ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 190
ಸಾರ
ಬ್ರಾಹ್ಮಣರ ಮಹಾಭಾಗ್ಯದ ಕುರಿತು ಹೇಳಬೇಕೆಂದು ಯುಧಿಷ್ಠಿರನು ಕೇಳಿಕೊಳ್ಳಲು ಮಾರ್ಕಂಡೇಯನು ವಾಮದೇವನ ಚರಿತ್ರೆಯನ್ನು ಪ್ರಾರಂಭಿಸಿದುದು (1-2). ಇಕ್ಷ್ವಾಕು ಕುಲದ ರಾಜ ಪರಿಕ್ಷಿತನು ಬೇಟೆಯಾಡಲು ಹೋದಾಗ ಓರ್ವ ಪರಮ ರೂಪವತಿ ನಾರಿಯನ್ನು ಕಂಡು, ತನಗೆ ಎಂದೂ ನೀರನ್ನು ತೋರಿಸಬಾರದು ಎಂಬ ಅವಳ ನಿಯಮಕ್ಕೆ ಒಪ್ಪಿಕೊಂಡು ಅವಳನ್ನು ವಿವಾಹವಾಗಿ ಅರಮನೆಗೆ ಕರೆತಂದು, ನೀರಿಲ್ಲದ ಉದ್ಯಾನವನದಲ್ಲಿರಿಸಿ ರಮಿಸಿದುದು (3-24). ಒಮ್ಮೆ ಬಾಯಾರಿ ನೀರಿಗಾಗಿ ಹುಡುಕಾಡುವಾಗ ಹೊಂಡವೊಂದನ್ನು ಕಂಡು ಅದರೊಳಗೆ ಪತ್ನಿಯೊಂದಿಗೆ ಇಳಿಯಲು ಪತ್ನಿಯು ಮೇಲೆ ಬರಲಿಲ್ಲ; ನೀರನ್ನು ಬರಿದು ಮಾಡಿದರೆ ಕಪ್ಪೆಯೊಂದು ಕಂಡಿದುದು; ಕಪ್ಪೆಯ ಮೇಲಿನ ಕ್ರೋಧದಿಂದ ರಾಜನು ಕಪ್ಪೆಗಳನ್ನು ಕೊಂದು ತಂದವರಿಗೆ ಬಹುಮಾನಗಳನ್ನು ಘೋಷಿಸುವುದು (25-30). ಘೋರ ಮಂಡೂಕವಧೆಯು ಎಲ್ಲೆಲ್ಲಿಯೂ ಪ್ರಾರಂಭವಾದುದು; ಮಂಡೂಕರಾಜನು ಪರಿಕ್ಷಿತನಲ್ಲಿ ಬೇಡಿಕೊಂಡಿದುದು; ಮಾಯವಾದವಳು ತನ್ನ ಮಗಳು ಸುಶೋಭನೆಯೇ ಎಂದು ಹೇಳಿ ಅವಳನ್ನು ರಾಜನಿಗೆ ಹಿಂದಿರುಗಿಸಿದುದು; ರಾಜರನ್ನು ಮೋಸಮಾಡಿದುದರಿಂದ ಅವಳಲ್ಲಿ ಹುಟ್ಟುವ ಮಕ್ಕಳು ಅಬ್ರಾಹ್ಮಣರಾಗುತ್ತಾರೆ ಎಂದು ಶಪಿಸುವುದು (31-42). ಪರಿಕ್ಷಿತನ ಮಗ ಶಲನು ತನ್ನ ಸೂತನಿಂದ ವಾಮ್ಯ ಕುದುರೆಗಳ ಕುರಿತು ಕೇಳಿ, ಅವುಗಳನ್ನು ಇಟ್ಟುಕೊಂಡಿದ್ದ ವಾಮದೇವನಿಂದ, ಕಾರ್ಯವಾದ ತಕ್ಷಣವೇ ತಂದು ಕೊಡಲು ಒಪ್ಪಿಕೊಂಡು, ತಪ್ಪಿಸಿಕೊಂಡ ಜಿಂಕೆಯನ್ನು ಹಿಡಿಯಲು ತೆಗೆದುಕೊಂಡು ಹೋಗುವುದು; ಆದರೆ ತಾನೇ ಇಟ್ಟುಕೊಳ್ಳುವುದು (43-54). ಕುದುರೆಗಳನ್ನು ಹಿಂದೆಪಡೆಯಲು ಹೋದ ವಾಮದೇವನಿಗೆ ಕೊಡದಿರಲು ಸಿಟ್ಟಿನಿಂದ ವಾಮದೇವನು ರಾಜ ಶಲನನ್ನು ರಾಕ್ಷಸರ ಮೂಲಕ ಸಂಹರಿಸಿದ್ದುದು; ಇಕ್ಷ್ವಾಕುಗಳು ಶಲನ ತಮ್ಮ ದಲನನ್ನು ಅಭಿಷೇಕಿಸಿದ್ದುದು (55-69). ವಾಮದೇವನು ದಲನಿಗೆ ಗರಹೊಡಿಸಿ, ಅವನ ಮಗನನ್ನು ಸಾಯಿಸಲು, ರಾಜಪತ್ನಿಯು ಕ್ಷಮೆ ಕೇಳಿದ್ದುದು; ವಾಮ್ಯಗಳನ್ನು ಪಡೆದು ವಾಮದೇವನು ಹಿಂದಿರುಗಿದುದು (70-82).
03190001 ವೈಶಂಪಾಯನ ಉವಾಚ।
03190001A ಭೂಯ ಏವ ಬ್ರಾಹ್ಮಣಮಹಾಭಾಗ್ಯಂ ವಕ್ತುಮರ್ಹಸೀತ್ಯಬ್ರವೀತ್ಪಾಂಡವೇಯೋ ಮಾರ್ಕಂಡೇಯಂ।
ವೈಶಂಪಾಯನನು ಹೇಳಿದನು: “ಮತ್ತೊಮ್ಮೆ ಪಾಂಡವನು ಮಾರ್ಕಂಡೇಯನಿಗೆ ಹೇಳಿದನು: “ದಯವಿಟ್ಟು ಬ್ರಾಹ್ಮಣರ ಮಹಾ ಭಾಗ್ಯದ ಕುರಿತು ಹೇಳಬೇಕು!”
03190002A ಅಥಾಚಷ್ಟ ಮಾರ್ಕಂಡೇಯಃ।
ಆಗ ಮಾರ್ಕಂಡೇಯುನು ಹೇಳಿದನು:
03190003A ಅಯೋಧ್ಯಾಯಾಮಿಕ್ಷ್ವಾಕುಕುಲೋತ್ಪನ್ನಃ ಪಾರ್ಥಿವಃ ಪರಿಕ್ಷಿನ್ನಾಮ ಮೃಗಯಾಮಗಮತ್।
“ಅಯೋಧ್ಯೆಯ ಇಕ್ಷ್ವಾಕುಕುಲೋತ್ಪನ್ನನಾದ ಪರಿಕ್ಷಿತ ಎಂಬ ಹೆಸರಿನ ರಾಜನು ಬೇಟೆಗೆ ಹೋದನು.
03190004A ತಮೇಕಾಶ್ವೇನ ಮೃಗಮನುಸರಂತಂ ಮೃಗೋ ದೂರಮಪಾಹರತ್।
ಅವನು ಒಂದು ಕುದುರೆಯ ಮೇಲೆ ಕುಳಿತು ಜಿಂಕೆಯೊಂದನ್ನು ಅರಸಲು ಜಿಂಕೆಯು ಅವನನ್ನು ಬಹುದೂರ ಕೊಂಡೊಯ್ಯಿತು.
03190005A ಅಥಾಧ್ವನಿ ಜಾತಶ್ರಮಃ ಕ್ಷುತ್ತೃಷ್ಣಾಭಿಭೂತಶ್ಚ ಕಸ್ಮಿಂಶ್ಚಿದುದ್ದೇಶೇ ನೀಲಂ ವನಷಂಡಮಪಶ್ಯತ್।
03190005B ತಚ್ಚ ವಿವೇಶ।
ಆಗ ದಾರಿಯಲ್ಲಿ ಅವನು ತುಂಬಾ ಆಯಾಸಗೊಂಡು ಹಸಿವು ಬಾಯಾರಿಕೆಗಳಿಂದ ಬಳಲಿ ಮರಗಳಿದ್ದ ಯಾವುದೋ ಒಂದು ದಟ್ಟ ಪ್ರದೇಶವನ್ನು ಕಂಡನು. ಅದನ್ನು ಪ್ರವೇಶಿಸಿದನು.
03190006A ತತಸ್ತಸ್ಯ ವನಷಂಡಸ್ಯ ಮಧ್ಯೇಽತೀವ ರಮಣೀಯಂ ಸರೋ ದೃಷ್ಟ್ವಾ ಸಾಶ್ವ ಏವ ವ್ಯಗಾಹತ।
ಆಗ ಆ ವನಕೂಟದ ಮಧ್ಯೆ ಅತೀವ ರಮಣೀಯವಾದ ಸರೋವರವನ್ನು ನೋಡಿ ಅವನು ಮತ್ತು ಕುದುರೆಗಳು ಅದರಲ್ಲಿ ಮುಳುಗಿದರು.
03190007A ಅಥಾಶ್ವಸ್ತಃ ಸ ಬಿಸಮೃಣಾಲಮಶ್ವಸ್ಯಾಗ್ರೇ ನಿಕ್ಷಿಪ್ಯ ಪುಷ್ಕರಿಣೀತೀರೇ ಸಮಾವಿಶತ್।
ಆಯಾಸ ಕಳೆದು ರಾಜನು ಕಮಲದ ದಂಟುಗಳನ್ನು ಕುದುರೆಯ ಮುಂದಿರಿಸಿ ಆ ಪುಷ್ಕರಿಣೀ ತೀರದಲ್ಲಿ ಸುತ್ತಾಡತೊಡಗಿದನು.
