ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಕೀಚಕವಧ ಪರ್ವ
ಅಧ್ಯಾಯ 20
ಸಾರ
ಭೀಮನು ದ್ರೌಪದಿಯನ್ನು ಸಂತವಿಸುವುದು (1-13). ದ್ರೌಪದಿಯು ಕೀಚಕನನ್ನು ಕೊಲ್ಲು ಎಂದು ಭೀಮನಲ್ಲಿ ಕೇಳಿಕೊಳ್ಳುವುದು (14-34).
04020001 ಭೀಮಸೇನ ಉವಾಚ।
04020001a ಧಿಗಸ್ತು ಮೇ ಬಾಹುಬಲಂ ಗಾಂಡೀವಂ ಫಲ್ಗುನಸ್ಯ ಚ।
04020001c ಯತ್ತೇ ರಕ್ತೌ ಪುರಾ ಭೂತ್ವಾ ಪಾಣೀ ಕೃತಕಿಣಾವುಭೌ।।
ಭೀಮಸೇನನು ಹೇಳಿದನು: “ನನ್ನ ಬಾಹುಬಲಕ್ಕೂ ಫಲ್ಗುನನ ಗಾಂಡೀವಕ್ಕೂ ಧಿಕ್ಕಾರ! ಹಿಂದೆ ಕೆಂಪಾಗಿದ್ದ ನಿನ್ನ ಕೈಗಳೆರಡೂ ಈಗ ದಡ್ಡುಗಟ್ಟಿವೆ.
04020002a ಸಭಾಯಾಂ ಸ್ಮ ವಿರಾಟಸ್ಯ ಕರೋಮಿ ಕದನಂ ಮಹತ್।
04020002c ತತ್ರ ಮಾಂ ಧರ್ಮರಾಜಸ್ತು ಕಟಾಕ್ಷೇಣ ನ್ಯವಾರಯತ್।।
04020002E ತದಹಂ ತಸ್ಯ ವಿಜ್ಞಾಯ ಸ್ಥಿತ ಏವಾಸ್ಮಿ ಭಾಮಿನಿ।।
ವಿರಾಟನ ಸಭೆಯಲ್ಲಿ ನಾನು ದೊಡ್ಡ ಕದನವನ್ನೇ ಮಾಡುತ್ತಿದ್ದೆ. ಆದರೆ ಅಲ್ಲಿ ಧರ್ಮರಾಜನು ನನ್ನನ್ನು ಕಡೆಗಣ್ಣಿನ ನೋಟದಿಂದ ತಡೆದನು. ಭಾಮಿನಿ! ಅವನ ಆಶಯವನ್ನು ತಿಳಿದು ನಾನು ಸುಮ್ಮನಿದ್ದುಬಿಟ್ಟೆ.
04020003a ಯಚ್ಚ ರಾಷ್ಟ್ರಾತ್ಪ್ರಚ್ಯವನಂ ಕುರೂಣಾಮವಧಶ್ಚ ಯಃ।
04020003c ಸುಯೋಧನಸ್ಯ ಕರ್ಣಸ್ಯ ಶಕುನೇಃ ಸೌಬಲಸ್ಯ ಚ।।
04020004a ದುಃಶಾಸನಸ್ಯ ಪಾಪಸ್ಯ ಯನ್ಮಯಾ ನ ಹೃತಂ ಶಿರಃ।
04020004c ತನ್ಮೇ ದಹತಿ ಕಲ್ಯಾಣಿ ಹೃದಿ ಶಲ್ಯಮಿವಾರ್ಪಿತಂ।।
04020004e ಮಾ ಧರ್ಮಂ ಜಹಿ ಸುಶ್ರೋಣಿ ಕ್ರೋಧಂ ಜಹಿ ಮಹಾಮತೇ।।
ಕಲ್ಯಾಣಿ! ನಾಡಿನಿಂದ ಹೊರದೂಡಿರುವುದು, ಇನ್ನೂ ನಾವು ಕೌರವರನ್ನು ಕೊಲ್ಲದಿರುವುದು, ಸುಯೋಧನ, ಕರ್ಣ, ಸೌಬಲ ಶಕುನಿ ಮತ್ತು ಪಾಪಿ ದುಃಶಾಸನನ ಶಿರಗಳನ್ನು ನಾನು ಕತ್ತರಿಸದೇ ಇರುವುದು ಇವೆಲ್ಲವೂ ನನ್ನ ಹೃದಯವನ್ನು ಶಲ್ಯದಂತೆ ಸುಡುತ್ತಿವೆ. ಸುಶ್ರೋಣಿ! ಧರ್ಮವನ್ನು ತೊರೆಯಬೇಡ. ಮಹಾಮತೇ! ಕ್ರೋಧವನ್ನು ಬಿಡು.
