ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ದ್ರೌಪದೀಹರಣ ಪರ್ವ
ಅಧ್ಯಾಯ 275
ಸಾರ
“ನಾನು ಇಂದು ನಾಯಿನೆಕ್ಕಿದ ಹವಿಸ್ಸನಂತಿರುವ ನಿನ್ನನ್ನು ಭೋಗಿಸಲಾರೆ” ಎಂದು ಹೇಳಿ ರಾಮನು ಸೀತೆಯನ್ನು ತ್ಯಜಿಸಿದ್ದುದು (1-13). ದುಃಖಿತಳಾದ ಸೀತೆಯು ಪತಿತಳಾಗಿದ್ದರೆ ತನ್ನ ಪ್ರಾಣವು ಹೋಗಲೆಂದು ಹೇಳಲು ವಾಯು, ಅಗ್ನಿ, ವರುಣ, ಬ್ರಹ್ಮ ಮತ್ತು ದಶರಥರು ಕಾಣಿಸಿಕೊಂಡು ಸೀತೆಯ ಪವಿತ್ರತೆಯನ್ನು ತಿಸಿದುದು (14-35). ರಾಮನು ಸೀತೆಯನ್ನು ಸೇರಿ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಹೋಗಿ ಅಭಿಷಿಕ್ತನಾದುದು (36-69).
03275001 ಮಾರ್ಕಂಡೇಯ ಉವಾಚ।
03275001a ಸ ಹತ್ವಾ ರಾವಣಂ ಕ್ಷುದ್ರಂ ರಾಕ್ಷಸೇಂದ್ರಂ ಸುರದ್ವಿಷಂ।
03275001c ಬಭೂವ ಹೃಷ್ಟಃ ಸಸುಹೃದ್ರಾಮಃ ಸೌಮಿತ್ರಿಣಾ ಸಹ।।
ಮಾರ್ಕಂಡೇಯನು ಹೇಳಿದನು: “ಆ ಸುರದ್ವಿಷ, ರಾಕ್ಷಸೇಂದ್ರ ಕ್ಷುದ್ರ ರಾವಣನನ್ನು ಕೊಂದು ಸೌಮಿತ್ರಿಯ ಸಹಿತ ರಾಮನು ತುಂಬಾ ಸಂತೋಷಗೊಂಡನು.
03275002a ತತೋ ಹತೇ ದಶಗ್ರೀವೇ ದೇವಾಃ ಸರ್ಷಿಪುರೋಗಮಾಃ।
03275002c ಆಶೀರ್ಭಿರ್ಜಯಯುಕ್ತಾಭಿರಾನರ್ಚುಸ್ತಂ ಮಹಾಭುಜಂ।।
ದಶಗ್ರೀವನು ಹತನಾಗಲು, ಋಷಿಗಳನ್ನು ಮುಂದಿಟ್ಟುಕೊಂಡು ದೇವತೆಗಳು ಆ ಮಹಾಭುಜನಿಗೆ ಆಶೀರ್ವಚನಗಳಿಂದ, ಜಯಯುಕ್ತಿಗಳಿಂದ ಅರ್ಚಿಸಿದರು.
03275003a ರಾಮಂ ಕಮಲಪತ್ರಾಕ್ಷಂ ತುಷ್ಟುವುಃ ಸರ್ವದೇವತಾಃ।
03275003c ಗಂಧರ್ವಾಃ ಪುಷ್ಪವರ್ಷೈಶ್ಚ ವಾಗ್ಭಿಶ್ಚ ತ್ರಿದಶಾಲಯಾಃ।।
ಕಮಲಪತ್ರಾಕ್ಷ ರಾಮನನ್ನು ಎಲ್ಲ ದೇವತೆಗಳೂ ಹೊಗಳಿದರು. ಹಾಗೆಯೇ ಗಂಧರ್ವರು ಮತ್ತು ತ್ರಿದಶಾಲಯದವರು ಪುಷ್ಪವೃಷ್ಟಿಗಳಿಂದ ಮತ್ತು ವಾಚನಗಳಿಂದ ಹೊಗಳಿದರು.
03275004a ಪೂಜಯಿತ್ವಾ ಯಥಾ ರಾಮಂ ಪ್ರತಿಜಗ್ಮುರ್ಯಥಾಗತಂ।
03275004c ತನ್ಮಹೋತ್ಸವಸಂಕಾಶಮಾಸೀದಾಕಾಶಮಚ್ಯುತ।।
ಹೀಗೆ ರಾಮನನ್ನು ಪೂಜಿಸಿ ಅವರು ಬಂದಂತೆ ಹೊರಟುಹೋದರು. ಅಚ್ಯುತ! ಆ ಆಕಾಶವು ಒಂದು ಮಹಾ ಉತ್ಸವದಂತೆ ತೋರುತ್ತಿತ್ತು.
03275005a ತತೋ ಹತ್ವಾ ದಶಗ್ರೀವಂ ಲಂಕಾಂ ರಾಮೋ ಮಹಾಯಶಾಃ।
03275005c ವಿಭೀಷಣಾಯ ಪ್ರದದೌ ಪ್ರಭುಃ ಪರಪುರಂಜಯಃ।।
ಪರಪುರಂಜಯ! ದಶಗ್ರೀವನನ್ನು ಕೊಂದು ಮಹಾಯಶ ಪ್ರಭು ರಾಮನು ಲಂಕೆಯನ್ನು ವಿಭೀಷಣನಿಗಿತ್ತನು.
03275006a ತತಃ ಸೀತಾಂ ಪುರಸ್ಕೃತ್ಯ ವಿಭೀಷಣಪುರಸ್ಕೃತಾಂ।
03275006c ಅವಿಂಧ್ಯೋ ನಾಮ ಸುಪ್ರಜ್ಞೋ ವೃದ್ಧಾಮಾತ್ಯೋ ವಿನಿರ್ಯಯೌ।।
03275007a ಉವಾಚ ಚ ಮಹಾತ್ಮಾನಂ ಕಾಕುತ್ಸ್ಥಂ ದೈನ್ಯಮಾಸ್ಥಿತಂ।
03275007c ಪ್ರತೀಚ್ಚ ದೇವೀಂ ಸದ್ವೃತ್ತಾಂಧ ಮಹಾತ್ಮಂ ಜಾನಕೀಮಿತಿ।।
ಆಗ ಸೀತೆಯನ್ನು ಮುಂದಿರಿಸಿಕೊಂಡು, ವಿಭೀಷಣನನ್ನೂ ಮುಂದಿರಿಸಿಕೊಂಡು, ಅವಿಂಧ್ಯ ಎಂಬ ಹೆಸರಿನ ಸುಪ್ರಜ್ಞ, ವೃದ್ಧ ಅಮಾತ್ಯನು ಆಗಮಿಸಿ ದೀನನಾಗಿ ನಿಂತಿದ್ದ ಮಹಾತ್ಮ ಕಾಕುತ್ಸ್ಥನಿಗೆ “ಮಹಾತ್ಮ! ಸದಾಚಾರಿಯಾದ ಈ ದೇವಿ ಜಾನಕಿಯನ್ನು ಸ್ವೀಕರಿಸು” ಎಂದು ಹೇಳಿದನು.