03190008A ತತಃ ಶಯಾನೋ ಮಧುರಂ ಗೀತಶಬ್ದಮಶೃಣೋತ್।
03190009A ಸ ಶ್ರುತ್ವಾಚಿಂತಯತ್।
03190009B ನೇಹ ಮನುಷ್ಯಗತಿಂ ಪಶ್ಯಾಮಿ।
03190009C ಕಸ್ಯ ಖಲ್ವಯಂ ಗೀತಶಬ್ಧ ಇತಿ।
ಅಲ್ಲಿ ಅವನು ಮಲಗಿಕೊಂಡನು ಮತ್ತು ಗೀತಶಬ್ಧವನ್ನು ಕೇಳಿದನು. ಅದನ್ನು ಕೇಳಿ ಯೋಚಿಸಿದನು: “ಇಲ್ಲಿ ಮನುಷ್ಯರ ಕುರುಹನ್ನು ಕಾಣುತ್ತಿಲ್ಲ. ಆದರೆ ಈ ಗೀತಶಬ್ಧವು ಎಲ್ಲಿಂದ?” ಎಂದು.
03190010A ಅಥಾಪಶ್ಯತ್ಕನ್ಯಾಂ ಪರಮರೂಪದರ್ಶನೀಯಾಂ ಪುಷ್ಪಾಣ್ಯವಚಿನ್ವತೀಂ ಗಾಯಂತೀಂ ಚ।
ಆಗ ಅವನು ನೋಡಲು ಪರಮ ರೂಪವತಿಯಾದ, ಪುಷ್ಪಗಳನ್ನು ಕೀಳುತ್ತಾ ಹಾಡುತ್ತಿರುವವಳನ್ನು ಕಂಡನು.
03190011A ಅಥ ಸಾ ರಾಜ್ಞಃ ಸಮೀಪೇ ಪರ್ಯಕ್ರಾಮತ್।
ಆಗ ಅವಳು ರಾಜನ ಸಮೀಪಕ್ಕೆ ಮುಂದುವರೆದು ಬಂದಳು.
03190012A ತಾಮಬ್ರವೀದ್ರಾಜಾ।
03190012B ಕಸ್ಯಾಸಿ ಸುಭಗೇ ತ್ವಮಿತಿ।
ರಾಜನು ಅವಳಿಗೆ “ಸುಭಗೇ! ನೀನು ಯಾರವಳು?” ಎಂದು ಕೇಳಿದನು.
03190013A ಸಾ ಪ್ರತ್ಯುವಾಚ।
03190013B ಕನ್ಯಾಸ್ಮೀತಿ।
“ನಾನು ಕನ್ಯೆ” ಎಂದು ಅವಳು ಉತ್ತರಿಸಿದಳು.
03190014A ತಾಂ ರಾಜೋವಾಚ।
03190014B ಅರ್ಥೀ ತ್ವಯಾಹಮಿತಿ।
ಅವಳಿಗೆ ರಾಜನು “ನಿನ್ನನ್ನು ಬಯಸುತ್ತೇನೆ” ಎಂದು ಹೇಳಿದನು.
03190015A ಅಥೋವಾಚ ಕನ್ಯಾ।
03190015B ಸಮಯೇನಾಹಂ ಶಕ್ಯಾ ತ್ವಯಾ ಲಬ್ಧುಂ।
03190015C ನಾನ್ಯಥೇತಿ।
ಆಗ ಕನ್ಯೆಯು “ಒಂದು ಶರತ್ತಿನಂತೆ ಮಾತ್ರ ನೀನು ನನ್ನನ್ನು ಪಡೆಯಬಲ್ಲೆ. ಅನ್ಯಥಾ ಅಲ್ಲ” ಎಂದು ಹೇಳಿದಳು.
03190016A ತಾಂ ರಾಜಾ ಸಮಯಮಪೃಚ್ಚತ್।
03190017A ತತಃ ಕನ್ಯೇದಮುವಾಚ।
03190017B ಉದಕಂ ಮೇ ನ ದರ್ಶಯಿತವ್ಯಮಿತಿ।
ಶರತ್ತೇನೆಂದು ರಾಜನು ಕೇಳಲು ಕನ್ಯೆಯು “ನನಗೆ ಎಂದೂ ನೀರನ್ನು ತೋರಿಸಬಾರದು!” ಎಂದು ಹೇಳಿದಳು.
03190018A ಸ ರಾಜಾ ಬಾಢಮಿತ್ಯುಕ್ತ್ವಾ ತಾಂ ಸಮಾಗಮ್ಯ ತಯಾಸಹಾಸ್ತೇ।
“ಎಂದೂ ಇಲ್ಲ” ಎಂದು ಹೇಳಿ ರಾಜನು ಅವಳನ್ನು ಸೇರಿ ಬಳಿಯಲ್ಲಿ ಕುಳಿತುಕೊಂಡನು.
03190019A ತತ್ರೈವಾಸೀನೇ ರಾಜನಿ ಸೇನಾನ್ವಗಚ್ಚತ್।
03190019B ಪದೇನಾನುಪದಂ ದೃಷ್ಟ್ವಾ ರಾಜಾನಂ ಪರಿವಾರ್ಯಾತಿಷ್ಠತ್।
ರಾಜನು ಕುಳಿತಲ್ಲಿಗೆ, ಅವನ ಹೆಜ್ಜೆಯ ಗುರುತುಗಳನ್ನೇ ನೋಡಿಕೊಳ್ಳುತ್ತಾ ಅವನ ಸೇನೆಯು ಅಲ್ಲಿಗೆ ಬಂದು ಅವನನ್ನು ಸುತ್ತುವರೆದು ನಿಂತಿತು.
03190020A ಪರ್ಯಾಶ್ವಸ್ತಶ್ಚ ರಾಜಾ ತಯೈವ ಸಹ ಶಿಬಿಕಯಾ ಪ್ರಾಯಾದವಿಘಾಟಿತಯಾ।
03190020B ಸ್ವನಗರಮನುಪ್ರಾಪ್ಯ ರಹಸಿ ತಯಾ ಸಹ ರಮನ್ನಾಸ್ತೇ।
03190020C ನಾನ್ಯತ್ಕಿಂ ಚನಾಪಶ್ಯತ್।
ಸ್ವಲ್ಪ ವಿಶ್ರಮಿಸಿ ರಾಜನು ಅವಳನ್ನು ಒಂದು ಶಿಬಿಕೆಯಲ್ಲಿರಿಸಿಕೊಂಡು ಹೊರಟನು. ತನ್ನ ನಗರವನ್ನು ತಲುಪಿ ಅವಳೊಂದಿಗೆ ರಹಸ್ಯದಲ್ಲಿ, ಬೇರೆ ಏನನ್ನೂ ನೋಡದೇ ರಮಿಸುತ್ತಿದ್ದನು.
03190021A ಅಥ ಪ್ರಧಾನಾಮಾತ್ಯಸ್ತಸ್ಯಾಭ್ಯಾಶಚರಾಃ ಸ್ತ್ರಿಯೋಽಪೃಚ್ಚತ್।
03190021B ಕಿಮತ್ರ ಪ್ರಯೋಜನಂ ವರ್ತತ ಇತಿ।
ಆಗ ಪ್ರಧಾನ ಮಂತ್ರಿಯು ರಾಜನ ಪರಿಚಾರಕ ಸ್ತ್ರೀಯರೊಡನೆ ಪ್ರಶ್ನಿಸಿದನು - ಇದರ ಪ್ರಯೋಜನವೇನು? – ಎಂದು.
03190022A ಅಥಾಬ್ರುವಂಸ್ತಾಃ ಸ್ತ್ರಿಯಃ।
03190022B ಅಪೂರ್ವಮಿವ ಪಶ್ಯಾಮ ಉದಕಂ ನಾತ್ರ ನೀಯತೇತಿ।
ಆಗ ಸ್ತ್ರೀಯರು ಹೇಳಿದರು: “ನಾವು ಒಂದು ವಿಶೇಷವನ್ನು ನೋಡಿದೆವು. ಇಲ್ಲಿಗೆ ನೀರನ್ನು ಮಾತ್ರ ತರುವಂತಿಲ್ಲ!” ಎಂದು.
03190023A ಅಥಾಮಾತ್ಯೋಽನುದಕಂ ವನಂ ಕಾರಯಿತ್ವೋದಾರವೃಕ್ಷಂ
ಬಹುಮೂಲಪುಷ್ಪಫಲಂ ರಹಸ್ಯುಪಗಮ್ಯ ರಾಜಾನಮಬ್ರವೀತ್।
03190023B ವನಮಿದಮುದಾರಮನುದಕಂ।
03190023C ಸಾಧ್ವತ್ರ ರಮ್ಯತಾಮಿತಿ।
ಅದರಂತೆ ಅಮಾತ್ಯನು ನೀರಿಲ್ಲದ, ಬೇಕಾದಷ್ಟು ಮರಗಳುಳ್ಳ, ಬಹಳಷ್ಟು ಗೆಡ್ಡೆ, ಪುಷ್ಪ, ಫಲಗಳನ್ನುಳ್ಳ ಒಂದು ವನವನ್ನು ಮಾಡಿಸಿ, ರಹಸ್ಯದಲ್ಲಿ ರಾಜನಲ್ಲಿಗೆ ಬಂದು ಹೇಳಿದನು: “ಈ ಉದಾರ ವನವು ನೀರಿಲ್ಲದುದು. ಇಲ್ಲಿ ನೀನು ಚೆನ್ನಾಗಿ ರಮಿಸಬಹುದು.”
03190024A ಸ ತಸ್ಯ ವಚನಾತ್ತಯೈವ ಸಹ ದೇವ್ಯಾ ತದ್ವನಂ ಪ್ರಾವಿಶತ್।
03190024B ಸ ಕದಾ ಚಿತ್ತಸ್ಮಿನ್ವನೇ ರಮ್ಯೇ ತಯೈವ ಸಹ ವ್ಯವಹರತ್।
03190024C ಅಥ ಕ್ಷುತ್ತೃಷ್ಣಾರ್ದಿತಃ
ಶ್ರಾಂತೋಽತಿಮಾತ್ರಮತಿಮುಕ್ತಾಗಾರಮಪಶ್ಯತ್।
ಅವನ ವಚನದಂತೆ ಅವನು ದೇವಿಯ ಸಹಿತ ಆ ವನವನ್ನು ಪ್ರವೇಶಿಸಿದನು. ಒಂದು ದಿನ ಅವನು ಅವಳೊಡನೆ ಆ ವನದಲ್ಲಿ ವಿಹರಿಸುತ್ತಿದ್ದನು. ಆಗ ಅವನು ಹಸಿವು ಬಾಯಾರಿಕೆಗಳಿಂದ ಬಳಲಿರಲು ಒಂದು ಅತಿಮುಕ್ತಗಳ ವನವನ್ನು ಕಂಡನು.