04020005a ಇಮಂ ಚ ಸಮುಪಾಲಂಭಂ ತ್ವತ್ತೋ ರಾಜಾ ಯುಧಿಷ್ಠಿರಃ।
04020005c ಶೃಣುಯಾದ್ಯದಿ ಕಲ್ಯಾಣಿ ಕೃತ್ಸ್ನಂ ಜಹ್ಯಾತ್ಸ ಜೀವಿತಂ।।
ಕಲ್ಯಾಣಿ! ನಿನ್ನಿಂದ ಈ ನಿಂದೆಯನ್ನೆಲ್ಲ ರಾಜ ಯುಧಿಷ್ಠಿರನು ಕೇಳಿದರೆ ನಿಶ್ಚಯವಾಗಿಯೂ ಅವನು ಪ್ರಾಣ ಬಿಡುತ್ತಾನೆ.
04020006a ಧನಂಜಯೋ ವಾ ಸುಶ್ರೋಣಿ ಯಮೌ ವಾ ತನುಮಧ್ಯಮೇ।
04020006c ಲೋಕಾಂತರಗತೇಷ್ವೇಷು ನಾಹಂ ಶಕ್ಷ್ಯಾಮಿ ಜೀವಿತುಂ।।
ತನುಮಧ್ಯಮೇ! ಸುಶ್ರೋಣಿ! ಧನಂಜಯನಾಗಲೀ ಯಮಳರಾಗಲೀ ಮರಣಹೊಂದಿದರೆ ನಾನು ಜೀವಿಸಿರಲಾರೆ.
04020007a ಸುಕನ್ಯಾ ನಾಮ ಶಾರ್ಯಾತೀ ಭಾರ್ಗವಂ ಚ್ಯವನಂ ವನೇ।
04020007c ವಲ್ಮೀಕಭೂತಂ ಶಾಮ್ಯಂತಮನ್ವಪದ್ಯತ ಭಾಮಿನೀ।।
ಭಾಮಿನೀ! ಹಿಂದೆ ಸುಕನ್ಯಾ ಎಂಬ ಹೆಸರಿನ ಶರ್ಯಾತಿಯ ಮಗಳು ವನದಲ್ಲಿ ತಪಸ್ಸುಮಾಡುತ್ತಾ ಹುತ್ತವಾಗಿದ್ದ ಭೃಗುವಂಶಜ ಚ್ಯವನನನ್ನು ಅರಣ್ಯದಲ್ಲಿ ಅನುಸರಿಸಿದಳು.
04020008a ನಾಡಾಯನೀ ಚೇಂದ್ರಸೇನಾ ರೂಪೇಣ ಯದಿ ತೇ ಶ್ರುತಾ।
04020008c ಪತಿಮನ್ವಚರದ್ವೃದ್ಧಂ ಪುರಾ ವರ್ಷಸಹಸ್ರಿಣಂ।।
ಹಿಂದೆ ರೂಪದಲ್ಲಿ ಪ್ರಸಿದ್ಧಳಾದ ನಾಡಾಯಣ ವಂಶದ ಇಂದ್ರಸೇನೆಯು ಸಾವಿರ ವರ್ಷದ ವೃದ್ಧ ಪತಿಯನ್ನು ಅನುಸರಿಸಿದುದನ್ನು ನೀನು ಕೇಳಿಲ್ಲವೇ?
