233 ಪಾಂಡವಗಂಧರ್ವಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಘೋಷಯಾತ್ರಾ ಪರ್ವ

ಅಧ್ಯಾಯ 233

ಸಾರ

ಭೀಮನನ್ನು ಮುಂದಿಟ್ಟುಕೊಂಡು ಬಂದ ನಾಲ್ವರು ಪಾಂಡವರೂ ಗಂಧರ್ವರೊಂದಿಗೆ ಹೋರಾಡಿದುದು (1-10). ಅರ್ಜುನ ಮತ್ತು ಗಂಧರ್ವರ ನಡುವೆ ಭೀಕರ ಯುದ್ಧ (11-21).

03233001 ವೈಶಂಪಾಯನ ಉವಾಚ।
03233001a ಯುಧಿಷ್ಠಿರವಚಃ ಶ್ರುತ್ವಾ ಭೀಮಸೇನಪುರೋಗಮಾಃ।
03233001c ಪ್ರಹೃಷ್ಟವದನಾಃ ಸರ್ವೇ ಸಮುತ್ತಸ್ಥುರ್ನರರ್ಷಭಾಃ।।

ವೈಶಂಪಾಯನನು ಹೇಳಿದನು: “ಯುಧಿಷ್ಠಿರನ ಮಾತನ್ನು ಕೇಳಿ ಭೀಮಸೇನನನ್ನು ಮುಂದಿಟ್ಟುಕೊಂಡ ನರರ್ಷಭರೆಲ್ಲರೂ ಸಂತೋಷವದನರಾಗಿ ಮೇಲೆದ್ದರು.

03233002a ಅಭೇದ್ಯಾನಿ ತತಃ ಸರ್ವೇ ಸಮನಹ್ಯಂತ ಭಾರತ।
03233002c ಜಾಂಬೂನದವಿಚಿತ್ರಾಣಿ ಕವಚಾನಿ ಮಹಾರಥಾಃ।।

ಭಾರತ! ಆಗ ಆ ಎಲ್ಲ ಮಹಾರಥರೂ ಬಂಗಾರದಂತೆ ಹೊಳೆಯುತ್ತಿದ್ದ ಬಣ್ಣದ ಅಭೇದ್ಯ ಕವಚಗಳನ್ನು ಧರಿಸಿದರು.

03233003a ತೇ ದಂಶಿತಾ ರಥೈಃ ಸರ್ವೇ ಧ್ವಜಿನಃ ಸಶರಾಸನಾಃ।
03233003c ಪಾಂಡವಾಃ ಪ್ರತ್ಯದೃಶ್ಯಂತ ಜ್ವಲಿತಾ ಇವ ಪಾವಕಾಃ।।

ರಥವನ್ನೇರಿದ, ಧ್ವಜಗಳೊಂದಿಗೆ ಬಿಲ್ಲು ಬಾಣಗಳನ್ನು ಹಿಡಿದಿದ್ದ ಆ ಪಾಂಡವರೆಲ್ಲರೂ ಅಗ್ನಿಯಂತೆ ಪ್ರಜ್ವಲಿಸುತ್ತಿದ್ದರು.

03233004a ತಾನ್ರಥಾನ್ಸಾಧು ಸಂಪನ್ನಾನ್ಸಂಯುಕ್ತಾಂ ಜವನೈರ್ಹಯೈಃ।
03233004c ಆಸ್ಥಾಯ ರಥಶಾರ್ದೂಲಾಃ ಶೀಘ್ರಮೇವ ಯಯುಸ್ತತಃ।

ಸುಸಜ್ಜಿತವಾದ, ವೇಗವಾಗಿ ಹೋಗಬಲ್ಲ ಕುದುರೆಗಳನ್ನು ಕಟ್ಟಿದ್ದ ರಥಗಳಲ್ಲಿ ನಿಂತು ಆ ರಥಶಾರ್ದೂಲರು ಶೀಘ್ರದಲ್ಲಿಯೇ ಅಲ್ಲಿಂದ ಹೊರಟರು.

03233005a ತತಃ ಕೌರವಸೈನ್ಯಾನಾಂ ಪ್ರಾದುರಾಸೀನ್ಮಹಾಸ್ವನಃ।
03233005c ಪ್ರಯಾತಾನ್ಸಹಿತಾನ್ದೃಷ್ಟ್ವಾ ಪಾಂಡುಪುತ್ರಾನ್ಮಹಾರಥಾನ್।।

ಮಹಾರಥಿ ಪಾಂಡುಪುತ್ರರು ಒಟ್ಟಿಗೇ ಹೊರಟಿದ್ದುದನ್ನು ನೋಡಿ ಕೌರವ ಸೇನೆಯಲ್ಲಿ ಮಹಾ ಘೋಷವು ಉದ್ಭವಿಸಿತು.