03275008a ಏತಚ್ಚ್ರುತ್ವಾ ವಚಸ್ತಸ್ಮಾದವತೀರ್ಯ ರಥೋತ್ತಮಾತ್।
03275008c ಬಾಷ್ಪೇಣಾಪಿಹಿತಾಂ ಸೀತಾಂ ದದರ್ಶೇಕ್ಷ್ವಾಕುನಂದನಃ।।
ಈ ಮಾತುಗಳನ್ನು ಕೇಳಿ ಇಕ್ಷ್ವಾಕುನಂದನನು ಉತ್ತಮ ರಥದಿಂದಿಳಿದು, ಕಣ್ಣೀರಿನಲ್ಲಿ ಅಡಗಿದ್ದ ಸೀತೆಯನ್ನು ನೋಡಿದನು.
03275009a ತಾಂ ದೃಷ್ಟ್ವಾ ಚಾರುಸರ್ವಾಂಗೀಂ ಯಾನಸ್ಥಾಂ ಶೋಕಕರ್ಶಿತಾಂ।
03275009c ಮಲೋಪಚಿತಸರ್ವಾಂಗೀಂ ಜಟಿಲಾಂ ಕೃಷ್ಣವಾಸಸಂ।।
03275010a ಉವಾಚ ರಾಮೋ ವೈದೇಹೀಂ ಪರಾಮರ್ಶವಿಶಂಕಿತಃ।
03275010c ಗಚ್ಚ ವೈದೇಹಿ ಮುಕ್ತಾ ತ್ವಂ ಯತ್ಕಾರ್ಯಂ ತನ್ಮಯಾ ಕೃತಂ।।
ಆ ಚಾರುಸರ್ವಾಂಗೀ, ಶೋಕಕರ್ಶಿತಳಾಗಿ ನಿಂತಿದ್ದ, ಸರ್ವಾಂಗಗಳಲ್ಲಿಯೂ ಕೊಳೆಯಿಂದ ಕೂಡಿದ್ದ, ಜಡೆ ಗಂಟುಕಟ್ಟಿ, ಕಪ್ಪುಬಣ್ಣದ ವಸ್ತ್ರವನ್ನುಟ್ಟಿದ್ದ ಅವಳನ್ನು ನೋಡಿ ರಾಮನು ವೈದೇಹಿಯು ಪರರಿಂದ ಸ್ಪರ್ಶಿತಳಾಗಿದ್ದಾಳೆಂದು ಶಂಕಿಸಿ ಹೇಳಿದನು: “ವೈದೇಹೀ! ಹೋಗು! ನೀನು ಮುಕ್ತಳಾಗಿದ್ದೀಯೆ! ನಾನು ಏನು ಮಾಡಬೇಕಾಗಿತ್ತೋ ಅದನ್ನು ಮಾಡಿದ್ದೇನೆ.
03275011a ಮಾಮಾಸಾದ್ಯ ಪತಿಂ ಭದ್ರೇ ನ ತ್ವಂ ರಾಕ್ಷಸವೇಶ್ಮನಿ।
03275011c ಜರಾಂ ವ್ರಜೇಥಾ ಇತಿ ಮೇ ನಿಹತೋಽಸೌ ನಿಶಾಚರಃ।।
ಭದ್ರೇ! ನನ್ನನ್ನು ಪತಿಯನ್ನಾಗಿ ಪಡೆದ ನೀನು ರಾಕ್ಷಸನ ಮನೆಯಲ್ಲಿ ಮುದುಕಿಯಾಗಬಾರದು ಎಂದು ನಾನು ಆ ನಿಶಾಚರನನ್ನು ಕೊಂದೆ.
03275012a ಕಥಂ ಹ್ಯಸ್ಮದ್ವಿಧೋ ಜಾತು ಜಾನನ್ಧರ್ಮವಿನಿಶ್ಚಯಂ।
03275012c ಪರಹಸ್ತಗತಾಂ ನಾರೀಂ ಮುಹೂರ್ತಮಪಿ ಧಾರಯೇತ್।।
ಧರ್ಮವಿನಿಶ್ಚಯವನ್ನು ತಿಳಿದಿರುವ ನನ್ನಂಥವನು ಹೇಗೆ ತಾನೇ, ಇನ್ನೊಬ್ಬನ ಕೈಗೆ ಹೋದ ನಾರಿಯನ್ನು ಮುಹೂರ್ತ ಸಮಯಕ್ಕಾದರೂ ಸ್ವೀಕರಿಸಿಯಾನು?
03275013a ಸುವೃತ್ತಾಮಸುವೃತ್ತಾಂ ವಾಪ್ಯಹಂ ತ್ವಾಮದ್ಯ ಮೈಥಿಲಿ।
03275013c ನೋತ್ಸಹೇ ಪರಿಭೋಗಾಯ ಶ್ವಾವಲೀಢಂ ಹವಿರ್ಯಥಾ।।
ಮೈಥಿಲಿ! ನೀನು ಸುವೃತ್ತಳಾಗಿದ್ದೀಯೋ ಅಸುವೃತ್ತಳಾಗಿದ್ದೀಯೋ ನಾನು ಇಂದು ನಾಯಿನೆಕ್ಕಿದ ಹವಿಸ್ಸಿನಂತಿರುವ ನಿನ್ನನ್ನು ಭೋಗಿಸಲಾರೆ.”
03275014a ತತಃ ಸಾ ಸಹಸಾ ಬಾಲಾ ತಚ್ಚ್ರುತ್ವಾ ದಾರುಣಂ ವಚಃ।
03275014c ಪಪಾತ ದೇವೀ ವ್ಯಥಿತಾ ನಿಕೃತ್ತಾ ಕದಲೀ ಯಥಾ।।
ಆಗ ಆ ದಾರುಣ ಮಾತನ್ನು ಕೇಳಿ ಆ ದೇವಿ ಬಾಲೆಯು ವ್ಯಥಿತಳಾಗಿ ತಕ್ಷಣವೇ ಕತ್ತರಿಸಿದ ಬಾಳೆಯಮರದಂತೆ ಕೆಳಗುರುಳಿ ಬಿದ್ದಳು.
03275015a ಯೋ ಹ್ಯಸ್ಯಾ ಹರ್ಷಸಂಭೂತೋ ಮುಖರಾಗಸ್ತದಾಭವತ್।
03275015c ಕ್ಷಣೇನ ಸ ಪುನರ್ಭ್ರಷ್ಟೋ ನಿಃಶ್ವಾಸಾದಿವ ದರ್ಪಣೇ।।
ಹರ್ಷದಿಂದ ಹುಟ್ಟಿದ್ದ ಮುಖದಲ್ಲಿನ ಕೆಂಪು ಒಂದೇ ಕ್ಷಣದಲ್ಲಿ ಕನ್ನಡಿಯ ಮೇಲೆ ಊದಿದಾಗ ಆಗುವಂತೆ ಮುಸುಕಿ ನಷ್ಟವಾಯಿತು.