04020009a ದುಹಿತಾ ಜನಕಸ್ಯಾಪಿ ವೈದೇಹೀ ಯದಿ ತೇ ಶ್ರುತಾ।
04020009c ಪತಿಮನ್ವಚರತ್ಸೀತಾ ಮಹಾರಣ್ಯನಿವಾಸಿನಂ।।
ಜನಕನ ಮಗಳಾದ ವೈದೇಹಿಯೂ ಕೂಡ ಮಹಾರಣ್ಯನಿವಾಸಿ ಪತಿಯನ್ನು ಹಿಂಬಾಲಿಸಿದುದನ್ನು ಕೇಳಿಲ್ಲವೇ?
04020010a ರಕ್ಷಸಾ ನಿಗ್ರಹಂ ಪ್ರಾಪ್ಯ ರಾಮಸ್ಯ ಮಹಿಷೀ ಪ್ರಿಯಾ।
04020010c ಕ್ಲಿಶ್ಯಮಾನಾಪಿ ಸುಶ್ರೋಣೀ ರಾಮಮೇವಾನ್ವಪದ್ಯತ।।
ರಾಮನ ಪ್ರಿಯ ಪತ್ನಿಯಾದ ಆ ಸುಂದರಿಯು ರಾಕ್ಷಸರ ನಿಗ್ರಹಕ್ಕೊಳಗಾಗಿ ಕ್ಲೇಶಗೊಂಡರೂ ರಾಮನನ್ನೇ ಅನುಸರಿಸಿದಳು.
04020011a ಲೋಪಾಮುದ್ರಾ ತಥಾ ಭೀರು ವಯೋರೂಪಸಮನ್ವಿತಾ।
04020011c ಅಗಸ್ತ್ಯಮನ್ವಯಾದ್ಧಿತ್ವಾ ಕಾಮಾನ್ಸರ್ವಾನಮಾನುಷಾನ್।।
ಭೀರು! ಹಾಗೆಯೇ ರೂಪ ಯೌವನಸಂಪನ್ನೆಯಾದ ಲೋಪಾಮುದ್ರೆಯು ಎಲ್ಲ ದಿವ್ಯ ಸುಖಗಳನ್ನೂ ತೊರೆದು ಅಗಸ್ತ್ಯನನ್ನು ಹಿಂಬಾಲಿಸಿದಳು.
04020012a ಯಥೈತಾಃ ಕೀರ್ತಿತಾ ನಾರ್ಯೋ ರೂಪವತ್ಯಃ ಪತಿವ್ರತಾಃ।
04020012c ತಥಾ ತ್ವಮಪಿ ಕಲ್ಯಾಣಿ ಸರ್ವೈಃ ಸಮುದಿತಾ ಗುಣೈಃ।।
ಕಲ್ಯಾಣೀ! ನಾನು ಹೇಳಿದ ಈ ರೂಪವತಿಯರೂ ಪತಿವ್ರತೆಯರೂ ಆದ ನಾರಿಯರಂತೆ ನೀನೂ ಕೂಡ ಸರ್ವಗುಣಸಂಪನ್ನೆಯಾಗಿರುವೆ.
04020013a ಮಾದೀರ್ಘಂ ಕ್ಷಮ ಕಾಲಂ ತ್ವಂ ಮಾಸಮಧ್ಯರ್ಧಸಮ್ಮಿತಂ।
04020013c ಪೂರ್ಣೇ ತ್ರಯೋದಶೇ ವರ್ಷೇ ರಾಜ್ಞೋ ರಾಜ್ಞೀ ಭವಿಷ್ಯಸಿ।।
ವ್ಯಥೆಪಡಬೇಡ! ಇನ್ನು ಉಳಿದಿರುವ ಒಂದೂವರೆ ತಿಂಗಳ ಅಲ್ಪಕಾಲವನ್ನು ತಾಳಿಕೋ. ಹದಿಮೂರನೆಯ ವರ್ಷವು ತುಂಬಿದಾಗ ನೀನು ಮತ್ತೆ ರಾಜನ ರಾಣಿಯಾಗುವೆ.”
