ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಆರಣೇಯ ಪರ್ವ
ಅಧ್ಯಾಯ 296
ಸಾರ
ಬಾಯಾರಿಕೆಯಿಂದ ಬಳಲಿ ನೀರನ್ನು ತರಲು ನಕುಲನನ್ನು ಹತ್ತಿರದಲ್ಲಿದ್ದ ಕೊಳಕ್ಕೆ ಕಳುಹಿಸುವುದು (1-10). ಕೇಳುವ ಪ್ರಶ್ನೆಗಳಿಗೆ ಉತ್ತರಿಸದೇ ನೀರನ್ನು ಕುಡಿಯಬೇಡವೆಂದ ಅಶರೀರವಾಣಿಯನ್ನು ಅನಾದರಿಸಿ ನೀರನ್ನು ಕಡಿಯಲು ಹೋದ ನಕುಲನು ಬಿದ್ದುದು (11-13). ಅವನಂತೆ ನೀರುತರಲು ಹೋದ ಸಹದೇವ, ಅರ್ಜುನ ಮತ್ತು ಭೀಮರು ಹಿಂದಿರುಗದೇ ಇದ್ದುದು (14-38). ಯುಧಿಷ್ಠಿರನೇ ಆ ಸರೋವರದ ಬಳಿ ಬಂದು ನೋಡಿ ವಿಸ್ಮಿತನಾದುದು (39-43).
03296001 ಯುಧಿಷ್ಠಿರ ಉವಾಚ।
03296001a ನಾಪದಾಮಸ್ತಿ ಮರ್ಯಾದಾ ನ ನಿಮಿತ್ತಂ ನ ಕಾರಣಂ।
03296001c ಧರ್ಮಸ್ತು ವಿಭಜತ್ಯತ್ರ ಉಭಯೋಃ ಪುಣ್ಯಪಾಪಯೋಃ।।
ಯುಧಿಷ್ಠಿರನು ಹೇಳಿದನು: “ಆಪತ್ತಿಗೆ ಗಡಿಯಿಲ್ಲ, ನಿಮಿತ್ತವೂ ಇಲ್ಲ ಮತ್ತು ಕಾರಣವಿಲ್ಲ. ಪುಣ್ಯ ಮತ್ತು ಪಾಪ ಇವೆರಡರ ಪ್ರಕಾರ ಧರ್ಮವು ಅದನ್ನು ಪಾಲುಮಾಡಿ ಇಲ್ಲಿ ನೀಡುತ್ತದೆ.”
03296002 ಭೀಮ ಉವಾಚ।
03296002a ಪ್ರಾತಿಕಾಮ್ಯನಯತ್ಕೃಷ್ಣಾಂ ಸಭಾಯಾಂ ಪ್ರೇಷ್ಯವತ್ತದಾ।
03296002c ನ ಮಯಾ ನಿಹತಸ್ತತ್ರ ತೇನ ಪ್ರಾಪ್ತಾಃ ಸ್ಮ ಸಂಶಯಂ।।
ಭೀಮನು ಹೇಳಿದನು: “ಕೃಷ್ಣೆಯನ್ನು ಸೇವಕಿಯಂತೆ ಸಭೆಗೆ ತಂದ ಆ ಪ್ರತಿಕಾಮಿಯನ್ನು ನಾನು ಅಲ್ಲಿಯೇ ಕೊಲ್ಲಲಿಲ್ಲ. ಆದುದರಿಂದಲೇ ನಾವು ಈ ಸಮಸ್ಯೆಯನ್ನು ಪಡೆದಿದ್ದೇವೆ.”
03296003 ಅರ್ಜುನ ಉವಾಚ।
03296003a ವಾಚಸ್ತೀಕ್ಷ್ಣಾಸ್ಥಿಭೇದಿನ್ಯಃ ಸೂತಪುತ್ರೇಣ ಭಾಷಿತಾಃ।
03296003c ಅತಿತೀಕ್ಷ್ಣಾ ಮಯಾ ಕ್ಷಾಂತಾಸ್ತೇನ ಪ್ರಾಪ್ತಾಃ ಸ್ಮ ಸಂಶಯಂ।।
ಅರ್ಜುನನು ಹೇಳಿದನು: “ಎಲುಬುಗಳನ್ನು ಭೇದಿಸುವಂಥಹ ತೀಕ್ಷ್ಣ ಮಾತುಗಳನ್ನಾಡಿದ ಸೂತಪುತ್ರನನ್ನು ಅತಿತೀಕ್ಷ್ಣನಾದ ನಾನು ಸಹಿಸಿಕೊಂಡೆನು. ಆದುದರಿಂದಲೇ ನಾವು ಈ ಸಮಸ್ಯೆಯನ್ನು ಪಡೆದಿದ್ದೇವೆ.”
