022 ಜರಾಸಂಧವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ

ಜರಾಸಂಧವಧ ಪರ್ವ

ಅಧ್ಯಾಯ 22

ಸಾರ

ಜರಾಸಂಧನ ವಧೆ (1-10). ಸೆರೆಯಲ್ಲಿದ್ದ ರಾಜರ ಬಿಡುಗಡೆ ಮಾಡಿ ಜರಾಸಂಧನ ರಥವನ್ನು ಓಡಿಸಿದುದು (11-28). ಬಿಡುಗಡೆ ಹೊಂದಿದ ರಾಜರು ಕೃಷ್ಣನನ್ನು ಸತ್ಕರಿಸಿದುದು (29-58).

02022001 ವೈಶಂಪಾಯನ ಉವಾಚ।
02022001a ಭೀಮಸೇನಸ್ತತಃ ಕೃಷ್ಣಮುವಾಚ ಯದುನಂದನಂ।
02022001c ಬುದ್ಧಿಮಾಸ್ಥಾಯ ವಿಪುಲಾಂ ಜರಾಸಂಧಜಿಘಾಂಸಯಾ।।

ವೈಶಂಪಾಯನನು ಹೇಳಿದನು: “ಆಗ ಭೀಮಸೇನನು ಜರಾಸಂಧನನ್ನು ಕೊಲ್ಲುವ ಸಂಪೂರ್ಣ ಮನಸ್ಸುಮಾಡಿ ಯದುನಂದನ ಕೃಷ್ಣನಿಗೆ ಹೇಳಿದನು:

02022002a ನಾಯಂ ಪಾಪೋ ಮಯಾ ಕೃಷ್ಣ ಯುಕ್ತಃ ಸ್ಯಾದನುರೋಧಿತುಂ।
02022002c ಪ್ರಾಣೇನ ಯದುಶಾರ್ದೂಲ ಬದ್ಧವಂಕ್ಷಣವಾಸಸಾ।।

“ಕೃಷ್ಣ! ಯದುಶಾರ್ದೂಲ! ಕಚ್ಚೆ ಕಟ್ಟಿ ನಿಂತಿರುವ ನನ್ನಿಂದ ಈ ಪಾಪಿಯು ಪ್ರಾಣಕ್ಕೆ ಅರ್ಹನಲ್ಲ.”

02022003a ಏವಮುಕ್ತಸ್ತತಃ ಕೃಷ್ಣಃ ಪ್ರತ್ಯುವಾಚ ವೃಕೋದರಂ।
02022003c ತ್ವರಯನ್ಪುರುಷವ್ಯಾಘ್ರೋ ಜರಾಸಂಧವಧೇಪ್ಸಯಾ।।

ಇದನ್ನು ಕೇಳಿದ ಪುರುಷವ್ಯಾಘ್ರ ಕೃಷ್ಣನು ಜರಾಸಂಧನ ವಧೆಯನ್ನು ಬಯಸಿ ವೃಕೋದರನಿಗೆ ತ್ವರೆಮಾಡಲು ಹೇಳಿದನು:

02022004a ಯತ್ತೇ ದೈವಂ ಪರಂ ಸತ್ತ್ವಂ ಯಚ್ಚ ತೇ ಮಾತರಿಶ್ವನಃ।
02022004c ಬಲಂ ಭೀಮ ಜರಾಸಂಧೇ ದರ್ಶಯಾಶು ತದದ್ಯ ನಃ।।

“ಹಾಗಾದರೆ ತಕ್ಷಣವೇ ನೀನು ದೇವತೆಗಳಿಂದ ಪಡೆದಿರುವ ಸತ್ವವನ್ನು ತೋರಿಸು! ಭೀಮ! ಈ ದಿನ ವಾಯುದೇವನ ಬಲವನ್ನು ಜರಾಸಂಧನ ಮೇಲೆ ಪ್ರಯೋಗಿಸಿ ತೋರಿಸು!”

02022005a ಏವಮುಕ್ತಸ್ತದಾ ಭೀಮೋ ಜರಾಸಂಧಮರಿಂದಮಃ।
02022005c ಉತ್ಕ್ಷಿಪ್ಯ ಭ್ರಾಮಯದ್ರಾಜನ್ಬಲವಂತಂ ಮಹಾಬಲಃ।।
02022006a ಭ್ರಾಮಯಿತ್ವಾ ಶತಗುಣಂ ಭುಜಾಭ್ಯಾಂ ಭರತರ್ಷಭ।
02022006c ಬಭಂಜ ಪೃಷ್ಠೇ ಸಂಕ್ಷಿಪ್ಯ ನಿಷ್ಪಿಷ್ಯ ವಿನನಾದ ಚ।।

ರಾಜನ್! ಭರತರ್ಷಭ! ಇದನ್ನು ಕೇಳಿದ ಅರಿಂದಮ ಮಹಾಬಲಿ ಭೀಮನು ಜರಾಸಂಧನನ್ನು ಬಲವಂತವಾಗಿ ಮೇಲಕ್ಕೆತ್ತಿ ತನ್ನ ಭುಜಗಳಿಂದ ನೂರು ಬಾರಿ ಅವನನ್ನು ತಿರುಗಿಸಿ, ತನ್ನ ತೊಡೆಯ ಮೇಲೆ ಬೀಳಿಸಿ, ಅವನ ಬೆನ್ನನ್ನು ಮುರಿದು, ದೇಹವನ್ನು ತುಳಿದು ಗರ್ಜಿಸಿದನು.

02022007a ತಸ್ಯ ನಿಷ್ಪಿಷ್ಯಮಾಣಸ್ಯ ಪಾಂಡವಸ್ಯ ಚ ಗರ್ಜತಃ।
02022007c ಅಭವತ್ತುಮುಲೋ ನಾದಃ ಸರ್ವಪ್ರಾಣಿಭಯಂಕರಃ।।

ಅವನು ಕೆಳಗೆ ಬೀಳಲು ಮತ್ತು ಪಾಂಡವನು ಗರ್ಜಿಸಲು ಸರ್ವಪ್ರಾಣಿಗಳಿಗೂ ಭಯವನ್ನುಂಟುಮಾಡುವ ತುಮುಲವು ಕೇಳಿಬಂದಿತು.