03190025A ತತ್ಪ್ರವಿಶ್ಯ ರಾಜಾ ಸಹ ಪ್ರಿಯಯಾ ಸುಧಾತಲಸುಕೃತಾಂ ವಿಮಲಸಲಿಲಪೂರ್ಣಾಂ ವಾಪೀಮಪಶ್ಯತ್।
ರಾಜನು ಪ್ರಿಯೆಯೊಂದಿಗೆ ಅದನ್ನು ಪ್ರವೇಶಿಸಿ, ಶುದ್ಧವಾದ ನೀರಿನಿಂದ ತುಂಬಿದ ಆದರೆ ಸುಧಾತಲದಿಂದ ಮುಚ್ಚಲ್ಪಟ್ಟ ಹೊಂಡವೊಂದನ್ನು ನೋಡಿದನು.
03190026A ದೃಷ್ಟ್ವೈವ ಚ ತಾಂ ತಸ್ಯಾ ಏವ ತೀರೇ ಸಹೈವ ತಯಾ ದೇವ್ಯಾ ವ್ಯತಿಷ್ಠತ್।
ಅದನ್ನು ನೋಡಿದೊಡನೆಯೇ ತನ್ನ ದೇವಿಯೊಡನೇ ಆ ಹೊಂಡವನ್ನು ಪ್ರವೇಶಿಸಿದನು.
03190027A ಅಥ ತಾಂ ದೇವೀಂ ಸ ರಾಜಾಬ್ರವೀತ್।
03190027B ಸಾಧ್ವವತರ ವಾಪೀಸಲಿಲಮಿತಿ।
ರಾಜನು ದೇವಿಗೆ “ಬಾ! ನೀರಿರುವ ಈ ಹೊಂಡದಲ್ಲಿ ಇಳಿ” ಎಂದು ಕರೆದನು.
03190028A ಸಾ ತದ್ವಚಃ ಶ್ರುತ್ವಾವತೀರ್ಯ ವಾಪೀಂ ನ್ಯಮಜ್ಜತ್।
03190028B ನ ಪುನರುದಮಜ್ಜತ್।
ಅವಳು ಆ ಮಾತನ್ನು ಕೇಳಿ ನೀರಿಗಿಳಿದಳು. ಆದರೆ ಪುನಃ ಮೇಲೆ ಬರಲಿಲ್ಲ.
03190029A ತಾಂ ಮೃಗಯಮಾಣೋ ರಾಜಾ ನಾಪಶ್ಯತ್।
ರಾಜನು ಹುಡುಕಾಡಿದನು; ಆದರೆ ಅವಳನ್ನು ಕಾಣಲಿಲ್ಲ.
03190030A ವಾಪೀಮಪಿ ನಿಃಸ್ರಾವ್ಯ ಮಂಡೂಕಂ ಶ್ವಭ್ರಮುಖೇ ದೃಷ್ಟ್ವಾ ಕ್ರುದ್ಧ ಆಜ್ಞಾಪಯಾಮಾಸ।
03190030B ಸರ್ವಮಂಡೂಕವಧಃ ಕ್ರಿಯತಾಮಿತಿ।
03190030C ಯೋ ಮಯಾರ್ಥೀ ಸ ಮೃತಕೈರ್ಮಂಡೂಕೈರುಪಾಯನೈರ್ಮಾಮುಪತಿಷ್ಠೇದಿತಿ।
ಅವನು ಆ ಹೊಂಡವನ್ನು ಬರಿದುಮಾಡಿಸಿದನು ಮತ್ತು ನೀರಿನ ಚಿಲುಮೆಯ ಬಾಯಿಯಲ್ಲಿ ಒಂದು ಕಪ್ಪೆಯನ್ನು ಕಂಡನು. ಅವನು ಕ್ರುದ್ಧನಾಗಿ ಆಜ್ಞಾಪಿಸಿದನು: “ಎಲ್ಲ ಕಪ್ಪೆಗಳನ್ನೂ ಕೊಲ್ಲಿ! ನನ್ನಿಂದ ಏನನ್ನಾದರೂ ಬಯಸುವವರು ಸತ್ತ ಕಪ್ಪೆಗಳನ್ನು ನನಗೆ ಕಾಣಿಕೆಯಾಗಿ ತರಬೇಕು.”
03190031A ಅಥ ಮಂಡೂಕವಧೇ ಘೋರೇ ಕ್ರಿಯಮಾಣೇ ದಿಕ್ಷು ಸರ್ವಾಸು ಮಂಡೂಕಾನ್ಭಯಮಾವಿಶತ್।
03190031B ತೇ ಭೀತಾ ಮಂಡೂಕರಾಜ್ಞೇ ಯಥಾವೃತ್ತಂ ನ್ಯವೇದಯನ್।
ಆಗ ಘೋರವಾದ ಮಂಡೂಕವಧ ಕ್ರಿಯೆಯು ದಿಕ್ಕುಗಳಲ್ಲಿ ನಡೆಯಲು ಎಲ್ಲ ಮಂಡೂಕಗಳಿಗೂ ಭಯವು ಆವರಿಸಿತು. ಅವುಗಳು ಮಂಡೂಕರಾಜನಲ್ಲಿಗೆ ಹೋಗಿ ನಡೆದುದನ್ನು ನಿವೇದಿಸಿದವು.
03190032A ತತೋ ಮಂಡೂಕರಾಟ್ತಾಪಸವೇಷಧಾರೀ ರಾಜಾನಮಭ್ಯಗಚ್ಚತ್।
03190033A ಉಪೇತ್ಯ ಚೈನಮುವಾಚ।
03190033B ಮಾ ರಾಜನ್ಕ್ರೋಧವಶಂ ಗಮಃ।
03190033C ಪ್ರಸಾದಂ ಕುರು।
03190033d ನಾರ್ಹಸಿ ಮಂಡೂಕಾನಾಮನಪರಾಧಿನಾಂ ವಧಂ ಕರ್ತುಮಿತಿ।
ಆಗ ಮಂಡೂಕಗಳ ರಾಜನು ತಾಪಸನ ವೇಷವನ್ನು ಧರಿಸಿ ರಾಜನಲ್ಲಿಗೆ ಆಗಮಿಸಿದನು. ಬಳಿಬಂದು ಹೇಳಿದನು: “ರಾಜನ್! ಕ್ರೋಧವಶನಾಗಬೇಡ. ಕರುಣೆ ನೀಡು. ಅನಪರಾಧಿಗಳಾದ ಮಂಡೂಕಗಳನ್ನು ಕೊಲ್ಲುವ ಕೆಲಸವು ಸಲ್ಲದು.”
03190034A ಶ್ಲೋಕೌ ಚಾತ್ರ ಭವತಃ।
03190034a ಮಾ ಮಂಡೂಕಾಂ ಜಿಘಾಂಸ ತ್ವಂ ಕೋಪಂ ಸಂಧಾರಯಾಚ್ಯುತ।
03190034c ಪ್ರಕ್ಷೀಯತೇ ಧನೋದ್ರೇಕೋ ಜನಾನಾಮವಿಜಾನತಾಂ।।
ಇದರ ಕುರಿತು ಎರಡು ಶ್ಲೋಕಗಳಿವೆ: ಅಚ್ಯುತ! ಮಂಡೂಕಗಳನ್ನು ಕೊಲ್ಲಬೇಡ! ಕೋಪವನ್ನು ಸಹಿಸಿಕೋ! ಅಜ್ಞಾನಿಗಳಾಗಿಯೇ ಇರುವ ಜನರ ಧನವು ಕ್ಷೀಣವಾಗುತ್ತದೆ.
03190035a ಪ್ರತಿಜಾನೀಹಿ ನೈತಾಂಸ್ತ್ವಂ ಪ್ರಾಪ್ಯ ಕ್ರೋಧಂ ವಿಮೋಕ್ಷ್ಯಸೇ।
03190035c ಅಲಂ ಕೃತ್ವಾ ತವಾಧರ್ಮಂ ಮಂಡೂಕೈಃ ಕಿಂ ಹತೈರ್ಹಿ ತೇ।।
ಅವರನ್ನು ನೋಡಿದಾಗಲೆಲ್ಲ ನೀನು ಅವರಮೇಲಿನ ನಿನ್ನ ಕ್ರೋಧವನ್ನು ತೊರೆಯುತ್ತೀಯೆ ಎಂದು ಭರವಸೆಯನ್ನು ನೀಡು. ಶುರುಮಾಡಿದ ಅಧರ್ಮವನ್ನು ನಿಲ್ಲಿಸು! ಸತ್ತ ಮಂಡೂಕಗಳಿಂದ ನಿನಗೇನು ಪ್ರಯೋಜನ?”
03190036A ತಮೇವಂವಾದಿನಮಿಷ್ಟಜನಶೋಕಪರೀತಾತ್ಮಾ ರಾಜಾ ಪ್ರೋವಾಚ।
03190036B ನ ಹಿ ಕ್ಷಮ್ಯತೇ ತನ್ಮಯಾ।
03190036C ಹನಿಷ್ಯಾಮ್ಯೇತಾನ್।
03190036d ಏತೈರ್ದುರಾತ್ಮಭಿಃ ಪ್ರಿಯಾ ಮೇ ಭಕ್ಷಿತಾ।
03190036e ಸರ್ವಥೈವ ಮೇ ವಧ್ಯಾ ಮಂಡೂಕಾಃ।
03190036F ನಾರ್ಹಸಿ ವಿದ್ವನ್ಮಾಮುಪರೋದ್ಧುಮಿತಿ।
ತನ್ನ ಪ್ರಿಯೆಯ ಕುರಿತು ಶೋಕಪರೀತಾತ್ಮನಾಗಿದ್ದ ರಾಜನು ಅವನಿಗೆ ಹೇಳಿದನು: “ನಾನು ಇದನ್ನು ಕ್ಷಮಿಸಲಾರೆ! ಅವರನ್ನು ಕೊಲ್ಲುತ್ತೇನೆ. ಈ ದುರಾತ್ಮರೇ ನನ್ನ ಪ್ರಿಯೆಯನ್ನು ತಿಂದಿದ್ದಾರೆ. ಮಂಡೂಕಗಳು ಸರ್ವಥಾ ನನ್ನಿಂದ ವಧಿಸಲ್ಪಡುತ್ತವೆ. ವಿದ್ವನ್! ಇದರ ಕುರಿತು ನನ್ನನ್ನು ತಡೆಯುವುದು ಸರಿಯಲ್ಲ.”