03296004 ಸಹದೇವ ಉವಾಚ।
03296004a ಶಕುನಿಸ್ತ್ವಾಂ ಯದಾಜೈಷೀದಕ್ಷದ್ಯೂತೇನ ಭಾರತ।
03296004c ಸ ಮಯಾ ನ ಹತಸ್ತತ್ರ ತೇನ ಪ್ರಾಪ್ತಾಃ ಸ್ಮ ಸಂಶಯಂ।।
ಸಹದೇವನು ಹೇಳಿದನು: “ಭಾರತ! ನಿನ್ನನ್ನು ಅಕ್ಷದ್ಯೂತದಲ್ಲಿ ಸೋಲಿಸಿದಾಗ ಶಕುನಿಯನ್ನು ನಾನು ಕೊಲ್ಲಲ್ಲಿಲ್ಲ. ಆದುದರಿಂದಲೇ ನಾವು ಈ ಸಮಸ್ಯೆಯನ್ನು ಪಡೆದಿದ್ದೇವೆ.””
03296005 ವೈಶಂಪಾಯನ ಉವಾಚ।
03296005a ತತೋ ಯುಧಿಷ್ಠಿರೋ ರಾಜಾ ನಕುಲಂ ವಾಕ್ಯಮಬ್ರವೀತ್।
03296005c ಆರುಹ್ಯ ವೃಕ್ಷಂ ಮಾದ್ರೇಯ ನಿರೀಕ್ಷಸ್ವ ದಿಶೋ ದಶ।।
ವೈಶಂಪಾಯನನು ಹೇಳಿದನು: “ಆಗ ರಾಜ ಯುಧಿಷ್ಠಿರನು ನಕುಲನಿಗೆ ಹೇಳಿದನು: “ಮಾದ್ರೇಯ! ಮರವನ್ನು ಹತ್ತಿ ಹತ್ತು ದಿಕ್ಕುಗಳಲ್ಲಿಯೂ ನೋಡು.
03296006a ಪಾನೀಯಮಂತಿಕೇ ಪಶ್ಯ ವೃಕ್ಷಾನ್ವಾಪ್ಯುದಕಾಶ್ರಯಾನ್।
03296006c ಇಮೇ ಹಿ ಭ್ರಾತರಃ ಶ್ರಾಂತಾಸ್ತವ ತಾತ ಪಿಪಾಸಿತಾಃ।।
ಮಗೂ! ಹತ್ತಿರದಲ್ಲಿ ನೀರಿದೆಯೋ ಅಥವಾ ನೀರಿನ ಬಳಿ ಬೆಳೆಯುವ ಮರಗಳಿವೆಯೋ ನೋಡು. ಇಲ್ಲಿ ನಿನ್ನ ಸಹೋದರರು ಬಾಯಾರಿಕೆಯಿಂದ ಬಳಲಿದ್ದಾರೆ.”
03296007a ನಕುಲಸ್ತು ತಥೇತ್ಯುಕ್ತ್ವಾ ಶೀಘ್ರಮಾರುಹ್ಯ ಪಾದಪಂ।
03296007c ಅಬ್ರವೀದ್ಭ್ರಾತರಂ ಜ್ಯೇಷ್ಠಮಭಿವೀಕ್ಷ್ಯ ಸಮಂತತಃ।।
ಅದನ್ನು ಕೇಳಿ ನಕುಲನು ಶೀಘ್ರವಾಗಿ ಮರವನ್ನು ಹತ್ತಿ ಸುತ್ತಲೂ ನೋಡಿ ಹಿರಿಯಣ್ಣನಿಗೆ ಹೇಳಿದನು:
03296008a ಪಶ್ಯಾಮಿ ಬಹುಲಾನ್ರಾಜನ್ವೃಕ್ಷಾನುದಕಸಂಶ್ರಯಾನ್।
03296008c ಸಾರಸಾನಾಂ ಚ ನಿರ್ಹ್ರಾದಮತ್ರೋದಕಮಸಂಶಯಂ।।
“ರಾಜನ್! ನೀರಿನ ಬಳಿ ಬೆಳೆಯುವ ಬಹಳ ವೃಕ್ಷಗಳನ್ನು ನೋಡುತ್ತಿದ್ದೇನೆ. ಸಾರಸಗಳ ಕೂಗುಗಳನ್ನೂ ಕೇಳುತ್ತಿದ್ದೇನೆ. ಅಲ್ಲಿ ನೀರಿದೆಯೆನ್ನುವುದರಲ್ಲಿ ಸಂಶಯವಿಲ್ಲ.”
03296009a ತತೋಽಬ್ರವೀತ್ಸತ್ಯಧೃತಿಃ ಕುಂತೀಪುತ್ರೋ ಯುಧಿಷ್ಠಿರಃ।
03296009c ಗಚ್ಚ ಸೌಮ್ಯ ತತಃ ಶೀಘ್ರಂ ತೂರ್ಣಂ ಪಾನೀಯಮಾನಯ।।
ಆಗ ಸತ್ಯಧೃತಿ ಕುಂತೀಪುತ್ರ ಯುಧಿಷ್ಠಿರನು ಅವನಿಗೆ ಹೇಳಿದನು: “ಸೌಮ್ಯ! ಶೀಘ್ರವಾಗಿ ಅಲ್ಲಿಗೆ ಹೋಗಿ ಕುಡಿಯಲು ನೀರನ್ನು ತೆಗೆದುಕೊಂಡು ಬಾ!”
