ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಘೋಷಯಾತ್ರಾ ಪರ್ವ
ಅಧ್ಯಾಯ 239
ಸಾರ
ಶಕುನಿಯು ದುರ್ಯೋಧನನನ್ನು ತಡೆಯುವುದು (1-9). ಯಾರನ್ನೂ ಕೇಳದೇ, ನಿರಾಶನಾದ ದುರ್ಯೋಧನನು ಪ್ರಾಯೋಪವೇಶಕ್ಕೆ ಕುಳಿತುಕೊಳ್ಳುವುದು (10-17). ವಿಷಯವನ್ನು ತಿಳಿದ ಪಾತಾಳವಾಸೀ ದೈತ್ಯ-ದಾನವರು ಮಾಯೆಯಿಂದ ದುರ್ಯೋಧನನ್ನು ಅಪಹರಿಸಿ ಕರೆಯಿಸಿಕೊಂಡಿದುದು (18-26).
03239001 ವೈಶಂಪಾಯನ ಉವಾಚ।
03239001a ಪ್ರಾಯೋಪವಿಷ್ಟಂ ರಾಜಾನಂ ದುರ್ಯೋಧನಮಮರ್ಷಣಂ।
03239001c ಉವಾಚ ಸಾಂತ್ವಯನ್ರಾಜಂ ಶಕುನಿಃ ಸೌಬಲಸ್ತದಾ।।
ವೈಶಂಪಾಯನನು ಹೇಳಿದನು: “ರಾಜನ್! ಆಗ ಪ್ರಾಯೋಪವಿಷ್ಟನಾದ ಬೇಸತ್ತ ರಾಜ ದುರ್ಯೋಧನನನ್ನು ಸಂತವಿಸುತ್ತಾ ಸೌಬಲ ಶಕುನಿಯು ಹೇಳಿದನು:
03239002a ಸಮ್ಯಗುಕ್ತಂ ಹಿ ಕರ್ಣೇನ ತಚ್ಚ್ರುತಂ ಕೌರವ ತ್ವಯಾ।
03239002c ಮಯಾಹೃತಾಂ ಶ್ರಿಯಂ ಸ್ಫೀತಾಂ ಮೋಹಾತ್ಸಮಪಹಾಯ ಕಿಂ।
03239002e ತ್ವಮಬುದ್ಧ್ಯಾ ನೃಪವರ ಪ್ರಾಣಾನುತ್ಸ್ರಷ್ಟುಮಿಚ್ಚಸಿ।।
“ಕೌರವ! ನೀನು ಕೇಳಿದ ಕರ್ಣನ ಮಾತುಗಳು ಸರಿಯಾಗಿಯೇ ಇವೆ. ನೃಪವರ! ನಾನು ಅಪಹರಿಸಿದ ಸಂಪತ್ತನ್ನು ಮೋಹದಿಂದ ತೊರೆದು ಅಬುದ್ಧಿಯಿಂದ ಏಕೆ ಪ್ರಾಣವನ್ನೇ ತೊರೆಯಲು ಬಯಸಿದ್ದೀಯೆ?
03239003a ಅದ್ಯ ಚಾಪ್ಯವಗಚ್ಚಾಮಿ ನ ವೃದ್ಧಾಃ ಸೇವಿತಾಸ್ತ್ವಯಾ।
03239003c ಯಃ ಸಮುತ್ಪತಿತಂ ಹರ್ಷಂ ದೈನ್ಯಂ ವಾ ನ ನಿಯಚ್ಚತಿ।
03239003e ಸ ನಶ್ಯತಿ ಶ್ರಿಯಂ ಪ್ರಾಪ್ಯ ಪಾತ್ರಮಾಮಮಿವಾಂಭಸಿ।।
ನೀನು ವೃದ್ಧರ ಸೇವೆಯನ್ನೇ ಮಾಡಿರಲಿಕ್ಕಿಲ್ಲ ಎಂದು ಇಂದು ನನಗನ್ನಿಸುತ್ತಿದೆ. ಅಕಸ್ಮಾತ್ತಾಗಿ ಬಂದ ಹರ್ಷ ಅಥವಾ ದುಃಖವನ್ನು ನಿಯಂತ್ರಿಸಿಕೊಳ್ಳಲಾರದವನು ಪೂರ್ಣ ಸುಟ್ಟಿರದ ಮಣ್ಣಿನ ಕೊಡವು ನೀರನ್ನು ಹೇಗೋ ಹಾಗೆ ಸಂಪತ್ತನ್ನು ಕಳೆದುಕೊಳ್ಳುತ್ತಾನೆ.
