ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 129
ಸಾರ
ತಾನೊಬ್ಬನೇ ಇದ್ದೇನೆಂದು ತಿಳಿದುಕೊಳ್ಳಬೇಡವೆಂದು ದುರ್ಯೋಧನನಿಗೆ ಹೇಳಿ ಜೋರಾಗಿ ನಕ್ಕು ಕೃಷ್ಣನು ತನ್ನ ವಿಶ್ವರೂಪವನ್ನು ಕುರುಸಭೆಯಲ್ಲಿ ಪ್ರಕಟಪಡಿಸಿದುದು (1-15). ಕುರುಸಭೆಯು ದಿಗ್ಭ್ರಮೆಗೊಳ್ಳಲು ತನ್ನ ನಿಜಸ್ವರೂಪವನ್ನು ಹಿಂತೆಗೆದುಕೊಂಡು ಋಷಿಗಳ ಅಪ್ಪಣೆಪಡೆದು ಸಾತ್ಯಕಿ-ಕೃತವರ್ಮರೊಡನೆ ಅವನು ಸಭೆಯಿಂದ ಹೊರಬಂದುದು (16-18). ಹೊರಟುಹೋಗುತ್ತಿದ್ದ ಕೃಷ್ಣನನ್ನು ಹಿಂಬಾಲಿಸಿ ಹೋಗಿ, ಧೃತರಾಷ್ಟ್ರನು ತನ್ನ ಅಸಹಾಯಕತೆಯನ್ನು ಹೇಳಿಕೊಂಡು ತನ್ನನ್ನು ಶಂಕಿಸಬಾರದೆಂದು ಹೇಳಲು ಕೃಷ್ಣನು ಅವರಿಂದ ಬೀಳ್ಕೊಂಡು ಕುಂತಿಯನ್ನು ಕಾಣಲು ಹೋದುದು (19–34).
05129001 ವೈಶಂಪಾಯನ ಉವಾಚ।
05129001a ವಿದುರೇಣೈವಮುಕ್ತೇ ತು ಕೇಶವಃ ಶತ್ರುಪೂಗಹಾ।
05129001c ದುರ್ಯೋಧನಂ ಧಾರ್ತರಾಷ್ಟ್ರಮಭ್ಯಭಾಷತ ವೀರ್ಯವಾನ್।।
ವೈಶಂಪಾಯನನು ಹೇಳಿದನು: “ವಿದುರನು ಹೀಗೆ ಹೇಳಲು ಶತ್ರುಪೂಗಹ ವೀರ್ಯವಾನ್ ಕೇಶವನು ಧಾರ್ತರಾಷ್ಟ್ರ ದುರ್ಯೋಧನನಿಗೆ ಹೇಳಿದನು.
05129002a ಏಕೋಽಹಮಿತಿ ಯನ್ಮೋಹಾನ್ಮನ್ಯಸೇ ಮಾಂ ಸುಯೋಧನ।
05129002c ಪರಿಭೂಯ ಚ ದುರ್ಬುದ್ಧೇ ಗ್ರಹೀತುಂ ಮಾಂ ಚಿಕೀರ್ಷಸಿ।।
“ಸುಯೋಧನ! ನಾನು ಒಬ್ಬನೇ ಎಂದು ಮೋಹದಿಂದ ನೀನು ತಿಳಿದುಕೊಂಡಿದ್ದೀಯೆ. ಆದುದರಿಂದ ದುರ್ಬುದ್ಧೇ! ನನ್ನನ್ನು ಬಲವನ್ನುಪಯೋಗಿಸಿ ಸೆರೆಹಿಡಿಯಲು ಬಯಸುತ್ತಿರುವೆ.