02022008a ವಿತ್ರೇಸುರ್ಮಾಗಧಾಃ ಸರ್ವೇ ಸ್ತ್ರೀಣಾಂ ಗರ್ಭಾಶ್ಚ ಸುಸ್ರುವುಃ।
02022008c ಭೀಮಸೇನಸ್ಯ ನಾದೇನ ಜರಾಸಂಧಸ್ಯ ಚೈವ ಹ।।

ಭೀಮಸೇನ ಜರಾಸಂಧರ ಗರ್ಜನೆಗಳನ್ನು ಕೇಳಿ ಸರ್ವ ಮಾಗಧರೂ ತಲೆತಿರುಗಿ ಬಿದ್ದರು ಮತ್ತು ಗರ್ಭಿಣಿ ಮಹಿಳೆಯರಿಗೆ ಗರ್ಭಪಾತವಾಯಿತು.

02022009a ಕಿಂ ನು ಸ್ವಿದ್ಧಿಮವಾನ್ಭಿನ್ನಃ ಕಿಂ ನು ಸ್ವಿದ್ದೀರ್ಯತೇ ಮಹೀ।
02022009c ಇತಿ ಸ್ಮ ಮಾಗಧಾ ಜಜ್ಞುರ್ಭೀಮಸೇನಸ್ಯ ನಿಸ್ವನಾತ್।।

ಭೀಮಸೇನನ ಗರ್ಜನೆಯನ್ನು ಕೇಳಿದ ಮಾಗಧರು ಹಿಮಾಲಯವೇ ಸೀಳಿಹೋಯಿತೇ ಅಥವಾ ಭೂಮಿಯೇ ಕುಸಿದು ಹೋಯಿತೇ ಎಂದು ಯೋಚಿಸಿದರು.

02022010a ತತೋ ರಾಜಕುಲದ್ವಾರಿ ಪ್ರಸುಪ್ತಮಿವ ತಂ ನೃಪಂ।
02022010c ರಾತ್ರೌ ಪರಾಸುಮುತ್ಸೃಜ್ಯ ನಿಶ್ಚಕ್ರಮುರರಿಂದಮಾಃ।।

ಅನಂತರ ಆ ಅರಿಂದಮರು ನಿದ್ದೆಯಲ್ಲಿರುವಂತೆ ತೋರುತ್ತಿದ್ದ ಮೃತನೃಪತಿಯನ್ನು ರಾಜಕುಲದ್ವಾರದಲ್ಲಿಯೇ ಬಿಟ್ಟು ಕತ್ತಲೆಯಲ್ಲಿ ಹೊರಟುಹೋದರು.

02022011a ಜರಾಸಂಧರಥಂ ಕೃಷ್ಣೋ ಯೋಜಯಿತ್ವಾ ಪತಾಕಿನಂ।
02022011c ಆರೋಪ್ಯ ಭ್ರಾತರೌ ಚೈವ ಮೋಕ್ಷಯಾಮಾಸ ಬಾಂಧವಾನ್।।

ಕೃಷ್ಣನು ಜರಾಸಂಧನ ಪತಾಕಯುಕ್ತ ರಥವನ್ನು ಕಟ್ಟಿ, ಭ್ರಾತೃಗಳಿಗೆ ಅದನ್ನು ಏರಲು ಹೇಳಿ, ಬಾಂಧವರನ್ನು ಬಿಡುಗಡೆಗೊಳಿಸಿದನು.

02022012a ತೇ ವೈ ರತ್ನಭುಜಂ ಕೃಷ್ಣಂ ರತ್ನಾರ್ಹಂ ಪೃಥಿವೀಶ್ವರಾಃ।
02022012c ರಾಜಾನಶ್ಚಕ್ರುರಾಸಾದ್ಯ ಮೋಕ್ಷಿತಾ ಮಹತೋ ಭಯಾತ್।।

ಮಹಾಭಯದಿಂದ ಬಿಡುಗಡೆ ಹೊಂದಿದ ಪೃಥಿವೀಶ್ವರ ರಾಜರು ರತ್ನಭುಜ ಕೃಷ್ಣನಿಗೆ ರತ್ನಗಳನ್ನಿತ್ತು ಸತ್ಕರಿಸಿದರು.

02022013a ಅಕ್ಷತಃ ಶಸ್ತ್ರಸಂಪನ್ನೋ ಜಿತಾರಿಃ ಸಹ ರಾಜಭಿಃ।
02022013c ರಥಮಾಸ್ಥಾಯ ತಂ ದಿವ್ಯಂ ನಿರ್ಜಗಾಮ ಗಿರಿವ್ರಜಾತ್।।

ಆ ಅಕ್ಷತ, ಶಸ್ತ್ರಸಂಪನ್ನ ಜಿತಾರಿಯು ದಿವ್ಯರಥವನ್ನೇರಿ ರಾಜರೊಡನೆ ಗಿರಿವ್ರಜದಿಂದ ನಿರ್ಗಮಿಸಿದನು.

02022014a ಯಃ ಸ ಸೋದರ್ಯವಾನ್ನಾಮ ದ್ವಿಯೋಧಃ ಕೃಷ್ಣಸಾರಥಿಃ।
02022014c ಅಭ್ಯಾಸಘಾತೀ ಸಂದೃಶ್ಯೋ ದುರ್ಜಯಃ ಸರ್ವರಾಜಭಿಃ।।

ಇಬ್ಬರು ಯೋಧರು ಮತ್ತು ಕೃಷ್ಣನು ಸಾರಥಿಯಾಗಿರುವ, ಕೊಲ್ಲುವ ಅಭ್ಯಾಸವನ್ನಿಟ್ಟುಕೊಂಡಿರುವ, ಸರ್ವ ರಾಜರಿಗೂ ದುರ್ಜಯವಾದ ಆ ರಥವು ತನಗೆ ತಕ್ಕವರನ್ನು ಪಡೆದುಕೊಂಡಂತೆ ಕಂಡುಬಂದಿತು.