03190037A ಸ ತದ್ವಾಕ್ಯಮುಪಲಭ್ಯ ವ್ಯಥಿತೇಂದ್ರಿಯಮನಾಃ ಪ್ರೋವಾಚ।
03190037B ಪ್ರಸೀದ ರಾಜನ್।
03190037C ಅಹಮಾಯುರ್ನಾಮ ಮಂಡೂಕರಾಜಃ।
03190037d ಮಮ ಸಾ ದುಹಿತಾ ಸುಶೋಭನಾ ನಾಮ।
03190037e ತಸ್ಯಾ ದೌಃಶೀಲ್ಯಮೇತತ್।
03190037F ಬಹವೋ ಹಿ ರಾಜಾನಸ್ತಯಾ ವಿಪ್ರಲಬ್ಧಪೂರ್ವಾ ಇತಿ।
ಆ ವಾಕ್ಯಗಳನ್ನು ಕೇಳಿದ ಅವನು ವ್ಯಥಿತೇಂದ್ರಿಯನಾಗಿ ಉತ್ತರಿಸಿದನು: “ಕರುಣೆ ತೋರು ರಾಜನ್! ನಾನು ಆಯು ಎಂಬ ಹೆಸರಿನ ಮಂಡೂಕರಾಜ. ನನ್ನ ಮಗಳು ಸುಶೋಭನ ಎಂಬ ಹೆಸರಿನವಳೇ ಅವಳು. ಅವಳಿಗೆ ಈ ದುಷ್ಟ ನಡವಳಿಕೆಯಿದೆ. ಈ ಹಿಂದೆಯೂ ಕೂಡ ಬಹಳ ರಾಜರನ್ನು ಈ ರೀತಿ ಮೋಸಮಾಡಿದ್ದಾಳೆ.”
03190038A ತಮಬ್ರವೀದ್ರಾಜಾ।
03190038B ತಯಾಸ್ಮ್ಯರ್ಥೀ।
03190038C ಸಾ ಮೇ ದೀಯತಾಮಿತಿ।
ಆಗ ರಾಜನು ಹೇಳಿದನು: “ನನಗೆ ಅವಳು ಬೇಕು. ಅವಳನ್ನು ನನಗೆ ಕೊಡು!”
03190039A ಅಥೈನಾಂ ರಾಜ್ಞೇ ಪಿತಾದಾತ್।
03190039B ಅಬ್ರವೀಚ್ಚೈನಾಂ।
03190039C ಏನಂ ರಾಜಾನಂ ಶುಶ್ರೂಷಸ್ವೇತಿ।
ಆಗ ತಂದೆಯು ಅವಳನ್ನು ರಾಜನಿಗೆ ಕೊಟ್ಟು “ಈ ರಾಜನ ಶುಶ್ರೂಷೆಮಾಡು” ಎಂದು ಹೇಳಿದನು.
03190040A ಸ ಉವಾಚ ದುಹಿತರಂ।
03190040B ಯಸ್ಮಾತ್ತ್ವಯಾ ರಾಜಾನೋ ವಿಪ್ರಲಬ್ಧಾಸ್ತಸ್ಮಾದಬ್ರಹ್ಮಣ್ಯಾನಿ
ತವಾಪತ್ಯಾನಿ ಭವಿಷ್ಯಂತ್ಯನೃತಕತ್ವಾತ್ತವೇತಿ।
ಅವನು ತನ್ನ ಮಗಳಿಗೆ ಹೇಳಿದನು: “ನೀನು ರಾಜರನ್ನು ಮೋಸಗೊಳಿಸಿರುವುದರಿಂದ, ನಿನ್ನ ಈ ದುಷ್ಕೃತದಿಂದ ನಿನ್ನಲ್ಲಿ ಹುಟ್ಟುವ ಮಕ್ಕಳು ಅಬ್ರಾಹ್ಮಣರಾಗುತ್ತಾರೆ.”
03190041A ಸ ಚ ರಾಜಾ ತಾಮುಪಲಭ್ಯ ತಸ್ಯಾಂ ಸುರತಗುಣನಿಬದ್ಧಹೃದಯೋ ಲೋಕತ್ರಯೈಶ್ವರ್ಯಮಿವೋಪಲಭ್ಯ ಹರ್ಷಬಾಷ್ಪಕಲಯಾ ವಾಚಾ ಪ್ರಣಿಪತ್ಯಾಭಿಪೂಜ್ಯ ಮಂಡೂಕರಾಜಾನಮಬ್ರವೀತ್।
03190041B ಅನುಗೃಹೀತೋಽಸ್ಮೀತಿ।
ಆ ರಾಜನು ಅವಳನ್ನು ಪಡೆದು ಅವಳೊಡನೆ ಸುರತಗುಣನಿಬದ್ಧ ಹೃದಯನಾಗಿ, ಲೋಕತ್ರಯಗಳ ಐಶ್ವರ್ಯವನ್ನೇ ಪಡೆದಷ್ಟು ಹರ್ಷಿತನಾಗಿ, ಗದ್ಗದ ಕಂಠನಾಗಿ, ಕೈಮುಗಿದು, ಪೂಜಿಸಿ, ಮಂಡೂಕರಾಜನಿಗೆ “ಅನುಗೃಹೀತನಾಗಿದ್ದೇನೆ” ಎಂದು ಹೇಳಿದನು.
03190042A ಸ ಚ ಮಂಡೂಕರಾಜೋ ಜಾಮಾತರಮನುಜ್ಞಾಪ್ಯ ಯಥಾಗತಮಗಚ್ಚತ್।
ಮಂಡೂಕರಾಜನು ತನ್ನ ಅಳಿಯನನ್ನು ಬೀಳ್ಕೊಂಡು ಎಲ್ಲಿಂದ ಬಂದಿದ್ದನೋ ಅಲ್ಲಿಗೆ ತೆರಳಿದನು.
03190043A ಅಥ ಕಸ್ಯ ಚಿತ್ಕಾಲಸ್ಯ ತಸ್ಯಾಂ ಕುಮಾರಾಸ್ತ್ರಯಸ್ತಸ್ಯ ರಾಜ್ಞಃ ಸಂಬಭೂವುಃ ಶಲೋ ದಲೋ ಬಲಶ್ಚೇತಿ।
03190043B ತತಸ್ತೇಷಾಂ ಜ್ಯೇಷ್ಠಂ ಶಲಂ ಸಮಯೇ ಪಿತಾ ರಾಜ್ಯೇಽಭಿಷಿಚ್ಯ ತಪಸಿ ಧೃತಾತ್ಮಾ ವನಂ ಜಗಾಮ।
ಆಗ ಕೆಲವು ಕಾಲದಲ್ಲಿ ಅವಳಲ್ಲಿ ರಾಜನಿಗೆ ಮೂವರು ಕುಮಾರರು ಜನಿಸಿದರು - ಶಲ, ದಲ ಮತ್ತು ಬಲರೆಂದು. ಅವರಲ್ಲಿ ಹಿರಿಯವನಾದ ಶಲನಿಗೆ ಸಮಯದಲ್ಲಿ ರಾಜ್ಯಾಬಿಷೇಕವನ್ನು ಮಾಡಿ ತಂದೆಯು ಧೃತಾತ್ಮನಾಗಿ ವನಕ್ಕೆ ತೆರಳಿದನು.
03190044A ಅಥ ಕದಾ ಚಿಚ್ಛಲೋ ಮೃಗಯಾಮಚರತ್।
03190044B ಮೃಗಂ ಚಾಸಾದ್ಯ ರಥೇನಾನ್ವಧಾವತ್।
ಈ ಶಾಲನು ಒಮ್ಮೆ ಬೇಟೆಗೆಂದು ಹೋದನು. ಜಿಂಕೆಯೊಂದನ್ನು ಕಂಡು ಅದನ್ನು ರಥದ ಮೇಲೆ ಕುಳಿತು ಬೆನ್ನತ್ತಿದನು.
03190045A ಸೂತಂ ಚೋವಾಚ।
03190045B ಶೀಘ್ರಂ ಮಾಂ ವಹಸ್ವೇತಿ।
ಅವನು ಸೂತನಿಗೆ ಶೀಘ್ರವಾಗಿ ನನ್ನನ್ನು ತೆಗೆದುಕೊಂಡು ಹೋಗು ಎಂದು ಹೇಳಿದನು.
03190046A ಸ ತಥೋಕ್ತಃ ಸೂತೋ ರಾಜಾನಮಬ್ರವೀತ್।
03190046B ಮಾ ಕ್ರಿಯತಾಮನುಬಂಧಃ।
03190046C ನೈಷ ಶಕ್ಯಸ್ತ್ವಯಾ ಮೃಗೋ ಗ್ರಹೀತುಂ ಯದ್ಯಪಿ ತೇ ರಥೇ ಯುಕ್ತೌ ವಾಮ್ಯೌ ಸ್ಯಾತಾಮಿತಿ।
ಹೀಗೆ ಹೇಳಲು ಸೂತನು ರಾಜನಿಗೆ ಹೇಳಿದನು: “ಒತ್ತಾಯವನ್ನು ಮಾಡಬೇಡ! ನಿನ್ನ ರಥಕ್ಕೆ ವಾಮ್ಯ ಕುದುರೆಗಳನ್ನು ಕಟ್ಟಿದ್ದರೂ ಈ ಜಿಂಕೆಯನ್ನು ಹಿಡಿಯಲು ನಿನ್ನಿಂದ ಆಗುವುದಿಲ್ಲ.”