05129003a ಇಹೈವ ಪಾಂಡವಾಃ ಸರ್ವೇ ತಥೈವಾಂಧಕವೃಷ್ಣಯಃ।
05129003c ಇಹಾದಿತ್ಯಾಶ್ಚ ರುದ್ರಾಶ್ಚ ವಸವಶ್ಚ ಮಹರ್ಷಿಭಿಃ।।
ಇಲ್ಲಿಯೇ ಪಾಂಡವರೂ, ಹಾಗೆಯೇ ಎಲ್ಲ ಅಂಧಕ-ವೃಷ್ಣಿಯರೂ ಇದ್ದಾರೆ. ಇಲ್ಲಿಯೇ ಆದಿತ್ಯರೂ, ರುದ್ರರು, ವಸುಗಳೂ, ಮಹರ್ಷಿಗಳೂ ಇದ್ದಾರೆ!”
05129004a ಏವಮುಕ್ತ್ವಾ ಜಹಾಸೋಚ್ಚೈಃ ಕೇಶವಃ ಪರವೀರಹಾ।
05129004c ತಸ್ಯ ಸಂಸ್ಮಯತಃ ಶೌರೇರ್ವಿದ್ಯುದ್ರೂಪಾ ಮಹಾತ್ಮನಃ।
05129004e ಅಂಗುಷ್ಠಮಾತ್ರಾಸ್ತ್ರಿದಶಾ ಮುಮುಚುಃ ಪಾವಕಾರ್ಚಿಷಃ।।
ಹೀಗೆ ಹೇಳಿ ಪರವೀರಹ ಕೇಶವನು ಜೋರಾಗಿ ನಕ್ಕನು. ಹೀಗೆ ಆ ಮಹಾತ್ಮ ಶೌರಿಯು ನಗುತ್ತಿದ್ದಂತೆ ಅವನಿಂದ ಬೆಂಕಿಯಂತೆ ಪ್ರಕಾಶಮಾನರಾದ ಅಂಗುಷ್ಠ ಮಾತ್ರದ ತ್ರಿದಶರು ಹೊರಹೊಮ್ಮಿದರು.
05129005a ತಸ್ಯ ಬ್ರಹ್ಮಾ ಲಲಾಟಸ್ಥೋ ರುದ್ರೋ ವಕ್ಷಸಿ ಚಾಭವತ್।
05129005c ಲೋಕಪಾಲಾ ಭುಜೇಷ್ವಾಸನ್ನಗ್ನಿರಾಸ್ಯಾದಜಾಯತ।।
ಅವನ ಹಣೆಯಲ್ಲಿ ಬ್ರಹ್ಮನಿದ್ದನು. ಎದೆಯಲ್ಲಿ ರುದ್ರನು ಕಾಣಿಸಿಕೊಂಡನು. ಭುಜದಿಂದ ಲೋಕಪಾಲಕರು ಮತ್ತು ಮುಖದಿಂದ ಅಗ್ನಿಯು ಹೊರಬಂದರು.
05129006a ಆದಿತ್ಯಾಶ್ಚೈವ ಸಾಧ್ಯಾಶ್ಚ ವಸವೋಽಥಾಶ್ವಿನಾವಪಿ।
05129006c ಮರುತಶ್ಚ ಸಹೇಂದ್ರೇಣ ವಿಶ್ವೇದೇವಾಸ್ತಥೈವ ಚ।
05129006e ಬಭೂವುಶ್ಚೈವ ರೂಪಾಣಿ ಯಕ್ಷಗಂಧರ್ವರಕ್ಷಸಾಂ।।
ಆದಿತ್ಯರು, ಸಾಧ್ಯರು, ವಸವರು, ಅಶ್ವಿನಿಯರು, ಮರುತರು, ಇಂದ್ರನೊಂದಿಗೆ ವಿಶ್ವೇದೇವರು, ಮತ್ತು ಯಕ್ಷ ಗಂಧರ್ವ ರಾಕ್ಷಸರ ರೂಪಗಳು ಕಂಡುಬಂದವು.