03275016a ತತಸ್ತೇ ಹರಯಃ ಸರ್ವೇ ತಚ್ಚ್ರುತ್ವಾ ರಾಮಭಾಷಿತಂ।
03275016c ಗತಾಸುಕಲ್ಪಾ ನಿಶ್ಚೇಷ್ಟಾ ಬಭೂವುಃ ಸಹಲಕ್ಷ್ಮಣಾಃ।।
ರಾಮನಾಡಿದುದನ್ನು ಕೇಳಿದ ಎಲ್ಲ ಕಪಿಗಳೂ, ಲಕ್ಷ್ಮಣನೂ ಸೇರಿ, ಸ್ಥಬ್ಧರಾಗಿ ನಿಂತುಬಿಟ್ಟರು. ಸತ್ತವರಂತಾದರು.
03275017a ತತೋ ದೇವೋ ವಿಶುದ್ಧಾತ್ಮಾ ವಿಮಾನೇನ ಚತುರ್ಮುಖಃ।
03275017c ಪಿತಾಮಹೋ ಜಗತ್ಸ್ರಷ್ಟಾ ದರ್ಶಯಾಮಾಸ ರಾಘವಂ।।
03275018a ಶಕ್ರಶ್ಚಾಗ್ನಿಶ್ಚ ವಾಯುಶ್ಚ ಯಮೋ ವರುಣ ಏವ ಚ।
03275018c ಯಕ್ಷಾಧಿಪಶ್ಚ ಭಗವಾಂಸ್ತಥಾ ಸಪ್ತರ್ಷಯೋಽಮಲಾಃ।।
ಆಗ ದೇವ, ವಿಶುದ್ಧಾತ್ಮ, ಚತುರ್ಮುಖ, ಜಗತ್ವಷ್ಟಾ ಬ್ರಹ್ಮನು, ಹಾಗೆಯೇ, ಶಕ್ರ, ಅಗ್ನಿ, ವಾಯು, ಯಮ, ವರುಣ, ಭಗವಾನ್ ಯಕ್ಷಾಧಿಪತಿ, ಮತ್ತು ಅಮಲ ಸಪ್ತರ್ಷಿಗಳೂ ವಿಮಾನದಲ್ಲಿ ರಾಘವನಿಗೆ ಕಾಣಿಸಿಕೊಂಡರು.
03275019a ರಾಜಾ ದಶರಥಶ್ಚೈವ ದಿವ್ಯಭಾಸ್ವರಮೂರ್ತಿಮಾನ್।
03275019c ವಿಮಾನೇನ ಮಹಾರ್ಹೇಣ ಹಂಸಯುಕ್ತೇನ ಭಾಸ್ವತಾ।।
ದಿವ್ಯವಾದ ಮೂರ್ತಿಯಂತೆ ಹೊಳೆಯುತ್ತಿದ್ದ ರಾಜಾ ದಶರಥನೂ ಕೂಡ ಹಂಸಗಳನ್ನು ಕಟ್ಟಿದ್ದ, ಮಹಾಬೆಲೆಯ, ಹೊಳೆಯುತ್ತಿದ್ದ, ವಿಮಾನದಲ್ಲಿ ಕಾಣಿಸಿಕೊಂಡನು.
03275020a ತತೋಽಂತರಿಕ್ಷಂ ತತ್ಸರ್ವಂ ದೇವಗಂಧರ್ವಸಂಕುಲಂ।
03275020c ಶುಶುಭೇ ತಾರಕಾಚಿತ್ರಂ ಶರದೀವ ನಭಸ್ತಲಂ।।
ಆಗ ಅಂತರಿಕ್ಷವು ಆ ಎಲ್ಲ ದೇವಗಂಧರ್ವಸಂಕುಲಗಳಿಂದ ಕೂಡಿ ಶರದೃತುವಿನಲ್ಲಿ ತಾರೆಗಳಿಂದ ಕೂಡಿದ ನಭಸ್ಥಲದಂತೆ ಶೋಭಿಸಿತು.
03275021a ತತ ಉತ್ಥಾಯ ವೈದೇಹಿ ತೇಷಾಂ ಮಧ್ಯೇ ಯಶಸ್ವಿನೀ।
03275021c ಉವಾಚ ವಾಕ್ಯಂ ಕಲ್ಯಾಣೀ ರಾಮಂ ಪೃಥುಲವಕ್ಷಸಂ।।
ಆಗ ಅವರ ಮಧ್ಯೆ ಯಶಸ್ವಿನೀ ಕಲ್ಯಾಣೀ ವೈದೇಹಿಯು ಎದ್ದು ವಿಶಾಲ ವಕ್ಷಸ ರಾಮನಿಗೆ ಈ ಮಾತುಗಳನ್ನಾಡಿದಳು.
03275022a ರಾಜಪುತ್ರ ನ ತೇ ಕೋಪಂ ಕರೋಮಿ ವಿದಿತಾ ಹಿ ಮೇ।
03275022c ಗತಿಃ ಸ್ತ್ರೀಣಾಂ ನರಾಣಾಂ ಚ ಶೃಣು ಚೇದಂ ವಚೋ ಮಮ।।
“ರಾಜಪುತ್ರ! ನಾನು ನಿನ್ನ ಮೇಲೆ ಕೋಪಮಾಡುತ್ತಿಲ್ಲ! ಸ್ತ್ರೀ ಮತ್ತು ಪುರುಷರ ಗತಿಯು ನನಗೆ ತಿಳಿದೇಇದೆ. ನನ್ನ ಈ ಮಾತುಗಳನ್ನು ಕೇಳು.
03275023a ಅಂತಶ್ಚರತಿ ಭೂತಾನಾಂ ಮಾತರಿಶ್ವಾ ಸದಾಗತಿಃ।
03275023c ಸ ಮೇ ವಿಮುಂಚತು ಪ್ರಾಣಾನ್ಯದಿ ಪಾಪಂ ಚರಾಮ್ಯಹಂ।।
ನಾನೇದರೂ ಪಾಪವನ್ನು ಮಾಡಿದ್ದರೆ ಇರುವವುಗಳ ಒಳಗೆ ಚರಿಸುತ್ತಿರುವ, ಸದಾ ಚಂಚಲವಾಗಿ ಚಲಿಸುತ್ತಲೇ ಇರುವ ಪ್ರಾಣವು ನನ್ನನ್ನು ಈಗಲೇ ತೊರೆಯಲಿ!
03275024a ಅಗ್ನಿರಾಪಸ್ತಥಾಕಾಶಂ ಪೃಥಿವೀ ವಾಯುರೇವ ಚ।
03275024c ವಿಮುಂಚಂತು ಮಮ ಪ್ರಾಣಾನ್ಯದಿ ಪಾಪಂ ಚರಾಮ್ಯಹಂ।।
ನಾನೇದರೂ ಪಾಪವನ್ನು ಮಾಡಿದ್ದರೆ, ಅಗ್ನಿ, ಆಪ, ಆಕಾಶ, ಪೃಥ್ವಿ ಮತ್ತು ವಾಯುವೂ ಕೂಡ ನನ್ನ ಪ್ರಾಣವನ್ನು ತೊರೆಯಲಿ!”