02022015a ಭೀಮಾರ್ಜುನಾಭ್ಯಾಂ ಯೋಧಾಭ್ಯಾಮಾಸ್ಥಿತಃ ಕೃಷ್ಣಸಾರಥಿಃ।
02022015c ಶುಶುಭೇ ರಥವರ್ಯೋಽಸೌ ದುರ್ಜಯಃ ಸರ್ವಧನ್ವಿಭಿಃ।।

ಭೀಮಾರ್ಜುನರು ಕುಳಿತಿರುವ, ಕೃಷ್ಣನ ಸಾರಥ್ಯದಲ್ಲಿರುವ, ಸರ್ವ ಧನ್ವಿಗಳಿಗೂ ದುರ್ಜಯವಾದ ಆ ರಥವು ಸುಂದರವಾಗಿ ಹೊಳೆಯುತ್ತಿತ್ತು.

02022016a ಶಕ್ರವಿಷ್ಣೂ ಹಿ ಸಂಗ್ರಾಮೇ ಚೇರತುಸ್ತಾರಕಾಮಯೇ।
02022016c ರಥೇನ ತೇನ ತಂ ಕೃಷ್ಣ ಉಪಾರುಹ್ಯ ಯಯೌ ತದಾ।।

ತಾರಕನೊಡನೆಯ ಸಂಗ್ರಾಮದ ಸಮಯದಲ್ಲಿ ಶಕ್ರ ಮತ್ತು ವಿಷ್ಣು ಏರಿ ಹೋಗುತ್ತಿದ್ದ ರಥವನ್ನೇ1 ಕೃಷ್ಣನು ಏರಿ ಹೊರಟನು.

02022017a ತಪ್ತಚಾಮೀಕರಾಭೇಣ ಕಿಂಕಿಣೀಜಾಲಮಾಲಿನಾ।
02022017c ಮೇಘನಿರ್ಘೋಷನಾದೇನ ಜೈತ್ರೇಣಾಮಿತ್ರಘಾತಿನಾ।।
02022018a ಯೇನ ಶಕ್ರೋ ದಾನವಾನಾಂ ಜಘಾನ ನವತೀರ್ನವ।
02022018c ತಂ ಪ್ರಾಪ್ಯ ಸಮಹೃಷ್ಯಂತ ರಥಂ ತೇ ಪುರುಷರ್ಷಭಾಃ।।

ಯಾವ ರಥವನ್ನೇರಿ ಶಕ್ರನು ತೊಂಭತ್ತೊಂಭತ್ತು ದಾನವರನ್ನು ಸಂಹರಿಸಿದ್ದನೋ ಆ ಹದಮಾಡಿದ ಚಿನ್ನದಂತೆ ಹೊಳೆಯುತ್ತಿರುವ, ಕಿಂಕಿಣೀಜಾಲ ಮಾಲೆಗಳಿಂದ ಅಲಂಕೃತವಾದ, ಮಳೆಗಾಲದ ಮೋಡಗಳಂತೆ ಶಬ್ಧಮಾಡುತ್ತಿದ್ದ, ವಿಜಯೀ, ಶತ್ರುಘಾತಿ ರಥವನ್ನು ಪಡೆದ ಪುರುಶರ್ಷಭರು ಅತ್ಯಂತ ಸಂತೋಷಗೊಂಡರು.

02022019a ತತಃ ಕೃಷ್ಣಂ ಮಹಾಬಾಹುಂ ಭ್ರಾತೃಭ್ಯಾಂ ಸಹಿತಂ ತದಾ।
02022019c ರಥಸ್ಥಂ ಮಾಗಧಾ ದೃಷ್ಟ್ವಾ ಸಮಪದ್ಯಂತ ವಿಸ್ಮಿತಾಃ।।

ಭ್ರಾತೃಗಳ ಸಹಿತ ಮಹಾಬಾಹು ಕೃಷ್ಣನನ್ನು ಆ ರಥದಲ್ಲಿ ಕುಳಿತಿದ್ದುದನ್ನು ನೋಡಿದ ಮಾಗಧರು ವಿಸ್ಮಿತರಾದರು.

02022020a ಹಯೈರ್ದಿವ್ಯೈಃ ಸಮಾಯುಕ್ತೋ ರಥೋ ವಾಯುಸಮೋ ಜವೇ।
02022020c ಅಧಿಷ್ಠಿತಃ ಸ ಶುಶುಭೇ ಕೃಷ್ಣೇನಾತೀವ ಭಾರತ।।

ಭಾರತ! ದಿವ್ಯಾಶ್ವಗಳನ್ನು ಹೊಂದಿದ್ದ, ವಾಯುಸಮ ವೇಗವುಳ್ಳ ಆ ರಥವು ಕೃಷ್ಣನು ಏರುತ್ತಿದ್ದಂತೆ ಪ್ರಕಾಶಗೊಂಡು ಇನ್ನೂ ಕಂಗೊಳಿಸಿತು.

02022021a ಅಸಂಗೀ ದೇವವಿಹಿತಸ್ತಸ್ಮಿನ್ರಥವರೇ ಧ್ವಜಃ।
02022021c ಯೋಜನಾದ್ದದೃಶೇ ಶ್ರೀಮಾನಿಂದ್ರಾಯುಧಸಮಪ್ರಭಃ।।

ಆ ರಥದ ಮೇಲೆ ಒಂದು ಯೋಜನೆಯವರೆಗೂ ಕಾಣಿಸುವಂತೆ ಶ್ರೀಮಾನ, ಇಂದ್ರಾಯುಧದಂತೆ ಹೊಳೆಯುತ್ತಿರುವ, ದೇವವಿಹಿತ ಉತ್ತಮ ಧ್ವಜವು ಹಾರುತ್ತಿತ್ತು.

02022022a ಚಿಂತಯಾಮಾಸ ಕೃಷ್ಣೋಽಥ ಗರುತ್ಮಂತಂ ಸ ಚಾಭ್ಯಯಾತ್।
02022022c ಕ್ಷಣೇ ತಸ್ಮಿನ್ಸ ತೇನಾಸೀಚ್ಚೈತ್ಯಯೂಪ ಇವೋಚ್ಛ್ರಿತಃ।।

ಆಗ ಕೃಷ್ಣನು ಗುರುತ್ಮಂತನನ್ನು ಸ್ಮರಿಸಿದನು ಮತ್ತು ಕೂಡಲೆ ಅವನು ಬಂದನು. ಅವನೊಂದಿಗೆ ಪತಾಕೆಯು ದೇವಾಲಯಗಳಲ್ಲಿನ ಧ್ವಜಸ್ಥಂಭದಂತೆ ಎತ್ತರಕ್ಕೆ ಏರಿತು.