05129007a ಪ್ರಾದುರಾಸ್ತಾಂ ತಥಾ ದೋರ್ಭ್ಯಾಂ ಸಂಕರ್ಷಣಧನಂಜಯೌ।
05129007c ದಕ್ಷಿಣೇಽಥಾರ್ಜುನೋ ಧನ್ವೀ ಹಲೀ ರಾಮಶ್ಚ ಸವ್ಯತಃ।।
ಅವನ ಎರಡು ತೋಳುಗಳಿಂದ ಸಂಕರ್ಷಣ-ಧನಂಜಯರು ಹೊರಬಂದರು. ಧನ್ವೀ ಅರ್ಜುನನು ಎಡಗಡೆಯಿಂದ ಮತ್ತು ಹಲಾಯುಧವನ್ನು ಹಿಡಿದ ರಾಮನು ಬಲಗಡೆಯಿಂದ.
05129008a ಭೀಮೋ ಯುಧಿಷ್ಠಿರಶ್ಚೈವ ಮಾದ್ರೀಪುತ್ರೌ ಚ ಪೃಷ್ಠತಃ।
05129008c ಅಂಧಕಾ ವೃಷ್ಣಯಶ್ಚೈವ ಪ್ರದ್ಯುಮ್ನಪ್ರಮುಖಾಸ್ತತಃ।।
05129009a ಅಗ್ರೇ ಬಭೂವುಃ ಕೃಷ್ಣಸ್ಯ ಸಮುದ್ಯತಮಹಾಯುಧಾಃ।
ಭೀಮ, ಯುಧಿಷ್ಠಿರ, ಮತ್ತು ಮಾದ್ರೀಪುತ್ರರಿಬ್ಬರು ಅವನ ಬೆನ್ನಿನಿಂದ ಮತ್ತು ಪ್ರದ್ಯುಮ್ನನೇ ಮೊದಲಾದ ಅಂಧಕ ವೃಷ್ಣಿಯರು ಮುಖದಿಂದ ಹೊರಬಂದು ಮಹಾಯುಧಗಳನ್ನು ಹಿಡಿದು ಕೃಷ್ಣನ ಎದಿರು ಬಂದರು.
05129009c ಶಂಖಚಕ್ರಗದಾಶಕ್ತಿಶಾರ್ಮ್ಗಲಾಂಗಲನಂದಕಾಃ।।
05129010a ಅದೃಶ್ಯಂತೋದ್ಯತಾನ್ಯೇವ ಸರ್ವಪ್ರಹರಣಾನಿ ಚ।
05129010c ನಾನಾಬಾಹುಷು ಕೃಷ್ಣಸ್ಯ ದೀಪ್ಯಮಾನಾನಿ ಸರ್ವಶಃ।।
ಶಂಖ, ಚಕ್ರ, ಗದೆ, ಶಕ್ತಿ, ಶಾಂಙೃ, ಲಾಂಗಲ ಮತ್ತು ನಂದಕಗಳು ತೋರಿಸಿಕೊಂಡವು. ಇನ್ನೂ ಇತರ ಸರ್ವ ಆಯುಧಗಳು ಕೃಷ್ಣನ ಎಲ್ಲ ನಾನಾ ಬಾಹುಗಳಲ್ಲಿ ಬೆಳಗುತ್ತಿದ್ದವು.
05129011a ನೇತ್ರಾಭ್ಯಾಂ ನಸ್ತತಶ್ಚೈವ ಶ್ರೋತ್ರಾಭ್ಯಾಂ ಚ ಸಮಂತತಃ।
05129011c ಪ್ರಾದುರಾಸನ್ಮಹಾರೌದ್ರಾಃ ಸಧೂಮಾಃ ಪಾವಕಾರ್ಚಿಷಃ।
05129011e ರೋಮಕೂಪೇಷು ಚ ತಥಾ ಸೂರ್ಯಸ್ಯೇವ ಮರೀಚಯಃ।।
ಅವನ ಎರಡೂ ಕಣ್ಣುಗಳಿಂದ, ಮೂಗಿನಿಂದ ಮತ್ತು ಎರಡು ಕಿವಿಗಳಿಂದ ಸುತ್ತಲೂ ಮಹಾರೌದ್ರವಾದ ಹೊಗೆಯಿಂದ ಕೂಡಿದ ಬೆಂಕಿಯು ಪ್ರಕಾಶಿಸಿ ಹೊರಬಂದಿತು. ಅವನ ರೂಮಕೂಪಗಳಿಂದ ಸೂರ್ಯನಂತೆ ಕಿರಣಗಳು ಹೊರಸೂಸಿದವು.
