ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ಅನುದ್ಯೂತ ಪರ್ವ
ಅಧ್ಯಾಯ 68
ಸಾರ
ಪಾಂಡವರು ಜಿನವಸ್ತ್ರಗಳನ್ನು ಉಡುತ್ತಿರುವಾಗ ದುಃಶಾಸನನು ಪಾಂಡವರು ಶಂಡತಿಲರೆಂದೂ ದ್ರೌಪದಿಯು ಬೇರೆಯಾರನ್ನಾದರೂ ಪತಿಯನ್ನಾಗಿ ಸ್ವೀಕರಿಸಬೇಕೆಂದೂ ಮೂದಲಿಸಿ ನಗುವುದು (1-15). ಭೀಮಸೇನನು ರಣದಲ್ಲಿ ದುಃಶಾಸನನ ಎದೆಯನ್ನು ಸೀಳಿ ರಕ್ತವನ್ನು ಕುಡಿಯುತ್ತೇನೆಂದು ಪ್ರತಿಜ್ಞೆ ಮಾಡುವುದು (16-22). ದುರ್ಯೋಧನನು ಭೀಮನ ನಡುಗೆಯನ್ನು ನಡೆದು ಅಣಕಿಸುವುದು (23). ಭೀಮನು ದುರ್ಯೋಧನನನ್ನು ರಣದಲ್ಲಿ ಗದೆಯಿಂದ ಹೊಡೆದುರುಳಿಸಿ ಕಾಲಿನಿಂದ ತುಳಿಯುವೆನೆಂದು ಪ್ರತಿಜ್ಞೆ ಮಾಡುವುದು (24-29). ಕರ್ಣನನ್ನು ಯುದ್ಧದಲ್ಲಿ ಕೊಲ್ಲುವೆನೆಂದು ಅರ್ಜುನನು ಪ್ರತಿಜ್ಞೆ ಮಾಡುವುದು (30-36). ಸಹದೇವನು ಶಕುನಿಯನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡುವುದು (37-41). ನಕುಲನ ಪ್ರತಿಜ್ಞೆ (42-46).
02068001 ವೈಶಂಪಾಯನ ಉವಾಚ।
02068001a ವನವಾಸಾಯ ಚಕ್ರುಸ್ತೇ ಮತಿಂ ಪಾರ್ಥಾಃ ಪರಾಜಿತಾಃ।
02068001c ಅಜಿನಾನ್ಯುತ್ತರೀಯಾಣಿ ಜಗೃಹುಶ್ಚ ಯಥಾಕ್ರಮಂ।।
ವೈಶಂಪಾಯನನು ಹೇಳಿದನು: “ಪರಾಜಿತ ಪಾರ್ಥರು ವನವಾಸಕ್ಕೆ ಮನಸ್ಸುಮಾಡಿ, ಒಬ್ಬೊಬ್ಬರಾಗಿ ಜಿನ ವಸ್ತ್ರ ಉತ್ತರೀಯಗಳನ್ನು ತೊಟ್ಟರು.
02068002a ಅಜಿನೈಃ ಸಂವೃತಾನ್ದೃಷ್ಟ್ವಾ ಹೃತರಾಜ್ಯಾನರಿಂದಮಾನ್।
02068002c ಪ್ರಸ್ಥಿತಾನ್ವನವಾಸಾಯ ತತೋ ದುಃಶಾಸನೋಽಬ್ರವೀತ್।।
ರಾಜ್ಯವನ್ನು ಕಳೆದುಕೊಂಡು ಜಿನವಸ್ತ್ರಗಳನ್ನು ಸುತ್ತಿಕೊಂಡು ವನವಾಸಕ್ಕೆ ಹೊರಡುತ್ತಿರುವ ಆ ಅರಿಂದಮರನ್ನು ನೋಡಿ ದುಃಶಾಸನನು ಹೇಳಿದನು:
02068003a ಪ್ರವೃತ್ತಂ ಧಾರ್ತರಾಷ್ಟ್ರಸ್ಯ ಚಕ್ರಂ ರಾಜ್ಞೋ ಮಹಾತ್ಮನಃ।
02068003c ಪರಾಭೂತಾಃ ಪಾಂಡುಪುತ್ರಾ ವಿಪತ್ತಿಂ ಪರಮಾಂ ಗತಾಃ।।
“ಮಹಾತ್ಮ ರಾಜ ಧಾರ್ತರಾಷ್ಟ್ರನ ಚಕ್ರವು ತಿರುಗಲು ಪ್ರಾರಂಬಿಸಿದೆ. ಸೋತ ಪಾಂಡುಪತ್ರರು ಪರಮ ವಿಪತ್ತನ್ನು ಹೊಂದಿದ್ದಾರೆ.
02068004a ಅದ್ಯ ದೇವಾಃ ಸಂಪ್ರಯಾತಾಃ ಸಮೈರ್ವರ್ತ್ಮಭಿರಸ್ಥಲೈಃ।
02068004c ಗುಣಜ್ಯೇಷ್ಠಾಸ್ತಥಾ ಜ್ಯೇಷ್ಠಾ ಭೂಯಾಂಸೋ ಯದ್ವಯಂ ಪರೈಃ।।
ಇಂದು ದೇವತೆಗಳು ತಮ್ಮ ಸುಲಭ ಆಕಾಶಮಾರ್ಗಗಳಲ್ಲಿ ಬಂದಿದ್ದಾರೆ. ಯಾಕೆಂದರೆ ನಾವು ಗುಣದಲ್ಲಿ ಅವರಿಗಿಂತಲೂ ಶ್ರೇಷ್ಠರು ಮತ್ತು ಸಂಖ್ಯೆಯಲ್ಲಿಯೂ ಅವರಿಗಿಂತ ಹೆಚ್ಚಾಗಿದ್ದೇವೆ.