03275025a ತತೋಽಂತರಿಕ್ಷೇ ವಾಗಾಸೀತ್ಸರ್ವಾ ವಿಶ್ರಾವಯನ್ದಿಶಃ।
03275025c ಪುಣ್ಯಾ ಸಂಹರ್ಷಣೀ ತೇಷಾಂ ವಾನರಾಣಾಂ ಮಹಾತ್ಮನಾಂ।।
ಆಗ ಅಂತರಿಕ್ಷದಲ್ಲಿ ಎಲ್ಲ ದಿಕ್ಕುಗಳಲ್ಲಿಯೂ ಮೊಳಗುತ್ತಾ, ಪುಣ್ಯವೂ ಆ ಮಹಾತ್ಮ ವಾನರರಿಗೆ ಸಂಹರ್ಷವನ್ನುತರುವ ಒಂದು ವಾಣಿಯಾಯಿತು.
03275026 ವಾಯುರುವಾಚ।
03275026a ಭೋ ಭೋ ರಾಘವ ಸತ್ಯಂ ವೈ ವಾಯುರಸ್ಮಿ ಸದಾಗತಿಃ।
03275026c ಅಪಾಪಾ ಮೈಥಿಲೀ ರಾಜನ್ಸಂಗಚ್ಚ ಸಹ ಭಾರ್ಯಯಾ।।
ವಾಯುವು ಹೇಳಿದನು: “ಭೋ ಭೋ ರಾಘವ! ಇದು ಸತ್ಯ! ನಾನು ಸದಾಗತಿಯಲ್ಲಿರುವ ವಾಯು! ಮೈಥಿಲಿಯು ಅಪಾಪೀ! ರಾಜನ್! ಭಾರ್ಯೆಯೊಂದಿಗೆ ಕೂಡು.”
03275027 ಅಗ್ನಿರುವಾಚ।
03275027a ಅಹಮಂತಃಶರೀರಸ್ಥೋ ಭೂತಾನಾಂ ರಘುನಂದನ।
03275027c ಸುಸೂಕ್ಷ್ಮಮಪಿ ಕಾಕುತ್ಸ್ಥ ಮೈಥಿಲೀ ನಾಪರಾಧ್ಯತಿ।।
ಅಗ್ನಿಯು ಹೇಳಿದನು: “ರಘುನಂದನ! ಇರುವವುಗಳ ಶರೀರದೊಳಗಿರುವವನು ನಾನು! ಕಾಕುತ್ಸ್ಥ! ಮೈಥಿಲಿಯು ಅತಿ ಸೂಕ್ಷವಾದ ಅಪರಾಧವನ್ನೂ ಎಸಗಿಲ್ಲ!”
03275028 ವರುಣ ಉವಾಚ।
03275028a ರಸಾ ವೈ ಮತ್ಪ್ರಸೂತಾ ಹಿ ಭೂತದೇಹೇಷು ರಾಘವ।
03275028c ಅಹಂ ವೈ ತ್ವಾಂ ಪ್ರಬ್ರವೀಮಿ ಮೈಥಿಲೀ ಪ್ರತಿಗೃಹ್ಯತಾಂ।।
ವರುಣನು ಹೇಳಿದನು: “ರಾಘವ! ಇರುವವುಗಳ ದೇಹಗಳಲ್ಲಿರುವ ರಸವು ನನ್ನಿಂದಲೇ ಬಂದಿರುವುದು. ನಾನು ನಿನಗೆ ಹೇಳುತ್ತಿದ್ದೇನೆ. ಮೈಥಿಲಿಯನ್ನು ಹಿಂದೆ ತೆಗೆದುಕೋ!”
03275029 ಬ್ರಹ್ಮೋವಾಚ।
03275029a ಪುತ್ರ ನೈತದಿಹಾಶ್ಚರ್ಯಂ ತ್ವಯಿ ರಾಜರ್ಷಿಧರ್ಮಿಣಿ।
03275029c ಸಾಧೋ ಸದ್ವೃತ್ತಮಾರ್ಗಸ್ಥೇ ಶೃಣು ಚೇದಂ ವಚೋ ಮಮ।।
ಬ್ರಹ್ಮನು ಹೇಳಿದನು: “ಪುತ್ರ! ಸಾಧು! ರಾಜರ್ಷಿಯೂ ಧರ್ಮಿಣಿಯೂ, ಒಳ್ಳೆಯ ಮಾರ್ಗದಲ್ಲಿ ನಡೆಯುವವನೂ ಆದ ನಿನ್ನಿಂದ ಇದು ಆಶ್ಚರ್ಯವೇನಲ್ಲ! ಆದರೂ ನನ್ನ ಈ ಮಾತುಗಳನ್ನು ಕೇಳು.
03275030a ಶತ್ರುರೇಷ ತ್ವಯಾ ವೀರ ದೇವಗಂಧರ್ವಭೋಗಿನಾಂ।
03275030c ಯಕ್ಷಾಣಾಂ ದಾನವಾನಾಂ ಚ ಮಹರ್ಷೀಣಾಂ ಚ ಪಾತಿತಃ।।
ವೀರ! ನೀನು ದೇವ, ಗಂಧರ್ವ, ನಾಗ, ಯಕ್ಷ, ದಾನವ ಮತ್ತು ಮಹರ್ಷಿಗಳ ಶತ್ರುವನ್ನು ಕೆಳಗುರುಳಿಸಿದ್ದೀಯೆ.
03275031a ಅವಧ್ಯಃ ಸರ್ವಭೂತಾನಾಂ ಮತ್ಪ್ರಸಾದಾತ್ಪುರಾಭವತ್।
03275031c ಕಸ್ಮಾಚ್ಚಿತ್ಕಾರಣಾತ್ಪಾಪಃ ಕಂ ಚಿತ್ಕಾಲಮುಪೇಕ್ಷಿತಃ।।
ಹಿಂದೆ ನನ್ನ ಪ್ರಸಾದದಿಂದ ಸರ್ವಭೂತಗಳಿಗೂ ಅವಧ್ಯನಾಗಿರುವ ಈ ಪಾಪಕರ್ಮಿಯನ್ನು ಯಾವುದೋ ಕಾರಣದಿಂದ ಕೆಲ ಕಾಲ ಉಪೇಕ್ಷಿಸಿಯಾಗಿತ್ತು.
03275032a ವಧಾರ್ಥಮಾತ್ಮನಸ್ತೇನ ಹೃತಾ ಸೀತಾ ದುರಾತ್ಮನಾ।
03275032c ನಲಕೂಬರಶಾಪೇನ ರಕ್ಷಾ ಚಾಸ್ಯಾಃ ಕೃತಾ ಮಯಾ।।
ಅನಂತರ ಆ ದುರಾತ್ಮನು ತನ್ನದೇ ವಧೆಗೆ ಕಾರಣಳಾದ ಸೀತೆಯನ್ನು ಅಪಹರಿಸಿದನು. ಅವಳನ್ನು ನಾನು ನಲಕೂಬರನ ಶಾಪದಿಂದ ರಕ್ಷಿಸಿದೆನು.
03275033a ಯದಿ ಹ್ಯಕಾಮಾಮಾಸೇವೇತ್ಸ್ತ್ರಿಯಮನ್ಯಾಮಪಿ ಧ್ರುವಂ।
03275033c ಶತಧಾಸ್ಯ ಫಲೇದ್ದೇಹ ಇತ್ಯುಕ್ತಃ ಸೋಽಭವತ್ಪುರಾ।।
ಹಿಂದೆ ಅವನಿಗೆ ಹೇಳಲಾಗಿತ್ತು – ತನ್ನನ್ನು ಬಯಸದೇ ಇದ್ದ ಯಾವ ಸ್ತ್ರೀಯನ್ನು ಕಾಮಿಸಿದರೂ ಅವನ ದೇಹವು ನೂರು ತುಂಡಾಗುತ್ತದೆ.