05129012a ತಂ ದೃಷ್ಟ್ವಾ ಘೋರಮಾತ್ಮಾನಂ ಕೇಶವಸ್ಯ ಮಹಾತ್ಮನಃ।
05129012c ನ್ಯಮೀಲಯಂತ ನೇತ್ರಾಣಿ ರಾಜಾನಸ್ತ್ರಸ್ತಚೇತಸಃ।।
05129013a ಋತೇ ದ್ರೋಣಂ ಚ ಭೀಷ್ಮಂ ಚ ವಿದುರಂ ಚ ಮಹಾಮತಿಂ।
05129013c ಸಂಜಯಂ ಚ ಮಹಾಭಾಗಮೃಷೀಂಶ್ಚೈವ ತಪೋಧನಾನ್।।
05129013e ಪ್ರಾದಾತ್ತೇಷಾಂ ಸ ಭಗವಾನ್ದಿವ್ಯಂ ಚಕ್ಷುರ್ಜನಾರ್ದನಃ।।
ದ್ರೋಣ, ಭೀಷ್ಮ, ಮಹಾಮತಿ ವಿದುರ, ಮಹಾಭಾಗ ಸಂಜಯ ಮತ್ತು ತಪೋಧನ ಋಷಿಗಳನ್ನು ಬಿಟ್ಟು ಅಲ್ಲಿದ್ದ ರಾಜರು ಆ ಮಹಾತ್ಮ ಕೇಶವನ ಘೋರರೂಪವನ್ನು ನೋಡಿ ಚೇತನಗಳು ನಡುಗಿ ಕಣ್ಣುಗಳನ್ನು ಮುಚ್ಚಿದರು. ಭಗವಾನ್ ಜನಾರ್ದನನು ಅವರಿಗೆ ದಿವ್ಯ ದೃಷ್ಟಿಯನ್ನು ನೀಡಿದ್ದನು.
05129014a ತದ್ದೃಷ್ಟ್ವಾ ಮಹದಾಶ್ಚರ್ಯಂ ಮಾಧವಸ್ಯ ಸಭಾತಲೇ।
05129014c ದೇವದುಂದುಭಯೋ ನೇದುಃ ಪುಷ್ಪವರ್ಷಂ ಪಪಾತ ಚ।।
ಸಭಾತಲದಲ್ಲಿ ಮಾಧವನ ಆ ಮಹದಾಶ್ಚರ್ಯವನ್ನು ನೋಡಿ ದೇವದುಂದುಭಿಗಳು ಮೊಳಗಿದವು ಮತ್ತು ಪುಷ್ಪವೃಷ್ಠಿಯು ಬಿದ್ದಿತು.
05129015a ಚಚಾಲ ಚ ಮಹೀ ಕೃತ್ಸ್ನಾ ಸಾಗರಶ್ಚಾಪಿ ಚುಕ್ಷುಭೇ।
05129015c ವಿಸ್ಮಯಂ ಪರಮಂ ಜಗ್ಮುಃ ಪಾರ್ಥಿವಾ ಭರತರ್ಷಭ।।
ಇಡೀ ಭೂಮಿಯು ನಡುಗಿತು ಮತ್ತು ಸಾಗರವೂ ಕ್ಷೋಭೆಗೊಂಡಿತು. ಭರತರ್ಷಭ! ಪಾರ್ಥಿವರೆಲ್ಲರೂ ಪರಮ ವಿಸ್ಮಿತರಾದರು.