02068005a ನರಕಂ ಪಾತಿತಾಃ ಪಾರ್ಥಾ ದೀರ್ಘಕಾಲಮನಂತಕಂ।
02068005c ಸುಖಾಚ್ಚ ಹೀನಾ ರಾಜ್ಯಾಚ್ಚ ವಿನಷ್ಟಾಃ ಶಾಶ್ವತೀಃ ಸಮಾಃ।।
ಪಾರ್ಥರು ಸುಖವನ್ನು ಕಳೆದುಕೊಂಡು, ರಾಜ್ಯಭ್ರಷ್ಟರಾಗಿ ಬಹು ವರ್ಷಗಳ ದೀರ್ಘಕಾಲದ ಕೊನೆಯೇ ಇಲ್ಲದ ನರಕದಲ್ಲಿ ಬಿದ್ದಿದ್ದಾರೆ!
02068006a ಬಲೇನ ಮತ್ತಾ ಯೇ ತೇ ಸ್ಮ ಧಾರ್ತರಾಷ್ಟ್ರಾನ್ಪ್ರಹಾಸಿಷುಃ।
02068006c ತೇ ನಿರ್ಜಿತಾ ಹೃತಧನಾ ವನಮೇಷ್ಯಂತಿ ಪಾಂಡವಾಃ।।
ಬಲಮತ್ತರಾಗಿ ಧಾರ್ತರಾಷ್ಟ್ರರನ್ನು ಗೇಲಿಮಾಡುತ್ತಿದ್ದ ಪಾಂಡವರು ಈಗ ಸೋತು ಸಂಪತ್ತನ್ನು ಕಳೆದುಕೊಂಡು ವನವನ್ನು ಸೇರುತ್ತಿದ್ದಾರೆ!
02068007a ಚಿತ್ರಾನ್ಸನ್ನಾಹಾನವಮುಂಚಂತು ಚೈಷಾಂ ವಾಸಾಂಸಿ ದಿವ್ಯಾನಿ ಚ ಭಾನುಮಂತಿ।
02068007c ನಿವಾಸ್ಯಂತಾಂ ರುರುಚರ್ಮಾಣಿ ಸರ್ವೇ ಯಥಾ ಗ್ಲಹಂ ಸೌಬಲಸ್ಯಾಭ್ಯುಪೇತಾಃ।।
ಸೌಬಲನ ದಾಳವನ್ನು ಒಪ್ಪಿಕೊಂಡ ಅವರೆಲ್ಲರೂ ತಮ್ಮ ಹೊಳೆಯುವ ಬಣ್ಣದ ದಿವ್ಯ ಅಂಗಿ-ಮೇಲಂಗಿಗಳನ್ನು ಕಳಚಿ ರುರು ಚರ್ಮಗಳನ್ನು ಧರಿಸಬೇಕಾಗಿದೆ!
02068008a ನ ಸಂತಿ ಲೋಕೇಷು ಪುಮಾಂಸ ಈದೃಶಾ ಇತ್ಯೇವ ಯೇ ಭಾವಿತಬುದ್ಧಯಃ ಸದಾ।
02068008c ಜ್ಞಾಸ್ಯಂತಿ ತೇಽತ್ಮಾನಮಿಮೇಽದ್ಯ ಪಾಂಡವಾ ವಿಪರ್ಯಯೇ ಷಂಡತಿಲಾ ಇವಾಫಲಾಃ।।
ತಮ್ಮಂಥಹ ಪುರುಷರು ಲೋಕದಲ್ಲಿಯೇ ಇಲ್ಲ ಎಂದು ತಿಳಿದು ಸದಾ ಅಭಿಮಾನಿಗಳಾಗಿದ್ದ ಪಾಂಡವರು ಇಂದು ಕಷ್ಟದಲ್ಲಿ ಷಂಡತಿಲದಂತೆ ನಿಷ್ಪಲರು ಎಂದು ತಮ್ಮ ಕುರಿತು ಸರಿಯಾಗಿ ತಿಳಿದುಕೊಳ್ಳಲಿ!
02068009a ಅಯಂ ಹಿ ವಾಸೋದಯ ಈದೃಶಾನಾಂ ಮನಸ್ವಿನಾಂ ಕೌರವ ಮಾ ಭವೇದ್ವಃ।
02068009c ಅದೀಕ್ಷಿತಾನಾಮಜಿನಾನಿ ಯದ್ವದ್ ಬಲೀಯಸಾಂ ಪಶ್ಯತ ಪಾಂಡವಾನಾಂ।।
ಕೌರವ್ಯ! ನಿನ್ನ ವನವಾಸವು ಮನಸ್ವಿಗಳ ವನವಾಸದಂತೆ ಇಲ್ಲ. ಇವುಗಳು ಸಂಸ್ಕರಿಸದೇ ಇದ್ದ ಜಿನಗಳು. ಇವು ಬಲಶಾಲಿ ಪಾಂಡವರದ್ದು!
02068010a ಮಹಾಪ್ರಾಜ್ಞಃ ಸೋಮಕೋ ಯಜ್ಞಸೇನಃ ಕನ್ಯಾಂ ಪಾಂಚಾಲೀಂ ಪಾಂಡವೇಭ್ಯಃ ಪ್ರದಾಯ।
02068010c ಅಕಾರ್ಷೀದ್ವೈ ದುಷ್ಕೃತಂ ನೇಹ ಸಂತಿ ಕ್ಲೀಬಾಃ ಪಾರ್ಥಾಃ ಪತಯೋ ಯಾಜ್ಞಸೇನ್ಯಾಃ।।
ಮಹಾಪ್ರಾಜ್ಞ ಸೋಮಕ ಯಜ್ಞಸೇನನು ಕನ್ಯೆ ಪಾಂಚಾಲಿಯನ್ನು ಪಾಂಡವರಿಗೆ ನೀಡಿ ತಪ್ಪು ಮಾಡಿದನು. ಯಾಕೆಂದರೆ ನಪುಂಸಕ ಪಾರ್ಥರು ಯಾಜ್ಞಸೇನೆಗೆ ಪತಿಗಳಾಗಿ ಉಳಿದಿಲ್ಲ!
