ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 71
ಸಾರ
ಋತುಪರ್ಣನ ರಥಘೋಷವನ್ನು ಕೇಳಿದ ದಮಯಂತಿಯು ನಲನು ಬಂದಿದ್ದಾನೆಂದು ತಿಳಿದು ಸಂತಸಗೊಂಡಿದುದು (1-18). ಋತುಪರ್ಣನ ಆಗಮನದಿಂದ ಅಚ್ಚರಿಗೊಂಡ ಭೀಮನು ಸ್ವಯಂವರದ ಸಿದ್ಧತೆಗಳನ್ನು ಕಾಣದೇ ಅಚ್ಚರಿಗೊಂಡ ಋತುಪರ್ಣನನ್ನು ಸತ್ಕರಿಸಿ ವಿಶ್ರಾಂತಿಗೆ ಕಳುಹಿಸಿದುದು (19-27). ಯೋಚಿಸಿದ ದಮಯಂತಿಯು ಬಾಹುಕನಲ್ಲಿಗೆ ದೂತಿಯೋರ್ವಳನ್ನು ಕಳುಹಿಸಲು ನಿರ್ಧರಿಸಿದುದು (28-34).
03071001 ಬೃಹದಶ್ವ ಉವಾಚ।
03071001a ತತೋ ವಿದರ್ಭಾನ್ಸಂಪ್ರಾಪ್ತಂ ಸಾಯಾಹ್ನೇ ಸತ್ಯವಿಕ್ರಮಂ।
03071001c ಋತುಪರ್ಣಂ ಜನಾ ರಾಜ್ಞೇ ಭೀಮಾಯ ಪ್ರತ್ಯವೇದಯನ್।।
ಬೃಹದಶ್ವನು ಹೇಳಿದನು: “ಸತ್ಯವಿಕ್ರಮ ಋತುಪರ್ಣನು ಸಾಯಂಕಾಲದಲ್ಲಿ ವಿದರ್ಭವನ್ನು ತಲುಪಿದನು. ಅವನು ಬಂದಿರುವುದರನ್ನು ಜನರು ರಾಜ ಭೀಮನಿಗೆ ತಿಳಿಸಿದರು.
03071002a ಸ ಭೀಮವಚನಾದ್ರಾಜಾ ಕುಂಡಿನಂ ಪ್ರಾವಿಶತ್ಪುರಂ।
03071002c ನಾದಯನ್ರಥಘೋಷೇಣ ಸರ್ವಾಃ ಸೋಪದಿಶೋ ದಶ।।
ರಾಜ ಭೀಮನ ವಚನದಂತೆ ತನ್ನ ರಥಘೋಶವು ಎಲ್ಲ ದಶದಿಕ್ಕುಗಳಲ್ಲಿಯೂ ಮೊಳಗುತ್ತಿರಲು ಕುಂಡಿನ ಪುರವನ್ನು ಪ್ರವೇಶಿಸಿದನು.
03071003a ತತಸ್ತಂ ರಥನಿರ್ಘೋಷಂ ನಲಾಶ್ವಾಸ್ತತ್ರ ಶುಶ್ರುವುಃ।
03071003c ಶ್ರುತ್ವಾ ಚ ಸಮಹೃಷ್ಯಂತ ಪುರೇವ ನಲಸನ್ನಿಧೌ।।
ನಲನ ಕುದುರೆಗಳು ರಥದ ಧ್ವನಿಯನ್ನು ಕೇಳಿದವು ಮತ್ತು ಕೇಳಿ ಹಿಂದೆ ನಲಸನ್ನಿಧಿಯಲ್ಲಿದ್ದಂತೆ ಹರ್ಷಗೊಂಡವು.
03071004a ದಮಯಂತೀ ಚ ಶುಶ್ರಾವ ರಥಘೋಷಂ ನಲಸ್ಯ ತಂ।
03071004c ಯಥಾ ಮೇಘಸ್ಯ ನದತೋ ಗಂಭೀರಂ ಜಲದಾಗಮೇ।।
ಮಳೆಗಾಲದ ಆದಿಯಲ್ಲಿ ಮೇಘದ ಗಂಭೀರ ಗುಡುಗಿನಂತಿದ್ದ ನಲನ ಆ ರಥಘೋಷವನ್ನು ದಮಯಂತಿಯೂ ಕೇಳಿದಳು.
