ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ
ದ್ಯೂತ ಪರ್ವ
ಅಧ್ಯಾಯ 43
ಸಾರ
ಮಯಸಭೆಯಲ್ಲಿ ವಿಭ್ರಾಂತನಾದ ದುರ್ಯೋಧನನು ಅಪಮಾನಕ್ಕೀಡಾದುದು (1-10). ಹಸ್ತಿನಾಪುರಕ್ಕೆ ಹಿಂದಿರುಗುವಾಗ ಚಿಂತಿತನಾದ ದುರ್ಯೋಧನನನ್ನು ಶಕುನಿಯು ಪ್ರಶ್ನಿಸುವುದು (11-18). ಪಾಂಡವರ ಕುರಿತು ತನಗಿರುವ ಅಸೂಯೆಯೇ ಚಿಂತೆಗೆ ಕಾರಣವೆಂದು ದುರ್ಯೋಧನನು ಹೇಳಿಕೊಳ್ಳುವುದು (19-36).
02043001 1ವೈಶಂಪಾಯನ ಉವಾಚ।
02043001a ವಸನ್ದುರ್ಯೋಧನಸ್ತಸ್ಯಾಂ ಸಭಾಯಾಂ ಭರತರ್ಷಭ।
02043001c ಶನೈರ್ದದರ್ಶ ತಾಂ ಸರ್ವಾಂ ಸಭಾಂ ಶಕುನಿನಾ ಸಹ।।
ವೈಶಂಪಾಯನನು ಹೇಳಿದನು: “ಭರತರ್ಷಭ! ಆ ಸಭೆಯಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ದುರ್ಯೋಧನನು ಶಕುನಿಯೊಡನೆ ನಿಧಾನವಾಗಿ ಸಭೆಯ ಸರ್ವಸ್ವವನ್ನೂ ನೋಡಿದನು2.
02043002a ತಸ್ಯಾಂ ದಿವ್ಯಾನಭಿಪ್ರಾಯಾನ್ದದರ್ಶ ಕುರುನಂದನಃ।
02043002c ನ ದೃಷ್ಟಪೂರ್ವಾ ಯೇ ತೇನ ನಗರೇ ನಾಗಸಾಹ್ವಯೇ।।
ಕುರುನಂದನನು ಇದಕ್ಕೂ ಮೊದಲು ತನ್ನ ನಾಗಸಾಹ್ವಯದಲ್ಲಿ ನೋಡಿಯೇ ಇರದ ದಿವ್ಯ ಅಭಿಪ್ರಾಯಗಳನ್ನು ಅಲ್ಲಿ ನೋಡಿದನು.
02043003a ಸ ಕದಾ ಚಿತ್ಸಭಾಮಧ್ಯೇ ಧಾರ್ತರಾಷ್ಟ್ರೋ ಮಹೀಪತಿಃ।
02043003c ಸ್ಫಾಟಿಕಂ ತಲಮಾಸಾದ್ಯ ಜಲಮಿತ್ಯಭಿಶಂಕಯಾ।।
02043004a ಸ್ವವಸ್ತ್ರೋತ್ಕರ್ಷಣಂ ರಾಜಾ ಕೃತವಾನ್ಬುದ್ಧಿಮೋಹಿತಃ।
02043004c ದುರ್ಮನಾ ವಿಮುಖಶ್ಚೈವ ಪರಿಚಕ್ರಾಮ ತಾಂ ಸಭಾಂ।।
ಒಮ್ಮೆ ಮಹೀಪತಿ ರಾಜ ಧಾರ್ತರಾಷ್ಟ್ರನು ಸ್ಫಟಿಕದಿಂದ ನಿರ್ಮಿಸಿದ್ದ ಸಭಾಮಧ್ಯದ ಒಂದು ನೆಲದ ಬಳಿ ಬಂದು ನೀರಿದೆಯೆಂದು ಶಂಕಿಸಿ ಬುದ್ಧಿಮೋಹಿತನಾಗಿ ತನ್ನ ವಸ್ತ್ರಗಳನ್ನು ಎತ್ತಿಹಿಡಿದನು. ನಂತರ ನಾಚಿಕೆಯಿಂದ ನೊಂದ ಅವನು ಸಭೆಯ ಇನ್ನೊಂದೆಡೆ ಹೋದನು.
