209 ಅಂಗಿರಸೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಮಾರ್ಕಂಡೇಯಸಮಸ್ಯಾ ಪರ್ವ

ಅಧ್ಯಾಯ 209

ಸಾರ

ಅಗ್ನಿಗಳ ವರ್ಣನೆಯು ಮುಂದುವರೆದುದು (1-25).

03209001 ಮಾರ್ಕಂಡೇಯ ಉವಾಚ।
03209001a ಬೃಹಸ್ಪತೇಶ್ಚಾಂದ್ರಮಸೀ ಭಾರ್ಯಾಭೂದ್ಯಾ ಯಶಸ್ವಿನೀ।
03209001c ಅಗ್ನೀನ್ಸಾಜನಯತ್ಪುಣ್ಯಾನ್ಷಡೇಕಾಂ ಚಾಪಿ ಪುತ್ರಿಕಾಂ।।

ಮಾರ್ಕಂಡೇಯನು ಹೇಳಿದನು: “ಬೃಹಸ್ಪತಿಯ ಭಾರ್ಯೆ ಯಶಸ್ವಿನೀ ಚಂದ್ರಮಸೀ1. ಅವಳು ಆರು ಪುಣ್ಯ ಅಗ್ನಿಗಳಿಗೂ ಮತ್ತು ಓರ್ವ ಪುತ್ರಿಗೂ ಜನ್ಮವಿತ್ತಳು.

03209002a ಆಹುತಿಷ್ವೇವ ಯಸ್ಯಾಗ್ನೇರ್ಹವಿಷಾಜ್ಯಂ ವಿಧೀಯತೇ।
03209002c ಸೋಽಗ್ನಿರ್ಬೃಹಸ್ಪತೇಃ ಪುತ್ರಃ ಶಮ್ಯುರ್ನಾಮ ಮಹಾಪ್ರಭಃ।।

ತುಪ್ಪದ ಹವಿಸ್ಸಿನ ಮೊದಲ ಆಹುತಿಯನ್ನಾಗಿ ಯಾವ ಅಗ್ನಿಯಲ್ಲಿ ಹಾಕುತ್ತಾರೋ ಆ ಅಗ್ನಿಯು ಬೃಹಸ್ಪತಿಯ ಮಹಾಪ್ರಭೆಯುಳ್ಳ ಶಮ್ಯು ಎಂಬ ಹೆಸರಿನ ಪುತ್ರ.

03209003a ಚಾತುರ್ಮಾಸ್ಯೇಷು ಯಸ್ಯೇಷ್ಟ್ಯಾಮಶ್ವಮೇಧೇಽಗ್ರಜಃ ಪಶುಃ।
03209003c ದೀಪ್ತೋ ಜ್ವಾಲೈರನೇಕಾಭೈರಗ್ನಿರೇಕೋಽಥ ವೀರ್ಯವಾನ್।।

ಚಾತುರ್ಮಾಸದ2 ಇಷ್ಟಿಯಲ್ಲಿ ಮತ್ತು ಅಶ್ವಮೇಧದಲ್ಲಿ ಮೊದಲ ಪಶುವನ್ನು ಅನೇಕ ಜ್ವಾಲೆಗಳಾಗಿ ಉರಿಯುವ ಈ ಮಹಾವೀರ್ಯನಲ್ಲಿ ಮಾತ್ರ ಆಹುತಿಯನ್ನಾಗಿ ಹಾಕುತ್ತಾರೆ.

03209004a ಶಮ್ಯೋರಪ್ರತಿಮಾ ಭಾರ್ಯಾ ಸತ್ಯಾ ಸತ್ಯಾ ಚ ಧರ್ಮಜಾ।
03209004c ಅಗ್ನಿಸ್ತಸ್ಯ ಸುತೋ ದೀಪ್ತಸ್ತಿಸ್ರಃ ಕನ್ಯಾಶ್ಚ ಸುವ್ರತಾಃ।।

ಶಮ್ಯನ ಅಪ್ರತಿಮ ಭಾರ್ಯೆಯು ಸತ್ಯ. ಸತ್ಯೆಯು ಧರ್ಮನ ಮಗಳು. ಆ ಅಗ್ನಿಗೆ ಉರಿಯುತ್ತಿರುವ ಓರ್ವ ಮಗ ಮತ್ತು ಮೂರು ಸುವ್ರತ ಕನ್ಯೆಯರು.