02022023a ವ್ಯಾದಿತಾಸ್ಯೈರ್ಮಹಾನಾದೈಃ ಸಹ ಭೂತೈರ್ಧ್ವಜಾಲಯೈಃ।
02022023c ತಸ್ಥೌ ರಥವರೇ ತಸ್ಮಿನ್ಗರುತ್ಮಾನ್ಪನ್ನಗಾಶನಃ।।

ಧ್ವಜದಲ್ಲಿದ್ದ ಇತರ ಭೂತಗಳು ಬಾಯಿತೆರೆದು ಮಹಾನಾದ ಮಾಡುತ್ತಿರಲು ಪನ್ನಗಾಶನ ಗುರುತ್ಮಂತನು ಆ ರಥದ ಮೇಲೆ ಏರಿದನು.

02022024a ದುರ್ನಿರೀಕ್ಷ್ಯೋ ಹಿ ಭೂತಾನಾಂ ತೇಜಸಾಭ್ಯಧಿಕಂ ಬಭೌ।
02022024c ಆದಿತ್ಯ ಇವ ಮಧ್ಯಾಹ್ನೇ ಸಹಸ್ರಕಿರಣಾವೃತಃ।।

ಭೂತಗಳ ಕಣ್ಣುಕುಕ್ಕಿಸುವಂತೆ ಅವನು ಅಧಿಕ ತೇಜಸ್ಸಿನಿಂದ ಮಧ್ಯಾಹ್ನದ ಭಾಸ್ಕರನಂತೆ ಸಹಸ್ರಕಿರಣಗಳಿಂದ ಆವೃತನಾಗಿ ಬೆಳಗಿದನು.

02022025a ನ ಸ ಸಜ್ಜತಿ ವೃಕ್ಷೇಷು ಶಸ್ತ್ರೈಶ್ಚಾಪಿ ನ ರಿಷ್ಯತೇ।
02022025c ದಿವ್ಯೋ ಧ್ವಜವರೋ ರಾಜನ್ದೃಶ್ಯತೇ ದೇವಮಾನುಷೈಃ।।

ರಾಜನ್! ಆ ಧ್ವಜವು ಎಂದೂ ವೃಕ್ಷಗಳಿಗೆ ಸಿಲುಕಿರಲಿಲ್ಲ, ಯಾವುದೇ ಅಸ್ತ್ರಗಳಿಂದ ಘಾಯಗೊಂಡಿರಲಿಲ್ಲ ಮತ್ತು ಆ ದಿವ್ಯ ಧ್ವಜವು ದೇವತೆಗಳಿಗೆ ಮತ್ತು ಮನುಷ್ಯರಿಗೆ ಕಾಣುತ್ತಿತ್ತು.

02022026a ತಮಾಸ್ಥಾಯ ರಥಂ ದಿವ್ಯಂ ಪರ್ಜನ್ಯಸಮನಿಸ್ವನಂ।
02022026c ನಿರ್ಯಯೌ ಪುರುಷವ್ಯಾಘ್ರಃ ಪಾಂಡವಾಭ್ಯಾಂ ಸಹಾಚ್ಯುತಃ।।

ಮಳೆಗಾಲದ ಮೋಡದ ಗುಡುಗಿನಂತೆ ಶಬ್ಧಮಾಡುವ ಆ ದಿವ್ಯ ರಥವನ್ನೇರಿ ಪುರುಷವ್ಯಾಘ್ರ ಅಚ್ಯುತನು ಪಾಂಡವರಿಬ್ಬರನ್ನೊಡಗೂಡಿ ಹೊರಟನು.

02022027a ಯಂ ಲೇಭೇ ವಾಸವಾದ್ರಾಜಾ ವಸುಸ್ತಸ್ಮಾದ್ಬೃಹದ್ರಥಃ।
02022027c ಬೃಹದ್ರಥಾತ್ಕ್ರಮೇಣೈವ ಪ್ರಾಪ್ತೋ ಬಾರ್ಹದ್ರಥಂ ನೃಪಂ।।

ಆ ರಥವನ್ನು ರಾಜ ವಸುವು2 ವಾಸವನಿಂದ ಪಡೆದಿದ್ದನು ಮತ್ತು ಬೃಹದ್ರಥ3ನು ವಸುವಿನಿಂದ ಪಡೆದನು. ಕ್ರಮೇಣವಾಗಿ ಬೃಹದ್ರಥನಿಂದ ನೃಪ ಬಾರ್ಹದ್ರಥನು ಪಡೆದನು.

02022028a ಸ ನಿರ್ಯಯೌ ಮಹಾಬಾಹುಃ ಪುಂಡರೀಕೇಕ್ಷಣಸ್ತತಃ।
02022028c ಗಿರಿವ್ರಜಾದ್ಬಹಿಸ್ತಸ್ಥೌ ಸಮೇ ದೇಶೇ ಮಹಾಯಶಾಃ।।

ಮಹಾಬಾಹು ಪುಂಡರೀಕಾಕ್ಷನು ಗಿರಿವ್ರಜದಿಂದ ಹೊರಟ ನಂತರ ಆ ಮಹಾಯಶರು ಹೊರಗಡೆ ಒಂದು ಸಮ ಪ್ರದೇಶದಲ್ಲಿ ರಥವನ್ನು ನಿಲ್ಲಿಸಿದರು.