03190047A ತತೋಽಬ್ರವೀದ್ರಾಜಾ ಸೂತಂ।
03190047B ಆಚಕ್ಷ್ವ ಮೇ ವಾಮ್ಯೌ।
03190047C ಹನ್ಮಿ ವಾ ತ್ವಾಮಿತಿ।
ಆಗ ರಾಜನು ಸೂತನಿಗೆ ಹೇಳಿದನು: “ನನಗೆ ವಾಮ್ಯಗಳ ಕುರಿತು ಹೇಳು. ಇಲ್ಲವಾದರೆ ನಾನು ನಿನ್ನನ್ನು ಕೊಲ್ಲುತ್ತೇನೆ!”
03190048A ಸ ಏವಮುಕ್ತೋ ರಾಜಭಯಭೀತೋ ವಾಮದೇವಶಾಪಭೀತಶ್ಚ ಸನ್ನಾಚಖ್ಯೌ ರಾಜ್ಞೇ।
03190048B ವಾಮದೇವಸ್ಯಾಶ್ವೌ ವಾಮ್ಯೌ ಮನೋಜವಾವಿತಿ।
ಹೀಗೆ ಹೇಳಲು ರಾಜಭಯದಿಂದ ಮತ್ತು ವಾಮದೇವನ ಶಾಪದ ಭಯದಿಂದಲೂ ಅವನು ರಾಜನಿಗೆ “ವಾಮದೇವನ ಕುದುರೆಗಳು ಮನೋವೇಗದ ವಾಮ್ಯಗಳು” ಎಂದು ಹೇಳಿದನು.
03190049A ಅಥೈನಮೇವಂ ಬ್ರುವಾಣಮಬ್ರವೀದ್ರಾಜಾ।
03190049B ವಾಮದೇವಾಶ್ರಮಂ ಯಾಹೀತಿ।
ಆಗ ರಾಜನು ಅವನಿಗೆ ಹೇಳಿದನು: “ವಾಮದೇವನ ಆಶ್ರಮಕ್ಕೆ ಕರೆದೊಯ್ಯಿ!”
03190050A ಸ ಗತ್ವಾ ವಾಮದೇವಾಶ್ರಮಂ ತಮೃಷಿಮಬ್ರವೀತ್।
03190050B ಭಗವನ್ಮೃಗೋ ಮಯಾ ವಿದ್ಧಃ ಪಲಾಯತೇ।
03190050C ತಂ ಸಂಭಾವಯೇಯಂ।
03190050d ಅರ್ಹಸಿ ಮೇ ವಾಮ್ಯೌ ದಾತುಮಿತಿ।
ವಾಮದೇವನ ಆಶ್ರಮಕ್ಕೆ ಹೋಗಿ ಅವನು ಋಷಿಗೆ ಹೇಳಿದನು: “ಭಗವನ್! ನಾನು ಹೊಡೆದ ಜಿಂಕೆಯೊಂದು ಓಡಿಹೋಯಿತು. ನಾನು ಅದನ್ನು ಪಡೆಯಬೇಕು. ದಯವಿಟ್ಟು ನನಗೆ ವಾಮ್ಯಗಳನ್ನು ಕೊಡಬೇಕು.”
03190051A ತಮಬ್ರವೀದೃಷಿಃ।
03190051B ದದಾನಿ ತೇ ವಾಮ್ಯೌ।
03190051C ಕೃತಕಾರ್ಯೇಣ ಭವತಾ ಮಮೈವ ನಿರ್ಯಾತ್ಯೌ ಕ್ಷಿಪ್ರಮಿತಿ।
ಅವನಿಗೆ ಋಷಿಯು ಹೇಳಿದನು: “ನಿನಗೆ ವಾಮ್ಯಗಳನ್ನು ಕೊಡುತ್ತೇನೆ. ನಿನ್ನ ಕಾರ್ಯವಾದ ತಕ್ಷಣವೇ ನನಗೆ ಅವುಗಳನ್ನು ಹಿಂದಿರುಗಿಸು.”
03190052A ಸ ಚ ತಾವಶ್ವೌ ಪ್ರತಿಗೃಃಯಾನುಜ್ಞಾಪ್ಯ ಚರ್ಷಿಂ ಪ್ರಾಯಾದ್ವಾಮ್ಯಸಮ್ಯುಕ್ತೇನ ರಥೇನ ಮೃಗಂ ಪ್ರತಿ।
03190052C ಗಚ್ಚಂಶ್ಚಾಬ್ರವೀತ್ಸೂತಂ।
03190052d ಅಶ್ವರತ್ನಾವಿಮಾವಯೋಗ್ಯೌ ಬ್ರಾಹ್ಮಣಾನಾಂ।
03190052e ನೈತೌ ಪ್ರತಿದೇಯೌ ವಾಮದೇವಾಯೇತಿ।
ಅವನು ಎರಡೂ ಕುದುರೆಗಳನ್ನೂ ತೆಗೆದುಕೊಂಡು, ಋಷಿಯನ್ನು ಬೀಳ್ಕೊಂಡು, ವ್ಯಾಮ್ಯಗಳನ್ನು ಕಟ್ಟಿದ ತನ್ನ ರಥದ ಮೇಲೆ ಮೃಗವನ್ನು ಹಿಂಬಾಲಿಸಿ ಹೋದನು. ಹೋಗುತ್ತಿರುವಾಗ ತನ್ನ ಸಾರಥಿಗೆ ಹೇಳಿದನು: “ಈ ಕುದುರೆಗಳು ರತ್ನಗಳು! ಇವು ಬ್ರಾಹ್ಮಣನಿಗೆ ಅಯೋಗ್ಯವು. ನಾನು ಇವುಗಳನ್ನು ವಾಮದೇವನಿಗೆ ಹಿಂದಿರುಗಿಸುವುದಿಲ್ಲ.”
03190053A ಏವಮುಕ್ತ್ವಾ ಮೃಗಮವಾಪ್ಯ ಸ್ವನಗರಮೇತ್ಯಾಶ್ವಾವಂತಃಪುರೇಽಸ್ಥಾಪಯತ್।
03190054A ಅಥರ್ಷಿಶ್ಚಿಂತಯಾಮಾಸ।
03190054B ತರುಣೋ ರಾಜಪುತ್ರಃ ಕಲ್ಯಾಣಂ ಪತ್ರಮಾಸಾದ್ಯ ರಮತೇ।
03190054C ನ ಮೇ ಪ್ರತಿನಿರ್ಯಾತಯತಿ।
03190054d ಅಹೋ ಕಷ್ಟಮಿತಿ।
ಹೀಗೆ ಹೇಳಿ, ಜಿಂಕೆಯನ್ನು ಹಿಡಿದು, ಸ್ವನಗರಕ್ಕೆ ತೆರಳಿ ಅಶ್ವಗಳನ್ನು ಅಂತಃಪುರದಲ್ಲಿ ಇರಿಸಿದನು. ಈಗ ಆ ಮಹರ್ಷಿಯು ಚಿಂತಿಸಿದನು: “ಈ ತರುಣ ರಾಜಪುತ್ರನು ಈ ಸುಂದರ ಕುದುರೆಗಳನ್ನು ಪಡೆದು ಖುಷಿಪಡುತ್ತಿದ್ದಾನೆ. ನನಗೆ ಅವನು ಅವುಗಳನ್ನು ಹಿಂದಿರುಗಿಸುವುದಿಲ್ಲ. ಇದೊಂದು ಕಷ್ಟವಾಯಿತಲ್ಲ!”
03190055A ಮನಸಾ ನಿಶ್ಚಿತ್ಯ ಮಾಸಿ ಪೂರ್ಣೇ ಶಿಷ್ಯಮಬ್ರವೀತ್।
03190055B ಗಚ್ಚಾತ್ರೇಯ।
03190055C ರಾಜಾನಂ ಬ್ರೂಹಿ।
03190055d ಯದಿ ಪರ್ಯಾಪ್ತಂ ನಿರ್ಯಾತಯೋಪಾಧ್ಯಾಯವಾಮ್ಯಾವಿತಿ।
ಮನಸ್ಸಿನಲ್ಲಿ ನಿಶ್ಚಯಿಸಿ ತಿಂಗಳು ಪೂರ್ಣವಾದಾಗ ಶಿಷ್ಯನಿಗೆ ಹೇಳಿದನು: “ಅತ್ರೇಯ! ಹೋಗು! ರಾಜನಿಗೆ ಹೇಳು. ಕಾರ್ಯ ಮುಗಿದಿದೆಯಾದರೆ ವಾಮ್ಯಗಳನ್ನು ಉಪಾಧ್ಯಾಯನಿಗೆ ಹಿಂದಿರುಗಿಸು.”
03190056A ಸ ಗತ್ವೈವಂ ತಂ ರಾಜಾನಮಬ್ರವೀತ್।
ಅವನು ಅಲ್ಲಿಗೆ ಹೋಗಿ ಇದನ್ನು ರಾಜನಿಗೆ ಹೇಳಿದನು.
03190057A ತಂ ರಾಜಾ ಪ್ರತ್ಯುವಾಚ।
03190057B ರಾಜ್ಞಾಮೇತದ್ವಾಹನಂ।
03190057C ಅನರ್ಹಾ ಬ್ರಾಹ್ಮಣಾ ರತ್ನಾನಾಮೇವಂವಿಧಾನಾಂ।
03190057d ಕಿಂ ಚ ಬ್ರಾಹ್ಮಣಾನಾಮಶ್ವೈಃ ಕಾರ್ಯಂ।
03190057e ಸಾಧು ಪ್ರತಿಗಮ್ಯತಾಮಿತಿ।
ಅವನಿಗೆ ರಾಜನು ಉತ್ತರಿಸಿದನು. “ಇದು ರಾಜನ ವಾಹನ. ಈ ರತ್ನವನ್ನು ಇಟ್ಟುಕೊಳ್ಳಲು ಬ್ರಾಹ್ಮಣರು ಅನರ್ಹರು. ನೀನು ಹಿಂದಿರುಗಿದರೆ ಒಳ್ಳೆಯದು.”
03190058A ಸ ಗತ್ವೈವಮುಪಾಧ್ಯಾಯಾಯಾಚಷ್ಟ।
ಅವನು ಹೋಗಿ ಉಪಾಧ್ಯಾಯನಿಗೆ ಎಲ್ಲವನ್ನೂ ಹೇಳಿದನು.