03071005a ನಲೇನ ಸಂಗೃಹೀತೇಷು ಪುರೇವ ನಲವಾಜಿಷು।
03071005c ಸದೃಶಂ ರಥನಿರ್ಘೋಷಂ ಮೇನೇ ಭೈಮೀ ತಥಾ ಹಯಾಃ।।
ಹಯಗಳು ಯೋಚಿಸಿದ್ದಂತೆ ಭೈಮಿಯೂ ಕೂಡ ಹಿಂದೆ ನಲನು ತನ್ನ ಕುದುರೆಗಳನ್ನು ಹೂಡಿ ರಥ ಓಡಿಸುತ್ತಿದ್ದ ಹಾಗೆಯೇ ಈ ರಥಘೋಷವೂ ಇದೆ ಎಂದು ಯೋಚಿಸಿದಳು.
03071006a ಪ್ರಾಸಾದಸ್ಥಾಶ್ಚ ಶಿಖಿನಃ ಶಾಲಾಸ್ಥಾಶ್ಚೈವ ವಾರಣಾಃ।
03071006c ಹಯಾಶ್ಚ ಶುಶ್ರುವುಸ್ತತ್ರ ರಥಘೋಷಂ ಮಹೀಪತೇಃ।।
03071007a ತೇ ಶ್ರುತ್ವಾ ರಥನಿರ್ಘೋಷಂ ವಾರಣಾಃ ಶಿಖಿನಸ್ತಥಾ।
03071007c ಪ್ರಣೇದುರುನ್ಮುಖಾ ರಾಜನ್ಮೇಘೋದಯಮಿವೇಕ್ಷ್ಯ ಹ।।
ಗಚ್ಚಿನ ಮೇಲಿದ್ದ ನವಿಲುಗಳು, ಗಜಶಾಲೆಯಲ್ಲಿದ್ದ ಆನೆಗಳು, ಮತ್ತು ಕುದುರೆಗಳು ಮಹೀಪತಿಯ ಈ ರಥಘೋಶವನ್ನು ಕೇಳಿ, ಮಳೆಗಾಲ ಪ್ರಾರಂಭವಾಯಿತೇನೋ ಎಂದು ನೋಡುವರೀತಿಯಲ್ಲಿ ಮೇಲೆ ನೋಡತೊಡಗಿದವು.
03071008 ದಮಯಂತ್ಯುವಾಚ।
03071008a ಯಥಾಸೌ ರಥನಿರ್ಘೋಷಃ ಪೂರಯನ್ನಿವ ಮೇದಿನೀಂ।
03071008c ಮಮ ಹ್ಲಾದಯತೇ ಚೇತೋ ನಲ ಏಷ ಮಹೀಪತಿಃ।।
ದಮಯಂತಿಯು ಹೇಳಿದಳು: “ಮೇದಿನಿಯನ್ನೇ ಆವರಿಸುವಂತಿದ್ದ ಈ ರಥನಿರ್ಘೋಷವು ನನಗೆ ಇಷ್ಟೊಂದು ಸಂತೋಷವನ್ನು ಕೊಡುತ್ತಿದೆಯಾದರೆ ಇವನು ಮಹೀಪತಿ ನಲನೇ ಇರಬೇಕು.
03071009a ಅದ್ಯ ಚಂದ್ರಾಭವಕ್ತ್ರಂ ತಂ ನ ಪಶ್ಯಾಮಿ ನಲಂ ಯದಿ।
03071009c ಅಸಂಖ್ಯೇಯಗುಣಂ ವೀರಂ ವಿನಶಿಷ್ಯಾಮ್ಯಸಂಶಯಂ।।
ಇಂದು ಆ ಚಂದ್ರಾಭವಕ್ತ್ರ ಅಸಂಕೇಯಗುಣ ವೀರ ನಲನನ್ನು ನೋಡದೇ ಇದ್ದರೆ ನಾನು ನಿಸ್ಸಂದೇಹವಾಗಿ ನಾಶವಾಗಿ ಹೋಗುತ್ತೇನೆ.