02022029a ತತ್ರೈನಂ ನಾಗರಾಃ ಸರ್ವೇ ಸತ್ಕಾರೇಣಾಭ್ಯಯುಸ್ತದಾ।
02022029c ಬ್ರಾಹ್ಮಣಪ್ರಮುಖಾ ರಾಜನ್ವಿಧಿದೃಷ್ಟೇನ ಕರ್ಮಣಾ।।

ರಾಜನ್! ಅಲ್ಲಿ ಸರ್ವ ನಾಗರೀಕರೂ ಬ್ರಾಹ್ಮಣರನ್ನು ಮುಂದಿಟ್ಟುಕೊಂಡು ವಿಧಿವತ್ತಾದ ಕರ್ಮಗಳಿಂದ ಅವರನ್ನು ಸತ್ಕರಿಸಿದರು.

02022030a ಬಂಧನಾದ್ವಿಪ್ರಮುಕ್ತಾಶ್ಚ ರಾಜಾನೋ ಮಧುಸೂದನಂ।
02022030c ಪೂಜಯಾಮಾಸುರೂಚುಶ್ಚ ಸಾಂತ್ವಪೂರ್ವಮಿದಂ ವಚಃ।।

ಬಂಧನದಿಂದ ಮುಕ್ತರಾದ ರಾಜರು ಮಧುಸೂದನನನ್ನು ಸಾಂತ್ವಪೂರ್ವ ವಚನಗಳಿಂದ ಪೂಜಿಸಿದರು.

02022031a ನೈತಚ್ಚಿತ್ರಂ ಮಹಾಬಾಹೋ ತ್ವಯಿ ದೇವಕಿನಂದನ।
02022031c ಭೀಮಾರ್ಜುನಬಲೋಪೇತೇ ಧರ್ಮಸ್ಯ ಪರಿಪಾಲನಂ।।

“ದೇವಕಿನಂದನ! ಮಹಾಬಾಹು! ಭೀಮಾರ್ಜುನರ ಬಲದಿಂದ ಕೂಡಿ ಧರ್ಮವನ್ನು ಪರಿಪಾಲಿಸಿದ್ದುದು ಮಹಾ ಅದ್ಭುತವೇನೂ ಅಲ್ಲ.

02022032a ಜರಾಸಂಧಹ್ರದೇ ಘೋರೇ ದುಃಖಪಂಕೇ ನಿಮಜ್ಜತಾಂ।
02022032c ರಾಜ್ಞಾಂ ಸಮಭ್ಯುದ್ಧರಣಂ ಯದಿದಂ ಕೃತಮದ್ಯ ತೇ।।
02022033a ವಿಷ್ಣೋ ಸಮವಸನ್ನಾನಾಂ ಗಿರಿದುರ್ಗೇ ಸುದಾರುಣೇ।
02022033c ದಿಷ್ಟ್ಯಾ ಮೋಕ್ಷಾದ್ಯಶೋ ದೀಪ್ತಮಾಪ್ತಂ ತೇ ಪುರುಷೋತ್ತಮ।।

ವಿಷ್ಣು! ಪುರುಷೋತ್ತಮ! ಜರಾಸಂಧನ ಕೆಟ್ಟ ಘೋರ ದುಃಖದ ಮಡುವಿನಲ್ಲಿ ಮುಳುಗಿದ್ದ, ದಾರುಣ ಗಿರಿದುರ್ಗಗಳ ಕೋಟೆಯೊಳಗೆ ಕೊಳೆಯುತ್ತಿದ್ದ ರಾಜರನ್ನು ಇಂದು ಉದ್ಧರಿಸಿ ನೀನು ಬೆಳಗುತ್ತಿದ್ದೀಯೆ.

02022034a ಕಿಂ ಕುರ್ಮಃ ಪುರುಷವ್ಯಾಘ್ರ ಬ್ರವೀಹಿ ಪುರುಷರ್ಷಭ।
02022034c ಕೃತಮಿತ್ಯೇವ ತಜ್ಜ್ಞೇಯಂ ನೃಪೈರ್ಯದ್ಯಪಿ ದುಷ್ಕರಂ।।

ಪುರುಷವ್ಯಾಘ್ರ! ಪುರುಷರ್ಷಭ! ನಾವು ಏನು ಮಾಡಬೇಕು ಹೇಳು. ನೃಪರಿಗೂ ದುಷ್ಕರವೆನಿಸಿದ್ದುದನ್ನು ಮಾಡಿಕೊಡುತ್ತೇವೆ ಎಂದು ತಿಳಿ.”

02022035a ತಾನುವಾಚ ಹೃಷೀಕೇಶಃ ಸಮಾಶ್ವಾಸ್ಯ ಮಹಾಮನಾಃ।
02022035c ಯುಧಿಷ್ಠಿರೋ ರಾಜಸೂಯಂ ಕ್ರತುಮಾಹರ್ತುಮಿಚ್ಛತಿ।।

ಆ ಆಶ್ವಾಸನೆಗೆ ಮಹಾಮನ ಹೃಷೀಕೇಶನು ಉತ್ತರಿಸಿದನು: “ಯುಧಿಷ್ಠಿರನು ಮಹಾಕ್ರತು ರಾಜಸೂಯವನ್ನು ಮಾಡಲಿಚ್ಛಿಸಿದ್ದಾನೆ.

02022036a ತಸ್ಯ ಧರ್ಮಪ್ರವೃತ್ತಸ್ಯ ಪಾರ್ಥಿವತ್ವಂ ಚಿಕೀರ್ಷತಃ।
02022036c ಸರ್ವೈರ್ಭವದ್ಭಿರ್ಯಜ್ಞಾರ್ಥೇ ಸಾಹಾಯ್ಯಂ ದೀಯತಾಮಿತಿ।।

ಪಾರ್ಥಿವತ್ವವನ್ನು ಬಯಸುತ್ತಿರುವ ಆ ಧರ್ಮಪ್ರವೃತ್ತನ ಯಜ್ಞಕ್ಕೆ ನೀವೆಲ್ಲರೂ ಸಹಾಯವನ್ನು ನೀಡಬೇಕು.”

02022037a ತತಃ ಪ್ರತೀತಮನಸಸ್ತೇ ನೃಪಾ ಭರತರ್ಷಭ।
02022037c ತಥೇತ್ಯೇವಾಬ್ರುವನ್ಸರ್ವೇ ಪ್ರತಿಜಜ್ಞುಶ್ಚ ತಾಂ ಗಿರಂ।।

ಭರತರ್ಷಭ! ಆಗ ಸರ್ವ ನೃಪರೂ ಸಂತೋಷದಿಂದ “ಹಾಗೆಯೇ ಆಗಲಿ!” ಎಂದು ಮಾತುಕೊಟ್ಟರು.

