ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಯಕ್ಷಯುದ್ಧ ಪರ್ವ
ಅಧ್ಯಾಯ 164
ಸಾರ
ಅರ್ಜುನನು ಲೋಕಪಾಲರಿಂದ ಅಸ್ತ್ರಗಳನ್ನು ಪಡೆದುದನ್ನು ವರ್ಣಿಸಿದುದು (1-18). ಇಂದ್ರನು ಅರ್ಜುನನಿಗೆ ಸ್ವರ್ಗಕ್ಕೆ ಬರಲು ಹೇಳಿ ತೆರಳಿದುದು (19-31). ಅರ್ಜುನನು ಸಶರೀರನಾಗಿ ಸರ್ಗಕ್ಕೆ ಮಾತಲಿಯು ನಡೆಸಿದ ಯಾನದಲ್ಲಿ ಪ್ರಯಾಣಿಸಿದುದು (32-40). ಅರ್ಜುನನು ಸ್ವರ್ಗದಲ್ಲಿ ತಾನು ಕಂಡಿದುದನ್ನು, ಕಲಿತಿದ್ದುದನ್ನು ವರ್ಣಿಸಿದುದು (41-58).
03164001 ಅರ್ಜುನ ಉವಾಚ।
03164001a ತತಸ್ತಾಮವಸಂ ಪ್ರೀತೋ ರಜನೀಂ ತತ್ರ ಭಾರತ।
03164001c ಪ್ರಸಾದಾದ್ದೇವದೇವಸ್ಯ ತ್ರ್ಯಂಬಕಸ್ಯ ಮಹಾತ್ಮನಃ।।
ಅರ್ಜುನನು ಹೇಳಿದನು: “ಭಾರತ! ಮಹಾತ್ಮ ದೇವದೇವ ತ್ರ್ಯಂಬಕನ ಪ್ರಸಾದದಿಂದ ಪ್ರೀತನಾಗಿ ನಾನು ಆ ರಾತ್ರಿಯನ್ನು ಅಲ್ಲಿಯೇ ಕಳೆದೆನು.
03164002a ವ್ಯುಷಿತೋ ರಜನೀಂ ಚಾಹಂ ಕೃತ್ವಾ ಪೂರ್ವಾಃಣಿಕಕ್ರಿಯಾಂ।
03164002c ಅಪಶ್ಯಂ ತಂ ದ್ವಿಜಶ್ರೇಷ್ಠಂ ದೃಷ್ಟವಾನಸ್ಮಿ ಯಂ ಪುರಾ।।
ರಾತ್ರಿಯನ್ನು ಕಳೆದು, ಪೂರ್ವಾಹ್ನಿಕಕ್ರಿಯೆಗಳನ್ನು ಮಾಡಿ ನಾನು ಹಿಂದೆ ನೋಡಿದ್ದ ದ್ವಿಜಶ್ರೇಷ್ಠನನ್ನು ನೋಡಿದೆ.
03164003a ತಸ್ಮೈ ಚಾಹಂ ಯಥಾವೃತ್ತಂ ಸರ್ವಮೇವ ನ್ಯವೇದಯಂ।
03164003c ಭಗವಂತಂ ಮಹಾದೇವಂ ಸಮೇತೋಽಸ್ಮೀತಿ ಭಾರತ।।
ಭಾರತ! ನಾನು ಅವನಿಗೆ ಭಗವಂತ ಮಹಾದೇವನನ್ನು ಭೇಟಿಮಾಡಿದೆ ಎಂದೂ ಮತ್ತು ನಡೆದುದೆಲ್ಲವನ್ನೂ ಹೇಳಿದೆ.
03164004a ಸ ಮಾಮುವಾಚ ರಾಜೇಂದ್ರ ಪ್ರೀಯಮಾಣೋ ದ್ವಿಜೋತ್ತಮಃ।
03164004c ದೃಷ್ಟಸ್ತ್ವಯಾ ಮಹಾದೇವೋ ಯಥಾ ನಾನ್ಯೇನ ಕೇನ ಚಿತ್।।
ರಾಜೇಂದ್ರ! ಆ ದ್ವಿಜೋತ್ತಮನು ಪ್ರೀತನಾಗಿ ನನಗೆ ಹೇಳಿದನು: “ಮಹಾದೇವನನ್ನು ನೀನು ನೋಡಿದಹಾಗೆ ಬೇರೆ ಯಾರೂ ಮಾಡಿಲ್ಲ.
03164005a ಸಮೇತ್ಯ ಲೋಕಪಾಲೈಸ್ತು ಸರ್ವೈರ್ವೈವಸ್ವತಾದಿಭಿಃ।
03164005c ದ್ರಷ್ಟಾಸ್ಯನಘ ದೇವೇಂದ್ರಂ ಸ ಚ ತೇಽಸ್ತ್ರಾಣಿ ದಾಸ್ಯತಿ।।
ನೀನು ವೈವಸ್ವತರೇ ಮೊದಲಾದ ಲೋಕಪಾಲರನ್ನೂ ಭೇಟಿಮಾಡುತ್ತೀಯೆ. ಅನಂತರ ಅನಘ! ನೀನು ದೇವೇಂದ್ರನನ್ನು ನೋಡುತ್ತೀಯೆ ಮತ್ತು ಅವನೂ ಕೂಡ ನಿನಗೆ ಅಸ್ತ್ರಗಳನ್ನು ಕೊಡುತ್ತಾನೆ.”
03164006a ಏವಮುಕ್ತ್ವಾ ಸ ಮಾಂ ರಾಜನ್ನಾಶ್ಲಿಷ್ಯ ಚ ಪುನಃ ಪುನಃ।
03164006c ಅಗಚ್ಚತ್ಸ ಯಥಾಕಾಮಂ ಬ್ರಾಹ್ಮಣಃ ಸೂರ್ಯಸನ್ನಿಭಃ।।
ರಾಜನ್! ಹೀಗೆ ಹೇಳಿ ಆ ಸೂರ್ಯಸನ್ನಿಭ ಬ್ರಾಹ್ಮಣನು ನನ್ನನ್ನು ಪುನಃ ಪುನಃ ಆಲಂಗಿಸಿ ಬಯಸಿದ ಕಡೆ ಹೊರಟುಹೋದನು.