03071010a ಯದಿ ವೈ ತಸ್ಯ ವೀರಸ್ಯ ಬಾಹ್ವೋರ್ನಾದ್ಯಾಹಮಂತರಂ।
03071010c ಪ್ರವಿಶಾಮಿ ಸುಖಸ್ಪರ್ಶಂ ವಿನಶಿಷ್ಯಾಮ್ಯಸಂಶಯಂ।।
ಇಂದು ನಾನು ಆ ವೀರನ ಬಾಹುಗಳ ಸುಖಸ್ಪರ್ಷವನ್ನು ಹೊಂದದೇ ಇದ್ದರೆ ನಿಸ್ಸಂದೇಹವಾಗಿ ನಾಶವಾಗಿ ಹೋಗುತ್ತೇನೆ.
03071011a ಯದಿ ಮಾಂ ಮೇಘನಿರ್ಘೋಷೋ ನೋಪಗಚ್ಚತಿ ನೈಷಧಃ।
03071011c ಅದ್ಯ ಚಾಮೀಕರಪ್ರಖ್ಯೋ ವಿನಶಿಷ್ಯಾಮ್ಯಸಂಶಯಂ।।
ಇಂದು ಆ ಮೇಘನಿರ್ಘೋಷ, ಬಂಗಾರದಂತೆ ಹೊಳೆಯುವ ನೈಷಧನು ನನ್ನಲ್ಲಿಗೆ ಬರದೇ ಇದ್ದರೆ ನಿಸ್ಸಂದೇಹವಾಗಿ ನಾನು ನಾಶವಾಗುತ್ತೇನೆ.
03071012a ಯದಿ ಮಾಂ ಸಿಂಹವಿಕ್ರಾಂತೋ ಮತ್ತವಾರಣವಾರಣಃ।
03071012c ನಾಭಿಗಚ್ಚತಿ ರಾಜೇಂದ್ರೋ ವಿನಶಿಷ್ಯಾಮ್ಯಸಂಶಯಂ।।
ಇಂದು ಮತ್ತಗಜವನ್ನೂ ನಿಲ್ಲಿಸುವಂತಹ ಸಿಂಹವಿಕ್ರಾಂತ ರಾಜೇಂದ್ರನು ಬರದೇ ಇದ್ದರೆ ನಾನು ನಿಸ್ಸಂದೇಹವಾಗಿಯೂ ನಾಶವಾಗುತ್ತೇನೆ.
03071013a ನ ಸ್ಮರಾಮ್ಯನೃತಂ ಕಿಂ ಚಿನ್ನ ಸ್ಮರಾಮ್ಯನುಪಾಕೃತಂ।
03071013c ನ ಚ ಪರ್ಯುಷಿತಂ ವಾಕ್ಯಂ ಸ್ವೈರೇಷ್ವಪಿ ಮಹಾತ್ಮನಃ।।
03071014a ಪ್ರಭುಃ ಕ್ಷಮಾವಾನ್ವೀರಶ್ಚ ಮೃದುರ್ದಾಂತೋ ಜಿತೇಂದ್ರಿಯಃ।
03071014c ರಹೋಽನೀಚಾನುವರ್ತೀ ಚ ಕ್ಲೀಬವನ್ಮಮ ನೈಷಧಃ।।
ಸುಳ್ಳನ್ನಾಡಿದ್ದೇ ನೆನಪಿಲ್ಲ. ಮಾಡಿದ ತಪ್ಪುಗಳು ಯಾವುದೂ ನೆನಪಿಲ್ಲ. ಆ ಮಹಾತ್ಮನು ತಮಾಷೆಗೆಂದಾದರೂ ಕೊಟ್ಟ ಮಾತನ್ನು ಇಟ್ಟುಕೊಳ್ಳದೇ ಇದ್ದುದು ನೆನಪಿಲ್ಲ. ವೀರನೂ, ಕ್ಷಮಾವಂತನೂ, ಮೃದುಸ್ವಭಾವದವನೂ, ಜಿತೇಂದ್ರಿಯನೂ ಆದ ಆ ನನ್ನ ಪ್ರಭು ನನ್ನ ನೈಷಧನಿಗೆ ಯಾವ ನೀಚ ವೃತ್ತಿಗಳೂ ಇಲ್ಲ.