02043005a 3ತತಃ ಸ್ಫಾಟಿಕತೋಯಾಂ ವೈ ಸ್ಫಾಟಿಕಾಂಬುಜಶೋಭಿತಾಂ।
02043005c ವಾಪೀಂ ಮತ್ವಾ ಸ್ಥಲಮಿತಿ ಸವಾಸಾಃ ಪ್ರಾಪತಜ್ಜಲೇ।।
ಇನ್ನೊಮ್ಮೆ ಸ್ಫಟಿಕ ಕಮಲಗಳಿಂದ ಶೋಭಿತ ಸ್ಫಟಿಕದಂತಿದ್ದ ನೀರನ್ನು ನೋಡಿ ನೆಲವೆಂದು ತಿಳಿದು ವಸ್ತ್ರಗಳ ಸಮೇತ ನೀರಿನಲ್ಲಿ ಬಿದ್ದನು.
02043006a 4ಜಲೇ ನಿಪತಿತಂ ದೃಷ್ಟ್ವಾ ಕಿಂಕರಾ ಜಹಸುರ್ಭೃಶಂ।
02043006c ವಾಸಾಂಸಿ ಚ ಶುಭಾನ್ಯಸ್ಮೈ ಪ್ರದದೂ ರಾಜಶಾಸನಾತ್।।
ನೀರಿನಲ್ಲಿ ಬಿದ್ದುದನ್ನು ನೋಡಿ ಜೋರಾಗಿ ನಕ್ಕ ಅಲ್ಲಿದ್ದ ಸೇವಕರೆಲ್ಲರೂ ರಾಜಶಾಸನದಂತೆ ಅವನಿಗೆ ಶುಭವಸ್ತ್ರಗಳನ್ನು ಕೊಟ್ಟರು.
02043007a ತಥಾಗತಂ ತು ತಂ ದೃಷ್ಟ್ವಾ ಭೀಮಸೇನೋ ಮಹಾಬಲಃ।
02043007c ಅರ್ಜುನಶ್ಚ ಯಮೌ ಚೋಭೌ ಸರ್ವೇ ತೇ ಪ್ರಾಹಸಂಸ್ತದಾ।।
ಅವನನ್ನು ಆ ಅವಸ್ಥೆಯಲ್ಲಿ ನೋಡಿದ ಮಹಾಬಲಿ ಭೀಮಸೇನ, ಅರ್ಜುನ ಮತ್ತು ಅವಳಿಗಳೆಲ್ಲರೂ ಜೋರಾಗಿ ನಕ್ಕರು.
02043008a ನಾಮರ್ಷಯತ್ತತಸ್ತೇಷಾಮವಹಾಸಮಮರ್ಷಣಃ।
02043008c ಆಕಾರಂ ರಕ್ಷಮಾಣಸ್ತು ನ ಸ ತಾನ್ಸಮುದೈಕ್ಷತ।।
ಅವರ ಅಪಹಾಸ್ಯದಿಂದ ತನಗಾದ ನೋವನ್ನು ಅವರ ಕಡೆ ನೋಡದೆಯೇ ತನ್ನ ಮುಖದಲ್ಲಿಯೇ ಆ ಅಮರ್ಷಣನು ಬಚ್ಚಿಟ್ಟುಕೊಂಡನು.
02043009a ಪುನರ್ವಸನಮುತ್ಕ್ಷಿಪ್ಯ ಪ್ರತರಿಷ್ಯನ್ನಿವ ಸ್ಥಲಂ।
02043009c ಆರುರೋಹ ತತಃ ಸರ್ವೇ ಜಹಸುಸ್ತೇ ಪುನರ್ಜನಾಃ।।
ಇನ್ನೊಮ್ಮೆ ಅವನು ಗಟ್ಟಿಯಾದ ನೆಲವನ್ನು ನೀರಿನ ಕೊಳವೆಂದು ತಿಳಿದು ತನ್ನ ವಸ್ತ್ರವನ್ನು ಮೇಲಕ್ಕೆತ್ತಿ ದಾಟಿದುದನ್ನು ನೋಡಿ ಎಲ್ಲರೂ ಪುನಃ ನಕ್ಕರು.
02043010a ದ್ವಾರಂ ಚ ವಿವೃತಾಕಾರಂ ಲಲಾಟೇನ ಸಮಾಹನತ್।
02043010c ಸಂವೃತಂ ಚೇತಿ ಮನ್ವಾನೋ ದ್ವಾರದೇಶಾದುಪಾರಮತ್।।
ಒಮ್ಮೆ ಅವನು ತೆರದಹಾಗೆ ತೋರುತ್ತಿದ್ದ ದ್ವಾರದ ಒಳಗೆ ಹೋಗಲು ಪ್ರಯತ್ನಿಸಿ ತನ್ನ ಹಣೆಯನ್ನು ಚಚ್ಚಿಕೊಂಡನು. ಇನ್ನೊಮ್ಮೆ ದ್ವಾರವು ಮುಚ್ಚಿದೆಯೆಂದು ತಿಳಿದು ಬಾಗಿಲಿನಲ್ಲಿಯೇ ಬಿದ್ದನು.