03164007a ಅಥಾಪರಾಹ್ಣೇ ತಸ್ಯಾಹ್ನಃ ಪ್ರಾವಾತ್ಪುಣ್ಯಃ ಸಮೀರಣಃ।
03164007c ಪುನರ್ನವಮಿಮಂ ಲೋಕಂ ಕುರ್ವನ್ನಿವ ಸಪತ್ನಹನ್।।
ಅರಿಮರ್ದನ! ಆ ದಿನದ ಮಧ್ಯಾಹ್ನದ ನಂತರ ಲೋಕವನ್ನೇ ಪುನಃ ಹೊಸತಾಗಿ ಮಾಡುತ್ತಿದೆಯೋ ಎನ್ನುವಂತಹ ಪುಣ್ಯ ಗಾಳಿಯು ಬೀಸತೊಡಗಿತು
03164008a ದಿವ್ಯಾನಿ ಚೈವ ಮಾಲ್ಯಾನಿ ಸುಗಂಧೀನಿ ನವಾನಿ ಚ।
03164008c ಶೈಶಿರಸ್ಯ ಗಿರೇಃ ಪಾದೇ ಪ್ರಾದುರಾಸನ್ಸಮೀಪತಃ।।
ನನ್ನ ಹತ್ತಿರದಲ್ಲಿಯೇ ಶೈಶಿರ ಗಿರಿಯ ತಪ್ಪಲಿನಲ್ಲಿ ದಿವ್ಯ ಸುಗಂಧಯುಕ್ತ ಹೊಸ ಹೂವುಗಳ ಮಾಲೆಗಳು ಕಾಣಿಸಿಕೊಂಡವು.
03164009a ವಾದಿತ್ರಾಣಿ ಚ ದಿವ್ಯಾನಿ ಸುಘೋಷಾಣಿ ಸಮಂತತಃ।
03164009c ಸ್ತುತಯಶ್ಚೇಂದ್ರಸಂಯುಕ್ತಾ ಅಶ್ರೂಯಂತ ಮನೋಹರಾಃ।।
ಎಲ್ಲಕಡೆಯಿಂದಲೂ ದಿವ್ಯ ವಾದ್ಯಗಳ ಸುಘೋಷವು, ಇಂದ್ರನ ಮನೋಹರ ಸ್ತುತಿಗಳು ಕೇಳಿಬಂದವು.
03164010a ಗಣಾಶ್ಚಾಪ್ಸರಸಾಂ ತತ್ರ ಗಂಧರ್ವಾಣಾಂ ತಥೈವ ಚ।
03164010c ಪುರಸ್ತಾದ್ದೇವದೇವಸ್ಯ ಜಗುರ್ಗೀತಾನಿ ಸರ್ವಶಃ।।
ಅಲ್ಲಿ ಎಲ್ಲ ಅಪ್ಸರೆ ಮತ್ತು ಗಂಧರ್ವ ಗಣಗಳು ದೇವದೇವನ ಜಯಗೀತೆಗಳನ್ನು ಹಾಡುತ್ತಾ ಮುಂದೆ ಬರುತ್ತಿದ್ದರು.
03164011a ಮರುತಾಂ ಚ ಗಣಾಸ್ತತ್ರ ದೇವಯಾನೈರುಪಾಗಮನ್।
03164011c ಮಹೇಂದ್ರಾನುಚರಾ ಯೇ ಚ ದೇವಸದ್ಮನಿವಾಸಿನಃ।।
ಮರುತರ ಗಣಗಳೂ ಮತ್ತು ಮಹೇಂದ್ರನ ಅನುಚರರೂ, ದೇವಸದನದ ನಿವಾಸಿಗಳು, ದೇವಯಾನಗಳಲ್ಲಿ ಕುಳಿತು ಬರುತ್ತಿದ್ದರು.
03164012a ತತೋ ಮರುತ್ವಾನ್ ಹರಿಭಿರ್ಯುಕ್ತೈರ್ವಾಹೈಃ ಸ್ವಲಂಕೃತೈಃ।
03164012c ಶಚೀಸಹಾಯಸ್ತತ್ರಾಯಾತ್ಸಹ ಸರ್ವೈಸ್ತದಾಮರೈಃ।।
ಆಗ ಮರುತ್ವಂತನು ಹರಿಗಳನ್ನು ಕಟ್ಟಿ ಎಳೆಯಲ್ಪಡುವ ಸ್ವಲಂಕೃತ ವಾಹನದಲ್ಲಿ ಶಚೀದೇವಿಯೊಂದಿಗೆ ಸರ್ವ ಅಮರರನ್ನು ಕೂಡಿ ಆಗಮಿಸಿದನು.
03164013a ಏತಸ್ಮಿನ್ನೇವ ಕಾಲೇ ತು ಕುಬೇರೋ ನರವಾಹನಃ।
03164013c ದರ್ಶಯಾಮಾಸ ಮಾಂ ರಾಜಽಲ್ಲಕ್ಷ್ಮ್ಯಾ ಪರಮಯಾ ಯುತಃ।।
ರಾಜನ್! ಅದೇ ಸಮಯದಲ್ಲಿ ನರವಾಹನ ಕುಬೇರನೂ ಕೂಡ ಪರಮ ಶ್ರೀಯೊಡನೆ ನನಗೆ ಕಾಣಿಸಿಕೊಂಡನು.
03164014a ದಕ್ಷಿಣಸ್ಯಾಂ ದಿಶಿ ಯಮಂ ಪ್ರತ್ಯಪಶ್ಯಂ ವ್ಯವಸ್ಥಿತಂ।
03164014c ವರುಣಂ ದೇವರಾಜಂ ಚ ಯಥಾಸ್ಥಾನಮವಸ್ಥಿತಂ।।
03164015a ತೇ ಮಾಮೂಚುರ್ಮಹಾರಾಜ ಸಾಂತ್ವಯಿತ್ವಾ ಸುರರ್ಷಭಾಃ।
03164015c ಸವ್ಯಸಾಚಿನ್ಸಮೀಕ್ಷಸ್ವ ಲೋಕಪಾಲಾನವಸ್ಥಿತಾನ್।।
ದಕ್ಷಿಣದ ದಿಕ್ಕಿನಲ್ಲಿ ಯಮನು ನಿಂತಿರುವುದು ಕಾಣಿಸಿತು. ದೇವರಾಜ ವರುಣನೂ ಯಥಾಸ್ಥಾನದಲ್ಲಿ ನಿಂತಿದ್ದನು. ಮಹಾರಾಜ! ಆ ಸುರರ್ಷಭರು ನನಗೆ ಸಂತವಿಸುತ್ತಾ ಮಾತನಾಡಿದರು. “ಸವ್ಯಸಾಚಿ! ನಿಂತಿರುವ ಲೋಕಪಾಲರನ್ನು ನೋಡು.
