ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ದ್ಯೂತ ಪರ್ವ
ಅಧ್ಯಾಯ 45
ಸಾರ
ದುರ್ಯೋಧನನ ಬೇಸರಕ್ಕೆ ಕಾರಣವೇನೆಂದು ಧೃತರಾಷ್ಟ್ರನು ಕೇಳಿದುದು (1-11). ದುರ್ಯೋಧನನು ಯುಧಿಷ್ಠಿರನಲ್ಲಿರುವ ಸಿರಿಯನ್ನು ವರ್ಣಿಸಿ “ಪಾಂಡುಪುತ್ರನ ಆ ಅಪರಿಮಿತ ಸಂಪತ್ತನ್ನು ನೋಡಿದಾಗಿನಿಂದ ಸುಡುತ್ತಿರುವ ನನ್ನ ಚೇತನದಲ್ಲಿ ಶಾಂತಿಯೆನ್ನುವುದೇ ದೊರೆಯದಾಗಿದೆ” ಎಂದು ಹೇಳುವುದು (12-35). ಯುಧಿಷ್ಠಿರನ ಸಂಪತ್ತನ್ನು ತನ್ನದಾಗಿಸಿಕೊಳ್ಳಲು ಜೂಜಾಟವನ್ನು ಸೂಚಿಸಿದುದು; ಧೃತರಾಷ್ಟ್ರನು ಇದರ ಕುರಿತು ವಿದುರನ ಸಲಹೆಯನ್ನು ಕೇಳುವುದಾಗಿ ಹೇಳಲು ದುರ್ಯೋಧನನು ಆತ್ಮಹತ್ಯೆಯ ಬೆದರಿಕೆ ಹಾಕಿದುದು (36-44). ಮಗನನ್ನು ಸಂತೋಷಗೊಳಿಸಲು ಸಾವಿರ ಕಂಬಗಳ, ನೂರು ದ್ವಾರಗಳ ವಿಶಾಲ ಸಭೆಯನ್ನು ನಿರ್ಮಿಸಲು ಆದೇಶವನ್ನಿತ್ತು ಧೃತರಾಷ್ಟ್ರನು ವಿದುರನಿಗೆ ಯುಧಿಷ್ಠಿರನನ್ನು ಕರೆತರಲು ಕಳುಹಿಸಿದುದು (45-58).
02045001 ವೈಶಂಪಾಯನ ಉವಾಚ।
02045001a ಅನುಭೂಯ ತು ರಾಜ್ಞಸ್ತಂ ರಾಜಸೂಯಂ ಮಹಾಕ್ರತುಂ।
02045001c ಯುಧಿಷ್ಠಿರಸ್ಯ ನೃಪತೇರ್ಗಾಂಧಾರೀಪುತ್ರಸಮ್ಯುತಃ।।
02045002a ಪ್ರಿಯಕೃನ್ಮತಮಾಜ್ಞಾಯ ಪೂರ್ವಂ ದುರ್ಯೋಧನಸ್ಯ ತತ್।
02045002c ಪ್ರಜ್ಞಾಚಕ್ಷುಷಮಾಸೀನಂ ಶಕುನಿಃ ಸೌಬಲಸ್ತದಾ।।
02045003a ದುರ್ಯೋಧನವಚಃ ಶ್ರುತ್ವಾ ಧೃತರಾಷ್ಟ್ರಂ ಜನಾಧಿಪಂ।
02045003c ಉಪಗಮ್ಯ ಮಹಾಪ್ರಾಜ್ಞಂ ಶಕುನಿರ್ವಾಕ್ಯಮಬ್ರವೀತ್।।
ವೈಶಂಪಾಯನನು ಹೇಳಿದನು: “ರಾಜ ಯುಧಿಷ್ಠಿರನ ಮಹಾಕ್ರತು ರಾಜಸೂಯವನ್ನು ನೃಪತಿ ಗಾಂಧಾರೀಸುತನೊಡಗೂಡಿ ಅನುಭವಿಸಿ, ದುರ್ಯೋಧನನ ಮತವನ್ನು ಮೊದಲೇ ತಿಳಿದುಕೊಂಡು, ದುರ್ಯೋಧನನು ಹೇಳಿದ್ದುದನ್ನು ಕೇಳಿ, ಅವನಿಗೆ ಪ್ರಿಯವಾದುದನ್ನು ಮಾಡಲೆಂದು ಬಯಸಿದ ಮಹಾಪ್ರಾಜ್ಞ ಶಕುನಿ ಸೌಬಲನು ಪ್ರಜ್ಞಾಚಕ್ಷು ಜನಾಧಿಪ ಧೃತರಾಷ್ಟ್ರನಲ್ಲಿಗೆ ಬಂದು, ಈ ಮಾತುಗಳನ್ನಾಡಿದನು:
02045004a ದುರ್ಯೋಧನೋ ಮಹಾರಾಜ ವಿವರ್ಣೋ ಹರಿಣಃ ಕೃಶಃ।
02045004c ದೀನಶ್ಚಿಂತಾಪರಶ್ಚೈವ ತದ್ವಿದ್ಧಿ ಭರತರ್ಷಭ।।
“ಭರತರ್ಷಭ! ಮಹಾರಾಜ! ದುರ್ಯೋಧನನು ವಿವರ್ಣ, ಹರಿಣ, ಕೃಷ, ದೀನ, ಮತ್ತು ಚಿಂತಾಪರನಾಗಿದ್ದಾನೆ.
02045005a ನ ವೈ ಪರೀಕ್ಷಸೇ ಸಮ್ಯಗಸಹ್ಯಂ ಶತ್ರುಸಂಭವಂ।
02045005c ಜ್ಯೇಷ್ಠಪುತ್ರಸ್ಯ ಶೋಕಂ ತ್ವಂ ಕಿಮರ್ಥಂ ನಾವಬುಧ್ಯಸೇ।।
ನಿನ್ನ ಜ್ಯೇಷ್ಠಪುತ್ರನನ್ನು ಕಾಡುತ್ತಿರುವ ಈ ಶತ್ರುಸಂಭವ ಶೋಕವು ಏನೆಂದು ನೀನು ಪರೀಕ್ಷಿಸಿ ಕಂಡುಕೊಳ್ಳುವುದಿಲ್ಲ ಏಕೆ?”