03296010a ನಕುಲಸ್ತು ತಥೇತ್ಯುಕ್ತ್ವಾ ಭ್ರಾತುರ್ಜ್ಯೇಷ್ಠಸ್ಯ ಶಾಸನಾತ್।
03296010c ಪ್ರಾದ್ರವದ್ಯತ್ರ ಪಾನೀಯಂ ಶೀಘ್ರಂ ಚೈವಾನ್ವಪದ್ಯತ।।
ನಕುಲನು ಒಪ್ಪಿ ಹಿರಿಯಣ್ಣನ ಶಾಸನದಂತೆ ನೀರಿನೆಡೆಗೆ ಧಾವಿಸಿದನು ಮತ್ತು ಅಲ್ಲಿ ತಲುಪಿದನು.
03296011a ಸ ದೃಷ್ಟ್ವಾ ವಿಮಲಂ ತೋಯಂ ಸಾರಸೈಃ ಪರಿವಾರಿತಂ।
03296011c ಪಾತುಕಾಮಸ್ತತೋ ವಾಚಮಂತರಿಕ್ಷಾತ್ಸ ಶುಶ್ರುವೇ।।
ಸಾರಸಗಳಿಂದ ಸುತ್ತುವರೆಯಲ್ಪಟ್ಟ ಆ ಶುದ್ಧ ನೀರನ್ನು ನೋಡಿದನು. ಆದರೆ ಅವನು ಕುಡಿಯಲು ತೊಡಗಿದಾಗ ಅಂತರಿಕ್ಷದಿಂದ ಮಾತುಗಳು ಕೇಳಿಬಂದವು:
03296012a ಮಾ ತಾತ ಸಾಹಸಂ ಕಾರ್ಷೀರ್ಮಮ ಪೂರ್ವಪರಿಗ್ರಹಃ।
03296012c ಪ್ರಶ್ನಾನುಕ್ತ್ವಾ ತು ಮಾದ್ರೇಯ ತತಃ ಪಿಬ ಹರಸ್ವ ಚ।।
“ಮಗೂ! ಸಾಹಸವನ್ನು ಮಾಡಬೇಡ! ಇದು ನನ್ನ ಪೂರ್ವಪರಿಗ್ರಹ. ಮಾದ್ರೇಯ! ಪ್ರಶ್ನೆಗಳಿಗೆ ಉತ್ತರಿಸಿ ನಂತರ ನೀರನ್ನು ತೆಗೆದು ಕುಡಿ.”
03296013a ಅನಾದೃತ್ಯ ತು ತದ್ವಾಕ್ಯಂ ನಕುಲಃ ಸುಪಿಪಾಸಿತಃ।
03296013c ಅಪಿಬಚ್ಚೀತಲಂ ತೋಯಂ ಪೀತ್ವಾ ಚ ನಿಪಪಾತ ಹ।
ತುಂಬಾ ಬಾಯಾರಿಕೆಗೊಂಡಿದ್ದ ನಕುಲನು ಆ ಮಾತನ್ನು ಅನಾದರಿಸಿ ತಣ್ಣೀರನ್ನು ಕುಡಿದನು. ಕುಡಿದು ಬಿದ್ದನು.
03296014a ಚಿರಾಯಮಾಣೇ ನಕುಲೇ ಕುಂತೀಪುತ್ರೋ ಯುಧಿಷ್ಠಿರಃ।
03296014c ಅಬ್ರವೀದ್ಭ್ರಾತರಂ ವೀರಂ ಸಹದೇವಮರಿಂದಮಂ।।
ನಕುಲನು ತಡವಾಗಲು ಕುಂತೀಪುತ್ರ ಯುಧಿಷ್ಠಿರನು ತಮ್ಮ ವೀರ ಅರಿಂದಮ ಸಹದೇವನಿಗೆ ಹೇಳಿದನು:
03296015a ಭ್ರಾತಾ ಚಿರಾಯತೇ ತಾತ ಸಹದೇವ ತವಾಗ್ರಜಃ।
03296015c ತಂ ಚೈವಾನಯ ಸೋದರ್ಯಂ ಪಾನೀಯಂ ಚ ತ್ವಮಾನಯ।।
“ಮಗೂ! ಸಹದೇವ! ತಮ್ಮ! ನಿನ್ನ ಅಣ್ಣನು ತಡವಾಗಿದ್ದಾನೆ. ಹೋಗು. ಅವನನ್ನೂ ನೀರನ್ನು ಜೊತೆಯಲ್ಲಿ ತಾ.”