03239004a ಅತಿಭೀರುಮತಿಕ್ಲೀಬಂ ದೀರ್ಘಸೂತ್ರಂ ಪ್ರಮಾದಿನಂ।
03239004c ವ್ಯಸನಾದ್ವಿಷಯಾಕ್ರಾಂತಂ ನ ಭಜಂತಿ ನೃಪಂ ಶ್ರಿಯಃ।।
ಅತಿಯಾಗಿ ನಾಚಿಕೊಳ್ಳುವ, ಅತಿಯಾಗಿ ಹೇಡಿಯಾದ, ಬಹಳಷ್ಟು ಆಲೋಚಿಸುವ, ಬುದ್ಧಿಯನ್ನು ಉಪಯೋಗಿಸದೇ ಇರುವ, ಇಂದ್ರಿಯ ಸುಖಗಳಲ್ಲಿಯೇ ಆಸಕ್ತಿ ಹೊಂದಿರುವ ನೃಪನನ್ನು ಸಂಪತ್ತು ಅನುಸರಿಸುವುದಿಲ್ಲ.
03239005a ಸತ್ಕೃತಸ್ಯ ಹಿ ತೇ ಶೋಕೋ ವಿಪರೀತೇ ಕಥಂ ಭವೇತ್।
03239005c ಮಾ ಕೃತಂ ಶೋಭನಂ ಪಾರ್ಥೈಃ ಶೋಕಮಾಲಂಬ್ಯ ನಾಶಯ।।
ಎಲ್ಲ ರೀತಿಯಲ್ಲಿಯೂ ಸತ್ಕೃತನಾದ ನಿನಗೆ ಈ ವಿಪರೀತಿ ಶೋಕವು ಹೇಗುಂಟಾಯಿತು? ಈ ರೀತಿ ಶೋಕವನ್ನಾಚರಿಸಿ ಪಾರ್ಥರು ಮಾಡಿದ ಈ ಶುಭಕಾರ್ಯವನ್ನು ನಾಶಗೊಳಿಸಬೇಡ.
03239006a ಯತ್ರ ಹರ್ಷಸ್ತ್ವಯಾ ಕಾರ್ಯಃ ಸತ್ಕರ್ತವ್ಯಾಶ್ಚ ಪಾಂಡವಾಃ।
03239006c ತತ್ರ ಶೋಚಸಿ ರಾಜೇಂದ್ರ ವಿಪರೀತಮಿದಂ ತವ।।
ರಾಜೇಂದ್ರ! ಎಲ್ಲಿ ನೀನು ಸಂತೋಷದಿಂದ ಪಾಂಡವರನ್ನು ಸತ್ಕರಿಸಬೇಕಾಗಿತ್ತೋ ಅಲ್ಲಿ ನೀನು ಶೋಕಿಸುತ್ತಿರುವೆ. ಇದೇ ನಿನ್ನ ವೈಪರೀತ್ಯ.