02045006 ಧೃತರಾಷ್ಟ್ರ ಉವಾಚ।
02045006a ದುರ್ಯೋಧನ ಕುತೋಮೂಲಂ ಭೃಶಮಾರ್ತೋಽಸಿ ಪುತ್ರಕ।
02045006c ಶ್ರೋತವ್ಯಶ್ಚೇನ್ಮಯಾ ಸೋಽರ್ಥೋ ಬ್ರೂಹಿ ಮೇ ಕುರುನಂದನ।।
ಧೃತರಾಷ್ಟ್ರನು ಹೇಳಿದನು: “ದುರ್ಯೋಧನ! ಕುರುನಂದನ! ಪುತ್ರ! ಯಾವ ಕಾರಣಕ್ಕಾಗಿ ನೀನು ಅಷ್ಟೊಂದು ಶೋಕದಿಂದ ಸೊರಗುತ್ತಿದ್ದೀಯೆ? ಅದರ ಕುರಿತು ನಾನು ಕೇಳಬಹುದೇ? ಹೇಳು.
02045007a ಅಯಂ ತ್ವಾಂ ಶಕುನಿಃ ಪ್ರಾಹ ವಿವರ್ಣಂ ಹರಿಣಂ ಕೃಶಂ।
02045007c ಚಿಂತಯಂಶ್ಚ ನ ಪಶ್ಯಾಮಿ ಶೋಕಸ್ಯ ತವ ಸಂಭವಂ।।
02045008a ಐಶ್ವರ್ಯಂ ಹಿ ಮಹತ್ಪುತ್ರ ತ್ವಯಿ ಸರ್ವಂ ಸಮರ್ಪಿತಂ।
02045008c ಭ್ರಾತರಃ ಸುಹೃದಶ್ಚೈವ ನಾಚರಂತಿ ತವಾಪ್ರಿಯಂ।।
ಶಕುನಿಯು ಹೇಳುತ್ತಿದ್ದಾನೆ - ನೀನು ವಿವರ್ಣನೂ, ಹರಿಣನೂ, ಕೃಷನೂ ಚಿಂತಾಪರನೂ ಆಗಿದ್ದೀಯಂತೆ. ಆದರೆ ನಿನ್ನ ಶೋಕದ ಕಾರಣವೇನೆಂದು ನಾನು ಕಾಣುತ್ತಿಲ್ಲ. ಪುತ್ರ! ಈ ಮಹಾ ಐಶ್ವರ್ಯವೆಲ್ಲವೂ ನಿನ್ನ ಸಮರ್ಪಣೆಯಲ್ಲಿದೆ. ಸಹೋದರರು, ಸುಹೃದಯರು ಯಾರೂ ನಿನಗೆ ಅಪ್ರಿಯವಾಗಿ ನಡೆದುಕೊಳ್ಳುತ್ತಿಲ್ಲ.
02045009a ಆಚ್ಛಾದಯಸಿ ಪ್ರಾವಾರಾನಶ್ನಾಸಿ ಪಿಶಿತೌದನಂ।
02045009c ಆಜಾನೇಯಾ ವಹಂತಿ ತ್ವಾಂ ಕೇನಾಸಿ ಹರಿಣಃ ಕೃಶಃ।।
ಅತ್ಯಮೂಲ್ಯ ವಸ್ತ್ರಗಳನ್ನು ತೊಡುತ್ತಿದ್ದೀಯೆ, ರುಚಿಯಾದ ಶ್ರೇಷ್ಠ ಆಹಾರವನ್ನು ಉಣ್ಣುತ್ತಿದ್ದೀಯೆ, ಉತ್ತಮ ಥಳಿಯ ಕುದುರೆಗಳು ನಿನ್ನನ್ನು ಸವಾರಿಗೆ ಒಯ್ಯುತ್ತವೆ. ಇನ್ನು ಯಾವ ಕಾರಣಕ್ಕೆ ನೀನು ಹರಿಣನೂ, ಕೃಶನೂ ಆಗಿದ್ದೀಯೆ?
02045010a ಶಯನಾನಿ ಮಹಾರ್ಹಾಣಿ ಯೋಷಿತಶ್ಚ ಮನೋರಮಾಃ।
02045010c ಗುಣವಂತಿ ಚ ವೇಶ್ಮಾನಿ ವಿಹಾರಾಶ್ಚ ಯಥಾಸುಖಂ।।
02045011a ದೇವಾನಾಮಿವ ತೇ ಸರ್ವಂ ವಾಚಿ ಬದ್ಧಂ ನ ಸಂಶಯಃ।
02045011c ಸ ದೀನ ಇವ ದುರ್ಧರ್ಷಃ ಕಸ್ಮಾಚ್ಶೋಚಸಿ ಪುತ್ರಕ।।
ಬೆಲೆಬಾಳುವ ಹಾಸಿಗೆಗಳು, ತೃಪ್ತಿಪಡಿಸಲು ಮನೋರಮೆಯರು, ಒಳ್ಳೆಯ ಅರಮನೆ, ಯಥಾಸುಖ ವಿಹಾರಗಳು, ಇವೆಲ್ಲವೂ ದೇವತೆಗಳಂತೆ ನಿನ್ನ ಮಾತಿಗೆ ಬದ್ಧವಾಗಿವೆ ಎನ್ನುವುದರಲ್ಲಿ ಸಂಶಯವಿಲ್ಲ. ದುರ್ಧರ್ಷನಾದರೂ ಏಕೆ ದೀನನಾಗಿರುವೆ? ಪುತ್ರಕ! ಯಾವುದಕ್ಕಾಗಿ ಶೋಕಿಸುತ್ತಿದ್ದೀಯೆ?”
02045012 ದುರ್ಯೋಧನ ಉವಾಚ।
02045012a ಅಶ್ನಾಮ್ಯಾಚ್ಛಾದಯೇ ಚಾಹಂ ಯಥಾ ಕುಪುರುಷಸ್ತಥಾ।
02045012c ಅಮರ್ಷಂ ಧಾರಯೇ ಚೋಗ್ರಂ ತಿತಿಕ್ಷನ್ಕಾಲಪರ್ಯಯಂ।।
ದುರ್ಯೋಧನನು ಹೇಳಿದನು: “ಕಾಪುರುಷನಂತೆ ಉಣ್ಣುತ್ತೇನೆ ಮತ್ತು ಉಡುತ್ತೇನೆ. ದಿನೇ ದಿನೇ ಕಾಲ ಉರುಳುತ್ತಿದ್ದಂತೆ ನನ್ನಲ್ಲಿ ಅತಿಹೆಚ್ಚಿನ ಅಸೂಯೆಯೊಂದು ಉಂಟಾಗಿದೆ.