03296016a ಸಹದೇವಸ್ತಥೇತ್ಯುಕ್ತ್ವಾ ತಾಂ ದಿಶಂ ಪ್ರತ್ಯಪದ್ಯತ।
03296016c ದದರ್ಶ ಚ ಹತಂ ಭೂಮೌ ಭ್ರಾತರಂ ನಕುಲಂ ತದಾ।।
ಹಾಗೆಯೇ ಆಗಲೆಂದು ಹೇಳಿ ಸಹದೇವನು ಅವನು ಹೋದ ದಿಕ್ಕಿನಲ್ಲಿಯೇ ಹೋಗಿ ಅಲ್ಲಿ ನೆಲದಮೇಲೆ ಹತನಾಗಿ ಬಿದ್ದಿದ್ದ ಅಣ್ಣ ನಕುಲನನ್ನು ನೋಡಿದನು.
03296017a ಭ್ರಾತೃಶೋಕಾಭಿಸಂತಪ್ತಸ್ತೃಷಯಾ ಚ ಪ್ರಪೀಡಿತಃ।
03296017c ಅಭಿದುದ್ರಾವ ಪಾನೀಯಂ ತತೋ ವಾಗಭ್ಯಭಾಷತ।।
ಭ್ರಾತೃಶೋಕದಿಂದ ಸಂತಪ್ತನಾಗಿ, ಬಾಯಾರಿಕೆಯಿಂದಲೂ ಪೀಡಿತನಾಗಿ ನೀರಿನೆಡೆಗೆ ಓಡಿದನು. ಆಗ ಧ್ವನಿಯು ಹೇಳಿತು:
03296018a ಮಾ ತಾತ ಸಾಹಸಂ ಕಾರ್ಷೀರ್ಮಮ ಪೂರ್ವಪರಿಗ್ರಹಃ।
03296018c ಪ್ರಶ್ನಾನುಕ್ತ್ವಾ ಯಥಾಕಾಮಂ ತತಃ ಪಿಬ ಹರಸ್ವ ಚ।।
“ಮಗೂ! ಸಾಹಸವನ್ನು ಮಾಡಬೇಡ! ಇದು ನನ್ನ ಪೂರ್ವಪರಿಗ್ರಹ. ಮಾದ್ರೇಯ! ಪ್ರಶ್ನೆಗಳಿಗೆ ಉತ್ತರಿಸಿ ನಂತರ ನೀರನ್ನು ತೆಗೆದು ಕುಡಿ.”
03296019a ಅನಾದೃತ್ಯ ತು ತದ್ವಾಕ್ಯಂ ಸಹದೇವಃ ಪಿಪಾಸಿತಃ।
03296019c ಅಪಿಬಚ್ಚೀತಲಂ ತೋಯಂ ಪೀತ್ವಾ ಚ ನಿಪಪಾತ ಹ।।
ತುಂಬಾ ಬಾಯಾರಿಕೆಗೊಂಡಿದ್ದ ಸಹದೇವನು ಆ ಮಾತನ್ನು ಅನಾದರಿಸಿ ತಣ್ಣೀರನ್ನು ಕುಡಿದನು. ಕುಡಿದು ಬಿದ್ದನು.
03296020a ಅಥಾಬ್ರವೀತ್ಸ ವಿಜಯಂ ಕುಂತೀಪುತ್ರೋ ಯುಧಿಷ್ಠಿರಃ।
03296020c ಭ್ರಾತರೌ ತೇ ಚಿರಗತೌ ಬೀಭತ್ಸೋ ಶತ್ರುಕರ್ಶನ।
ಆಗ ಕುಂತೀಪುತ್ರ ಯುಧಿಷ್ಠಿರನು ವಿಜಯನಿಗೆ ಹೇಳಿದನು: “ಶತ್ರುಕರ್ಶನ! ಬೀಭತ್ಸು! ನಿನ್ನ ತಮ್ಮಂದಿರಿಬ್ಬರೂ ಹೋಗಿ ಬಹಳ ಸಮಯವಾಯಿತು.
03296020e ತೌ ಚೈವಾನಯ ಭದ್ರಂ ತೇ ಪಾನೀಯಂ ಚ ತ್ವಮಾನಯ।।
03296021a ಏವಮುಕ್ತೋ ಗುಡಾಕೇಶಃ ಪ್ರಗೃಹ್ಯ ಸಶರಂ ಧನುಃ।
03296021c ಆಮುಕ್ತಖಡ್ಗೋ ಮೇಧಾವೀ ತತ್ಸರಃ ಪ್ರತ್ಯಪದ್ಯತ।।
ನಿನಗೆ ಮಂಗಳವಾಗಲಿ! ಅವರಿಬ್ಬರನ್ನೂ ಕರೆದುಕೊಂಡು ಬಾ! ನೀರನ್ನೂ ತೆಗೆದುಕೊಂಡು ಬಾ!” ಹೀಗೆ ಹೇಳಲು ಆ ಮೇಧಾವೀ ಗುಡಾಕೇಶನು ಧನುರ್ಬಾಣಗಳನ್ನು ಹಿಡಿದು ಖಡ್ಗವನ್ನು ಎಳೆದು ಆ ಸರೋವರದ ಕಡೆ ಅವಸರದಿಂದ ಹೋದನು.