03275034a ನಾತ್ರ ಶಂಕಾ ತ್ವಯಾ ಕಾರ್ಯಾ ಪ್ರತೀಚ್ಚೇಮಾಂ ಮಹಾದ್ಯುತೇ।
03275034c ಕೃತಂ ತ್ವಯಾ ಮಹತ್ಕಾರ್ಯಂ ದೇವಾನಾಮಮರಪ್ರಭ।।
ಮಹಾದ್ಯುತೇ! ಇದರಲ್ಲಿ ಶಂಕೆಪಡಬೇಡ! ಇವಳನ್ನು ಸ್ವೀಕರಿಸುವ ಕಾರ್ಯಮಾಡು. ಅಮರಪ್ರಭನಾದ ನೀನು ದೇವತೆಗಳ ಮಹಾಕಾರ್ಯವನ್ನು ಎಸಗಿದ್ದೀಯೆ.”
03275035 ದಶರಥ ಉವಾಚ।
03275035a ಪ್ರೀತೋಽಸ್ಮಿ ವತ್ಸ ಭದ್ರಂ ತೇ ಪಿತಾ ದಶರಥೋಽಸ್ಮಿ ತೇ।
03275035c ಅನುಜಾನಾಮಿ ರಾಜ್ಯಂ ಚ ಪ್ರಶಾಧಿ ಪುರುಷೋತ್ತಮ।।
ದಶರಥನು ಹೇಳಿದನು: “ಸಂತೋಷಗೊಂಡಿದ್ದೇನೆ. ವತ್ಸ! ನಿನಗೆ ಮಂಗಳವಾಗಲಿ! ನಾನು ನಿನ್ನ ತಂದೆ ದಶರಥ! ಪುರುಷೋತ್ತಮ! ಅನುಮತಿಯನ್ನು ನೀಡುತ್ತಿದ್ದೇನೆ. ರಾಜ್ಯವನ್ನಾಳು!”
03275036 ರಾಮ ಉವಾಚ।
03275036a ಅಭಿವಾದಯೇ ತ್ವಾಂ ರಾಜೇಂದ್ರ ಯದಿ ತ್ವಂ ಜನಕೋ ಮಮ।
03275036c ಗಮಿಷ್ಯಾಮಿ ಪುರೀಂ ರಮ್ಯಾಮಯೋಧ್ಯಾಂ ಶಾಸನಾತ್ತವ।।
ರಾಮನು ಹೇಳಿದನು: “ರಾಜೇಂದ್ರ! ನನ್ನ ಜನಕನಾಗಿದ್ದರೆ ನಿನಗೆ ಅಭಿವಾದನೆಗಳು. ನಿನ್ನ ಶಾಸನದಂತೆ ನಾನು ರಮ್ಯ ಅಯೋಧ್ಯಾಪುರಿಗೆ ಹೋಗುತ್ತೇನೆ.””
03275037 ಮಾರ್ಕಂಡೇಯ ಉವಾಚ।
03275037a ತಮುವಾಚ ಪಿತಾ ಭೂಯಃ ಪ್ರಹೃಷ್ಟೋ ಮನುಜಾಧಿಪ।
03275037c ಗಚ್ಚಾಯೋಧ್ಯಾಂ ಪ್ರಶಾಧಿ ತ್ವಂ ರಾಮ ರಕ್ತಾಂತಲೋಚನ।।
ಮಾರ್ಕಂಡೇಯನು ಹೇಳಿದನು: “ಮನುಜಾಧಿಪ! ಸಂತೋಷಗೊಂಡ ತಂದೆಯು ಅವನಿಗೆ ಹೇಳಿದನು: “ರಕ್ತಾಂತಲೋಚನ ರಾಮ! ಹೋಗಿ ಅಯೋಧ್ಯೆಯನ್ನು ಆಳು!”
03275038a ತತೋ ದೇವಾನ್ನಮಸ್ಕೃತ್ಯ ಸುಹೃದ್ಭಿರಭಿನಂದಿತಃ।
03275038c ಮಹೇಂದ್ರ ಇವ ಪೌಲೋಮ್ಯಾ ಭಾರ್ಯಯಾ ಸ ಸಮೇಯಿವಾನ್।।
ಆಗ ದೇವತೆಗಳಿಗೆ ನಮಸ್ಕರಿಸಿ, ಸುಹೃದಯರಿಂದ ಅಭಿನಂದಿತನಾಗಿ ಪೌಲೋಮೆಯೊಂದಿಗೆ ಇಂದ್ರನು ಹೇಗೋ ಹಾಗೆ ಭಾರ್ಯೆಯನ್ನು ಕೂಡಿದನು.
03275039a ತತೋ ವರಂ ದದೌ ತಸ್ಮೈ ಅವಿಂಧ್ಯಾಯ ಪರಂತಪಃ।
03275039c ತ್ರಿಜಟಾಂ ಚಾರ್ಥಮಾನಾಭ್ಯಾಂ ಯೋಜಯಾಮಾಸ ರಾಕ್ಷಸೀಂ।।
ಅನಂತರ ಪರಂತಪನು ಅವಿಂಧ್ಯನಿಗೆ ವರವನ್ನಿತ್ತನು ಮತ್ತು ರಾಕ್ಷಸೀ ತ್ರಿಜಟೆಗೆ ಸಂಪತ್ತು ಗೌರವಗಳನ್ನಿತ್ತನು.
03275040a ತಮುವಾಚ ತತೋ ಬ್ರಹ್ಮಾ ದೇವೈಃ ಶಕ್ರಮುಖೈರ್ವೃತಃ।
03275040c ಕೌಸಲ್ಯಾಮಾತರಿಷ್ಟಾಂಸ್ತೇ ವರಾನದ್ಯ ದದಾನಿ ಕಾನ್।।
ಶಕ್ರಪ್ರಮುಖ ದೇವತೆಗಳಿಂದ ಆವೃತನಾದ ಬ್ರಹ್ಮನು ಹೇಳಿದನು: “ಕೌಸಲ್ಯೆಯ ಮಗನೇ! ನೀನು ಬಯಸುವ ಯಾವ ವರವನ್ನು ಇಂದು ನಾನು ನಿನಗೆ ಕೊಡಲಿ?”
03275041a ವವ್ರೇ ರಾಮಃ ಸ್ಥಿತಿಂ ಧರ್ಮೇ ಶತ್ರುಭಿಶ್ಚಾಪರಾಜಯಂ।
03275041c ರಾಕ್ಷಸೈರ್ನಿಹತಾನಾಂ ಚ ವಾನರಾಣಾಂ ಸಮುದ್ಭವಂ।।
ರಾಮನು ಧರ್ಮದಲ್ಲಿ ನೆಲೆಯಾಗಿರುವಂತೆ, ಶತ್ರುಗಳ ಮೇಲೆ ಜಯ, ಮತ್ತು ರಾಕ್ಷಸರಿಂದ ಹತರಾದ ವಾನರರ ಪುನರ್ಜೀವವನ್ನು ವರಗಳಾಗಿ ವರಿಸಿದನು.