05129016a ತತಃ ಸ ಪುರುಷವ್ಯಾಘ್ರಃ ಸಂಜಹಾರ ವಪುಃ ಸ್ವಕಂ।
05129016c ತಾಂ ದಿವ್ಯಾಮದ್ಭುತಾಂ ಚಿತ್ರಾಮೃದ್ಧಿಮತ್ತಾಮರಿಂದಮಃ।।
ಆಗ ಆ ಪುರುಷವ್ಯಾಘ್ರ ಅರಿಂದಮನು ತನ್ನದೇ ಸ್ವರೂಪವಾದ ಆ ದಿವ್ಯ, ಅದ್ಭುತ, ವಿಚಿತ್ರ ವೈಭವಯುಕ್ತ ರೂಪವನ್ನು ಹಿಂದೆ ತೆಗೆದುಕೊಂಡನು.
05129017a ತತಃ ಸಾತ್ಯಕಿಮಾದಾಯ ಪಾಣೌ ಹಾರ್ದಿಕ್ಯಮೇವ ಚ।
05129017c ಋಷಿಭಿಸ್ತೈರನುಜ್ಞಾತೋ ನಿರ್ಯಯೌ ಮಧುಸೂದನಃ।।
ಆಗ ಸಾತ್ಯಕಿ ಮತ್ತು ಹಾರ್ದಿಕ್ಯರಿಬ್ಬರ ಕೈಗಳನ್ನು ಹಿಡಿದು ಮಧುಸೂದನನು ಋಷಿಗಳಿಂದ ಅಪ್ಪಣೆಪಡೆದು ಹೊರಟನು.
05129018a ಋಷಯೋಽಂತರ್ಹಿತಾ ಜಗ್ಮುಸ್ತತಸ್ತೇ ನಾರದಾದಯಃ।
05129018c ತಸ್ಮಿನ್ಕೋಲಾಹಲೇ ವೃತ್ತೇ ತದದ್ಭುತಮಭೂತ್ತದಾ।।
ನಾರದಾದಿ ಋಷಿಗಳು ಅಲ್ಲಿಯೇ ಅಂತರ್ಹಿತರಾದರು. ಆ ಕೋಲಾಹಲದಲ್ಲಿ ಅದೂ ಒಂದು ಅದ್ಭುತವಾಗಿಯೇ ನಡೆಯಿತು.
05129019a ತಂ ಪ್ರಸ್ಥಿತಮಭಿಪ್ರೇಕ್ಷ್ಯ ಕೌರವಾಃ ಸಹ ರಾಜಭಿಃ।
05129019c ಅನುಜಗ್ಮುರ್ನರವ್ಯಾಘ್ರಂ ದೇವಾ ಇವ ಶತಕ್ರತುಂ।।
ಅವನು ಹೋಗುತ್ತಿರುವುದನ್ನು ನೋಡಿ ರಾಜರೊಂದಿಗೆ ಕೌರವರು ಶತಕ್ರತುವನ್ನು ದೇವತೆಗಳು ಹೇಗೋ ಹಾಗೆ ಆ ನರವ್ಯಾಘ್ರನನ್ನು ಹಿಂಬಾಲಿಸಿದರು.
05129020a ಅಚಿಂತಯನ್ನಮೇಯಾತ್ಮಾ ಸರ್ವಂ ತದ್ರಾಜಮಂಡಲಂ।
05129020c ನಿಶ್ಚಕ್ರಾಮ ತತಃ ಶೌರಿಃ ಸಧೂಮ ಇವ ಪಾವಕಃ।।
ಆ ಸರ್ವ ರಾಜಮಂಡಲವನ್ನೂ ನಿರ್ಲಕ್ಷಿಸಿ ಆ ಅಮೇಯಾತ್ಮ ಶೌರಿಯು ಹೊಗೆಯಿಂದ ಹಿಂಬಾಲಿಸಲ್ಪಡುವ ಬೆಂಕಿಯಂತೆ ಹೊರ ಬಂದನು.