02068011a ಸೂಕ್ಷ್ಮಾನ್ಪ್ರಾವಾರಾನಜಿನಾನಿ ಚೋದಿತಾನ್ ದೃಷ್ಟ್ವಾರಣ್ಯೇ ನಿರ್ಧನಾನಪ್ರತಿಷ್ಠಾನ್।
02068011c ಕಾಂ ತ್ವಂ ಪ್ರೀತಿಂ ಲಪ್ಸ್ಯಸೇ ಯಾಜ್ಞಸೇನಿ ಪತಿಂ ವೃಣೀಷ್ವ ಯಮಿಹಾನ್ಯಮಿಚ್ಛಸಿ।।
ಯಾಜ್ಞಸೇನಿ! ಸೂಕ್ಷ್ಮ ವಸ್ತ್ರಗಳನ್ನು ಧರಿಸಿದ್ದವರು ಈಗ ಜಿನವನ್ನು ಧರಿಸಿ, ನಿರ್ಧನರಾಗಿ, ಅಪ್ರತಿಷ್ಠರಾಗಿ ವನವಾಸಿಗಳಾದುದನ್ನು ನೋಡಿ ನೀನು ಏನು ಸುಖವನ್ನು ಅನುಭವಿಸಬಲ್ಲೆ? ಇಲ್ಲಿರುವ ಬೇರೆ ಯಾರನ್ನಾದರನ್ನು ನಿನ್ನ ಪತಿಯನ್ನಾಗಿ ವರಿಸು.
02068012a ಏತೇ ಹಿ ಸರ್ವೇ ಕುರವಃ ಸಮೇತಾಃ ಕ್ಷಾಂತಾ ದಾಂತಾಃ ಸುದ್ರವಿಣೋಪಪನ್ನಾಃ।
02068012c ಏಷಾಂ ವೃಣೀಷ್ವೈಕತಮಂ ಪತಿತ್ವೇ ನ ತ್ವಾಂ ತಪೇತ್ಕಾಲವಿಪರ್ಯಯೋಽಯಂ।।
ಇಲ್ಲಿ ಸೇರಿರುವ ಸರ್ವ ಕುರುಗಳೂ ಗಂಭೀರರೂ, ಅಧಿಕಾರವುಳ್ಳವರೂ, ಉತ್ತಮ ಧನವಂತರೂ ಆಗಿದ್ದಾರೆ. ಈ ಕಾಲ ವಿಪರ್ಯಾಸವು ನಿನಗೆ ಕಷ್ಟವಾಗಬಾರದೆಂದು ಇವರಲ್ಲಿ ಯಾರನ್ನಾದರನ್ನೂ ನಿನ್ನ ಪತಿಯನ್ನಾಗಿ ಆರಿಸಿಕೋ.
02068013a ಯಥಾಫಲಾಃ ಷಂಡತಿಲಾ ಯಥಾ ಚರ್ಮಮಯಾ ಮೃಗಾಃ।
02068013c ತಥೈವ ಪಾಂಡವಾಃ ಸರ್ವೇ ಯಥಾ ಕಾಕಯವಾ ಅಪಿ।।
ಪೊಳ್ಳು ಎಳ್ಳಿನಂತೆ, ಕೇವಲ ಚರ್ಮಮಾತ್ರವಿರುವ ಜಿಂಕೆಯಂತೆ ಮತ್ತು ಪೊಳ್ಳು ಕಾಕಯದಂತೆ ಪಾಂಡವರೆಲ್ಲರೂ ಅಫಲರಾಗಿದ್ದಾರೆ!
02068014a ಕಿಂ ಪಾಂಡವಾಂಸ್ತ್ವಂ ಪತಿತಾನುಪಾಸ್ಸೇ ಮೋಘಃ ಶ್ರಮಃ ಷಂಡತಿಲಾನುಪಾಸ್ಯ।
02068014c ಏವಂ ನೃಶಂಸಃ ಪರುಷಾಣಿ ಪಾರ್ಥಾನ್ ಅಶ್ರಾವಯದ್ಧೃತರಾಷ್ಟ್ರಸ್ಯ ಪುತ್ರಃ।।
ಪತಿತ ಪಾಂಡವರನ್ನು ನೀನು ಏಕೆ ಉಪಾಸಿಸುತ್ತೀಯೆ? ಪೊಳ್ಳು ಎಳ್ಳನ್ನು ಉಪಾಸಿಸಿ ಶ್ರಮಿಸುವುದು ವ್ಯರ್ಥ!” ಈ ರೀತಿ ಧೃತರಾಷ್ಟ್ರನ ಕ್ರೂರ ಪುತ್ರನು ತನ್ನ ಚುಚ್ಚುಮಾತುಗಳನ್ನು ಪಾರ್ಥರಿಗೆ ಕೇಳಿಸಿದನು.
02068015a ತದ್ವೈ ಶ್ರುತ್ವಾ ಭೀಮಸೇನೋಽತ್ಯಮರ್ಷೀ ನಿರ್ಭರ್ತ್ಸ್ಯೋಚ್ಚೈಸ್ತಂ ನಿಗೃಹೈವ ರೋಷಾತ್।
02068015c ಉವಾಚೇದಂ ಸಹಸೈವೋಪಗಮ್ಯ ಸಿಂಹೋ ಯಥಾ ಹೈಮವತಃ ಶೃಗಾಲಂ।।
ಇದನ್ನು ಕೇಳಿ ಅತಿ ಕುಪಿತನಾದ ಭೀಮಸೇನನು ಅವನನ್ನು ಮೂದಲಿಸುತ್ತಾ ತನ್ನ ಕೋಪವನ್ನು ತಡೆಹಿಡಿಯುತ್ತಾ ಹಿಮಾಲಯದ ಸಿಂಹವು ನರಿಗೆ ಹೇಳುವಂತೆ ಜೋರಾಗಿ ಕೂಗಿ ಹೇಳಿದನು:
02068016 ಭೀಮಸೇನ ಉವಾಚ।
02068016a ಕ್ರೂರ ಪಾಪಜನೈರ್ಜುಷ್ಟಮಕೃತಾರ್ಥಂ ಪ್ರಭಾಷಸೇ।
02068016c ಗಾಂಧಾರವಿದ್ಯಯಾ ಹಿ ತ್ವಂ ರಾಜಮಧ್ಯೇ ವಿಕತ್ಥಸೇ।।
ಭೀಮಸೇನನು ಹೇಳಿದನು: “ಕ್ರೂರ! ಪಾಪಿ! ದುಷ್ಟನಂತೆ ಹುರುಳಿಲ್ಲದ ಮಾತನ್ನಾಡುತ್ತಿದ್ದೀಯೆ. ರಾಜರ ಮಧ್ಯದಲ್ಲಿ ಗಾಂಧಾರರ ಕೌಶಲ್ಯವನ್ನು ಪ್ರಶಂಸಿಸುತ್ತಿದ್ದೀಯೆ!