02045013a ಅಮರ್ಷಣಃ ಸ್ವಾಃ ಪ್ರಕೃತೀರಭಿಭೂಯ ಪರೇ ಸ್ಥಿತಾಃ।
02045013c ಕ್ಲೇಶಾನ್ಮುಮುಕ್ಷುಃ ಪರಜಾನ್ಸ ವೈ ಪುರುಷ ಉಚ್ಯತೇ।।
ತನ್ನ ಶತ್ರುವನ್ನು ಅನುಸರಿಸುವ ಪ್ರಜೆಗಳನ್ನು ಸಹಿಸದೇ ತನ್ನ ಶತ್ರುಗಳಿಂದ ಒದಗಿದ ಕ್ಲೇಶಗಳಿಂದ ಮುಕ್ತಿಯನ್ನು ಬಯಸುವವನಿಗೆ ಪುರುಷ ಎನ್ನುತ್ತಾರೆ.
02045014a ಸಂತೋಷೋ ವೈ ಶ್ರಿಯಂ ಹಂತಿ ಅಭಿಮಾನಶ್ಚ ಭಾರತ।
02045014c ಅನುಕ್ರೋಶಭಯೇ ಚೋಭೇ ಯೈರ್ವೃತೋ ನಾಶ್ನುತೇ ಮಹತ್।।
ಭಾರತ! ಅನುಕ್ರೋಶ-ಭಯಗಳೊಡನೆ ಸಂತೃಪ್ತಿ-ಅಭಿಮಾನಗಳೆರಡೂ ಸಂಪತ್ತನ್ನು ನಾಶಪಡಿಸುತ್ತವೆ. ಇವುಗಳಿರುವವನು ಎಂದೂ ಮಹಾತ್ಮನೆನೆಸಿಕೊಳ್ಳುವುದಿಲ್ಲ.
02045015a ನ ಮಾಮವತಿ ತದ್ಭುಕ್ತಂ ಶ್ರಿಯಂ ದೃಷ್ಟ್ವಾ ಯುಧಿಷ್ಠಿರೇ।
02045015c ಜ್ವಲಂತೀಮಿವ ಕೌಂತೇಯೇ ವಿವರ್ಣಕರಣೀಂ ಮಮ।।
ಕೌಂತೇಯ ಯುಧಿಷ್ಠಿರನ ಆ ಸಂಪತ್ತನ್ನು ನೋಡಿದ ನನಗೆ ಈ ಭೋಗಗಳು ಸುಖವನ್ನು ಕೊಡದೇ ನನ್ನನ್ನು ವಿವರ್ಣನನ್ನಾಗಿ ಮಾಡುತ್ತಿದೆ.
02045016a ಸಪತ್ನಾನೃಧ್ಯತೋಽತ್ಮಾನಂ ಹೀಯಮಾನಂ ನಿಶಾಮ್ಯ ಚ।
02045016c ಅದೃಶ್ಯಾಮಪಿ ಕೌಂತೇಯೇ ಸ್ಥಿತಾಂ ಪಶ್ಯನ್ನಿವೋದ್ಯತಾಂ।।
02045016e ತಸ್ಮಾದಹಂ ವಿವರ್ಣಶ್ಚ ದೀನಶ್ಚ ಹರಿಣಃ ಕೃಶಃ।।
ಪ್ರತಿಸ್ಪರ್ಧಿಗಳ ಅಭಿವೃದ್ಧಿಯೇ ನನ್ನ ಅಧೋಗತಿಯೆಂದು ತಿಳಿದಿರುವ ನಾನು ಕೌಂತೇಯನ ಉಚ್ಛ ಸ್ಥಾನವನ್ನು ನೋಡಿ ಹೊರಗಡೆ ತೋರಿಸಿಕೊಳ್ಳದಿದ್ದರೂ ಚಿಂತಿಸುತ್ತಿದ್ದೇನೆ. ಆದುದರಿಂದ ವಿವರ್ಣನೂ, ದೀನನೂ, ಹರಿಣನೂ, ಕೃಶನೂ ಆಗಿದ್ದೇನೆ.
02045017a ಅಷ್ಟಾಶೀತಿಸಹಸ್ರಾಣಿ ಸ್ನಾತಕಾ ಗೃಹಮೇಧಿನಃ।
02045017c ತ್ರಿಂಶದ್ದಾಸೀಕ ಏಕೈಕೋ ಯಾನ್ಬಿಭರ್ತಿ ಯುಧಿಷ್ಠಿರಃ।।
ತಲಾ ಮೂವತ್ತು ದಾಸಿಯರನ್ನು ಪಡೆದ ಎಂಭತ್ತೆಂಟು ಸಾವಿರ ಸ್ನಾತಕ ಕುಟುಂಬಗಳನ್ನು ಯುಧಿಷ್ಠಿರನು ಪೊರೆಯುತ್ತಿದ್ದಾನೆ.
02045018a ದಶಾನ್ಯಾನಿ ಸಹಸ್ರಾಣಿ ನಿತ್ಯಂ ತತ್ರಾನ್ನಮುತ್ತಮಂ।
02045018c ಭುಂಜತೇ ರುಕ್ಮಪಾತ್ರೀಭಿರ್ಯುಧಿಷ್ಠಿರನಿವೇಶನೇ।।
ಇನ್ನೂ ಹತ್ತುಸಾವಿರ ಜನರು ಯುಧಿಷ್ಠಿರನ ಮನೆಯಲ್ಲಿ ನಿತ್ಯವೂ ಉತ್ತಮ ಆಹಾರವನ್ನು ಬಂಗಾರದ ತಟ್ಟೆಗಳಲ್ಲಿ ಸೇವಿಸುತ್ತಾರೆ.
02045019a ಕದಲೀಮೃಗಮೋಕಾನಿ ಕೃಷ್ಣಶ್ಯಾಮಾರುಣಾನಿ ಚ।
02045019c ಕಾಂಬೋಜಃ ಪ್ರಾಹಿಣೋತ್ತಸ್ಮೈ ಪರಾರ್ಧ್ಯಾನಪಿ ಕಂಬಲಾನ್।।
02045020a ರಥಯೋಷಿದ್ಗವಾಶ್ವಸ್ಯ ಶತಶೋಽಥ ಸಹಸ್ರಶಃ।
02045020c ತ್ರಿಂಶತಂ ಚೋಷ್ಟ್ರವಾಮೀನಾಂ ಶತಾನಿ ವಿಚರಂತ್ಯುತ।।
ಕಾಂಬೋಜನು ಅವನಿಗೆ ಕದಲೀ ಮೃಗ ಚರ್ಮದ ಕಪ್ಪು, ನೀಲಿ ಮತ್ತು ಕೆಂಪು ಬಣ್ಣದ ಅತ್ಯಮೂಲ್ಯ ಕಂಬಳಿಗಳು, ನೂರಾರು ಸಹಸ್ರಾರು ರಥಗಳು, ಸ್ತ್ರೀಯರು, ಮತ್ತು ಕುದುರೆಗಳನ್ನು ಕಳುಹಿಸಿದ್ದಾನೆ. ಅಲ್ಲಿ ಮೂವತ್ತು ಸಾವಿರ ಒಂಟೆಗಳು ವಿಹರಿಸುತ್ತಿವೆ.