03164016a ಸುರಕಾರ್ಯಾರ್ಥಸಿದ್ಧ್ಯರ್ಥಂ ದೃಷ್ಟವಾನಸಿ ಶಂಕರಂ।
03164016c ಅಸ್ಮತ್ತೋಽಪಿ ಗೃಹಾಣ ತ್ವಮಸ್ತ್ರಾಣೀತಿ ಸಮಂತತಃ।।
ಸುರಕಾರ್ಯಸಿದ್ಧಿಗಾಗಿ ನೀನು ಶಂಕರನನ್ನು ನೋಡಿದ್ದೀಯೆ. ನಮ್ಮಿಂದ ಕೂಡ ನೀನು ಅಸ್ತ್ರಗಳನ್ನು ಸ್ವೀಕರಿಸು.”
03164017a ತತೋಽಹಂ ಪ್ರಯತೋ ಭೂತ್ವಾ ಪ್ರಣಿಪತ್ಯ ಸುರರ್ಷಭಾನ್।
03164017c ಪ್ರತ್ಯಗೃಹ್ಣಂ ತದಾಸ್ತ್ರಾಣಿ ಮಹಾಂತಿ ವಿಧಿವತ್ಪ್ರಭೋ।।
ಪ್ರಭೋ! ಆಗ ನಾನು ಶುದ್ದನಾಗಿ ಸುರರ್ಷಭರಿಗೆ ನಮಸ್ಕರಿಸಿ ಅವರ ಮಹಾ ಅಸ್ತ್ರಗಳನ್ನು ವಿಧಿವತ್ತಾಗಿ ಪ್ರತಿಗ್ರಹಿಸಿದೆನು.
03164018a ಗೃಹೀತಾಸ್ತ್ರಸ್ತತೋ ದೇವೈರನುಜ್ಞಾತೋಽಸ್ಮಿ ಭಾರತ।
03164018c ಅಥ ದೇವಾ ಯಯುಃ ಸರ್ವೇ ಯಥಾಗತಮರಿಂದಮ।।
ಭಾರತ! ಅವರ ಅಸ್ತ್ರಗಳನ್ನು ಪಡೆದು ನಾನು ದೇವತೆಗಳಿಂದ ಅನುಜ್ಞೆಯನ್ನು ಪಡೆದೆನು. ಅರಿಂದಮ! ಆಗ ದೇವತೆಗಳೆಲ್ಲರೂ ಬಂದದಾರಿಯಲ್ಲಿಯೇ ತೆರಳಿದರು.
03164019a ಮಘವಾನಪಿ ದೇವೇಶೋ ರಥಮಾರುಹ್ಯ ಸುಪ್ರಭಂ।
03164019c ಉವಾಚ ಭಗವಾನ್ವಾಕ್ಯಂ ಸ್ಮಯನ್ನಿವ ಸುರಾರಿಹಾ।।
ಭಗವನ್ ಸುರಾರಿಹ ದೇವೇಶ ಮಘವಾನನೂ ಕೂಡ ಸುಪ್ರಭೆಯ ರಥವನ್ನೇರಿ ನಸುನಗುತ್ತಾ ಹೇಳಿದನು:
03164020a ಪುರೈವಾಗಮನಾದಸ್ಮಾದ್ವೇದಾಹಂ ತ್ವಾಂ ಧನಂಜಯ।
03164020c ಅತಃ ಪರಂ ತ್ವಹಂ ವೈ ತ್ವಾಂ ದರ್ಶಯೇ ಭರತರ್ಷಭ।।
“ಧನಂಜಯ! ನೀನು ಇಲ್ಲಿ ಬರುವುದಕ್ಕೆ ಮೊದಲೇ ನಾನು ನಿನ್ನನು ಚೆನ್ನಾಗಿ ಬಲ್ಲೆ. ಭರತರ್ಷಭ! ಇದಕ್ಕೂ ಮೊದಲೇ ನಾನು ನಿನಗೆ ಕಾಣಿಸಿಕೊಂಡಿದ್ದೆ.
03164021a ತ್ವಯಾ ಹಿ ತೀರ್ಥೇಷು ಪುರಾ ಸಮಾಪ್ಲಾವಃ ಕೃತೋಽಸಕೃತ್।
03164021c ತಪಶ್ಚೇದಂ ಪುರಾ ತಪ್ತಂ ಸ್ವರ್ಗಂ ಗಂತಾಸಿ ಪಾಂಡವ।।
ಪಾಂಡವ! ನೀನು ಹಿಂದೆ ತೀರ್ಥಗಳಲ್ಲಿ ಮಿಂದಿದ್ದೀಯೆ ಮತ್ತು ತಪಸ್ಸನ್ನು ತಪಿಸಿದ್ದೀಯೆ. ಆದುದರಿಂದ ನೀನು ಸ್ವರ್ಗಕ್ಕೆ ಹೋಗುತ್ತೀಯೆ1.
03164022a ಭೂಯಶ್ಚೈವ ತು ತಪ್ತವ್ಯಂ ತಪಃ ಪರಮದಾರುಣಂ।
03164022c ಉವಾಚ ಭಗವಾನ್ಸರ್ವಂ ತಪಸಶ್ಚೋಪಪಾದನಂ।।
ನೀನು ಇನ್ನೊಮ್ಮೆ ಪರಮದಾರುಣ ತಪಸ್ಸನ್ನು ತಪಿಸುತ್ತೀಯೆ.” ಆಗ ಆ ಭಗವಾನನು ತಪಸ್ಸನ್ನು ಹೇಗೆ ಮಾಡಬೇಕೆಂದು ಎಲ್ಲವನ್ನು ವಿವರಿಸಿದನು.