03296022a ಯತಃ ಪುರುಷಶಾರ್ದೂಲೌ ಪಾನೀಯಹರಣೇ ಗತೌ।
03296022c ತೌ ದದರ್ಶ ಹತೌ ತತ್ರ ಭ್ರಾತರೌ ಶ್ವೇತವಾಹನಃ।।
ನೀರನ್ನು ತರಲು ಹೋಗಿದ್ದ ಆ ಪುರುಷಶಾರ್ದೂಲ ತಮ್ಮಂದಿರಿಬ್ಬರೂ ಅಲ್ಲಿ ಹತರಾಗಿ ಬಿದ್ದಿರುವುದನ್ನು ಶ್ವೇತವಾಹನನು ಕಂಡನು.
03296023a ಪ್ರಸುಪ್ತಾವಿವ ತೌ ದೃಷ್ಟ್ವಾ ನರಸಿಂಹಃ ಸುದುಃಖಿತಃ।
03296023c ಧನುರುದ್ಯಮ್ಯ ಕೌಂತೇಯೋ ವ್ಯಲೋಕಯತ ತದ್ವನಂ।।
ಮಲಗಿದ್ದಾರೋ ಎಂಬಂತಿದ್ದ ಅವರಿಬ್ಬರನ್ನು ಕಂಡು ನರಸಿಂಹ ಕೌಂತೇಯನು ಸುದುಃಖಿತನಾಗಿ ಧನುಸ್ಸನ್ನು ಮೇಲೆತ್ತಿ ಆ ವನವನ್ನು ಅವಲೋಕಿಸಿದನು.
03296024a ನಾಪಶ್ಯತ್ತತ್ರ ಕಿಂ ಚಿತ್ಸ ಭೂತಂ ತಸ್ಮಿನ್ಮಹಾವನೇ।
03296024c ಸವ್ಯಸಾಚೀ ತತಃ ಶ್ರಾಂತಃ ಪಾನೀಯಂ ಸೋಽಭ್ಯಧಾವತ।।
ಅಲ್ಲಿ ಆ ಮಹಾವನದಲ್ಲಿ ಯಾವ ಜೀವವನ್ನೂ ಕಾಣದೇ ಸವ್ಯಸಾಚಿಯು ಆಯಾಸಗೊಂಡು ನೀರನ್ನು ಕುಡಿಯಲು ಮುಂದಾದನು.
03296025a ಅಭಿಧಾವಂಸ್ತತೋ ವಾಚಮಂತರಿಕ್ಷಾತ್ಸ ಶುಶ್ರುವೇ।
03296025c ಕಿಮಾಸೀದಸಿ ಪಾನೀಯಂ ನೈತಚ್ಚಕ್ಯಂ ಬಲಾತ್ತ್ವಯಾ।।
ಅವನು ಮುಂದೆಬರಲು ಅಂತರಿಕ್ಷದಲ್ಲಿ ಮಾತು ಕೇಳಿಬಂದಿತು. “ಇಲ್ಲಿಗೆ ಏಕೆ ಬಂದೆ. ಬಲವನ್ನುಪಯೋಗಿಸಿ ನೀರನ್ನು ಕುಡಿಯಲು ಶಕ್ಯವಿಲ್ಲ.
03296026a ಕೌಂತೇಯ ಯದಿ ವೈ ಪ್ರಶ್ನಾನ್ಮಯೋಕ್ತಾನ್ಪ್ರತಿಪತ್ಸ್ಯಸೇ।
03296026c ತತಃ ಪಾಸ್ಯಸಿ ಪಾನೀಯಂ ಹರಿಷ್ಯಸಿ ಚ ಭಾರತ।।
ಕೌಂತೇಯ! ಭಾರತ! ನಾನು ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟ ನಂತರವೇ ನೀನು ನೀರನ್ನು ತೆಗೆದು ಕುಡಿಯಬಲ್ಲೆ.”
03296027a ವಾರಿತಸ್ತ್ವಬ್ರವೀತ್ಪಾರ್ಥೋ ದೃಶ್ಯಮಾನೋ ನಿವಾರಯ।
03296027c ಯಾವದ್ಬಾಣೈರ್ವಿನಿರ್ಭಿನ್ನಃ ಪುನರ್ನೈವಂ ವದಿಷ್ಯಸಿ।।
ಹೀಗೆ ತಡೆಯಲ್ಪಟ್ಟ ಪಾರ್ಥನು ಹೇಳಿದನು: “ಕಣ್ಣಿಗೆ ಕಾಣಿಸಿಕೊಂಡು ತಡೆ! ಆಗ ನನ್ನ ಬಾಣಗಳಿಂದ ನಿರ್ಭಿನ್ನನಾಗಿ ಪುನಃ ಎಂದೂ ಮಾತನಾಡುವುದಿಲ್ಲ!”