03239007a ಪ್ರಸೀದ ಮಾ ತ್ಯಜಾತ್ಮಾನಂ ತುಷ್ಟಶ್ಚ ಸುಕೃತಂ ಸ್ಮರ।
03239007c ಪ್ರಯಚ್ಚ ರಾಜ್ಯಂ ಪಾರ್ಥಾನಾಂ ಯಶೋ ಧರ್ಮಮವಾಪ್ನುಹಿ।।
ಸಂತೋಷಗೊಳ್ಳು. ನಿನ್ನ ಜೀವವನ್ನು ತೊರೆಯಬೇಡ. ಅವರು ನಿನಗೆ ಮಾಡಿದ ಒಳ್ಳೆಯದನ್ನು ನೆನಪಿಸಿಕೋ. ಪಾರ್ಥರ ರಾಜ್ಯವನ್ನು ಹಿಂದಿರುಗಿಸು. ಯಶಸ್ಸು ಮತ್ತು ಧರ್ಮವನ್ನು ಹೊಂದು.
03239008a ಕ್ರಿಯಾಮೇತಾಂ ಸಮಾಜ್ಞಾಯ ಕೃತಘ್ನೋ ನ ಭವಿಷ್ಯಸಿ।
03239008c ಸೌಭ್ರಾತ್ರಂ ಪಾಂಡವೈಃ ಕೃತ್ವಾ ಸಮವಸ್ಥಾಪ್ಯ ಚೈವ ತಾನ್।
03239008e ಪಿತ್ರ್ಯಂ ರಾಜ್ಯಂ ಪ್ರಯಚ್ಚೈಷಾಂ ತತಃ ಸುಖಮವಾಪ್ನುಹಿ।।
ಹೀಗೆ ಮಾಡುವುದರಿಂದ ಕೃತಘ್ನನಾಗುತ್ತೀಯೆ. ಪಾಂಡವರೊಂದಿಗೆ ಸಂಧಿಯನ್ನು ಮಾಡಿಕೊಂಡು ಸೌಭ್ರಾತೃತ್ವವನ್ನು ಸ್ಥಾಪಿಸು. ಅವರಿಗೆ ಪಿತೃ ರಾಜ್ಯವನ್ನು ಕೊಟ್ಟು ಸುಖವನ್ನು ಹೊಂದುತ್ತೀಯೆ.”
03239009a ಶಕುನೇಸ್ತು ವಚಃ ಶ್ರುತ್ವಾ ದುಃಶಾಸನಮವೇಕ್ಷ್ಯ ಚ।
03239009c ಪಾದಯೋಃ ಪತಿತಂ ವೀರಂ ವಿಕ್ಲವಂ ಭ್ರಾತೃಸೌಹೃದಾತ್।।
03239010a ಬಾಹುಭ್ಯಾಂ ಸಾಧುಜಾತಾಭ್ಯಾಂ ದುಃಶಾಸನಮರಿಂದಮಂ।
03239010c ಉತ್ಥಾಪ್ಯ ಸಂಪರಿಷ್ವಜ್ಯ ಪ್ರೀತ್ಯಾಜಿಘ್ರತ ಮೂರ್ಧನಿ।।
ಶಕುನಿಯ ಈ ಮಾತುಗಳನ್ನು ಕೇಳಿ ಮತ್ತು ಭಾತೃ ಸೌಹಾರ್ದದಿಂದ ಪಾದಗಳಲ್ಲಿ ಸಾಷ್ಟಾಂಗ ಬಿದ್ದಿದ್ದ ವೀರನನ್ನು ನೋಡಿ ದುರ್ಯೋಧನನು ತನ್ನ ಸುಂದರ ಬಾಹುಗಳಿಂದ ಅರಿಂದಮ ದುಃಶಾಸನನನ್ನು ಮೇಲೆತ್ತಿ ಪ್ರೀತಿಯಿಂದ ಬಿಗಿದಪ್ಪಿ ನೆತ್ತಿಯನ್ನು ಆಘ್ರಾಣಿಸಿದನು.