02022038a ರತ್ನಭಾಜಂ ಚ ದಾಶಾರ್ಹಂ ಚಕ್ರುಸ್ತೇ ಪೃಥಿವೀಶ್ವರಾಃ।
02022038c ಕೃಚ್ಛ್ರಾಜ್ಜಗ್ರಾಹ ಗೋವಿಂದಸ್ತೇಷಾಂ ತದನುಕಂಪಯಾ।।

ಪೃಥಿವೀಶ್ವರರು ತಮ್ಮ ರತ್ನಗಳನ್ನು ದಾಶಾರ್ಹನೊಂದಿಗೆ ಹಂಚಿಕೊಳ್ಳಲು, ಗೋವಿಂದನು ಅವರ ಮೇಲಿನ ಅನುಕಂಪದಿಂದ ಇಷ್ಟವಿಲ್ಲದಿದ್ದರೂ ಅವುಗಳನ್ನು ಸ್ವೀಕರಿಸಿದನು.

02022039a ಜರಾಸಂಧಾತ್ಮಜಶ್ಚೈವ ಸಹದೇವೋ ಮಹಾರಥಃ।
02022039c ನಿರ್ಯಯೌ ಸಜನಾಮಾತ್ಯಃ ಪುರಸ್ಕೃತ್ಯ ಪುರೋಹಿತಂ।।

ಜರಾಸಂಧನ ಮಗ ಮಹಾರಥಿ ಸಹದೇವನು ಪುರೋಹಿತನನ್ನು ಮುಂದಿಟ್ಟುಕೊಂಡು ಅಮಾತ್ಯರು ಮತ್ತು ತನ್ನವರೊಂದಿಗೆ ಹೊರಬಂದನು.

02022040a ಸ ನೀಚೈಃ ಪ್ರಶ್ರಿತೋ ಭೂತ್ವಾ ಬಹುರತ್ನಪುರೋಗಮಃ।
02022040c ಸಹದೇವೋ ನೃಣಾಂ ದೇವಂ ವಾಸುದೇವಮುಪಸ್ಥಿತಃ।।

ಸಹದೇವನು ಮನುಷ್ಯರ ದೇವ ವಾಸುದೇವನ ಮುಂದೆ ಬಹುರತ್ನಗಳನ್ನು ಇಟ್ಟು ತಲೆತಗ್ಗಿಸಿ ನಿಂತನು.

02022041a ಭಯಾರ್ತಾಯತತಸ್ತಸ್ಮೈ ಕೃಷ್ಣೋ ದತ್ತ್ವಾಭಯಂ ತದಾ।
02022041c ಅಭ್ಯಷಿಂಚತ ತತ್ರೈವ ಜರಾಸಂಧಾತ್ಮಜಂ ತದಾ।।

ಆಗ ಭಯಗ್ರಸ್ತನಾದ ಅವನಿಗೆ ಕೃಷ್ಣನು ಅಭಯವನ್ನಿತ್ತನು ಮತ್ತು ಜರಾಸಂಧನ ಮಗನನ್ನು ಅಲ್ಲಿಯೇ ಆಗಲೇ ಅಭಿಷೇಕಿಸಿದನು.

02022042a ಗತ್ವೈಕತ್ವಂ ಚ ಕೃಷ್ಣೇನ ಪಾರ್ಥಾಭ್ಯಾಂ ಚೈವ ಸತ್ಕೃತಃ।
02022042c ವಿವೇಶ ರಾಜಾ ಮತಿಮಾನ್ಪುನರ್ಬಾರ್ಹದ್ರಥಂ ಪುರಂ।।

ಕೃಷ್ಣನೊಂದಿಗೆ ಸೇರಿ, ಪಾರ್ಥರಿಬ್ಬರಿಂದಲೂ ಸತ್ಕೃತನಾದ ಮತಿವಂತ ರಾಜನು ಪುನಃ ಬಾರ್ಹದ್ರಥನ ಪುರವನ್ನು ಪ್ರವೇಶಿಸಿದನು.

02022043a ಕೃಷ್ಣಸ್ತು ಸಹ ಪಾರ್ಥಾಭ್ಯಾಂ ಶ್ರಿಯಾ ಪರಮಯಾ ಜ್ವಲನ್।
02022043c ರತ್ನಾನ್ಯಾದಾಯ ಭೂರೀಣಿ ಪ್ರಯಯೌ ಪುಷ್ಕರೇಕ್ಷಣಃ।।

ಪುಷ್ಕರೇಕ್ಷಣ ಕೃಷ್ಣನಾದರೂ ಪಾರ್ಥರಿಬ್ಬರೊಡಗೂಡಿ, ಪರಮ ಸಂಪತ್ತನ್ನು ಭೂರಿ ರತ್ನಗಳನ್ನೂ ತೆಗೆದುಕೊಂಡು ಪರಮ ತೇಜಸ್ಸಿನಿಂದ ಹೊರಟನು.

02022044a ಇಂದ್ರಪ್ರಸ್ಥಮುಪಾಗಮ್ಯ ಪಾಂಡವಾಭ್ಯಾಂ ಸಹಾಚ್ಯುತಃ।
02022044c ಸಮೇತ್ಯ ಧರ್ಮರಾಜಾನಂ ಪ್ರೀಯಮಾಣೋಽಭ್ಯಭಾಷತ।।

ಸೆರೆಯಿಂದ ಬಿಡುಗಡೆ ಹೊಂದಿದ್ದ ರಾಜರು ಮತ್ತು ಪಾಂಡವರಿಬ್ಬರೊಡನೆ ಅಚ್ಯುತನು ಇಂದ್ರಪ್ರಸ್ಥವನ್ನು ತಲುಪಿ ಧರ್ಮರಾಜನನ್ನು ಭೇಟಿಯಾಗಿ ಸಂತೋಷದಿಂದ ಹೇಳಿದನು:

02022045a ದಿಷ್ಟ್ಯಾ ಭೀಮೇನ ಬಲವಾಂ ಜರಾಸಂಧೋ ನಿಪಾತಿತಃ।
02022045c ರಾಜಾನೋ ಮೋಕ್ಷಿತಾಶ್ಚೇಮೇ ಬಂಧನಾನ್ನೃಪಸತ್ತಮ।।

“ನೃಪಸತ್ತಮ! ಅದೃಷ್ಟವಶಾತ್ ಬಲವಾನ್ ಭೀಮನು ಜರಾಸಂಧನನ್ನು ಕೆಳಗುರುಳಿಸಿ ಬಂಧನದಲ್ಲಿದ್ದ ರಾಜರನ್ನು ವಿಮುಕ್ತಿಗೊಳಿಸಿದನು.

