ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 70
ಸಾರ
ಋತುಪರ್ಣನು ತನ್ನ ಉತ್ತರೀಯವು ಕೆಳಗೆ ಬಿದ್ದಿದೆ, ರಥನಿಲ್ಲಿಸೆಂದು ಹೇಳಲು ಬಾಹುಕನು ಬಹುದೂರ ಬಂದಾಗಿದೆ, ಅದನ್ನು ಎತ್ತಿಕೊಂಡು ಬರಲಿಕ್ಕಾಗುವುದಿಲ್ಲ ಎನ್ನುವುದು (1-5). ಬಾಹುಕನು ಹೀಗೆ ಹೇಳುವಷ್ಟರಲ್ಲಿ ಋತುಪರ್ಣನು ವನದಲ್ಲಿ ಬಿಭೀತಕ ಮರವನ್ನು ನೋಡಿ ಅದರಲ್ಲಿ ಎಷ್ಟು ಎಲೆಗಳು, ಹಣ್ಣುಗಳಿವೆಯೆಂದು ಲೆಖ್ಕ ಮಾಡಿ ತನ್ನಲ್ಲಿದ್ದ ಪರಮ ಬಲವನ್ನು ತೋರಿಸಿದುದು (6-10). ಆಗ ಬಾಹುಕನು ರಥವನ್ನು ನಿಲ್ಲಿಸಿ, ಋತುಪರ್ಣನಿಗೆ ಕುಂಡಿನಪುರಕ್ಕೆ ಬೇಗ ತಲುಪಿಸುತ್ತೇನೆಂಬ ಭರವಸೆಯನ್ನು ನೀಡಿ, ಮರದಲ್ಲಿದ್ದ ಎಲೆ-ಹಣ್ಣುಗಳನ್ನು ಎಣಿಸಿ, ಋತುಪರ್ಣನ ಲೆಖ್ಕವು ಸರಿಯಾದುದೆಂದು ಖಾತ್ರಿಪಡಿಸಿಕೊಂಡಿದುದು (11-22). ಬಾಹುಕನು ಋತುಪರ್ಣನಿಂದ ಅಕ್ಷಹೃದಯ ವಿದ್ಯೆಯನ್ನು ಪಡೆದುದು; ತಕ್ಷಣವೇ ಕಲಿಯು ಅವನ ಶರೀರದಿಂದ ಕಾರ್ಕೋಟಕನ ವಿಷವನ್ನು ಕಾರುತ್ತಾ ಹೊರಬಿದ್ದು ಬಿಭೀತಕವನ್ನು ಪ್ರವೇಶಿಸಿದು; ನಲನು ತನ್ನ ತೇಜಸ್ಸನ್ನು – ರೂಪವನ್ನಲ್ಲ - ಪುನಃ ಪಡೆದುದು (23-39).
03070001 ಬೃಹದಶ್ವ ಉವಾಚ।
03070001a ಸ ನದೀಃ ಪರ್ವತಾಂಶ್ಚೈವ ವನಾನಿ ಚ ಸರಾಂಸಿ ಚ।
03070001c ಅಚಿರೇಣಾತಿಚಕ್ರಾಮ ಖೇಚರಃ ಖೇ ಚರನ್ನಿವ।।
ಬೃದದಶ್ವನು ಹೇಳಿದನು: “ಅವನು ಎಲ್ಲಿಯೂ ನಿಲ್ಲದೇ ಖೇಚರನು ಆಕಾಶದಲ್ಲಿ ಹಾರುವಂತೆ ನದಿ-ಪರ್ವತ-ವನ-ಸರೋವರಗಳನ್ನು ಅತಿಕ್ರಮಿಸಿದನು.
03070002a ತಥಾ ಪ್ರಯಾತೇ ತು ರಥೇ ತದಾ ಭಾಂಗಸ್ವರಿರ್ನೃಪಃ।
03070002c ಉತ್ತರೀಯಮಥಾಪಶ್ಯದ್ಭ್ರಷ್ಟಂ ಪರಪುರಂಜಯಃ।।
ಹೀಗೆ ರಥವು ವೇಗದಿಂದ ಓಡುತ್ತಿರುವಾಗ ಪರಪುರಂಜಯ ನೃಪ ಭಾಂಗಸ್ವರಿಯು ತನ್ನ ಉತ್ತರೀಯವು ಕಳಚಿ ಬಿದ್ದುದನ್ನು ನೋಡಿದನು.
