ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 86
ಸಾರ
ಕೃಷ್ಣನಿಗೆ ಸತ್ಕಾರವಾಗಿ ಸಂಪತ್ತನ್ನು ಸರ್ವಥಾ ಕೊಟ್ಟರೆ ತನಗೆ ಹೆದರಿ ಕೊಡುತ್ತಿದ್ದಾರೆಂದು ಆತನು ತಿಳಿದುಕೊಳ್ಳುತ್ತಾನೆಂದೂ, “ಯುದ್ಧವನ್ನು ನಿಶ್ಚಯಿಸಿದ ನಂತರ ಆತಿಥ್ಯವನ್ನಿತ್ತು ಹೋರಾಟಕ್ಕೆ ಶಾಂತಿಯನ್ನು ತರಬಾರದು” ಎಂದೂ ದುರ್ಯೋಧನನು ನುಡಿದುದು (1-6). ಆಗ ಭೀಷ್ಮನು “ಕೃಷ್ಣನು ಏನನ್ನು ಹೇಳುತ್ತಾನೋ ಅದನ್ನು ಮಾಡು” ಎಂದು ಧೃತರಾಷ್ಟ್ರನಿಗೆ ಹೇಳಲು (7-11), ದುರ್ಯೋಧನನು ತಾನು ಕೃಷ್ಣನನ್ನು ಸೆರೆಹಿಡಿಯುತ್ತೇನೆ ಎನ್ನುವುದು (12-15). ಧೃತರಾಷ್ಟ್ರನು ಮಗನಿಗೆ ಹಾಗೆ ಮಾಡಬಾರದೆಂದು ಹೇಳಲು (16-18), ಭೀಷ್ಮನು ತಂದೆ-ಮಗ ಇಬ್ಬರನ್ನೂ ನಿಂದಿಸಿ ಸಭಾತ್ಯಾಗ ಮಾಡಿದುದು (18-23).
05086001 ದುರ್ಯೋಧನ ಉವಾಚ।
05086001a ಯದಾಹ ವಿದುರಃ ಕೃಷ್ಣೇ ಸರ್ವಂ ತತ್ಸತ್ಯಮುಚ್ಯತೇ।
05086001c ಅನುರಕ್ತೋ ಹ್ಯಸಂಹಾರ್ಯಃ ಪಾರ್ಥಾನ್ಪ್ರತಿ ಜನಾರ್ದನಃ।।
ದುರ್ಯೋಧನನು ಹೇಳಿದನು: “ಕೃಷ್ಣನ ಕುರಿತು ವಿದುರನನು ಹೇಳಿದುದೆಲ್ಲವೂ ಸತ್ಯ. ಜನಾರ್ದನನು ಪಾರ್ಥರಲ್ಲಿ ಬಿಡಿಸಲಸಾಧ್ಯವಾದಷ್ಟು ಅನುರಕ್ತನಾಗಿದ್ದಾನೆ.
05086002a ಯತ್ತು ಸತ್ಕಾರಸಮ್ಯುಕ್ತಂ ದೇಯಂ ವಸು ಜನಾರ್ದನೇ।
05086002c ಅನೇಕರೂಪಂ ರಾಜೇಂದ್ರ ನ ತದ್ದೇಯಂ ಕದಾ ಚನ।।
ರಾಜೇಂದ್ರ! ಜನಾರ್ದನನಿಗೆ ಸತ್ಕಾರವಾಗಿ ಏನು ಅನೇಕ ರೂಪದ ಸಂಪತ್ತನ್ನು ಕೊಡುವೆಯೆಂದು ನೀನು ಹೇಳಿದೆಯೋ ಅದನ್ನು ಸರ್ವಥಾ ಕೊಡಬಾರದು.
05086003a ದೇಶಃ ಕಾಲಸ್ತಥಾಯುಕ್ತೋ ನ ಹಿ ನಾರ್ಹತಿ ಕೇಶವಃ।
05086003c ಮಂಸ್ಯತ್ಯಧೋಕ್ಷಜೋ ರಾಜನ್ಭಯಾದರ್ಚತಿ ಮಾಮಿತಿ।।
ಇದು ಅದಕ್ಕೆ ತಕ್ಕುದಾದ ಸ್ಥಳವೂ ಅಲ್ಲ, ಸಮಯವೂ ಅಲ್ಲ. ಕೇಶವನು ಅವೆಲ್ಲವಕ್ಕೂ ಅರ್ಹನಿರಬಹುದು. ಆದರೆ ರಾಜನ್! ನನ್ನನ್ನು ಭಯಪಟ್ಟುಕೊಂಡು ಪೂಜಿಸುತ್ತಿದ್ದಾನೆ ಎಂದು ಅಧೋಕ್ಷಜನು ತಿಳಿದುಕೊಳ್ಳುತ್ತಾನೆ.