03071015a ಗುಣಾಂಸ್ತಸ್ಯ ಸ್ಮರಂತ್ಯಾ ಮೇ ತತ್ಪರಾಯಾ ದಿವಾನಿಶಂ।
03071015c ಹೃದಯಂ ದೀರ್ಯತ ಇದಂ ಶೋಕಾತ್ಪ್ರಿಯವಿನಾಕೃತಂ।।
ಅವನ ಗುಣಗಳನ್ನು ಸ್ಮರಿಸುತ್ತಾ, ದಿನ ರಾತ್ರಿಯೂ ಅವನ ಕುರಿತೇ ಚಿಂತಿಸುತ್ತಾ, ಪ್ರಿಯನಿಂದ ದೂರವಾದ ಈ ಹೃದಯವು ಶೋಕದಿಂದ ದೀನವಾಗಿದೆ.””
03071016 ಬೃಹದಶ್ವ ಉವಾಚ।
03071016a ಏವಂ ವಿಲಪಮಾನಾ ಸಾ ನಷ್ಟಸಂಜ್ಞೇವ ಭಾರತ।
03071016c ಆರುರೋಹ ಮಹದ್ವೇಶ್ಮ ಪುಣ್ಯಶ್ಲೋಕದಿದೃಕ್ಷಯಾ।।
ಬೃಹದಶ್ವನು ಹೇಳಿದನು: “ಭಾರತ! ಈ ರೀತಿ ವಿಲಪಿಸುತ್ತಾ ಬುದ್ದಿ ಕಳೆದುಕೊಂಡವಳಂತೆ ಅವಳು ಪುಣ್ಯಶ್ಲೋಕನನ್ನು ನೋಡಲೋಸುಗ ಅರಮನೆಯ ಮಹಾ ಮಹಡಿಗೆ ಹತ್ತಿ ಹೋದಳು.
03071017a ತತೋ ಮಧ್ಯಮಕಕ್ಷಾಯಾಂ ದದರ್ಶ ರಥಮಾಸ್ಥಿತಂ।
03071017c ಋತುಪರ್ಣಂ ಮಹೀಪಾಲಂ ಸಹವಾರ್ಷ್ಣೇಯಬಾಹುಕಂ।।
ಅಲ್ಲಿಂದ ರಥದ ಮಧ್ಯಮ ಕಕ್ಷದಲ್ಲಿ ಬಾಹುಕ ಮತ್ತು ವಾರ್ಷ್ಣೇಯರ ಸಹಿತ ಕುಳಿತಿದ್ದ ಮಹೀಪಾಲ ಋತುಪರ್ಣನನ್ನು ನೋಡಿದಳು.
03071018a ತತೋಽವತೀರ್ಯ ವಾರ್ಷ್ಣೇಯೋ ಬಾಹುಕಶ್ಚ ರಥೋತ್ತಮಾತ್।
03071018c ಹಯಾಂಸ್ತಾನವಮುಚ್ಯಾಥ ಸ್ಥಾಪಯಾಮಾಸತೂ ರಥಂ।।
ವಾರ್ಷ್ಣೇಯ ಮತ್ತು ಬಾಹುಕರು ಆ ಉತ್ತಮ ರಥವನ್ನು ನಿಲ್ಲಿಸಿ ರಥದಿಂದಿಳಿದು ಹಯಗಳನ್ನು ಬಿಚ್ಚಿದರು.
03071019a ಸೋಽವತೀರ್ಯ ರಥೋಪಸ್ಥಾದೃತುಪರ್ಣೋ ನರಾಧಿಪಃ।
03071019c ಉಪತಸ್ಥೇ ಮಹಾರಾಜ ಭೀಮಂ ಭೀಮಪರಾಕ್ರಮಂ।।
ನರಾಧಿಪ ಋತುಪರ್ಣನು ರಥದಿಂದ ಇಳಿದು ಭೀಮಪರಾಕ್ರಮಿ ಮಹಾರಾಜ ಭೀಮನ ಬಳಿಬಂದನು.