02022046a ದಿಷ್ಟ್ಯಾ ಕುಶಲಿನೌ ಚೇಮೌ ಭೀಮಸೇನಧನಂಜಯೌ।
02022046c ಪುನಃ ಸ್ವನಗರಂ ಪ್ರಾಪ್ತಾವಕ್ಷತಾವಿತಿ ಭಾರತ।।

ಭಾರತ! ಅದೃಷ್ಟವಶಾತ್ ಭೀಮಸೇನಧನಂಜಯರಿಬ್ಬರೂ ಕುಶಲವಾಗಿ ಪುನಃ ತಮ್ಮ ನಗರಕ್ಕೆ ಹಿಂದಿರುಗಿದ್ದಾರೆ!”

02022047a ತತೋ ಯುಧಿಷ್ಠಿರಃ ಕೃಷ್ಣಂ ಪೂಜಯಿತ್ವಾ ಯಥಾರ್ಹತಃ।
02022047c ಭೀಮಸೇನಾರ್ಜುನೌ ಚೈವ ಪ್ರಹೃಷ್ಟಃ ಪರಿಷಸ್ವಜೇ।।

ಯುಧಿಷ್ಠಿರನು ಕೃಷ್ಣನನ್ನು ಯಥಾರ್ಹ ಪೂಜಿಸಿದನು ಮತ್ತು ಸಂತೋಷದಿಂದ ಭೀಮಸೇನ ಅರ್ಜುನರನ್ನು ಬಿಗಿದಪ್ಪಿದನು.

02022048a ತತಃ ಕ್ಷೀಣೇ ಜರಾಸಂಧೇ ಭ್ರಾತೃಭ್ಯಾಂ ವಿಹಿತಂ ಜಯಂ।
02022048c ಅಜಾತಶತ್ರುರಾಸಾದ್ಯ ಮುಮುದೇ ಭ್ರಾತೃಭಿಃ ಸಹ।।

ನಂತರ ಜರಾಸಂಧನನ್ನು ಸೋಲಿಸುವುದರಲ್ಲಿ ಸಹೋದರರು ಪಡೆದ ಜಯವನ್ನು ಭ್ರಾತೃಗಳೊಂದಿಗೆ ಅಜಾತಶತ್ರುವು ಆನಂದಿಸಿದನು.

02022049a ಯಥಾವಯಃ ಸಮಾಗಮ್ಯ ರಾಜಭಿಸ್ತೈಶ್ಚ ಪಾಂಡವಃ।
02022049c ಸತ್ಕೃತ್ಯ ಪೂಜಯಿತ್ವಾ ಚ ವಿಸಸರ್ಜ ನರಾಧಿಪಾನ್।।

ಪಾಂಡವನು ಸೇರಿದ್ದ ರಾಜ ನರಾಧಿಪರನ್ನು ವಯಸ್ಸಿಗೆ ತಕ್ಕಂತೆ ಪೂಜಿಸಿ ಸತ್ಕರಿಸಿ ಬೀಳ್ಕೊಂಡನು.

02022050a ಯುಧಿಷ್ಠಿರಾಭ್ಯನುಜ್ಞಾತಾಸ್ತೇ ನೃಪಾ ಹೃಷ್ಟಮಾನಸಾಃ।
02022050c ಜಗ್ಮುಃ ಸ್ವದೇಶಾಂಸ್ತ್ವರಿತಾ ಯಾನೈರುಚ್ಚಾವಚೈಸ್ತತಃ।।

ಯುಧಿಷ್ಠಿರನಿಂದ ಅನುಜ್ಞೆಯನ್ನು ಪಡೆದ ಆ ನೃಪರು ಸಂತೋಷಗೊಂಡು ಅವರವರ ರಥಗಳಲ್ಲಿ ತಮ್ಮ ದೇಶಗಳಿಗೆ ತ್ವರೆಮಾಡಿ ಹೊರಟರು.

02022051a ಏವಂ ಪುರುಷಶಾರ್ದೂಲೋ ಮಹಾಬುದ್ಧಿರ್ಜನಾರ್ದನಃ।
02022051c ಪಾಂಡವೈರ್ಘಾತಯಾಮಾಸ ಜರಾಸಂಧಮರಿಂ ತದಾ।।
02022052a ಘಾತಯಿತ್ವಾ ಜರಾಸಂಧಂ ಬುದ್ಧಿಪೂರ್ವಮರಿಂದಮಃ।
02022052c ಧರ್ಮರಾಜಮನುಜ್ಞಾಪ್ಯ ಪೃಥಾಂ ಕೃಷ್ಣಾಂ ಚ ಭಾರತ।।
02022053a ಸುಭದ್ರಾಂ ಭೀಮಸೇನಂ ಚ ಫಲ್ಗುನಂ ಯಮಜೌ ತಥಾ।
02022053c ಧೌಮ್ಯಮಾಮಂತ್ರಯಿತ್ವಾ ಚ ಪ್ರಯಯೌ ಸ್ವಾಂ ಪುರೀಂ ಪ್ರತಿ।।

ಹೀಗೆ ಪುರುಷಶಾರ್ದೂಲ ಮಹಾಬುದ್ಧಿ ಜನಾರ್ದನನು ಅರಿ ಜರಾಸಂಧನನ್ನು ಪಾಂಡವರ ಮೂಲಕ ಸಂಹರಿಸಿದನು. ಭಾರತ! ಜರಾಸಂಧನನ್ನು ಸಂಹರಿಸಿದ ಆ ಬುದ್ಧಿಪೂರ್ವ ಅರಿಂದಮನು ಧರ್ಮರಾಜನ, ಪೃಥಾ, ಕೃಷ್ಣಾ, ಸುಭದ್ರಾ, ಭೀಮಸೇನ, ಫಲ್ಗುನ ಮತ್ತು ಯಮಳರ ಅನುಜ್ಞೆಯನ್ನು ಪಡೆದು, ಧೌಮ್ಯನಿಂದ ಬೀಳ್ಕೊಂಡು ತನ್ನ ಪುರದ ಕಡೆ ಹೊರಟನು.