03070003a ತತಃ ಸ ತ್ವರಮಾಣಸ್ತು ಪಟೇ ನಿಪತಿತೇ ತದಾ।
03070003c ಗ್ರಹೀಷ್ಯಾಮೀತಿ ತಂ ರಾಜಾ ನಲಮಾಹ ಮಹಾಮನಾಃ।।
ವೇಗದಲ್ಲಿ ಹೋಗುತ್ತಿರುವಾಗ ಉತ್ತರೀಯವು ಬಿದ್ದ ಕೂಡಲೇ ಮಹಾಮನ ರಾಜನು ನಲನಿಗೆ ಹೇಳಿದನು: “ಅದನ್ನು ತೆಗೆದುಕೊಳ್ಳುತ್ತೇನೆ.”
03070004a ನಿಗೃಹ್ಣೀಷ್ವ ಮಹಾಬುದ್ಧೇ ಹಯಾನೇತಾನ್ಮಹಾಜವಾನ್।
03070004c ವಾರ್ಷ್ಣೇಯೋ ಯಾವದೇತಂ ಮೇ ಪಟಮಾನಯತಾಮಿತಿ।।
“ಮಹಾಬುದ್ಧಿ! ಈ ಮಹಾವೇಗದಲ್ಲಿ ಚಲಿಸುತ್ತಿರುವ ಹಯಗಳನ್ನು ನಿಲ್ಲಿಸು. ಯಾಕೆಂದರೆ ವಾರ್ಷ್ಣೇಯನು ಬಿದ್ದುಹೋದ ನನ್ನ ಉತ್ತರೀಯವನ್ನು ತೆಗೆದುಕೊಂಡು ಬರುತ್ತಾನೆ.”
03070005a ನಲಸ್ತಂ ಪ್ರತ್ಯುವಾಚಾಥ ದೂರೇ ಭ್ರಷ್ಟಃ ಪಟಸ್ತವ।
03070005c ಯೋಜನಂ ಸಮತಿಕ್ರಾಂತೋ ನ ಸ ಶಕ್ಯಸ್ತ್ವಯಾ ಪುನಃ।।
ನಲನು ಉತ್ತರಿಸಿದನು: “ಬಹಳ ದೂರದ ಹಿಂದೆಯೇ ನಿನ್ನ ಉತ್ತರೀಯವು ಬಿದ್ದುಹೋಯಿತು. ಅಲ್ಲಿಂದ ಒಂದು ಯೋಜನ ದೂರ ಈಗಾಗಲೇ ಬಂದುಬಿಟ್ಟಿದ್ದೇವೆ. ಪುನಃ ಅದನ್ನು ತೆಗೆದುಕೊಂಡು ಬರಲು ಶಕ್ಯವಾಗುವುದಿಲ್ಲ.”
03070006a ಏವಮುಕ್ತೇ ನಲೇನಾಥ ತದಾ ಭಾಂಗಸ್ವರಿರ್ನೃಪಃ।
03070006c ಆಸಸಾದ ವನೇ ರಾಜನ್ಫಲವಂತಂ ಬಿಭೀತಕಂ।।
ರಾಜನ್! ನಲನು ಹೀಗೆ ಹೇಳುತ್ತಿರುವಾಗಲೇ ನೃಪ ಭಾಂಗಸ್ವರಿಯು ಆ ವನದಲ್ಲಿ ಹಣ್ಣುಗಳಿಂದ ತುಂಬಿದ್ದ ಒಂದು ಬಿಭೀತಕವನ್ನು ಕಂಡನು.
03070007a ತಂ ದೃಷ್ಟ್ವಾ ಬಾಹುಕಂ ರಾಜಾ ತ್ವರಮಾಣೋಽಭ್ಯಭಾಷತ।
03070007c ಮಮಾಪಿ ಸೂತ ಪಶ್ಯ ತ್ವಂ ಸಂಖ್ಯಾನೇ ಪರಮಂ ಬಲಂ।।
ಅದನ್ನು ನೋಡಿ, ಅವಸರದಲ್ಲಿದ್ದ ರಾಜನು ಬಾಹುಕನಿಗೆ ಹೇಳಿದನು: “ಸೂತ! ಎಣಿಸುವುದರಲ್ಲಿ ನನ್ನಲ್ಲಿರುವ ಈ ಪರಮ ಬಲವನ್ನು ನೋಡು.
03070008a ಸರ್ವಃ ಸರ್ವಂ ನ ಜಾನಾತಿ ಸರ್ವಜ್ಞೋ ನಾಸ್ತಿ ಕಶ್ಚನ।
03070008c ನೈಕತ್ರ ಪರಿನಿಷ್ಠಾಸ್ತಿ ಜ್ಞಾನಸ್ಯ ಪುರುಷೇ ಕ್ವ ಚಿತ್।।
ಎಲ್ಲರೂ ಎಲ್ಲವನ್ನೂ ತಿಳಿದಿರುವುದಿಲ್ಲ. ಸರ್ವಜ್ಞನೆನ್ನುವನು ಯಾರೂ ಇಲ್ಲ. ಜ್ಞಾನವು ಒಬ್ಬನೇ ಪುರುಷನಲ್ಲಿ ಏಕತ್ರವಾಗಿ ಯಾವಾಗಲೂ ಇರುವುದಿಲ್ಲ.