03071020a ತಂ ಭೀಮಃ ಪ್ರತಿಜಗ್ರಾಹ ಪೂಜಯಾ ಪರಯಾ ತತಃ।
03071020c ಅಕಸ್ಮಾತ್ಸಹಸಾ ಪ್ರಾಪ್ತಂ ಸ್ತ್ರೀಮಂತ್ರಂ ನ ಸ್ಮ ವಿಂದತಿ।।
ಭೀಮನು ಅಕಸ್ಮಾತ್ತಾಗಿ ಯಾವುದೇ ಕಾರಣವೂ ಇಲ್ಲದೇ ಬಂದಿದ್ದ ಅವನನ್ನು ಉತ್ತಮ ಗೌರವದಿಂದ ಸ್ವಾಗತಿಸಿದನು. ಅವನಿಗೆ ಸ್ತ್ರೀಯರು ಹೂಡಿದ್ದ ಉಪಾಯವು ತಿಳಿದಿರಲಿಲ್ಲ.
03071021a ಕಿಂ ಕಾರ್ಯಂ ಸ್ವಾಗತಂ ತೇಽಸ್ತು ರಾಜ್ಞಾ ಪೃಷ್ಟಶ್ಚ ಭಾರತ।
03071021c ನಾಭಿಜಜ್ಞೇ ಸ ನೃಪತಿರ್ದುಹಿತ್ರರ್ಥೇ ಸಮಾಗತಂ।।
ಭಾರತ! ತನ್ನ ಮಗಳ ಸಲುವಾಗಿಯೇ ಆ ನೃಪತಿಯು ಬಂದಿದ್ದಾನೆ ಎಂದು ತಿಳಿಯದೇ, “ಸ್ವಾಗತ! ನನ್ನಿಂದ ಯಾವ ಕಾರ್ಯವಾಗಬೇಕು?” ಎಂದು ರಾಜನು ಕೇಳಿದನು.
03071022a ಋತುಪರ್ಣೋಽಪಿ ರಾಜಾ ಸ ಧೀಮಾನ್ಸತ್ಯಪರಾಕ್ರಮಃ।
03071022c ರಾಜಾನಂ ರಾಜಪುತ್ರಂ ವಾ ನ ಸ್ಮ ಪಶ್ಯತಿ ಕಂ ಚನ।
03071022 ನೈವ ಸ್ವಯಂವರಕಥಾಂ ನ ಚ ವಿಪ್ರಸಮಾಗಮಂ।।
ಧೀಮಂತ ಸತ್ಯಪರಾಕ್ರಮಿ ರಾಜ ಋತುಪರ್ಣನಾದರೂ ರಾಜರನ್ನಾಗಲೀ, ರಾಜಪುತ್ರರನ್ನಾಗಲೀ ಯಾರನ್ನೂ ನೋಡಲಿಲ್ಲ. ಸ್ವಯಂವರದ ಮಾತನ್ನೂ ಕೇಳಲಿಲ್ಲ ಮತ್ತು ವಿಪ್ರರ ಸಮಾಗಮವನ್ನೂ ನೋಡಲಿಲ್ಲ.
03071023a ತತೋ ವಿಗಣಯನ್ರಾಜಾ ಮನಸಾ ಕೋಸಲಾಧಿಪಃ।
03071023c ಆಗತೋಽಸ್ಮೀತ್ಯುವಾಚೈನಂ ಭವಂತಮಭಿವಾದಕಃ।।
ಮನಸ್ಸಿನಲ್ಲಿಯೇ ಇದನ್ನೆಲ್ಲಾ ಯೋಚಿಸಿ ಕೋಸಲಾಧಿಪನು “ನಿಮ್ಮನ್ನು ಅಭಿನಂದಿಸಲು ನಾನು ಬಂದಿದ್ದೇನೆ!” ಎಂದು ಹೇಳಿದನು.