03275042a ತತಸ್ತೇ ಬ್ರಹ್ಮಣಾ ಪ್ರೋಕ್ತೇ ತಥೇತಿ ವಚನೇ ತದಾ।
03275042c ಸಮುತ್ತಸ್ಥುರ್ಮಹಾರಾಜ ವಾನರಾ ಲಬ್ಧಚೇತಸಃ।।
ಹಾಗೆಯೇ ಆಗಲೆಂದು ಬ್ರಹ್ಮನು ಹೇಳಲು, ಮಹಾರಾಜ! ವಾನರರು ಚೇತನವನ್ನು ಪಡೆದು ಮೇಲೆದ್ದರು.
03275043a ಸೀತಾ ಚಾಪಿ ಮಹಾಭಾಗಾ ವರಂ ಹನುಮತೇ ದದೌ।
03275043c ರಾಮಕೀರ್ತ್ಯಾ ಸಮಂ ಪುತ್ರ ಜೀವಿತಂ ತೇ ಭವಿಷ್ಯತಿ।।
ಮಹಾಭಾಗೆ ಸೀತೆಯೂ ಕೂಡ ಹನುಮತನಿಗೆ ವರವನ್ನಿತ್ತಳು: “ಮಗನೇ! ರಾಮನ ಕೀರ್ತಿಯಿರುವವರೆಗೆ ನೀನು ಜೀವಿಸಿರುತ್ತೀಯೆ!
03275044a ದಿವ್ಯಾಸ್ತ್ವಾಮುಪಭೋಗಾಶ್ಚ ಮತ್ಪ್ರಸಾದಕೃತಾಃ ಸದಾ।
03275044c ಉಪಸ್ಥಾಸ್ಯಂತಿ ಹನುಮನ್ನಿತಿ ಸ್ಮ ಹರಿಲೋಚನ।।
ಹರಿಲೋಚನ ಹನುಮ! ನನ್ನ ಪ್ರಸಾದದಿಂದ ಸದಾ ದಿವ್ಯ ಉಪಭೋಗಗಳು ನಿನಗೆ ಕಾಯುತ್ತಿರುತ್ತವೆ!”
03275045a ತತಸ್ತೇ ಪ್ರೇಕ್ಷಮಾಣಾನಾಂ ತೇಷಾಮಕ್ಲಿಷ್ಟಕರ್ಮಣಾಂ।
03275045c ಅಂತರ್ಧಾನಂ ಯಯುರ್ದೇವಾಃ ಸರ್ವೇ ಶಕ್ರಪುರೋಗಮಾಃ।।
ಆಗ ಅವರು ಆ ಅಕ್ಲಿಷ್ಟಕರ್ಮಿಗಳನ್ನು ನೋಡುತ್ತಿರಲು ಶಕ್ರನನ್ನು ಮುಂದಿಟ್ಟುಕೊಂಡು ಎಲ್ಲ ದೇವತೆಗಳೂ ಅಂತರ್ಧಾನರಾದರು.
03275046a ದೃಷ್ಟ್ವಾ ತು ರಾಮಂ ಜಾನಕ್ಯಾ ಸಮೇತಂ ಶಕ್ರಸಾರಥಿಃ।
03275046c ಉವಾಚ ಪರಮಪ್ರೀತಃ ಸುಹೃನ್ಮಧ್ಯ ಇದಂ ವಚಃ।।
ಸುಹೃದಯರ ಮಧ್ಯೆ ಜಾನಕಿಯ ಜೊತೆಗಿದ್ದ ರಾಮನನ್ನು ನೋಡಿ ಪರಮಪ್ರೀತನಾದ ಶಕ್ರಸಾರಥಿಯು ಹೀಗೆ ಹೇಳಿದನು:
03275047a ದೇವಗಂಧರ್ವಯಕ್ಷಾಣಾಂ ಮಾನುಷಾಸುರಭೋಗಿನಾಂ।
03275047c ಅಪನೀತಂ ತ್ವಯಾ ದುಃಖಮಿದಂ ಸತ್ಯಪರಾಕ್ರಮ।।
“ಸತ್ಯಪರಾಕ್ರಮಿ! ದೇವತೆಗಳ, ಗಂಧರ್ವರ, ಯಕ್ಷರ, ಮನುಷ್ಯರ, ಅಸುರರ ಮತ್ತು ನಾಗಗಳ ದುಃಖವನ್ನು ಇಂದು ನೀನು ಕಳೆದಿದ್ದೀಯೆ!
03275048a ಸದೇವಾಸುರಗಂಧರ್ವಾ ಯಕ್ಷರಾಕ್ಷಸಪನ್ನಗಾಃ।
03275048c ಕಥಯಿಷ್ಯಂತಿ ಲೋಕಾಸ್ತ್ವಾಂ ಯಾವದ್ಭೂಮಿರ್ಧರಿಷ್ಯತಿ।।
ದೇವ, ಅಸುರ, ಗಂಧರ್ವ, ಯಕ್ಷ, ರಾಕ್ಷಸ, ಪನ್ನಗಳೊಂದಿಗೆ ಲೋಕಗಳು ಭೂಮಿಯಿರುವವರೆಗೆ ನಿನ್ನ ಕಥೆಯನ್ನು ಹೇಳುತ್ತಿರುತ್ತಾರೆ.”
03275049a ಇತ್ಯೇವಮುಕ್ತ್ವಾನುಜ್ಞಾಪ್ಯ ರಾಮಂ ಶಸ್ತ್ರಭೃತಾಂ ವರಂ।
03275049c ಸಂಪೂಜ್ಯಾಪಾಕ್ರಮತ್ತೇನ ರಥೇನಾದಿತ್ಯವರ್ಚಸಾ।।
ಹೀಗೆ ಹೇಳಿ ಶಸ್ತ್ರಭೃತರಲ್ಲಿ ಶ್ರೇಷ್ಠ ರಾಮನಿಂದ ಆಜ್ಞೆಪಡೆದು ಸಂಪೂಜಿಸಿ ಆದಿತ್ಯವರ್ಚಸ ರಥದಲ್ಲಿ ಹೊರಟುಹೋದನು.