03070009a ವೃಕ್ಷೇಽಸ್ಮಿನ್ಯಾನಿ ಪರ್ಣಾನಿ ಫಲಾನ್ಯಪಿ ಚ ಬಾಹುಕ।
03070009c ಪತಿತಾನಿ ಚ ಯಾನ್ಯತ್ರ ತತ್ರೈಕಮಧಿಕಂ ಶತಂ।
03070009 ಏಕಪತ್ರಾಧಿಕಂ ಪತ್ರಂ ಫಲಮೇಕಂ ಚ ಬಾಹುಕ।।
ಬಾಹುಕ! ಕೆಳಗೆ ಬಿದ್ದ ಮತ್ತು ಮೇಲೆ ಇರುವ ಎಲ್ಲವನ್ನೂ ಸೇರಿ ಈ ವೃಕ್ಷದಲ್ಲಿ ನೂರಾ ಒಂದು ಎಲೆ ಮತ್ತು ಪುಷ್ಪಗಳಿವೆ. ಬಾಹುಕ! ಒಂದು ಎಲೆ ಮತ್ತು ಒಂದು ಫಲ ಮಾತ್ರ ಅಧಿಕವಾಗಿದೆ.
03070010a ಪಂಚ ಕೋಟ್ಯೋಽಥ ಪತ್ರಾಣಾಂ ದ್ವಯೋರಪಿ ಚ ಶಾಖಯೋಃ।
03070010c ಪ್ರಚಿನುಹ್ಯಸ್ಯ ಶಾಖೇ ದ್ವೇ ಯಾಶ್ಚಾಪ್ಯನ್ಯಾಃ ಪ್ರಶಾಖಿಕಾಃ।
03070010 ಆಭ್ಯಾಂ ಫಲಸಹಸ್ರೇ ದ್ವೇ ಪಂಚೋನಂ ಶತಮೇವ ಚ।।
ಆ ಎರಡೂ ಶಾಖೆಗಳಲ್ಲಿ ಐದು ಕೋಟಿ ಎಲೆಗಳಿವೆ. ಆ ಎರಡೂ ಶಾಖೆಗಳನ್ನು ಮತ್ತು ರೆಂಬೆಗಳನ್ನು ತೆಗೆದುಕೊಂಡರೆ, ಅವುಗಳಲ್ಲಿ ಎರಡು ಸಾವಿರದ ಒಂದು ನೂರಾ ತೊಂಭತ್ತೈದು ಫಲಗಳು ದೊರಕುವವು.”
03070011a ತತೋ ರಥಾದವಪ್ಲುತ್ಯ ರಾಜಾನಂ ಬಾಹುಕೋಽಬ್ರವೀತ್।
03070011c ಪರೋಕ್ಷಮಿವ ಮೇ ರಾಜನ್ಕತ್ಥಸೇ ಶತ್ರುಕರ್ಶನ।।
ಆಗ ಬಾಹುಕನು ರಥದಿಂದ ಕೆಳಗಿಳಿದು ರಾಜನನ್ನು ಉದ್ದೇಶಿಸಿ ಹೇಳಿದನು: “ಶತ್ರುಕರ್ಶನ ರಾಜನ್! ನೀನು ಹೇಳುತ್ತಿರುವುದು ನನಗೆ ಮೀರಿದ್ದು.
03070012a ಅಥ ತೇ ಗಣಿತೇ ರಾಜನ್ವಿದ್ಯತೇ ನ ಪರೋಕ್ಷತಾ।
03070012c ಪ್ರತ್ಯಕ್ಷಂ ತೇ ಮಹಾರಾಜ ಗಣಯಿಷ್ಯೇ ಬಿಭೀತಕಂ।।
ರಾಜನ್! ಆದ್ದರಿಂದ ನೀನು ಲೆಖ್ಕ ಮಾಡಿದುದರಲ್ಲಿ ವಿಶೇಷವೇನೂ ಇಲ್ಲ. ಮಹಾರಾಜ! ನಿನ್ನ ಪ್ರತ್ಯಕ್ಷದಲ್ಲಿಯೇ ನಾನು ಈ ಬಿಭೀತಕವನ್ನು ಎಣಿಸುತ್ತೇನೆ.