03296028a ಏವಮುಕ್ತ್ವಾ ತತಃ ಪಾರ್ಥಃ ಶರೈರಸ್ತ್ರಾನುಮಂತ್ರಿತೈಃ।
03296028c ವವರ್ಷ ತಾಂ ದಿಶಂ ಕೃತ್ಸ್ನಾಂ ಶಬ್ದವೇಧಂ ಚ ದರ್ಶಯನ್।।
ಹೀಗೆ ಹೇಳಿ ಪಾರ್ಥನು ಅಸ್ತ್ರಗಳಿಂದ ಅನುಮಂತ್ರಿಸಿದ ಬಾಣಗಳಿಂದ ಎಲ್ಲ ದಿಕ್ಕುಗಳಲ್ಲಿಯೂ ಬಾಣದ ಮಳೆಗರೆದು ತನ್ನ ಶಬ್ಧವೇದಿ ವಿದ್ಯೆಯನ್ನು ಪ್ರದರ್ಶಿಸಿದನು.
03296029a ಕರ್ಣಿನಾಲೀಕನಾರಾಚಾನುತ್ಸೃಜನ್ಭರತರ್ಷಭ।
03296029c ಅನೇಕೈರಿಷುಸಂಘಾತೈರಂತರಿಕ್ಷಂ ವವರ್ಷ ಹ।।
ಭರತರ್ಷಭ! ಕಿವಿಗಳಿದ್ದ ಉಕ್ಕಿನ ಬಾಣಗಳನ್ನು ಬಿಟ್ಟು ಅವನು ಅನೇಕ ಶರಗುಂಪುಗಳಿಂದ ಅಂತರಿಕ್ಷದಲ್ಲಿ ಮಳೆಗರೆಸಿದನು.
03296030 ಯಕ್ಷ ಉವಾಚ।
03296030a ಕಿಂ ವಿಘಾತೇನ ತೇ ಪಾರ್ಥ ಪ್ರಶ್ನಾನುಕ್ತ್ವಾ ತತಃ ಪಿಬ।
03296030c ಅನುಕ್ತ್ವಾ ತು ತತಃ ಪ್ರಶ್ನಾನ್ಪೀತ್ವೈವ ನ ಭವಿಷ್ಯಸಿ।।
ಯಕ್ಷನು ಹೇಳಿದನು: “ಈ ವಿಘಾತವೇಕೆ ಪಾರ್ಥ? ಪ್ರಶ್ನೆಗಳನ್ನು ಉತ್ತರಿಸಿ ಕುಡಿ. ಉತ್ತರಿಸದೇ ಇದ್ದರೆ ಕುಡಿದ ತಕ್ಷಣವೇ ಇಲ್ಲವಾಗುತ್ತೀಯೆ.””
03296031 ವೈಶಂಪಾಯನ ಉವಾಚ।
03296031a ಸ ತ್ವಮೋಘಾನಿಷೂನ್ಮುಕ್ತ್ವಾ ತೃಷ್ಣಯಾಭಿಪ್ರಪೀಡಿತಃ।
03296031c ಅವಿಜ್ಞಾಯೈವ ತಾನ್ಪ್ರಶ್ನಾನ್ಪೀತ್ವೈವ ನಿಪಪಾತ ಹ।।
ವೈಶಂಪಾಯನನು ಹೇಳಿದನು: “ಆ ಅಮೋಘ ಬಾಣಗಳನ್ನು ಬಿಟ್ಟು ಅವನು ಬಾಯಾರಿಕೆಯಿಂದ ಪೀಡಿತನಾಗಿ ಅವನ ಪ್ರಶ್ನೆಗಳಿಗೆ ಮನಸ್ಸನ್ನು ಕೊಡದೇ ಕುಡಿದು ಬಿದ್ದನು.
03296032a ಅಥಾಬ್ರವೀದ್ಭೀಮಸೇನಂ ಕುಂತೀಪುತ್ರೋ ಯುಧಿಷ್ಠಿರಃ।
03296032c ನಕುಲಃ ಸಹದೇವಶ್ಚ ಬೀಭತ್ಸುಶ್ಚಾಪರಾಜಿತಃ।।
03296033a ಚಿರಂ ಗತಾಸ್ತೋಯಹೇತೋರ್ನ ಚಾಗಚ್ಚಂತಿ ಭಾರತ।
03296033c ತಾಂಶ್ಚೈವಾನಯ ಭದ್ರಂ ತೇ ಪಾನೀಯಂ ಚ ತ್ವಮಾನಯ।।
ಆಗ ಕುಂತೀಪುತ್ರ ಯುಧಿಷ್ಠಿರನು ಭೀಮಸೇನನಿಗೆ ಹೇಳಿದನು: “ನಕುಲ, ಸಹದೇವ, ಮತ್ತು ಅಪರಾಜಿತ ಬೀಭತ್ಸುವೂ ಹೋಗಿ ಬಹಳ ಸಮಯವಾಯಿತು ಮತ್ತು ಮರಳಿ ಬಂದಿಲ್ಲ. ಭಾರತ! ನಿನಗೆ ಮಂಗಳವಾಗಲಿ! ಹೋಗಿ ಅವರನ್ನು ಕರೆದುಕೊಂಡು ಬಾ ಮತ್ತು ನೀರನ್ನೂ ತೆಗೆದುಕೊಂಡು ಬಾ.”