02043011a ಏವಂ ಪ್ರಲಂಭಾನ್ವಿವಿಧಾನ್ಪ್ರಾಪ್ಯ ತತ್ರ ವಿಶಾಂ ಪತೇ।
02043011c ಪಾಂಡವೇಯಾಭ್ಯನುಜ್ಞಾತಸ್ತತೋ ದುರ್ಯೋಧನೋ ನೃಪಃ।।
02043012a ಅಪ್ರಹೃಷ್ಟೇನ ಮನಸಾ ರಾಜಸೂಯೇ ಮಹಾಕ್ರತೌ।
02043012c ಪ್ರೇಕ್ಷ್ಯ ತಾಮದ್ಭುತಾಮೃದ್ಧಿಂ ಜಗಾಮ ಗಜಸಾಹ್ವಯಂ।।
ವಿಶಾಂಪತೇ! ಆ ಅದ್ಭುತ ಸಮೃದ್ಧ ಮಹಾಕ್ರತು ರಾಜಸೂಯವನ್ನು ನೋಡಿ ಮತ್ತು ಅಲ್ಲಿ ಈ ರೀತಿಯ ವಿವಿಧ ಪರಿಪಾಟಗಳನ್ನು ಅನುಭವಿಸಿದ ನೃಪ ದುರ್ಯೋಧನನು ಮನಸ್ಸಿನಲ್ಲಿಯೇ ಅಸಂತುಷ್ಟನಾಗಿ ಪಾಂಡವರಿಂದ ಅಪ್ಪಣೆಯನ್ನು ಪಡೆದು ಗಜಸಾಹ್ವಯಕ್ಕೆ ಹೊರಟನು.
02043013a ಪಾಂಡವಶ್ರೀಪ್ರತಪ್ತಸ್ಯ ಧ್ಯಾನಗ್ಲಾನಸ್ಯ ಗಚ್ಛತಃ।
02043013c ದುರ್ಯೋಧನಸ್ಯ ನೃಪತೇಃ ಪಾಪಾ ಮತಿರಜಾಯತ।।
ಪಾಂಡವರ ಏಳ್ಗೆಯನ್ನು ಸಹಿಸಲಾಗದೇ ಧ್ಯಾನಮಗ್ನನಾದ ನೃಪತಿ ದುರ್ಯೋಧನನಲ್ಲಿ ಕೆಟ್ಟ ಯೋಚನೆಗಳು ಹುಟ್ಟಿದವು.
02043014a ಪಾರ್ಥಾನ್ಸುಮನಸೋ ದೃಷ್ಟ್ವಾ ಪಾರ್ಥಿವಾಂಶ್ಚ ವಶಾನುಗಾನ್।
02043014c ಕೃತ್ಸ್ನಂ ಚಾಪಿ ಹಿತಂ ಲೋಕಮಾಕುಮಾರಂ ಕುರೂದ್ವಹ।।
02043015a ಮಹಿಮಾನಂ ಪರಂ ಚಾಪಿ ಪಾಂಡವಾನಾಂ ಮಹಾತ್ಮನಾಂ।
02043015c ದುರ್ಯೋಧನೋ ಧಾರ್ತರಾಷ್ಟ್ರೋ ವಿವರ್ಣಃ ಸಮಪದ್ಯತ।
ಕುರೂಧ್ವಹ! ಪಾರ್ಥರ ಸಂತೋಷವನ್ನು, ಅವರಿಗೆ ವಶರಾದ ಪಾರ್ಥಿವರನ್ನು, ಅವರ ಸಣ್ಣ ಮಕ್ಕಳನ್ನೂ ಸೇರಿಸಿ ಎಲ್ಲರ ಹಿತವನ್ನೇ ಸರ್ವಲೋಕವೂ ಬಯಸುತ್ತಿರುವುದನ್ನು, ಮಹಾತ್ಮ ಪಾಂಡವರ ಇತರ ಅತ್ಯುನ್ನತ ಮಹಿಮೆಗಳನ್ನು ನೋಡಿ ಧಾರ್ತರಾಷ್ಟ್ರ ದುರ್ಯೋಧನನು ವಿವರ್ಣನಾದನು.