05129021a ತತೋ ರಥೇನ ಶುಭ್ರೇಣ ಮಹತಾ ಕಿಂಕಿಣೀಕಿನಾ।
05129021c ಹೇಮಜಾಲವಿಚಿತ್ರೇಣ ಲಘುನಾ ಮೇಘನಾದಿನಾ।।
05129022a ಸೂಪಸ್ಕರೇಣ ಶುಭ್ರೇಣ ವೈಯಾಘ್ರೇಣ ವರೂಥಿನಾ।
05129022c ಸೈನ್ಯಸುಗ್ರೀವಯುಕ್ತೇನ ಪ್ರತ್ಯದೃಶ್ಯತ ದಾರುಕಃ।।
ಆಗ ಶುಭ್ರವಾದ, ಗಂಟೆಗಳ ನಾದಮಾಡುತ್ತಿದ್ದ, ಹೇಮಜಾಲವಿಚಿತ್ರವಾದ, ಮಳೆಗಾಲದ ಮೋಡದಂತೆ ಜೋರಾಗಿ ಗುಡುಗುತ್ತ ಬಂದ, ವೈಯಾಘ್ರ ಚರ್ಮಗಳನ್ನು ಹೊದೆಸಿದ ಸೂಪಗಳಿರುವ, ಸೈನ್ಯ-ಸುಗ್ರೀವರನ್ನು ಕಟ್ಟಿದ್ದ ಮಹಾ ರಥದಲ್ಲಿ ದಾರುಕನು ಕಾಣಿಸಿಕೊಂಡನು.
05129023a ತಥೈವ ರಥಮಾಸ್ಥಾಯ ಕೃತವರ್ಮಾ ಮಹಾರಥಃ।
05129023c ವೃಷ್ಣೀನಾಂ ಸಮ್ಮತೋ ವೀರೋ ಹಾರ್ದಿಕ್ಯಃ ಪ್ರತ್ಯದೃಶ್ಯತ।।
ಹಾಗೆಯೇ ವೃಷ್ಣಿಗಳ ನಾಯಕ, ವೀರ ಹಾರ್ದಿಕ್ಯ ಮಹಾರಥಿ ಕೃತವರ್ಮನು ರಥದಲ್ಲಿ ಕುಳಿತು ಕಾಣಿಸಿಕೊಂಡನು.
05129024a ಉಪಸ್ಥಿತರಥಂ ಶೌರಿಂ ಪ್ರಯಾಸ್ಯಂತಮರಿಂದಮಂ।
05129024c ಧೃತರಾಷ್ಟ್ರೋ ಮಹಾರಾಜಃ ಪುನರೇವಾಭ್ಯಭಾಷತ।।
ರಥದಲ್ಲಿ ಕುಳಿತು ಹೊರಡುತ್ತಿದ್ದ ಅರಿಂದಮ ಶೌರಿಗೆ ಮಹಾರಾಜ ಧೃತರಾಷ್ಟ್ರನು ಪುನಃ ಹೇಳಿದನು:
05129025a ಯಾವದ್ಬಲಂ ಮೇ ಪುತ್ರೇಷು ಪಶ್ಯಸ್ಯೇತಜ್ಜನಾರ್ದನ।
05129025c ಪ್ರತ್ಯಕ್ಷಂ ತೇ ನ ತೇ ಕಿಂ ಚಿತ್ಪರೋಕ್ಷಂ ಶತ್ರುಕರ್ಶನ।।
“ಜನಾರ್ದನ! ಪುತ್ರರ ಮೇಲೆ ನನಗೆ ಎಷ್ಟು ಬಲವಿದೆ ಎನ್ನುವುದನ್ನು ನೀನು ನೋಡಿದ್ದೀಯೆ. ಶತ್ರುಕರ್ಶನ! ಎಲ್ಲವೂ ನಿನ್ನ ಪ್ರತ್ಯಕ್ಷದಲ್ಲಿಯೇ ಇದೆ. ಪರೋಕ್ಷವಾಗಿ ಏನೂ ನಡೆಯುತ್ತಿಲ್ಲ.