05086004a ಅವಮಾನಶ್ಚ ಯತ್ರ ಸ್ಯಾತ್ಕ್ಷತ್ರಿಯಸ್ಯ ವಿಶಾಂ ಪತೇ।
05086004c ನ ತತ್ಕುರ್ಯಾದ್ಬುಧಃ ಕಾರ್ಯಮಿತಿ ಮೇ ನಿಶ್ಚಿತಾ ಮತಿಃ।।
ವಿಶಾಂಪತೇ! ಬುದ್ಧಿವಂತ ಕ್ಷತ್ರಿಯನು ಅವಮಾನಹೊಂದುವ ಕಾರ್ಯವನ್ನು ಮಾಡಬಾರದು ಎಂದು ನನ್ನ ಅಭಿಪ್ರಾಯ.
05086005a ಸ ಹಿ ಪೂಜ್ಯತಮೋ ದೇವಃ ಕೃಷ್ಣಃ ಕಮಲಲೋಚನಃ।
05086005c ತ್ರಯಾಣಾಮಪಿ ಲೋಕಾನಾಂ ವಿದಿತಂ ಮಮ ಸರ್ವಥಾ।।
ಕಮಲಲೋಚನ ದೇವ ಕೃಷ್ಣನು ಮೂರು ಲೋಕಗಳಲ್ಲಿಯೂ ಸರ್ವಥಾ ಅತ್ಯಂತ ಪೂಜನೀಯ ಎನ್ನುವುದನ್ನು ನಾನು ತಿಳಿದುಕೊಂಡಿದ್ದೇನೆ.
05086006a ನ ತು ತಸ್ಮಿನ್ಪ್ರದೇಯಂ ಸ್ಯಾತ್ತಥಾ ಕಾರ್ಯಗತಿಃ ಪ್ರಭೋ।
05086006c ವಿಗ್ರಹಃ ಸಮುಪಾರಬ್ಧೋ ನ ಹಿ ಶಾಮ್ಯತ್ಯವಿಗ್ರಹಾತ್।।
ಆದುದರಿಂದ ಪ್ರಭೋ! ಅವನಿಗೆ ಈಗ ಏನನ್ನೂ ಕೊಡುವುದು ಸರಿಯಲ್ಲ. ಯುದ್ಧವನ್ನು ನಿಶ್ಚಯಿಸಿದ ನಂತರ ಆತಿಥ್ಯವನ್ನಿತ್ತು ಹೋರಾಟಕ್ಕೆ ಶಾಂತಿಯನ್ನು ತರಬಾರದು.””
05086007 ವೈಶಂಪಾಯನ ಉವಾಚ।
05086007a ತಸ್ಯ ತದ್ವಚನಂ ಶ್ರುತ್ವಾ ಭೀಷ್ಮಃ ಕುರುಪಿತಾಮಹಃ।
05086007c ವೈಚಿತ್ರವೀರ್ಯಂ ರಾಜಾನಮಿದಂ ವಚನಮಬ್ರವೀತ್।।
ವೈಶಂಪಾಯನನು ಹೇಳಿದನು: “ಅವನ ಆ ಮಾತನ್ನು ಕೇಳಿ ಕುರುಪಿತಾಮಹ ಭೀಷ್ಮನು ರಾಜ ವೈಚಿತ್ರವೀರ್ಯನಿಗೆ ಈ ಮಾತನ್ನು ಹೇಳಿದನು:
05086008a ಸತ್ಕೃತೋಽಸತ್ಕೃತೋ ವಾಪಿ ನ ಕ್ರುಧ್ಯೇತ ಜನಾರ್ದನಃ।
05086008c ನಾಲಮನ್ಯಮವಜ್ಞಾತುಮವಜ್ಞಾತೋಽಪಿ ಕೇಶವಃ।।
“ಸತ್ಕಾರವನ್ನು ಮಾಡುವುದರಿಂದ ಅಥವಾ ಮಾಡದೇ ಇರುವುದರಿಂದ ಜನಾರ್ದನನು ಸಿಟ್ಟಾಗುವವನಲ್ಲ. ಯಾವುದೂ ಅವನನ್ನು ಕಡೆಗಣಿಸಲಾರದು. ಏಕೆಂದರೆ ಕೇಶವನು ಕಡೆಗಣಿಸಲಾಗುವವನಲ್ಲ.