03239011a ಕರ್ಣಸೌಬಲಯೋಶ್ಚಾಪಿ ಸಂಸ್ಮೃತ್ಯ ವಚನಾನ್ಯಸೌ।
03239011c ನಿರ್ವೇದಂ ಪರಮಂ ಗತ್ವಾ ರಾಜಾ ದುರ್ಯೋಧನಸ್ತದಾ।
03239011e ವ್ರೀಡಯಾಭಿಪರೀತಾತ್ಮಾ ನೈರಾಶ್ಯಮಗಮತ್ಪರಂ।।
ಕರ್ಣ-ಸೌಬಲರ ಈ ಮಾತುಗಳನ್ನು ಕೇಳಿ ರಾಜಾ ದುರ್ಯೋಧನನು ಪರಮ ವೇದನೆಯನ್ನು ತಾಳಿದನು. ನಾಚಿಕೆಯಿಂದ ತುಂಬಿಕೊಂಡು ಅವನಲ್ಲಿ ಪರಮ ನಿರಾಶೆಯು ಕವಿಯಿತು.
03239012a ಸುಹೃದಾಂ ಚೈವ ತಚ್ಚ್ರುತ್ವಾ ಸಮನ್ಯುರಿದಮಬ್ರವೀತ್।
03239012c ನ ಧರ್ಮಧನಸೌಖ್ಯೇನ ನೈಶ್ವರ್ಯೇಣ ನ ಚಾಜ್ಞಯಾ।
03239012e ನೈವ ಭೋಗೈಶ್ಚ ಮೇ ಕಾರ್ಯಂ ಮಾ ವಿಹನ್ಯತ ಗಚ್ಚತ।।
ಸುಹೃದಯರನ್ನು ಕೇಳಿ ತುಂಬಾ ದುಃಖದಿಂದ ಹೇಳಿದನು: “ಧರ್ಮ, ಧನ, ಸಖ್ಯ, ಐಶ್ವರ್ಯ, ಅಧಿಕಾರ, ಭೋಗ ಇವುಗಳ ಕುರಿತು ನಾನು ಮಾಡಬೇಕಾದುದು ಏನೂ ಇಲ್ಲ. ನನ್ನನ್ನು ತಡೆಯಬೇಡಿ. ಹೊರಡಿ.
03239013a ನಿಶ್ಚಿತೇಯಂ ಮಮ ಮತಿಃ ಸ್ಥಿತಾ ಪ್ರಾಯೋಪವೇಶನೇ।
03239013c ಗಚ್ಚಧ್ವಂ ನಗರಂ ಸರ್ವೇ ಪೂಜ್ಯಾಶ್ಚ ಗುರವೋ ಮಮ।।
ಪ್ರಾಯೋಪವೇಶದ ಈ ನಿಶ್ಚಯದಲ್ಲಿಯೇ ನನ್ನ ಮನಸ್ಸು ಗಟ್ಟಿಯಾಗಿದೆ. ನೀವೆಲ್ಲರೂ ನಗರಕ್ಕೆ ಹೋಗಿ ನನ್ನ ಹಿರಿಯರನ್ನು ಪೂಜಿಸಿ.”
03239014a ತ ಏವಮುಕ್ತಾಃ ಪ್ರತ್ಯೂಚೂ ರಾಜಾನಮರಿಮರ್ದನಂ।
03239014c ಯಾ ಗತಿಸ್ತವ ರಾಜೇಂದ್ರ ಸಾಸ್ಮಾಕಮಪಿ ಭಾರತ।
03239014e ಕಥಂ ವಾ ಸಂಪ್ರವೇಕ್ಷ್ಯಾಮಸ್ತ್ವದ್ವಿಹೀನಾಃ ಪುರಂ ವಯಂ।।
ಹೀಗೆ ಹೇಳಲು ಅವರು ರಾಜಾ ಅರಿಮರ್ದನನಿಗೆ ಉತ್ತರಿಸಿದರು: “ಭಾರತ! ರಾಜೇಂದ್ರ! ನೀನು ಹೋಗುವ ದಾರಿಯೇ ನಮ್ಮದು ಕೂಡ. ನೀನಿಲ್ಲದೇ ನಾವು ಹೇಗೆ ಪುರವನ್ನು ಪ್ರವೇಶಿಸಬಲ್ಲೆವು?”