03233006a ಜಿತಕಾಶಿನಶ್ಚ ಖಚರಾಸ್ತ್ವರಿತಾಶ್ಚ ಮಹಾರಥಾಃ।
03233006c ಕ್ಷಣೇನೈವ ವನೇ ತಸ್ಮಿನ್ಸಮಾಜಗ್ಮುರಭೀತವತ್।।

ಕ್ಷಣದಲ್ಲಿಯೇ ಜಯದಿಂದ ಉಬ್ಬಿದ್ದ ಗಂಧರ್ವರೂ ಮತ್ತು ವೇಗದಿಂದ ಬರುತ್ತಿದ್ದ ಆ ಮಹಾರಥಿಗಳೂ ನಿರ್ಭೀತರಾಗಿ ವನದಲ್ಲಿ ಪರಸ್ಪರರ ಎದುರಾದರು.

03233007a ನ್ಯವರ್ತಂತ ತತಃ ಸರ್ವೇ ಗಂಧರ್ವಾ ಜಿತಕಾಶಿನಃ।
03233007c ದೃಷ್ಟ್ವಾ ರಥಗತಾನ್ವೀರಾನ್ಪಾಂಡವಾಂಶ್ಚತುರೋ ರಣೇ।।

ವಿಜಯದಿಂದ ಉಬ್ಬಿದ್ದ ಗಂಧರ್ವರೆಲ್ಲರೂ ರಥಗಳಲ್ಲಿ ಕುಳಿತು ರಣಕ್ಕೆ ಬರುತ್ತಿದ್ದ ವೀರ ಪಾಂಡವ ನಾಲ್ವರನ್ನು ನೋಡಿ ಹಿಂದಿರುಗಿದರು.

03233008a ತಾಂಸ್ತು ವಿಭ್ರಾಜತೋ ದೃಷ್ಟ್ವಾ ಲೋಕಪಾಲಾನಿವೋದ್ಯತಾನ್।
03233008c ವ್ಯೂಢಾನೀಕಾ ವ್ಯತಿಷ್ಠಂತ ಗಂಧಮಾದನವಾಸಿನಃ।।

ಲೋಕಪಾಲರಂತೆ ಸಿದ್ಧರಾಗಿ ಬೆಳಗುತ್ತಿರುವ ಅವರನ್ನು ನೋಡಿ ಗಂಧಮಾದನವಾಸಿಗಳು ವ್ಯೂಹವನ್ನು ರಚಿಸಿ ನಿಂತರು.

03233009a ರಾಜ್ಞಸ್ತು ವಚನಂ ಶ್ರುತ್ವಾ ಧರ್ಮರಾಜಸ್ಯ ಧೀಮತಃ।
03233009c ಕ್ರಮೇಣ ಮೃದುನಾ ಯುದ್ಧಮುಪಕ್ರಾಮಂತ ಭಾರತ।।

ಭಾರತ! ಧೀಮಂತ ರಾಜ ಧರ್ಮರಾಜನ ಮಾತಿನಂತೆ ಪಾಂಡವರು ಕ್ರಮವಾಗಿ ಮೊದಲು ಮೃದು ಯುದ್ಧದಲ್ಲಿ ತೊಡಗಿದರು.

03233010a ನ ತು ಗಂಧರ್ವರಾಜಸ್ಯ ಸೈನಿಕಾ ಮಂದಚೇತಸಃ।
03233010c ಶಕ್ಯಂತೇ ಮೃದುನಾ ಶ್ರೇಯಃ ಪ್ರತಿಪಾದಯಿತುಂ ತದಾ।।

ಆದರೆ ಗಂಧರ್ವರಾಜನ ಮಂದಚೇತಸ ಸೈನಿಕರು ಮೃದುತ್ವದಿಂದ ಅವರಿಗೆ ಏನು ಶ್ರೇಯಸ್ಸಾಗಬಹುದು ಎನ್ನುವುದನ್ನು ತಿಳಿಯಲು ಅಶಕ್ಯರಾದರು.