02068017a ಯಥಾ ತುದಸಿ ಮರ್ಮಾಣಿ ವಾಕ್ಶರೈರಿಹ ನೋ ಭೃಶಂ।
02068017c ತಥಾ ಸ್ಮಾರಯಿತಾ ತೇಽಹಂ ಕೃಂತನ್ಮರ್ಮಾಣಿ ಸಂಯುಗೇ।।
ನಮ್ಮ ಮರ್ಮಸ್ಥಾನಗಳನ್ನು ನಿನ್ನ ತೀಕ್ಷ್ಣ ಮಾತುಗಳಿಂದ ಹೇಗೆ ಚುಚ್ಚುತ್ತಿರುವೆಯೋ ಹಾಗೆ ಯುದ್ಧದಲ್ಲಿ ನಿನಗೂ ಮಾಡಿ ನೆನಪಿಸಿಕೊಡುತ್ತೇನೆ.
02068018a ಯೇ ಚ ತ್ವಾಮನುವರ್ತಂತೇ ಕಾಮಲೋಭವಶಾನುಗಾಃ।
02068018c ಗೋಪ್ತಾರಃ ಸಾನುಬಂಧಾಂಸ್ತಾನ್ನೇಷ್ಯಾಮಿ ಯಮಸಾದನಂ।।
ಕಾಮಲೋಭವಶರಾಗಿ ಯಾರು ನಿನ್ನನ್ನು ಹಿಂಬಾಲಿಸಿ ಪ್ರೋತ್ಸಾಹಿಸಿ ರಕ್ಷಿಸುವರೋ ಅವರನ್ನೂ ಕೂಡ ಅವರ ಸಂಬಂಧಿಗಳೊಂದಿಗೆ ಯಮಸಾದನಕ್ಕೆ ಕಳುಹಿಸುತ್ತೇನೆ.””
02068019 ವೈಶಂಪಾಯನ ಉವಾಚ।
02068019a ಏವಂ ಬ್ರುವಾಣಮಜಿನೈರ್ವಿವಾಸಿತಂ ದುಃಖಾಭಿಭೂತಂ ಪರಿನೃತ್ಯತಿ ಸ್ಮ।
02068019c ಮಧ್ಯೇ ಕುರೂಣಾಂ ಧರ್ಮನಿಬದ್ಧಮಾರ್ಗಂ ಗೌರ್ಗೌರಿತಿ ಸ್ಮಾಹ್ವಯನ್ಮುಕ್ತಲಜ್ಜಃ।।
ವೈಶಂಪಾಯನನು ಹೇಳಿದನು: “ಜಿನವಸ್ತ್ರವನ್ನು ಧರಿಸಿ ದುಃಖ ಪೀಡಿತನಾಗಿ ಹೀಗೆ ಹೇಳಿ ಕುರುಗಳ ಮಧ್ಯೆ ಧರ್ಮಮಾರ್ಗದಲ್ಲಿ ನಡೆಯುತ್ತಿದ್ದ ಅವನನ್ನು ಸುತ್ತುವರೆದು ನಾಚಿಕೆಯನ್ನು ಬಿಟ್ಟು “ಹಸು! ಹಸು!”ಎಂದು ಕುಣಿದಾಡಿದರು.
02068020 ಭೀಮಸೇನ ಉವಾಚ।
02068020a ನೃಶಂಸಂ ಪರುಷಂ ಕ್ರೂರಂ ಶಕ್ಯಂ ದುಃಶಾಸನ ತ್ವಯಾ।
02068020c ನಿಕೃತ್ಯಾ ಹಿ ಧನಂ ಲಬ್ಧ್ವಾ ಕೋ ವಿಕತ್ಥಿತುಮರ್ಹತಿ।।
ಭೀಮಸೇನನು ಹೇಳಿದನು: “ದುಃಶಾಸನ! ಈ ರೀತಿ ಒರಟು ಕ್ರೂರ ಪೌರುಷದ ಮಾತನಾಡಲು ನಿನಗೆ ಮಾತ್ರ ಸಾಧ್ಯ. ಯಾಕೆಂದರೆ, ವಂಚನೆಯಿಂದ ಧನವನ್ನು ತೆಗೆದುಕೊಂಡ ಯಾರು ತಾನೆ ಈ ರೀತಿ ಕೊಚ್ಚಿಕೊಳ್ಳುತ್ತಾರೆ.
02068021a ಮಾ ಹ ಸ್ಮ ಸುಕೃತಾಽಲ್ಲೋಕಾನ್ಗಚ್ಛೇತ್ಪಾರ್ಥೋ ವೃಕೋದರಃ।
02068021c ಯದಿ ವಕ್ಷಸಿ ಭಿತ್ತ್ವಾ ತೇ ನ ಪಿಬೇಚ್ಶೋಣಿತಂ ರಣೇ।।
ರಣದಲ್ಲಿ ನಿನ್ನ ಎದೆಯನ್ನು ಸೀಳಿ ರಕ್ತವನ್ನು ಕುಡಿಯದೇ ಇದ್ದರೆ ಈ ಪಾರ್ಥ ವೃಕೋದರನು ಸುಕೃತಲೋಕಗಳಿಗೆ ಹೋಗದಿರಲಿ!
