್ಧದಿವಸೇ ಸಾಮ್ಯಮನಿಪುತ್ರವಧೇ ಸಪ್ತಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಚತುರ್ಥಯುದ್ಧದಿವಸೇ ಸಾಮ್ಯಮನಿಪುತ್ರವಧೆ ಎನ್ನುವ ಐವತ್ತೇಳನೇ ಅಧ್ಯಾಯವು.