03070013a ಅಹಂ ಹಿ ನಾಭಿಜಾನಾಮಿ ಭವೇದೇವಂ ನ ವೇತಿ ಚ।
03070013c ಸಂಖ್ಯಾಸ್ಯಾಮಿ ಫಲಾನ್ಯಸ್ಯ ಪಶ್ಯತಸ್ತೇ ಜನಾಧಿಪ।
03070013 ಮುಹೂರ್ತಮಿವ ವಾರ್ಷ್ಣೇಯೋ ರಶ್ಮೀನ್ಯಚ್ಚತು ವಾಜಿನಾಂ।।
ಯಾಕೆಂದರೆ ನೀನು ಮಾಡಿದುದು ಸರಿಯೋ ಇಲ್ಲವೋ ಎಂದು ನನಗೆ ತಿಳಿಯದು. ಜನಾಧಿಪ! ನಿನ್ನ ಎದುರಿನಲ್ಲಿಯೇ ನಾನು ಇದರಲ್ಲಿರುವ ಫಲಗಳನ್ನು ಎಣಿಸುತ್ತೇನೆ. ವಾರ್ಷ್ಣೇಯ! ಸ್ವಲ್ಪ ಹೊತ್ತು ಈ ಕುದುರೆಗಳ ಹಗ್ಗವನ್ನು ಹಿಡಿದುಕೋ.”
03070014a ತಮಬ್ರವೀನ್ನೃಪಃ ಸೂತಂ ನಾಯಂ ಕಾಲೋ ವಿಲಂಬಿತುಂ।
03070014c ಬಾಹುಕಸ್ತ್ವಬ್ರವೀದೇನಂ ಪರಂ ಯತ್ನಂ ಸಮಾಸ್ಥಿತಃ।।
ಆಗ ನೃಪನು “ವಿಲಂಬ ಮಾಡಲು ನಮಗೆ ಈಗ ಸಮಯವಿಲ್ಲ!” ಎಂದು ಸೂತನಿಗೆ ಹೇಳಿದನು. ಆದರೂ ಬಾಹುಕನು ಒತ್ತಾಯಮಾಡಿ ಹೇಳಿದುದರಿಂದ ನಿಂತರು.
03070015a ಪ್ರತೀಕ್ಷಸ್ವ ಮುಹೂರ್ತಂ ತ್ವಮಥ ವಾ ತ್ವರತೇ ಭವಾನ್।
03070015c ಏಷ ಯಾತಿ ಶಿವಃ ಪಂಥಾ ಯಾಹಿ ವಾರ್ಷ್ಣೇಯಸಾರಥಿಃ।।
“ಒಂದು ಸ್ವಲ್ಪವೇ ಸಮಯ ಪ್ರತೀಕ್ಷಿಸು. ಅಥವಾ ನೀನು ಮುಂದೆ ಹೋಗು. ಇಲ್ಲಿಂದ ದಾರಿಯು ಸುಗಮವಾಗಿದೆ. ಹೋಗು. ವಾರ್ಷ್ಣೇಯನು ಸಾರಥಿಯಾಗುತ್ತಾನೆ.”
03070016a ಅಬ್ರವೀದೃತುಪರ್ಣಸ್ತಂ ಸಾಂತ್ವಯನ್ಕುರುನಂದನ।
03070016c ತ್ವಮೇವ ಯಂತಾ ನಾನ್ಯೋಽಸ್ತಿ ಪೃಥಿವ್ಯಾಮಪಿ ಬಾಹುಕ।।
ಕುರುನಂದನ! ಋತಿಪರ್ಣನು ಆಗ ಸಾಂತ್ವನ ಮಾತುಗಳನ್ನು ನುಡಿದನು: “ಬಾಹುಕ! ಇಡೀ ಪೃಥಿವಿಯಲ್ಲಿ ನಿನ್ನಂತಹ ಸಾರಥಿಯು ಬೇರೆ ಯಾರೂ ಇಲ್ಲ.
03070017a ತ್ವತ್ಕೃತೇ ಯಾತುಮಿಚ್ಚಾಮಿ ವಿದರ್ಭಾನ್ ಹಯಕೋವಿದ।
03070017c ಶರಣಂ ತ್ವಾಂ ಪ್ರಪನ್ನೋಽಸ್ಮಿ ನ ವಿಘ್ನಂ ಕರ್ತುಮರ್ಹಸಿ।।
ಹಯಕೋವಿದ! ನಿನ್ನಿಂದಾಗಿಯೇ ನನಗೆ ವಿದರ್ಭವನ್ನು ತಲುಪುವ ಭರವಸೆಯಿದೆ. ನಿನ್ನಲ್ಲಿ ನಾನು ಶರಣು ಹೋಗುತ್ತೇನೆ. ವಿಘ್ನವನ್ನು ಮಾಡಬೇಡ.