02068022a ಧಾರ್ತರಾಷ್ಟ್ರಾನ್ರಣೇ ಹತ್ವಾ ಮಿಷತಾಂ ಸರ್ವಧನ್ವಿನಾಂ।
02068022c ಶಮಂ ಗಂತಾಸ್ಮಿ ನಚಿರಾತ್ಸತ್ಯಮೇತದ್ಬ್ರವೀಮಿ ವಃ।।
ಧಾರ್ತರಾಷ್ಟ್ರರನ್ನು ರಣದಲ್ಲಿ ಸರ್ವ ಧನ್ವಿಗಳ ಎದಿರು ಕೊಂದ ಕೂಡಲೇ ಶಾಂತನಾಗುತ್ತೇನೆ. ಸತ್ಯವನ್ನೇ ನಾನು ಹೇಳುತ್ತಿದ್ದೇನೆ.””
02068023 ವೈಶಂಪಾಯನ ಉವಾಚ।
02068023a ತಸ್ಯ ರಾಜಾ ಸಿಂಹಗತೇಃ ಸಖೇಲಂ ದುರ್ಯೋಧನೋ ಭೀಮಸೇನಸ್ಯ ಹರ್ಷಾತ್।
02068023c ಗತಿಂ ಸ್ವಗತ್ಯಾನುಚಕಾರ ಮಂದೋ ನಿರ್ಗಚ್ಛತಾಂ ಪಾಂಡವಾನಾಂ ಸಭಾಯಾಃ।।
ವೈಶಂಪಾಯನನು ಹೇಳಿದನು: “ಪಾಂಡವರು ಸಭೆಯಿಂದ ಹೊರಡುತ್ತಿರುವಾಗ ಮಂದಬುದ್ಧಿ ರಾಜ ದುರ್ಯೋಧನನು ಹರ್ಷದಿಂದ ಆಟವಾಡುತ್ತಾ ಭೀಮಸೇನನ ಸಿಂಹ ನಡುಗೆಯನ್ನು ತಾನೇ ನಡೆದು ಅಣಕಿಸಿದನು.
02068024a ನೈತಾವತಾ ಕೃತಮಿತ್ಯಬ್ರವೀತ್ತಂ ವೃಕೋದರಃ ಸಮ್ನಿವೃತ್ತಾರ್ಧಕಾಯಃ।
02068024c ಶೀಘ್ರಂ ಹಿ ತ್ವಾ ನಿಹತಂ ಸಾನುಬಂಧಂ ಸಂಸ್ಮಾರ್ಯಾಹಂ ಪ್ರತಿವಕ್ಷ್ಯಾಮಿ ಮೂಢ।।
ತನ್ನ ಅರ್ಧದೇಹವನ್ನು ದುರ್ಯೋಧನನ ಕಡೆ ತಿರುಗಿಸಿ ವೃಕೋದರನು ಹೇಳಿದನು: “ಆಟದಲ್ಲಿ ಇದು ಗೆಲ್ಲಲು ಸಹಾಯ ಮಾಡುವುದಿಲ್ಲ! ಮೂಢ! ನಿನ್ನನ್ನು ಮತ್ತು ನಿನ್ನ ಅನುಯಾಯಿಗಳನ್ನು ಶೀಘ್ರವೇ ಕೊಲ್ಲುವಾಗ ನಿನಗೆ ಇದನ್ನು ನೆನಪಿಸಿಕೊಟ್ಟು ಉತ್ತರ ನೀಡುತ್ತೇನೆ!”
02068025a ಏತತ್ಸಮೀಕ್ಷ್ಯಾತ್ಮನಿ ಚಾವಮಾನಂ ನಿಯಮ್ಯ ಮನ್ಯುಂ ಬಲವಾನ್ಸ ಮಾನೀ।
02068025c ರಾಜಾನುಗಃ ಸಂಸದಿ ಕೌರವಾಣಾಂ ವಿನಿಷ್ಕ್ರಮನ್ವಾಕ್ಯಮುವಾಚ ಭೀಮಃ।।
ತನಗಾದ ಈ ಅವಮಾನವನ್ನು ತಾನೇ ವೀಕ್ಷಿಸಿ ತನ್ನ ಸಿಟ್ಟನ್ನು ತಡೆಹಿಡಿದುಕೊಂಡು, ಆ ಮಾನಿನಿ ಬಲವಾನ್ ಭೀಮನು ರಾಜನನ್ನು ಅನುಸರಿಸಿ ಕೌರವರ ಸಂಸದಿಯಿಂದ ಹೊರ ಹೋಗುವಾಗ ಈ ಮಾತನ್ನಾಡಿದನು:
02068026a ಅಹಂ ದುರ್ಯೋಧನಂ ಹಂತಾ ಕರ್ಣಂ ಹಂತಾ ಧನಂಜಯಃ।
02068026c ಶಕುನಿಂ ಚಾಕ್ಷಕಿತವಂ ಸಹದೇವೋ ಹನಿಷ್ಯತಿ।।
“ನಾನು ದುರ್ಯೋಧನನನ್ನು ಕೊಲ್ಲುತ್ತೇನೆ. ಧನಂಜಯನು ಕರ್ಣನನ್ನು ಕೊಲ್ಲುತ್ತಾನೆ. ಮೋಸದ ಜೂಜುಗಾರ ಶಕುನಿಯನ್ನು ಸಹದೇವನು ಕೊಲ್ಲುತ್ತಾನೆ.