03190059A ತಚ್ಛೃತ್ವಾ ವಚನಮಪ್ರಿಯಂ ವಾಮದೇವಃ ಕ್ರೋಧಪರೀತಾತ್ಮಾ ಸ್ವಯಮೇವ ರಾಜಾನಮಭಿಗಮ್ಯಾಶ್ವಾರ್ಥಮಭ್ಯಚೋದಯತ್।
03190059B ನ ಚಾದಾದ್ರಾಜಾ।
ಆ ಅಪ್ರಿಯ ಮಾತನ್ನು ಕೇಳಿ ವಾಮದೇವನು ಕ್ರೋಧಿತನಾಗಿ ಅಶ್ವಗಳಿಗೋಸ್ಕರ ಸ್ವಯಂ ತಾನೇ ರಾಜನಲ್ಲಿಗೆ ಹೋಗಿ ಕೇಳಿದನು. ರಾಜನು ನಿರಾಕರಿಸಿದನು.
03190060 ವಾಮದೇವ ಉವಾಚ।
03190060a ಪ್ರಯಚ್ಚ ವಾಮ್ಯೌ ಮಮ ಪಾರ್ಥಿವ ತ್ವಂ। ಕೃತಂ ಹಿ ತೇ ಕಾರ್ಯಮನ್ಯೈರಶಕ್ಯಂ।
03190060c ಮಾ ತ್ವಾ ವಧೀದ್ವರುಣೋ ಘೋರಪಾಶೈರ್। ಬ್ರಹ್ಮಕ್ಷತ್ರಸ್ಯಾಂತರೇ ವರ್ತಮಾನಃ।।
ವಾಮದೇವನು ಹೇಳಿದನು: “ಪಾರ್ಥಿವ! ನನಗೆ ವಾಮ್ಯಗಳನ್ನು ಕೊಡು. ಅನ್ಯರು ಮಾಡದಂಥಹುದನ್ನು ನೀನು ಮಾಡಿದ್ದೀಯೆ. ವರುಣನು ಘೋರ ಪಾಶಗಳಿಂದ ನಿನ್ನನ್ನು ವಧಿಸದಿರಲಿ. ಬ್ರಾಹ್ಮಣ ಮತ್ತು ಕ್ಷತ್ರಿಯರನ್ನು ಒಡೆಯುತ್ತಿದ್ದೀಯೆ.”
03190061 ರಾಜೋವಾಚ।
03190061a ಅನಡ್ವಾಹೌ ಸುವ್ರತೌ ಸಾಧು ದಾಂತಾವ್। ಏತದ್ವಿಪ್ರಾಣಾಂ ವಾಹನಂ ವಾಮದೇವ।
03190061c ತಾಭ್ಯಾಂ ಯಾಹಿ ತ್ವಂ ಯತ್ರ ಕಾಮೋ ಮಹರ್ಷೇ। ಚಂದಾಂಸಿ ವೈ ತ್ವಾದೃಶಂ ಸಂವಹಂತಿ।।
ರಾಜನು ಹೇಳಿದನು: “ವಾಮದೇವ! ವಿಪ್ರರಿಗೆ ವಾಹನವಾಗಿ ಈ ಎರಡು ತರಬೇತಿಹೊಂದಿದ ಸಾಧು ಎತ್ತುಗಳೇ ಲೇಸು. ಮಹರ್ಷೇ! ಇವೆರಡರಿಂದ ನಿನಗೆಲ್ಲಿಬೇಕೋ ಅಲ್ಲಿ ಹೋಗು. ನನ್ನಂತವರಾದ ಬೇರೆ ಯಾರಲ್ಲಿ ಬೇಕಾದರೂ ಇವು ಕೊಂಡೊಯ್ಯುತ್ತವೆ.”
03190062 ವಾಮದೇವ ಉವಾಚ।
03190062a ಚಂದಾಂಸಿ ವೈ ಮಾದೃಶಂ ಸಂವಹಂತಿ। ಲೋಕೇಽಮುಷ್ಮಿನ್ಪಾರ್ಥಿವ ಯಾನಿ ಸಂತಿ।
03190062c ಅಸ್ಮಿಂಸ್ತು ಲೋಕೇ ಮಮ ಯಾನಮೇತದ್। ಅಸ್ಮದ್ವಿಧಾನಾಮಪರೇಷಾಂ ಚ ರಾಜನ್।।
ವಾಮದೇವನು ಹೇಳಿದನು: “ನನ್ನಂಥವರನ್ನು ವೇದಗಳು ಕೊಂಡೊಯ್ಯುತ್ತವೆ. ಆದರೆ ಪಾರ್ಥಿವ! ಅವು ಈ ಲೋಕದಿಂದ ಕೊಂಡೊಯ್ಯುತ್ತವೆ. ಈ ಲೋಕದಲ್ಲಿ ಇವೇ ನನ್ನ ವಾಹನಗಳು. ರಾಜನ್! ನನ್ನಂಥ ಅನ್ಯರದ್ದು ಕೂಡ ಇವೇ ವಾಹನಗಳು.”
03190063 ರಾಜೋವಾಚ।
03190063a ಚತ್ವಾರೋ ವಾ ಗರ್ದಭಾಸ್ತ್ವಾಂ ವಹಂತು। ಶ್ರೇಷ್ಠಾಶ್ವತರ್ಯೋ ಹರಯೋ ವಾ ತುರಂಗಾಃ।
03190063c ತೈಸ್ತ್ವಂ ಯಾಹಿ ಕ್ಷತ್ರಿಯಸ್ಯೈಷ ವಾಹೋ। ಮಮ ವಾಮ್ಯೌ ನ ತವೈತೌ ಹಿ ವಿದ್ಧಿ।।
ರಾಜನು ಹೇಳಿದನು: “ನಿನ್ನನ್ನು ನಾಲ್ಕು ಕತ್ತೆಗಳು, ಅಥವಾ ಶ್ರೇಷ್ಠ ಕುದುರೆಗಳು ಅಥವಾ ಹರಿ ತುರಂಗಗಳು ಕೊಂಡೊಯ್ಯಲಿ. ಅವುಗಳನ್ನು ಹೊಡೆದುಕೊಂಡು ಹೋಗು. ಆದರೆ ಈ ವಾಮ್ಯಗಳು ಕ್ಷತ್ರಿಯನವು. ನೋಡು. ನನ್ನಂತೆ ಅವುಗಳು ನಿನ್ನದಾಗಲಾರವು.”
03190064 ವಾಮದೇವ ಉವಾಚ।
03190064a ಘೋರಂ ವ್ರತಂ ಬ್ರಾಹ್ಮಣಸ್ಯೈತದಾಹುರ್। ಏತದ್ರಾಜನ್ಯದಿಹಾಜೀವಮಾನಃ।
03190064c ಅಯಸ್ಮಯಾ ಘೋರರೂಪಾ ಮಹಾಂತೋ। ವಹಂತು ತ್ವಾಂ ಶಿತಶೂಲಾಶ್ಚತುರ್ಧಾ।।
ವಾಮದೇವನು ಹೇಳಿದನು: “ಬ್ರಾಹ್ಮಣನ ವ್ರತವು ಘೋರವೆಂದು ಹೇಳುತ್ತಾರೆ. ರಾಜನ್! ನಾನು ಇಲ್ಲಿ ಈ ವ್ರತದಲ್ಲಿ ಜೀವಿಸಿರುವೆನಾದರೆ, ಈಗಲೇ ಘೋರರೂಪರೂ ಮಹಾಕಾಯರೂ ಆದವರು ನಿನ್ನ ಮೇಲೆ ನಾಲ್ಕೂ ಕಡೆಗಳಿಂದ ಹರಿತ ಶೂಲಗಳನ್ನು ಪ್ರಹಾರಮಾಡುತ್ತಾರೆ.”
03190065 ರಾಜೋವಾಚ।
03190065a ಯೇ ತ್ವಾ ವಿದುರ್ಬ್ರಾಹ್ಮಣಂ ವಾಮದೇವ। ವಾಚಾ ಹಂತುಂ ಮನಸಾ ಕರ್ಮಣಾ ವಾ।
03190065c ತೇ ತ್ವಾಂ ಸಶಿಷ್ಯಮಿಹ ಪಾತಯಂತು। ಮದ್ವಾಕ್ಷನುನ್ನಾಃ ಶಿತಶೂಲಾಸಿಹಸ್ತಾಃ।।
ರಾಜನು ಹೇಳಿದನು: “ಬ್ರಾಹ್ಮಣ ವಾಮದೇವ! ನೀನು ಮಾತಿನಿಂದ, ಮನಸ್ಸಿನಿಂದ, ಅಥವಾ ಕಾರ್ಯದಿಂದ ಕೊಲ್ಲುವೆಯೆಂದಾದರೆ, ನನ್ನ ಆಜ್ಞೆಯಂತೆ ಅವರು ನಿನ್ನನ್ನೂ ನಿನ್ನ ಶಿಷ್ಯರನ್ನೂ ಹರಿತ ಶೂಲಗಳಿಂದ ಇರಿಯಲಿ.”
03190066 ವಾಮದೇವ ಉವಾಚ।
03190066a ನಾನುಯೋಗಾ ಬ್ರಾಹ್ಮಣಾನಾಂ ಭವಂತಿ। ವಾಚಾ ರಾಜನ್ಮನಸಾ ಕರ್ಮಣಾ ವಾ।
03190066c ಯಸ್ತ್ವೇವಂ ಬ್ರಹ್ಮ ತಪಸಾನ್ವೇತಿ ವಿದ್ವಾಂಸ್। ತೇನ ಶ್ರೇಷ್ಠೋ ಭವತಿ ಹಿ ಜೀವಮಾನಃ।।
ವಾಮದೇವನು ಹೇಳಿದನು: “ರಾಜನ್! ಮಾತಿನಿಂದ, ಮನಸ್ಸಿನಿಂದ ಅಥವಾ ಕಾರ್ಯದಿಂದ ಬ್ರಾಹ್ಮಣರನ್ನು ಪ್ರಶ್ನಿಸಬಾರದು. ತಪಸ್ಸಿನಿಂದ ಬ್ರಹ್ಮನನ್ನು ತಲುಪಿದ ಬ್ರಾಹ್ಮಣನು ಎಷ್ಟೇ ಶ್ರೇಷ್ಠನಾಗಿರಲಿ ಅವನ ಸೊಕ್ಕನ್ನು ಮುರಿಯಬಲ್ಲ.””