03209005a ಪ್ರಥಮೇನಾಜ್ಯಭಾಗೇನ ಪೂಜ್ಯತೇ ಯೋಽಗ್ನಿರಧ್ವರೇ।
03209005c ಅಗ್ನಿಸ್ತಸ್ಯ ಭರದ್ವಾಜಃ ಪ್ರಥಮಃ ಪುತ್ರ ಉಚ್ಯತೇ।।

ಅಧ್ವರದಲ್ಲಿ ಪ್ರಥಮ ಆಜ್ಯಭಾಗದಲ್ಲಿ ಪೂಜಿತನಾಗುವ ಅಗ್ನಿ ಭರದ್ವಾಜನನ್ನು ಅವನ ಪ್ರಥಮ ಪುತ್ರನೆಂದು ಹೇಳುತ್ತಾರೆ.

03209006a ಪೌರ್ಣಮಾಸ್ಯೇಷು ಸರ್ವೇಷು ಹವಿಷಾಜ್ಯಂ ಸ್ರುವೋದ್ಯತಂ।
03209006c ಭರತೋ ನಾಮತಃ ಸೋಽಗ್ನಿರ್ದ್ವಿತೀಯಃ ಶಮ್ಯುತಃ ಸುತಃ।।

ಎಲ್ಲ ಪೂರ್ಣಿಮೆಗಳಲ್ಲಿ ಸ್ರುವದ ಮೂಲಕ ತುಪ್ಪದ ಹವಿಸ್ಸನ್ನು ಹಾಕುವ ಭರತ ಎಂಬ ಹೆಸರಿನ ಅಗ್ನಿಯು ಶಮ್ಯುವಿನ ಎರಡನೆಯ ಮಗ.

03209007a ತಿಸ್ರಃ ಕನ್ಯಾ ಭವಂತ್ಯನ್ಯಾ ಯಾಸಾಂ ಸ ಭರತಃ ಪತಿಃ।
03209007c ಭರತಸ್ತು ಸುತಸ್ತಸ್ಯ ಭರತ್ಯೇಕಾ ಚ ಪುತ್ರಿಕಾ।।

ಭರತನಿಗೆ ಮೂರುಕನ್ಯೆಯರಿದ್ದರು3, ಅವರನ್ನು ಮದುವೆಮಾಡಿಕೊಟ್ಟನು. ಅವನಿಗೆ ಭರತನೆಂಬ ಮಗನೂ ಭರತೀ ಎನ್ನುವ ಮಗಳೂ ಇದ್ದರು.

03209008a ಭರತೋ ಭರತಸ್ಯಾಗ್ನೇಃ ಪಾವಕಸ್ತು ಪ್ರಜಾಪತೇಃ।
03209008c ಮಹಾನತ್ಯರ್ಥಮಹಿತಸ್ತಥಾ ಭರತಸತ್ತಮ।।

ಭರತಸತ್ತಮ! ಪಾವಕ ಭರತನು ಅಗ್ನಿ ಪ್ರಜಾಪತಿಯ ಮಗನು. ಜೋರಾಗಿ ಉರಿಯುತ್ತಿರುವಾಗ ಅವನು ತುಂಬಾ ಅಹಿತನಾಗಿರುತ್ತಾನೆ4.

03209009a ಭರದ್ವಾಜಸ್ಯ ಭಾರ್ಯಾ ತು ವೀರಾ ವೀರಶ್ಚ ಪಿಂಡದಃ।
03209009c ಪ್ರಾಹುರಾಜ್ಯೇನ ತಸ್ಯೇಜ್ಯಾಂ ಸೋಮಸ್ಯೇವ ದ್ವಿಜಾಃ ಶನೈಃ।।

ಭರದ್ವಾಜನ ಪತ್ನಿಯು ವೀರಾ ಮತ್ತು ಮಗನು ವೀರ. ಇವನಿಗೆ ಆಜ್ಯದಲ್ಲಿ ಸೋಮನಷ್ಟೇ ಪೂಜೆಯಾಗುತ್ತದೆ ಎಂದು ಬ್ರಾಹ್ಮಣರು ಹೇಳುತ್ತಾರೆ, ಆದರೆ ಮೆಲ್ಲಗೆ.