02068027a ಇದಂ ಚ ಭೂಯೋ ವಕ್ಷ್ಯಾಮಿ ಸಭಾಮಧ್ಯೇ ಬೃಹದ್ವಚಃ।
02068027c ಸತ್ಯಂ ದೇವಾಃ ಕರಿಷ್ಯಂತಿ ಯನ್ನೋ ಯುದ್ಧಂ ಭವಿಷ್ಯತಿ।।
02068028a ಸುಯೋಧನಮಿಮಂ ಪಾಪಂ ಹಂತಾಸ್ಮಿ ಗದಯಾ ಯುಧಿ।
02068028c ಶಿರಃ ಪಾದೇನ ಚಾಸ್ಯಾಹಮಧಿಷ್ಠಾಸ್ಯಾಮಿ ಭೂತಲೇ।।
02068029a ವಾಕ್ಯಶೂರಸ್ಯ ಚೈವಾಸ್ಯ ಪರುಷಸ್ಯ ದುರಾತ್ಮನಃ।
02068029c ದುಃಶಾಸನಸ್ಯ ರುಧಿರಂ ಪಾತಾಸ್ಮಿ ಮೃಗರಾಡಿವ।।
ಈ ಸಭಾಮಧ್ಯದಲ್ಲಿ ಇನ್ನೊಮ್ಮೆ ಮುಂದಾಗುವ ಈ ಮಹಾ ವಚನವನ್ನು ಹೇಳುತ್ತಿದ್ದೇನೆ: ನಮ್ಮ ನಡುವೆ ಯುದ್ಧವಾದಾಗ ದೇವತೆಗಳು ಇದನ್ನು ಸತ್ಯಮಾಡುತ್ತಾರೆ - ಈ ಪಾಪಿ ಸುಯೋಧನನನ್ನು ಯುದ್ಧದಲ್ಲಿ ಗದೆಯಿಂದ ಕೊಲ್ಲುತ್ತೇನೆ ಮತ್ತು ಇವನ ಶಿರವನ್ನು ಭೂಮಿಯಮೇಲೆ ಉರುಳಿಸಿ ಕಾಲಿನಿಂದ ತುಳಿಯುತ್ತೇನೆ. ಮತ್ತು ಈ ಮಾತಿನ ಮಲ್ಲ ಪೌರುಷದ ದುರಾತ್ಮ ದುಃಶಾಸನನ ರಕ್ತವನ್ನು ಸಿಂಹದಂತೆ ಕುಡಿಯುತ್ತೇನೆ.”
02068030 ಅರ್ಜುನ ಉವಾಚ।
02068030a ನೈವ ವಾಚಾ ವ್ಯವಸಿತಂ ಭೀಮ ವಿಜ್ಞಾಯತೇ ಸತಾಂ।
02068030c ಇತಶ್ಚತುರ್ದಶೇ ವರ್ಷೇ ದ್ರಷ್ಟಾರೋ ಯದ್ಭವಿಷ್ಯತಿ।।
ಅರ್ಜುನನು ಹೇಳಿದನು: “ಭೀಮನ ಈ ನಿರ್ಧಾರಿತ ಮಾತುಗಳು ಕೇವಲ ಮಾತುಗಳೆಂದು ತಿಳಿಯಬೇಡಿ. ಇಂದಿನಿಂದ ಹದಿಮೂರನೆಯ ವರ್ಷದಲ್ಲಿ ಇದು ನಡೆಯುವುದನ್ನು ನೋಡುವಿರಿ!
02068031a ದುರ್ಯೋಧನಸ್ಯ ಕರ್ಣಸ್ಯ ಶಕುನೇಶ್ಚ ದುರಾತ್ಮನಃ।
02068031c ದುಃಶಾಸನಚತುರ್ಥಾನಾಂ ಭೂಮಿಃ ಪಾಸ್ಯತಿ ಶೋಣಿತಂ।।
ಭೂಮಿಯು ದುರ್ಯೋಧನ, ಕರ್ಣ, ದುರಾತ್ಮ ಶಕುನಿ, ಮತ್ತು ದುಃಶಾಸನ ಈ ನಾಲ್ವರ ರಕ್ತವನ್ನು ಕುಡಿಯುತ್ತದೆ!
02068032a ಅಸೂಯಿತಾರಂ ವಕ್ತಾರಂ ಪ್ರಸ್ರಷ್ಟಾರಂ ದುರಾತ್ಮನಾಂ।
02068032c ಭೀಮಸೇನ ನಿಯೋಗಾತ್ತೇ ಹಂತಾಹಂ ಕರ್ಣಮಾಹವೇ।।
ಭೀಮಸೇನ! ನಿನ್ನ ಆಜ್ಞೆಯಂತೆ ನಾನು ದುರಾತ್ಮರನ್ನು ಜೋರಾಗಿ ಹೊಗಳುವ ಹೊಗಳುಭಟ್ಟ ಈ ಕರ್ಣನನ್ನು ಕೊಲ್ಲುತ್ತೇನೆ.
02068033a ಅರ್ಜುನಃ ಪ್ರತಿಜಾನೀತೇ ಭೀಮಸ್ಯ ಪ್ರಿಯಕಾಮ್ಯಯಾ।
02068033c ಕರ್ಣಂ ಕರ್ಣಾನುಗಾಂಶ್ಚೈವ ರಣೇ ಹಂತಾಸ್ಮಿ ಪತ್ರಿಭಿಃ।।
ಭೀಮನಿಗೆ ಸಂತೋಷವನ್ನುಂಟುಮಾಡಲು ಈ ಅರ್ಜುನನು ಕರ್ಣನನ್ನು ಮತ್ತು ಕರ್ಣನ ಅನುಯಾಯಿಗಳನ್ನು ಗರಿಯುಕ್ತ ಬಾಣಗಳಿಂದ ಕೊಲ್ಲುತ್ತೇನೆ ಎಂದು ಭರವಸೆಯನ್ನು ನೀಡುತ್ತೇನೆ.