03164023a ಮಾತಲಿರ್ಮನ್ನಿಯೋಗಾತ್ತ್ವಾಂ ತ್ರಿದಿವಂ ಪ್ರಾಪಯಿಷ್ಯತಿ।
03164023c ವಿದಿತಸ್ತ್ವಂ ಹಿ ದೇವಾನಾಮೃಷೀಣಾಂ ಚ ಮಹಾತ್ಮನಾಂ।।
“ನನ್ನ ನಿಯೋಗದಂತೆ ಮಾತಲಿಯು ನಿನ್ನನ್ನು ತ್ರಿದಿವಕ್ಕೆ ತರುತ್ತಾನೆ. ಮಹಾತ್ಮ ದೇವತೆಗಳು ಮತ್ತು ಋಷಿಗಳಿಗೆ ನಿನ್ನ ಕುರಿತು ತಿಳಿದೇ ಇದೆ.”
03164024a ತತೋಽಹಮಬ್ರುವಂ ಶಕ್ರಂ ಪ್ರಸೀದ ಭಗವನ್ಮಮ।
03164024c ಆಚಾರ್ಯಂ ವರಯೇ ತ್ವಾಹಮಸ್ತ್ರಾರ್ಥಂ ತ್ರಿದಶೇಶ್ವರ।।
ಆಗ ನಾನು ಶಕ್ರನಿಗೆ ಹೇಳಿದೆನು: “ಭಗವನ್! ನನ್ನ ಮೇಲೆ ಪ್ರಸೀದನಾಗು. ತ್ರಿದಶೇಶ್ವರ! ಅಸ್ತ್ರಗಳಿಗಾಗಿ ನಾನು ನಿನ್ನನ್ನು ಆಚಾರ್ಯನಾಗಿ ಕೇಳುತ್ತೇನೆ.”
03164025 ಇಂದ್ರ ಉವಾಚ।
03164025a ಕ್ರೂರಂ ಕರ್ಮಾಸ್ತ್ರವಿತ್ತಾತ ಕರಿಷ್ಯಸಿ ಪರಂತಪ।
03164025c ಯದರ್ಥಮಸ್ತ್ರಾಣೀಪ್ಸುಸ್ತ್ವಂ ತಂ ಕಾಮಂ ಪಾಂಡವಾಪ್ನುಹಿ।।
ಇಂದ್ರನು ಹೇಳಿದನು: “ಮಗು! ಅಸ್ತ್ರಗಳನ್ನು ತಿಳಿದ ನಂತರ ನೀನು ಕ್ರೂರಕರ್ಮಗಳನ್ನೆಸಗುವೆ. ಪಾಂಡವ! ಪರಂತಪ! ಅನಂತರವೇ ನೀನು ಯಾವುದಕ್ಕಾಗಿ ಅಸ್ತ್ರಗಳನ್ನು ಕೇಳುತ್ತಿದ್ದೀಯೆ ಅದನ್ನು ಮಾಡಬಹುದು.””
03164026 ಅರ್ಜುನ ಉವಾಚ।
03164026a ತತೋಽಹಮಬ್ರುವಂ ನಾಹಂ ದಿವ್ಯಾನ್ಯಸ್ತ್ರಾಣಿ ಶತ್ರುಹನ್।
03164026c ಮಾನುಷೇಷು ಪ್ರಯೋಕ್ಷ್ಯಾಮಿ ವಿನಾಸ್ತ್ರಪ್ರತಿಘಾತನಂ।।
ಅರ್ಜುನನು ಹೇಳಿದನು: “ಆಗ ನಾನು ಹೇಳಿದೆ: “ಶತ್ರುಹನ್! ನಾನು ಎಂದೂ ನನ್ನ ಇತರ ಅಸ್ತ್ರಗಳು ನಿಷ್ಫಲವಾದಾಗ ಮಾತ್ರ ಬಿಟ್ಟು ಈ ದಿವ್ಯಾಸ್ತ್ರಗಳನ್ನು ಎಂದೂ ಮನುಷ್ಯರ ಮೇಲೆ ಪ್ರಯೋಗಿಸುವುದಿಲ್ಲ.
03164027a ತಾನಿ ದಿವ್ಯಾನಿ ಮೇಽಸ್ತ್ರಾಣಿ ಪ್ರಯಚ್ಚ ವಿಬುಧಾಧಿಪ।
03164027c ಲೋಕಾಂಶ್ಚಾಸ್ತ್ರಜಿತಾನ್ಪಶ್ಚಾಲ್ಲಭೇಯಂ ಸುರಪುಂಗವ।।
ವಿಬುಧಾಧಿಪ! ಆ ದಿವ್ಯಾಸ್ತ್ರಗಳನ್ನು ನನಗೆ ಕರುಣಿಸು. ಸುರಪುಂಗವ! ಅನಂತರ ನಾನು ಆ ಅಸ್ತ್ರಗಳು ಗೆಲ್ಲುವ ಲೋಕಗಳನ್ನು ಪಡೆಯುತ್ತೇನೆ.”
03164028 ಇಂದ್ರ ಉವಾಚ।
03164028a ಪರೀಕ್ಷಾರ್ಥಂ ಮಯೈತತ್ತೇ ವಾಕ್ಯಮುಕ್ತಂ ಧನಂಜಯ।
03164028c ಮಮಾತ್ಮಜಸ್ಯ ವಚನಂ ಸೂಪಪನ್ನಮಿದಂ ತವ।।
ಇಂದ್ರನು ಹೇಳಿದನು: “ಧನಂಜಯ! ನಿನ್ನನ್ನು ಪರೀಕ್ಷಿಸಲು ನಾನು ಈ ಮಾತುಗಳನ್ನು ಹೇಳಿದೆ. ನಿನ್ನ ಮಾತುಗಳು ನನ್ನಿಂದ ಹುಟ್ಟಿದವನಿಗೆ ಸೂಕ್ತವಾಗಿವೆ.