03209010a ಹವಿಷಾ ಯೋ ದ್ವಿತೀಯೇನ ಸೋಮೇನ ಸಹ ಯುಜ್ಯತೇ।
03209010c ರಥಪ್ರಭೂ ರಥಧ್ವಾನಃ ಕುಂಭರೇತಾಃ ಸ ಉಚ್ಯತೇ।।

ಸೋಮದೊಂದಿಗೆ ಯಜಿಸುವ ಈ ಎರಡನೆಯ ಹವಿಸ್ಸನ್ನು ರಥಪ್ರಭು, ರಥಧ್ವಾನ ಮತ್ತು ಕುಂಭರೇತಾ ಎಂದೂ ಕರೆಯುತ್ತಾರೆ.

03209011a ಸರಯ್ವಾಂ ಜನಯತ್ಸಿದ್ಧಿಂ ಭಾನುಂ ಭಾಭಿಃ ಸಮಾವೃಣೋತ್।
03209011c ಆಗ್ನೇಯಮಾನಯನ್ನಿತ್ಯಮಾಹ್ವಾನೇಷ್ವೇಷ ಕಥ್ಯತೇ।।

ಅವನು ಸರಯೂವಿನಲ್ಲಿ ಸಿದ್ಧಿಯನ್ನು ಹುಟ್ಟಿಸಿದನು ಮತ್ತು ತನ್ನ ಪ್ರಭೆಯಿಂದ ಸೂರ್ಯನ ಪ್ರಭೆಯನ್ನು ಕುಂದಿಸಿದನು. ಅವನೇ ಅಗ್ನಿಯನ್ನು ತಂದ ಎಂದು ನಿತ್ಯವೂ ಆವಾಹನಗಳಲ್ಲಿ ಹೇಳುತ್ತಾರೆ.

03209012a ಯಸ್ತು ನ ಚ್ಯವತೇ ನಿತ್ಯಂ ಯಶಸಾ ವರ್ಚಸಾ ಶ್ರಿಯಾ।
03209012c ಅಗ್ನಿರ್ನಿಶ್ಚ್ಯವನೋ ನಾಮ ಪೃಥಿವೀಂ ಸ್ತೌತಿ ಕೇವಲಂ।।

ಯಶಸ್ಸು, ವರ್ಚಸ್ಸು ಮತ್ತು ಶ್ರಿಯಲ್ಲಿ ನಿತ್ಯವೂ ಕಡಿಮೆಯಾಗದ ನಿಶ್ಚ್ಯವನ ಎಂಬ ಹೆಸರಿನ ಅಗ್ನಿಯು ಸದಾ ಪೃಥ್ವಿಯನ್ನು ಸ್ತುತಿಸುತ್ತಿರುತ್ತಾನೆ5.

03209013a ವಿಪಾಪ್ಮಾ ಕಲುಷೈರ್ಮುಕ್ತೋ ವಿಶುದ್ಧಶ್ಚಾರ್ಚಿಷಾ ಜ್ವಲನ್।
03209013c ವಿಪಾಪೋಽಗ್ನಿಃ ಸುತಸ್ತಸ್ಯ ಸತ್ಯಃ ಸಮಯಕರ್ಮಸು।।

ಪಾಪವಿಲ್ಲದ, ಕಲ್ಮಷಗಳಿಂದ ಮುಕ್ತನಾದ, ವಿಶುದ್ಧನಾದ, ಜ್ವಾಲೆಗಳಲ್ಲಿ ಉರಿಯುತ್ತಿರುವ ವಿಪಾಪ ಅಗ್ನಿಯು ಅವನ ಮಗ. ಸಮಯಕರ್ಮಗಳಲ್ಲಿ ಸತ್ಯನು.