05086009a ಯತ್ತು ಕಾರ್ಯಂ ಮಹಾಬಾಹೋ ಮನಸಾ ಕಾರ್ಯತಾಂ ಗತಂ।
05086009c ಸರ್ವೋಪಾಯೈರ್ನ ತಚ್ಚಕ್ಯಂ ಕೇನ ಚಿತ್ಕರ್ತುಮನ್ಯಥಾ।।
ಮಹಾಬಾಹೋ! ಯಾವಕಾರ್ಯವನ್ನು ಮಾಡಬೇಕೆಂದು ಅವನು ಮನಸ್ಸುಮಾಡುತ್ತಾನೋ ಅದನ್ನು ಬೇರೆಯದಾಗಿ ಮಾಡುವುದಕ್ಕೆ ಎಲ್ಲ ಉಪಾಯಗಳನ್ನು ಬಳಸಿದರೂ ಯಾರಿಂದಲೂ ಸಾಧ್ಯವಿಲ್ಲ.
05086010a ಸ ಯದ್ಬ್ರೂಯಾನ್ಮಹಾಬಾಹುಸ್ತತ್ಕಾರ್ಯಮವಿಶಂಕಯಾ।
05086010c ವಾಸುದೇವೇನ ತೀರ್ಥೇನ ಕ್ಷಿಪ್ರಂ ಸಂಶಾಮ್ಯ ಪಾಂಡವೈಃ।।
ಏನನ್ನೂ ಶಂಕಿಸದೇ ಆ ಮಹಾಬಾಹುವು ಏನನ್ನು ಹೇಳುತ್ತಾನೋ ಅದನ್ನು ಮಾಡು. ವಾಸುದೇವನ ಮೂಲಕ ಪಾಂಡವರೊಂದಿಗೆ ಬೇಗ ಶಾಂತಿಯನ್ನು ತಾ.
05086011a ಧರ್ಮ್ಯಮರ್ಥ್ಯಂ ಸ ಧರ್ಮಾತ್ಮಾ ಧ್ರುವಂ ವಕ್ತಾ ಜನಾರ್ದನಃ।
05086011c ತಸ್ಮಿನ್ವಾಚ್ಯಾಃ ಪ್ರಿಯಾ ವಾಚೋ ಭವತಾ ಬಾಂಧವೈಃ ಸಹ।।
ಆ ಧರ್ಮಾತ್ಮ ಜನಾರ್ದನನು ನಿಶ್ಚಯವಾಗಿಯೂ ಧರ್ಮ ಮತ್ತು ಅರ್ಥಗಳ ಕುರಿತೇ ಹೇಳುತ್ತಾನೆ. ಅವನಿಗೆ ಪ್ರಿಯವಾಗುವ ಮಾತುಗಳನ್ನೇ ನೀನೂ ಕೂಡ ಬಾಂಧವರೊಂದಿಗೆ ಮಾತನಾಡಬೇಕು.”
05086012 ದುರ್ಯೋಧನ ಉವಾಚ।
05086012a ನ ಪರ್ಯಾಯೋಽಸ್ತಿ ಯದ್ರಾಜಂ ಶ್ರಿಯಂ ನಿಷ್ಕೇವಲಾಮಹಂ।
05086012c ತೈಃ ಸಹೇಮಾಮುಪಾಶ್ನೀಯಾಂ ಜೀವಂ ಜೀವೈಃ ಪಿತಾಮಹ।।
ದುರ್ಯೋಧನನು ಹೇಳಿದನು: “ಪಿತಾಮಹ! ಕೇವಲ ನನ್ನದಾಗಿರುವ ಈ ಶ್ರೀ-ರಾಜ್ಯವನ್ನು ಅವರೊಂದಿಗೆ ಹಂಚಿಕೊಂಡು ಜೀವಿಸಲು ಸಾಧ್ಯವಿಲ್ಲ.
05086013a ಇದಂ ತು ಸುಮಹತ್ಕಾರ್ಯಂ ಶೃಣು ಮೇ ಯತ್ಸಮರ್ಥಿತಂ।
05086013c ಪರಾಯಣಂ ಪಾಂಡವಾನಾಂ ನಿಯಂಸ್ಯಾಮಿ ಜನಾರ್ದನಂ।।
ನಾನು ನಿಶ್ಚಯಿಸಿದಂತೆ ಮುಖ್ಯವಾಗಿ ಮಾಡಬೇಕಾದ ಕಾರ್ಯವೇನೆನ್ನುವುದನ್ನು ಕೇಳಿ: ಪಾಂಡವರ ಪರಾಯಣನಾದ ಜನಾರ್ದನನನ್ನು ಸೆರೆಹಿಡಿಯುತ್ತೇನೆ.