03070018a ಕಾಮಂ ಚ ತೇ ಕರಿಷ್ಯಾಮಿ ಯನ್ಮಾಂ ವಕ್ಷ್ಯಸಿ ಬಾಹುಕ।
03070018c ವಿದರ್ಭಾನ್ಯದಿ ಯಾತ್ವಾದ್ಯ ಸೂರ್ಯಂ ದರ್ಶಯಿತಾಸಿ ಮೇ।।
ಬಾಹುಕ! ವಿದರ್ಭಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನನಗೆ ಸೂರ್ಯೋದಯದ ದರ್ಶನವನ್ನು ಮಾಡಿಸಿದೆಯಾದರೆ ನೀನು ಹೇಳಿದ ಕೆಲಸವನ್ನು ಮಾಡುತ್ತೇನೆ.”
03070019a ಅಥಾಬ್ರವೀದ್ಬಾಹುಕಸ್ತಂ ಸಂಖ್ಯಾಯೇಮಂ ಬಿಭೀತಕಂ।
03070019c ತತೋ ವಿದರ್ಭಾನ್ಯಾಸ್ಯಾಮಿ ಕುರುಷ್ವೇದಂ ವಚೋ ಮಮ।।
“ಬಿಭೀತಕವನ್ನು ಎಣಿಸಿದ ನಂತರವೇ ವಿದರ್ಭಕ್ಕೆ ಕರೆದೊಯ್ಯುತ್ತೇನೆ. ನಾನು ಹೇಳಿದಂತೆಯೇ ಮಾಡು!” ಎಂದು ಬಾಹುಕನು ಅವನಿಗೆ ಹೇಳಿದನು.
03070020a ಅಕಾಮ ಇವ ತಂ ರಾಜಾ ಗಣಯಸ್ವೇತ್ಯುವಾಚ ಹ।
03070020c ಸೋಽವತೀರ್ಯ ರಥಾತ್ತೂರ್ಣಂ ಶಾತಯಾಮಾಸ ತಂ ದ್ರುಮಂ।।
ಇಷ್ಟವಿಲ್ಲದಿದ್ದರೂ ರಾಜನು ಅವನಿಗೆ “ಎಣಿಸು!” ಎಂದನು. ಆತನು ರಥದಿಂದ ಕೆಳಗಿಳಿದು ಆ ಮರವನ್ನು ಕಡಿದು ಬೀಳಿಸಿದನು.
03070021a ತತಃ ಸ ವಿಸ್ಮಯಾವಿಷ್ಟೋ ರಾಜಾನಮಿದಮಬ್ರವೀತ್।
03070021c ಗಣಯಿತ್ವಾ ಯಥೋಕ್ತಾನಿ ತಾವಂತ್ಯೇವ ಫಲಾನಿ ಚ।।
ನಂತರ ಅವನು ವಿಸ್ಮಯಗೊಂಡು ರಾಜನನ್ನುದ್ದೇಶಿಸಿ ಹೇಳಿದನು: “ನೀನು ಹೇಳಿದಷ್ಟೇ ಎಲೆಗಳು ಮತ್ತು ಫಲಗಳನ್ನು ಎಣಿಸಿದ್ದೇನೆ.
03070022a ಅತ್ಯದ್ಭುತಮಿದಂ ರಾಜನ್ದೃಷ್ಟವಾನಸ್ಮಿ ತೇ ಬಲಂ।
03070022c ಶ್ರೋತುಮಿಚ್ಚಾಮಿ ತಾಂ ವಿದ್ಯಾಂ ಯಥೈತಜ್ಜ್ಞಾಯತೇ ನೃಪ।।
ರಾಜನ್! ಇದೊಂದು ಅತ್ಯದ್ಭುತವಾದದ್ದು! ನಿನ್ನ ಬಲವನ್ನು ನಾನು ನೋಡಿದೆ. ನೃಪ! ನೀನು ಯಾವ ವಿದ್ಯೆಯ ಮೂಲಕ ಎಣಿಸಿದೆಯೋ ಅದನ್ನು ತಿಳಿಯಲು ಬಯಸುತ್ತೇನೆ.”
03070023a ತಮುವಾಚ ತತೋ ರಾಜಾ ತ್ವರಿತೋ ಗಮನೇ ತದಾ।
03070023c ವಿದ್ಧ್ಯಕ್ಷಹೃದಯಜ್ಞಂ ಮಾಂ ಸಂಖ್ಯಾನೇ ಚ ವಿಶಾರದಂ।।
ಹೋಗುವುದರ ಅವಸರದಲ್ಲಿದ್ದ ರಾಜನು ಅವನಿಗೆ ಹೇಳಿದನು: “ನನಗೆ ಅಕ್ಷಹೃದಯದ ಜ್ಞಾನವಿದೆ ಮತ್ತು ಸಂಖ್ಯೆಗಳಲ್ಲಿ ನಾನು ವಿಶಾರದನು.”