03164029a ಶಿಕ್ಷ ಮೇ ಭವನಂ ಗತ್ವಾ ಸರ್ವಾಣ್ಯಸ್ತ್ರಾಣಿ ಭಾರತ।
03164029c ವಾಯೋರಗ್ನೇರ್ವಸುಭ್ಯೋಽಥ ವರುಣಾತ್ಸಮರುದ್ಗಣಾತ್।।
03164030a ಸಾಧ್ಯಂ ಪೈತಾಮಹಂ ಚೈವ ಗಂಧರ್ವೋರಗರಕ್ಷಸಾಂ।
03164030c ವೈಷ್ಣವಾನಿ ಚ ಸರ್ವಾಣಿ ನೈರೃತಾನಿ ತಥೈವ ಚ।।
03164030e ಮದ್ಗತಾನಿ ಚ ಯಾನೀಹ ಸರ್ವಾಸ್ತ್ರಾಣಿ ಕುರೂದ್ವಹ।।
ಭಾರತ! ನೀನು ನನ್ನ ಮನೆಗೆ ಬಂದಾಗ ಸರ್ವಾಸ್ತ್ರಗಳನ್ನೂ – ವಾಯು, ಅಗ್ನಿ, ವಸುಗಳು, ವರುಣ, ಮರುದ್ಗಣಗಳು, ಸಾಧ್ಯರು, ಪಿತಾಮಹ, ಗಂಧರ್ವ, ಉರಗ, ರಾಕ್ಷಸರು, ವಿಷ್ಣು, ಮತ್ತು ಎಲ್ಲ ನೈರುತ್ಯರಿಂದ, ಮತ್ತು ಕುರೂದ್ವಹ! ನನ್ನಲ್ಲಿರುವ ಎಲ್ಲ ಅಸ್ತ್ರಗಳನ್ನೂ ಕಲಿಯುತ್ತೀಯೆ.””
03164031 ಅರ್ಜುನ ಉವಾಚ।
03164031a ಏವಮುಕ್ತ್ವಾ ತು ಮಾಂ ಶಕ್ರಸ್ತತ್ರೈವಾಂತರಧೀಯತ।
03164031c ಅಥಾಪಶ್ಯಂ ಹರಿಯುಜಂ ರಥಮೈಂದ್ರಮುಪಸ್ಥಿತಂ।।
03164031e ದಿವ್ಯಂ ಮಾಯಾಮಯಂ ಪುಣ್ಯಂ ಯತ್ತಂ ಮಾತಲಿನಾ ನೃಪ।।
ಅರ್ಜುನನು ಹೇಳಿದನು: “ಹೀಗೆ ನನಗೆ ಹೇಳಿ ಶಕ್ರನು ಅಲ್ಲಿಯೇ ಅಂತರ್ಧಾನನಾದನು. ನೃಪ! ಆಗ ನಾನು ಕುದುರೆಗಳನ್ನು ಕಟ್ಟಿದ್ದ, ಮಾತಲಿಯು ತಂದ ಇಂದ್ರನು ಕುಳಿತುಕೊಳ್ಳುವ ದಿವ್ಯ ಮಾಯಾಮಯ ಪುಣ್ಯ ರಥವನ್ನು ನೋಡಿದೆ.
03164032a ಲೋಕಪಾಲೇಷು ಯಾತೇಷು ಮಾಮುವಾಚಾಥ ಮಾತಲಿಃ।
03164032c ದ್ರಷ್ಟುಮಿಚ್ಚತಿ ಶಕ್ರಸ್ತ್ವಾಂ ದೇವರಾಜೋ ಮಹಾದ್ಯುತೇ।।
03164033a ಸಂಸಿದ್ಧಸ್ತ್ವಂ ಮಹಾಬಾಹೋ ಕುರು ಕಾರ್ಯಮನುತ್ತಮಂ।
03164033c ಪಶ್ಯ ಪುಣ್ಯಕೃತಾಂ ಲೋಕಾನ್ಸಶರೀರೋ ದಿವಂ ವ್ರಜ।।
ಲೋಕಪಾಲರು ಹೊರಟುಹೋದ ನಂತರ ಮಾತಲಿಯು ನನಗೆ ಹೇಳಿದನು: “ಮಹಾದ್ಯುತೇ! ದೇವರಾಜ ಶಕ್ರನು ನಿನ್ನನ್ನು ನೋಡಲು ಬಯಸುತ್ತಾನೆ. ಮಹಾಬಾಹೋ! ಅನುತ್ತಮ ಕಾರ್ಯವನ್ನು ಮಾಡಿ ಸಿದ್ಧಿಯನ್ನು ಹೊಂದು. ಸಶರೀರನಾಗಿ ಪುಣ್ಯಕೃತರ ದೇವಲೋಕವನ್ನು ನೋಡು.”
03164034a ಇತ್ಯುಕ್ತೋಽಹಂ ಮಾತಲಿನಾ ಗಿರಿಮಾಮಂತ್ರ್ಯ ಶೈಶಿರಂ।
03164034c ಪ್ರದಕ್ಷಿಣಮುಪಾವೃತ್ಯ ಸಮಾರೋಹಂ ರಥೋತ್ತಮಂ।।
ಮಾತಲಿಯು ಹೀಗೆ ಹೇಳಲು ಶೈಶಿರ ಗಿರಿಯನ್ನು ಬೀಳ್ಕೊಂಡು ಪ್ರದಕ್ಷಿಣೆ ಸಮಸ್ಕಾರ ಮಾಡಿ ಉತ್ತಮ ರಥವನ್ನು ಏರಿದೆನು.
03164035a ಚೋದಯಾಮಾಸ ಸ ಹಯಾನ್ಮನೋಮಾರುತರಂಹಸಃ।
03164035c ಮಾತಲಿರ್ಹಯಶಾಸ್ತ್ರಜ್ಞೋ ಯಥಾವದ್ಭೂರಿದಕ್ಷಿಣಃ।।
ಹಯಶಾಸ್ತ್ರಜ್ಞ ಭೂರಿದಕ್ಷಿಣ ಮಾತಲಿಯು ಯಥಾವತ್ತಾಗಿ ಮನಸ್ಸು ಮತ್ತು ವಾಯುವಿನ ವೇಗದಲ್ಲಿ ಓಡುವ ಹಯಗಳನ್ನು ಹೊರಡಿಸಿದನು.
03164036a ಅವೈಕ್ಷತ ಚ ಮೇ ವಕ್ತ್ರಂ ಸ್ಥಿತಸ್ಯಾಥ ಸ ಸಾರಥಿಃ।
03164036c ತಥಾ ಭ್ರಾಂತೇ ರಥೇ ರಾಜನ್ವಿಸ್ಮಿತಶ್ಚೇದಮಬ್ರವೀತ್।।
ರಾಜನ್! ಆ ನಡುಗುತ್ತಿರುವ ವಕ್ರ ರಥದಲ್ಲಿ ನಿಂತಿರುವ ನನ್ನನ್ನು ನೋಡಿದ ಸಾರಥಿಯು ವಿಸ್ಮಿತನಾಗಿ ಹೇಳಿದನು:
03164037a ಅತ್ಯದ್ಭುತಮಿದಂ ಮೇಽದ್ಯ ವಿಚಿತ್ರಂ ಪ್ರತಿಭಾತಿ ಮಾಂ।
03164037c ಯದಾಸ್ಥಿತೋ ರಥಂ ದಿವ್ಯಂ ಪದಾ ನ ಚಲಿತೋ ಭವಾನ್।।
“ಅತ್ಯದ್ಭುತ! ಇಂದು ವಿಚಿತ್ರವಾಗಿ ನನಗೆ ತೋರುತ್ತಿದೆ. ಈ ದಿವ್ಯರಥದಲ್ಲಿ ಏರಿದಾಗಿನಿಂದ ನೀನು ಒಂದು ಹೆಜ್ಜೆಯೂ ಚಲಿಸಲಿಲ್ಲ.