03209014a ಆಕ್ರೋಶತಾಂ ಹಿ ಭೂತಾನಾಂ ಯಃ ಕರೋತಿ ಹಿ ನಿಷ್ಕೃತಿಂ।
03209014c ಅಗ್ನಿಃ ಸ ನಿಷ್ಕೃತಿರ್ನಾಮ ಶೋಭಯತ್ಯಭಿಸೇವಿತಃ।।

ಆಕ್ರೋಶಪಡುತ್ತಿರುವ ಭೂತಗಳನ್ನು ಯಾರು ನಿಷ್ಕೃತಿಗೊಳಿಸುತ್ತಾನೋ ಅವನೇ ನಿಷ್ಕೃತಿ ಎಂಬ ಹೆಸರಿನ ಅಗ್ನಿ. ಅವನನ್ನು ಸೇವಿಸಿದರೆ ಶೋಭಿಸುತ್ತಾನೆ.

03209015a ಅನುಕೂಜಂತಿ ಯೇನೇಹ ವೇದನಾರ್ತಾಃ ಸ್ವಯಂ ಜನಾಃ।
03209015c ತಸ್ಯ ಪುತ್ರಃ ಸ್ವನೋ ನಾಮ ಪಾವಕಃ ಸ ರುಜಸ್ಕರಃ।।

ವೇದನೆಯಿಂದ ಆರ್ತರಾದ ಜನರು ಯಾವುದರಿಂದ ಸ್ವಯಂ ಪರಿತಪಿಸುತ್ತಾರೋ ಅದೇ ಸ್ವನ ಎಂಬ ಹೆಸರಿನ ಅವನ ಪುತ್ರ. ಅವನು ನೋವನ್ನುಂಟುಮಾಡುವವನು.

03209016a ಯಸ್ತು ವಿಶ್ವಸ್ಯ ಜಗತೋ ಬುದ್ಧಿಮಾಕ್ರಮ್ಯ ತಿಷ್ಠತಿ।
03209016c ತಂ ಪ್ರಾಹುರಧ್ಯಾತ್ಮವಿದೋ ವಿಶ್ವಜಿನ್ನಾಮ ಪಾವಕಂ।।

ಯಾವುದು ವಿಶ್ವದ ಜಗತ್ತಿನ ಬುದ್ಧಿಯನ್ನು ಆಕ್ರಮಿಸಿ ನಿಂತಿದೆಯೋ ಆ ಪಾವಕನನ್ನು ಆಧ್ಯಾತ್ಮವನ್ನು ತಿಳಿದವರು ವಿಶ್ವಜಿತ ಎಂಬ ಹೆಸರಿನಿಂದ ಕರೆಯುತ್ತಾರೆ.

03209017a ಅಂತರಾಗ್ನಿಃ ಶ್ರಿತೋ ಯೋ ಹಿ ಭುಕ್ತಂ ಪಚತಿ ದೇಹಿನಾಂ।
03209017c ಸ ಯಜ್ಞೇ ವಿಶ್ವಭುಮ್ನಾಮ ಸರ್ವಲೋಕೇಷು ಭಾರತ।।

ಭಾರತ! ದೇಹದ ಕರುಳುಗಳಲ್ಲಿದ್ದುಕೊಂಡು ತಿನ್ನುವ ಆಹಾರವನ್ನು ಪಚನಮಾಡುವ, ಸರ್ವಲೋಕದ ಯಜ್ಞಗಳಲ್ಲಿರುವ ಅಂತರಾಗ್ನಿಯ ಹೆಸರು ವಿಶ್ವಭುಕ್.

03209018a ಬ್ರಹ್ಮಚಾರೀ ಯತಾತ್ಮಾ ಚ ಸತತಂ ವಿಪುಲವ್ರತಃ।
03209018c ಬ್ರಾಹ್ಮಣಾಃ ಪೂಜಯಂತ್ಯೇನಂ ಪಾಕಯಜ್ಞೇಷು ಪಾವಕಂ।।
03209019a ಪ್ರಥಿತೋ ಗೋಪತಿರ್ನಾಮ ನದೀ ಯಸ್ಯಾಭವತ್ಪ್ರಿಯಾ।
03209019c ತಸ್ಮಿನ್ಸರ್ವಾಣಿ ಕರ್ಮಾಣಿ ಕ್ರಿಯಂತೇ ಕರ್ಮಕರ್ತೃಭಿಃ।।