04020014 ದ್ರೌಪದ್ಯುವಾಚ।
04020014a ಆರ್ತಯೈತನ್ಮಯಾ ಭೀಮ ಕೃತಂ ಬಾಷ್ಪವಿಮೋಕ್ಷಣಂ।
04020014c ಅಪಾರಯಂತ್ಯಾ ದುಃಖಾನಿ ನ ರಾಜಾನಮುಪಾಲಭೇ।।
ದ್ರೌಪದಿಯು ಹೇಳಿದಳು: “ಭೀಮ! ದುಃಖವನ್ನು ತಡೆದುಕೊಳ್ಳಲಾಗದೇ ಆರ್ತಳಾಗಿ ನಾನು ನಿನ್ನ ಮುಂದೆ ಹೀಗೆ ಕಂಬನಿಗರೆದೆ. ರಾಜನನ್ನು ನಾನು ನಿಂದಿಸುವುದಿಲ್ಲ.
04020015a ವಿಮುಕ್ತೇನ ವ್ಯತೀತೇನ ಭೀಮಸೇನ ಮಹಾಬಲ।
04020015c ಪ್ರತ್ಯುಪಸ್ಥಿತಕಾಲಸ್ಯ ಕಾರ್ಯಸ್ಯಾನಂತರೋ ಭವ।।
ಮಹಾಬಲ ಭೀಮಸೇನ! ಹಿಂದೆ ಆದುದ್ದನ್ನು ಬಿಟ್ಟುಬಿಡು. ಈಗ ಒದಗಿಬಂದಿರುವ ಕಷ್ಟದ ಪರಿಹಾರಕ್ಕೆ ಸಿದ್ಧನಾಗು.
04020016a ಮಮೇಹ ಭೀಮ ಕೈಕೇಯೀ ರೂಪಾಭಿಭವಶಮ್ಕಯಾ।
04020016c ನಿತ್ಯಮುದ್ವಿಜತೇ ರಾಜಾ ಕಥಂ ನೇಯಾದಿಮಾಮಿತಿ।।
ಭೀಮ! ರೂಪದಲ್ಲಿ ನಾನು ಅವಳನ್ನು ಸೋಲಿಸುವೆನೆಂಬ ಶಂಕೆಯಿಂದ ರಾಜನೆಲ್ಲಿ ನನ್ನನ್ನು ಲಪಟಾಯಿಸಿಬಿಡುತ್ತಾನೋ ಎಂದು ಸುದೇಷ್ಣೆಯು ನಿತ್ಯವೂ ಉದ್ವಿಗ್ನಳಾಗಿದ್ದಾಳೆ.
04020017a ತಸ್ಯಾ ವಿದಿತ್ವಾ ತಂ ಭಾವಂ ಸ್ವಯಂ ಚಾನೃತದರ್ಶನಃ।
04020017c ಕೀಚಕೋಽಯಂ ಸುದುಷ್ಟಾತ್ಮಾ ಸದಾ ಪ್ರಾರ್ಥಯತೇ ಹಿ ಮಾಂ।।
ಅವಳ ಆ ಭಾವವನ್ನರಿತು ಸ್ವತಃ ಕೆಟ್ಟದ್ದನ್ನೇ ಕಾಣುವ ದುಷ್ಟಾತ್ಮ ಆ ಕೀಚಕನು ನನ್ನನ್ನು ಯಾವಾಗಲೂ ಬೇಡುತ್ತಾನೆ.