03070024a ಬಾಹುಕಸ್ತಮುವಾಚಾಥ ದೇಹಿ ವಿದ್ಯಾಮಿಮಾಂ ಮಮ।
03070024c ಮತ್ತೋಽಪಿ ಚಾಶ್ವಹೃದಯಂ ಗೃಹಾಣ ಪುರುಷರ್ಷಭ।।
ಬಾಹುಕನು ಹೇಳಿದನು: “ಪುರುಷರ್ಷಭ! ಈ ವಿದ್ಯೆಯನ್ನು ನನಗೆ ಕೊಟ್ಟು ನನ್ನಿಂದ ಈ ಅಶ್ವಹೃದಯವನ್ನು ಸ್ವೀಕರಿಸು.”
03070025a ಋತುಪರ್ಣಸ್ತತೋ ರಾಜಾ ಬಾಹುಕಂ ಕಾರ್ಯಗೌರವಾತ್।
03070025c ಹಯಜ್ಞಾನಸ್ಯ ಲೋಭಾಚ್ಚ ತಥೇತ್ಯೇವಾಬ್ರವೀದ್ವಚಃ।।
ಆಗ ರಾಜ ಋತುಪರ್ಣನು ಕಾರ್ಯಗೌರವಾರ್ಥವಾಗಿ ಮತ್ತು ಹಯಜ್ಞಾನದ ಆಸೆಯಿಂದ ಬಾಹುಕನಿಗೆ ಹೇಳಿದನು:
03070026a ಯಥೇಷ್ಟಂ ತ್ವಂ ಗೃಹಾಣೇದಮಕ್ಷಾಣಾಂ ಹೃದಯಂ ಪರಂ।
03070026c ನಿಕ್ಷೇಪೋ ಮೇಽಶ್ವಹೃದಯಂ ತ್ವಯಿ ತಿಷ್ಠತು ಬಾಹುಕ।
03070026 ಏವಮುಕ್ತ್ವಾ ದದೌ ವಿದ್ಯಾಂ ಋತುಪರ್ಣೋ ನಲಾಯ ವೈ।।
“ಬಾಹುಕ! ಹಾಗೆಯೇ ಆಗಲಿ. ಶ್ರೇಷ್ಠವಾದ ಅಕ್ಷಹೃದಯವನ್ನು ಸ್ವೀಕರಿಸು. ಆದರೆ ನನಗಾಗಿ ಅಶ್ವಹೃದಯವನ್ನು ನಿನ್ನಲ್ಲಿಯೇ ಇಟ್ಟುಕೋ!” ಎಂದು ಹೇಳಿ ಋತುಪರ್ಣನು ನಲನಿಗೆ ಆ ವಿದ್ಯೆಯನ್ನು ಕೊಟ್ಟನು.
03070027a ತಸ್ಯಾಕ್ಷಹೃದಯಜ್ಞಸ್ಯ ಶರೀರಾನ್ನಿಃಸೃತಃ ಕಲಿಃ।
03070027c ಕರ್ಕೋಟಕವಿಷಂ ತೀಕ್ಷ್ಣಂ ಮುಖಾತ್ಸತತಮುದ್ವಮನ್।।
ಅವನು ಅಕ್ಷಹೃದಯವನ್ನು ತಿಳಿದೊಡನೆಯೇ ಕಲಿಯು ಅವನ ಶರೀರದಿಂದ ಕಾರ್ಕೋಟಕ ವಿಷವನ್ನು ಮುಖದಿಂದ ಕಾರುತ್ತಾ ಹೊರಬಿದ್ದನು.
03070028a ಕಲೇಸ್ತಸ್ಯ ತದಾರ್ತಸ್ಯ ಶಾಪಾಗ್ನಿಃ ಸ ವಿನಿಃಸೃತಃ।
03070028c ಸ ತೇನ ಕರ್ಶಿತೋ ರಾಜಾ ದೀರ್ಘಕಾಲಮನಾತ್ಮವಾನ್।।
ಯಾವ ಕಾರಣದಿಂದ ರಾಜನು ಬತ್ತಿಹೋಗಿದ್ದನೋ ಮತ್ತು ದೀರ್ಘಕಾಲದಿಂದ ತಾನು ತಾನಾಗಿಯೇ ಇರಲಿಲ್ಲವೋ ಆ ಕಲಿಯ ಶಾಪಾಗ್ನಿಯು ಆರ್ತನಾದ ಅವನಿಂದ ಹೊರಬಂದಿತು.
03070029a ತತೋ ವಿಷವಿಮುಕ್ತಾತ್ಮಾ ಸ್ವರೂಪಮಕರೋತ್ಕಲಿಃ।
03070029c ತಂ ಶಪ್ತುಮೈಚ್ಚತ್ಕುಪಿತೋ ನಿಷಧಾಧಿಪತಿರ್ನಲಃ।।
ವಿಷದಿಂದ ವಿಮುಕ್ತನಾದ ಕಲಿಯು ಸ್ವರೂಪವನ್ನು ಹೊಂದಲು ಕುಪಿತನಾದ ನಿಷಧಾಧಿಪ ನಲನು ಅವನಿಗೆ ಶಪಿಸಲು ಬಯಸಿದನು.