05086014a ತಸ್ಮಿನ್ಬದ್ಧೇ ಭವಿಷ್ಯಂತಿ ವೃಷ್ಣಯಃ ಪೃಥಿವೀ ತಥಾ।
05086014c ಪಾಂಡವಾಶ್ಚ ವಿಧೇಯಾ ಮೇ ಸ ಚ ಪ್ರಾತರಿಹೇಷ್ಯತಿ।।
ಅವನನ್ನು ಬಂಧಿಸಿದರೆ ವೃಷ್ಣಿಗಳು, ಇಡೀ ಭೂಮಿ ಮತ್ತು ಪಾಂಡವರು ಕೂಡ ನನ್ನ ವಿಧೇಯರಾಗುತ್ತಾರೆ. ನಾಳೆ ಬೆಳಿಗ್ಗೆ ಅವನು ಇಲ್ಲಿಗೆ ಬರುತ್ತಿದ್ದಾನೆ.
05086015a ಅತ್ರೋಪಾಯಂ ಯಥಾ ಸಮ್ಯಂ ನ ಬುಧ್ಯೇತ ಜನಾರ್ದನಃ।
05086015c ನ ಚಾಪಾಯೋ ಭವೇತ್ಕಶ್ಚಿತ್ತದ್ಭವಾನ್ಪ್ರಬ್ರವೀತು ಮೇ।।
ಯಾವ ರೀತಿಯಲ್ಲಿ ಈ ಉಪಾಯವು ಜನಾರ್ದನನಿಗೆ ತಿಳಿಯದಂತೆ ಮಾಡಬಹುದು ಎನ್ನುವುದನ್ನು ನೀವು ನನಗೆ ಹೇಳಿ.””
05086016 ವೈಶಂಪಾಯನ ಉವಾಚ।
05086016a ತಸ್ಯ ತದ್ವಚನಂ ಶ್ರುತ್ವಾ ಘೋರಂ ಕೃಷ್ಣಾಭಿಸಂಹಿತಂ।
05086016c ಧೃತರಾಷ್ಟ್ರಃ ಸಹಾಮಾತ್ಯೋ ವ್ಯಥಿತೋ ವಿಮನಾಭವತ್।।
ವೈಶಂಪಾಯನನು ಹೇಳಿದನು: “ಕೃಷ್ಣನಿಗೆ ಕೇಡನ್ನು ಬಯಸುವ ಅವನ ಆ ಘೋರ ಮಾತುಗಳನ್ನು ಕೇಳಿ ಅಮಾತ್ಯರೊಂದಿಗೆ ಧೃತರಾಷ್ಟ್ರನು ವ್ಯತಿಥನಾದನು, ವಿಮನಸ್ಕನಾದನು.
05086017a ತತೋ ದುರ್ಯೋಧನಮಿದಂ ಧೃತರಾಷ್ಟ್ರೋಽಬ್ರವೀದ್ವಚಃ।
05086017c ಮೈವಂ ವೋಚಃ ಪ್ರಜಾಪಾಲ ನೈಷ ಧರ್ಮಃ ಸನಾತನಃ।।
ಆಗ ಧೃತರಾಷ್ಟ್ರನು ದುರ್ಯೋಧನನಿಗೆ ಹೇಳಿದನು: “ನೀನು ಪ್ರಜಾಪಾಲಕನಾಗಿದ್ದರೆ ಈ ರೀತಿ ಮಾತನಾಡಬೇಡ! ಇದು ಸನಾತನ ಧರ್ಮವಲ್ಲ!
05086018a ದೂತಶ್ಚ ಹಿ ಹೃಷೀಕೇಶಃ ಸಂಬಂಧೀ ಚ ಪ್ರಿಯಶ್ಚ ನಃ।
05086018c ಅಪಾಪಃ ಕೌರವೇಯೇಷು ಕಥಂ ಬಂಧನಮರ್ಹತಿ।।
ಹೃಷೀಕೇಶನು ದೂತನೂ ನಮ್ಮ ಪ್ರಿಯ ಸಂಬಂಧಿಯೂ ಹೌದು. ಕೌರವರ ಕುರಿತು ಕೆಟ್ಟದ್ದನ್ನು ಬಯಸದ ಅವನು ಹೇಗೆ ಬಂಧಿಸಲು ಅರ್ಹನಾಗಬಹುದು?”