04020018a ತಮಹಂ ಕುಪಿತಾ ಭೀಮ ಪುನಃ ಕೋಪಂ ನಿಯಮ್ಯ ಚ।
04020018c ಅಬ್ರುವಂ ಕಾಮಸಮ್ಮೂಢಮಾತ್ಮಾನಂ ರಕ್ಷ ಕೀಚಕ।।
ಭೀಮ! ನಾನು ಕೋಪಗೊಂಡರೂ ಮತ್ತೆ ಕೋಪವನ್ನು ನಿಯಂತ್ರಿಸಿಕೊಂಡು ಕಾಮದಿಂದ ಮೂಢನಾದ ಅವನಿಗೆ ನಾನು “ಕೀಚಕ! ನಿನ್ನನ್ನು ನೀನು ರಕ್ಷಿಸಿಕೋ!” ಎಂದು ಹೇಳಿದೆ.
04020019a ಗಂಧರ್ವಾಣಾಮಹಂ ಭಾರ್ಯಾ ಪಂಚಾನಾಂ ಮಹಿಷೀ ಪ್ರಿಯಾ।
04020019c ತೇ ತ್ವಾಂ ನಿಹನ್ಯುರ್ದುರ್ಧರ್ಷಾಃ ಶೂರಾಃ ಸಾಹಸಕಾರಿಣಃ।।
“ನಾನು ಐವರು ಗಂಧರ್ವರ ಭಾರ್ಯೆ. ಪ್ರಿಯಪತ್ನಿ. ತಡೆಯಲು ಅಸಾಧ್ಯರೂ, ಶೂರರೂ, ಸಾಹಸಿಗಳೂ ಆದ ಅವರು ನಿನ್ನನ್ನು ಕೊಲ್ಲುತ್ತಾರೆ.”
04020020a ಏವಮುಕ್ತಃ ಸ ದುಷ್ಟಾತ್ಮಾ ಕೀಚಕಃ ಪ್ರತ್ಯುವಾಚ ಹ।
04020020c ನಾಹಂ ಬಿಭೇಮಿ ಸೈರಂಧ್ರಿ ಗಂಧರ್ವಾಣಾಂ ಶುಚಿಸ್ಮಿತೇ।।
ಹೀಗೆ ಹೇಳಿದಾಗ ಆ ದುಷ್ಟಾತ್ಮ ಕೀಚಕನು ಮರುನುಡಿದನು: “ಶುಚಿಸ್ಮಿತೇ! ಸೈರಂಧ್ರಿ! ನಾನು ಗಂಧರ್ವರಿಗೆ ಹೆದರುವುದಿಲ್ಲ.
04020021a ಶತಂ ಸಹಸ್ರಮಪಿ ವಾ ಗಂಧರ್ವಾಣಾಮಹಂ ರಣೇ।
04020021c ಸಮಾಗತಂ ಹನಿಷ್ಯಾಮಿ ತ್ವಂ ಭೀರು ಕುರು ಮೇ ಕ್ಷಣಂ।।
ಒಟ್ಟಿಗೆ ಬರುವ ನೂರು ಅಥವಾ ಸಾವಿರ ಗಂಧರ್ವರನ್ನೂ ನಾನು ರಣದಲ್ಲಿ ಕೊಲ್ಲುವೆನು. ಆದುದರಿಂದ ಭೀರು! ನನಗೆ ನೀನು ಸಂತಸವನ್ನುಂಟುಮಾಡು!”
04020022a ಇತ್ಯುಕ್ತೇ ಚಾಬ್ರುವಂ ಸೂತಂ ಕಾಮಾತುರಮಹಂ ಪುನಃ।
04020022c ನ ತ್ವಂ ಪ್ರತಿಬಲಸ್ತೇಷಾಂ ಗಂಧರ್ವಾಣಾಂ ಯಶಸ್ವಿನಾಂ।।
ಹೀಗೆ ಅವನು ಹೇಳಿದಾಗ ನಾನು ಕಾಮಾತುರನಾದ ಆ ಸೂತನಿಗೆ ಮತ್ತೆ ನುಡಿದೆ: “ಕೀರ್ತಿಶಾಲಿಗಳಾದ ಆ ಗಂಧರ್ವರಿಗೆ ಬಲದಲ್ಲಿ ನೀನು ಸಾಟಿಯಲ್ಲ.