05129026a ಕುರೂಣಾಂ ಶಮಮಿಚ್ಚಂತಂ ಯತಮಾನಂ ಚ ಕೇಶವ।
05129026c ವಿದಿತ್ವೈತಾಮವಸ್ಥಾಂ ಮೇ ನಾತಿಶಂಕಿತುಮರ್ಹಸಿ।।
ಕೇಶವ! ಕುರುಗಳಲ್ಲಿ ಶಾಂತಿಯನ್ನು ಇಚ್ಛಿಸುವ, ಅದಕ್ಕಾಗಿ ಪ್ರಯತ್ನಿಸುತ್ತಿರುವ ನನ್ನ ಅವಸ್ಥೆಯು ನಿನಗೆ ತಿಳಿದೇ ಇದೆ. ನನ್ನ ಮೇಲೆ ಶಂಕಿಸಬಾರದು.
05129027a ನ ಮೇ ಪಾಪೋಽಸ್ತ್ಯಭಿಪ್ರಾಯಃ ಪಾಂಡವಾನ್ಪ್ರತಿ ಕೇಶವ।
05129027c ಜ್ಞಾತಮೇವ ಹಿ ತೇ ವಾಕ್ಯಂ ಯನ್ಮಯೋಕ್ತಃ ಸುಯೋಧನಃ।।
ಕೇಶವ! ಪಾಂಡವರ ಕುರಿತು ನನಗೆ ಪಾಪತ್ವದ ಅಭಿಪ್ರಾಯವಿಲ್ಲ. ಏಕೆಂದರೆ ನಾನು ಸುಯೋಧನನಿಗೆ ಏನು ಹೇಳಿದೆನೆನ್ನುವುದು ನಿನಗೆ ತಿಳಿದೇ ಇದೆ.
05129028a ಜಾನಂತಿ ಕುರವಃ ಸರ್ವೇ ರಾಜಾನಶ್ಚೈವ ಪಾರ್ಥಿವಾಃ।
05129028c ಶಮೇ ಪ್ರಯತಮಾನಂ ಮಾಂ ಸರ್ವಯತ್ನೇನ ಮಾಧವ।।
ಮಾಧವ! ನಾನು ಸರ್ವಯತ್ನಗಳಿಂದ ಶಾಂತಿಗೆ ಪ್ರಯತ್ನಪಟ್ಟಿದ್ದೇನೆ ಎನ್ನುವುದು ಎಲ್ಲ ಕುರುಗಳಿಗೂ ಪಾರ್ಥಿವ ರಾಜರಿಗೂ ತಿಳಿದಿದೆ.”
05129029a ತತೋಽಬ್ರವೀನ್ಮಹಾಬಾಹುರ್ಧೃತರಾಷ್ಟ್ರಂ ಜನೇಶ್ವರಂ।
05129029c ದ್ರೋಣಂ ಪಿತಾಮಹಂ ಭೀಷ್ಮಂ ಕ್ಷತ್ತಾರಂ ಬಾಹ್ಲಿಕಂ ಕೃಪಂ।।
ಆಗ ಆ ಮಹಾಬಾಹುವು ಜನೇಶ್ವರ ಧೃತರಾಷ್ಟ್ರ, ದ್ರೋಣ, ಪಿತಾಮಹ ಭೀಷ್ಮ, ಕ್ಷತ್ತ, ಬಾಹ್ಲೀಕ ಮತ್ತು ಕೃಪರನ್ನು ಉದ್ದೇಶಿಸಿ ಹೇಳಿದನು:
05129030a ಪ್ರತ್ಯಕ್ಷಮೇತ್ಭವತಾಂ ಯದ್ವೃತ್ತಂ ಕುರುಸಂಸದಿ।
05129030c ಯಥಾ ಚಾಶಿಷ್ಟವನ್ಮಂದೋ ರೋಷಾದಸಕೃದುತ್ಥಿತಃ।।
“ಕುರುಸಂಸದಿಯಲ್ಲಿ ಏನು ನಡೆಯಿತೋ ಅದು ನಿಮ್ಮ ಪ್ರತ್ಯಕ್ಷದಲ್ಲಿಯೇ ನಡೆಯಿತು. ಹೇಗೆ ಆ ಶಿಷ್ಟಾಚಾರಗಳಿಲ್ಲದ ಮೂಢನು ಸಿಟ್ಟಿನಿಂದ ಹಾರಿ ಮೇಲೇಳುತ್ತಿದ್ದನು!