02043016a ಸ ತು ಗಚ್ಛನ್ನನೇಕಾಗ್ರಃ ಸಭಾಮೇವಾನುಚಿಂತಯನ್।
02043016c ಶ್ರಿಯಂ ಚ ತಾಮನುಪಮಾಂ ಧರ್ಮರಾಜಸ್ಯ ಧೀಮತಃ।।
02043017a ಪ್ರಮತ್ತೋ ಧೃತರಾಷ್ಟ್ರಸ್ಯ ಪುತ್ರೋ ದುರ್ಯೋಧನಸ್ತದಾ।
02043017c ನಾಭ್ಯಭಾಷತ್ಸುಬಲಜಂ ಭಾಷಮಾಣಂ ಪುನಃ ಪುನಃ।।
ಧೀಮಂತ ಧರ್ಮರಾಜನ ಆ ಅನುಪಮ ಸುಂದರ ಸಭೆಯ ಕುರಿತೇ ಯೋಚಿಸುತ್ತಾ ಏಕಾಗ್ರನಾಗಿ ಪ್ರಮತ್ತನಾಗಿ ಹೊರಟ ಧೃತರಾಷ್ಟ್ರ ಪುತ್ರ ದುರ್ಯೋಧನನು ಪುನಃ ಪುನಃ ಮಾತನಾಡುತ್ತಿದ್ದ ಸುಬಲಜನಲ್ಲಿ ಏನನ್ನೂ ಮಾತನಾಡಲಿಲ್ಲ.
02043018a ಅನೇಕಾಗ್ರಂ ತು ತಂ ದೃಷ್ಟ್ವಾ ಶಕುನಿಃ ಪ್ರತ್ಯಭಾಷತ।
02043018c ದುರ್ಯೋಧನ ಕುತೋಮೂಲಂ ನಿಃವ್ಯಸನ್ನಿವ ಗಚ್ಛಸಿ।।
ಆ ಅನೇಕಾಗ್ರನನ್ನು ನೋಡಿದ ಶಕುನಿಯು ಕೇಳಿದನು: “ದುರ್ಯೋಧನ! ಯಾವ ಕಾರಣಕ್ಕಾಗಿ ಈ ರೀತಿ ನಿಟ್ಟಿಸುರುಬಿಡುತ್ತಾ ಪ್ರಯಾಣಿಸುತ್ತಿರುವೆ?”
02043019 ದುರ್ಯೋಧನ ಉವಾಚ।
02043019a ದೃಷ್ಟ್ವೇಮಾಂ ಪೃಥ್ವೀಂ ಕೃತ್ಸ್ನಾಂ ಯುಧಿಷ್ಠಿರವಶಾನುಗಾಂ।
02043019c ಜಿತಾಮಸ್ತ್ರಪ್ರತಾಪೇನ ಶ್ವೇತಾಶ್ವಸ್ಯ ಮಹಾತ್ಮನಃ।।
ದುರ್ಯೋಧನನು ಹೇಳಿದನು: “ಮಹಾತ್ಮ ಶ್ವೇತಾಶ್ವನ ಅಸ್ತ್ರಪ್ರತಾಪದಿಂದ ಗೆಲ್ಲಲ್ಪಟ್ಟ ಇಡೀ ಪೃಥ್ವಿಯೇ ಯುಧಿಷ್ಠಿರನ ವಶವಾದುದನ್ನು ನಾನು ಕಂಡೆ.
02043020a ತಂ ಚ ಯಜ್ಞಂ ತಥಾಭೂತಂ ದೃಷ್ಟ್ವಾ ಪಾರ್ಥಸ್ಯ ಮಾತುಲ।
02043020c ಯಥಾ ಶಕ್ರಸ್ಯ ದೇವೇಷು ತಥಾಭೂತಂ ಮಹಾದ್ಯುತೇ।।
ಮಾವ! ಮಹಾದ್ಯುತಿ! ದೇವತೆಗಳಲ್ಲಿ ಶಕ್ರನ ಯಜ್ಞವು ಹೇಗಿರುತ್ತದೆಯೋ ಹಾಗೆ ನಡೆದ ಪಾರ್ಥನ ಯಜ್ಞವನ್ನು ನೋಡಿದೆ.
02043021a ಅಮರ್ಷೇಣ ಸುಸಂಪೂರ್ಣೋ ದಹ್ಯಮಾನೋ ದಿವಾನಿಶಂ।
02043021c ಶುಚಿಶುಕ್ರಾಗಮೇ ಕಾಲೇ ಶುಷ್ಯೇ ತೋಯಮಿವಾಲ್ಪಕಂ।।
ಹಗಲು ರಾತ್ರಿ ಸುಡುತ್ತಿರುವ ಅಸೂಯೆಯು ನನ್ನನ್ನು ತುಂಬಿಕೊಂಡಿದೆ ಮತ್ತು ಬೇಸಗೆಯಲ್ಲಿ ಬತ್ತಿಹೋಗುವ ಕೊಳದಂತೆ ನಾನು ಸೊರಗುತ್ತಿದ್ದೇನೆ.