03070030a ತಮುವಾಚ ಕಲಿರ್ಭೀತೋ ವೇಪಮಾನಃ ಕೃತಾಂಜಲಿಃ।
03070030c ಕೋಪಂ ಸಮ್ಯಚ್ಚ ನೃಪತೇ ಕೀರ್ತಿಂ ದಾಸ್ಯಾಮಿ ತೇ ಪರಾಂ।।
ಭೀತಿಗೊಡ ಕಲಿಯು ನಡುಗುತ್ತಾ, ಅಂಜಲೀಬದ್ಧನಾಗಿ ಅವನಿಗೆ ಹೇಳಿದನು: “ನೃಪತೇ! ನಿನ್ನ ಕೋಪವನ್ನು ಹಿಡಿದಿಟ್ಟುಕೋ. ನಿನಗೆ ಶ್ರೇಷ್ಠವಾದ ಕೀರ್ತಿಯನ್ನು ಕೊಡುತ್ತೇನೆ.
03070031a ಇಂದ್ರಸೇನಸ್ಯ ಜನನೀ ಕುಪಿತಾ ಮಾಶಪತ್ಪುರಾ।
03070031c ಯದಾ ತ್ವಯಾ ಪರಿತ್ಯಕ್ತಾ ತತೋಽಹಂ ಭೃಶಪೀಡಿತಃ।।
ಹಿಂದೆ ನಿನ್ನಿಂದ ಪರಿತ್ಯಕ್ತಳಾದಾಗ ಕೋಪದಿಂದ ಇಂದ್ರಸೇನನ ಜನನಿಯು ನನ್ನನ್ನು ಶಪಿಸಿದ್ದಳು. ಅಂದಿನಿಂದ ನಾನು ನೋವಿನಿಂದ ಪೀಡಿತನಾಗಿದ್ದೇನೆ.
03070032a ಅವಸಂ ತ್ವಯಿ ರಾಜೇಂದ್ರ ಸುದುಃಖಮಪರಾಜಿತ।
03070032c ವಿಷೇಣ ನಾಗರಾಜಸ್ಯ ದಹ್ಯಮಾನೋ ದಿವಾನಿಶಂ।।
ಅಪರಾಜಿತ ರಾಜೇಂದ್ರ! ನಿನ್ನಲ್ಲಿ ಬಹಳಷ್ಟು ದುಃಖದಿಂದ ನಾಗರಾಜನ ವಿಷದಿಂದ ದಿನರಾತ್ರಿ ಬೇಯುತ್ತಾ ವಾಸಿಸುತ್ತಿದ್ದೆ.
03070033a ಯೇ ಚ ತ್ವಾಂ ಮನುಜಾ ಲೋಕೇ ಕೀರ್ತಯಿಷ್ಯಂತ್ಯತಂದ್ರಿತಾಃ।
03070033c ಮತ್ಪ್ರಸೂತಂ ಭಯಂ ತೇಷಾಂ ನ ಕದಾ ಚಿದ್ಭವಿಷ್ಯತಿ।।
ಈ ಲೋಕದಲ್ಲಿ ಯಾವ ಮನುಜರು ನಿನ್ನ ಕೀರ್ತಿಯನ್ನು ನಿರಂತರವಾಗಿ ಪಾಡುತ್ತಾರೋ ಅವರಿಗೆ ನನ್ನಿಂದ ಎಂದೂ ಯಾವ ಭಯವೂ ಇರುವುದಿಲ್ಲ.”
03070034a ಏವಮುಕ್ತೋ ನಲೋ ರಾಜಾ ನ್ಯಯಚ್ಚತ್ಕೋಪಮಾತ್ಮನಃ।
03070034c ತತೋ ಭೀತಃ ಕಲಿಃ ಕ್ಷಿಪ್ರಂ ಪ್ರವಿವೇಶ ಬಿಭೀತಕಂ।
03070034 ಕಲಿಸ್ತ್ವನ್ಯೇನ ನಾದೃಶ್ಯತ್ಕಥಯನ್ನೈಷಧೇನ ವೈ।।
ಇದನ್ನು ಕೇಳಿದ ರಾಜ ನಲನು ತನ್ನ ಕೋಪವನ್ನು ನಿಯಂತ್ರಿಸಿಕೊಂಡನು. ಕೂಡಲೇ ಭೀತಿಗೊಂಡ ಕಲಿಯು ಬಿಭೀತಕವನ್ನು ಪ್ರವೇಶಿಸಿದನು. ಕಲಿಯು ನೈಷಧನೊಡನೆ ಮಾತನಾಡಿದ್ದುದನ್ನು ಯಾರೂ ನೋಡಲಿಲ್ಲ.