02045021a ಪೃಥಗ್ವಿಧಾನಿ ರತ್ನಾನಿ ಪಾರ್ಥಿವಾಃ ಪೃಥಿವೀಪತೇ।
02045021c ಆಹರನ್ಕ್ರತುಮುಖ್ಯೇಽಸ್ಮಿನ್ಕುಂತೀಪುತ್ರಾಯ ಭೂರಿಶಃ।।
ಪೃಥಿವೀಪತೇ! ಎಲ್ಲ ತರಹದ ರತ್ನಗಳನ್ನೂ ಪಾರ್ಥಿವರು ಆ ಸುಂದರ ಮುಖ್ಯ ಕ್ರತುವಿನಲ್ಲಿ ಕುಂತೀಪುತ್ರನಿಗೆ ತಂದಿದ್ದರು.
02045022a ನ ಕ್ವ ಚಿದ್ಧಿ ಮಯಾ ದೃಷ್ಟಸ್ತಾದೃಶೋ ನೈವ ಚ ಶ್ರುತಃ।
02045022c ಯಾದೃಗ್ಧನಾಗಮೋ ಯಜ್ಞೇ ಪಾಂಡುಪುತ್ರಸ್ಯ ಧೀಮತಃ।।
ಧೀಮತ ಪಾಂಡುಪುತ್ರನ ಯಜ್ಞದಲ್ಲಿ ಬಂದಷ್ಟು ಧನವನ್ನು ನಾನು ಬೇರೆ ಎಲ್ಲಿಯೂ ನೋಡಲಿಲ್ಲ, ಅಥವಾ ಕೇಳಲಿಲ್ಲ.
02045023a ಅಪರ್ಯಂತಂ ಧನೌಘಂ ತಂ ದೃಷ್ಟ್ವಾ ಶತ್ರೋರಹಂ ನೃಪ।
02045023c ಶರ್ಮ ನೈವಾಧಿಗಚ್ಛಾಮಿ ಚಿಂತಯಾನೋಽನಿಶಂ ವಿಭೋ।।
ವಿಭೋ! ನೃಪ! ಆ ಶತ್ರುವಿನ ಕಡೆ ಹರಿಯುತ್ತಿದ್ದ ಆ ಅಮೋಘ ಸಂಪತ್ತಿನ ಹೊಳೆಯನ್ನು ಕಂಡ ನನಗೆ ಎಲ್ಲಿಯೂ ನೆಲೆಯನ್ನು ಕಾಣದೇ ಒಂದೇಸಮನೆ ಚಿಂತೆಗೊಳಗಾಗಿದ್ದೇನೆ.
02045024a ಬ್ರಾಹ್ಮಣಾ ವಾಟಧಾನಾಶ್ಚ ಗೋಮಂತಃ ಶತಸಂಘಶಃ।
02045024c ತ್ರೈಖರ್ವಂ ಬಲಿಮಾದಾಯ ದ್ವಾರಿ ತಿಷ್ಠಂತಿ ವಾರಿತಾಃ।।
ಮೂರು ಖರ್ವ ಕಪ್ಪಗಳನ್ನು ತೆಗೆದುಕೊಂಡು ಬಂದ ಗೋಮಂತ ವಾಟಧಾನ ಬ್ರಾಹ್ಮಣರ ನೂರಾರು ಗುಂಪುಗಳನ್ನು ಹಿಂದೆ ಕಳುಹಿಸಲಾಯಿತು.
02045025a ಕಮಂಡಲೂನುಪಾದಾಯ ಜಾತರೂಪಮಯಾಂ ಶುಭಾನ್।
02045025c ಏವಂ ಬಲಿಂ ಸಮಾದಾಯ ಪ್ರವೇಶಂ ಲೇಭಿರೇ ತತಃ।।
ಆದರೆ ಅವರು ಸುಂದರವಾದ ಬಂಗಾರದ ಕಮಂಡಲುಗಳನ್ನು ಕಪ್ಪವಾಗಿ ತೆಗೆದುಕೊಂಡು ಬಂದ ನಂತರ ಅವರಿಗೆ ಪ್ರವೇಶವು ದೊರೆಯಿತು.
02045026a ಯನ್ನೈವ ಮಧು ಶಕ್ರಾಯ ಧಾರಯಂತ್ಯಮರಸ್ತ್ರಿಯಃ।
02045026c ತದಸ್ಮೈ ಕಾಂಸ್ಯಮಾಹಾರ್ಷೀದ್ವಾರುಣಂ ಕಲಶೋದಧಿಃ।।
ಶಕ್ರನಿಗೆ ಮಧುವಿನ ಘಟಗಳನ್ನು ಅಮರಸ್ತ್ರೀಯರು ಹಿಡಿಯುವಂತೆ ಬಹುರತ್ನವಿಭೂಷಿತ ಸಹಸ್ರಾರು ನಾರಿಯರು ವರುಣನು ತುಂಬಿದ ಬಂಗಾರದ ಕಲಶಗಳನ್ನು ಹಿಡಿದಿದ್ದರು.
02045027a ಶೈಕ್ಯಂ ರುಕ್ಮಸಹಸ್ರಸ್ಯ ಬಹುರತ್ನವಿಭೂಷಿತಂ।
02045027c ದೃಷ್ಟ್ವಾ ಚ ಮಮ ತತ್ಸರ್ವಂ ಜ್ವರರೂಪಮಿವಾಭವತ್।।
02045028a ಗೃಹೀತ್ವಾ ತತ್ತು ಗಚ್ಛಂತಿ ಸಮುದ್ರೌ ಪೂರ್ವದಕ್ಷಿಣೌ।
02045028c ತಥೈವ ಪಶ್ಚಿಮಂ ಯಾಂತಿ ಗೃಹೀತ್ವಾ ಭರತರ್ಷಭ।।
02045029a ಉತ್ತರಂ ತು ನ ಗಚ್ಛಂತಿ ವಿನಾ ತಾತ ಪತತ್ರಿಭಿಃ।
02045029c ಇದಂ ಚಾದ್ಭುತಮತ್ರಾಸೀತ್ತನ್ಮೇ ನಿಗದತಃ ಶೃಣು।।
ಭರತರ್ಷಭ! ಪೂರ್ವ ಮತ್ತು ದಕ್ಷಿಣದ ಸಮುದ್ರಗಳಿಗೆ ಹೋಗಿ ಪಡೆದಿದ್ದ ಮತ್ತು ಹಾಗೆಯೇ ಪಶ್ಚಿಮ ದಿಕ್ಕಿನಿಂದ ಪಡೆದಿದ್ದ ಅವೆಲ್ಲವನ್ನೂ ನೋಡಿ ನನಗೆ ಜ್ವರ ಬಂದಂತಾಯಿತು. ತಾತ! ಪಕ್ಷಿಗಳ ಹೊರತಾಗಿ ಉತ್ತರದಿಕ್ಕಿಗೆ ಯಾರೂ ಹೋಗುವುದಿಲ್ಲ. ಅಲ್ಲಿ ನಡೆದ ಅದ್ಭುತವವನ್ನು ಹೇಳುತ್ತೇನೆ. ಕೇಳು.