02022054a ತೇನೈವ ರಥಮುಖ್ಯೇನ ತರುಣಾದಿತ್ಯವರ್ಚಸಾ।
02022054c ಧರ್ಮರಾಜವಿಸೃಷ್ಟೇನ ದಿವ್ಯೇನಾನಾದಯನ್ ದಿಶಃ।।

ಧರ್ಮರಾಜನು ಉಡುಗೊರೆಯನ್ನಾಗಿ ಕೊಟ್ಟಿದ್ದ, ದಿಶಗಳಲ್ಲಿ ದಿವ್ಯನಾದಗಳಿಂದ ತುಂಬುವ ಆ ಪ್ರಮುಖ ರಥದಲ್ಲಿ ಉದಯವಾಗುತ್ತಿರುವ ಸೂರ್ಯನ ತೇಜಸ್ಸಿನಿಂದ ಕುಳಿತುಕೊಂಡನು.

02022055a ತತೋ ಯುಧಿಷ್ಠಿರಮುಖಾಃ ಪಾಂಡವಾ ಭರತರ್ಷಭ।
02022055c ಪ್ರದಕ್ಷಿಣಮಕುರ್ವಂತ ಕೃಷ್ಣಮಕ್ಲಿಷ್ಟಕಾರಿಣಂ।।

ಭರತರ್ಷಭ! ನಂತರ ಯುಧಿಷ್ಠಿರನನ್ನು ಮುಂದಿಟ್ಟುಕೊಂಡು ಪಾಂಡವರು ಅಕ್ಲಿಷ್ಟಕಾರಿಣಿ ಕೃಷ್ಣನನ್ನು ಪ್ರದಕ್ಷಿಣೆಮಾಡಿದರು.

02022056a ತತೋ ಗತೇ ಭಗವತಿ ಕೃಷ್ಣೇ ದೇವಕಿನಂದನೇ।
02022056c ಜಯಂ ಲಬ್ಧ್ವಾ ಸುವಿಪುಲಂ ರಾಜ್ಞಾಮಭಯದಾಸ್ತದಾ।।
02022057a ಸಂವರ್ಧಿತೌಜಸೋ ಭೂಯಃ ಕರ್ಮಣಾ ತೇನ ಭಾರತ।
02022057c ದ್ರೌಪದ್ಯಾಃ ಪಾಂಡವಾ ರಾಜನ್ ಪರಾಂ ಪ್ರೀತಿಮವರ್ಧಯನ್।।

ಭಾರತ! ರಾಜನ್! ದೇವಕಿನಂದನ ಭಗವಾನ್ ಕೃಷ್ಣನು ಹೋದನಂತರ, ವಿಪುಲ ಜಯವನ್ನು ಪಡೆದ, ರಾಜರಿಗೆ ಅಭಯವನ್ನಿತ್ತು ತಮ್ಮ ಕರ್ಮಗಳಿಂದ ತೇಜಸ್ಸನ್ನು ವೃದ್ಧಿಗೊಳಿಸಿಕೊಂಡ ಪಾಂಡವರು ದ್ರೌಪದಿಯೊಡನೆ ಪರಮ ಪ್ರೀತಿಯಿಂದ ವರ್ಧಿಸಿದರು.

02022058a ತಸ್ಮಿನ್ ಕಾಲೇ ತು ಯದ್ಯುಕ್ತಂ ಧರ್ಮಕಾಮಾರ್ಥಸಂಹಿತಂ।
02022058c ತದ್ರಾಜಾ ಧರ್ಮತಶ್ಚಕ್ರೇ ರಾಜ್ಯಪಾಲನಕೀರ್ತಿಮಾನ್।।

ರಾಜ್ಯಪಾಲನೆಗೆ ಕೀರ್ತಿವಂತನಾದ ಆ ರಾಜನು ಆ ಸಮಯದಲ್ಲಿ ಧರ್ಮಕಾಮಾರ್ಥಕ್ಕನುಗುಣ ಕಾರ್ಯಗಳಲ್ಲಿ ನಿರತನಾದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಜರಾಸಂಧವಧಪರ್ವಣಿ ಜರಾಸಂಧವಧೇ ದ್ವಾವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಜರಾಸಂಧವಧಪರ್ವದಲ್ಲಿ ಜರಾಸಂಧವಧೆ ಎನ್ನುವ ಇಪ್ಪತ್ತೆರಡನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಜರಾಸಂಧವಧಪರ್ವಃ।।
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಜರಾಸಂಧವಧಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-1/18, ಉಪಪರ್ವಗಳು-22/100, ಅಧ್ಯಾಯಗಳು-247/1995, ಶ್ಲೋಕಗಳು-8036/73840.


  1. ಅಂದರೆ ಜರಾಸಂಧನ ರಥ ಅತ್ಯಂತ ಪುರಾತನವಾಗಿತ್ತು. ಮತ್ತು ತಾರಕಾಸುರನ ಯುದ್ಧದ ಸಮಯದಲ್ಲಿ ಇಂದ್ರ ಮತ್ತು ವಿಷ್ಣು ಏರಿದ್ದ ರಥವೇ ಜರಾಸಂಧನದ್ದಾಗಿತ್ತು. ↩︎

  2. ವಸು ಉಪರಿಚರ (ಆದಿಪರ್ವ, ಅಧ್ಯಾಯ 57). ↩︎

  3. ವಸು ಉಪರಿಚರನ ಮಗ (ಆದಿಪರ್ವ, ಅಧ್ಯಾಯ 57). ↩︎