02068034a ಯೇ ಚಾನ್ಯೇ ಪ್ರತಿಯೋತ್ಸ್ಯಂತಿ ಬುದ್ಧಿಮೋಹೇನ ಮಾಂ ನೃಪಾಃ।
02068034c ತಾಂಶ್ಚ ಸರ್ವಾಂ ಶಿತೈರ್ಬಾಣೈರ್ನೇತಾಸ್ಮಿ ಯಮಸಾದನಂ।।
ಬುದ್ಧಿಗೆಟ್ಟು ನನ್ನೊಡನೆ ಹೋರಾಡುವ ಅನ್ಯ ಸರ್ವ ನೃಪರನ್ನೂ ಕೂಡ ತೀಕ್ಷ್ಣ ಬಾಣಗಳಿಂದ ಯಮಸಾದನಕ್ಕೆ ಕಳುಹಿಸುತ್ತೇನೆ.
02068035a ಚಲೇದ್ಧಿ ಹಿಮವಾನ್ ಸ್ಥಾನಾನ್ನಿಷ್ಪ್ರಭಃ ಸ್ಯಾದ್ದಿವಾಕರಃ।
02068035c ಶೈತ್ಯಂ ಸೋಮಾತ್ಪ್ರಣಶ್ಯೇತ ಮತ್ಸತ್ಯಂ ವಿಚಲೇದ್ಯದಿ।।
ಒಂದು ವೇಳೆ ನಾನು ಈ ಸತ್ಯದಿಂದ ದೂರಾದೆನೆಂದರೆ ಹಿಮಾಲಯವು ತನ್ನ ಸ್ಥಾನದಿಂದ ಚಲಿಸಲಿ, ದಿವಾಕರನು ತನ್ನ ಪ್ರಭೆಯನ್ನು ಕಳೆದುಕೊಳ್ಳಲಿ, ಮತ್ತು ಚಂದ್ರನು ತನ್ನ ಶೀತಲವನ್ನು ಕಳೆದುಕೊಳ್ಳಲಿ!
02068036a ನ ಪ್ರದಾಸ್ಯತಿ ಚೇದ್ರಾಜ್ಯಮಿತೋ ವರ್ಷೇ ಚತುರ್ದಶೇ।
02068036c ದುರ್ಯೋಧನೋ ಹಿ ಸತ್ಕೃತ್ಯ ಸತ್ಯಮೇತದ್ಭವಿಷ್ಯತಿ।।
ಇಂದಿನಿಂದ ಹದಿನಾಲ್ಕನೆಯ ವರ್ಷದಲ್ಲಿ ದುರ್ಯೋಧನನು ಗೌರವದಿಂದ ರಾಜ್ಯವನ್ನು ಹಿಂದೆ ಕೊಡದಿದ್ದರೆ ಇದು ಸತ್ಯವಾಗುತ್ತದೆ!””
02068037 ವೈಶಂಪಾಯನ ಉವಾಚ।
02068037a ಇತ್ಯುಕ್ತವತಿ ಪಾರ್ಥೇ ತು ಶ್ರೀಮಾನ್ಮಾದ್ರವತೀಸುತಃ।
02068037c ಪ್ರಗೃಹ್ಯ ವಿಪುಲಂ ಬಾಹುಂ ಸಹದೇವಃ ಪ್ರತಾಪವಾನ್।।
02068038a ಸೌಬಲಸ್ಯ ವಧಂ ಪ್ರೇಪ್ಸುರಿದಂ ವಚನಮಬ್ರವೀತ್।
02068038c ಕ್ರೋಧಸಂರಕ್ತನಯನೋ ನಿಃಶ್ವಸನ್ನಿವ ಪನ್ನಗಃ।।
ವೈಶಂಪಾಯನನು ಹೇಳಿದನು: “ಈ ರೀತಿ ಪಾರ್ಥನು ಮಾತನಾಡಲು ಶ್ರೀಮಾನ್ ಮಾದ್ರವತೀ ಸುತ ಪ್ರತಾಪವಾನ್ ಸಹದೇವನು ತನ್ನ ವಿಪುಲ ಬಾಹುವನ್ನು ಹಿಡಿದು ಸೌಬಲನ ವಧೆಯನ್ನು ಬಯಸುತ್ತಾ ಸರ್ಪದಂತೆ ಭುಸುಗುಟ್ಟುತ್ತಾ ಕ್ರೋಧದಿಂದ ಕೆಂಪಾದ ಕಣ್ಣುಗಳುಳ್ಳವನಾಗಿ ಈ ಮಾತುಗಳನ್ನಾಡಿದನು:
02068039a ಅಕ್ಷಾನ್ಯಾನ್ಮನ್ಯಸೇ ಮೂಢ ಗಾಂಧಾರಾಣಾಂ ಯಶೋಹರ।
02068039c ನೈತೇಽಕ್ಷಾ ನಿಶಿತಾ ಬಾಣಾಸ್ತ್ವಯೈತೇ ಸಮರೇ ವೃತಾಃ।।
“ಗಾಂಧಾರರ ಯಶೋಹರ! ಮೂಢ! ದಾಳಗಳೆಂದು ತಿಳಿದು ಎಸೆದ ದಾಳಗಳು ದಾಳಗಳಲ್ಲ! ಸಮರದಲ್ಲಿ ನೀನೇ ಆರಿಸಿಕೊಂಡ ತೀಕ್ಷ್ಣ ಬಾಣಗಳು!
02068040a ಯಥಾ ಚೈವೋಕ್ತವಾನ್ಭೀಮಸ್ತ್ವಾಮುದ್ದಿಶ್ಯ ಸಬಾಂಧವಂ।
02068040c ಕರ್ತಾಹಂ ಕರ್ಮಣಸ್ತಸ್ಯ ಕುರು ಕಾರ್ಯಾಣಿ ಸರ್ವಶಃ।।
ನೀನು ಮತ್ತು ನಿನ್ನ ಸಂಬಂಧಿಕರ ಕುರಿತು ಭೀಮನು ಹೇಳಿದ ಎಲ್ಲವನ್ನೂ ನಾನು ಮಾಡಿ ಮುಗಿಸುತ್ತೇನೆ. ನೀನು ನಿನ್ನ ಎಲ್ಲ ಕಾರ್ಯಗಳನ್ನೂ ಮಾಡಿ ಮುಗಿಸು!