05086019 ಭೀಷ್ಮ ಉವಾಚ।
05086019a ಪರೀತೋ ಧೃತರಾಷ್ಟ್ರಾಯಂ ತವ ಪುತ್ರಃ ಸುಮಂದಧೀಃ।
05086019c ವೃಣೋತ್ಯನರ್ಥಂ ನ ತ್ವರ್ಥಂ ಯಾಚ್ಯಮಾನಃ ಸುಹೃದ್ಗಣೈಃ।।
ಭೀಷ್ಮನು ಹೇಳಿದನು: “ಧೃತರಾಷ್ಟ್ರ! ನಿನ್ನ ಈ ಮೂಢ ಮಗನನ್ನು ಭೂತ ಅವರಿಸಿದೆ. ಸುಹೃದಯರು ಒಳ್ಳೆಯದನ್ನು ಹೇಳಿದರೂ ಅವನು ಅನರ್ಥವನ್ನೇ ಆರಿಸಿಕೊಳ್ಳುತ್ತಿದ್ದಾನೆ.
05086020a ಇಮಮುತ್ಪಥಿ ವರ್ತಂತಂ ಪಾಪಂ ಪಾಪಾನುಬಂಧಿನಂ।
05086020c ವಾಕ್ಯಾನಿ ಸುಹೃದಾಂ ಹಿತ್ವಾ ತ್ವಮಪ್ಯಸ್ಯಾನುವರ್ತಸೇ।।
ನೀನು ಕೂಡ ಪಾಪಿಷ್ಟರನ್ನು ಕಟ್ಟಿಕೊಂಡು ಪಾಪಿಗಳಂತೆ ವರ್ತಿಸುತ್ತಿರುವವನನ್ನು ಸುಹೃದಯರ ಮಾತುಗಳನ್ನು ತೊರೆದು ಅನುಸರಿಸುತ್ತಿದ್ದೀಯೆ.
05086021a ಕೃಷ್ಣಮಕ್ಲಿಷ್ಟಕರ್ಮಾಣಮಾಸಾದ್ಯಾಯಂ ಸುದುರ್ಮತಿಃ।
05086021c ತವ ಪುತ್ರಃ ಸಹಾಮಾತ್ಯಃ ಕ್ಷಣೇನ ನ ಭವಿಷ್ಯತಿ।।
ನಿನ್ನ ಈ ತುಂಬಾ ಕೆಟ್ಟ ಮಗನು ಅಮಾತ್ಯರೊಂದಿಗೆ ಅಕ್ಲಿಷ್ಟಕರ್ಮಿ ಕೃಷ್ಣನನ್ನು ಠಕ್ಕರಿಸಿ ಕ್ಷಣದಲ್ಲಿಯೇ ಇಲ್ಲದಂತಾಗುತ್ತಾನೆ.
05086022a ಪಾಪಸ್ಯಾಸ್ಯ ನೃಶಂಸಸ್ಯ ತ್ಯಕ್ತಧರ್ಮಸ್ಯ ದುರ್ಮತೇಃ।
05086022c ನೋತ್ಸಹೇಽನರ್ಥಸಮ್ಯುಕ್ತಾಂ ವಾಚಂ ಶ್ರೋತುಂ ಕಥಂ ಚನ।।
ಈ ಪಾಪಿಯ, ಸುಳ್ಳುಬುರುಕನ, ಧರ್ಮವನ್ನು ತ್ಯಜಿಸಿದ ದುರ್ಮತಿಯು ಹೇಳುತ್ತಿರುವ ಮಾತುಗಳನ್ನು ಕೇಳಲು ನನಗೆ ಎಂದೂ ಉತ್ಸಾಹವಿಲ್ಲ.””
05086023 ವೈಶಂಪಾಯನ ಉವಾಚ।
05086023a ಇತ್ಯುಕ್ತ್ವಾ ಭರತಶ್ರೇಷ್ಠೋ ವೃದ್ಧಃ ಪರಮಮನ್ಯುಮಾನ್।
05086023c ಉತ್ಥಾಯ ತಸ್ಮಾತ್ಪ್ರಾತಿಷ್ಠದ್ಭೀಷ್ಮಃ ಸತ್ಯಪರಾಕ್ರಮಃ।।
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಭರತಶ್ರೇಷ್ಠ, ವೃದ್ಧ, ಸತ್ಯಪರಾಕ್ರಮಿ, ಭೀಷ್ಮನು ಪರಮ ಕುಪಿತನಾಗಿ ಎದ್ದು ಅಲ್ಲಿಂದ ಹೊರಟು ಹೋದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ದುರ್ಯೋಧನವಾಕ್ಯೇ ಷಡಶೀತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ದುರ್ಯೋಧನವಾಕ್ಯ ಎನ್ನುವ ಎಂಭತ್ತಾರನೆಯ ಅಧ್ಯಾಯವು.