02045030a ಪೂರ್ಣೇ ಶತಸಹಸ್ರೇ ತು ವಿಪ್ರಾಣಾಂ ಪರಿವಿಷ್ಯತಾಂ।
02045030c ಸ್ಥಾಪಿತಾ ತತ್ರ ಸಂಜ್ಞಾಭೂಚ್ಛಂಖೋ ಧ್ಮಾಯತಿ ನಿತ್ಯಶಃ।।
02045031a ಮುಹುರ್ಮುಹುಃ ಪ್ರಣದತಸ್ತಸ್ಯ ಶಂಖಸ್ಯ ಭಾರತ।
02045031c ಉತ್ತಮಂ ಶಬ್ಧಮಶ್ರೌಷಂ ತತೋ ರೋಮಾಣಿ ಮೇಽಹೃಷನ್।।
ಪೂರ್ಣ ಒಂದು ಸಹಸ್ರ ವಿಪ್ರರ ಭೋಜನವಾದನಂತರ ಶಂಖವನ್ನು ಊದುವುದರ ಮೂಲಕ ನಿತ್ಯವೂ ಅದರ ಸೂಚನೆಯನ್ನು ಕೊಡಲಾಗುತ್ತಿತ್ತು. ಭಾರತ! ಕ್ಷಣಕ್ಕೊಮ್ಮೆ ಕೇಳಿಬರುತ್ತಿದ್ದ ಆ ಉತ್ತಮ ಶಂಖನಾದದಿಂದ ನನ್ನ ರೋಮಗಳು ನಿಮಿರೇಳುತ್ತಿದ್ದವು!
02045032a ಪಾರ್ಥಿವೈರ್ಬಹುಭಿಃ ಕೀರ್ಣಮುಪಸ್ಥಾನಂ ದಿದೃಕ್ಷುಭಿಃ।
02045032c ಸರ್ವರತ್ನಾನ್ಯುಪಾದಾಯ ಪಾರ್ಥಿವಾ ವೈ ಜನೇಶ್ವರ।।
ಜನೇಶ್ವರ! ಸರ್ವರತ್ನಗಳನ್ನು ತೆಗೆದುಕೊಂಡು ನೋಡಲು ಬಂದಿದ್ದ ಪಾರ್ಥಿವರಿಂದ ಆ ಸಭೆಯು ತುಂಬಿಹೋಗಿತ್ತು.
02045033a ಯಜ್ಞೇ ತಸ್ಯ ಮಹಾರಾಜ ಪಾಂಡುಪುತ್ರಸ್ಯ ಧೀಮತಃ।
02045033c ವೈಶ್ಯಾ ಇವ ಮಹೀಪಾಲಾ ದ್ವಿಜಾತಿಪರಿವೇಷಕಾಃ।।
ಮಹಾರಾಜ! ಆ ಪಾಂಡುಪುತ್ರ ದೀಮಂತನ ಯಜ್ಞದಲ್ಲಿ ದ್ವಿಜರ ಮುಂದೆ ಮಹೀಪಾಲರು ಸಾಮನ್ಯಜನರಂತೆ ತೋರುತ್ತಿದ್ದರು.
02045034a ನ ಸಾ ಶ್ರೀರ್ದೇವರಾಜಸ್ಯ ಯಮಸ್ಯ ವರುಣಸ್ಯ ವಾ।
02045034c ಗುಹ್ಯಕಾಧಿಪತೇರ್ವಾಪಿ ಯಾ ಶ್ರೀ ರಾಜನ್ಯುಧಿಷ್ಠಿರೇ।।
ರಾಜನ್! ಯುಧಿಷ್ಠಿರನಲ್ಲಿರುವಷ್ಟು ಸಿರಿಯನ್ನು ದೇವರಾಜ, ಯಮ, ವರುಣ ಅಥವಾ ಗುಹ್ಯಕಾಧಿಪತಿಯಲ್ಲಿಯೂ ಇಲ್ಲ.
02045035a ತಾಂ ದೃಷ್ಟ್ವಾ ಪಾಂಡುಪುತ್ರಸ್ಯ ಶ್ರಿಯಂ ಪರಮಿಕಾಮಹಂ।
02045035c ಶಾಂತಿಂ ನ ಪರಿಗಚ್ಛಾಮಿ ದಹ್ಯಮಾನೇನ ಚೇತಸಾ।।
ಪಾಂಡುಪುತ್ರನ ಆ ಅಪರಿಮಿತ ಸಂಪತ್ತನ್ನು ನೋಡಿದಾಗಿನಿಂದ ಸುಡುತ್ತಿರುವ ನನ್ನ ಚೇತನದಲ್ಲಿ ಶಾಂತಿಯೆನ್ನುವುದೇ ದೊರೆಯದಾಗಿದೆ.”
02045036 ಶಕುನಿರುವಾಚ।
02045036a ಯಾಮೇತಾಮುತ್ತಮಾಂ ಲಕ್ಷ್ಮೀಂ ದೃಷ್ಟವಾನಸಿ ಪಾಂಡವೇ।
02045036c ತಸ್ಯಾಃ ಪ್ರಾಪ್ತಾವುಪಾಯಂ ಮೇ ಶೃಣು ಸತ್ಯಪರಾಕ್ರಮ।।
ಶಕುನಿಯು ಹೇಳಿದನು: “ಸತ್ಯಪರಾಕ್ರಮ! ಪಾಂಡವನಲ್ಲಿ ನೀನು ನೋಡಿದ ಉತ್ತಮ ಸಂಪತ್ತನ್ನು ಹೇಗೆ ನಿನ್ನದಾಗಿಸಿಕೊಳ್ಳಬಹುದು ಎನ್ನುವುದನ್ನು ಹೇಳುತ್ತೇನೆ. ಕೇಳು.