02043022a ಪಶ್ಯ ಸಾತ್ವತಮುಖ್ಯೇನ ಶಿಶುಪಾಲಂ ನಿಪಾತಿತಂ।
02043022c ನ ಚ ತತ್ರ ಪುಮಾನಾಸೀತ್ಕಶ್ಚಿತ್ತಸ್ಯ ಪದಾನುಗಃ।।
ನೋಡು! ಸಾತ್ವತಮುಖ್ಯನು ಶಿಶುಪಾಲನನ್ನು ಉರುಳಿಸಿದನು. ಆದರೂ ಅವನನ್ನು ಬೆಂಬಲಿಸುವ ಯಾವ ಪುರುಷನೂ ಅಲ್ಲಿರಲಿಲ್ಲ.
02043023a ದಹ್ಯಮಾನಾ ಹಿ ರಾಜಾನಃ ಪಾಂಡವೋತ್ಥೇನ ವಹ್ನಿನಾ।
02043023c ಕ್ಷಾಂತವಂತೋಽಪರಾಧಂ ತಂ ಕೋ ಹಿ ತಂ ಕ್ಷಂತುಮರ್ಹತಿ।।
ಪಾಂಡವೋದ್ಭವ ವಹ್ನಿಯಿಂದ ಸುಡುತ್ತಿರುವ ಆ ರಾಜರು ಅವರ ಅಪರಾಧವನ್ನು ಕ್ಷಮಿಸಿದರು. ಆದರೂ ಅದನ್ನು ಯಾರುತಾನೆ ಕ್ಷಮಿಸಬಲ್ಲರು?
02043024a ವಾಸುದೇವೇನ ತತ್ಕರ್ಮ ತಥಾಯುಕ್ತಂ ಮಹತ್ಕೃತಂ।
02043024c ಸಿದ್ಧಂ ಚ ಪಾಂಡವೇಯಾನಾಂ ಪ್ರತಾಪೇನ ಮಹಾತ್ಮನಾಂ।।
ವಾಸುದೇವನ ಯಥಾಯುಕ್ತ ಮಹಾಕಾರ್ಯದಿಂದಾಗಿ ಮಹಾತ್ಮ ಪ್ರತಾಪಿ ಪಾಂಡವರು ಯಶಸ್ವಿಯಾದರು.
02043025a ತಥಾ ಹಿ ರತ್ನಾನ್ಯಾದಾಯ ವಿವಿಧಾನಿ ನೃಪಾ ನೃಪಂ।
02043025c ಉಪತಿಷ್ಠಂತಿ ಕೌಂತೇಯಂ ವೈಶ್ಯಾ ಇವ ಕರಪ್ರದಾಃ।।
ಹಾಗೆಯೇ ರಾಜನಿಗೆಂದು ವಿವಿಧ ರತ್ನಗಳನ್ನು ತಂದು ತೆರಿಗೆ ಕೊಡುವ ವೈಶ್ಯರಂತೆ ನೃಪರು ಕೌಂತೇಯನ ಉಪಸ್ಥಿತಿಯಲ್ಲಿದ್ದರು.
02043026a ಶ್ರಿಯಂ ತಥಾವಿಧಾಂ ದೃಷ್ಟ್ವಾ ಜ್ವಲಂತೀಮಿವ ಪಾಂಡವೇ।
02043026c ಅಮರ್ಷವಶಮಾಪನ್ನೋ ದಹ್ಯೇಽಹಮತಥೋಚಿತಃ।।
ಪಾಂಡವರ ಆ ಸಂಪತ್ತನ್ನು ನೋಡಿ ನಾನು ಅಸೂಯೆಯ ವಶದಲ್ಲಿ ಬಂದು ಔಚಿತ್ಯವಲ್ಲದಿದ್ದರೂ ಸುಡುತ್ತಿದ್ದೇನೆ.
02043027a ವಹ್ನಿಮೇವ ಪ್ರವೇಕ್ಷ್ಯಾಮಿ ಭಕ್ಷಯಿಷ್ಯಾಮಿ ವಾ ವಿಷಂ।
02043027c ಅಪೋ ವಾಪಿ ಪ್ರವೇಕ್ಷ್ಯಾಮಿ ನ ಹಿ ಶಕ್ಷ್ಯಾಮಿ ಜೀವಿತುಂ।।
ಬೆಂಕಿಯಲ್ಲಿಯಾದರೂ ಬೀಳುತ್ತೇನೆ, ವಿಷವನ್ನಾದರೂ ಸೇವಿಸುತ್ತೇನೆ, ಅಥವಾ ನೀರಿನಲ್ಲಿ ಮುಳುಗುತ್ತೇನೆ, ಆದರೆ ಇನ್ನು ಜೀವಿಸುವುದನ್ನು ಸಹಿಸಲಾರೆ.