03233011a ತತಸ್ತಾನ್ಯುಧಿ ದುರ್ಧರ್ಷಃ ಸವ್ಯಸಾಚೀ ಪರಂತಪಃ।
03233011c ಸಾಂತ್ವಪೂರ್ವಮಿದಂ ವಾಕ್ಯಮುವಾಚ ಖಚರಾನ್ರಣೇ।।

ಆಗ ಯುದ್ಧದಲ್ಲಿ ದುರ್ಧರ್ಷ ಪರಂತಪ ಸವ್ಯಸಾಚಿಯು ಸಾಂತ್ವಪೂರ್ವಕವಾದ ಈ ಮಾತನ್ನು ರಣದಲ್ಲಿದ್ದ ಆಕಾಶಗಾಮಿಗಳಿಗೆ ಹೇಳಿದನು.

03233012a ನೈತದ್ಗಂಧರ್ವರಾಜಸ್ಯ ಯುಕ್ತಂ ಕರ್ಮ ಜುಗುಪ್ಸಿತಂ।
03233012c ಪರದಾರಾಭಿಮರ್ಶಶ್ಚ ಮಾನುಷೈಶ್ಚ ಸಮಾಗಮಃ।।

“ಪರದಾರೆಯರನ್ನು ಕಾಡಿಸುವ ಮತ್ತು ಮನುಷ್ಯರೊಂದಿಗೆ ಒಡನಾಡುವ ಈ ಜಿಗುಪ್ಸೆಯ ಕೆಲಸವು ಗಂಧರ್ವರಾಜನಿಗೆ ಸರಿಯಾದುದಲ್ಲ.

03233013a ಉತ್ಸೃಜಧ್ವಂ ಮಹಾವೀರ್ಯಾನ್ಧೃತರಾಷ್ಟ್ರಸುತಾನಿಮಾನ್।
03233013c ದಾರಾಂಶ್ಚೈಷಾಂ ವಿಮುಂಚಧ್ವಂ ಧರ್ಮರಾಜಸ್ಯ ಶಾಸನಾತ್।।

ಧರ್ಮರಾಜನ ಶಾಸನದಂತೆ ಈ ಮಹಾವೀರ ಧೃತರಾಷ್ಟ್ರಸುತರನ್ನೂ ಅವರ ಪತ್ನಿಯರನ್ನೂ ಬಿಟ್ಟುಬಿಡಿ!”

03233014a ಏವಮುಕ್ತಾಸ್ತು ಗಂಧರ್ವಾಃ ಪಾಂಡವೇನ ಯಶಸ್ವಿನಾ।
03233014c ಉತ್ಸ್ಮಯಂತಸ್ತದಾ ಪಾರ್ಥಮಿದಂ ವಚನಮಬ್ರುವನ್।।

ಯಶಸ್ವಿನಿ ಪಾಂಡವನು ಹೀಗೆ ಹೇಳಲು ಗಂಧರ್ವರು ಮುಗುಳ್ನಕ್ಕು ಪಾರ್ಥನಿಗೆ ಈ ಮಾತನ್ನಾಡಿದರು.

03233015a ಏಕಸ್ಯೈವ ವಯಂ ತಾತ ಕುರ್ಯಾಮ ವಚನಂ ಭುವಿ।
03233015c ಯಸ್ಯ ಶಾಸನಮಾಜ್ಞಾಯ ಚರಾಮ ವಿಗತಜ್ವರಾಃ।।

“ಅಯ್ಯಾ! ಭೂಮಿಯಲ್ಲಿ ನಾವು ಒಬ್ಬನದೇ ಮಾತಿನಂತೆ ನಡೆದುಕೊಳ್ಳುತ್ತೇವೆ. ಅವನ ಶಾಸನವನ್ನು ತಿಳಿದುಕೊಂಡು ವಿಗತಜ್ವರರಾಗಿ ವಿಹರಿಸುತ್ತೇವೆ.

03233016a ತೇನೈಕೇನ ಯಥಾದಿಷ್ಟಂ ತಥಾ ವರ್ತಾಮ ಭಾರತ।
03233016c ನ ಶಾಸ್ತಾ ವಿದ್ಯತೇಽಸ್ಮಾಕಮನ್ಯಸ್ತಸ್ಮಾತ್ಸುರೇಶ್ವರಾತ್।।

ಭಾರತ! ಅವನೊಬ್ಬನ ಇಷ್ಟದಂತೆ ಮಾತ್ರ ನಾವು ನಡೆದುಕೊಳ್ಳುತ್ತೇವೆ. ಸುರೇಶ್ವರನ ಹೊರತಾಗಿ ಅನ್ಯರು ಯಾರೂ ನಮ್ಮನ್ನು ಆಳುವುದಿಲ್ಲ.”