03275050a ತತಃ ಸೀತಾಂ ಪುರಸ್ಕೃತ್ಯ ರಾಮಃ ಸೌಮಿತ್ರಿಣಾ ಸಹ।
03275050c ಸುಗ್ರೀವಪ್ರಮುಖೈಶ್ಚೈವ ಸಹಿತಃ ಸರ್ವವಾನರೈಃ।।
03275051a ವಿಧಾಯ ರಕ್ಷಾಂ ಲಂಕಾಯಾಂ ವಿಭೀಷಣಪುರಸ್ಕೃತಃ।
03275051c ಸಂತತಾರ ಪುನಸ್ತೇನ ಸೇತುನಾ ಮಕರಾಲಯಂ।।
03275052a ಪುಷ್ಪಕೇಣ ವಿಮಾನೇನ ಖೇಚರೇಣ ವಿರಾಜತಾ।
03275052c ಕಾಮಗೇನ ಯಥಾ ಮುಖ್ಯೈರಮಾತ್ಯೈಃ ಸಂವೃತೋ ವಶೀ।।
ಆಗ ರಾಮನು ಸೀತೆಯನ್ನು ಮುಂದಿರಿಸಿಕೊಂಡು ಸೌಮಿತ್ರಿಯೊಡನೆ ಸುಗ್ರೀವಪ್ರಮುಖರಿಂದೊಡಗೂಡಿದ ಸರ್ವ ವಾನರರೊಂದಿಗೆ ಲಂಕೆಯ ರಕ್ಷಣೆಯನ್ನು ಏರ್ಪಡಿಸಿ, ವಿಭೀಷಣನನ್ನು ಮುಂದಿಟ್ಟುಕೊಂಡು, ಸೇತುವಿನ ಮೂಲಕ, ಆಕಾಶದಲ್ಲಿ ಹೋಗುವ ಬೇಕಾದರಲ್ಲಿ ಹೋಗಬಲ್ಲ ವಿರಾಜಿಸುವ ಪುಷ್ಪಕವಿಮಾನದಲ್ಲಿ, ಅಮಾತ್ಯರಿಂದ ಸಂವೃತನಾದ ಮುಖ್ಯನಂತೆ, ಪುನಃ ಆ ಮಕರಾಲಯವನ್ನು ದಾಟಿದನು.
03275053a ತತಸ್ತೀರೇ ಸಮುದ್ರಸ್ಯ ಯತ್ರ ಶಿಶ್ಯೇ ಸ ಪಾರ್ಥಿವಃ।
03275053c ತತ್ರೈವೋವಾಸ ಧರ್ಮಾತ್ಮಾ ಸಹಿತಃ ಸರ್ವವಾನರೈಃ।।
ಎಲ್ಲಿ ಪಾರ್ಥಿವನು ಉಳಿದಿದ್ದನೋ ಅದೇ ಸಮುದ್ರತೀರದಲ್ಲಿ ಧರ್ಮಾತ್ಮನು ಸರ್ವ ವಾನರರ ಸಹಿತ ಉಳಿದುಕೊಂಡನು.
03275054a ಅಥೈನಾನ್ರಾಘವಃ ಕಾಲೇ ಸಮಾನೀಯಾಭಿಪೂಜ್ಯ ಚ।
03275054c ವಿಸರ್ಜಯಾಮಾಸ ತದಾ ರತ್ನೈಃ ಸಂತೋಷ್ಯ ಸರ್ವಶಃ।।
ಸರಿಯಾದ ಸಮಯದಲ್ಲಿ ರಾಘವನು ಅವರನ್ನು ಒಟ್ಟುಗೂಡಿಸಿ, ಗೌರವಿಸಿ ರತ್ನಗಳಿಂದ ಎಲ್ಲರನ್ನೂ ಸಂತೋಷಗೊಳಿಸಿ ಕಳುಹಿಸಿಕೊಟ್ಟನು.
03275055a ಗತೇಷು ವಾನರೇಂದ್ರೇಷು ಗೋಪುಚ್ಚರ್ಕ್ಷೇಷು ತೇಷು ಚ।
03275055c ಸುಗ್ರೀವಸಹಿತೋ ರಾಮಃ ಕಿಷ್ಕಿಂಧಾಂ ಪುನರಾಗಮತ್।।
ಆ ವಾನರೇಂದ್ರರು, ಗೋಪುಚ್ಛರು ಮತ್ತು ಕರಡಿಗಳು ಹೋದನಂತರ, ರಾಮನು ಸುಗ್ರೀವನ ಸಹಿತ ಕಿಷ್ಕಿಂಧೆಗೆ ಮರಳಿ ಆಗಮಿಸಿದನು.
03275056a ವಿಭೀಷಣೇನಾನುಗತಃ ಸುಗ್ರೀವಸಹಿತಸ್ತದಾ।
03275056c ಪುಷ್ಪಕೇಣ ವಿಮಾನೇನ ವೈದೇಹ್ಯಾ ದರ್ಶಯನ್ವನಂ।।
ಸುಗ್ರೀವನ ಸಹಿತ ವಿಭೀಷಣನು ಅನುಸರಿಸಿ ಬರುತ್ತಿರಲು ಪುಷ್ಪಕ ವಿಮಾನದಿಂದ ವೈದೇಹಿಗೆ ವನವನ್ನು ತೋರಿಸಿದನು.
03275057a ಕಿಷ್ಕಿಂಧಾಂ ತು ಸಮಾಸಾದ್ಯ ರಾಮಃ ಪ್ರಹರತಾಂ ವರಃ।
03275057c ಅಂಗದಂ ಕೃತಕರ್ಮಾಣಂ ಯೌವರಾಜ್ಯೇಽಭ್ಯಷೇಚಯತ್।।
ಪ್ರಹರಿಗಳಲ್ಲಿ ಶ್ರೇಷ್ಠ ರಾಮನು ಕಿಷ್ಕಿಂಧೆಯನ್ನು ತಲುಪಿ ಕೃತಕರ್ಮಿಣಿ ಅಂಗದನನ್ನು ಯುವರಾಜನನ್ನಾಗಿ ಅಭಿಷೇಕಿಸಿದನು.
03275058a ತತಸ್ತೈರೇವ ಸಹಿತೋ ರಾಮಃ ಸೌಮಿತ್ರಿಣಾ ಸಹ।
03275058c ಯಥಾಗತೇನ ಮಾರ್ಗೇಣ ಪ್ರಯಯೌ ಸ್ವಪುರಂ ಪ್ರತಿ।।
ಅವರ ಸಹಿತ ಮತ್ತು ಸೌಮಿತ್ರಿಯನ್ನು ಕೂಡಿಕೊಂಡು ರಾಮನು ಹೋದಮಾರ್ಗದಿಂದಲೇ ತನ್ನ ಪುರದ ಕಡೆ ಪ್ರಯಾಣಿಸಿದನು.
03275059a ಅಯೋಧ್ಯಾಂ ಸ ಸಮಾಸಾದ್ಯ ಪುರೀಂ ರಾಷ್ಟ್ರಪತಿಸ್ತತಃ।
03275059c ಭರತಾಯ ಹನೂಮಂತಂ ದೂತಂ ಪ್ರಸ್ಥಾಪಯತ್ತದಾ।।
ಅಯೋಧ್ಯಾಪುರಿಯನ್ನು ತಲುಪಿ ರಾಷ್ಟ್ರಪತಿಯು ಭರತನಿಗೆ ದೂತನಾಗಿ ಹನೂಮಂತನನ್ನು ಕಳುಹಿಸಿದನು.
03275060a ಲಕ್ಷಯಿತ್ವೇಂಗಿತಂ ಸರ್ವಂ ಪ್ರಿಯಂ ತಸ್ಮೈ ನಿವೇದ್ಯ ಚ।
03275060c ವಾಯುಪುತ್ರೇ ಪುನಃ ಪ್ರಾಪ್ತೇ ನಂದಿಗ್ರಾಮಮುಪಾಗಮತ್।।
ಎಲ್ಲ ಇಂಗಿತಗಳನ್ನೂ ಲಕ್ಷಿಸಿ ಅವನಿಗೆ ಪ್ರಿಯವಿಷಯವನ್ನು ತಿಳಿಸಿ ವಾಯುಪುತ್ರನು ಪುನಃ ಬರಲು ನಂದೀಗ್ರಾಮಕ್ಕೆ ಬಂದನು.