03071024a ರಾಜಾಪಿ ಚ ಸ್ಮಯನ್ಭೀಮೋ ಮನಸಾಭಿವಿಚಿಂತಯತ್।
03071024c ಅಧಿಕಂ ಯೋಜನಶತಂ ತಸ್ಯಾಗಮನಕಾರಣಂ।।
03071025a ಗ್ರಾಮಾನ್ಬಹೂನತಿಕ್ರಮ್ಯ ನಾಧ್ಯಗಚ್ಚದ್ಯಥಾತಥಂ।
03071025c ಅಲ್ಪಕಾರ್ಯಂ ವಿನಿರ್ದಿಷ್ಟಂ ತಸ್ಯಾಗಮನಕಾರಣಂ।।
ರಾಜ ಭೀಮನಾದರೂ ಮುಗುಳ್ನಕ್ಕು ತನ್ನ ಮನಸ್ಸಿನಲ್ಲಿಯೇ ಯೋಚಿಸಿದನು: “ಬಹು ಗ್ರಾಮಗಳನ್ನು ಅತಿಕ್ರಮಿಸಿ ಶತಯೋಜನಕ್ಕಿಂತಲೂ ಅಧಿಕ ದೂರ ಬರಲು ಇವನಿಗೆ ಏನಾದರೊಂದು ಕಾರಣವಿರಬಹುದು. ಸುಮ್ಮನೇ ಇಲ್ಲಿಗೆ ಬಂದಿರಲಿಕ್ಕಿಲ್ಲ. ಇವನು ಇಲ್ಲಿಗೆ ಬರಲು ನಿರ್ದಿಷ್ಟವಾದ ಅಲ್ಪಕಾರ್ಯವೊಂದು ಇದ್ದಿರಬಹುದು.”
03071026a ನೈತದೇವಂ ಸ ನೃಪತಿಸ್ತಂ ಸತ್ಕೃತ್ಯ ವ್ಯಸರ್ಜಯತ್।
03071026c ವಿಶ್ರಾಮ್ಯತಾಮಿತಿ ವದನ್ಕ್ಲಾಂತೋಽಸೀತಿ ಪುನಃ ಪುನಃ।।
03071027a ಸ ಸತ್ಕೃತಃ ಪ್ರಹೃಷ್ಟಾತ್ಮಾ ಪ್ರೀತಃ ಪ್ರೀತೇನ ಪಾರ್ಥಿವಃ।
03071027c ರಾಜಪ್ರೇಷ್ಯೈರನುಗತೋ ದಿಷ್ಟಂ ವೇಶ್ಮ ಸಮಾವಿಶತ್।।
ಆ ನೃಪತಿಯನ್ನು ಸತ್ಕರಿಸಿ “ವಿಶ್ರಮಿಸು!” ಎಂದು ಕಳುಹಿಸಿದನು. “ಸತ್ಕೃತನಾಗಿದ್ದೇನೆ!” ಎಂದು ಪುನಃ ಪುನಃ ಅವನು ಹೇಳಿದನು. ಸತ್ಕಾರದಿಂದ ಹರ್ಷಿತನಾದ ಅವನು ರಾಜನ ಸಹಚರರೊಡಗೂಡಿ ತೋರಿಸಿದ ಅತಿಥಿಗೃಹಕ್ಕೆ ಹೋದನು.
03071028a ಋತುಪರ್ಣೇ ಗತೇ ರಾಜನ್ವಾರ್ಷ್ಣೇಯಸಹಿತೇ ನೃಪೇ।
03071028c ಬಾಹುಕೋ ರಥಮಾಸ್ಥಾಯ ರಥಶಾಲಾಮುಪಾಗಮತ್।।
03071029a ಸ ಮೋಚಯಿತ್ವಾ ತಾನಶ್ವಾನ್ಪರಿಚಾರ್ಯ ಚ ಶಾಸ್ತ್ರತಃ।
03071029c ಸ್ವಯಂ ಚೈತಾನ್ಸಮಾಶ್ವಾಸ್ಯ ರಥೋಪಸ್ಥ ಉಪಾವಿಶತ್।।
ರಾಜನ್! ವಾರ್ಷ್ಣೇಯನ ಜೊತೆಯಲ್ಲಿ ನೃಪ ಋತುಪರ್ಣನು ಹೋದ ನಂತರ ಬಾಹುಕನು ರಥಶಾಲೆಗೆ ಹೋಗಿ ರಥವನ್ನು ನಿಲ್ಲಿಸಿದನು. ಆ ಅಶ್ವಗಳನ್ನು ಬಿಚ್ಚಿ ಅವುಗಳಿಗೆ ಶಾಸ್ತ್ರೋಕ್ತ ಪರಿಚರಿ ಮಾಡಿದನು. ಅವುಗಳ ನೀಡಿಕೆಗಳನ್ನು ಸ್ವಯಂ ಪೂರೈಸಿ ರಥವನ್ನೇರಿ ಕುಳಿತುಕೊಂಡನು.