03239015a ಸ ಸುಹೃದ್ಭಿರಮಾತ್ಯೈಶ್ಚ ಭ್ರಾತೃಭಿಃ ಸ್ವಜನೇನ ಚ।
03239015c ಬಹುಪ್ರಕಾರಮಪ್ಯುಕ್ತೋ ನಿಶ್ಚಯಾನ್ನ ವ್ಯಚಾಲ್ಯತ।।
ಸ್ನೇಹಿತರು, ಅಮಾತ್ಯರು, ಸಹೋದರರು ಮತ್ತು ಬಾಂಧವರು ಬಹುಪ್ರಕಾರವಾಗಿ ಹೇಳಿದರೂ ಅವನು ತನ್ನ ನಿಶ್ಚಯದಿಂದ ವಿಚಲಿತನಾಗಲಿಲ್ಲ.
03239016a ದರ್ಭಪ್ರಸ್ತರಮಾಸ್ತೀರ್ಯ ನಿಶ್ಚಯಾದ್ಧೃತರಾಷ್ಟ್ರಜಃ।
03239016c ಸಂಸ್ಪೃಶ್ಯಾಪಃ ಶುಚಿರ್ಭೂತ್ವಾ ಭೂತಲಂ ಸಮುಪಾಶ್ರಿತಃ।।
ಆಗ ನಿಶ್ಚಯಿಸಿದಂತೆ ಧೃತರಾಷ್ಟ್ರನ ಮಗನು ದರ್ಭೆಗಳನ್ನು ಹರಡಿ ನೀರನ್ನು ಮುಟ್ಟಿ ಶುಚಿಯಾಗಿ ಭೂತಲದಲ್ಲಿ ಕುಳಿತುಕೊಂಡನು.
03239017a ಕುಶಚೀರಾಂಬರಧರಃ ಪರಂ ನಿಯಮಮಾಸ್ಥಿತಃ।
03239017c ವಾಗ್ಯತೋ ರಾಜಶಾರ್ದೂಲಃ ಸ ಸ್ವರ್ಗಗತಿಕಾಂಕ್ಷಯಾ।
03239017e ಮನಸೋಪಚಿತಿಂ ಕೃತ್ವಾ ನಿರಸ್ಯ ಚ ಬಹಿಷ್ಕ್ರಿಯಾಃ।।
ಕುಶಚೀರ ವಸ್ತ್ರವನ್ನುಟ್ಟು ಪರಮ ನಿಯಮದಲ್ಲಿ ಕುಳಿತುಕೊಂಡನು. ಮಾತನ್ನು ನಿಲ್ಲಿಸಿ ಆ ರಾಜಶಾರ್ದೂಲನು ಸ್ವರ್ಗದ ಮಾರ್ಗವನ್ನು ಬಯಸಿ, ಹೊರಗಿನ ಕ್ರಿಯೆಗಳನ್ನೆಲ್ಲಾ ನಿಲ್ಲಿಸಿ ಮನಸ್ಸಿನಲ್ಲಿಯೇ ಪೂಜಿಸತೊಡಗಿದನು.