03164038a ದೇವರಾಜೋಽಪಿ ಹಿ ಮಯಾ ನಿತ್ಯಮತ್ರೋಪಲಕ್ಷಿತಃ।
03164038c ವಿಚಲನ್ಪ್ರಥಮೋತ್ಪಾತೇ ಹಯಾನಾಂ ಭರತರ್ಷಭ।।
ಭರತರ್ಷಭ! ಕುದುರೆಗೆಳ ಪ್ರಥಮ ನೆಗೆತಕ್ಕೆ ದೇವರಾಜನೂ ಕೂಡ ವಿಚಲಿತನಾಗಿದ್ದುದನ್ನು ನೋಡಿದ್ದೇನೆ.
03164039a ತ್ವಂ ಪುನಃ ಸ್ಥಿತ ಏವಾತ್ರ ರಥೇ ಭ್ರಾಂತೇ ಕುರೂದ್ವಹ।
03164039c ಅತಿಶಕ್ರಮಿದಂ ಸತ್ತ್ವಂ ತವೇತಿ ಪ್ರತಿಭಾತಿ ಮೇ।।
ಕುರೂದ್ವಹ! ಆದರೆ ಅಲುಗಾಡುತ್ತಿರುವ ಈ ರಥದಲ್ಲಿ ನೀನು ನಿಂತಿರುವುದನ್ನು ನೋಡಿದರೆ ನಿನ್ನ ಸತ್ವವು ಶಕ್ರನದಕ್ಕಿಂತಲೂ ಅಧಿಕ ಎಂದು ನನಗೆ ಹೊಳೆಯುತ್ತಿದೆ.”
03164040a ಇತ್ಯುಕ್ತ್ವಾಕಾಶಮಾವಿಶ್ಯ ಮಾತಲಿರ್ವಿಬುಧಾಲಯಾನ್।
03164040c ದರ್ಶಯಾಮಾಸ ಮೇ ರಾಜನ್ವಿಮಾನಾನಿ ಚ ಭಾರತ।।
ರಾಜನ್! ಭಾರತ! ಹೀಗೆ ಹೇಳಿ ಮಾತಲಿಯು ಆಕಾಶವನ್ನು ಪ್ರವೇಶಿಸಿ ನನಗೆ ವಿಬುಧಾಲಯಗಳನ್ನು ವಿಮಾನಗಳನ್ನು ತೋರಿಸಿದನು.
03164041a ನಂದನಾದೀನಿ ದೇವಾನಾಂ ವನಾನಿ ಬಹುಲಾನ್ಯುತ।
03164041c ದರ್ಶಯಾಮಾಸ ಮೇ ಪ್ರೀತ್ಯಾ ಮಾತಲಿಃ ಶಕ್ರಸಾರಥಿಃ।।
03164042a ತತಃ ಶಕ್ರಸ್ಯ ಭವನಮಪಶ್ಯಮಮರಾವತೀಂ।
03164042c ದಿವ್ಯೈಃ ಕಾಮಫಲೈರ್ವೃಕ್ಷೈ ರತ್ನೈಶ್ಚ ಸಮಲಂಕೃತಾಂ।।
ಶಕ್ರಸಾರಥಿ ಮಾತಲಿಯು ಪ್ರೀತಿಯಿಂದ ನನಗೆ ನಂದನವೇ ಮೊದಲಾದ ದೇವತೆಗಳ ಬಹಳ ವನಗಳನ್ನು ತೋರಿಸಿದನು. ಆಗ ಶಕ್ರನ ಭವನ, ದಿವ್ಯ ಕಾಪಫಲಗಳನ್ನು ನೀಡುವ ವೃಕ್ಷಗಳಿಂದ ಮತ್ತು ರತ್ನಗಳಿಂದ ಸಮಲಂಕೃತ ಅಮರಾವತಿಯನ್ನು ನೋಡಿದೆನು.
03164043a ನ ತಾಂ ಭಾಸಯತೇ ಸೂರ್ಯೋ ನ ಶೀತೋಷ್ಣೇ ನ ಚ ಕ್ಲಮಃ।
03164043c ರಜಃ ಪಮ್ಕೋ ನ ಚ ತಮಸ್ತತ್ರಾಸ್ತಿ ನ ಜರಾ ನೃಪ।।
ಅದನ್ನು ಸೂರ್ಯನು ಬೆಳಗುವುದಿಲ್ಲ. ಅಲ್ಲಿ ಶೀತೋಷ್ಣಗಳೂ, ಆಯಾಸವೂ ಇಲ್ಲ. ಅಲ್ಲಿ ಧೂಳಿಲ್ಲ, ಕೆಸರಿಲ್ಲ, ಕತ್ತಲೆಯಿಲ್ಲ, ಮತ್ತು ನೃಪ! ಮುಪ್ಪೂ ಇಲ್ಲ.
03164044a ನ ತತ್ರ ಶೋಕೋ ದೈನ್ಯಂ ವಾ ವೈವರ್ಣ್ಯಂ ಚೋಪಲಕ್ಷ್ಯತೇ।
03164044c ದಿವೌಕಸಾಂ ಮಹಾರಾಜ ನ ಚ ಗ್ಲಾನಿರರಿಂದಮ।।
ಮಹಾರಾಜ! ಅರಿಂದಮ! ಅಲ್ಲಿ ದಿವೌಕಸರಲ್ಲಿ ಶೋಕಪಡುವವರು, ದೈನ್ಯರು, ವಿವರ್ಣರಾದವರು ಮತ್ತು ಗ್ಲಾನಿಗಳು ಯಾರೂ ಕಂಡುಬರುವುದಿಲ್ಲ.