05129031a ವದತ್ಯನೀಶಮಾತ್ಮಾನಂ ಧೃತರಾಷ್ಟ್ರೋ ಮಹೀಪತಿಃ।
05129031c ಆಪೃಚ್ಚೇ ಭವತಃ ಸರ್ವಾನ್ಗಮಿಷ್ಯಾಮಿ ಯುಧಿಷ್ಠಿರಂ।।
ಮಹೀಪತಿ ಧೃತರಾಷ್ಟ್ರನು ತನ್ನನ್ನು ಅನೀಶನೆಂದು ಕರೆದುಕೊಳ್ಳುವುದು ಸರಿಯಾದುದೇ! ನಿಮ್ಮೆಲ್ಲರನ್ನೂ ಬೀಳ್ಕೊಳ್ಳುತ್ತಿದ್ದೇನೆ. ಯುಧಿಷ್ಠಿರನ ಬಳಿ ಹೋಗುತ್ತೇನೆ.”
05129032a ಆಮಂತ್ರ್ಯ ಪ್ರಸ್ಥಿತಂ ಶೌರಿಂ ರಥಸ್ಥಂ ಪುರುಷರ್ಷಭಂ।
05129032c ಅನುಜಗ್ಮುರ್ಮಹೇಷ್ವಾಸಾಃ ಪ್ರವೀರಾ ಭರತರ್ಷಭಾಃ।।
05129033a ಭೀಷ್ಮೋ ದ್ರೋಣಃ ಕೃಪಃ ಕ್ಷತ್ತಾ ಧೃತರಾಷ್ಟ್ರೋಽಥ ಬಾಹ್ಲಿಕಃ।
05129033c ಅಶ್ವತ್ಥಾಮಾ ವಿಕರ್ಣಶ್ಚ ಯುಯುತ್ಸುಶ್ಚ ಮಹಾರಥಃ।।
ಕೈಮುಗಿದು ರಥದಲ್ಲಿ ಕುಳಿತು ಹೊರಟ ಪುರುಷರ್ಷಭ ಶೌರಿಯನ್ನು ಭರತರ್ಷಭ ಪ್ರವೀರರಾದ, ಮಹೇಷ್ವಾಸರಾದ ಭೀಷ್ಮ, ದ್ರೋಣ, ಕ್ಷತ್ತ, ಧೃತರಾಷ್ಟ್ರ, ಬಾಹ್ಲೀಕ, ಅಶ್ವತ್ಥಾಮ, ವಿಕರ್ಣ ಮತ್ತು ಮಹಾರಥಿ ಯುಯುತ್ಸುವು ಹಿಂಬಾಲಿಸಿ ಹೋದರು.
05129034a ತತೋ ರಥೇನ ಶುಭ್ರೇಣ ಮಹತಾ ಕಿಂಕಿಣೀಕಿನಾ।
05129034c ಕುರೂಣಾಂ ಪಶ್ಯತಾಂ ಪ್ರಾಯಾತ್ಪೃಥಾಂ ದ್ರಷ್ಟುಂ ಪಿತೃಷ್ವಸಾಂ।।
ಆಗ ಶುಭ್ರವಾದ, ಗಂಟೆಗಳ ನಾದಗೈಯುತ್ತಿದ್ದ ದೊಡ್ಡ ರಥದಲ್ಲಿ, ಕುರುಗಳು ನೋಡುತ್ತಿದ್ದಂತೆಯೇ ಕೃಷ್ಣನು ತನ್ನ ಸೋದರತ್ತೆಯನ್ನು ಕಾಣಲು ಹೊರಟನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ವಿಶ್ವರೂಪದರ್ಶನೇ ಏಕೋನತ್ರಿಂಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ವಿಶ್ವರೂಪದರ್ಶನದಲ್ಲಿ ನೂರಾಇಪ್ಪತ್ತೊಂಭತ್ತನೆಯ ಅಧ್ಯಾಯವು.