04020023a ಧರ್ಮೇ ಸ್ಥಿತಾಸ್ಮಿ ಸತತಂ ಕುಲಶೀಲಸಮನ್ವಿತಾ।
04020023c ನೇಚ್ಛಾಮಿ ಕಂ ಚಿದ್ವಧ್ಯಂತಂ ತೇನ ಜೀವಸಿ ಕೀಚಕ।।
ಕುಲಶೀಲಸಂಪನ್ನೆಯಾದ ನಾನು ಯಾವಾಗಲೂ ಧರ್ಮಸ್ಥಿತಳಾಗಿದ್ದೇನೆ. ಯಾರ ವಧೆಯನ್ನೂ ನಾನು ಬಯಸುವುದಿಲ್ಲ. ಆದುದರಿಂದಲೇ ಕೀಚಕ! ನೀನು ಇನ್ನೂ ಬದುಕಿದ್ದೀಯೆ!”
04020024a ಏವಮುಕ್ತಃ ಸ ದುಷ್ಟಾತ್ಮಾ ಪ್ರಹಸ್ಯ ಸ್ವನವತ್ತದಾ।
04020024c ನ ತಿಷ್ಠತಿ ಸ್ಮ ಸನ್ಮಾರ್ಗೇ ನ ಚ ಧರ್ಮಂ ಬುಭೂಷತಿ।।
ಹೀಗೆ ಹೇಳಲು ಆ ದುಷ್ಟಾತ್ಮನು ಗಟ್ಟಿಯಾಗಿ ನಕ್ಕನು. ಅವನು ಸನ್ಮಾರ್ಗದಲ್ಲಿ ನೆಲೆಗೊಳ್ಳುವುದಿಲ್ಲ ಮತ್ತು ಧರ್ಮಕ್ಕಾಗಿ ಯತ್ನಿಸುವುದಿಲ್ಲ.
04020025a ಪಾಪಾತ್ಮಾ ಪಾಪಭಾವಶ್ಚ ಕಾಮರಾಗವಶಾನುಗಃ।
04020025c ಅವಿನೀತಶ್ಚ ದುಷ್ಟಾತ್ಮಾ ಪ್ರತ್ಯಾಖ್ಯಾತಃ ಪುನಃ ಪುನಃ।
04020025e ದರ್ಶನೇ ದರ್ಶನೇ ಹನ್ಯಾತ್ತಥಾ ಜಃಯಾಂ ಚ ಜೀವಿತಂ।।
ಆ ಪಾಪಾತ್ಮ, ಪಾಪಭಾವಿ, ಕಾಮರಾಗವಶ, ಅವಿನೀತ, ದುಷ್ಟಾತ್ಮನು ಮತ್ತೆ ಮತ್ತೆ ಪ್ರತಿಭಟಿಸಿದರೂ ನನ್ನನ್ನು ಕಂಡಾಗಲೆಲ್ಲಾ ಹಿಂಸಿಸುತ್ತಾನೆ. ಆದ್ದರಿಂದ ನಾನು ಪ್ರಾಣ ಬಿಡುತ್ತೇನೆ.
04020026a ತದ್ಧರ್ಮೇ ಯತಮಾನಾನಾಂ ಮಹಾನ್ಧರ್ಮೋ ನಶಿಷ್ಯತಿ।
04020026c ಸಮಯಂ ರಕ್ಷಮಾಣಾನಾಂ ಭಾರ್ಯಾ ವೋ ನ ಭವಿಷ್ಯತಿ।।
ಧರ್ಮದಲ್ಲಿ ಪ್ರಯತ್ನಪರರಾಗಿರುವವರ ಮಹಾಧರ್ಮವೇ ಹಾಳಾಗುತ್ತದೆ. ಪ್ರತಿಜ್ಞೆಯನ್ನು ಪರಿಪಾಲಿಸುತ್ತಿರುವ ನಿಮಗೆ ಪತ್ನಿಯೇ ಇಲ್ಲವಾಗುತ್ತಾಳೆ.