03164045a ನ ಕ್ರೋಧಲೋಭೌ ತತ್ರಾಸ್ತಾಮಶುಭಂ ಚ ವಿಶಾಂ ಪತೇ।
03164045c ನಿತ್ಯತುಷ್ಟಾಶ್ಚ ಹೃಷ್ಟಾಶ್ಚ ಪ್ರಾಣಿನಃ ಸುರವೇಶ್ಮನಿ।।
ವಿಶಾಂಪತೇ! ಸುರರ ಆಲಯದಲ್ಲಿ ಕ್ರೋಧ-ಲೋಭಗಳಿಲ್ಲ. ಅಶುಭವೂ ಇಲ್ಲ. ಪ್ರಾಣಿಗಳೆಲ್ಲರೂ ನಿತ್ಯ ತುಷ್ಟರೂ ಹೃಷ್ಟರೂ ಆಗಿದ್ದಾರೆ.
03164046a ನಿತ್ಯಪುಷ್ಪಫಲಾಸ್ತತ್ರ ಪಾದಪಾ ಹರಿತಚ್ಚದಾಃ।
03164046c ಪುಷ್ಕರಿಣ್ಯಶ್ಚ ವಿವಿಧಾಃ ಪದ್ಮಸೌಗಂಧಿಕಾಯುತಾಃ।।
ಮರಗಳು ಹಸಿರಿನಿಂದ ತುಂಬಿ ನಿತ್ಯವೂ ಪುಷ್ಪ-ಫಲಗಳನ್ನು ಹೊಂದಿವೆ. ಅಲ್ಲಿ ಪದ್ಮ ಮತ್ತು ಸೌಗಂಧಿಕಗಳಿಂದ ತುಂಬಿದ ವಿವಿಧ ಸರೋವರಗಳಿವೆ.
03164047a ಶೀತಸ್ತತ್ರ ವವೌ ವಾಯುಃ ಸುಗಂಧೋ ಜೀವನಃ ಶುಚಿಃ।
03164047c ಸರ್ವರತ್ನವಿಚಿತ್ರಾ ಚ ಭೂಮಿಃ ಪುಷ್ಪವಿಭೂಷಿತಾ।।
ಅಲ್ಲಿ ಶೀತಲ ಸುಂಗಂಧಯುಕ್ತ, ಜೀವನವನ್ನು ನಿಡುವ, ಶುಚಿಯಾದ ಗಾಳಿಯು ಬೀಸುತ್ತದೆ. ನೆಲವು ಪುಷ್ಪವಿಭೂಷಿತವಾಗಿ ಬಣ್ಣ ಬಣ್ಣದ ಸರ್ವರತ್ನಗಳನ್ನು ಹೊಂದಿದೆ.
03164048a ಮೃಗದ್ವಿಜಾಶ್ಚ ಬಹವೋ ರುಚಿರಾ ಮಧುರಸ್ವರಾಃ।
03164048c ವಿಮಾನಯಾಯಿನಶ್ಚಾತ್ರ ದೃಶ್ಯಂತೇ ಬಹವೋಽಮರಾಃ।।
ಸುಂದರ ಮಧುರ ಸ್ವರದ ಜಿಂಕೆಗಳು ಮತ್ತು ಪಕ್ಷಿಗಳು ಇವೆ. ಮತ್ತು ತಮ್ಮ ವಿಮಾನಗಳನ್ನೇರಿ ಹೋಗುವ ಬಹಳ ಅಮರರು ಕಾಣುತ್ತಾರೆ.
03164049a ತತೋಽಪಶ್ಯಂ ವಸೂನ್ರುದ್ರಾನ್ಸಾಧ್ಯಾಂಶ್ಚ ಸಮರುದ್ಗಣಾನ್।
03164049c ಆದಿತ್ಯಾನಶ್ವಿನೌ ಚೈವ ತಾನ್ಸರ್ವಾನ್ಪ್ರತ್ಯಪೂಜಯಂ।।
ಆಗ ನಾನು ವಸುಗಳನ್ನು, ರುದ್ರರನ್ನು, ಸಾಧ್ಯರನ್ನು, ಮರುದ್ಗಣಗಳನ್ನು, ಆದಿತ್ಯರನ್ನು, ಅಶ್ವಿನಿಯರನ್ನು ನೋಡಿದೆನು ಮತ್ತು ಸರ್ವರನ್ನೂ ಪ್ರತಿಪೂಜಿಸಿದೆನು.
03164050a ತೇ ಮಾಂ ವೀರ್ಯೇಣ ಯಶಸಾ ತೇಜಸಾ ಚ ಬಲೇನ ಚ।
03164050c ಅಸ್ತ್ರೈಶ್ಚಾಪ್ಯನ್ವಜಾನಂತ ಸಂಗ್ರಾಮವಿಜಯೇನ ಚ।।
ಅವರು ನನಗೆ ವೀರ್ಯ, ಯಶಸ್ಸು, ತೇಜಸ್ಸು, ಬಲ, ಅಸ್ತ್ರಗಳು, ಮತ್ತು ಸಂಗ್ರಾಮದಲ್ಲಿ ವಿಜಯದ ಆಶೀರ್ವಚನಗಳನ್ನು ನೀಡಿದರು.
03164051a ಪ್ರವಿಶ್ಯ ತಾಂ ಪುರೀಂ ರಮ್ಯಾಂ ದೇವಗಂಧರ್ವಸೇವಿತಾಂ।
03164051c ದೇವರಾಜಂ ಸಹಸ್ರಾಕ್ಷಮುಪಾತಿಷ್ಠಂ ಕೃತಾಂಜಲಿಃ।।
ಅನಂತರ ನಾನು ರಮ್ಯ ದೇವಗಂಧರ್ವ ಸೇವಿತ ಆ ಪುರಿಯನ್ನು ಪ್ರವೇಶಿಸಿ ಅಂಜಲೀ ಬದ್ಧನಾಗಿ ದೇವರಾಜ ಸಹಸ್ರಾಕ್ಷನ ಮುಂದೆ ನಿಂತೆನು.