02045037a ಅಹಮಕ್ಷೇಷ್ವಭಿಜ್ಞಾತಃ ಪೃಥಿವ್ಯಾಮಪಿ ಭಾರತ।
02045037c ಹೃದಯಜ್ಞಃ ಪಣಜ್ಞಶ್ಚ ವಿಶೇಷಜ್ಞಶ್ಚ ದೇವನೇ।।
ಭಾರತ! ನಾನು ಪೃಥಿವಿಯಲ್ಲಿಯೇ ಅಕ್ಷಶ್ವವನ್ನು ತಿಳಿದಿರುವವರಲ್ಲಿ ಅತಿ ಶ್ರೇಷ್ಠನು. ನಾನು ದಾಳಗಳ ಹೃದಯವನ್ನು, ಪಣವನ್ನು ಮತ್ತು ವಿಶೇಷತೆಯನ್ನು ಬಲ್ಲೆ.
02045038a ದ್ಯೂತಪ್ರಿಯಶ್ಚ ಕೌಂತೇಯೋ ನ ಚ ಜಾನಾತಿ ದೇವಿತುಂ।
02045038c ಆಹೂತಶ್ಚೈಷ್ಯತಿ ವ್ಯಕ್ತಂ ದೀವ್ಯಾವೇತ್ಯಾಹ್ವಯಸ್ವ ತಂ।।
ಕೌಂತೇಯನು ದ್ಯೂತಪ್ರಿಯ. ಆದರೆ ಅವನಿಗೆ ಜೂಜಾಡುವುದು ಗೊತ್ತಿಲ್ಲ. ಕರೆದರೆ ಅವನು ಖಂಡಿತವಾಗಿಯೂ ಬರುತ್ತಾನೆ. ಆಗ ನಾನು ಅವನನ್ನು ನನ್ನೊಡನೆ ಜೂಜಾಡಲು ಕರೆಯಬಹುದು.””
02045039 ವೈಶಂಪಾಯನ ಉವಾಚ।
02045039a ಏವಮುಕ್ತಃ ಶಕುನಿನಾ ರಾಜಾ ದುರ್ಯೋಧನಸ್ತದಾ।
02045039c ಧೃತರಾಷ್ಟ್ರಮಿದಂ ವಾಕ್ಯಮಪದಾಂತರಮಬ್ರವೀತ್।।
ವೈಶಂಪಾಯನನು ಹೇಳಿದನು: “ಶಕುನಿಯ ಈ ಮಾತುಗಳನ್ನು ಕೇಳಿದ ರಾಜ ದುರ್ಯೋಧನನು ಅವನದೇ ಹೆಜ್ಜೆಗಳಲ್ಲಿ ಮುಂದುವರಿದು ದೃತರಾಷ್ಟ್ರನಿಗೆ ಹೇಳಿದನು:
02045040a ಅಯಮುತ್ಸಹತೇ ರಾಜಂ ಶ್ರಿಯಮಾಹರ್ತುಮಕ್ಷವಿತ್।
02045040c ದ್ಯೂತೇನ ಪಾಂಡುಪುತ್ರಸ್ಯ ತದನುಜ್ಞಾತುಮರ್ಹಸಿ।।
“ರಾಜನ್! ಇವನಿಗೆ ಜೂಜಾಡುವುದು ಗೊತ್ತಿದೆ ಮತ್ತು ದ್ಯೂತದಲ್ಲಿ ಪಾಂಡುಪುತ್ರನ ಶ್ರೀಯನ್ನು ತೆಗೆದುಕೊಳ್ಳಲು ಸಮರ್ಥನಾಗಿದ್ದಾನೆ. ಅದಕ್ಕೆ ಅನುಜ್ಞೆಯನ್ನು ನೀಡಬೇಕು.”
02045041 ಧೃತರಾಷ್ಟ್ರ ಉವಾಚ।
02045041a ಕ್ಷತ್ತಾ ಮಂತ್ರೀ ಮಹಾಪ್ರಾಜ್ಞಃ ಸ್ಥಿತೋ ಯಸ್ಯಾಸ್ಮಿ ಶಾಸನೇ।
02045041c ತೇನ ಸಂಗಮ್ಯ ವೇತ್ಸ್ಯಾಮಿ ಕಾರ್ಯಸ್ಯಾಸ್ಯ ವಿನಿಶ್ಚಯಂ।।
ಧೃತರಾಷ್ಟ್ರನು ಹೇಳಿದನು: “ನಾನು ಮಹಾಪ್ರಜ್ಞ ಮಂತ್ರಿ ಕ್ಷತ್ತನ ಅಭಿಪ್ರಾಯಕ್ಕೆ ಬದ್ಧನಾಗಿದ್ದೇನೆ. ನಾನು ಅವನೊಡನೆ ಸಮಾಲೋಚನೆ ಮಾಡಿ ಏನು ಮಾಡಬೇಕೆಂದು ನಿಶ್ಚಯಿಸುತ್ತೇನೆ.
02045042a ಸ ಹಿ ಧರ್ಮಂ ಪುರಸ್ಕೃತ್ಯ ದೀರ್ಘದರ್ಶೀ ಪರಂ ಹಿತಂ।
02045042c ಉಭಯೋಃ ಪಕ್ಷಯೋರ್ಯುಕ್ತಂ ವಕ್ಷ್ಯತ್ಯರ್ಥವಿನಿಶ್ಚಯಂ।।
ಆ ದೀರ್ಘದರ್ಶಿಯು ಧರ್ಮವನ್ನು ಪುರಸ್ಕರಿಸುತ್ತಾನೆ, ನಮ್ಮ ಅಂತಿಮ ಹಿತವನ್ನೇ ಬಯಸುತ್ತಾನೆ ಮತ್ತು ಎರಡೂ ಪಕ್ಷಗಳಿಗೆ ಯುಕ್ತವಾಗುವಂತೆ ಅರ್ಥನಿಶ್ಚಯ ಮಾಡುತ್ತಾನೆ.”
02045043 ದುರ್ಯೋಧನ ಉವಾಚ।
02045043a ನಿವರ್ತಯಿಷ್ಯತಿ ತ್ವಾಸೌ ಯದಿ ಕ್ಷತ್ತಾ ಸಮೇಷ್ಯತಿ।
02045043c ನಿವೃತ್ತೇ ತ್ವಯಿ ರಾಜೇಂದ್ರ ಮರಿಷ್ಯೇಽಹಮಸಂಶಯಂ।।
ದುರ್ಯೋಧನನು ಹೇಳಿದನು: “ಇದರಲ್ಲಿ ಕ್ಷತ್ತನನ್ನು ಸೇರಿಸಿಕೊಂಡರೆ ಅವನು ನೀನು ಹಿಂದೆ ಸರಿಯುವಂತೆ ಮಾಡುತ್ತಾನೆ. ರಾಜೇಂದ್ರ! ಇದರಿಂದ ನೀನು ಹಿಂದೆಸರಿದೆಯಾದರೆ ನಾನು ಆತ್ಮಹತ್ಯೆಮಾಡಿಕೊಳ್ಳುತ್ತೇನೆ. ಇದರಲ್ಲಿ ಸ್ವಲ್ಪವೂ ಸಂಶಯಪಡಬೇಡ!