03233017a ಏವಮುಕ್ತಸ್ತು ಗಂಧರ್ವೈಃ ಕುಂತೀಪುತ್ರೋ ಧನಂಜಯಃ।
03233017c ಗಂಧರ್ವಾನ್ಪುನರೇವೇದಂ ವಚನಂ ಪ್ರತ್ಯಭಾಷತ।।

ಗಂಧರ್ವರು ಹೀಗೆ ಹೇಳಲು ಕುಂತೀಪುತ್ರ ಧನಂಜಯನು ಗಂಧರ್ವರಿಗೆ ಪುನಃ ಈ ಮಾತುಗಳಿಂದ ಉತ್ತರಿಸಿದನು.

03233018a ಯದಿ ಸಾಮ್ನಾ ನ ಮೋಕ್ಷಧ್ವಂ ಗಂಧರ್ವಾ ಧೃತರಾಷ್ಟ್ರಜಂ।
03233018c ಮೋಕ್ಷಯಿಷ್ಯಾಮಿ ವಿಕ್ರಮ್ಯ ಸ್ವಯಮೇವ ಸುಯೋಧನಂ।।

“ಗಂಧರ್ವರೇ! ಸಾಮದಿಂದ ಧೃತರಾಷ್ಟ್ರಜನನ್ನು ಬಿಡದಿದ್ದರೆ ವಿಕ್ರಮದಿಂದ ನಾನೇ ಸುಯೋಧನನನ್ನು ಬಿಡುಗಡೆಗೊಳಿಸುತ್ತೇನೆ.”

03233019a ಏವಮುಕ್ತ್ವಾ ತತಃ ಪಾರ್ಥಃ ಸವ್ಯಸಾಚೀ ಧನಂಜಯಃ।
03233019c ಸಸರ್ಜ ನಿಶಿತಾನ್ಬಾಣಾನ್ಖಚರಾನ್ಖಚರಾನ್ಪ್ರತಿ।।

ಹೀಗೆ ಹೇಳಿ ಸವ್ಯಸಾಚೀ ಧನಂಜಯನು ಆಕಾಶದಲ್ಲಿ ಹಾರುವ ಹರಿತ ಬಾಣಗಳನ್ನು ಆಕಾಶದಲ್ಲಿ ಸಂಚರಿಸುವ ಅವರ ಮೇಲೆ ಪ್ರಯೋಗಿಸಿದನು.

03233020a ತಥೈವ ಶರವರ್ಷೇಣ ಗಂಧರ್ವಾಸ್ತೇ ಬಲೋತ್ಕಟಾಃ।
03233020c ಪಾಂಡವಾನಭ್ಯವರ್ತಂತ ಪಾಂಡವಾಶ್ಚ ದಿವೌಕಸಃ।।

ಹಾಗೆಯೇ ಬಲೋತ್ಕಟ ಗಂಧರ್ವರು ಪಾಂಡವರ ಮೇಲೆ ಮತ್ತು ಪಾಂಡವರು ದಿವೌಕಸರ ಮೇಲೆ ಶರಗಳ ಮಳೆಯನ್ನು ಸುರಿಸಿದರು.

03233021a ತತಃ ಸುತುಮುಲಂ ಯುದ್ಧಂ ಗಂಧರ್ವಾಣಾಂ ತರಸ್ವಿನಾಂ।
03233021c ಬಭೂವ ಭೀಮವೇಗಾನಾಂ ಪಾಂಡವಾನಾಂ ಚ ಭಾರತ।।

ಭಾರತ! ಆಗ ತರಸ್ವಿ ಗಂಧರ್ವರ ಮತ್ತು ಭೀಮವೇಗಿ ಪಾಂಡವರ ನಡುವೆ ಯುದ್ಧವು ನಡೆಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಪಾಂಡವಗಂಧರ್ವಯುದ್ಧೇ ತ್ರ್ಯಸ್ತ್ರಿಂಶದಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಪಾಂಡವಗಂಧರ್ವಯುದ್ಧದಲ್ಲಿ ಇನ್ನೂರಾಮೂವತ್ಮೂರನೆಯ ಅಧ್ಯಾಯವು.