03164052a ದದಾವರ್ಧಾಸನಂ ಪ್ರೀತಃ ಶಕ್ರೋ ಮೇ ದದತಾಂ ವರಃ।
03164052c ಬಹುಮಾನಾಚ್ಚ ಗಾತ್ರಾಣಿ ಪಸ್ಪರ್ಶ ಮಮ ವಾಸವಃ।।
ಕೊಡುವವರಲ್ಲಿ ಶ್ರೇಷ್ಠ ಶಕ್ರನು ಸಂತೋಷದಿಂದ ನನಗೆ ಅವನ ಆಸನದ ಅರ್ಧಭಾಗವನ್ನಿತ್ತನು. ಬಹುಮಾನ್ಯತೆಯನ್ನಿತ್ತು ವಾಸವನು ನನ್ನ ಅಂಗಾಂಗಗಳನ್ನು ಸ್ಪರ್ಷಿಸಿದನು.
03164053a ತತ್ರಾಹಂ ದೇವಗಂಧರ್ವೈಃ ಸಹಿತೋ ಭುರಿದಕ್ಷಿಣ।
03164053c ಅಸ್ತ್ರಾರ್ಥಮವಸಂ ಸ್ವರ್ಗೇ ಕುರ್ವಾಣೋಽಸ್ತ್ರಾಣಿ ಭಾರತ।।
ಭೂರಿದಕ್ಷಿಣ! ಭಾರತ! ದೇವಗಂಧರ್ವರ ಸಹಿತ ನಾನು ಅಲ್ಲಿ ಸ್ವರ್ಗದಲ್ಲಿ ಅಸ್ತ್ರಗಳಿಗಾಗಿ ವಾಸಿಸಿದೆನು ಮತ್ತು ಆ ಅಸ್ತ್ರಗಳನ್ನು ಕಲಿತುಕೊಂಡೆನು.
03164054a ವಿಶ್ವಾವಸೋಶ್ಚ ಮೇ ಪುತ್ರಶ್ಚಿತ್ರಸೇನೋಽಭವತ್ಸಖಾ।
03164054c ಸ ಚ ಗಾಂಧರ್ವಮಖಿಲಂ ಗ್ರಾಹಯಾಮಾಸ ಮಾಂ ನೃಪ।।
ವಿಶ್ವಾವಸುವಿನ ಮಗ ಚಿತ್ರಸೇನನು ನನಗೆ ಸಖನಾದನು. ನೃಪ! ಅವನು ನನಗೆ ಗಂಧರ್ವರ ವಿದ್ಯೆಯನ್ನು ಸಂಪೂರ್ಣವಾಗಿ ಕಲಿಸಿದನು.
03164055a ತತೋಽಹಮವಸಂ ರಾಜನ್ಗೃಹೀತಾಸ್ತ್ರಃ ಸುಪೂಜಿತಃ।
03164055c ಸುಖಂ ಶಕ್ರಸ್ಯ ಭವನೇ ಸರ್ವಕಾಮಸಮನ್ವಿತಃ।।
03164056a ಶೃಣ್ವನ್ವೈ ಗೀತಶಬ್ಧಂ ಚ ತೂರ್ಯಶಬ್ಧಂ ಚ ಪುಷ್ಕಲಂ।
03164056c ಪಶ್ಯಂಶ್ಚಾಪ್ಸರಸಃ ಶ್ರೇಷ್ಠಾ ನೃತ್ಯಮಾನಾಃ ಪರಂತಪ।।
ರಾಜನ್! ಪರಂತಪ! ಅಸ್ತ್ರಗಳನ್ನು ಪಡೆದು ನಾನು ಶಕ್ರನ ಭವನದಲ್ಲಿ ಸರ್ವಕಾಮಗಳನ್ನು ಪೂರೈಸಿಕೊಂಡು ಸುಪೂಜಿತನಾಗಿ, ಪುಷ್ಕಲವಾಗಿ ಗೀತಶಬ್ಧ ಮತ್ತು ತೂರ್ಯಶಬ್ಧಗಳನ್ನು ಕೇಳುತ್ತಾ, ಶ್ರೇಷ್ಠ ಅಪ್ಸರೆಯರು ನರ್ತಿಸುತ್ತಿರುವುದನ್ನು ನೋಡುತ್ತಾ ಸುಖದಿಂದ ಇದ್ದೆನು.
03164057a ತತ್ಸರ್ವಮನವಜ್ಞಾಯ ತಥ್ಯಂ ವಿಜ್ಞಾಯ ಭಾರತ।
03164057c ಅತ್ಯರ್ಥಂ ಪ್ರತಿಗೃಹ್ಯಾಹಮಸ್ತ್ರೇಷ್ವೇವ ವ್ಯವಸ್ಥಿತಃ।।
ಭಾರತ! ಅವೆಲ್ಲವನ್ನೂ ಕಡೆಗೆಣಿಸದೇ ಮತ್ತು ಸತ್ಯವನ್ನು ತಿಳಿದುಕೊಂಡು ಎಲ್ಲ ಅಸ್ತ್ರಗಳನ್ನು ವ್ಯವಸ್ಥಿತವಾಗಿ ಕಲಿತುಕೊಂಡೆನು.
03164058a ತತೋಽತುಷ್ಯತ್ಸಹಸ್ರಾಕ್ಷಸ್ತೇನ ಕಾಮೇನ ಮೇ ವಿಭುಃ।
03164058c ಏವಂ ಮೇ ವಸತೋ ರಾಜನ್ನೇಷ ಕಾಲೋಽತ್ಯಗಾದ್ದಿವಿ।।
ಆಗ ಸಹಸ್ರಾಕ್ಷನು ನನ್ನ ಆಸೆಯಂತೆ ತುಂಬಾ ಸಂತುಷ್ಟನಾದನು. ರಾಜನ್! ಹೀಗೆ ನಾನು ನನ್ನ ಕಾಲವನ್ನು ದೇವಲೋಕದಲ್ಲಿ ಕಳೆದೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಅರ್ಜುನವಾಕ್ಯೇ ಚತುಃಷಷ್ಟ್ಯಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ಅರ್ಜುನವಾಕ್ಯದಲ್ಲಿ ನೂರಾಅರವತ್ನಾಲ್ಕನೆಯ ಅಧ್ಯಾಯವು.
-
ಅರ್ಜುನನು ಈ ಮೊದಲೇ ತೀರ್ಥಯಾತ್ರೆಯನ್ನು ಮುಗಿಸಿದುದು ಅವನನ್ನು ಸ್ವರ್ಗಕ್ಕೆ ಹೋಗಲು ತಯಾರಿಸಲು ವಿಧಿಯು ರಚಿಸಿದ ಘಟನೆಯೇ? ↩︎