03296034a ಭೀಮಸೇನಸ್ತಥೇತ್ಯುಕ್ತ್ವಾ ತಾಂ ದಿಶಂ ಪ್ರತ್ಯಪದ್ಯತ।
03296034c ಯತ್ರ ತೇ ಪುರುಷವ್ಯಾಘ್ರಾ ಭ್ರಾತರೋಽಸ್ಯ ನಿಪಾತಿತಾಃ।।
ಹಾಗೆಯೇ ಆಗಲೆಂದು ಭೀಮಸೇನನು ಅವರು ಹೋದ ಕಡೆಯಲ್ಲಿಯೇ, ತನ್ನ ಪುರುಷವ್ಯಾಘ್ರ ತಮ್ಮಂದಿರು ಬಿದ್ದಿದ್ದಲ್ಲಿಗೆ, ಅವಸರಮಾಡಿ ಹೋದನು.
03296035a ತಾನ್ದೃಷ್ಟ್ವಾ ದುಃಖಿತೋ ಭೀಮಸ್ತೃಷಯಾ ಚ ಪ್ರಪೀಡಿತಃ।
03296035c ಅಮನ್ಯತ ಮಹಾಬಾಹುಃ ಕರ್ಮ ತದ್ಯಕ್ಷರಕ್ಷಸಾಂ।
03296035e ಸ ಚಿಂತಯಾಮಾಸ ತದಾ ಯೋದ್ಧವ್ಯಂ ಧ್ರುವಮದ್ಯ ಮೇ।।
ಅವರನ್ನು ನೋಡಿ ದುಃಖಿತನಾಗಿ ಬಾಯಾರಿಕೆಯಿಂದ ಪೀಡಿತನಾಗಿ ಮಹಾಬಾಹು ಭೀಮನು “ಇದು ಯಾರೋ ಯಕ್ಷ ಅಥವಾ ರಾಕ್ಷಸರ ಕಾರ್ಯವಾಗಿರಬಹುದು ಮತ್ತು ಅವರೊಡನೆ ಯುದ್ಧಮಾಡಬೇಕಾಗುವುದು ನನಗೆ ತಪ್ಪಿದ್ದಲ್ಲ” ಎಂದು ಯೋಚಿಸಿದನು.
03296036a ಪಾಸ್ಯಾಮಿ ತಾವತ್ಪಾನೀಯಮಿತಿ ಪಾರ್ಥೋ ವೃಕೋದರಃ।
03296036c ತತೋಽಭ್ಯಧಾವತ್ಪಾನೀಯಂ ಪಿಪಾಸುಃ ಪುರುಷರ್ಷಭಃ।।
ಆದರೆ “ಅದಕ್ಕೆ ಮೊದಲು ನೀರನ್ನು ಕುಡಿಯುತ್ತೇನೆ” ಎಂದು ಆ ಪುರುಷರ್ಷಭ ಪಾರ್ಥ ವೃಕೋದರನು ಬಾಯಾರಿಕೆಯಿಂದ ನೀರಿನ ಬಳಿ ಬಂದನು.
03296037 ಯಕ್ಷ ಉವಾಚ।
03296037a ಮಾ ತಾತ ಸಾಹಸಂ ಕಾರ್ಷೀರ್ಮಮ ಪೂರ್ವಪರಿಗ್ರಹಃ।
03296037c ಪ್ರಶ್ನಾನುಕ್ತ್ವಾ ತು ಕೌಂತೇಯ ತತಃ ಪಿಬ ಹರಸ್ವ ಚ।।
ಯಕ್ಷನು ಹೇಳಿದನು: “ಮಗೂ! ಸಾಹಸವನ್ನು ಮಾಡಬೇಡ! ಇದು ನನ್ನ ಪೂರ್ವಪರಿಗ್ರಹ. ಕೌಂತೇಯ! ಪ್ರಶ್ನೆಗಳಿಗೆ ಉತ್ತರಿಸಿ ನಂತರ ನೀರನ್ನು ತೆಗೆದು ಕುಡಿ.””
03296038 ವೈಶಂಪಾಯನ ಉವಾಚ।
03296038a ಏವಮುಕ್ತಸ್ತತೋ ಭೀಮೋ ಯಕ್ಷೇಣಾಮಿತತೇಜಸಾ।
03296038c ಅವಿಜ್ಞಾಯೈವ ತಾನ್ಪ್ರಶ್ನಾನ್ಪೀತ್ವೈವ ನಿಪಪಾತ ಹ।।
ವೈಶಂಪಾಯನನು ಹೇಳಿದನು: “ಯಕ್ಷನು ಹೀಗೆ ಹೇಳಲು ಅಮಿತತೇಜಸ್ವಿ ಭೀಮನು ಆ ಪ್ರಶ್ನೆಗಳನ್ನು ಕಡೆಗೆಣಿಸಿ ನೀರನ್ನು ಕುಡಿದು ನಂತರ ಬಿದ್ದನು.