03190067 ಮಾರ್ಕಂಡೇಯ ಉವಾಚ।
03190067a ಏವಮುಕ್ತೇ ವಾಮದೇವೇನ ರಾಜನ್। ಸಮುತ್ತಸ್ಥೂ ರಾಕ್ಷಸಾ ಘೋರರೂಪಾಃ।
03190067c ತೈಃ ಶೂಲಹಸ್ತೈರ್ವಧ್ಯಮಾನಃ ಸ ರಾಜಾ। ಪ್ರೋವಾಚೇದಂ ವಾಕ್ಷಮುಚ್ಚೈಸ್ತದಾನೀಂ।।
ಮಾರ್ಕಂಡೇಯನು ಹೇಳಿದನು: “ರಾಜನ್! ವಾಮದೇವನು ಹೀಗೆ ಹೇಳಲು ಘೋರರೂಪಿ ರಾಕ್ಷಸರು ಉದ್ಭವಿಸಿದರು. ಅವರು ಶೂಲದಿಂದ ರಾಜನನ್ನು ಹೊಡೆಯಲು ಅವನು ಉಚ್ಛಸ್ವರದಲ್ಲಿ ಇದನ್ನು ಕೂಗಿ ಹೇಳಿದನು.
03190068a ಇಕ್ಷ್ವಾಕವೋ ಯದಿ ಬ್ರಹ್ಮನ್ದಲೋ ವಾ। ವಿಧೇಯಾ ಮೇ ಯದಿ ವಾನ್ಯೇ ವಿಶೋಽಪಿ।
03190068c ನೋತ್ಸ್ರಕ್ಷ್ಯೇಽಹಂ ವಾಮದೇವಸ್ಯ ವಾಮ್ಯೌ। ನೈವಂವಿಧಾ ಧರ್ಮಶೀಲಾ ಭವಂತಿ।।
“ಬ್ರಹ್ಮನ್! ಇಕ್ಷ್ವಾಕುಗಳು ಅಥವಾ ದಲ ಅಥವಾ ಅನ್ಯ ಜನರು ನನಗೆ ವಿಧೇಯರಾಗಿದ್ದಾರೆಂದರೆ, ನಾನು ವಾಮದೇವನ ವಾಮ್ಯಗಳನ್ನು ಬಿಟ್ಟು ಕೊಡುವುದಿಲ್ಲ. ಅವರು ಹೀಗೆ ಧರ್ಮಶೀಲರಾಗುವುದಿಲ್ಲ.”
03190069a ಏವಂ ಬ್ರುವನ್ನೇವ ಸ ಯಾತುಧಾನೈರ್। ಹತೋ ಜಗಾಮಾಶು ಮಹೀಂ ಕ್ಷಿತೀಶಃ।
03190069c ತತೋ ವಿದಿತ್ವಾ ನೃಪತಿಂ ನಿಪಾತಿತಂ। ಇಕ್ಷ್ವಾಕವೋ ವೈ ದಲಮಭ್ಯಷಿಂಚನ್।।
ಹೀಗೆ ಹೇಳುತ್ತಿರುವಾಗಲೇ ಕ್ಷಿತೀಶನನ್ನು ಆ ರಾಕ್ಷಸರು ಹೊಡೆದು ಭೂಮಿಯ ಮೇಲೆ ಬೀಳಿಸಿದರು. ಆಗ ರಾಜನು ಕೆಳಗುರುಳಿದ್ದುದನ್ನು ತಿಳಿದು ಇಕ್ಷ್ವಾಕುಗಳು ದಲನನ್ನು ಅಭಿಷೇಕಿಸಿದರು.
03190070a ರಾಜ್ಯೇ ತದಾ ತತ್ರ ಗತ್ವಾ ಸ ವಿಪ್ರಃ। ಪ್ರೋವಾಚೇದಂ ವಚನಂ ವಾಮದೇವಃ।
03190070c ದಲಂ ರಾಜಾನಂ ಬ್ರಾಹ್ಮಣಾನಾಂ ಹಿ ದೇಯಂ। ಏವಂ ರಾಜನ್ಸರ್ವಧರ್ಮೇಷು ದೃಷ್ಟಂ।।
ಆಗ ರಾಜ್ಯಕ್ಕೆ ಹೋಗಿ ಆ ವಿಪ್ರ ವಾಮದೇವನು ರಾಜ ದಲನಿಗೆ ಈ ಮಾತುಗಳನ್ನಾಡಿದನು: “ರಾಜನ್! ಬ್ರಾಹ್ಮಣರಿಗೆ ಕೊಡಬೇಕೆಂದು ಸರ್ವ ಧರ್ಮಗಳಲ್ಲಿ ತೋರಿಸಿಕೊಟ್ಟಿದ್ದಾರೆ.
03190071a ಬಿಭೇಷಿ ಚೇತ್ತ್ವಮಧರ್ಮಾನ್ನರೇಂದ್ರ। ಪ್ರಯಚ್ಚ ಮೇ ಶೀಘ್ರಮೇವಾದ್ಯ ವಾಮ್ಯೌ।
03190071c ಏತಚ್ಛೃತ್ವಾ ವಾಮದೇವಸ್ಯ ವಾಕ್ಯಂ। ಸ ಪಾರ್ಥಿವಃ ಸೂತಮುವಾಚ ರೋಷಾತ್।।
ನರೇಂದ್ರ! ಅಧರ್ಮಕ್ಕೆ ನೀನು ಹೆದರುವವನಾದರೆ ಶೀಘ್ರವಾಗಿ ಇಂದೇ ನನಗೆ ವಾಮ್ಯಗಳನ್ನು ಕೊಡು!” ವಾಮದೇವನ ಈ ಮಾತನ್ನು ಕೇಳಿ ಆ ಪಾರ್ಥಿವನು ರೋಷದಿಂದ ಸೂತನಿಗೆ ಹೇಳಿದನು:
03190072a ಏಕಂ ಹಿ ಮೇ ಸಾಯಕಂ ಚಿತ್ರರೂಪಂ। ದಿಗ್ಧಂ ವಿಷೇಣಾಹರ ಸಂಗೃಹೀತಂ।
03190072c ಯೇನ ವಿದ್ಧೋ ವಾಮದೇವಃ ಶಯೀತ। ಸಂದಶ್ಯಮಾನಃ ಶ್ವಭಿರಾರ್ತರೂಪಃ।।
“ಹೋಗಿ ಇಟ್ಟಿರುವ ನನ್ನ ಚಿತ್ರರೂಪದ ಬಾಣಗಳಲ್ಲಿ ಒಂದನ್ನು ವಿಷದಲ್ಲಿ ಮುಳುಗಿಸಿ ತೆಗೆದುಕೊಂಡು ಬಾ! ಅದರಿಂದ ಚುಚ್ಚಲ್ಪಟ್ಟು ವಾಮದೇವನು ಮಲಗಿ ಆರ್ತರೂಪನಾಗಿ ನಾಯಿಗಳಿಂದ ಹರಿಯಲ್ಪಡಲಿ!”
03190073 ವಾಮದೇವ ಉವಾಚ।
03190073a ಜಾನಾಮಿ ಪುತ್ರಂ ದಶವರ್ಷಂ ತವಾಹಂ। ಜಾತಂ ಮಹಿಷ್ಯಾಂ ಶ್ಯೇನಜಿತಂ ನರೇಂದ್ರ।
03190073c ತಂ ಜಹಿ ತ್ವಂ ಮದ್ವಚನಾತ್ಪ್ರಣುನ್ನಸ್। ತೂರ್ಣಂ ಪ್ರಿಯಂ ಸಾಯಕೈರ್ಘೋರರೂಪೈಃ।।
ವಾಮದೇವನು ಹೇಳಿದನು: “ನರೇಂದ್ರ! ನಿನಗೆ ರಾಣಿಯಲ್ಲಿ ಜನಿಸಿದ ಹತ್ತುವರ್ಷ ವಯಸ್ಸಿನ ಶ್ಯೇನಜಿತುವೆಂಬ ಮಗನಿದ್ದಾನೆಂದು ತಿಳಿದಿದ್ದೇನೆ. ನನ್ನ ಮಾತಿನ ಪ್ರಭಾವದಿಂದ ನೀನು ನಿನ್ನ ಪ್ರಿಯ ಮಗನನ್ನು ಈಗ ಘೋರರೂಪದ ಬಾಣದಿಂದ ಕೊಲ್ಲುತ್ತೀಯೆ!””
03190074 ಮಾರ್ಕಂಡೇಯ ಉವಾಚ।
03190074a ಏವಮುಕ್ತೋ ವಾಮದೇವೇನ ರಾಜನ್ನ್। ಅಂತಃಪುರೇ ರಾಜಪುತ್ರಂ ಜಘಾನ।
03190074c ಸ ಸಾಯಕಸ್ತಿಗ್ಮತೇಜಾ ವಿಸೃಷ್ಟಃ। ಶ್ರುತ್ವಾ ದಲಸ್ತಚ್ಚ ವಾಕ್ಯಂ ಬಭಾಷೇ।।
ಮಾರ್ಕಂಡೇಯನು ಹೇಳಿದನು: “ರಾಜನ್! ವಾಮದೇವನು ಹೀಗೆ ಹೇಳಲು ಬಿಟ್ಟ ಅತಿವೇಗದ ಆ ಬಾಣವು ಅಂತಃಪುರದಲ್ಲಿ ರಾಜಪುತ್ರನನ್ನು ಸಂಹರಿಸಿತು. ಇದನ್ನು ಕೇಳಿ ದಲನು ಈ ಮಾತುಗಳನ್ನಾಡಿದನು.
03190075a ಇಕ್ಷ್ವಾಕವೋ ಹಂತ ಚರಾಮಿ ವಃ ಪ್ರಿಯಂ। ನಿಹನ್ಮೀಮಂ ವಿಪ್ರಮದ್ಯ ಪ್ರಮಥ್ಯ।
03190075c ಆನೀಯತಾಮಪರಸ್ತಿಗ್ಮತೇಜಾಃ। ಪಶ್ಯಧ್ವಂ ಮೇ ವೀರ್ಯಮದ್ಯ ಕ್ಷಿತೀಶಾಃ।।
“ಇಕ್ಷ್ವಾಕುಗಳೇ! ಈ ಬ್ರಾಹ್ಮಣನನ್ನು ಕೊಂದು ನಾಶಪಡಿಸಿ. ನಿಮಗೆ ಪ್ರಿಯವಾದುದನ್ನು ಮಾಡುತ್ತೇನೆ. ಹೋಗಿ ಇನ್ನೊಂದು ವೇಗವಾಗಿ ಹೋಗಬಲ್ಲ ಬಾಣವನ್ನು ತೆಗೆದುಕೊಂಡು ಬನ್ನಿ ಮತ್ತು ಕ್ಷಿತೀಶರೇ! ನನ್ನ ವೀರ್ಯವನ್ನು ಇಂದು ನೋಡಿ!”