03239018a ಅಥ ತಂ ನಿಶ್ಚಯಂ ತಸ್ಯ ಬುದ್ಧ್ವಾ ದೈತೇಯದಾನವಾಃ।
03239018c ಪಾತಾಲವಾಸಿನೋ ರೌದ್ರಾಃ ಪೂರ್ವಂ ದೇವೈರ್ವಿನಿರ್ಜಿತಾಃ।।
03239019a ತೇ ಸ್ವಪಕ್ಷಕ್ಷಯಂ ತಂ ತು ಜ್ಞಾತ್ವಾ ದುರ್ಯೋಧನಸ್ಯ ವೈ।
03239019c ಆಹ್ವಾನಾಯ ತದಾ ಚಕ್ರುಃ ಕರ್ಮ ವೈತಾನಸಂಭವಂ।।
ಆಗ ಅವನ ನಿಶ್ಚಯವನ್ನು ತಿಳಿದ, ಹಿಂದೆ ದೇವತೆಗಳಿಂದ ಸೋಲಿಸಲ್ಪಟ್ಟು ಪಾತಾಲದಲ್ಲಿ ವಾಸಿಸುತ್ತಿದ್ದ ರೌದ್ರ ದೈತ್ಯ ದಾನವರು ಅದರಿಂದ ತಮ್ಮ ಪಕ್ಷವು ಕ್ಷಯವಾಗುವುದೆಂದು ತಿಳಿದು ದುರ್ಯೋಧನನನ್ನು ತಮ್ಮ ಮುಂದೆ ಆಹ್ವಾನಿಸಲು ಅಗ್ನಿಯನ್ನು ಬಳಸಿ ಕಾರ್ಯವನ್ನು ಪ್ರಾರಂಭಿಸಿದರು.
03239020a ಬೃಹಸ್ಪತ್ಯುಶನೋಕ್ತೈಶ್ಚ ಮಂತ್ರೈರ್ಮಂತ್ರವಿಶಾರದಾಃ।
03239020c ಅಥರ್ವವೇದಪ್ರೋಕ್ತೈಶ್ಚ ಯಾಶ್ಚೋಪನಿಷದಿ ಕ್ರಿಯಾಃ।
03239020e ಮಂತ್ರಜಪ್ಯಸಮಾಯುಕ್ತಾಸ್ತಾಸ್ತದಾ ಸಮವರ್ತಯನ್।।
ಮಂತ್ರವಿಶಾರದರು ಬೃಹಸ್ಪತಿ ಮತ್ತು ಉಶನರು ಹೇಳಿದ್ದ ಮಂತ್ರಗಳಿಂದ ಮತ್ತು ಅಥರ್ವವೇದ ಉಪನಿಷತ್ತುಗಳಲ್ಲಿ ಹೇಳಿರುವ ಮಂತ್ರಜಪಗಳಿಂದ ಕ್ರಿಯೆಗಳನ್ನು ಪ್ರಾರಂಭಿಸಿದರು.
03239021a ಜುಹ್ವತ್ಯಗ್ನೌ ಹವಿಃ ಕ್ಷೀರಂ ಮಂತ್ರವತ್ಸುಸಮಾಹಿತಾಃ।
03239021c ಬ್ರಾಹ್ಮಣಾ ವೇದವೇದಾಂಗಪಾರಗಾಃ ಸುದೃಢವ್ರತಾಃ।।
ವೇದವೇದಾಂಗಪಾರಂಗತರಾದ, ಸುಧೃಢವ್ರತರಾದ ಬ್ರಾಹ್ಮಣರು ಮಂತ್ರೋಚ್ಛಾರಣೆ ಮಾಡುತ್ತಾ ಅಗ್ನಿಯಲ್ಲಿ ಹಾಲನ್ನು ಹವಿಸ್ಸಾಗಿ ಹಾಕಿದರು.
03239022a ಕರ್ಮಸಿದ್ಧೌ ತದಾ ತತ್ರ ಜೃಂಭಮಾಣಾ ಮಹಾದ್ಭುತಾ।
03239022c ಕೃತ್ಯಾ ಸಮುತ್ಥಿತಾ ರಾಜನ್ಕಿಂ ಕರೋಮೀತಿ ಚಾಬ್ರವೀತ್।।
ರಾಜನ್! ಆ ಕೃತ್ಯವು ಪೂರೈಸಲು ಅಲ್ಲಿ ಕರ್ಮಸಿದ್ಧಿಯಾಗಿ ವಿಜೃಂಭಿಸುತ್ತಾ ಮಹಾ ಅದ್ಭುತವಾದವಳು ಮೇಲೆದ್ದು “ಏನು ಮಾಡಲಿ?” ಎಂದು ಕೇಳಿದಳು.