02043028a ಕೋ ಹಿ ನಾಮ ಪುಮಾಽಲ್ಲೋಕೇ ಮರ್ಷಯಿಷ್ಯತಿ ಸತ್ತ್ವವಾನ್।
02043028c ಸಪತ್ನಾನೃಧ್ಯತೋ ದೃಷ್ಟ್ವಾ ಹಾನಿಮಾತ್ಮನ ಏವ ಚ।।
ಯಾಕೆಂದರೆ ಯಾವ ಸತ್ವಯುತ ಮನುಷ್ಯ ತಾನೇ ತನ್ನ ಪ್ರತಿಸ್ಪರ್ಧಿಗಳು ವೃದ್ಧಿಯಾಗುವುದನ್ನು ಮತ್ತು ಸ್ವತಃ ಹಾನಿಯನ್ನು ಹೊಂದುವುದನ್ನು ನೋಡಿಯೂ ಸಹಿಸಿಕೊಳ್ಳುತ್ತಾನೆ?
02043029a ಸೋಽಹಂ ನ ಸ್ತ್ರೀ ನ ಚಾಪ್ಯಸ್ತ್ರೀ ನ ಪುಮಾನ್ನಾಪುಮಾನಪಿ।
02043029c ಯೋಽಹಂ ತಾಂ ಮರ್ಷಯಾಮ್ಯದ್ಯ ತಾದೃಶೀಂ ಶ್ರಿಯಮಾಗತಾಂ।।
ಅವರಿಗೆ ದೊರಕಿರುವ ಶ್ರೇಯಸ್ಸನ್ನು ನಾನು ಸಹಿಸಿಕೊಂಡೆನೆಂದರೆ ನಾನು ಸ್ತ್ರೀಯೂ ಆಗಿರಲಿಕ್ಕಿಲ್ಲ ಸ್ತ್ರೀಯಲ್ಲದೆಯೂ ಇರಲಿಕ್ಕಿಲ್ಲ ಅಥವಾ ಪುರುಷನೂ ಆಗಿರಲಿಕ್ಕಿಲ್ಲ ಪುರುಷನಲ್ಲದೆಯೂ ಇರಲಿಕ್ಕಿಲ್ಲ.
02043030a ಈಶ್ವರತ್ವಂ ಪೃಥಿವ್ಯಾಶ್ಚ ವಸುಮತ್ತಾಂ ಚ ತಾದೃಶೀಂ।
02043030c ಯಜ್ಞಂ ಚ ತಾದೃಶಂ ದೃಷ್ಟ್ವಾ ಮಾದೃಶಃ ಕೋ ನ ಸಂಜ್ವರೇತ್।।
ಪೃಥ್ವಿಯಲ್ಲಿ ಅವರ ಈಶ್ವರತ್ವವನ್ನು ಮತ್ತು ಅಂಥಹ ಸಂಪತ್ತು, ಅಂಥಹ ಯಜ್ಞವನ್ನು ನೋಡಿದ ನನ್ನಂಥಹ ಯಾರು ತಾನೇ ಜ್ವರದಿಂದ ಸುಡುವುದಿಲ್ಲ?
02043031a ಅಶಕ್ತಶ್ಚೈಕ ಏವಾಹಂ ತಾಮಾಹರ್ತುಂ ನೃಪಶ್ರಿಯಂ।
02043031c ಸಹಾಯಾಂಶ್ಚ ನ ಪಶ್ಯಾಮಿ ತೇನ ಮೃತ್ಯುಂ ವಿಚಿಂತಯೇ।।
ನಾನೊಬ್ಬನೇ ಅಂಥಹ ನೃಪಶ್ರೀಯನ್ನು ಪಡೆಯಲು ಶಕ್ಯನಿಲ್ಲ. ನನಗೆ ಸಹಾಯಮಾಡುವ ಯಾರನ್ನು ಕೂಡ ನಾನು ಕಾಣುತ್ತಿಲ್ಲ5. ಆದುದರಿಂದ ನಾನು ಮೃತ್ಯುವನ್ನೇ ಯೋಚಿಸುತ್ತಿದ್ದೇನೆ.