02045044a ಸ ಮಯಿ ತ್ವಂ ಮೃತೇ ರಾಜನ್ವಿದುರೇಣ ಸುಖೀ ಭವ।
02045044c ಭೋಕ್ಷ್ಯಸೇ ಪೃಥಿವೀಂ ಕೃತ್ಸ್ನಾಂ ಕಿಂ ಮಯಾ ತ್ವಂ ಕರಿಷ್ಯಸಿ।।
ರಾಜನ್! ನನ್ನ ಮರಣದ ನಂತರ ವಿದುರನೊಂದಿಗೆ ಸುಖದಿಂದಿರು. ಇಡೀ ಪೃಥ್ವಿಯನ್ನು ಭೋಗಿಸಬಲ್ಲೆ. ನನಗಾಗಿ ನೀನು ಏನು ಮಾಡಬಲ್ಲೆ!””
02045045 ವೈಶಂಪಾಯನ ಉವಾಚ।
02045045a ಆರ್ತವಾಕ್ಯಂ ತು ತತ್ತಸ್ಯ ಪ್ರಣಯೋಕ್ತಂ ನಿಶಮ್ಯ ಸಃ।
02045045c ಧೃತರಾಷ್ಟ್ರೋಽಬ್ರವೀತ್ಪ್ರೇಷ್ಯಾಂದುರ್ಯೋಧನಮತೇ ಸ್ಥಿತಃ।।
ವೈಶಂಪಾಯನನು ಹೇಳಿದನು: “ಅವನ ಪ್ರಣಯೋಕ್ತ ಆರ್ತವಾಕ್ಯವನ್ನು ಕೇಳಿದ ಧೃತರಾಷ್ಟ್ರನು ದುರ್ಯೋಧನನ ಅಭಿಪ್ರಾಯವನ್ನೇ ಹೊಂದಿದವನಾಗಿ ಪರಿಚಾರಕರಿಗೆ ಹೇಳಿದನು:
02045046a ಸ್ಥೂಣಾಸಹಸ್ರೈರ್ಬೃಹತೀಂ ಶತದ್ವಾರಾಂ ಸಭಾಂ ಮಮ।
02045046c ಮನೋರಮಾಂ ದರ್ಶನೀಯಾಮಾಶು ಕುರ್ವಂತು ಶಿಲ್ಪಿನಃ।।
“ನನಗಾಗಿ ಒಂದು ಸಾವಿರ ಕಂಬಗಳಿಂದ ಮತ್ತು ನೂರು ದ್ವಾರಗಳಿಂದ ಕೂಡಿದ ವಿಶಾಲ ಮನೋರಮ, ದರ್ಶನೀಯ ಸಭೆಯನ್ನು ಶಿಲ್ಪಿಗಳಿಂದ ನಿರ್ಮಿಸಿ.
02045047a ತತಃ ಸಂಸ್ತೀರ್ಯ ರತ್ನೈಸ್ತಾಮಕ್ಷಾನಾವಾಪ್ಯ ಸರ್ವಶಃ।
02045047c ಸುಕೃತಾಂ ಸುಪ್ರವೇಶಾಂ ಚ ನಿವೇದಯತ ಮೇ ಶನೈಃ।।
ಎಲ್ಲೆಡೆಯೂ ರತ್ನ ಮತ್ತು ದಾಳಗಳನ್ನು ಭಿತ್ತರಿಸಿ, ಸಂಪೂರ್ಣ ನಿರ್ಮಾಣವಾದ ನಂತರ ಸುಪ್ರವೇಶಕ್ಕೆ ಗುಪ್ತವಾಗಿ ನನಗೆ ಬಂದು ತಿಳಿಸಿರಿ.”
02045048a ದುರ್ಯೋಧನಸ್ಯ ಶಾಂತ್ಯರ್ಥಮಿತಿ ನಿಶ್ಚಿತ್ಯ ಭೂಮಿಪಃ।
02045048c ಧೃತರಾಷ್ಟ್ರೋ ಮಹಾರಾಜ ಪ್ರಾಹಿಣೋದ್ವಿದುರಾಯ ವೈ।।
ದುರ್ಯೋಧನನ ಶಾಂತಿಗಾಗಿ ಇದನ್ನು ನಿಶ್ವಯಿಸಿದ ಭೂಮಿಪ ಮಹಾರಾಜ ಧೃತರಾಷ್ಟ್ರನು ವಿದುರನಿಗೆ ಕರೆಕಳುಹಿಸಿದನು.
02045049a ಅಪೃಷ್ಟ್ವಾ ವಿದುರಂ ಹ್ಯಸ್ಯ ನಾಸೀತ್ಕಶ್ಚಿದ್ವಿನಿಶ್ಚಯಃ।
02045049c ದ್ಯೂತದೋಷಾಂಶ್ಚ ಜಾನನ್ಸ ಪುತ್ರಸ್ನೇಹಾದಕೃಷ್ಯತ।।
ಏಕೆಂದರೆ ವಿದುರನನ್ನು ಕೇಳದೇ ಯಾವುದೇ ನಿಶ್ಚಯವನ್ನೂ ಅವನು ಮಾಡುತ್ತಿರಲಿಲ್ಲ. ದ್ಯೂತದ ದೋಷಗಳನ್ನು ಅರಿತಿದ್ದರೂ ಅವನು ಪುತ್ರಸ್ನೇಹದಿಂದ ಅದರೆಡೆಗೆ ಸೆಳೆಯಲ್ಪಟ್ಟಿದ್ದನು.
02045050a ತಚ್ಶ್ರುತ್ವಾ ವಿದುರೋ ಧೀಮಾನ್ಕಲಿದ್ವಾರಮುಪಸ್ಥಿತಂ।
02045050c ವಿನಾಶಮುಖಮುತ್ಪನ್ನಂ ಧೃತರಾಷ್ಟ್ರಮುಪಾದ್ರವತ್।।
ಕಲಿಯು ದ್ವಾರದಲ್ಲಿಯೇ ಕುಳಿತಿದ್ದಾನೆ ಮತ್ತು ವಿನಾಶದ ಬಾಯಿಯು ತೆರೆಯಲ್ಪಟ್ಟಿದೆ ಎಂದು ಕೇಳಿದ ಧೀಮಂತ ವಿದುರನು ಧೃತರಾಷ್ಟ್ರನಲ್ಲಿಗೆ ಧಾವಿಸಿ ಬಂದನು.