03275061a ಸ ತತ್ರ ಮಲದಿಗ್ಧಾಂಗಂ ಭರತಂ ಚೀರವಾಸಸಂ।
03275061c ಅಗ್ರತಃ ಪಾದುಕೇ ಕೃತ್ವಾ ದದರ್ಶಾಸೀನಮಾಸನೇ।।
ಅವನು ಅಲ್ಲಿ ಮಲಿನಾಂಗನಾದ ಚೀರವಸ್ತ್ರಗಳನ್ನು ಧರಿಸಿ ಅಗ್ರಜನ ಪಾದುಕೆಗಳ ಎದುರು ಆಸನದಲ್ಲಿ ಕುಳಿತಿದ್ದ ಭರತನನ್ನು ಕಂಡನು.
03275062a ಸಮೇತ್ಯ ಭರತೇನಾಥ ಶತ್ರುಘ್ನೇನ ಚ ವೀರ್ಯವಾನ್।
03275062c ರಾಘವಃ ಸಹಸೌಮಿತ್ರಿರ್ಮುಮುದೇ ಭರತರ್ಷಭ।।
ಭರತರ್ಷಭ! ಆಗ ಭರತ ಮತ್ತು ವೀರ್ಯವಾನ್ ಶತ್ರುಘ್ರನನ್ನು ಸೇರಿ ಸೌಮಿತ್ರಿಯೊಡನೆ ರಾಘವನು ಸಂತೋಷಗೊಂಡನು.
03275063a ತಥಾ ಭರತಶತ್ರುಘ್ನೌ ಸಮೇತೌ ಗುರುಣಾ ತದಾ।
03275063c ವೈದೇಹ್ಯಾ ದರ್ಶನೇನೋಭೌ ಪ್ರಹರ್ಷಂ ಸಮವಾಪತುಃ।।
ಹಾಗೆಯೇ ಭರತ-ಶತ್ರುಘ್ನರೂ ಅವರಿಬ್ಬರನ್ನೂ ಗುರುಗಳ ಸಹಿತ ವೈದೇಹಿಯನ್ನೂ ಕಂಡು ಹರ್ಷಿತರಾದರು.
03275064a ತಸ್ಮೈ ತದ್ಭರತೋ ರಾಜ್ಯಮಾಗತಾಯಾಭಿಸತ್ಕೃತಂ।
03275064c ನ್ಯಾಸಂ ನಿರ್ಯಾತಯಾಮಾಸ ಯುಕ್ತಃ ಪರಮಯಾ ಮುದಾ।।
ಆಗ ಭರತನು ಸತ್ಕೃತವಾದ ನ್ಯಾಸವಾಗಿಟ್ಟುಕೊಂಡಿದ್ದ ರಾಜ್ಯವನ್ನು ಪರಮ ಮುದದಿಂದ ಅವನಿಗೆ ಹಿಂದಿರುಗಿಸಿದನು.
03275065a ತತಸ್ತಂ ವೈಷ್ಣವೇ ಶೂರಂ ನಕ್ಷತ್ರೇಽಭಿಮತೇಽಹನಿ।
03275065c ವಸಿಷ್ಠೋ ವಾಮದೇವಶ್ಚ ಸಹಿತಾವಭ್ಯಷಿಂಚತಾಂ।।
ಅನಂತರ ವೈಷ್ಣವ ನಕ್ಷತ್ರದ ಮಂಗಳ ಮುಹೂರ್ತದಲ್ಲಿ ವಸಿಷ್ಠ ವಾಮದೇವರು ಜೊತೆಗೂಡಿ ಆ ಶೂರನನ್ನು ಅಭಿಷೇಕಿಸಿದರು.
03275066a ಸೋಽಭಿಷಿಕ್ತಃ ಕಪಿಶ್ರೇಷ್ಠಂ ಸುಗ್ರೀವಂ ಸಸುಹೃಜ್ಜನಂ।
03275066c ವಿಭೀಷಣಂ ಚ ಪೌಲಸ್ತ್ಯಮನ್ವಜಾನಾದ್ಗೃಹಾನ್ಪ್ರತಿ।।
03275067a ಅಭ್ಯರ್ಚ್ಯ ವಿವಿಧೈ ರತ್ನೈಃ ಪ್ರೀತಿಯುಕ್ತೌ ಮುದಾ ಯುತೌ।
03275067c ಸಮಾಧಾಯೇತಿಕರ್ತವ್ಯಂ ದುಃಖೇನ ವಿಸಸರ್ಜ ಹ।।
ಅಭಿಷಿಕ್ತನಾದ ಅವನು ಸುಹೃಜ್ಜನರೊಂದಿಗೆ ಕಪಿಶ್ರೇಷ್ಠ ಸುಗ್ರೀವನನ್ನೂ ಪೌಲಸ್ತ್ಯ ವಿಭೀಷಣನನ್ನೂ ಅನ್ಯರನ್ನೂ ಮನೆಗಳ ಕಡೆ, ವಿವಿಧರತ್ನಗಳಿಂದ ಅಭ್ಯರ್ಚಿಸಿ, ಸಂತೋಷಗೊಳಿಸಿ, ತನ್ನ ಕರ್ತವ್ಯದ ಕುರಿತು ಯೋಚಿಸಿ ದುಃಖದಿಂದ ಕಳುಹಿಸಿಕೊಟ್ಟನು.
03275068a ಪುಷ್ಪಕಂ ಚ ವಿಮಾನಂ ತತ್ಪೂಜಯಿತ್ವಾ ಸ ರಾಘವಃ।
03275068c ಪ್ರಾದಾದ್ವೈಶ್ರವಣಾಯೈವ ಪ್ರೀತ್ಯಾ ಸ ರಘುನಂದನಃ।।
ಪುಷ್ಪಕ ವಿಮಾನವನ್ನೂ ಕೂಡ ಪೂಜಿಸಿ ಪ್ರೀತಿಯಿಂದ ರಾಘವ ರಘುನಂದನನು ವೈಶ್ರವಣನಿಗೆ ನೀಡಿದನು.
03275069a ತತೋ ದೇವರ್ಷಿಸಹಿತಃ ಸರಿತಂ ಗೋಮತೀಮನು।
03275069c ದಶಾಶ್ವಮೇಧಾನಾಜಹ್ರೇ ಜಾರೂಥ್ಯಾನ್ಸ ನಿರರ್ಗಲಾನ್।।
ಅನಂತರ ದೇವರ್ಷಿಗಳ ಸಹಿತ ಗೋಮತೀ ನದಿಯ ತೀರದಲ್ಲಿ ನಿರರ್ಗಲ ಮೂರು ರೀತಿಯ ದಕ್ಷಿಣೆಗಳನ್ನಿತ್ತು ಹತ್ತು ಅಶ್ವಮೇಧಯಾಗಗಳನ್ನು ನಡೆಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಶ್ರೀರಾಮಾಭಿಷೇಕೇ ಪಂಚಸಪ್ತತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಶ್ರೀರಾಮಾಭಿಷೇಕದಲ್ಲಿ ಇನ್ನೂರಾಎಪ್ಪತ್ತೈದನೆಯ ಅಧ್ಯಾಯವು.