02043032a ದೈವಮೇವ ಪರಂ ಮನ್ಯೇ ಪೌರುಷಂ ತು ನಿರರ್ಥಕಂ।
02043032c ದೃಷ್ಟ್ವಾ ಕುಂತೀಸುತೇ ಶುಭ್ರಾಂ ಶ್ರಿಯಂ ತಾಮಾಹೃತಾಂ ತಥಾ।।
ಕುಂತೀಸುತನು ಒಟ್ಟುಗೂಡಿಸಿರುವ ಆ ಶುಭ್ರ ಶ್ರೀಯನ್ನು ನೋಡಿ ನನಗನ್ನಿಸುತ್ತದೆ: ದೈವವೇ ಪರ, ಪೌರುಷವೆಲ್ಲವೂ ನಿರರ್ಥಕ.
02043033a ಕೃತೋ ಯತ್ನೋ ಮಯಾ ಪೂರ್ವಂ ವಿನಾಶೇ ತಸ್ಯ ಸೌಬಲ।
02043033c ತಚ್ಚ ಸರ್ವಮತಿಕ್ರಮ್ಯ ಸ ವೃದ್ಧೋಽಪ್ಸ್ವಿವ ಪಂಕಜಂ।।
ಸೌಬಲ! ಹಿಂದೆ ನಾನು ಅವನ ವಿನಾಶಕ್ಕೆ ಪಯತ್ನಿಸಿದೆ. ಆದರೆ ಅವೆಲ್ಲವನ್ನು ಅತಿಕ್ರಮಿಸಿ ಅವನು ನೀರಿನಲ್ಲಿನ ಪಂಕಜದಂತೆ ವೃದ್ಧಿಯಾಗಿದ್ದಾನೆ.
02043034a ತೇನ ದೈವಂ ಪರಂ ಮನ್ಯೇ ಪೌರುಷಂ ತು ನಿರರ್ಥಕಂ।
02043034c ಧಾರ್ತರಾಷ್ಟ್ರಾ ಹಿ ಹೀಯಂತೇ ಪಾರ್ಥಾ ವರ್ಧಂತಿ ನಿತ್ಯಶಃ।।
ಆದರಿಂದ ನನಗನ್ನಿಸುತ್ತದೆ: ದೈವವೇ ಪರ, ಪೌರುಷವು ನಿರರ್ಥಕ. ಧಾರ್ತರಾಷ್ಟ್ರರು ನಿತ್ಯವೂ ಕುಸಿಯುತ್ತಿದ್ದಾರೆ ಮತ್ತು ಪಾರ್ಥರು ವರ್ಧಿಸುತ್ತಿದ್ದಾರೆ.
02043035a ಸೋಽಹಂ ಶ್ರಿಯಂ ಚ ತಾಂ ದೃಷ್ಟ್ವಾ ಸಭಾಂ ತಾಂ ಚ ತಥಾವಿಧಾಂ।
02043035c ರಕ್ಷಿಭಿಶ್ಚಾವಹಾಸಂ ತಂ ಪರಿತಪ್ಯೇ ಯಥಾಗ್ನಿನಾ।।
ಅವರ ಸಂಪತ್ತು, ಸಭೆ, ಮತ್ತು ಅಲ್ಲಿಯ ಕಾವಲುಗಾರರು ಮಾಡಿದ ಅಪಹಾಸ ಇವೆಲ್ಲವೂ ನನ್ನನ್ನು ಅಗ್ನಿಯಂತೆ ಸುಡುತ್ತಿವೆ.
02043036a ಸ ಮಾಮಭ್ಯನುಜಾನೀಹಿ ಮಾತುಲಾದ್ಯ ಸುದುಃಖಿತಂ।
02043036c ಅಮರ್ಷಂ ಚ ಸಮಾವಿಷ್ಟಂ ಧೃತರಾಷ್ಟ್ರೇ ನಿವೇದಯ।।
ಮಾವ! ಇಂದು ಈ ಕಹಿ ದುಃಖವನ್ನು ಅನುಭವಿಸಲು ಬಿಡು ಮತ್ತು ನನ್ನನ್ನು ಸಮಾವೇಶಗೊಂಡಿರುವ ಅಸೂಯೆಯ ಕುರಿತು ಧೃತರಾಷ್ಟ್ರನಲ್ಲಿ ನಿವೇದಿಸು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದುರ್ಯೋಧನಸಂತಾಪೇ ತ್ರಿಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದುರ್ಯೋಧನಸಂತಾಪ ಎನ್ನುವ ನಲವತ್ಮೂರನೆಯ ಅಧ್ಯಾಯವು.