03071030a ದಮಯಂತೀ ತು ಶೋಕಾರ್ತಾ ದೃಷ್ಟ್ವಾ ಭಾಂಗಸ್ವರಿಂ ನೃಪಂ।
03071030c ಸೂತಪುತ್ರಂ ಚ ವಾರ್ಷ್ಣೇಯಂ ಬಾಹುಕಂ ಚ ತಥಾವಿಧಂ।।
03071031a ಚಿಂತಯಾಮಾಸ ವೈದರ್ಭೀ ಕಸ್ಯೈಷ ರಥನಿಸ್ವನಃ।
03071031c ನಲಸ್ಯೇವ ಮಹಾನಾಸೀನ್ನ ಚ ಪಶ್ಯಾಮಿ ನೈಷಧಂ।।
ನೃಪ ಭಾಂಗಸ್ವರಿ, ಸೂತಪುತ್ರ ವಾಷ್ಣೇಯ ಮತ್ತು ಕುರೂಪಿ ಬಾಹುಕನನ್ನು ಕಂಡು ಶೋಕಾರ್ತಳಾದ ವೈದರ್ಭಿ ದಮಯಂತಿಯು ಚಿಂತಿಸತೊಡಗಿದಳು: “ನಲನಂತೆಯೇ ರಥಧ್ವನಿಯನ್ನು ಮಾಡಿದವರು ಯಾರು? ನೈಷಧನೇ ಕಾಣುತ್ತಿಲ್ಲವಲ್ಲ!
03071032a ವಾರ್ಷ್ಣೇಯೇನ ಭವೇನ್ನೂನಂ ವಿದ್ಯಾ ಸೈವೋಪಶಿಕ್ಷಿತಾ।
03071032c ತೇನಾಸ್ಯ ರಥನಿರ್ಘೋಷೋ ನಲಸ್ಯೇವ ಮಹಾನಭೂತ್।।
ಬಹುಷಃ ವಾರ್ಷ್ಣೇಯನೇ ಈ ವಿದ್ಯೆಯನ್ನು ಕಲಿತಿರಬಹುದು. ಆದರಿಂದಲೇ ಅವನು ನಲನಂತೆಯೇ ರಥ ನಿರ್ಘೋಷ ಮಾಡಿರಬಹುದು.
03071033a ಆಹೋ ಸ್ವಿದೃತುಪರ್ಣೋಽಪಿ ಯಥಾ ರಾಜಾ ನಲಸ್ತಥಾ।
03071033c ತತೋಽಯಂ ರಥನಿರ್ಘೋಷೋ ನೈಷಧಸ್ಯೇವ ಲಕ್ಷ್ಯತೇ।।
ಅಥವಾ ರಾಜ ಋತುಪರ್ಣನು ನಲನಷ್ಟೇ ನಿಪುಣನಿರಬಹುದು. ಆದ್ದರಿಂದ ಅವನ ರಥನಿರ್ಘೋಶವು ನಲನಂತೆಯೇ ಕೇಳಿರಬಹುದು.”
03071034a ಏವಂ ವಿತರ್ಕಯಿತ್ವಾ ತು ದಮಯಂತೀ ವಿಶಾಂ ಪತೇ।
03071034c ದೂತೀಂ ಪ್ರಸ್ಥಾಪಯಾಮಾಸ ನೈಷಧಾನ್ವೇಷಣೇ ನೃಪ।।
ವಿಶಾಂಪತೇ! ಈ ರೀತಿ ತರ್ಕಿಸುತ್ತಾ ದಮಯಂತಿಯು ನೃಪ ನೈಷಧನನ್ನು ಹುಡುಕಲೋಸುಗ ದೂತಿಯೊಬ್ಬಳನ್ನು ಕಳುಹಿಸಿದಳು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಋತುಪರ್ಣಸ್ಯ ಭೀಮಪುರಪ್ರವೇಶೇ ಏಕಸಪ್ತತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಋತುಪರ್ಣನ ಭೀಮಪುರಪ್ರವೇಶ ಎನ್ನುವ ಎಪ್ಪತ್ತೊಂದನೆಯ ಅಧ್ಯಾಯವು.