02045051a ಸೋಽಭಿಗಮ್ಯ ಮಹಾತ್ಮಾನಂ ಭ್ರಾತಾ ಭ್ರಾತರಮಗ್ರಜಂ।
02045051c ಮೂರ್ಧ್ನಾ ಪ್ರಣಮ್ಯ ಚರಣಾವಿದಂ ವಚನಮಬ್ರವೀತ್।।
ತಮ್ಮನು ಹಿರಿಯ ಅಣ್ಣನಿದ್ದಲ್ಲಿಗೆ ಬಂದು ತಲೆಬಾಗಿಸಿ ಚರಣಗಳಿಗೆ ವಂದಿಸಿ ಈ ಮಾತುಗಳನ್ನು ಆಡಿದನು:
02045052a ನಾಭಿನಂದಾಮಿ ತೇ ರಾಜನ್ವ್ಯವಸಾಯಮಿಮಂ ಪ್ರಭೋ।
02045052c ಪುತ್ರೈರ್ಭೇದೋ ಯಥಾ ನ ಸ್ಯಾದ್ದ್ಯೂತಹೇತೋಸ್ತಥಾ ಕುರು।।
“ಪ್ರಭೋ! ರಾಜನ್! ನೀನು ತೆಗೆದುಕೊಂಡ ಈ ನಿಶ್ಚಯವನ್ನು ನಾನು ಸ್ವಾಗತಿಸುವುದಿಲ್ಲ. ದ್ಯೂತದಿಂದ ನಿನ್ನ ಪುತ್ರರಲ್ಲಿ ಭೇದವುಂಟಾಗುವ ಹಾಗೆ ಮಾಡಬೇಡ.”
02045053 ಧೃತರಾಷ್ಟ್ರ ಉವಾಚ।
02045053a ಕ್ಷತ್ತಃ ಪುತ್ರೇಷು ಪುತ್ರೈರ್ಮೇ ಕಲಹೋ ನ ಭವಿಷ್ಯತಿ।
02045053c ದಿವಿ ದೇವಾಃ ಪ್ರಸಾದಂ ನಃ ಕರಿಷ್ಯಂತಿ ನ ಸಂಶಯಃ।।
ಧೃತರಾಷ್ಟ್ರನು ಹೇಳಿದನು: “ಕ್ಷತ್ತ! ನನ್ನ ಪುತ್ರರು ಮತ್ತು ಇತರ ಪುತ್ರರಲ್ಲಿ ಕಲಹವಾಗುವುದಿಲ್ಲ. ದಿವಿಯ ದೇವರುಗಳು ಪ್ರಸಾದ ನೀಡುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.
02045054a ಅಶುಭಂ ವಾ ಶುಭಂ ವಾಪಿ ಹಿತಂ ವಾ ಯದಿ ವಾಹಿತಂ।
02045054c ಪ್ರವರ್ತತಾಂ ಸುಹೃದ್ದ್ಯೂತಂ ದಿಷ್ಟಮೇತನ್ನ ಸಂಶಯಃ।।
ಅಶುಭವಾಗಿರಲಿ ಶುಭವಾಗಿರಲಿ, ಹಿತವಾಗಿರಲಿ ಅಹಿತವಾಗಿರಲಿ, ಈ ಸ್ನೇಹಪೂರ್ವಕ ದ್ಯೂತವು ನಡೆದೇ ನಡೆಯುತ್ತದೆ. ಹಾಗೆಯೇ ಅದು ವಿಧಿ ವಿಹಿತವಾಗಿದೆ.
02045055a ಮಯಿ ಸನ್ನಿಹಿತೇ ಚೈವ ಭೀಷ್ಮೇ ಚ ಭರತರ್ಷಭೇ।
02045055c ಅನಯೋ ದೈವವಿಹಿತೋ ನ ಕಥಂ ಚಿದ್ಭವಿಷ್ಯತಿ।।
ಭರತರ್ಷಭ ಭೀಷ್ಮ ಮತ್ತು ನನ್ನ ಸನ್ನಿಧಿಯಲ್ಲಿ ದೈವವಿಹಿತ ಯಾವುದೇ ರೀತಿಯ ಅನ್ಯಾಯವೂ ನಡೆಯುವುದಿಲ್ಲ.
02045056a ಗಚ್ಛ ತ್ವಂ ರಥಮಾಸ್ಥಾಯ ಹಯೈರ್ವಾತಸಮೈರ್ಜವೇ।
02045056c ಖಾಂಡವಪ್ರಸ್ಥಮದ್ಯೈವ ಸಮಾನಯ ಯುಧಿಷ್ಠಿರಂ।।
ವಾಯುವೇಗದ ಕುದುರೆಗಳನ್ನು ಕಟ್ಟಿದ ರಥದಲ್ಲಿ ಖಾಂಡವಪ್ರಸ್ತಕ್ಕೆ ಹೋಗಿ ಯುಧಿಷ್ಠಿರನನ್ನು ಕರೆದುಕೊಂಡು ಬಾ.
02045057a ನ ವಾರ್ಯೋ ವ್ಯವಸಾಯೋ ಮೇ ವಿದುರೈತದ್ಬ್ರವೀಮಿ ತೇ।
02045057c ದೈವಮೇವ ಪರಂ ಮನ್ಯೇ ಯೇನೈತದುಪಪದ್ಯತೇ।।
ವಿದುರ! ನಾನು ನಿನಗೆ ಹೇಳುತ್ತಿದ್ದೇನೆ. ನನ್ನ ಈ ಇಚ್ಛೆಯನ್ನು ತಡೆಗಟ್ಟಬೇಡ. ಈ ರೀತಿ ನಡೆಯುವುದಕ್ಕೆ ಪರಮ ದೈವವೇ ಕಾರಣವೆಂದು ಭಾವಿಸುತ್ತೇನೆ.”
02045058a ಇತ್ಯುಕ್ತೋ ವಿದುರೋ ಧೀಮಾನ್ನೈತದಸ್ತೀತಿ ಚಿಂತಯನ್।
02045058c ಆಪಗೇಯಂ ಮಹಾಪ್ರಾಜ್ಞಮಭ್ಯಗಚ್ಛತ್ಸುದುಃಖಿತಃ।।
ಇದನ್ನು ಕೇಳಿದ ಧೀಮಂತ ವಿದುರನು ಅದು ಹಾಗಲ್ಲ ಎಂದು ಯೋಚಿಸಿ ಸುದುಃಖಿತನಾಗಿ ಮಹಾಪ್ರಾಜ್ಞ ಆಪಗೇಯ ಭೀಷ್ಮನಲ್ಲಿಗೆ ಹೋದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದುರ್ಯೋಧನಸಂತಾಪೇ ಪಂಚಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದುರ್ಯೋಧನಸಂತಾಪ ಎನ್ನುವ ನಲವತ್ತೈದನೆಯ ಅಧ್ಯಾಯವು.