03070035a ತತೋ ಗತಜ್ವರೋ ರಾಜಾ ನೈಷಧಃ ಪರವೀರಹಾ।
03070035c ಸಂಪ್ರನಷ್ಟೇ ಕಲೌ ರಾಜನ್ಸಂಖ್ಯಾಯಾಥ ಫಲಾನ್ಯುತ।।
03070036a ಮುದಾ ಪರಮಯಾ ಯುಕ್ತಸ್ತೇಜಸಾ ಚ ಪರೇಣ ಹ।
ಹೀಗೆ ಜ್ವರ ಬಿಟ್ಟ ಪರವೀರಹ ರಾಜ ನೈಷಧನು ಕಲಿಯು ನಾಶನಾದನೆಂದು ಮತ್ತು ಫಲಗಳನ್ನು ಎಣಿಸಲು ಕಲಿತೆನೆಂದು ಪರಮ ಸಂತಸಗೊಂಡು ಹಿಂದಿನ ತನ್ನ ಪರಮ ತೇಜಸ್ಸನ್ನು ಪುನಃ ಪಡೆದುಕೊಂಡನು.
03070036c ರಥಮಾರುಆಹ್ಯ ತೇಜಸ್ವೀ ಪ್ರಯಯೌ ಜವನೈರ್ಹಯೈಃ।
03070036 ಬಿಭೀತಕಶ್ಚಾಪ್ರಶಸ್ತಃ ಸಂವೃತ್ತಃ ಕಲಿಸಂಶ್ರಯಾತ್।।
ಆ ತೇಜಸ್ವಿಯು ರಥವನ್ನೇರಿ ಹಯಗಳನ್ನು ವೇಗವಾಗಿ ಓಡಿಸಿದನು. ಕಲಿಯು ಆವರಿಸಿದುದರಿಂದ ಅಂದಿನಿಂದ ಬಿಭೀತಕವು ಅಪ್ರಸಿದ್ಧವಾಗಿದೆ.
03070037a ಹಯೋತ್ತಮಾನುತ್ಪತತೋ ದ್ವಿಜಾನಿವ ಪುನಃ ಪುನಃ।
03070037c ನಲಃ ಸಂಚೋದಯಾಮಾಸ ಪ್ರಹೃಷ್ಟೇನಾಂತರಾತ್ಮನಾ।।
ಉತ್ತೇಜನಗೊಂಡ ನಲನು ಅಂತರಾತ್ಮದಲ್ಲಿ ಪ್ರಹೃಷ್ಟನಾಗಿ ಆ ಉತ್ತಮ ಕುದುರೆಗಳನ್ನು ಪುನಃ ಪುನಃ ಹುರಿದುಂಬಿಸಿದನು ಮತ್ತು ಅವು ಪಕ್ಷಿಗಳಂತೆ ಹಾರತೊಡಗಿದವು.
03070038a ವಿದರ್ಭಾಭಿಮುಖೋ ರಾಜಾ ಪ್ರಯಯೌ ಸ ಮಹಾಮನಾಃ।
03070038c ನಲೇ ತು ಸಮತಿಕ್ರಾಂತೇ ಕಲಿರಪ್ಯಗಮದ್ಗೃಹಾನ್।।
ಮಹಾಮನ ರಾಜನು ವಿದರ್ಭಾಭಿಮುಖವಾಗಿ ಪ್ರಯಾಣಿಸಿದನು ಮತ್ತು ನಲನು ಸಾಕಷ್ಟು ದೂರ ಹೋದ ನಂತರ ಕಲಿಯು ತನ್ನ ಮನೆಗೆ ತೆರಳಿದನು.
03070039a ತತೋ ಗತಜ್ವರೋ ರಾಜಾ ನಲೋಽಭೂತ್ಪೃಥಿವೀಪತೇ।
03070039c ವಿಮುಕ್ತಃ ಕಲಿನಾ ರಾಜನ್ರೂಪಮಾತ್ರವಿಯೋಜಿತಃ।।
ಪೃಥಿವೀಪತೇ! ಕಲಿಯಿಂದ ವಿಮುಕ್ತನಾದ ರಾಜ ನಲನು ಜ್ವರವನ್ನು ಕಳೆದುಕೊಂಡನು. ಆದರೆ ತನ್ನ ರೂಪವನ್ನು ಮಾತ್ರ ಪಡೆಯಲಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಕಲಿನಿರ್ಗಮೇ ಸಪ್ತತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಕಲಿನಿರ್ಗಮ ಎನ್ನುವ ಎಪ್ಪತ್ತನೆಯ ಅಧ್ಯಾಯವು.