-
ಗೋರಖಪುರದ ಸಂಪುಟದಲ್ಲಿ ದ್ಯೂತಪರ್ವವು ೩೩ ಶ್ಲೋಕಗಳನ್ನುಳ್ಳ ಇನ್ನೊಂದು ಅಧ್ಯಾಯದಿಂದ ಪ್ರಾರಂಭವಾಗುತ್ತದೆ. ಈ ಅಧ್ಯಾಯವನ್ನು ಸಂಪೂರ್ಣವಾಗಿ ಪುಣೆಯ ಪರಿಷ್ಕರಿಸಲ್ಪಟ್ಟ ಸಂಪುಟದಿಂದ ತೆಗೆದುಹಾಕಲಾಗಿದೆ. ಈ ಅಧ್ಯಾಯದಲ್ಲಿ ವ್ಯಾಸನು ಭವಿಷ್ಯವಾಣಿಯನ್ನು ನುಡಿದಿದ್ದುದು, ಯುಧಿಷ್ಠಿರನ ಚಿಂತೆ ಮತ್ತು ಸಮತ್ವಪೂರ್ಣದಲ್ಲಿ ನಡೆದುಕೊಳ್ಳುತ್ತೇನೆ ಎಂದು ಯುಧಿಷ್ಠಿರನು ಪ್ರತಿಜ್ಞೆಮಾಡಿದ ವಿಷಯಗಳಿವೆ. ಈ ಅಧ್ಯಾಯವನ್ನು ಪ್ರತ್ಯೇಕವಾಗಿ ಪರಿಶಿಷ್ಠದಲ್ಲಿ ನೀಡಲಾಗಿದೆ. ↩︎
-
ಆ ಸಭೆಯಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ದುರ್ಯೋಧನನು ಶಕುನಿಯೊಡನೆ ನಿಧಾನವಾಗಿ ಸಭೆಯ ಸರ್ವಸ್ವವನ್ನೂ ನೋಡಿದನು. ↩︎
-
ಗೋರಖಪುರದ ಸಂಪುಟದಲ್ಲಿ ಇದಕ್ಕೂ ಮೊದಲು ಒಂದು ಶ್ಲೋಕವಿದೆ: ತತಃ ಸ್ಥಲೇ ನಿಪತಿತೋ ದುರ್ಮನಾ ವ್ರೀಡಿತೋ ನೃಪಃ। ನಿಃಶ್ವಸನ್ ವಿಮುಖಶ್ಚಾಪಿ ಪರಿಚಕ್ರಾಮ ತಾಂ ಸಭಾಂ।। ಅರ್ಥಾತ್ - ನಂತರ ಆ ನೃಪತಿಯು ಆ ಸ್ಥಳದಲ್ಲಿಯೇ ಬೀಳಲು ನಾಚಿಕೆ ದುಃಖಗಳಿಂದ ಪೀಡಿತನಾಗಿ, ನಿಟ್ಟುಸಿರು ಬಿಡುತ್ತಾ ಸಭಾಭವನದಲ್ಲಿ ಅತ್ತಿಂದಿತ್ತ ತಿರುಗಾಡತೊಡಗಿದನು. ↩︎
-
ಗೋರಖಪುರದ ಸಂಪುಟದಲ್ಲಿ ಭೀಮಸೇನನೂ ನಕ್ಕನೆಂದು ಈ ಶ್ಲೋಕಗಳು ಹೇಳುತ್ತವೆ: “ಜಲೇ ನಿಪತಿತಂ ದೃಷ್ಟ್ವಾ ಭೀಮಸೇನೋ ಮಹಾಬಲಃ। ಜಹಾಸ ಜಹಸುಶ್ಚೈವ ಕಿಂಕರಾಶ್ಚ ಸುಯೋಧನಂ।। ವಾಸಾಂಸಿ ಚ ಶುಭಾನ್ಯಸ್ಮೈ ಪ್ರದ್ದೂ ರಾಜಶಾಸನಾತ್।” ಅರ್ಥಾತ್ ಅವನು ನೀರಿನಲ್ಲಿ ಬಿದ್ದುದನ್ನು ನೋಡಿ ಮಹಾಬಲ ಭೀಮಸೇನನು ನಗಲು ಅಲ್ಲಿದ್ದ ಕಿಂಕರರೂ ಕೂಡ ಸುಯೋಧನನನ್ನು ನೋಡಿ ನಕ್ಕರು, ಮತ್ತು ರಾಜಶಾಸನದಂತೆ ಅವನಿಗೆ ಶುಭವಸ್ತ್ರಗಳನ್ನು ತಂದಿತ್ತರು. ↩︎
-
ಕೃಷ್ಣನು ಪಾಂಡವರಿಗೆ ಸಹಾಯಮಾಡುವ ಹಾಗೆ ತನಗೆ ಸಹಾಯ ಮಾಡುವವರು ಯಾರೂ ಇಲ್ಲ! ↩︎