ಪಾಕಯಜ್ಞಗಳಲ್ಲಿ ಬ್ರಾಹ್ಮಣರು ಪೂಜಿಸುವ ಈ ಬ್ರಹ್ಮಚಾರೀ, ನಿಯತಾತ್ಮ, ಸತತವೂ ವಿಪುಲವ್ರತನಾಗಿರುವ ಪಾವಕನು ಗೋಪತಿ ಎಂಬ ಹೆಸರಿನಿಂದ ಪ್ರಖ್ಯಾತನಾಗಿದ್ದಾನೆ. ಇವನಿಗೆ ನದಿಯೊಂದಿಗೆ ಪ್ರೀತಿಯಾಯಿತು. ಅವನಿಂದ ಕರ್ಮ ಕರ್ತೃಗಳ ಎಲ್ಲ ಕರ್ಮಗಳೂ ನಡೆಯುತ್ತವೆ.

03209020a ವಡವಾಮುಖಃ ಪಿಬತ್ಯಂಭೋ ಯೋಽಸೌ ಪರಮದಾರುಣಃ।
03209020c ಊರ್ಧ್ವಭಾಗೂರ್ಧ್ವಭಾಮ್ನಾಮ ಕವಿಃ ಪ್ರಾಣಾಶ್ರಿತಸ್ತು ಸಃ।।

ಪರಮದಾರುಣವಾದ, ವಡವಾಮುಖನಾದ, ನೀರನ್ನು ಕುಡಿಯುವ, ಮೇಲ್ಮುಖವಾಗಿರುವವನ ಹೆಸರು ಊರ್ಧ್ವಭಾಮ. ಈ ಋಷಿಯು ಪ್ರಾಣದಲ್ಲಿರುತ್ತಾನೆ.

03209021a ಉದಗ್ದ್ವಾರಂ ಹವಿರ್ಯಸ್ಯ ಗೃಹೇ ನಿತ್ಯಂ ಪ್ರದೀಯತೇ।
03209021c ತತಃ ಸ್ವಿಷ್ಟಂ ಭವೇದಾಜ್ಯಂ ಸ್ವಿಷ್ಟಕೃತ್ಪರಮಃ ಸ್ಮೃತಃ।।

ಮನೆಯ ಉತ್ತರ ದ್ವಾರದಲ್ಲಿ ನಿತ್ಯವೂ ಉರಿಯುತ್ತಿರುವ, ಯಾವುದರಿಂದ ಬೆಣ್ಣೆಯು ತುಪ್ಪವಾಗುತ್ತದೆಯೋ ಅದನ್ನು ಸ್ವಿಷ್ಟಕೃತ್ ಎಂದು ಕರೆಯುತ್ತಾರೆ.

03209022a ಯಃ ಪ್ರಶಾಂತೇಷು ಭೂತೇಷು ಮನ್ಯುರ್ಭವತಿ ಪಾವಕಃ।
03209022c ಕ್ರೋಧಸ್ಯ ತು ರಸೋ ಜಜ್ಞೇ ಮನ್ಯತೀ ಚಾಥ ಪುತ್ರಿಕಾ।
03209022e ಸ್ವಾಹೇತಿ ದಾರುಣಾ ಕ್ರೂರಾ ಸರ್ವಭೂತೇಷು ತಿಷ್ಠತಿ।।

ಪ್ರಶಾಂತರಾಗಿರುವವರಲ್ಲಿ ಸಿಟ್ಟಿನ ಅಗ್ನಿಯಾಗುವವಳು, ಕ್ರೋಧದ ರಸವನ್ನು ಹುಟ್ಟಿಸುವವಳು ಇವನ ಮಗಳು ಸ್ವಾಹಾ ಎನ್ನುವವಳು. ದಾರುಣಳೂ, ಕ್ರೂರಳೂ ಆದ ಇವಳು ಸರ್ವಭೂತಗಳಲ್ಲಿ ನೆಲೆಮಾಡಿರುತ್ತಾಳೆ.