03239023a ಆಹುರ್ದೈತ್ಯಾಶ್ಚ ತಾಂ ತತ್ರ ಸುಪ್ರೀತೇನಾಂತರಾತ್ಮನಾ।
03239023c ಪ್ರಾಯೋಪವಿಷ್ಟಂ ರಾಜಾನಂ ಧಾರ್ತರಾಷ್ಟ್ರಮಿಹಾನಯ।।
ಅಂತರಾತ್ಮದಲ್ಲಿ ಸಂತುಷ್ಟರಾದ ದೈತ್ಯರು ಅವಳಿಗೆ ಹೇಳಿದರು: “ಪ್ರಾಯೋಪವಿಷ್ಟನಾಗಿರುವ ರಾಜ ಧಾರ್ತರಾಷ್ಟ್ರನನ್ನು ಇಲ್ಲಿಗೆ ಕರೆದು ತಾ!”
03239024a ತಥೇತಿ ಚ ಪ್ರತಿಶ್ರುತ್ಯ ಸಾ ಕೃತ್ಯಾ ಪ್ರಯಯೌ ತದಾ।
03239024c ನಿಮೇಷಾದಗಮಚ್ಚಾಪಿ ಯತ್ರ ರಾಜಾ ಸುಯೋಧನಃ।।
ಹಾಗೆಯೇ ಆಗಲೆಂದು ಉತ್ತರಿಸಿ ಅವಳು ನಿಮಿಷಮಾತ್ರದಲ್ಲಿ ರಾಜಾ ಸುಯೋಧನನಿರುವಲ್ಲಿ ಬಂದಳು.
03239025a ಸಮಾದಾಯ ಚ ರಾಜಾನಂ ಪ್ರವಿವೇಶ ರಸಾತಲಂ।
03239025c ದಾನವಾನಾಂ ಮುಹೂರ್ತಾಚ್ಚ ತಮಾನೀತಂ ನ್ಯವೇದಯತ್।।
ರಾಜನನ್ನು ಎತ್ತಿಕೊಂಡು ರಸಾತಳವನ್ನು ಪ್ರವೇಶಿಸಿದಳು. ಮುಹೂರ್ತದಲ್ಲಿಯೇ ಅವನನ್ನು ತಂದಿರುವುದನ್ನು ದಾನವರಿಗೆ ವರದಿಮಾಡಿದಳು.
03239026a ತಮಾನೀತಂ ನೃಪಂ ದೃಷ್ಟ್ವಾ ರಾತ್ರೌ ಸಂಹತ್ಯ ದಾನವಾಃ।
03239026c ಪ್ರಹೃಷ್ಟಮನಸಃ ಸರ್ವೇ ಕಿಂ ಚಿದುತ್ಫುಲ್ಲಲೋಚನಾಃ।
03239026e ಸಾಭಿಮಾನಮಿದಂ ವಾಕ್ಯಂ ದುರ್ಯೋಧನಮಥಾಬ್ರುವನ್।।
ರಾತ್ರಿಯಲ್ಲಿ ಕರೆದು ತಂದ ನೃಪನನ್ನು ನೋಡಿದ ದಾನವರು ಎಲ್ಲರೂ ಸಂತೋಷ ಮನಸ್ಕರಾಗಿ, ಅರಳಿದ ಕಣ್ಣುಗಳಿಂದ ಅಭಿಮಾನದಿಂದ ಕೂಡಿದ ಈ ಮಾತನ್ನು ದುರ್ಯೋಧನನಿಗೆ ಹೇಳಿದರು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಪ್ರಾಯೋಪವೇಶೇ ಏಕೋನಚತ್ವಾರಿಂಶದಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಪ್ರಾಯೋಪವೇಶದಲ್ಲಿ ಇನ್ನೂರಾಮೂವತ್ತೊಂಭತ್ತನೆಯ ಅಧ್ಯಾಯವು.