03190076 ವಾಮದೇವ ಉವಾಚ।
03190076a ಯಂ ತ್ವಮೇನಂ ಸಾಯಕಂ ಘೋರರೂಪಂ। ವಿಷೇಣ ದಿಗ್ಧಂ ಮಮ ಸಂದಧಾಸಿ।
03190076c ನ ತ್ವಮೇನಂ ಶರವರ್ಯಂ ವಿಮೋಕ್ತುಂ। ಸಂಧಾತುಂ ವಾ ಶಕ್ಷ್ಯಸಿ ಮಾನವೇಂದ್ರ।।
ವಾಮದೇವನು ಹೇಳಿದನು: “ಮಾನವೇಂದ್ರ! ವಿಷದಲ್ಲಿ ಅದ್ದಿದ ಈ ಘೋರರೂಪಿ ಬಾಣವನ್ನು ಧನುಸ್ಸಿಗೆ ಹೂಡಿ ನನ್ನ ಮೇಲೆ ಗುರಿಯಿಟ್ಟಿದ್ದೀಯಲ್ಲಾ, ಈ ಶ್ರೇಷ್ಠ ಶರವನ್ನು ಪ್ರಯೋಗಿಸುವುದಕ್ಕಾಗಲೀ ನನಗೆ ಗುರಿಯಿಡುವುದಕ್ಕಾಗಲೀ ನೀನು ಸಮರ್ಥನಾಗುವುದಿಲ್ಲ!”
03190077 ರಾಜೋವಾಚ।
03190077a ಇಕ್ಷ್ವಾಕವಃ ಪಶ್ಯತ ಮಾಂ ಗೃಹೀತಂ। ನ ವೈ ಶಕ್ನೋಮ್ಯೇಷ ಶರಂ ವಿಮೋಕ್ತುಂ।
03190077c ನ ಚಾಸ್ಯ ಕರ್ತುಂ ನಾಶಮಭ್ಯುತ್ಸಹಾಮಿ। ಆಯುಷ್ಮಾನ್ವೈ ಜೀವತು ವಾಮದೇವಃ।।
ರಾಜನು ಹೇಳಿದನು: “ಇಕ್ಷ್ವಾಕುಗಳೇ! ನಾನು ಗರಬಡೆದಿರುವುದನ್ನು ನೋಡಿ! ಈ ಶರವನ್ನು ಪ್ರಯೋಗಿಸಲು ಅಶಕ್ಯನಾಗಿದ್ದೇನೆ! ಅವನನ್ನು ಕೊಲ್ಲಲು ನನಗೆ ಸಾಧ್ಯವಾಗುತ್ತಿಲ್ಲ. ಆಯುಷ್ಮಂತನಾಗಿರುವ ವಾಮದೇವನು ಜೀವಿಸಲಿ!”
03190078 ವಾಮದೇವ ಉವಾಚ।
03190078a ಸಂಸ್ಪೃಶೈನಾಂ ಮಹಿಷೀಂ ಸಾಯಕೇನ। ತತಸ್ತಸ್ಮಾದೇನಸೋ ಮೋಕ್ಷ್ಯಸೇ ತ್ವಂ।।
ವಾಮದೇವನು ಹೇಳಿದನು: “ಈ ಬಾಣದಿಂದ ನಿನ್ನ ರಾಣಿಯನ್ನು ಮುಟ್ಟು. ಅದರಿಂದ ನೀನು ನಿನ್ನ ಪಾಪದಿಂದ ಮುಕ್ತನಾಗುತ್ತೀಯೆ!””
03190079 ಮಾರ್ಕಂಡೇಯ ಉವಾಚ।
03190079a ತತಸ್ತಥಾ ಕೃತವಾನ್ಪಾರ್ಥಿವಸ್ತು। ತತೋ ಮುನಿಂ ರಾಜಪುತ್ರೀ ಬಭಾಷೇ।
03190079c ಯಥಾ ಯುಕ್ತಂ ವಾಮದೇವಾಹಮೇನಂ। ದಿನೇ ದಿನೇ ಸಂವಿಶಂತೀ ವ್ಯಶಂಸಂ।।
03190079e ಬ್ರಾಹ್ಮಣೇಭ್ಯೋ ಮೃಗಯಂತೀ ಸೂನೃತಾನಿ। ತಥಾ ಬ್ರಹ್ಮನ್ಪುಣ್ಯಲೋಕಂ ಲಭೇಯಂ।।
ಮಾರ್ಕಂಡೇಯನು ಹೇಳಿದನು: “ರಾಜನು ಅವನಿಗೆ ಹೇಳಿದಂತೆ ಮಾಡಿದನು. ಆಗ ರಾಜಪುತ್ರಿಯು ಮುನಿಗೆ ಹೇಳಿದಳು: “ವಾಮದೇವ! ನಾನು ನನ್ನ ಪತಿಯೊಡನೆ ಸರಿಯಾಗಿ ಮಾತನಾಡಿದ್ದರೆ, ಪ್ರತಿದಿನವು ಅವನೊಂದಿಗೇ ಮಲಗಿದ್ದರೆ, ಬ್ರಾಹ್ಮಣರಿಂದ ಆಶೀರ್ವಾದಗಳನ್ನು ಬೇಡಿದ್ದರೆ, ಬ್ರಹ್ಮನ್! ನಾನು ಪುಣ್ಯಲೋಕವನ್ನು ಪಡೆಯುವಂತಾಗಲಿ.”
03190080 ವಾಮದೇವ ಉವಾಚ।
03190080a ತ್ವಯಾ ತ್ರಾತಂ ರಾಜಕುಲಂ ಶುಭೇಕ್ಷಣೇ। ವರಂ ವೃಣೀಷ್ವಾಪ್ರತಿಮಂ ದದಾನಿ ತೇ।
03190080c ಪ್ರಶಾಧೀಮಂ ಸ್ವಜನಂ ರಾಜಪುತ್ರಿ। ಇಕ್ಷ್ವಾಕುರಾಜ್ಯಂ ಸುಮಹಚ್ಚಾಪ್ಯನಿಂದ್ಯೇ।।
ವಾಮದೇವನು ಹೇಳಿದನು: “ಶುಭೇಕ್ಷಣೇ! ನೀನು ರಾಜಕುಲವನ್ನು ಉದ್ಧರಿಸಿದ್ದೀಯೆ. ಅಪ್ರತಿಮ ವರವನ್ನು ಕೇಳು. ನಿನಗೆ ಕೊಡುತ್ತೇನೆ. ರಾಜಪುತ್ರಿ! ಅನಿಂದಿತೇ! ನಿನ್ನ ಜನರನ್ನು ಮತ್ತು ಇಕ್ಷ್ವಾಕುಗಳ ಈ ಮಹಾ ರಾಜ್ಯವನ್ನು ಆಳು.”
03190081 ರಾಜಪುತ್ರ್ಯುವಾಚ।
03190081a ವರಂ ವೃಣೇ ಭಗವನ್ನೇಕಮೇವ। ವಿಮುಚ್ಯತಾಂ ಕಿಲ್ಬಿಷಾದದ್ಯ ಭರ್ತಾ।
03190081c ಶಿವೇನ ಚಾಧ್ಯಾಹಿ ಸಪುತ್ರಬಾಂಧವಂ। ವರೋ ವೃತೋ ಹ್ಯೇಷ ಮಯಾ ದ್ವಿಜಾಗ್ರ್ಯ।।
ರಾಜಪುತ್ರಿಯು ಹೇಳಿದಳು: “ಭಗವನ್! ಒಂದೇ ಒಂದು ವರವನ್ನು ಕೇಳುತ್ತೇನೆ. ನನ್ನ ಪತಿಯು ಇಂದು ಕಿಲ್ಬಿಷದಿಂದ ಮುಕ್ತನಾಗಲಿ ಮತ್ತು ಪುತ್ರ ಬಾಂಧವರೊಡನೆ ಅವನಿಗೆ ಮಂಗಳವಾಗಲಿ. ದ್ವಿಜಾಗ್ರ! ಇದೇ ನಾನು ಕೇಳುವ ವರ!””
03190082 ಮಾರ್ಕಂಡೇಯ ಉವಾಚ।
03190082a ಶ್ರುತ್ವಾ ವಚಃ ಸ ಮುನೀ ರಾಜಪುತ್ರ್ಯಾಸ್। ತಥಾಸ್ತ್ವಿತಿ ಪ್ರಾಹ ಕುರುಪ್ರವೀರ।
03190082c ತತಃ ಸ ರಾಜಾ ಮುದಿತೋ ಬಭೂವ। ವಾಮ್ಯೌ ಚಾಸ್ಮೈ ಸಂಪ್ರದದೌ ಪ್ರಣಮ್ಯ।।
ಮಾರ್ಕಂಡೇಯನು ಹೇಳಿದನು: “ಕುರುಪ್ರವೀರ! ರಾಜಪುತ್ರಿಯ ಮಾತುಗಳನ್ನು ಕೇಳಿದ ಮುನಿಯು ಹಾಗೇ ಆಗಲೆಂದು ಹೇಳಿದನು. ಆಗ ರಾಜನು ಸಂತೋಷಗೊಂಡನು ಮತ್ತು ಅವನಿಗೆ ನಮಸ್ಕರಿಸಿ ವಾಮ್ಯಗಳನ್ನಿತ್ತನು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಮಂಡೂಕೋಪಾಖ್ಯಾನೇ ನವತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಮಂಡೂಕೋಪಾಖ್ಯಾನದಲ್ಲಿ ನೂರಾತೊಂಭತ್ತನೆಯ ಅಧ್ಯಾಯವು.