03296039a ತತಃ ಕುಂತೀಸುತೋ ರಾಜಾ ವಿಚಿಂತ್ಯ ಪುರುಷರ್ಷಭಃ।
03296039c ಸಮುತ್ಥಾಯ ಮಹಾಬಾಹುರ್ದಹ್ಯಮಾನೇನ ಚೇತಸಾ।।
ಆಗ ಕುಂತೀಸುತ ರಾಜ ಪುರುಷರ್ಷಭ ಮಹಾಬಾಹುವು ಚಿಂತಿಸಿ ಚೇತಸದಿಂದ ದಹಿಸುತ್ತಾ ಮೇಲೆದ್ದನು.
03296040a ಅಪೇತಜನನಿರ್ಘೋಷಂ ಪ್ರವಿವೇಶ ಮಹಾವನಂ।
03296040c ರುರುಭಿಶ್ಚ ವರಾಹೈಶ್ಚ ಪಕ್ಷಿಭಿಶ್ಚ ನಿಷೇವಿತಂ।।
03296041a ನೀಲಭಾಸ್ವರವರ್ಣೈಶ್ಚ ಪಾದಪೈರುಪಶೋಭಿತಂ।
03296041c ಭ್ರಮರೈರುಪಗೀತಂ ಚ ಪಕ್ಷಿಭಿಶ್ಚ ಮಹಾಯಶಾಃ।।
ಜನರ ಸುಳಿಯೂ ಸದ್ದೂ ಹೊರಟುಹೋಗಿದ್ದ, ರುರು, ವರಾಹ ಮತ್ತು ಪಕ್ಷಿಗಳು ವಾಸಿಸುತ್ತಿದ್ದ, ಕಪ್ಪಾಗಿ ಹೊಳೆಯುತ್ತಿದ್ದ ಮರಗಳಿಂದ ಉಪಶೋಭಿಸುತ್ತಿದ್ದ, ಭ್ರಮರಗಳ ಮತ್ತು ಮಹಾಯಶ ಪಕ್ಷಿಗಳ ಉಪಗೀತೆಗಳಿಂದ ಕೂಡಿದ್ದ ಆ ಮಹಾವನವನ್ನು ಪ್ರವೇಶಿಸಿದನು.
03296042a ಸ ಗಚ್ಚನ್ಕಾನನೇ ತಸ್ಮಿನ್ ಹೇಮಜಾಲಪರಿಷ್ಕೃತಂ।
03296042c ದದರ್ಶ ತತ್ಸರಃ ಶ್ರೀಮಾನ್ವಿಶ್ವಕರ್ಮಕೃತಂ ಯಥಾ।।
ಆ ಕಾನನದಲ್ಲಿ ನಡೆದು ಹೇಮಜಾಲಗಳಿಂದ ಪರಿಷ್ಕೃತವಾದ, ಶ್ರೀಮಾನ್ ವಿಶ್ವಕರ್ಮನು ನಿರ್ಮಿಸಿದಂತಿರುವ ಆ ಸರೋವರವನ್ನು ನೋಡಿದನು.
03296043a ಉಪೇತಂ ನಲಿನೀಜಾಲೈಃ ಸಿಂಧುವಾರೈಶ್ಚ ವೇತಸೈಃ।
03296043c ಕೇತಕೈಃ ಕರವೀರೈಶ್ಚ ಪಿಪ್ಪಲೈಶ್ಚೈವ ಸಂವೃತಂ।
03296043e ಶ್ರಮಾರ್ತಸ್ತದುಪಾಗಮ್ಯ ಸರೋ ದೃಷ್ಟ್ವಾಥ ವಿಸ್ಮಿತಃ।।
ಶ್ರಮಪಟ್ಟು ಹತ್ತಿರಬಂದು ಆ ನಲಿನೀ ಜಾಲಗಳಿಂದ, ಸಿಂಧುವಾರಗಳಿಂದ ಕೂಡಿದ್ದ, ಕೇತಕಿ, ಕರವೀರ, ಮತ್ತು ಪಿಪ್ಪಲ ವೃಕ್ಷಗಳಿಂದ ಸುತ್ತುವರೆಯಲ್ಪಟ್ಟ ಆ ಸರೋವರವನ್ನು ನೋಡಿ ವಿಸ್ಮಿತವಾದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಆರಣೇಯಪರ್ವಣಿ ನಕುಲಾದಿಪತನೇ ಷಣ್ಣಾವತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಆರಣೇಯಪರ್ವದಲ್ಲಿ ನಕುಲಾದಿಪತನದಲ್ಲಿ ಇನ್ನೂರಾತೊಂಭತ್ತಾರನೆಯ ಅಧ್ಯಾಯವು.