03209023a ತ್ರಿದಿವೇ ಯಸ್ಯ ಸದೃಶೋ ನಾಸ್ತಿ ರೂಪೇಣ ಕಶ್ಚನ।
03209023c ಅತುಲ್ಯತ್ವಾತ್ಕೃತೋ ದೇವೈರ್ನಾಮ್ನಾ ಕಾಮಸ್ತು ಪಾವಕಃ।।

ಮೂರು ಲೋಕಗಳಲ್ಲಿಯೂ ರೂಪದಲ್ಲಿ ಯಾರ ಸದೃಶನಾದವನು ಯಾರೂ ಇಲ್ಲವೋ, ಅತುಲ್ಯನಾದುದರಿಂದ ಅವನಿಗೆ ಕಾಮಾಗ್ನಿ ಎಂದು ದೇವತೆಗಳು ಹೆಸರನ್ನಿಟ್ಟರು.

03209024a ಸಂಹರ್ಷಾದ್ಧಾರಯನ್ಕ್ರೋಧಂ ಧನ್ವೀ ಸ್ರಗ್ವೀ ರಥೇ ಸ್ಥಿತಃ।
03209024c ಸಮರೇ ನಾಶಯೇಚ್ಚತ್ರೂನಮೋಘೋ ನಾಮ ಪಾವಕಃ।।

ಸಂಹರ್ಷದಿಂದ ಕ್ರೋಧವನ್ನು ಧರಿಸಿ, ಧನುಸ್ಸನ್ನು ಹಿಡಿದು, ಮಾಲೆಯನ್ನು ಧರಿಸಿ ರಥದಲ್ಲಿ ನಿಂತು ಸಮರದಲ್ಲಿ ಶತ್ರುಗಳನ್ನು ನಾಶಪಡಿಸುವ ಅಗ್ನಿಯ ಹೆಸರು ಅಮೋಘ.

03209025a ಉಕ್ಥೋ ನಾಮ ಮಹಾಭಾಗ ತ್ರಿಭಿರುಕ್ಥೈರಭಿಷ್ಟುತಃ।
03209025c ಮಹಾವಾಚಂ ತ್ವಜನಯತ್ಸಕಾಮಾಶ್ವಂ ಹಿ ಯಂ ವಿದುಃ।।

ಮಹಾಭಾಗ! ಮೂರು ಉಕ್ತಗಳನ್ನು ಬಳಸಿ ಹೇಳುವ ಉಕ್ಥ ಎಂಬ ಹೆಸರಿನ ಮಹಾವಾಕ್ಯವನ್ನು ಸಕಾಮಾಶ್ವ ಎಂದು ತಿಳಿದವರು ಹೇಳುತ್ತಾರೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗಿರಸೋಪಾಖ್ಯಾನೇ ನವಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗಿರಸೋಪಾಖ್ಯಾನದಲ್ಲಿ ಇನ್ನೂರಾಒಂಭತ್ತನೆಯ ಅಧ್ಯಾಯವು.


  1. ಚಂದ್ರನ ಕಾಂತಿಯಿಂದ ಕೂಡಿದ್ದ ತಾರಾ. ↩︎

  2. ವೈಶ್ವದೇವ-ವರುಣಪ್ರಘಾಸ-ಸಾಕಮೇಧ-ಶುನಾಸೀರಿಯಗಳೆಂಬ ಚಾತುರ್ಮಾಸ್ಯಜ್ಞ ↩︎

  3. ಭರತನಿಗೆ ಮೂವರು ಪತ್ನಿಯರಿದ್ದರು. ↩︎

  4. ಯಜ್ಞದಲ್ಲಿ ಈ ಭರತಾಗ್ನಿಯನ್ನು ಹೊತ್ತಿರುವುದೇ ಪ್ರಾಜಾಪತಾಗ್ನಿ. ಈ ಅಗ್ನಿಯು ಮಹಾಫಲವನ್ನು ಕೊಡುವವನಾದ್ದರಿಂದ ಇವನನ್ನು ‘ಮಹಾನ್’ ಎಂದೂ ಕರೆಯುವರು. ↩︎

  5. ಭೂದೇವಿಗೆ ಅರ್ಪಿಸಬೇಕಾದ ಆಹುತಿಯನ್ನು ನಿಶ್ಚ್ಯವನಾಗ್ನಿಯ ಮೂಲಕ ಅರ್ಪಿಸುತ್ತಾರೆ. ↩︎