04020027a ಭಾರ್ಯಾಯಾಂ ರಕ್ಷ್ಯಮಾಣಾಯಾಂ ಪ್ರಜಾ ಭವತಿ ರಕ್ಷಿತಾ।
04020027c ಪ್ರಜಾಯಾಂ ರಕ್ಷ್ಯಮಾಣಾಯಾಮಾತ್ಮಾ ಭವತಿ ರಕ್ಷಿತಃ।।
ಹೆಂಡತಿಯನ್ನು ರಕ್ಷಿಸಿದರೆ ಮಕ್ಕಳು ರಕ್ಷಿತರಾಗಿರುತ್ತಾರೆ. ಮಕ್ಕಳು ರಕ್ಷಣೆಯಲ್ಲಿದ್ದರೆ ಆತ್ಮರಕ್ಷಣೆಯಾಗುತ್ತದೆ.
04020028a ವದತಾಂ ವರ್ಣಧರ್ಮಾಂಶ್ಚ ಬ್ರಾಹ್ಮಣಾನಾಂ ಹಿ ಮೇ ಶ್ರುತಂ।
04020028c ಕ್ಷತ್ರಿಯಸ್ಯ ಸದಾ ಧರ್ಮೋ ನಾನ್ಯಃ ಶತ್ರುನಿಬರ್ಹಣಾತ್।।
ಬ್ರಾಹ್ಮಣರು ವರ್ಣಧರ್ಮದ ಕುರಿತು ಹೇಳಿದುದನ್ನು ನಾನು ಕೇಳಿದ್ದೇನೆ. ಶತ್ರುಗಳ ನಾಶದ ಹೊರತು ಬೇರೆ ಯಾವುದೂ ಎಂದೂ ಕ್ಷತ್ರಿಯನಿಗೆ ಧರ್ಮವಲ್ಲ.
04020029a ಪಶ್ಯತೋ ಧರ್ಮರಾಜಸ್ಯ ಕೀಚಕೋ ಮಾಂ ಪದಾವಧೀತ್।
04020029c ತವ ಚೈವ ಸಮಕ್ಷಂ ವೈ ಭೀಮಸೇನ ಮಹಾಬಲ।।
ಮಹಾಬಲ ಭೀಮಸೇನ! ಧರ್ಮರಾಜನು ನೋಡುತ್ತಿರುವಂತೆಯೇ ನಿನ್ನ ಎದುರಿನಲ್ಲಿ ಕೀಚಕನು ನನ್ನನ್ನು ಕಾಲಿನಿಂದ ಒದೆದನು.
04020030a ತ್ವಯಾ ಹ್ಯಹಂ ಪರಿತ್ರಾತಾ ತಸ್ಮಾದ್ಘೋರಾಜ್ಜಟಾಸುರಾತ್।
04020030c ಜಯದ್ರಥಂ ತಥೈವ ತ್ವಮಜೈಷೀರ್ಭ್ರಾತೃಭಿಃ ಸಹ।।
ಆ ಘೋರ ಜಟಾಸುರನಿಂದ ನೀನೇ ನನ್ನನ್ನು ಪಾರುಗೊಳಿಸಿದೆ. ಹಾಗೆಯೇ ಸೋದರರೊಡನೆ ಜಯದ್ರಥನನ್ನೂ ನೀನೇ ಗೆದ್ದೆ.
04020031a ಜಹೀಮಮಪಿ ಪಾಪಂ ತ್ವಂ ಯೋಽಯಂ ಮಾಮವಮನ್ಯತೇ।
04020031c ಕೀಚಕೋ ರಾಜವಾಲ್ಲಭ್ಯಾಚ್ಚೋಕಕೃನ್ಮಮ ಭಾರತ।।
ಭಾರತ! ಈಗ ನನ್ನನ್ನು ಅಪಮಾನಿಸಿದ ಪಾಪಿಯನ್ನೂ ನೀನೇ ಕೊಲ್ಲು. ರಾಜನಿಗೆ ಬೇಕಾದವನಾಗಿರುವ ಕೀಚಕನು ನನ್ನನ್ನು ಕಾಡುತ್ತಿದ್ದಾನೆ.