02068041a ಹಂತಾಸ್ಮಿ ತರಸಾ ಯುದ್ಧೇ ತ್ವಾಂ ವಿಕ್ರಮ್ಯ ಸಬಾಂಧವಂ।
02068041c ಯದಿ ಸ್ಥಾಸ್ಯಸಿ ಸಂಗ್ರಾಮೇ ಕ್ಷತ್ರಧರ್ಮೇಣ ಸೌಬಲ।।
ಸೌಬಲ! ಕ್ಷತ್ರಧರ್ಮಾನುಸಾರವಾಗಿ ಸಂಗ್ರಾಮದಲ್ಲಿ ನಿಲ್ಲುವೆಯಾದರೆ ನಿನ್ನನ್ನು ನಿನ್ನ ಬಾಂಧವರೊಡನೆ ವಿಕ್ರಮದಿಂದ ಯುದ್ಧದಲ್ಲಿ ಅಲ್ಪವೇ ಸಮಯದಲ್ಲಿ ಕೊಲ್ಲುತ್ತೇನೆ.”
02068042a ಸಹದೇವವಚಃ ಶ್ರುತ್ವಾ ನಕುಲೋಽಪಿ ವಿಶಾಂ ಪತೇ।
02068042c ದರ್ಶನೀಯತಮೋ ನೄಣಾಮಿದಂ ವಚನಮಬ್ರವೀತ್।।
ವಿಶಾಂಪತೇ! ಸಹದೇವನ ಮಾತುಗಳನ್ನು ಕೇಳಿ ಮನುಷ್ಯರಲ್ಲೆಲ್ಲ ಅತಿ ಸುಂದರ ನಕುಲನೂ ಕೂಡ ಈ ಮಾತನ್ನಾಡಿದನು.
02068043a ಸುತೇಯಂ ಯಜ್ಞಸೇನಸ್ಯ ದ್ಯೂತೇಽಸ್ಮಿನ್ಧೃತರಾಷ್ಟ್ರಜೈಃ।
02068043c ಯೈರ್ವಾಚಃ ಶ್ರಾವಿತಾ ರೂಕ್ಷಾಃ ಸ್ಥಿತೈರ್ದುರ್ಯೋಧನಪ್ರಿಯೇ।।
02068044a ತಾಂಧಾರ್ತರಾಷ್ಟ್ರಾನ್ದುರ್ವೃತ್ತಾನ್ಮುಮೂರ್ಷೂನ್ಕಾಲಚೋದಿತಾನ್।
02068044c ದರ್ಶಯಿಷ್ಯಾಮಿ ಭೂಯಿಷ್ಠಮಹಂ ವೈವಸ್ವತಕ್ಷಯಂ।।
“ಈ ದ್ಯೂತದಲ್ಲಿ ದುರ್ಯೋಧನನ ಪ್ರಿಯರಾಗಿ ಉಳಿದಕೊಳ್ಳಲು ಈ ಯಜ್ಞಸೇನ ಸುತೆಗೆ ಕ್ರೂರ ಮಾತುಗಳನ್ನು ಕೇಳಿಸಿ ಅಪಮಾನ ಮಾಡಿದ ಕಾಲಚೋದಿತ ಈ ದುರ್ವೃತ್ತ ಧಾರ್ತರಾಷ್ಟ್ರರ ಬೀಡಿಗೆ ಅವರಿಗಿಷ್ಟವಾದ ವೈವಸ್ವತಕ್ಷಯದ ದಾರಿಯನ್ನು ತೋರಿಸಿಕೊಡುತ್ತೇನೆ.
02068045a ನಿದೇಶಾದ್ಧರ್ಮರಾಜಸ್ಯ ದ್ರೌಪದ್ಯಾಃ ಪದವೀಂ ಚರನ್।
02068045c ನಿರ್ಧಾರ್ತರಾಷ್ಟ್ರಾಂ ಪೃಥಿವೀಂ ಕರ್ತಾಸ್ಮಿ ನಚಿರಾದಿವ।।
ಧರ್ಮರಾಜನ ಆದೇಶದಂತೆ ದ್ರೌಪದಿಯ ಹೆಜ್ಜೆಗಳಲ್ಲಿ ನಡೆದು ಬೇಗನೇ ಈ ಪೃಥ್ವಿಯಲ್ಲಿ ಧಾರ್ತರಾಷ್ಟ್ರರಿಲ್ಲದಂತೆ ಮಾಡುತ್ತೇನೆ!”
02068046a ಏವಂ ತೇ ಪುರುಷವ್ಯಾಘ್ರಾಃ ಸರ್ವೇ ವ್ಯಾಯತಬಾಹವಃ।
02068046c ಪ್ರತಿಜ್ಞಾ ಬಹುಲಾಃ ಕೃತ್ವಾ ಧೃತರಾಷ್ಟ್ರಮುಪಾಗಮನ್।।
ಹೀಗೆ ಪುರಷವ್ಯಾಘ್ರರೆಲ್ಲರೂ ತಮ್ಮ ಬಾಹುಗಳನ್ನು ಮುಂದೆ ಚಾಚಿ ಬಹಳ ಪ್ರತಿಜ್ಞೆಗಳನ್ನು ಮಾಡಿ ಧೃತರಾಷ್ಟ್ರನ ಎದಿರು ಹೋದರು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅನುದ್ಯೂತಪರ್ವಣಿ ಪಾಂಡವಪ್ರತಿಜ್ಞಾಕರಣೇ ಅಷ್ಟಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವದಲ್ಲಿ ಪಾಂಡವರ ಪ್ರತಿಜ್ಞೆ ಎನ್ನುವ ಅರವತ್ತೆಂಟನೆಯ ಅಧ್ಯಾಯವು.