04020032a ತಮೇವಂ ಕಾಮಸಮ್ಮತ್ತಂ ಭಿಂಧಿ ಕುಂಭಮಿವಾಶ್ಮನಿ।
04020032c ಯೋ ನಿಮಿತ್ತಮನರ್ಥಾನಾಂ ಬಹೂನಾಂ ಮಮ ಭಾರತ।।
ಭಾರತ! ನನಗೆ ಬಹಳಷ್ಟು ಕಷ್ಟಗಳನ್ನು ತಂದೊಡ್ಡಿದ ಆ ಕಾಮದಿಂದ ಹುಚ್ಚನಾದವನನ್ನು ಮಡಕೆಯನ್ನು ಕಲ್ಲಿನ ಮೇಲೆ ಚಪ್ಪಳಿಸಿ ಒಡೆಯುವಂತೆ ನಾಶಮಾಡು.
04020033a ತಂ ಚೇಜ್ಜೀವಂತಮಾದಿತ್ಯಃ ಪ್ರಾತರಭ್ಯುದಯಿಷ್ಯತಿ।
04020033c ವಿಷಮಾಲೋಡ್ಯ ಪಾಸ್ಯಾಮಿ ಮಾ ಕೀಚಕವಶಂ ಗಮಂ।।
04020033e ಶ್ರೇಯೋ ಹಿ ಮರಣಂ ಮಹ್ಯಂ ಭೀಮಸೇನ ತವಾಗ್ರತಃ।।
ಭೀಮಸೇನ! ಬೆಳಿಗ್ಗೆ ಸೂರ್ಯೋದಯದ ವರೆಗೆ ಅವನು ಜೀವಂತನಾಗಿದ್ದರೆ ವಿಷವನ್ನು ಬೆರೆಸಿ ಕುಡಿಯುತ್ತೇನೆ. ಕೀಚಕನ ವಶಳಾಗುವುದಿಲ್ಲ. ನಿನ್ನನ್ನು ಬಿಟ್ಟರೆ ಮರಣವೇ ನನಗೆ ಶ್ರೇಯಸ್ಕರ.””
04020034 ವೈಶಂಪಾಯನ ಉವಾಚ।
04020034a ಇತ್ಯುಕ್ತ್ವಾ ಪ್ರಾರುದತ್ಕೃಷ್ಣಾ ಭೀಮಸ್ಯೋರಃ ಸಮಾಶ್ರಿತಾ।
04020034c ಭೀಮಶ್ಚ ತಾಂ ಪರಿಷ್ವಜ್ಯ ಮಹತ್ಸಾಂತ್ವಂ ಪ್ರಯುಜ್ಯ ಚ।।
04020034e ಕೀಚಕಂ ಮನಸಾಗಚ್ಛತ್ಸೃಕ್ಕಿಣೀ ಪರಿಸಂಲಿಹನ್।।
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಕೃಷ್ಣೆಯು ಭೀಮನ ಎದೆಯ ಮೇಲೊರಗಿ ರೋಧಿಸಿದಳು. ಭೀಮನು ಅವಳನ್ನು ಅಪ್ಪಿಕೊಂಡು ವಿಶೇಷವಾಗಿ ಸಾಂತ್ವನಗೊಳಿಸಿ ಕಟವಾಯಿಗಳನ್ನು ನೆಕ್ಕುತ್ತಾ ಕೀಚಕನ ಕುರಿತು ಯೋಚಿಸತೊಡಗಿದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ದ್ರೌಪದೀಸಾಂತ್ವನೇ ವಿಂಶೋಽಧ್ಯಾಯಃ ।
ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ದ್ರೌಪದೀಸಾಂತ್ವನದಲ್ಲಿ ಇಪ್ಪತ್ತನೆಯ ಅಧ್ಯಾಯವು.